POLICE BHAVAN KALABURAGI

POLICE BHAVAN KALABURAGI

05 October 2013

ಅಪಘಾತ ಪ್ರಕರಣ :
ಮುಧೋಳ ಠಾಣೆ : ಶ್ರೀ ಶಕೀಲ ಅಹೇಮದ್ ತಂದೆ ಲಾಲ ಅಹೇಮದ್ ಸಾ: ಕೊನಾಪೂರ ದಿನಾಂಕ: 03-10-13 ರಂದು ಮಧ್ಯಾಹ್ನ 1200 ಗಂಟೆ ಸುಮಾರಿಗೆ ನಾನು ನನಗೆ ಪರಿಚಯವಿರುವ ಹಬೀಬ ಪಾಶಾ ತಂದೆ ಅಬ್ದುಲ್ ರಹೀಮ ಸಾ: ಮದಾನ ತಾ: ಸೇಡಂ ಇಬ್ಬರು ಕೂಡಿ ನಮ್ಮ ಅಳಿಯನಾದ ಮಹ್ಮದ ಮೀಯಾ ಸಾ: ಮುಧೋಳ ಇತನ ಮಧುವೆಯ ನಿಶ್ಚಯ ಕಾರಣಕ್ಕೆ ಕೊಡ್ಲಾ ಗ್ರಾಮಕ್ಕೆ ಹೊಗುವದಕ್ಕೆ ಹಿರೋ ಹೊಂಡಾ ಮೊ/ಸೈ ನಂ ಕೆಎ/32-ಇಡಿ-5824 ನೇದ್ದರ ಮೇಲೆ ಕುಳಿತು ಹೊಗುತ್ತಿದ್ದಾಗ ಮುಧೋಳದಿಂದ ಸೇಡಂಕ್ಕೆ ಹೊಗುವ ರಸ್ತೆಯ ಮೇಲೆ ಹಬೀಬ ಪಾಶಾ ಇತನು ಮೊ/ಸೈ ನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ಆಡಕಿ ಗೇಟ್ ಇನ್ನು 100 ಮೀಟರ್ ಅಂತರದಲ್ಲಿದ್ದಾಗ ರಸ್ತೆಯಲ್ಲಿ ದನಗಳು ಬರುತ್ತಾದ್ದಾಗ, ಹಬೀಬ ಪಾಶಾ ಇತನು ತನ್ನ ಮೊ/ಸೈನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿರುವ ಬ್ರೀಡ್ಜ್ ಹತ್ತಿರ ಪ್ಲಟಿ ಮಾಡಿ ಅಪಘಾತ ಪಡಿಸಿದ್ದು, ಇದರಿಂದ ನನಗೆ ಬಲ ಕಪಾಳಕ್ಕೆ ಹಾಗು ಬಲ ಕಣ್ಣಿಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಮಳಖೇಡ ಠಾಣೆ : ಚಂದ್ರಶೇಖರ ತಂದೆ ಭಿಮಶಾ ಬಡಿಗೇರ ಈತನು ಆರ್.ಸಿ.ಎಫ್ ಕಂಪನಿಯಲ್ಲಿ ಮೌಂಟೆನ್ ಅರ್ಥ ಮೂವರ್ಸ ಕಾಂಟ್ರ್ಯಾಕ್ಟರ್ ಹತ್ತಿರ ಲೋಡರ್ ಆಪರೇಟರ್ ಆಗಿ ಕೇಲಸ ಮಾಡುತ್ತಿದ್ದು ದಿನಾಂಕ 04-10-2013 ರಂದು ಬೇಳಗ್ಗೆ 10-30 ಗಂಟೆಗೆ ಕಂಪನಿಯಲ್ಲಿ ಕೇಲಸ ಮಾಡುತ್ತಿದ್ದಾಗ ಒಮ್ಮೆಲೆ ಎದೆ ನೋವು ಅಂತ ಹೃದಯಾಘಾತದಿಂದ ಕುಸಿದು ಬಿದ್ದನು ಆಗ ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಸುವಾಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಶಿವನಾಗಮ್ಮ ಗಂಡ ಚಂದ್ರಶೇಖರ ಬಡಿಗೇರ ಸಾ: ಮರಗೋಳ ಗ್ರಾಮ ತಾ: ಚಿತ್ತಾಪುರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 October 2013

ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ವಿಜಯಕುಮಾರ ತಂದೆ ಭೋಜು ಪವಾರ ಸಾಃ ನೇಳಕೂಡ ತಾಂಡಾ ಇವರು, ನಾನು, ಮತ್ತು ನಮ್ಮ ತಾಂಡಾದ 1. ದಿನೇಶ ತಂದೆ ಪೋಮು ಪವಾರ 2. ರಮೇಶ ತಂದೆ ಫೊಮು ಪವಾರ 3. ಕವಿತಾ ತಂದೆ ಫೊಮು ಪವಾರ ಎಲ್ಲರೂ ಕೂಲಿಕೆಲಸಕ್ಕೆ ಬಾಂಬೆಗೆ ಹೋಗಿ ಕೆಲಸ ಮಾಡುತ್ತಿದ್ದು. ಕೆಲಸ ಮಾಡಿದ ಹಣ ಕೊಡುವ ವಿಷಯದಲ್ಲಿ ಜಗಳವಾಗಿ, ವೈಮನಸ್ಸು ಬೆಳೆದಿರುತ್ತದೆ. ಹೀಗಿದ್ದು ಇಂದು ದಿನಾಂಕ: 03/10/2013 ರಂದು ಮುಂಜಾನೆ 7-00 ಗಂಟೆ ಸುಮಾರಿಗೆ, ನಮ್ಮ ತಾಂಡಾದ ಸೇವಲಾಲ ಗುಡಿಯ ಕಟ್ಟೆಯ ಮೇಲೆ ಕುಳಿತಿರುವಾಗ ದಿನೇಶ ಪವಾರ, ರಮೇಶ ಪವಾರ ಮತ್ತು ಕವಿತಾ ಪವಾರ ಬಂದವರೇ ಲೇ ಭೋಸಡಿ ಮಗನೇ ಮುಂಬೈಯಲ್ಲಿ ನಮ್ಮ ಸಂಗಡ ಜಗಳ ಮಾಡಿದ್ದಿ ಈಗ ಮಾಡೋ ಮಗನೇ ಅಂತಾ ಬೈಯುತ್ತಾ ಕೈಗಳಿಂದ ಹೊಡೆಯ ತೊಡಗಿದರು. ದಿನೇಶನು ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಬಲಭಾಗದಲ್ಲಿ, ಎಡ ಕಾಲಿನ ಕಿರು ಬೆರಳು ಹತ್ತಿರ ಹೊಡೆದು ರಕ್ತಗಾಯಗೊಳಿಸಿದನು. ಅಲ್ಲದೇ ಮುಂದೆನಾದರೂ ನನ್ನ ತಂಗಿಗೆ ಕೆಣಕಿ ಅವಮಾನ ಮಾಡಿದರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಮಲಾಪೂರ ಠಾಣೆ : ಶ್ರೀಮತಿ.  ನಿಂಗಮ್ಮ ಗಂಡ ಶಿವಪುತ್ರಪ್ಪಾ ವಳದೊಡ್ಡಿ ಸಾ; ಅಂತಪನಾಳ ಮತ್ತು ಗಂಡ. ಮಗ. ಮಗಳು ಕೊಡಿಕೊಂಡು ಸುರೇಶ ಪಾಟೀಲ್ ಇವರ ಮನೆಗೆ ಹೋಗಿ ದನಗಳನು ಏಕೆ ಬಿಟ್ಟು ಬೆಳೆ ಹಾನಿ ಮಾಡಿದಿರಿ ಅಂತ ಹೇಳಿದಕ್ಕೆ ಮಹಾದೇವಿ ಗಂಡ ಸುರೇಶ ಪಾಟೀಲ ಸಂಗಡ 4 ಜನರು ಸಾಃ ಎಲ್ಲರೂ ಅಂತಪನಾಳ ಪಿಯಾದಿಗೆ ಮತ್ತು ಪಿರ್ಯಾದಿಯ ಗಂಡ ಮತ್ತು ಮಗ, ಮಗಳಿಗೆ ಅಡ್ಡಗಟ್ಟಿ ಅವಾಚ್ಯಾ ಶಭ್ದಗಳಿಂದ ಬೈದ್ದು, ಕೈಯಿಂದ ಮತ್ತು ಬಡಿಗಡಯಿಂದ ಹೋಡೆ ಬಡೆ ಮಾಡಿ ಗುಪ್ತಗಾಯಗೂಳಿಸಿ, ಕೂದಲು ಹಿಡಿದು ಎಳೆದಾಡಿ ಅವಮಾನಗೂಳಿಸಿದು ಅಲ್ಲದೆ  ಜೀವದ ಬೆದರಿಕೆ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸಂಗಮೇಶ ತಂದೆ ಸಿದ್ದಪ್ಪ ದಾಸಪಳ್ಳಿ ಸಾ: ಮನೆ ನಂ. 11-1814/1ಎ ವಿದ್ಯಾನಗರ ಗುಲಬರ್ಗಾ ಇವರು ದಿನಾಂಕ: 24/09/2013 ರಂದು 6:30 ರಿಂದ 6-40 ಪಿ.ಎಂ.ದ ಅವಧಿಯಲ್ಲಿ ತನ್ನ ದ್ಚಿಚಕ್ರ ವಾಹನ ಹಿರೋ ಹೊಂಡ ಸ್ಪ್ಲೆಂಡರ ಪ್ಲಸ್ ನಂ:ಕೆಎ-32 ಕ್ಯೂ- 9949 ಚೆಸ್ಸಿ ನಂ: 05ಎಫ್16ಸಿ32507 ಇಂಜಿನ ನಂ: 05ಎಫ್15ಎಮ್32545 ನೇದ್ದು ನನ್ನ ಸ್ವಂತ ಕೆಲಸಕ್ಕಾಗಿ ಗುಲಬರ್ಗಾದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಪ್ರೀನ್ಸ್ ಲಾಡ್ಜ ಮುಂದುಗಡೆ ನಿಲ್ಲಿಸಿ ಎ.ಟಿ.ಎಮ್.ನಲ್ಲಿ ಹೋಗಿ ಹಣವನ್ನು ತೆಗೆದುಕೊಂಡು ಬರುವಷ್ಠರಲ್ಲಿ ನನ್ನ ವಾಹನ ನಾನು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ನಂತರ ಎಲ್ಲಾಕಡೆ ಹುಡುಕಾಡಿ ಪರಿಚಯಸ್ಥರಲ್ಲಿ ವಿಚಾರಿಸಲಾಗಿ ಎಲ್ಲಿಯು ನನ್ನ ವಾಹನದ ಬಗ್ಗೆ ಮಾಹಿತಿ ಸಿಕ್ಕಿರುವದಿಲ್ಲ. ಯಾರೋ ಕಳ್ಳರು ನನ್ನ ಹಿರೊ ಹೊಂಡ ಸ್ಪ್ಲೆಂಡರ ಪ್ಲಸ್ ನಂ : ಕೆಎ-32 ಕ್ಯೂ -9949 ನೇದ್ದು ಅ.ಕಿ. 25000=00 ರೂ ಬೆಲೆಬಾಳುವ ವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಹಚ್ಚಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

03 October 2013

ಅತ್ಯಾಚಾರ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಬಿರಣ್ಣಾ ತಂದೆ ನಾಗಪ್ಪ ಬಂಗರಗಿ ಸಾ:ರಾಜವಾಳ ತಾ:ಆಳಂದ ಹಾ:ವ:ಗರೂರ (ಬಿ) ಇವರ ಮಗಳಾದ ಕುಮಾರಿ ಇವಳು  ದಿನಾಂಕ: 28-9-2013  ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ಮನೆಯ ಹಿಂದಿನ ಹಣಮಂತರಾಯ ತಳಕೇರಿ ಇವರ ಮಗ ಸಂತೋಷ ಈತನು ನಮ್ಮ ಮನೆಗೆ ಬಂದು ಕುಡಿಯಲಿಕೆ ನೀರು ಕೊಡು ಅಂತಾ ಕೇಳಿದಾಗ ನಾನು ನೀರು ತರಲು ಹೋದಾಗ ನನ್ನ ಹಿಂದೆ ಸಂತೋಷನು ಬಂದು ನನಗೆ ತೆಕ್ಕೆಯಲ್ಲಿ ಒತ್ತಿ ಹಿಡಿದು ಒಳಗಡೆ  ನೆಲಕ್ಕೆ ಕೆಡವಿ ಜಬರಿ ಸಂಬೋಗ ಮಾಡಿ ಇದನ್ನು ಯಾರಿಗಾದರು ಹೆಳಿದರೆ ನಿನಗೆ ಖಲಾಸ ಮಾಡುತ್ತೆನೆ  ಅಂತಾ ಹೇಳಿ ಓಡಿಹೋಗಿರುತ್ತಾನೆ ನಾನು ಅಳುತ್ತಾ ಮನೆಯಲ್ಲಿ ಕುಳಿತಾಗ ನನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಈ ವಿಷಯ ಹೇಗೆ ಹೇಳುವದು ಅಂತಾ ತಿಳಿದು ಮನೆಯಲ್ಲಿ ಇಟ್ಟಿದ್ದ ಕ್ರಿಮಿನಾಶಕ ಔಷಧವನ್ನು ಮದ್ಯಾಹ್ನ 3-30ಗಂಟೆಯ ಸುಮಾರಿಗೆ ಕುಡಿದಿರುತ್ತೇನೆ. ಅಂತಾ ತಿಸಿದ ಮೇರೆಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಶಿವಲಿಂಗ ತಂದೆ ಮಹಾದೇವಪ್ಪ ಹಳ್ಳಿ ಸಾ: ಸೊನ್ನ ರವರು ದಿನಾಂಕ: 02-10-2013 ರಂದು ಸಂಜೆ 05.00 ಗಂಟೆಗೆ ಸೊನ್ನದಿಂದ ಜೇವರ್ಗಿಗೆ ಅನುಭವ ದರ್ಶನ ಪ್ರವಚನ ಪ್ರಯುಕ್ತ ಹೊರಟಿದ್ದೇನು. ನಮ್ಮೂರಿನಿಂದ 3 ಕಿ,ಮೀ ದೂರದ ಸೀಮೆ ಹಳ್ಳದ ಬ್ರಿಡ್ಜ ಬಳಿ ಜನರು ನಿಂತಿದ್ದರು. ಏನೆಂದು ನೋಡಲಾಗಿ ಹಳ್ಳದಲ್ಲಿ ಗಂಡಸಿನ ಶವ ತೇಲುತ್ತಿತ್ತು. ರಕ್ತ ನೀರಿನಲ್ಲಿ ಕಾಣಿಸುತ್ತಿತ್ತು. ಯಾರೋ ತಲೆಗೆ ಹೊಡೆದಿದ್ದು, ರಕ್ತ ಗಾಯವಾಗಿರುತ್ತದೆ. ಶವದ ವಯಸ್ಸು: 30 ವರ್ಷ ಇರಬಹುದು. ಹಳ್ಳದಿಂದ 5ಮೀಟರ್ ದೂರದಲ್ಲಿ ರಸ್ತೆಯ ಬದಿಯಲ್ಲಿ ಸಿಗ್ನಲ್ ರಾಡಿಗೆ ರಕ್ತವಾಗಿದ್ದು,ಸದರಿ ರಾಡನ್ನು ಕಿತ್ತಿ ತಲೆಗೆ ಹೊಡೆದಿದ್ದು, ಗಾಯ ಮಾಡಿ ಸಾಯಿಸಿರುತ್ತಾರೆ. ಈ ಬಗ್ಗೆ ಅಲ್ಲಿದ್ದ ಜನರು ಮಾತನಾಡುತ್ತಿದ್ದು, ರಕ್ತ ಬಿದ್ದಿದ್ದು ನೋಡಿದರೆ ನಿನ್ನೆ ರಾತ್ರಿ 01-10-2013 ರಂದು ಘಟನೆ ನಡೆದಿರಬಹುದು ಎಂದು ಮೇಲ್ನೋಟಕ್ಕೆ   ಕಾಣಿಸುತ್ತದೆ. ಯಾರೋ ಅಪರಿಚಿತ ದಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ತಲೆಗೆ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಿದ್ದು, ಅದನ್ನು ಮುಚ್ಚಿ ಹಾಕಲು ಹಳ್ಳದ ನೀರಿನಲ್ಲಿ ಎಸೆದು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಮಾಹಾದೇವಿ ಗಂಡ ಸುರೇಶ ಪಾಟೀಲ ಇವರು ದಿನಾಂಕ:01-10-2013 ರಂದು ಸಂಜೆ 7-00 ಗಂಟೆ ಸುಮಾರಿಗೆ ರವರ ದನಗಳು ನಿಂಗಮ್ಮ ಗಂಡ ಶಿವಪುತ್ರ ವಳದೊಡ್ಡಿ ಇವರ ಹೊಲದಲ್ಲಿನ ಬೆಳೆ ತಿಂದಿರುವ ವಿಷಯದಲ್ಲಿ ಜಗಳ ತೆಗೆದು ಮನೆ ಹೊಕ್ಕು ನಿಮ್ಮ ದನಗಳು ನಮ್ಮ ಹೊಲದಲ್ಲಿ ಬಿಟ್ಟು ನನ್ನ ಹೆಂಡತಿ ಮಕ್ಕಳಿಗೆ ಬೈಯ್ದಿರಿ ರಂಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಿಂಗಮ್ಮ ಇವಳು ಬಡಿಗೆಯಿಂದ ಎಡಗೈ ರಟ್ಟೆ ಮೇಲೆ ಹೊಡೆದಳು ಸಿದ್ದಪ್ಪನು ಕಾಲಿನಿಂದ ನನ್ನ ಹೊಟ್ಟೆಯಲ್ಲಿ ಒದ್ದನು.ಕುಸುಮಾ ಇವಳು ಕೈಯಿಂದ ಎದೆಯ ಮೇಲೆ ಬೆನ್ನಲ್ಲಿ ಹೊಡೆದಾಗ ನಾವು ಚಿರಾಡುವುದು ಕೇಳಿ ನಮ್ಮೂರ ಮಾಣಿಕ ಉಪ್ಪಿನ ಮತ್ತು ವೈಜನಾಥ ಸ್ವಾಮಿ ಬಂದು ಘಟನೆ ನೋಡಿ,ಬಿಡಿಸಿ, ಹೋಗುತ್ತಿರುವಾಗ ಈಗ ಉಳಿದಿದ್ದಿರಿ ನಿಮಗೆ ಬಿಡುವುದಿಲ್ಲಾ ಜೀವ ಹೊಡೆಯುತ್ತೇವೆ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ  ಶ್ರೀಮತಿ ಜಯಲಕ್ಷ್ಮೀ ಗಂಡ ರಾಜಕುಮಾರ ಭೋಗನ ಸಾಃ ಕಾಳಮಂದರಗಿ ತಾಃಗುಲಬರ್ಗಾ ಇವರಿಗೆ ಗಂಡನಾದ  ರಾಜಕುಮಾರ ತಂದೆ ಅಂಬಣ್ಣಾ ಭೋಗನ ದಿನಾಲು ಕುಡಿಯಲು ಹಣ ಕೊಡುವ ಅಂತಾ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು.  ದಿಃ 01-10-13 ರಂದು 20-30 ಗಂಟೆ ಸುಮಾರಿಗೆ ಈ ವಿಷಯಕ್ಕೆ ಸಂಬಂದಿಸಿದಂತೆ ಫಿರ್ಯಾದಿಯೊಂದಿಗೆ ಜಗಳ ತೆಗೆದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಗಾಯಗೊಳಿಸಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.