POLICE BHAVAN KALABURAGI

POLICE BHAVAN KALABURAGI

13 August 2013

GULBARGA DIST REPORTED CRIMES

ಕಳ್ಳ ಸಾಗಾಣಿಕೆ:
ಶಹಾಬಾದ  ಪೊಲೀಸ ಠಾಣೆ:
ದಿನಾಂಕ:12/08/2013  ರಂದು ಶ್ರೀ ಕಾಶಿನಾಥ ಎಎಸ್‌ಐ ರವರು ವರದಿ ಹಾಜರಪಡಿಸಿದ್ದು ಸಾರಾಂಶವೇನಂದರೆ,  ನಿನ್ನೆ ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯ ಸಂಗಡ ಸಿಪಿಸಿ.306 ರವರೊಂದಿಗೆ ಮುಗಿಸಿಕೊಂಡು ಮರಳಿ ಠಾಣೆಗೆ 5 ಎಎಮ್‌ ಸುಮಾರಿಗೆ ಬಂದು ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನಂದರೆ,ಕಾಗೀಣಾ ಮತ್ತು ಇತರೆ ನದಿ ಪ್ರದೇಶಗಳಿಂದ ಟ್ರಾಕ್ಟರಗಲ್ಲಿ ಮರಳನ್ನು ತುಂಬಿಕೊಂಡು ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಮತ್ತು ಮರಳು ಸಾಗಾಣಿಕೆ ಪರವಾನನಿಗೆ ಇಲ್ಲದೇ ಕಳ್ಳ ಸಾಗಾಣೆ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಹಾಗೂ ಸಿಬ್ಬಂದಿಯವರಾದ ರವರೊಂದಿಗೆ ಮಾನ್ಯ ಡಿಎಸ್‌ಪಿ ಸಾಹೇಬರು ಶಹಾಬಾದ ಮತ್ತು ಮಾನ್ಯ ಪಿಐ ಶಹಾಬಾದ ರವರಿಗೆ ಸದರಿ ವಿಷಯವನ್ನು ತಿಳಿಸಿ ಠಾಣೆಯಿಂದ ವಾಡಿ ಕ್ರಾಸ ಹತ್ತಿರ ಬಂದಾಗ ಚಿತ್ತಾಪೂರ ಕಡೆಯಿಂದ ಒಂದರ ಹಿಂದೆ ಒಂದು ಮೂರು ಟ್ರ್ಯಾಕ್ಟರಗಳು  ಮತ್ತು ಒಂದು ಲಾರಿ ಬರುತ್ತಿದ್ದುದ್ದನ್ನು ನಾನು ಮತ್ತು ಸಿಬ್ಬಂದಿಯವರು ಸದರಿ ವಾಹನಗಳನ್ನು ನಿಲ್ಲಿಸಿ ನೋಡಲಾಗಿ ಟ್ರಾಕ್ಟರಗಳಲ್ಲಿ ಮತ್ತು ಲಾರಿಯಲ್ಲಿ ಉಸಕು ತುಂಬಿದ್ದು ಕಂಡುಬಂದಿದ್ದು, ಸದರಿ ಟ್ರ್ಯಾಕ್ಟರ  ಮತ್ತು ಲಾರಿ ನಂಬರ ನೋಡಲಾಗಿ 1] ಟಾಟಾ ಲಾರಿ ನಂ.ಕೆಎ-23/5438 ಲಾರಿಯ ಅಂದಾಜು ಕಿಮ್ಮತ್ತು 2,50,000/- ಅದರಲ್ಲಿಯ ಉಸಕಿನ ಕಿಮ್ಮತ್ತು. 8,000/- ರೂಪಾಯಿ  2] ಟ್ರ್ಯಾಕ್ಟರ ನಂ. ಕೆಎ-32 / 5495 ನೇದ್ದರ ಕಿಮ್ಮತ್ತು. 2,00000/- ಅದರಲ್ಲಿ ಉಸಕಿನ ಕಿಮ್ಮತ್ತು. 2500/-  3] ಟ್ರ್ಯಾಕ್ಟರ ನಂ. ಕೆಎ-32 ಟಿಎ-3144 ನೇದ್ದರ ಟ್ಯಾಕ್ಟರ5 ಕಿಮ್ಮತ್ತು. 2,00000/- ಅದರಲ್ಲಿಯ ಉಸಕಿನ ಕಿಮ್ಮತ್ತು. 2.500/- 4] ಟ್ರ್ಯಾಕ್ಟರ ನಂ. ಕೆಎ-32 ಟಿಎ-5297  ನೇದ್ದರ ಟ್ಯಾಕ್ಟರ್ ಅ.ಕಿ. 2,00000/- ಅದರಲ್ಲಿ ಉಸಕಿನ ಕಿಮ್ಮತ್ತು. 2500/-  ಇದ್ದು ಸದರಿ ವಾಹನಗಳ ಚಾಲಕರ ಹೆಸರು ಕ್ರಮವಾಗಿ  1] ಅರುಣ ತಂದೆ ಅಂಬಣ್ಣಾ ಮಹಾಗಾಂವ ವ:25 ಜಾ:ಹರಿಜನ ಉ:ಟಾಟಾ ಲಾರಿ ನಂ.ಕೆಎ-23 / 5438 ನೇದ್ದರ ಚಾಲಕ ಸಾ:ಹುಳಗೇರಾ ತಾ:ಚಿತ್ತಾಪೂರ ಹಾ:ವ: ವಿಶ್ವವಿದ್ಯಾಲಯ ಎದರುಗಡೆ ಗುಲಬರ್ಗಾ ಅಂತಾ ಹೇಳಿದನು.ಮತ್ತು ಟ್ರ್ಯಾಕ್ಟರ ಚಾಲಕರಾದ 2] ಆನಂದ ತಂದೆ ಶಂಕ್ರೆಪ್ಪಾ ಪೂಜಾರಿ ವ:28 ಜಾ:ಕುರುಬರು ಉ:ಟ್ರ್ಯಾಕ್ಟರ ನಂ. ಕೆಎ3-32 / 5495 ನೇದ್ದರ ಚಾಲಕ 3] ಬಾಬು ತಂದೆ ರಾಮು ಮಡಿವಾಳ ವ:19 ಜಾ:ಮಡಿವಾಳ ಉ:ಟ್ರ್ಯಾಕ್ಟರ ನಂ. ಕೆಎ-32 ಟಿಎ-3144 ನೇದ್ದರ ಚಾಲಕ 4] ರೇವಣಸಿದ್ದ ತಂದೆ ನಾಗಣ್ಣಾ ಪೂಜಾರಿ ವ:18 ಜಾ:ಕುರುಬರು ಉ:ಟ್ರ್ಯಾಕ್ಟರ ನಂ. ಕೆಎ-32 ಟಿಎ-5297 ನೇದ್ದರ ಚಾಲಕ ಸಾ:ಮೂವರುಶಂಕರವಾಡಿ ಗ್ರಾಮ ಅಂತಾ ಹೇಳಿದರು. ಸದರಿವರಿಗೆ ಉಸುಕು ತೆಗೆದುಕೊಂಡು ಹೋಗಲು ಸರಕಾರದ ವತಿಯಿಂದ ಪರವಾನಿಗೆ ಇದೆಯೇ ಅಂತಾ ಕೇಳಲಾಗಿ ತಮ್ಮ ಹತ್ತಿರ ಯಾವುದೇ ಸರಕಾರದ ವತಿಯಿಂದ ಉಸುಕು ತೆಗೆದುಕೊಂಡು ಹೋಗಲು ಯಾವುದೇ ಪರವಾನಿಗೆ ಪತ್ರ ಇರುವದಿಲ್ಲಾ ಅಂತಾ ತಿಳಿಸಿದರು.ಸದರಿ ಈ ಮೇಲೆ ನಮೂದಿಸಿದ ಎಲ್ಲಾ ಟ್ರ್ಯಾಕ್ಟರಗಳಿಗೆ ಮತ್ತು ಲಾರಿಗೆ ಉಸುಕು ತುಂಬಿದ ಸದರಿ 4 ವಾಹನಗಳಲ್ಲಿ ತುಂಬಿದ ಒಟ್ಟು ಉಸಕಿನ ಕಿಮ್ಮತ್ತು, 15,500/- ನೇದ್ದು ಆಗುತ್ತಿದ್ದು ಸದರಿ ಮರಳಿನ ಬಗ್ಗೆ ಸರ್ಕಾರದ ವತಿಯಿಂದ ಉಸುಕು ತುಂಬಿ ಸಾಗಿಸಲು ಯಾವುದೇ ದಾಖಲಾತಿಗಳು ಇರುವದಿಲ್ಲಾ. ಇವರೆಲ್ಲರೂ ಸರಕಾರದ ಸ್ವತ್ತನ್ನು ಕಾನೂನು ಬಾಹಿರವಾಗಿ ಕಳ್ಳ ಸಾಗಾಣಿಕೆ ಮಾಡಿರುತ್ತಾರೆ ಅಂತಾ ಕಂಡುಬಂದಿರುತ್ತದೆ.ಕಾರಣ ಮಾನ್ಯರವರ ಮುಂದೆ ಒಂದು ಲಾರಿ ಮತ್ತು 3 ಟ್ರ್ಯಾಕ್ಟರಗಳು  ಹಾಗೂ ಸದರಿ ವಾಹನಗಳ ಚಾಲಕರನ್ನು ತಂದು ಮುಂದಿನ ಕ್ರಮಕ್ಕಾಗಿ ತಮ್ಮ ಮುಂದೆ ಹಾಜರಪಡಿಸಿದ್ದರ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ನಿಂಬರ್ಗಾ ಪೊಲೀಸ ಠಾಣೆ
ಬೆಂಕಿ ಪ್ರಕರಣ:
ದಿನಾಂಕ 12/08/2013 ರಂದು  ಯಾರೋ ದುಷ್ಕರ್ಮಿಗಳು ಗ್ರಾಮ ಪಂಚಾಯತ ಸುಂಟನೂರದ ಸಭಾಂಗಣದಲ್ಲಿರುವ ಬಿಲ ಕಲೆಕ್ಟರ ಅಲಮಾರಿಯಲ್ಲಿದ್ದ ರಜಿಸ್ಟರ ಮತ್ತು ದಾಖಲಾತಿಗಳನ್ನು ಅಲಮಾರಿ ಕೀಲಿ ಮುರಿದು ಹೊರಗಡೆ ಹಾಕಿ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ್ದು ಇದರಿಂದ ಅಲಮಾರಿ ಸುಟ್ಟಿದ್ದು ಅದರಲ್ಲಿದ್ದ ದಸ್ತಾವೇಜು ಸುಟ್ಟಿದ್ದು ಅಲ್ಲದೆ ಸಭಾಂಗಣದಲ್ಲಿದ್ದ ಫೋಟೊ,ಗಡಿಯಾರ, ಟೇಬಲ ಮತ್ತಿತರ ವಸ್ತುಗಳು ಸುಟ್ಟಿದ್ದು ಇದರಿಂದ ಸುಮಾರು 5,000/-ರೂಪಾಯಿಯಷ್ಟು ಲುಕ್ಸಾನ ಆಗಿರುತ್ತದೆ. ಆರೋಪಿತರ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಫಿರ್ಯಾದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಪ್ರಕರಣ ದಾಖಲು ಮಾಡಿಕೊಂಡು  ತನಿಖೆ ಕೈ ಕೊಂಡಿದ್ದು  ಇರುತ್ತದೆ. 

12 August 2013

GULBARGA DIST REPORTED CRIMES

ಚಿಂಚೋಳಿ ಪೊಲೀಸ್ ಠಾಣೆ:
ಅಪಹರಣ ಪ್ರಕರಣ:

ದಿನಾಂಕ: 10.08.2013 ಪಿರ್ಯಾದಿಯಾದ ಕುಮಾರಿ ಉಷಾ ತಂದೆ ಬಂಡೇಪ್ಪಾ ಕಟ್ಟಿಮನಿ ವ: 19 ವರ್ಷ ಉ: ವಿದ್ಯಾರ್ಥಿನಿ ತಾ:ಚಿಂಚೋಳಿ ಎಂಬುವವಳು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಪಿರ್ಯಾದಿ ನೀಡಿದರ ಸಂಕ್ಷಿಪ್ತ ಸಾರಂಶವೆನಂದರೆ. ಸುಮಾರು 03-04 ವರ್ಷಗಳ ಹಿಂದೆ ತನಗೆ ಒಂದು ಪೋನ ಬಂದಿದ್ದು ಆಗ ತಾನು ಮಾತನಾಡಲು ನಾನು ಮಂಜುನಾಥ ತಂದೆ ಭೀಮಯ್ಯ ಈಳಗೇರ ಅಂತಾ ತಿಳಿಸಿದ್ದು ಎನು ಕೆಲಸ ಇದೆ ಯಾಕೆ ಪೋನ ಮಾಡಿದ್ದಿರಿ ಅಂತಾ ತಾನು ಅವನಿಗೆ ಕೇಳಿದ್ದು ಆಗ ಅವನು ನಿನ್ನೊಂದಿಗೆ ಸ್ನೇಹ ಬೆಳೆಸುವದಿದೆ. ನಿನ್ನ ಹೆಸರು ವಿಳಾಸ ಹೇಳು ಅಂತಾ ಅಂದಿರುತ್ತಾನೆ. ಅದಕ್ಕೆ ತಾನು ತನ್ನ ಹೆಸರು ಉಷಾ ತಂದೆ ಬಂಡೇಪ್ಪಾ ಕಟ್ಟಿಮನಿ ಸಾ: ಐನೋಳ್ಳಿ ಅಂತಾ ತಿಳಿಸಿದ್ದು ಹಿಗೆ ಇಬ್ಬರೂ ಪೋನ ಮುಖಾಂತರ ಸಂಪರ್ಕದಲ್ಲಿ ನಿರಂತರವಾಗಿ ಕೆಲವು ದಿವಸದವರೆಗೆ ಮುಂದುವರಿದಿದ್ದು ಹೀಗೆ ಯಾವಾಗಲು ಪೋನದಲ್ಲಿ ಮಾತನಾಡುತ್ತಾ ಇದ್ದುದ್ದರಿಂದ ಇಬ್ಬರ ಮದ್ಯ ಸಲುಗೆ ಬೆಳೆದು ಪ್ರೀತಿ ಮಾಡತೊಡಗಿದೇವು. ತಾನು ಗುಲಬರ್ಗಾದ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಡಿ.ಎಡ್ ವಿದ್ಯಾಭ್ಯಾಸ ಮಾಡುತ್ತಿದ್ದುದ್ದರಿಂದ ಆಗಾಗೆ ಅವನು ತನಗೆ ಬಂದು ಬೇಟಿ ಆಗಿ ಮಾತನಾಡಿಸುತ್ತಿದ್ದನು.ಹೀಗಿದ್ದು ತನ್ನ ಡಿ.ಎಡ್ ಕೋರ್ಸಿನ ಪ್ರಥಮ ವರ್ಷದ ವಾರ್ಷಿಕ ಪರೀಕ್ಷ ಮುಗಿಸಿಕೊಂಡು ಬಂದು 15 ದಿವಸಗಳು ರಜೆ ಇದ್ದುದ್ದರಿಂದ ತಮ್ಮೂರಾದ ಐನೋಳ್ಳಿಯ ನಮ್ಮ ಮನೆಯಲ್ಲಿ ಬಂದು ಇದ್ದೆನು. ರಜೆಗಳು ಮುಗಿದರಿಂದ ಕಾಲೇಜಿಗೆ ಮತ್ತೆ ಹೋಗಲೆಂದು ಚಿಂಚೋಳಿಯಿಂದ ಖಾಸಗಿ ವಾಹನದಲ್ಲಿ ತನಗೆ ತನ್ನ ತಂದೆ ಕುಡಿಸಿದ್ದು ತಾನು  ಗುಲಬರ್ಗಾ ಕೇಂದ್ರ ಬಸ್ ನಿಲ್ದಾಣ ತಲುಪಿದ್ದು ಅಷ್ಟರಲ್ಲಿಯೇ ಮಂಜುನಾಥ ತಂದೆ ಭೀಮಯ್ಯ ಈಳಗೇರ ಎಂಬುವನು ಬಂದನು. ಇಬ್ಬರು ಬಸನಿಲ್ದಾಣದಲ್ಲಿ ಕುಳಿತುಕೊಂಡು ಮಾತನಾಡಿದೇವು. ಆಗ ಅವನು ನನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಅಂದಿದ್ದು ಆಗ ತಾನು ಒಲ್ಲೆತನ್ನ ಅಣ್ಣಂದಿರು ಮತ್ತು ತಂದೆ, ತಾಯಿಯವರು ಬೈಯ್ಯುತ್ತಾರೆ ಅಂತಾ ಅಂದರು ಕೇಳದೆ ತನಗೆ ಇಲ್ಲ ಸಲ್ಲದೆ ನೆಪಗಳನ್ನು ಒಡ್ಡಿ ತಾನು ಅವನಿಗೆ ಮದುವೆ ಆಗುವದಿಲ್ಲ ಅಂತಾ ಪರಿ ಪರಿಯಿಂದ ಹೇಳಿದರು ಕೇಳದೆ ಜಬರದಸ್ತಿಯಿಂದ ಬಾಂಬೆಗೆ ಹೊಗುವ ಬಸ್ಸಿನೋಳಗೆ ಕೈ ಹಿಡಿದು ಎಳದುಕೊಂಡು ಹೊಗಿ ಬಸ್ಸಿನಲ್ಲಿ ಕುಡಿಸಿ ಬಾಂಬೆಗೆ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ. ಬಾಂಬೆಗೆ ಹೊದ ನಂತರ ಬಸ್ಸನಿಲ್ದಾಣದಲ್ಲಿಯೇ ಉಳಿದುಕೊಂಡೇವು. ತನಗೆ ಬಾಂಬೆಗೆ ಕರೆದುಕೊಂಡು ಹೊದಾಗ ತನಗೆ ಜಬರದಸ್ತಿಯಿಂದ ಅಪಹರಣ ಮಾಡಿಕೊಂಡು ಹೊಗಬೇಡಾ ತಾನು ಪರಿಶಿಷ್ಟ ಜಾತಿಗೆ ಸೇರಿದವಳಾಗಿರುತ್ತೆನೆ ನಾನು ನಿನಗೆ ಮದುವೆ ಆಗುವದಿಲ್ಲ ಅಂತಾ ಹೇಳಿದರು ಕೇಳಿರುವದಿಲ್ಲ. ಬಾಂಬೆಯ ಬಸನಿಲ್ದಾದಲ್ಲಿ ಒಂದು ರಾತ್ರಿ ಇದ್ದೇವು. ಅಲ್ಲಿ ಅವನು ತನಗೆ ದೈಹಿಕ ಸಂಪರ್ಕ ಮಾಡಿರುವದಿಲ್ಲ. ರೈಲ್ವೆ ಮುಖಾಂತರ ತನಗೆ ನಸುಕಿನ ಜಾವ 4 ಗಂಟೆಗೆ ಗುಲಬರ್ಗಾ ರೈಲ್ವೆ ನಿಲ್ದಾಣಕ್ಕೆ ಬಂದಿರುತ್ತೆವೆ, ಅಲ್ಲಿಂದ ನಾನು ಅವನಿಂದ ತಪ್ಪಿಸಿಕೊಂಡು ನನ್ನ ಅಣ್ಣನಾದ ಸೂರ್ಯಕಾಂತನಿಗೆ ಕರೆಯಿಸಿದೆನು. ಆಗ ತನ್ನ ಅಣ್ಣನಾದ ಸೂರ್ಯಕಾಂತನು ಬಂದು ತಾನು ಕಾಣೆಯಾದ ಬಗ್ಗೆ ಚಿಂಚೋಳಿ ಪೊಲೀಸ ಠಾಣೆಯಲ್ಲಿ ತನ್ನ ಇನ್ನೊಬ್ಬ ಅಣ್ಣನಾದ ರವಿಕಾಂತ ಎಂಬುವವನು ದೂರು ನೀಡಿರುವ ವಿಷಯ ತಿಳಿಸಿದ್ದು, ನಂತರ ತಾನು ಮತ್ತು ತನ್ನ ಅಣ್ಣನಾದ ಸೂರ್ಯಕಾಂತ ಇಬ್ಬರು ಕೂಡಿಕೊಂಡು ಚಿಂಚೋಳಿ ಪೊಲೀಸ ಠಾಣೆಗೆ ಬಂದಿರುತ್ತೆವೆ. ತನ್ನ ಅಣ್ಣನಾದ ರವಿಕಾಂತನು ವಿಷಯದ ತಪ್ಪು ಗ್ರಹಿಕೆ ಮತ್ತು ತಪ್ಪು ಕಲ್ಪನೆಯಿಂದ ತಾನು ಕಾಣೆಯಾಗಿರುವ ದೂರು ನೀಡಿರುತ್ತಾನೆ. ಆದರೆ ತಾನು ಕಾಣೆಯಾಗಿರುವದಿಲ್ಲ ಮಂಜುನಾಥ ತಂದೆ ಭೀಮಣ್ಣ ಇಳಗೇರ ಸಾ|| ಕಂದಗೋಳ ಎಂಬುವವನು ತನಗೆ ಜಬರ ದಸ್ತಿಯಿಂದ ಮದುವೆ ಆಗುವದಕ್ಕಾಗಿ ಗುಲಬರ್ಗಾ ಕೇಂದ್ರ ಬಸನಿಲ್ದಾಣದದಿಂದ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಇತ್ಯಾದಿಯಾಗಿ ಕೊಟ್ಟ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಚಿಂಚೋಳಿ ಪೊಲೀಸ ಠಾಣೆಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

     
UÁæ«ÄÃt ¥ÉưøÀ oÁuÉ:
ಅಪಘಾತ ಪ್ರಕರಣ:

ದಿನಾಂಕ.20-07-13 ರಂದು ಮದ್ಯಾನ 3-00 ಪಿ.ಎಂ.ಕ್ಕೆ ಪಿರ್ಯಾದಿ ಮಲ್ಲಿನಾಥ ತಂದೆ ಬಸವಣಪ್ಪಾ ಸಂಗೋಳಗಿ ವಯ;35 ವರ್ಷ ಜ್ಯಾತಿ;ಸಮಗಾರ ಉ; ಟಂ.ಟಂ.ಚಾಲಕ ಸಾ;ರಾಮನಗರ ಗುಲಬರ್ಗಾ ಕೊಟ್ಟ ಹೇಳಿಕೆಯ ಸಾರಾಂಶವೆನೆಂದರೆ , ದಿ:-20/7/13 ರಂದು ತನ್ನ ಮೋಟಾರ ಸೈಕಲ್ ಎಸ್.ಕೆ. ದಾಲ ಮಿಲ್ಲ ದಾಟಿ ಸ್ವಲ್ಪ ಮುಂದೆ  ನನ್ನ  ಸೈಡ ಹಿಡಿದು ಗುಲಬರ್ಗಾದಿಂದ  ಕೆರಿಬೋಸಗಾ ಕಡೆಗೆ ಹೋಗುತವಾಗ ಅದೇ ವೇಳಗೆ ಆಳಂದ ಕಡೆಯಿಂದ ಒಂದು ಕೆ.ಎಸ.ಆರ್.ಟಿ.ಸಿ ಬಸ್ಸ ಚಾಲಕ ತನ್ನ ಬಸ್ಸನ್ನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿ  ಹೊಡೆದಿದರಿಂದ ನಾನು ಮೋಟಾರ ಸೈಕಲದೊಂದಿಗೆ ಕೆಳಗೆ ಬಿದಿದ್ದು ಇದರಿಂದ  ನನ್ನ  ಬಲತೊಡೆಗೆ ಭಾರಿ ಗುಪ್ತಗಾಯ ಮತ್ತು ತರಚಿದ ಗಾಯಗಳಾಗಿದ್ದು, ಬಲಗೈ ಅಂಗೈ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯ, ಬಲಗಣ್ಣಿನ ಹತ್ತಿರ ತರಚಿದ ರಕ್ತಗಾಯವಾಗಿದ್ದು ಇರುತ್ತದೆ. ನನಗೆ ಡಿಕ್ಕಿ ಹೊಡೆದ ಬಸ್ಸು ನೋಡಲಾಗಿ ಕೆಎ 32 ಎಫ 1112 ಇತ್ತು. ಅದರ ಚಾಲಕ ಹೆಸರು  ಮುಸ್ತಪ್ಪ  ತಂದೆ ಅಬ್ದುಲ ನಬೀ ಚಿಂಚೋಳಿ  ಡಿಪೋ ನಂ.3 ಗುಲಬರ್ಗಾ ಅಂತಾ ಗೊತ್ತಾಗಿರುತ್ತದೆ. ನನ್ನ ಹಿಂದೆ ಆಟೋದಲ್ಲಿ ಬರುತ್ತಿದ್ದ  ಲಕ್ಷ್ಮೀಕಾಂತ ಮತ್ತು ಶರಣಬಸಪ್ಪ ಇಬ್ಬರು ಈ ಘಟನೆಯನ್ನು  ನೋಡಿ ನನಗೆ ಎಬ್ಬಿಸಿ ನನಗೆ ಉಪಚಾರ ಕುರಿತು108ಅಂಬುಲೆನ್ಸದಲ್ಲಿ ಕೂಡಿಸಿಕೊಂಡು ಗುಲಬರ್ಗಾ ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಸದರಿ ಕೆ.ಎಸ್.ಆರ್.ಟಿ.ಸಿ.ಬಸ್ಸ ನಂ. ಕೆಎ 32 ಎಫ 1112 ನೆದ್ದರ ಚಾಲಕ ಮುಸ್ತಪ್ಪ  ತಂದೆ ಅಬ್ದುಲ ನಬೀ ಚಿಂಚೋಳಿ  ಡಿಪೋ ನಂ.3 ಗುಲಬರ್ಗಾ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುಲಬರ್ಗಾ UÁæ«ÄÃt ¥ÉưøÀ ಠಾಣೇಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

10 August 2013

GULBARGA DIST REPORTED CRIMES

ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ  
ಅಪಘಾತ ಪ್ರಕರಣ:      
ದಿನಾಂಕ 08-08-2013 ರಂದು ರಾತ್ರಿ 10-30 ಪಿ.ಎಮ್ ಸುಮಾರಿಗೆ  ಶ್ರೀಮತಿ ಚಂದ್ರಭಾಗಾ ಗಂಡ ಶಂಕರ ಜಿಂಗಾಡೆ ಸಾಃ ರೋಜಾ (ಕೆ) ಗುಲಬರ್ಗಾ ರವರು ಸನಾ ಹೋಟೆಲ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 32 ಇ.ಡಿ 2568 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಮಹೇಬೂಬ ನಗರ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಚಂದ್ರಭಾರವರಿಗೆ ಅಪಘಾತಪಡಿಸಿ ತನ್ನ ಮೋ. ಸೈಕಲ ಸಮೇತ ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗುಲಬರ್ಗಾ ಸಂಚಾರಿ ಪೊಲೀಸ್ ಠಾಣೇಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆ
ಶ್ರೀಗಂಧ ಕಟ್ಟಿಗೆ ಕಳ್ಳರ ಬಂಧನ:
ದಿನಾಂಕ: 08/08/2013 ರಂದು ಮದಗುಣಕಿ ಕ್ರಾಸ್ ಹತ್ತಿರ ಮೂರು ಜನರು ಅಪರಿಚಿತರು ಶ್ರೀಗಂಧದ ಕಟ್ಟಿಗೆಯ ತುಕಡಿಗಳು ಕಳ್ಳತನ ಮಾಡಿಕೊಂಡು ಮಾರಾಟ ಮಾಡಲು ಹೋಗುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಮಾದನ ಹಿಪ್ಪರಗಾ ಮತ್ತು ಸಿಬ್ಬಂದಿಯವರಾದ ಶ್ರೀ.ಕನೀರಾಮ ಹೆಚ್.ಸಿ. 183 ಮತ್ತು ಜೀಪ ಚಾಲಕ ಶ್ರೀ.ಶಾಂತಪ್ಪ ಪಿ.ಸಿ.115 ಮತ್ತು ಪಂಚರಾದ 1) ಶ್ರೀ.ಸಿದ್ದರಾಮ ತಂದೆ ಶರಣಪ್ಪ ಹಡಲಗಿ 2) ಶ್ರೀ.ರಾಜಶೇಖರ ತಂದೆ ಈರಣ್ಣಾ ಗಡ್ಡದ ಸಾ: ಮಾದನ ಹಿಪ್ಪರಗಾ ರವರೊಂದಿಗೆ ಮದಗುಣಕಿ ಕ್ರಾಸ್ ಹತ್ತಿರ 3 ಜನರು ತಮ್ಮ ಕೈಯಲ್ಲಿ ಕೈಚೀಲ ಹಿಡಿದುಕೊಂಡು ಬರುತ್ತಿರುವಾಗ ದಾಳಿ ಮಾಡಿ ವಿಚಾರಿಸಲು ಅವರ ಹೆಸರು 1) ಜೀವು ತಂದೆ ಮೋಹನ ಕಾಳೆ ಸಾ:ಶಕಾಪೂರ 2) ವಾಲ್ಕು ತಂದೆ ಸಕರಾಮ ಪವಾರ 3) ಸಕರಾಮ ತಂದೆ ಕಲ್ಲಪ್ಪ ಪವಾರ ಸಾ:ಇಬ್ಬರೂ ಝಳಕಿ(ಬಿ)  ತಾ: ಆಳಂದ. ಅಂತಾ ತಿಳಿಸಿರುತ್ತಾರೆ ಮತ್ತು ಅವರ ಹತ್ತಿರ ಕೈ ಚೀಲದಲ್ಲಿನ ಶ್ರೀಗಂಧದ ಕಟ್ಟಿಗೆಯ ಬಗ್ಗೆ ವಿಚಾರಿಸಲು ಅವರ ಹತ್ತಿರ ಸಿಕ್ಕ 8 ಕೆ.ಜಿ. ಶ್ರೀಗಂಧದ ಕಟ್ಟಿಗೆಯ ತುಕಡಿ ಅ.ಕಿ. 16,000/- ನೇದ್ದು ಗುಲಬರ್ಗಾ ತಾಲ್ಲೂಕಿನ ಭೀಮಳ್ಳಿ ಸೀಮೆಯಲ್ಲಿ ಕಡಿದು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಳಿಸಿದರು. ಸದರಿಯವರ ಹತ್ತಿರ ಇದ್ದ ಶ್ರೀಗಂಧದ ಕಟ್ಟಿಗೆಯ ತುಕಡಿಗಳು ಕಳ್ಳತನದೇ ಅಂತಾ ಖಚಿತ ಪಟ್ಟಾಗ ಜಪ್ತಿ ಪಂಚನಾಮೆ ಮಾಡಿಕೊಂಡು ನಂತರ ಮೇಲ್ಕಂಡ 3 ಜನರನ್ನು ಮತ್ತು 8 ಕೆ.ಜಿ. ಶ್ರೀಗಂಧದ ಕಟ್ಟಿಗೆ ಸಮೇತ ಪರತ್ ಠಾಣೆಗೆ ಬಂದು ಸದರಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ನಗರ ಠಾಣೆ
ವರದಕ್ಷಿಣೆ ಕಿರುಕುಳ ಪ್ರಕರಣ:
ಇಂದು ದಿನಾಂಕ:08/08/2013 ರಂದು ಪಿರ್ಯಾದಿ ಶ್ರೀಮತಿ ಅಶ್ವಿನಿ ಗಂಡ ಅಡಿವೆಪ್ಪ ಸಜ್ಜನ ಶಟ್ಟಿ ಸಾ:ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ:28/05/2010 ರಂದು ನನ್ನ ಮದುವೆ ಶ್ರೀ ಅಡಿವೆಪ್ಪ ರವರೊಂದಿಗೆ ಆಗಿದ್ದು ನನಗೆ ಮದುವೆಯಾದ ದಿನದಿಂದಲು ನನ್ನ ಗಂಡ ಅಡಿವೆಪ್ಪ ಹಾಗೂ ಮಾವ ಬಸವರಾಜ ಕೂಡಿ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ನಿನ್ನ ತಾಯಿ ಮನೆ ಮಾರಿ ವರದಕ್ಷಿಣೆ ಹಣ ತಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟು ಹಣ ತರದಿದ್ದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.