POLICE BHAVAN KALABURAGI

POLICE BHAVAN KALABURAGI

26 August 2013

ಕೊಲೆ ಪ್ರಕರಣದ ಆರೋಪಿತನ ಬಂಧನ :
ಅಫಜಲಪೂರ ಠಾಣೆ :  ದಿನಾಂಕ 26-01-2013 ರೆಂದು ಮಣ್ಣೂರ ಅಗರಖೇಡ ಬೀಮಾ ಬ್ರಿಡ್ಜನ ಬಲಭಾಗದಲ್ ದಡದಲ್ಲಿ ಒಂದು ಗೋಣಿ ಚೀಲ ಕಂಡಿದ್ದು ಅದನ್ನು ಕರೆಂಟೆ ವೈರನಿಂದ ಕಟ್ಟಿ ಅದಕ್ಕೆ ಕಲ್ಲು ಕಟ್ಟಿ ನೀರಲ್ಲಿ ಒಗೆದಿದ್ದು ಸದರ ಗೋಣಿ ಚೀಲವನ್ನು ಹೋರಗೆ ತೆಗೆಸಿ ನೋಡಿದಾಗ ಅದರಲ್ಲಿ ಒಂದು ಶವವಿದ್ದು ಸದರ ಶವವನ್ನು  ನೀರಿನಲ್ಲಿ ಇರುವ ಜಲಚರಗಳು ಮುಖ ಖಾಲು, ಕೈ ಅಲ್ಲಲ್ಲಿ ತಿಂದಿದ್ದು ಶವದ ಮೈಮೇಲೆ ಚ್ಯಾಕಲೇಟ ಬಣ್ಣದ ಅಂಡರವೇರ ಬಿಳಿಯ ಶರ್ಟ ಇದ್ದು ಇದರ ಬಗ್ಗೆ ಶ್ರೀ ರಾಮು ತಂದೆ ಬೂತಾಳಿ ನಡುವಿನಕೆರಿ ಗ್ರಾಮ ಪಂಚಾಯತ ಉಪಾಧ್ಯಕ್ಷರು ಮಣ್ಣುರು ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಮುಂದೆ ತನಿಖೆ ಮಾಡುವಾಗ ಶವದ ಶವದ ಮೇಲೆ ಸಿಕ್ಕ ಶರ್ಟಿನ ಕಾಲರ ಮೇಲೆ ಚ್ವಾಯಿಸ ಟೇಲರ ಮಣ್ಣೂರ ಅಂತಾ ಬರೆದಿದ್ದು  ದುರೆತಿದ್ದು ಮಣ್ಣೂರ ಗ್ರಾಮದಲ್ಲಿ ಇರುವ ಶ್ರೀ ಶಣ್ಮೂಖಪ್ಪಾ ತಂದೆ ಶಂಕ್ರೆಪ್ಪಾ ಮಲ್ಲಾಬಾದ ಉ: ಚ್ವಾಯಸ ಟೇಲರ ಸಾ: ಮಣ್ಣೂರ ಇವರನ್ನು ಕರೆಸಿ ಸದರ ಶರ್ಟನ್ನು ತೋರಿಸಿ ವಿಚಾರಿಸಲಾಗಿ ಸದರ ಶರ್ಟನ್ನು ತಾನೆ ಮಣ್ಣೂರ ಗ್ರಾಮದ ಸಂತೋಷ ತಂದೆ ಸುರೇಶ ಸಾ: ಅರ್ಜಣಗಿ ಇವರಿಗೆ ಹೊಲೆದು ಕೊಟ್ಟಿರುವುದಾಗಿ ತಿಳಿಸಿದ್ದು ಇತನಿಗೆ ಯಾರೋ ಆಗದವರು ತಮ್ಮ ದ್ವೇಷ ತಿರೀಸಿಕೊಳ್ಳಲು ಸಮಯ ಸಾಧಿಸಿ ಸದರಿ ವ್ಯಕ್ತಿಗೆ ಯಾವುದೋ ವಸ್ತುವಿನಿಂದ ಹೊಡೆದು ಶವವನ್ನು ಗುರುತಿಸಲಾಗದಂತೆ ಸಾಕ್ಷಿ ಆದಾರಗಳನ್ನು ನಾಶಪಡಿಸುವ ಉದ್ದೇಶದಿಂದ ಶವವನ್ನು ಗೋಣಿ ಚಿಲದಲ್ಲಿ ಹಾಕಿ ಕರೆಂಟ ವೈರನಿಂದ ಬಿಗಿದು ಭಿಮಾ ನದಿ ನೀರಿಗೆ ಬಿಸಾಡಿರುತ್ತಾರೆ ಸದರ ಕೇಸಿನ ಆರೋಪಿ ಪತ್ತೆ ಕುರಿತು ಮಾನ್ಯ ಶ್ರೀ ಕಾಶೀನಾಠ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಶ್ರೀ ತಿಮ್ಮಪ್ಪಾ ಡಿ ಎಸ್ ಪಿ ಆಳಂದ, ಶ್ರೀ ಕೆ ರಾಜೇಂದ್ರ ಸಿಪಿಐ ಆಫಜಲಪೂರ  ರವರ ಮಾರ್ಗದರ್ಶನದಲ್ಲಿ ಶ್ರೀ ಮಂಜುನಾಥ ಎಸ್. ಪಿ ಎಸ್ ಐ ಅಫಜಲಪೂರ ಹಾಗು ಸಿಬ್ಬಂದಿಯವರು  ದಿನಾಂಕ 26-08-2013 ರಂದು ಬೆಳಗಿನ ಜಾವ 1 ಗಂಟೆಗೆ ಬಾತ್ಮಿ ಮೇರೆಗೆ ಮಣ್ಣೂರ ಗ್ರಾಮದ ಅಂಆಭವಾನಿ ಗುಡಿಯ ಹತ್ತಿರ ಶ್ರೀಶಯಲ ತಂದೆ ಸೂರ್ಯಕಾಂತ ಅರ್ಜಣಗಿ ಸಾ : ಮಣ್ಣೂರ ಇತನ ಮೇಲೆ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ಹಾಜರಪಡಿಸಿದ್ದು ಸದರಿಯನು ಅಪರಾಧ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಕೃತ್ಯಕ್ಕೆ ಬಳಸಿದ ಮೊಟಾರ ಸೈಕಲ್ ನಂ  ಕೆಎ-32 ಡಬ್ಲ್ಯೂ 9802 ನೇದ್ದನ್ನು ವಶಪಡಿಸಿಕೊಂಡು ಸದರಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಹಿಸಿದ್ದು ಕೃತ್ಯಕ್ಕೆ ಸಹಕರಿಸಿದ ಆರೋಪಿತನ ತಾಯಿಯಾದ ಸೂಗಲಾಬಾಯಿ ಇವಳು ನಾಪತ್ತೆಯಾಗಿದ್ದು ಇವಳ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ. 

25 August 2013

ಕಳವು ಪ್ರಕರಣ :

ನೆಲೋಗಿ ಠಾಣೆ : ಶ್ರೀಮತಿ ವೀಣಾ. ಶರಣಗೌಡ ಬಾಚವಾರ  ಸಿಂಗನಳ್ಳಿ ತಾ: ಶಹಾಪೂರ ಹಾ:ವ: ಸಾ/21/75 ಖಾಜಾ ಕಾಲೋನಿ ಜೇವರರ್ಗಿ  ರವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾಳವಾರದಲ್ಲಿ ಸಹಶಿಕ್ಷಕಿಯಾಗಿ   ಕೆಲಸ ಮಾಡಿಕೊಂಡು ಇದ್ದು. ದಿನಾಂಕ: 18/08/2013 ರಂದು ಬಿಜಾಪೂರದಲ್ಲಿ ವಾಸವಾಗಿರುವ ನನ್ನ ಅಣ್ಣನಾದ ವಿಜಯ ಮಾಹಾಂತೇಶ ತಂ/ ಬಸವರಾಜ ಐನಾಪೂರ ಇವರ ವಿವಾಹ ನಿಶ್ಚಿತಾರ್ತ ಇದ್ದ ಕಾರಣ ದಿನಾಂಕ: 16/08/2013 ರಂದು ಬೆಳಿಗ್ಗೆ 10 ಗಂಟೆಗೆ ಕೆ ಎಸ್ ಆರ್ ಟಿ ಸಿ ಬಸನಲ್ಲಿ ಜೇವರ್ಗಿ ಯಿಂದ ಹೊರೆಟೆನು. ಸದರಿ ಬಸ್ಸ್ ಬಿಜಾಪೂರಕ್ಕೆ ಮದ್ಯಾಹ್ನ 01;00 ಗಂಟೆಗೆ ತಲುಪಿತು. ನಂತರ ನಾನು ಅಟೋ ರಿಕ್ಷಾದಲ್ಲಿ ಬಿಜಾಪೂರದಲ್ಲಿರುವ ನಮ್ಮ ಮನೆಗೆ ಹೋದೆನು. ಹೋದ ತಕ್ಷಣ ಮುಖ ತೊಳೆದು ಬಟ್ಟೆ ಬದಲಾಯಿಸಲು ಬ್ಯಾಗನ್ನು ನೋಡಲಾಗಿ, ಸದರಿ ಬ್ಯಾಗಿನಲ್ಲಿ ಇಟ್ಟಿದ್ದ ನನ್ನ 150 ಗ್ರಾಂ ಬಂಗಾರದ ಆಭರಣಗಳು ಹಿಗೆ ಒಟ್ಟು 3,61,150/- ರೂ ಆಭರಣಗಳು ಇರಲಿಲ್ಲಾ. ಕೂಡಲೆ ಬ್ಯಾಗನ್ನು ಪೂರ್ತಿ ಹೂಡಕಾಡಿದ್ದು ಆಬರಣಗಳಿಟ್ಟ ಟಿಪಿನ್ ಬಾಕ್ಸ ಇರಲ್ಲಿಲ್ಲಾ. ಇವುಗಳನ್ನು ಬಸ್ಸನಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ್ದು ನಮ್ಮ ವಸ್ತುಗಳನ್ನು ಪತ್ತೆ ಮಾಡಿಕೊಡ ಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 August 2013

ಅಪಘಾತ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 22-08-2013 ರಂದು ಬೆಳಿಗ್ಗೆ ಶ್ರೀ ಕೇರನಾಥ ತಂದೆ ಬಾಗವಾನ ಜೊಗೇರ   ಸಾ: ಜೇವರ್ಗಿ  ರವರು ತಮಗೆ ಪರಿಚಯ ಇದ್ದ ಮಾರುತಿ ಸುಜುಕಿ ಕಾರ ನಂ ಕೆಎ-36 ಎಮ್-7765 ನೇದ್ದರಲ್ಲಿ ತಮ್ಮ ಸಂಬಂಧಿಕರ ಬದಾಮಿ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ತೀರಿಕೊಂಡಿದ್ದರಿಂದ 5 ಜನರು ಕೂಡಿಕೊಂಡು ಸದರ ಕಾರಿನಲ್ಲಿ ಹೋಗುವಾಗ ಎಸ್ ಎನ್ ಹಿಪ್ಪರಗಾ ಕ್ರಾಸ ಹತ್ತೀರ 09.45 ಎ ಎಮ್ ಕ್ಕೆ ಬಂದಾಗ ಎದುರಿನಿಂದ ಒಂದು ಕೆ ಎಸ್ ಆರ್ ಟಿ ಸಿ ಬಸ್ ನಂ ಕೆಎ-32 ಎಫ್- 1770 ನೇದ್ದರ ಚಾಲಕನು ಅತೀ ವೇಗ ಮತ್ತು ನೀರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಕಾರಿಗೆ ಢಿಕ್ಕಿ ಹೊಡೆದಾಗ ಕಾರಿನಲ್ಲಿದ್ದ 1. ನಬಿ ತಂದೆ ಕೋನಮೀಯಾರ   ವ;30  ಉ: ಕಾರ ಡ್ರಾವರ್   ಸಾ; ಜೇವರ್ಗಿ 2.ಮಚೇಂದ್ರನಾಥ ತಂದೆ ಪವನಾಥ ಜೊಗೇರ ವ: 45 ಉ: ಹಿಟ್ಟಿನ ಗಿರಣಿ ಮೇಕ್ಯಾನಿಕ್ ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಇನ್ನೂ 3 ಜನರಿಗೆ ಭಾರೀ ಗಾಯಗಳಾಗಿದ್ದು, ಸದರಿ ಚಾಲಕನ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :

ನಿಂಬರ್ಗಾ ಠಾಣೆ : ಶ್ರೀಮತಿ ಯಲ್ಲವ್ವ ಗಂಡ ಸಿದ್ದಪ್ಪಾ ಕಾಳೆ ಸಾ|| ಆಲಮೇಲತಾ|| ಸಿಂದಗಿ ಇವರು ಗಂಡನನ್ನು ದಿನಾಂಕ 19/08/2013 ರಂದು ಸಾಯಂಕಾಲ 0400 ಪಿ.ಎಮ ಕ್ಕೆ ರೇಲಪೂತ @ ಬಾಬು ಕಾಳೆಮುಕೇಶ ತಂದೆ ರೇಲಪೂತ ಕಾಳೆಶಮ್ಯಾ ತಂದೆ ರೇಲಪೂತ ಕಾಳೆರವ್ಯಾ ತಂದೆ ಗೊವಿಂದ ಸಿಂಧೆಬಪ್ಯಾ ತಂದೆ ಶ್ರೀಮಂತಕುನ್ಯಾಬಾಯಿ ಗಂಡ ರೇಲಪೂತ @ ಬಾಬು ಕೂಡಿ ಗುಲಬರ್ಗಾದಿಂದ ಒಂದು ಕ್ರೂಸನ ವಾಹನ ಅದರ ಚಾಲಕ ಮತ್ತು ಅದರ ನಂಬರ ಗೊತ್ತಿಲ್ಲ ಅದನ್ನು ತೆಗೆದುಕೊಂಡು ಆಲಮೇಲಕ್ಕೆ ಬಂದು ಫಿರ್ಯಾದಿಗೆ ಮತ್ತು ಮೃತ ಸಿದ್ದಪ್ಪನಿಗೆ ಜಬರದಸ್ತಿಯಿಂದ ದೇವರ ಮಾಡೋದಿದೆ ನಡೆಯಿರಿ ಅಂತ ಕ್ರೂಸರ ವಾಹನದಲ್ಲಿ ಫಿರ್ಯಾದಿಗೂ,ಸಿದ್ದಪ್ಪ ಹಾಗೂ ಅವರ ಮಕ್ಕಳಿಗೂ ಹಾಕಿಕೊಂಡು ವೈಜಾಪೂರ ಗ್ರಾಮದ ಸೀಮಾಂತರದಲ್ಲಿರುವ ವಾರಿ ಹಳ್ಳದ ಹತ್ತಿರ ರಾತ್ರಿ ಕರೆದುಕೊಂಡು ಹೋಗಿ ಅಲ್ಲಿ ಅವರು ಠಿಕಾಣಿ ಹೂಡಿದ ಜಾಗೆಯಲ್ಲಿ ಇದ್ದುದಿನಾಂಕ 20/08/2013 ರಂದು ರಾತ್ರಿ 1000 ಗಂಟೆ ಸುಮಾರಿಗೆ ಮೃತ ಸಿದ್ದಪ್ಪನು ನನಗೆ ಊರಿಗೆ ಬಿಡಿ ಅಂತಾ ಅಂದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ರಚನೆ ಮಾಡಿಕೊಂಡು ಅವರು ಫಿರ್ಯಾದಿಯ ಗಂಡನಿಗೆ ಎಲ್ಲಿಗೂ ಹೋಗದಂತೆ ತಡೆದು ಕೈಯಲ್ಲಿ ಚಾಕು ಮತ್ತು ಬಡಿಗೆ ಹಿಡಿದುಕೊಂಡು ಭೋಸಡಿ ಮಗನೆ ನಮಗೆ ಹಣ ಕೇಳುತ್ತಿಯಾ ಅಂತಾ ಅಂದು ಮುಕೇಶ ಇತನು ಚಾಕುವಿನಿಂದ ಬಲಗಡೆ ಹೊಟ್ಟೆಗೆ ಮತ್ತು ಬಲಗಡೆ ಬೆನ್ನಿಗೆ ತಿವಿದಿದ್ದು ಇದರಿಂದ ಆತನಿಗೆ ತೀವೃ ಸ್ವರೂಪದಗಾಯವಾಗಿದ್ದು ಉಪಚಾರ ಕುರಿತು ದಿನಾಂಕ 21/08/2013 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆಯಾಗಿದ್ದು ಗಾಯದ ಬಾಧೇಯಿಂದ ದಿನಾಂಕ 22/08/2013 ರಂದು ಮಧ್ಯಾಹ್ನ 0140 ಪಿ.ಎಮ ಕ್ಕೆ ಮೃತಪಟ್ಟಿರುತ್ತಾನೆ ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.