POLICE BHAVAN KALABURAGI

POLICE BHAVAN KALABURAGI

12 December 2012

GULBARGA DISTRICT



ಆಳಂದ ಉಪ-ವಿಭಾಗದ ಪೊಲೀಸ್ ಅಧಿಕಾರಿಗಳಿಂದ ವಾಹನ ಕಳ್ಳನ ಬಂದನ, ಸುಮಾರು 5, 00,000/- ಮೌಲ್ಯದ್ದ ವಾಹನಗಳ ಜಪ್ತಿ.
ಶ್ರೀ ಎಸ್ ಬಿ ಸಂಬಾ ಡಿ ಎಸ್ ಪಿ ಆಳಂದ ಉಪ ವಿಭಾಗ ಮತ್ತು ಶ್ರೀ. ಜಿ ಎಸ್ ಉಡಗಿ ಸಿ.ಪಿ.ಐ ಆಳಂದ ಇವರ ನೇತ್ರತ್ವದಲ್ಲಿ ಶ್ರೀ. ವಿನಾಯಕ ಪಿ ಎಸ್ ಐ ನರೋಣಾ ಪೊಲೀಸ ಠಾಣೆ ಶ್ರೀ. ಬಂಡೆಪ್ಪ ಎಎಸ್ಐ ನರೋಣಾ ಪೊಲೀಸ ಠಾಣೆ ಮತ್ತು ಸಿಬ್ಬಂದಿಯವರಾದ ಚಂದ್ರಶೇಖರ ಕಾರಭಾರಿ, ಲಕ್ಷ್ಮಿಪುತ್ರ, ಬಸವರಾಜ,ಬಸವರಾಜ,ರವರನೊಳಗೊಂಡ ಒಂದು ತಂಡ ರಚಿಸಿದ್ದು, ನರೊಣಾ ಗ್ರಾಮದಲ್ಲಿ ದಿನಾಂಕ:07/12/2012 ರಂದು ಸಾಯಂಕಾಲ 4-30 ಗಂಟೆಗೆ ವಾಹನ ಕಳ್ಳತನ ಮಾಡುವ ನರೋಣಾ ಗ್ರಾಮದ ಕೈಲಾಸ್ ತಂದೆ ಅರ್ಜುನ  ದೇಖೂನ ಸಾ:ನರೋಣಾ ಇವನನ್ನು ವಶಕ್ಕೆ ತೆಗೆದುಕೊಂಡು ಅವನ ತಾಬದಲ್ಲಿದ್ದ ಕಳ್ಳತನದ ದ್ವಿ-ಚಕ್ರ ವಾಹನ ಸಂ ಕೆಎ-32/ಎಕ್ಸ 773 ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ಮಾಡಿದಾಗ ಆಳಂದ ತಾಲೂಕ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಮೋಟಾರ ಸೈಕಲ್ ಮತ್ತು ಟಾಟಾ ಸುಮೋ ವಾಹನ ಕಳುವು ಮಾಡಿರುವದನ್ನು ಅರಿತು ಮತ್ತೆ  ಅವನಿಂದ ಟಾಟಾ ಸುಮೋ ಮತ್ತು 3 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಅ||ಕಿ|| 5,00,000 ರೂಪಾಯಿ ಬೆಲೆ ಬಾಳುವದಾಗಿರುತ್ತವೆ. ಕೈಲಾಸ್ ಇತನು ಕುಖ್ಯಾತಿ ಕಳ್ಳನಿದ್ದು ವಿಜಾಪೂರ ಜಿಲ್ಲೆಯ ಇಂಡಿ ಮತ್ತು ಸೊಲ್ಲಾಪೂರ, ಆಳಂದ ಮುಂತಾದ ಕಡೆ ವಾಹನ ಕಳ್ಳತನ ಮಾಡಿರುತ್ತಾನೆ. ಈ ಮೋಟಾರ ಸೈಕಲ ಪತ್ತೆ ಕಾರ್ಯ ಮಾಡಿ ಆರೋಪಿ ಮತ್ತು ಮಾಲು ವಾಹನಗಳನ್ನು ವಶಪಡಿಸಿಕೊಂಡಿದ್ದಕಾಗಿ ಮಾನ್ಯ ಎಸ.ಪಿ ಸಾಹೇಬರು ಇವರ ಕಾರ್ಯ ಸಾಧನೆಯನ್ನು ಶ್ಲಾಘಿಸಿರುತ್ತಾರೆ.
ವಶಪಡಿಸಿಕೊಳ್ಳಲಾದ ವಾಹನಗಳ ಮಾಹಿತಿ:ಒಂದು ಟಾಟಾ ಸುಮೊ ನಂ: ಕೆಎ-01/ಎ-9892, ಹಿರೋ ಹೊಂಡಾ ಮೋಟಾರ ಸೈಕಲ ನಂ:ಕೆಎ-32/ಎಕ್ಸ್-7973, ಹಿರೋ ಹೊಂಡಾ ಸ್ಪೇಲಂಡರ್ ನಂ:ಕೆಎ-32/ಎಕ್ಸ್-733, ಪಲ್ಸರ್ ಕೆಎ-32/ಎಕ್ಸ್-358, ಮತ್ತು ಒಂದು ಬಜಾಜಾ ಡಿಸ್ಕವರಿ ಮೋಟಾರ ಸೈಕಲ ನಂ:ಕೆಎ-29/ಎಲ್-9931 ನೇದ್ದವುಗಳು.

11 December 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ: ದಿನಾಂಕ:09/12/2012 ರಂದು ರಾತ್ರಿ 9:30 ಗಂಟೆಗೆ ಮಹಾಲಿಂಗ ತಂದೆ ಸಿದ್ದಣ್ಣ ಮತ್ತು ಸರೋಜಾ ಗಂಡ ಮಹಾಲಿಂಗ ಸಾ|| ಇಬ್ಬರು ಜಾಂಬವಿ ನಗರ ವಾಡಿ ತಾ|| ಚಿತ್ತಾಪುರರವರು ಮಹಾಲಿಂಗ ಇತನು ತನ್ನ ಮಾವನ ಮನೆ ಸೇಡಂ ದಿಂದ ವಾಡಿ ಗೇ ಹೋಗುವ ಕುರಿತು ತನ್ನ ಹೋಸ ಮೋಟಾರು ಸೈಕಲ್ ಮೇಲೆ ತನ್ನ ಹೆಂಡತಿಯಾದ ಸರೋಜಾ ಇವಳನ್ನು ಕರೆದುಕೊಂಡು ವಾಡಿಗೆ ಹೋಗುವಾಗ ಸೇಡಂ ಗುಲಬರ್ಗಾ ಎಸ್.ಹೆಚ್. 10 ರೋಡಿನ ಹುಡಾ (ಕೆ) ಗೇಟ ಸಮೀಪ ರಾತ್ರಿ 10:30 ಪಿ.ಎಮ್ ಸುಮಾರಿಗೆ ಯಾವುದೋ ಒಂದು ಅಪರಿಚಿತ ವಾಹನವು ಮೋಟಾರು ಸೈಕಲ್ ಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ್ ಪೆಟ್ರೋಲ್ ಟ್ಯಾಂಕ್ ಒಡೆದು ಬೆಂಕಿ ಹತ್ತಿ ಮೋಟಾರು ಸೈಕಲ್ ಮತ್ತು ಮೃತರ ಬಟ್ಟೆಗಳು ಸುಟ್ಟಿದ್ದು ಮತ್ತು ತಲೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ ಅಂತಾ ಶ್ರೀ ಸಿದ್ದಣ್ಣ ತಂದೆ ಶರಣಪ್ಪ ಹಲಗೇನವರ ಸಾ|| ಜಾಂಬವಿ ಕಾಲೋನಿ ವಾಡಿ ತಾ|| ಚಿತ್ತಾಪುರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 74/2012 ಕಲಂ, 279, 304 (ಎ) ಐಪಿಸಿ ಸಮಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

10 December 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ.ವಿಜಯಕುಮಾರ ತಂದೆ ಗುಲಾಬಚಂದ ಕಿವುಡೆ, ಸಾ|| ಚಕ್ರಕಟ್ಟಾ ಗಾಜೀಪೂರ ಗುಲಬರ್ಗಾರವರು ನಾವು ದಿನಾಂಕ:08-12-2012 ರಂದು ಸಾಯಂಕಾಲ ಮನೆಯ ಬಾಗಿಲಗೆ ಕೀಲಿ ಹಾಕಿ ಉಸ್ಮಾನಾಬಾದದಲ್ಲಿರುವ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿರುತ್ತೆವೆ. ದಿನಾಂಕ:09-12-2012 ರಂದು ಬೆಳಗಿನ ಜಾವ ಯಾರೋ ಕಳ್ಳರು ಮನೆಯ ಬಾಗಿಲು ಮುರಿದು ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ 25,000/- ಹೀಗೆ ಒಟ್ಟು 1,01,400/- ಮೌಲ್ಯದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ:131/2012 ಕಲಂ, 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಚಂದ್ರಭಾಗ ಗಂಡ ಶಂಕರ ಕಲ್ಲೂರ ಸಾ|| ಹಡಲಗಿ ಗ್ರಾಮ ರವರು ನಾವು ಮನೆಯವರೆಲ್ಲರೂ ದಿನಾಂಕ:07-12-2012 ರಂದು ಬೆಳಿಗ್ಗೆ  11-00 ಗಂಟೆ ಸುಮಾರಿಗೆ ಮನೆಗೆ ಕೀಲಿ ಹಾಕಿಕೊಂಡು ನಮ್ಮ ಹೊಲಕ್ಕೆ ತೊಗರಿ ಬಡಿಯಲು ಹೋಗಿ ಮರಳಿ ಸಾಯಂಕಾಲ 5-30 ಗಂಟೆ ಸುಮಾರಿಗೆ ಮನೆಗೆ ಬಂದಿದ್ದು. ಮನೆಯ  ಕೋಣೆಯ ಬಾಗಿಲು ತೆಗೆದಿದ್ದು ಒಳಗೆ ಹೋಗಿ ನೋಡಲು ಅಲಮಾರಿ ತೆರೆದಿತ್ತು. ಅಲಮಾರಿಯ ಶೇಫ ಲಾಕರ ಮುರಿದಿತ್ತು ಅದರಲ್ಲಿಟ್ಟಿದ್ದ ಬಂಗಾರದ  ಆಭರಣಗಳು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು47, 000/- ರೂಪಾಯಿ ಬೆಲೆ ಬಾಳುವವುಗಳು  ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:105/2012 ಕಲಂ, 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುಧೋಳ ಪೊಲೀಸ್ ಠಾಣೆ: ಮಧು ತಂದೆ ನರಸಪ್ಪಾ ವ|| 18  ಜಾ|| ಕುರುಬರ ಸಾ|| ಹುಲಿಗುಂಡಂ ಇತನು ತನ್ನ ಎತ್ತುಗಳನ್ನು ಹೊಡೆದು ಕೊಂಡು ಹುಲಿಗುಂಡಂ ಕ್ರಾಸ್ ಹತ್ತಿರ ಯಾದಗಿರಿ ಕೊಡಂಗಲ್ ರಸ್ತೆಯಲ್ಲಿ ಬರುತ್ತಿದ್ದಾಗ ಯಾದಗಿರಿ ಕಡೆಯಿಂದ ಕೊಡಂಗಲ ಕಡೆಗೆ ಹೊರಟಿದ್ದ ಟ್ಯಾಂಕರ ನಂ. ಎಮ್.ಹೆಚ್- 04/ಡಿ.ಕೆ- 3027 ನೆದ್ದರ ಚಾಲಕನಾದ ದಶರಥ ಯಾದವ ಇತನು ತನ್ನ ವಾಹನವನ್ನು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಮಧು ತಂದೆ ನರಸಪ್ಪಾ ಇವನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದಾಗ ಸದರಿಯವನಿಗೆ ಭಾರಿಗಾಯಗಳಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಆತನ ತಾಯಿಯಾದ ಬಿಚ್ಚಮ್ಮಾ ಗಂಡ ನರಸಪ್ಪಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 154/2012 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.