POLICE BHAVAN KALABURAGI

POLICE BHAVAN KALABURAGI

24 June 2013

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ ರಮೇಶ ತಂದೆ ಭೀಮಸಿಂಗ ರಾಠೋಡ  ಉ|| ಕಿರಾಣಿ ವ್ಯಾಪಾರ  ಜಾ|| ಲಂಬಾಣಿ ಸಾ|| ಏತೆಬಾರಪೂರ ರಾಮಶೆಟ್ಟಿನಾಯಕ  ತಾಂಡಾ ತಾ|| ಚಿಂಚೋಳಿ ರವರು ನಮ್ಮ ತಾಂಡಾದ ರಾವುಲ ತಂದೆ ಭಾವಸಿಂಗ ರಾಠೋಡ ವ|| 10 ವರ್ಷ ಇತನು ದಿನಾಂಕ 22-06-2013 ರಂಧು ಸಾಯಾಂಕಾಲ 04.30 ಗಂಟೆಗೆ ಸುಮಾರಿಗೆ ನಮ್ಮ ಕಿರಾಣಿ ಅಂಗಡಿಗೆ ಬಂದು ಪಾಪಡ ಕರಿದಿ ಮಾಡಿಕೊಂಡು ನಮ್ಮ ಕಿರಾಣಿ ಅಂಗಡಿಯ ಸಮಿಮ ವಿರುವ ಸರಕಾರಿ ಶಾಲೆಯ ಮುಂದೆ ಚಿಕ್ಕ ಮಕ್ಕಳು ಆಟವಾಡುತ್ತಿದ್ದರು. ಆಟವಾಡುತ್ತಿರುವಾಗ ರಾಹುಲ ಇತನು ಪಾಪಡ ತಿನ್ನುತ್ತಾ ಆಟವಾಡುವದನ್ನು ನೋಡತ್ತಾ ನಿಂತಿದ್ದನು. ಆಗ ಬಾಬು ತಂದೆ ಭೀಮಸಿಂಗ ಇತನು ಕಲ್ಲುಗಳನ್ನು ಹೊಡೆಯುತ್ತಾ ನಮ್ಮ ಕಿರಾಣಿ ಅಂಗಡಿಯ ಕಡೆಗೆ ಬಂದನು ಆಗ ನಾನು ಸದರಿ ಬಾಬು ಇತನಿಗೆ ಈ ರೀತಿ ಕಲ್ಲುಗಳು ಹೊಡೆಯಬೇಡಾ? ಯಾರಿಗಾದರೂ ಕಲ್ಲು ಬಡೆದು ಅನಾಹುತಾ ಮಾಡುತ್ತಿ ಅಂತ ಹೇಳಲು ನೀ ಏನು ಹೇಳುತ್ತಿ ಅಂತ ಪುನಃ  ಆಟವಾಡುತ್ತಿದ್ದ ಹುಡಗರ ಕಡೆಗೆ ಕಲ್ಲು ಹೊಡೆದನು ಹಾಗೆ ಕಲ್ಲು ಹೊಡೆದರೆ ಹುಡುಗರು ಸಾಯುತ್ತಾರೆ ಅಂತಾ ಹೇಳಿದರು ಉದ್ದೇಶಪೂರ್ವಕವಾಗಿ ಒಂದು ಕಲ್ಲನ್ನು ತೆಗೆದುಕೊಂಡು ಜೋರಾಗಿ ರಾಹುಲ ತಂದೆ ಭಾವಸಿಂಗ ರಾಠೋಡ ಇವನಿಗೆ ತಲೆಗೆ ಹೊಡೆದನು. ಇದರಿಂದ ತಲೆಗೆ ಪೆಟ್ಟಾಗಿ ರಕ್ತ ಬರುತ್ತಿತ್ತು ಅಷ್ಟರಲ್ಲಿ ಭಾವಸಿಂಗ ರಾಠೋಡ, ಶಾಂತಬಾಯಿ ಗಂಡ ಭಾವಸಿಂಗ ,ನಾರಾಯಣ ತಂಧೆ ದಾಮಲಾ ರಾಠೋಡ, ಶಾಮರಾವ್ ತಂಧೆ ಅಂಬುನಾಯಕ ಮತ್ತು ರಾಮು ತಂದೆ ಮೋತು ರಾಠೋಡ ಇವರು ಸಹ ಸದರಿ ಸ್ಥಳಕ್ಕೆ ಬಂದು ನಾವೆಲ್ಲರೂ ಕೂಡಿಕೊಂಡು ಸದರಿ ರಾವುಲ ಇವನಿಗೆ ಉಪಚಾರ ಕುರಿತು  ಸರಕಾರಿ ಆಸ್ಪತ್ರೆ ಚಂದಾಪೂರಕ್ಕೆ ತಂಧು ಸೆರಿಕೆ ಮಾಡಿದ್ದು ವೈಧ್ಯಾಧಿಕಾರಿಗಳು ಸದರಿ ರಾವುಲನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೋಟ್ಟಿರುತ್ತಾರೆ. ಸದರಿ ರಾವುಲ ಇತನು ಪ್ರಜ್ಞಾಹಿನಾ ಸ್ಥಿತಿಯಲ್ಲಿರುತ್ತಾನೆ. ಭಾಬು ತಂಧೆ ಬೀಮಸಿಂಗ ಪವಾರ ಇತನು ಉದ್ದೇಶಪೂರ್ವಕವಾಗಿ ರಾವುಲ ಇತನ ತಲೆಗೆ ಕಲ್ಲಿನಿಂದ ಹೊಡೆದು ಬಾರಿ ರಕ್ತಗಾಯಪಡಿಸಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:153/2013 ಕಲಂ 307 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:23-06-2013 ರಂದು ಮಧ್ಯಾಹ್ನ  ಪಿಎಸ್ಐ ಕಮಲಾಪೂರ ಮತ್ತು ಅವರ ಸಿಬ್ಬಂದಿಯವರು ಪಟವಾದ ಗ್ರಾಮದಲ್ಲಿ ಸಂತೋಷ ತಡೋಳಗಿ ಇವರ ಹೋಟೆಲ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಮೇಲೆ ದಾಳಿ ಜೂಜಾಟದಲ್ಲಿ ನಿರತರಾದ ಸಂತೋಷ ತಂದೆ ಶ್ಯಾಮರಾವ ತಡೋಳಗಿ,ರವಿ ತಂದೆ ಹಣಮಂತ ಜಮಾದಾರ,ಸತೀಷ ತಂದೆ ಮಲ್ಲಿಕಾಜರ್ುನ ಖಾನಾಪೂರ, ಶಂಕರ ತಂದೆ ನಾಗಶೆಟ್ಟೆಪ್ಪಾ ಪಾಟೀಲ,ಸಂತೋಷ ತಂದೆ ರಾಜಪ್ಪಾ ರಾಮಾ,ಅಮೃತ ತಂದೆ ನಾಗಪ್ಪಾ ಜಮಾದಾರ,ರಮೇಶ ತಂದೆ ನರಸಪ್ಪಾ ಜಮಾದಾರ,ರಮೇಶ ತಂದೆ ಹಣಮಂತಪ್ಪಾ ಜಮಾದಾರ,ಅನೀಲ ತಂದೆ ರೇವಣಸಿದ್ದಪ್ಪಾ ರಂಜೇರಿ  ಸಾಃ ಎಲ್ಲರೂ ಪಟವಾದ ತಾಃಜಿಃ ಗುಲಬರ್ಗಾ ರವರಿಂದ ನಗದು ಹಣ 3150-00 ರೂಪಾಯಿಗಳು ಹಾಗೂ ಜೂಜಾಟ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 61/2013 ಕಲಂ, 87 ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:

ಚೌಕ ಪೊಲೀಸ ಠಾಣೆ: ಶ್ರೀ ಬಾಲಚಂದ್ರ ತಂದೆ ಸಂತಾನ ಕೃಷ್ಣ ನಾಯ್ಡು ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ ರವರು ತಾನು ನೇತಾಜಿ ಚೌಕ ಹತ್ತಿರ ಎಸ್.ವಿ ಮಠಪತಿ ಬಿಲ್ಡಿಂಗನಲ್ಲಿ ಎಲೆಕ್ಟ್ರಿಕಲ್ ಹೊಲಸೆಲ್ ಅಂಗಡಿ ಇಟ್ಟುಕೊಂಡಿದ್ದು, ದಿನಾಂಕ:21.06.2013 ರಂದು ಎಂದಿನಂತೆ ವ್ಯಾಪಾರ ಮಾಡಿಕೊಂಡು ರಾತ್ರಿ 10 ಗಂಟೆಗೆ ಅಂಗಡಿ ಮುಚ್ಚಿಕೊಂಡು ಹೋಗಿದ್ದು ದಿನಾಂಕ:22.06.2013 ರಂದು ಬೆಳಗ್ಗೆ 07-00 ಗಂಟೆಗೆ ಪಕ್ಕದ ಬೇಕರಿಯ ಅಶೋಕ ಉಡಗಿಯವರು ಪೋನ ಮಾಡಿ ನಿಮ್ಮ ಅಂಗಡಿ ರಾತ್ರಿಯ ಸಮಯದಲ್ಲಿ ಕಳ್ಳತನವಾಗಿರುತ್ತದೆ ಅಂತಾ ತಿಳಸಿದ್ದರಿಂದ ಹೋಗಿ ನೋಡಲು ಅಂಗಡಿಯಲ್ಲಿದ್ದ 12-13 ಎಲೆಕ್ಟ್ರಾನಿಕ್ ಪ್ಲಕೇಜಿಬಲ್ ಹಾಗೂ ಕಾಪರ ವೈಯರ್ ಬಂಡಾಲ ಸಾಮಾನುಗಳು ಅಃಕಿಃ 99,000/- ರೂಪಾಯಿ ಬೆಲೆಬಾಳುವವು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಅಂತಾ ಠಾಣೆ ಗುನ್ನೆ ನಂ:136/2013 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

23 June 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ಶ್ರೀ, ಭೀಮಣ್ಣ ತಂದೆ ಹಣಮಂತ ನಿಂಗಾಪೊರ ಸಾ:ವಾಲ್ಮಿಕಿ ನಗರ ಶೆಟ್ಟಿ ಹುಡಾ ಸೇಡಂ. ತಾ:ಸೇಡಂ ರವರು ತನ್ನ ಮಗನಾದ ರಾಜು ಇತನು ವಾಸವದತ್ತಾ ಕಂಪನಿಯಲ್ಲಿ ಲೊಡಿಂಗ್ ಕೆಲಸಕ್ಕೆ ಅಂತಾ ರಾತ್ರಿ 10-00  ಗಂಟೆಯಿಂದ ಬೆಳಿಗ್ಗೆ 06-00 ಗಂಟೆಯವರೆಗೆ ಕರ್ತವ್ಯಕ್ಕೆ  ಹಿರೋ ಸ್ಪೆಂಡರ ಪ್ಲಸ್  ಮೋಟಾರು ಸೈಕಲ್ ಚೆಸ್ಸಿ ನಂ: MBL HA 10 AMD HE 25449 ನೇದ್ದರ ಮೇಲೆ ಮನೆಯಿಂದ ಹೋಗುವಾಗ ರೇಲ್ವೇ ಒವರ್ ಬ್ರಿಡ್ಜ ರೋಡಿನ ಮೇಲೆ ಹೋಗುತ್ತಿರುವಾಗ ಸೇಡಂ ಕಡೆಯಿಂದ ಒಂದು ಮಹೇಂದ್ರ ಮ್ಯಾಕ್ಸಿಮೋ ವಾಹನ ನಂ ಕೆಎ-32-ಬಿ-5286 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಸ್ಕಾಳಜೀತನದಿಂದ ನಡೆಸಿಕೊಂಡು ಬಂದು ಎಡಗಡೆ ಸೈಡು ಬಿಟ್ಟು ಬಲಗಡೆಗೆ ಬಂದು ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ್ದರಿಂದ ಭಾರಿರಕ್ತ ಗಾಯವಾಗಿ ಕೀವಿಯಿಂದ, ಬಾಯಿಂದ, ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ, ಭೀಮಣ್ಣ ತಂದೆ ಹಣಮಂತ  ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:153/2013 ಕಲಂ 279 304(ಎ) ಐಪಿಸಿ  ಸಂಗಡ 187 ಐ ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ 22/06/2013 ರಂದು ನಾನು ನನ್ನ ವಕೀಲ ವೃತ್ತಿ ಕೆಲಸ ಮುಗಿಸಿಕೊಂಡು  ರಾತ್ರಿ 9-00 ಗಂಟೆಗೆ  ವರ್ದನ ನಗರದಲ್ಲಿರುವ ನಮ್ಮ ಮನೆಗೆ ಬರುತ್ತಿರುವಾಗ ನಮ್ಮ ಮನೆಯ ಹತ್ತಿರ ಇರುವ ಮಹೇಂದ್ರ ಸರ್ವಿಸ ಸೆಂಟರನ ಮುಂದೆ ನನ್ನ ಮುಂದುಗಡೆಯಿಂದ 20-25 ವಯಸ್ಸಿನ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟಾರ ಸೈಕಲ ತಂದವನೇ ನನ್ನ ಮೈ ಮೇಲೆ ತಂದು ನನ್ನ ಕೊರಳಿಗೆ  ಕೈ ಹಾಕಿ ನನ್ನ ಕೊರಳಲ್ಲಿದ್ದ ಬಂಗಾರದ ಗೊಪು  ನಮೂನೆಯ ಸರ್‌ ಅದಕ್ಕೆ ಹೃದಯದಾಕಾರದ ಪದಕವಿದ್ದು  ಎರಡುವರೆ ತೋಲೆ ಬಂಗಾರ ಮತ್ತು 1 ಗ್ರಾಂ ಹವಳದ ಪದಕ  ಅಂದಾಜು ಕಿಮ್ಮತ್ತು  ರೂ. 62,000/- ಬೆಲೆಬಾಳುವುದು ನನ್ನ ಕೊರಳನಿಂದ ಕಿತ್ತುಕೊಂಡು ಹೋಗಿರುತ್ತಾನೆ ಅಂತಾ  ಸರಸಿಜ ರಾಜನ್ ವಕೀಲ ಸಾ|| ವರ್ದನ ನಗರ ಗುಲಬರ್ಗಾ ರವರು ಲಿಖಿತ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:99/2013 ಕಲಂ. 392 ಐಪಿಸಿ ಪ್ರಕಾರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

22 June 2013

GULBARGA DISTRICT REPORTED CRIME

ಕಳ್ಳತನ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ 22-06-2013 ರಂದು ಮುಂಜಾನೆ ಕರುಣೇಶ್ವರ ನಗರದ ನಮ್ಮ ಅಕ್ಕನ ಮನೆಯ ಹತ್ತಿರದ ವಿಶ್ವಾಸ ಮೊಘಜರ ಇವರು ಪೋನ ಮಾಡಿ ನಿಮ್ಮ ಅಕ್ಕನವರ ಮನೆಯ ಬಾಗಿಲ ಕೀಲಿ ಮುರಿದು ಯಾರೋ ಕಳ್ಳರು ಕಳುವು ಮಾಡಿದ ಹಾಗೇ ಕಂಡು ಬರುತ್ತದೆ ಅಂತಾ ತಿಳಿಸಿದ್ದರಿಂದ ನಾನು ಹೋಗಿ ನೋಡಲು ನಮ್ಮ ಅಕ್ಕ ಮತ್ತು ಅಕ್ಕನ ಮನೆಯವರು ಮನೆಗೆ ಕೀಲಿ ಹಾಕಿಕೊಂಡು ಪೂನಾಕ್ಕೆ ಹೋಗಿರುತ್ತಾರೆ ನಮ್ಮ ಅಕ್ಕನ ಮನೆಯ ಮುಖ್ಯ ಬಾಗಿಲದ ಕೀಲಿಕೊಂಡಿ ಮುರಿದು ಬೆಡರೂಮಿನಲ್ಲಿಯ ಅಲಮಾರದ ಕೀಲಿ ಮುರಿದು ಲಾಕರದಲ್ಲಿಯ 40,000 ನಗದು ಹಣ ಎರಡೂವರೆ ತೊಲೆ ಬಂಗಾರ 1 ಕೆ.ಜಿ ಬೆಳ್ಳಿಯ ಸಾಮಾನುಗಳು ಹೀಗೆ ಒಟ್ಟು 1,30,000=00 ರೂ ಬೆಲೆಬಾಳುವ ಹಣ ಬಂಗಾರ ಬೆಳ್ಳಿ ಕಳವುವಾಗಿರುತ್ತದೆ  ಅಂತಾ ಶ್ರೀ ಶಶಾಂಕ ತಂದೆ ಗೋಪಾಲ ಕೃಷ್ಣ ಹೆರೋರ ಸಾ:ಬ್ರಹ್ಮಪೂರ ಗುಲಬರ್ಗಾ ರವರು ತನ್ನ ಅಕ್ಕನ ಮನೆ ಕಳವುವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ;98/2013 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ .