POLICE BHAVAN KALABURAGI

POLICE BHAVAN KALABURAGI

06 November 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಚಂದ್ರಕಾಂತ ತಂದೆ ಕಲ್ಯಾಣರಾವ ಬಿರಾದಾರ ಸಾ||ರಾಜೀವ ಗಾಂಧಿ ನಗರ ಪೀಲ್ಟ್‌‌ರ ಬೆಡ್‌‌ ಗುಲಬರ್ಗಾರವರು ನಮ್ಮ ತಂದೆಯವರಾದ ಶ್ರೀ ಕಲ್ಯಾಣರಾವ ತಂದೆ ಚಂದ್ರಾಶ್ಯಾ ಬಿರಾದಾರ ರವರು ದಿನಾಂಕ:05/11/2012 ರಂದು  ಸಂಗೋಳಗಿ ಗ್ರಾಮದಲ್ಲಿ ಸಂಬಂಧಿಕರ ಜವಳ ಕಾರ್ಯಕ್ರಮಕ್ಕೆ ಹೋಗಿ  ಮರಳಿ ಗುಲಬರ್ಗಾಕ್ಕೆ ಟಿವಿಎಸ್‌‌ ಮೋಪೈಡ ನಂಬರ  ಕೆಎ;32 ವ್ಹಿ;1447 ನೇದ್ದರ ಮೇಲೆ ಕೆರೆಬೋಸಗಾ ಕ್ರಾಸದಲ್ಲಿ ನಿಂತು ಮರಳಿ ನನ್ನ ಗಾಡಿಯ ಹತ್ತಿರ ಬರುವಾಗ ಮೋಟಾರ ಸೈಕಲ ನಂಬರ ಕೆಎ;32 /7415 ನೇದ್ದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಕಲ್ಯಾಣರಾವ ಇವರಿಗೆ  ಡಿಕ್ಕಿ ಹೊಡೆದು ಅವರು ಬಿದ್ದು ಅವರಿಗೂ ಗಾಯಗಳು ಆಗಿರುತ್ತವೆ. ನಂತರ ಅವರು ಅಲ್ಲಿಂದ ತಮ್ಮಮೋಟಾರ ಸೈಕಲ್ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ಗುನ್ನೆ ನಂಬರ 354/12 ಕಲಂ 279  338 ಐಪಿಸಿ ಸಂ/187 ಐಎಂವಿ ಆಕ್ಟ್‌‌  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಹೊನ್ನಪ್ಪ ತಂದೆ ರುಕ್ಕಪ್ಪ ದಿವಂಟಗಿ ಸಾ: ಬೀಮ್ಮಳ್ಳಿ ತಾ|| ಜಿ|| ಗುಲಬರ್ಗಾ ರವರು ದಿನಾಂಕ:04/11/2012 ರಂದು 10-00  ಗಂಟೆಗೆ ಹೊಲಕ್ಕೆ ಹೋಗಿ ನೋಡಲಾಗಿ ಮ್ಮ ಹೊಲ ಸರ್ವೇ ನಂ:144 ನೇದ್ದರಲ್ಲಿ 32 ಎಕರೆ 1 ಗುಂಟೆ ಹೊಲದಲ್ಲಿ ಸರಕಾರದವರು 10 ಎಕರೆ 20 ಗುಂಟೆ ಜಮೀನು ಸ್ವಾಧೀನ ಮಾಡಿಕೊಂಡಿದ್ದು ಈ ಬಗ್ಗೆ ಕೋರ್ಟನಲ್ಲಿ ಕೇಸು ನಡೆದಿರುತ್ತದೆ. ಉಳಿದ 21 ಎಕರೆಯಲ್ಲಿ 3 ಜನ ಅಣ್ಣ ತಮ್ಮಂದಿರು ಪಾಲನ್ನು ಮಾಡಿ ಸಾಗುವಳಿ ಮಾಡುತ್ತಿದ್ದು . ನನ್ನ ಅಣ್ಣನ ಮಕ್ಕಳು ಹಾಗೂ ಅವನ ಪತ್ನಿ ಈಗ 3-4 ದಿವಸಗಳ ಹಿಂದೆ ಹೊಲದ ಬಾಂದರಿ ಕಲ್ಲು ಕಿತ್ತಿ ಹಾಕಿ ಹೊಲದಲ್ಲಿಯ ತೋಗರಿ ಬೆಳೆಯನ್ನು ಅಂದಾಜು 5000/- ರೂ.  ಹಾಳು ಮಾಡಿರುತ್ತಾರೆ. ನಮ್ಮ ಅಣ್ಣನ ಮಗ ಮಲ್ಲಪ್ಪ ಅವನ ಹೆಂಡತಿ  ಹಾಗೂ ಶಿವಶರಣಪ್ಪ ಜಮಾದಾರ ರೋಜಾ ಠಾಣೆ ಇವರ ಮಗ ಅನಿಲ ಬಂದು ಒಡೆದು ಹಾಕಿರುತ್ತಾರೆ. ನಾನು ಮನೆಗೆ ಬಂದು ಮಲ್ಲಪ್ಪ, ದಂಡಪ್ಪ, ರುಕ್ಕಪ್ಪ, ಮಹಾದೇವ ಇವರಿಗೆ ಕೇಳಿದಾಗ ನಾವೇ ಕಿತ್ತಿ ಹಾಕಿರುತ್ತೆವೆ ಅಂತಾ  ಅವ್ಯಾಚ್ಛವಾಗಿ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:355/2012 ಕಲಂ 143 147 447 427 504 506 109 ಸಂಗಡ 149  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

05 November 2012

GULBARGA DISTRICT REPORTED CRIMES


ಹಾಗರಗುಂಡಗಿ ಗ್ರಾಮದಲ್ಲಿ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂದನ: ಸುಮಾರು 2 ಲಕ್ಷ 50 ಸಾವಿರ ಮೌಲ್ಯದ ಮಧ್ಯ ಜಪ್ತಿ:
ಮಾನ್ಯ ಶ್ರೀ ಪವಾರ್  ಪ್ರವೀಣ ಮಧುಕರ ಐಪಿಎಸ್  ಪೊಲೀಸ್ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದ ಮೇರೆಗೆ ಡಿಸಿಐಬಿ ಘಟಕದ ಅಧಿಕಾರಿಗಳಾದ ಶ್ರೀ ಎಸ. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಮತ್ತು ಸಿಬ್ಬಂದಿಯವರಾದ ಶ್ರೀ ಬಸವರಾಜ ಎ.ಎಸ.ಐ, ಹೆಚ.ಸಿಗಳಾದ ವಿಜಯಕುಮಾರ, ಅಣ್ಣರಾವ, ಶಿವಯೋಗಿ ಪ್ರಕಾಶ, ಲಕ್ಕಪ್ಪಾ, ಬಸವರಾಜ, ಅಣ್ಣಪ್ಫಾ ಬೆಳ್ಳಿ, ಶಿವಾನಂದ ಮತ್ತು ಚೀಪ ಚಾಲಕ ವೀರಣ್ಣಾ ಹಾಗು ಫರತಬಾದ ಪೊಲೀಸ್ ಠಾಣೆಯ ಪಿ.ಎಸ.ಐ ರಾಠೋಡ, ರವರು ಮತ್ತು ದೇವಿಂದ್ರಪ್ಪಾ ಪಿಸಿ ರವರು ಹಾಗರಗುಂಡಗಿ ಗ್ರಾಮಕ್ಕೆ ಹೋಗಿ ಹಾಗರಗುಂಡಿ ಗ್ರಾಮದಲ್ಲಿ ಮೌನೇಶ ತಂದೆ ಚಂದ್ರಶೇಖರ ರವರು ಯಾವದೇ ದಾಖಲಾತಿ, ಮತ್ತು ಪರವಾನಿಗೆ ಇಲ್ಲದೆ ಆಕ್ರಮವಾಗಿ ಮಧ್ಯ ಶೇಖರಣೆ ಮಾಡಿ ಹಳ್ಳಿಗಳಲ್ಲಿ ಲೈಸನ್ಸ ಇಲ್ಲದೇ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಮೇರೆಗೆ ದಿನಾಂಕ:05-11-2012 ರಂದು ಮಧ್ಯಾಹ್ನ 2-30 ಗಂಟೆಗೆ ದಾಳಿ ಮಾಡಿ ಮಾರಾಟ ಮಾಡಲು ಸಂಗ್ರಹಿಸಿದ ವಿಸ್ಕಿ, ಬ್ರಾಂಡಿ, ಬೀರ  ತುಂಬಿದ 107 ಬಾಕ್ಸಗಳು ಅಂದಾಜು ಕಿಮ್ಮತ್ತು 2 ಲಕ್ಷ 50 ಸಾವಿರ ಮೌಲ್ಯದ್ದು ದಾಳಿ ಮಾಡಿ ಜಪ್ತಿ ಮಾಡಿಕೊಂಡು ಮೌನೇಶ ತಂದೆ ಚಂದ್ರಶೇಖರ ರವರಿಗೆ ದಸ್ತಗಿರ ಮಾಡಿಕೊಂಡು ಜಪ್ತಾದ ಮಧ್ಯ ಮತ್ತು ಮೌನೇಶ ಇತನನ್ನು ಮುಂದಿನ ಕ್ರಮಕ್ಕಾಗಿ ಫರತಬಾದ ಪೊಲೀಸ ಠಾಣೆಗೆ ಒಪ್ಪಿಸಿರುತ್ತಾರೆ.  ಈ ಬಗ್ಗೆ ಫರತಬಾದ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 134/2012 ಕಲಂ, 32 34 ಕೆ.ಇ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ಶ್ರೀ ಅಣ್ಣರಾವ ತಂದೆ ಅಮರಪ್ಪ ನೀಷ್ಠೆದೇಶಮುಖ ಸಾ||ಜೇರಟಗಿ ನಾನು ನಮ್ಮೂರ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಕಮೀಟಿಯ ಅಧ್ಯಕ್ಷನಾಗಿರುತ್ತೆನೆ ಬಸಣ್ಣ. ಸೈಬಣ್ಣ ಹೂಗಾರ ಇತನು ಗುಡಿಯ ಪೂಜಾರಿ ಇರುತ್ತಾನೆ.ದಿನಾಂಕ:04-11-2012 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ಬಸಣ್ಣ ಹೂಗಾರ ಇವರು ಕೀಲಿ ಹಾಕಿ ಅಂಗಳದಲ್ಲಿ ಮಲಗಿದ್ದು ನಾಲ್ಕು ಗಂಟೆಯ ಪೂಜೆ ಮಾಡುವ ಸಲುವಾಗಿ ಎದ್ದು ನೋಡಿದ್ದಾಗ ಗುಡಿಯ ಬಾಗಿಲು ಕೀಲಿ ಹಾಗೂ ಗಲ್ಲಾ ಪೆಟ್ಟೆಗೆ ಕೀಲಿ ಮುರಿದದ್ದನ್ನು ನೋಡಿ ಒಳಗೆ ಹೋಗಿ ನೋಡಿ ನಮ್ಮ ಮನೆಗೆ ಬಂದು ತಿಳಿಸಿದ್ದಾಗ ನಾನು ಮತ್ತು ದೇವಸ್ಥಾನದ ಕಮೀಟಿಯ ಸದಸ್ಯರಾದ ಸುರೇಶ ಬಿಜಾಪುರ ಇಬ್ಬರೂ ಒಳಗೆ ಹೋಗಿ ನೋಡಲಾಗಿ ಅಂದಾಜು ಮೂರು ಕೇಜಿ ತೂಕದ ಮೂರು ಬೆಳ್ಳಿಯ ಮೂರ್ತಿಗಳು ಅಂ.ಕೀ.180000/-, 1 ½ ತೂಕದ ಬೆಳ್ಳಿಯ ನಾಗರ ಹೆಡಿ ಅಂ.ಕಿ.90000/- ರೂ ,ಒಂದು ಕೆ.ಜಿ.ತೂಕದ ಎರಡು ಬೆಳ್ಳಿಯ ಪಾದರಕ್ಷೆಗಳು ಅ.ಕಿ.60000/- ರೂ,ಒಂದು 600 ಗ್ರಾಮದ ತೂಕದ ಬೆಳ್ಳಿಯ ಬೆತ್ತ ಅಂ.ಕಿ..36000/- ರೂ,ಗಲ್ಲಾ ಪೆಟ್ಟಿಗೆಯಲ್ಲಿದ ಅಂದಾಜು 1 ಲಕ್ಷ ರೂಪಾಯಿ ನಗದು ಹಣ ಹಿಗೇ ಎಲ್ಲಾ ಸೇರಿ ಒಟ್ಟು 4,66,000=00 ಕಿಮ್ಮಿತ್ತಿನ ಸಾಮಾನುಗಳು ಕಳ್ಳತನವಾಗಿರುತ್ತವೆ.  ಯಾರೋ ಕಳ್ಳರು ದೇವಸ್ಥಾನದ ಕೀಲಿ ಮುರಿದು ಕಳ್ಳತನ  ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.143/2012 ಕಲಂ. 457,380, ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME


ಅಪಘಾತ ಪ್ರಕರಣ:
ಮುಧೋಳ ಪೊಲೀಸ್ ಠಾಣೆ:ಶ್ರೀ ಕಾಶಮ್ಮಾ ಗಂಡ ಕಾಶಪ್ಪಾ ಕೊಟ್ಟಿ ಸಾ|| ರಿಬ್ಬನಪಲ್ಲಿ ಗ್ರಾಮ ತಾ|| ಸೇಡಂ ದಿನಾಂಕ:04-11-2012  ರಂದು 6-30 ಪಿ.ಎಮ್.ಕ್ಕೆ. ನರಸಮ್ಮಾ ಗಂಡ ಆಸನಪ್ಪಾ ಕೊಟ್ಟಿ ವ|| 50 ಸಾ|| ರಿಬ್ಬನಪಲ್ಲಿ ಗ್ರಾಮ ಇವಳು ಖಂಡೆರಾಯನಪಲ್ಲಿ ಕ್ರಾಸದಲ್ಲಿ ನಿಂತಾಗ ರಿಬ್ಬನಪಲ್ಲಿ ಕಡೆಯಿಂದ ಕ್ರೂಸರ ವಾಹನ ನಂ ಕೆಎ-32 ಎ-7305 ನೇದ್ದರ ಚಾಲಕ  ಶಿವಾನಂದ ಇತನು ತನ್ನ  ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ನರಸಮ್ಮಾ ಇವಳಿಗೆ ಡಿಕ್ಕಿಹೊಡೆದು ಅಪಘಾತ ಪಡಿಸಿದ್ದು ನರಸಮ್ಮಳಿಗೆ ಬಾರೀ  ಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾಳೆ.ಚಾಲಕನು ವಾಹನವನ್ನು ತಗೆದುಕೊಂಡು ಹೋರಟು ಹೋಗಿರುತಾನೆ. ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮೃತಳ ಮಗಳಾದ ಕಾಶಮ್ಮಾ ಗಂಡ ಕಾಶಪ್ಪಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 142/2012 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.