POLICE BHAVAN KALABURAGI

POLICE BHAVAN KALABURAGI

18 September 2012

GULBARGA DISTRICT REPORTED CRIMES


ಮಟಕಾ ಜೂಜಾಟ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:17-09-2012 ರಂದು ರಾತ್ರಿ 7-45 ಗಂಟೆಗೆ ಶ್ರೀ ಎಸ್.ಎಸ್. ಹುಲ್ಲೂರ್ ಪಿ.ಐ ಡಿಸಿಐಬಿ ಘಟಕ ಗುಲಬರ್ಗಾರವರು ತಮ್ಮ ಸಿಬ್ಬಂದಿಯವರು ಮದಿನಾ ಕಾಲೋನಿಯಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಪಡೆದುಕೊಂಡು ದಾಳಿ ಮಾಡಿ, ಶಫಿಖಾನ್ ಈತನಿಗೆ ವಶಕ್ಕೆ ತೆಗೆದುಕೊಂಡು ಅವನ ಹತ್ತಿರ ಮಟಕಾ ನಂಬರ ಬರೆದ ಚೀಟಿ, ನಗದು ಹಣ 1750/-ರೂಪಾಯಿಗಳು, ಒಂದು ಬಾಲ್ ಪೆನ್ ಮತ್ತು ಒಂದು ಎಮ್.ಟಿ.ಎಸ್ ಮೊಬೈಲ್ ಪಂಚರ ಸಮಕ್ಷಮ ಜಪ್ತಿ ಮಾಡಿದ್ದರ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 68/2012 ಕಲಂ 420 ಐಪಿಸಿ ಸಂಗಡ 78 (3) ಕರ್ನಾಟಕ ಪೊಲೀಸ್ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ ಗುಲಬರ್ಗಾ: ಶ್ರೀ ಮೋಹನ ತಂದೆ ಸಚಿನ ನಾರಾಯಾಣರಾವ  ಕರ್ರಿ ಉ||ಸಾಯಿ ಶ್ರೀ ಕಂಪನಿಯಲ್ಲಿ ಸುಪರವೈಜರ  ಕೆಲಸ ಸಾ||ಜಗನಾಥಪೂರಂ ಕಾಕಿನಾಡ ತಾ||ಕಾಕಿನಾಡ ಜಿ: ಪೂರ್ವ ಗೋದಾವರ (East Godavari) ಆಂದ್ರ ಪ್ರದೇಶ ಹಾ||ವ|| ಸಾಯಿ ಶ್ರೀ ಕಂಪನಿ ಪಟ್ಟಣ ಸೀಮೆ ಸ್ಟೇಶನ ಗಾಣಗಾಪೂರ ರೋಡ ಗುಲಬರ್ಗಾ ರವರು ದಿನಾಂಕ:17/09/2012 ರಂದು ರಾತ್ರಿ 7-30 ಗಂಟೆ ಸುಮಾರಿಗೆ ನಮ್ಮ ಸಾಯಿ ಶ್ರೀ ಕಂಪನಿಯಲ್ಲಿ ಕೆಲಸ ಮಾಡುವ ರಾಜು ತಂದೆ ಕೃಷ್ಣಪ್ಪಾ ಸಾ: ಹೈದ್ರಬಾದ (ಎಪಿ) ಮತ್ತು  ಮಂಜುನಾಥ ತಂದೆ ನಾಗನಗೌಡ ಇವರಿಬ್ಬರು ಕೂಡಿಕೊಂಡು ಪಟ್ಟಣ ಗ್ರಾಮ ಕ್ರಾಸಿನ ದಾಬಾಕ್ಕೆ ಊಟ ಮಾಡಲು ಸ್ಟೇಶನ ಗಾಣಗಾಪೂರ ರೋಡ ಕ್ರಾಸದಿಂದ ಪಟ್ಟಣಕ್ಕೆ ಬರುವಾಗ ಟೋಲ ಗೇಟ ದಾಟಿ ಮುಂದೆ ಬರುತ್ತಿರುವಾಗ ಮಂಜುನಾಥ ಇತನು ನಡೆಸುತಿದ್ದ ಮೋಟಾರ ಸೈಕಲ ನಂ ಎಪಿ 5 ಎಇ 2140 ನೇದ್ದನ್ನು  ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಸ್ಪೀಡ ಕಂಟ್ರೋಲ್ ಮಾಡುವದಕ್ಕೆ ಆಗದೆ ಮುಂದೆ ಹೊಗುತಿದ್ದ  ಎತ್ತಿನ ಗಾಡಿಗೆ  ಡಿಕ್ಕಿ ಹೊಡೆದು ಕೆಳಗೆ ಬಿದಿದ್ದು  ಅವರಿಗೆ ಭಾರಿ ಗಾಯಗಳಾಗಿ ರಾಜು ಇತನು  ಸ್ಥಳದಲ್ಲಿಯೇ  ಮೃತಪಟ್ಟಿದ್ದು  ಮತ್ತು  ಮಂಜುನಾಥ ಇತನಿಗೆ ಉಪಚಾರ ಕುರಿತು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ತರುವಾಗ  ಮಧ್ಯದ ಮಾರ್ಗದಲ್ಲಿ ಮೃತಪಟ್ಟಿದ್ದು ಇರುತ್ತದೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:295/2012 ಕಲಂ 279 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

16 September 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀಮತಿ ಫೈಮೀದಾ ಗಂಡ ಇಸ್ಮಾಯಿಲ ಸಾ:ಖಾನ ಸಾಬ ಅಂಗಡಿ ಹತ್ತಿರ ಮಿಜಗುರಿ ಗುಲಬರ್ಗಾರವರು ನನ್ನ ಮಗನಾದ ಸೋಹೆಲ್ ಮತ್ತು ಸೊಸೆ ದಿನಾಂಕ:14-09-2012 ರಂದು 20-30 ಗಂಟೆಗೆ ಇಸ್ಮಾಯಿಲ ಇತನ ಅಟೋರೀಕ್ಷಾ ನಂ: ಕೆಎ 32- 9720 ನೇದ್ದರಲ್ಲಿ ಕುಳಿತು ಎಮ್.ಎಸ್.ಕೆ.ಮಿಲ್ ದಿಂದ ಕೇಂದ್ರ ಬಸ್ ನಿಲ್ದಾಣದ ಮೇನ ರಸ್ತೆಯ ಕಣ್ಣಿ ಮಾರ್ಕೆಟ ಹತ್ತಿರ ಅಟೋರೀಕ್ಷಾ ಚಾಲಕನು ತನ್ನ ಅಟೋವನ್ನು ಅತೀವೇಗವಾಗಿ ಚಲಾಯಿಸಿ ಕಟ್ ಹೊಡೆಯಲು ಹೋಗಿ ಅಟೋರಿಕ್ಷಾ ಪಲ್ಟಿ ಮಾಡಿದ್ದರಿಂದ ನನ್ನ ಮಗ ಸೊಹೆಲ ಈತನು ಗಾಯಹೊಂದಿರುತ್ತಾನೆ  ಅಂತಾ ಶ್ರೀಮತಿ ಪೈಮಿದಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:93/2012 ಕಲಂ, 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIME


ಕಂಕರ ಮಷಿನದ ಖಣಿಯಲ್ಲಿ ಈಜಾಡುತ್ತಿರುವಾಗ ಮೃತ ಪಟ್ಟ ಬಗ್ಗೆ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ: ಮಾನ್ಯ 3 ನೇ ಅಪಾರ ಜೆ.ಎಮ್,ಎಪ್.ಸಿ ನ್ಯಾಯಾಲಯದ ಆದೇಶದ ಮೇರೆಗೆ ಶ್ರೀ ಕಾಶೀನಾಥ ತಂದೆ ಲಕ್ಷ್ಮಣ ರಾಠೋಡ ಇವರ ಮಗಳಾದ ಸುನೀತಾ, ಸೀತಾ ತಂದೆ ಹರೀಸಿಂಗ  ಮತ್ತು ಶ್ಯಾಮಬಾಯಿ ತಂದೆ ದುರ್ಗಪ್ಪಾ ಇವರು ದಿನಾಂಕ:11-09-2011 ರಂದು ಶಹಾಬಾದ ರೋಡದಲ್ಲಿರುವ ಲಾಹೋಟಿ ಕಂಕರ ಮಷಿನದ ಖಣಿಯಲ್ಲಿ  ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಸಂತೋಷ ತಂದೆ ಸುರೇಶ ಲಾಹೋಟಿ, ಸುರೇಶ ತಂದೆ ರಾಮವಿಲಾಸ ಲಾಹೋಟಿ ಸಾ:ಲಾಹೋಟಿ ಕಂಕರ ಮಿಷನ ಗುಲಬರ್ಗಾ ರವರು ಮೃತಪಟ್ಟವರಿಗೆ ಯಾವದೇ ಪರಿಹಾರ ಧನ ಕೊಡದೆ ಮೃತಪಟ್ಟ ವಾರಸುದಾರರಿಂದ ಬಿಳಿ ಹಾಳಿ ಮೇಲೆ ಸಹಿ ತಗೆದುಕೊಂಡಿರುತ್ತಾರೆ. ಸದರಿ ಖಣಿಯಲ್ಲಿ ಲೇಬರ ಕೆಲಸ ಮಾಡುತ್ತಿರುವವರಿಗೆ ಯಾವದೇ ಸುರಕ್ಷತೆ ಒದಗಿಸದೆ ಇರುವದರಿಂದ ನಮ್ಮ  ಮಗಳು ಮತ್ತು ಸೀತಾ ತಂದೆ ಹರೀಸಿಂಗ  ಮತ್ತು ಶ್ಯಾಮಬಾಯಿ ತಂದೆ ದುರ್ಗಪ್ಪಾ ಇವರು ಮೃತಪಟ್ಟಿರುತ್ತಾರೆ.  ಸದರಿ ಲಾಹೋಟಿ ಕಂಕರ ಮಿಷನ ಮಾಲಿಕರ ಮೇಲೆ ಕ್ರಮ ಜರುಗಿಸಬೇಕು ಅಂತಾ ಶ್ರೀ ಕಾಶೀನಾಥ ತಂದೆ ಲಕ್ಷ್ಮಣ ರಾಠೋಡ ತಾ||ರೇವೂರ ತಾಂಡಾ ರವರು ದೂರು ಸಲ್ಲಿಸಿದ  ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ:205/2012 ಕಲಂ 304(ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.