POLICE BHAVAN KALABURAGI

POLICE BHAVAN KALABURAGI

22 June 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಬಸವರಾಜ ತಂದೆ ಲಕ್ಷ್ಮಣ ತಳವಾರ ಸಾ: ಶಿವಾಜಿ ನಗರ ಗುಲಬರ್ಗಾ ರವರು  ನಾನು ಮತ್ತು ಸುಭದ್ರಭಾಯಿ ರಾಧಿಕಾ ಮೂರು ಜನರು ಕೂಡಕೊಂಡು  ದಿನಾಂಕ: 21-06-2012 ರಂದು 6-30 ಪಿ.ಎಮಕ್ಕೆ ಕೆ.ಎಮ್.ಎಪ್. ಡೈರಿಯ ಮುಂದೆ ರೋಡಿನ ಮೇಲೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಟೋರಿಕ್ಷಾ ನಂ. ಕೆಎ 32 ಬಿ- 4765 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಗಂಜ ಬಸ್ ಸ್ಟಾಂಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಮತ್ತು ಸುಭದ್ರಬಾಯಿ, ರಾಧಿಕಾ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 35/2012 ಕಲಂ 279, 337,338 ಐ.ಪಿ.ಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸೈಯ್ಯದ ಅಪ್ಸರ ತಂದೆ ಸೈಯ್ಯದ ಫಜಲ ಸಾ: ಹುಸೆನಿ ಗಾರ್ಡನ ಹತ್ತಿರ ಎಮ್‌‌ಎಸ್‌ಕೆ ಮಿಲ ಜಿಲಾನಾಬಾದ ಗುಲಬರ್ಗಾ ರವರು ನಾನು ಮತ್ತು ಮಹಮದ ಅನ್ವರ ಕೂಡಿಕೊಂಡು ದಿನಾಂಕ:-21/06/21012 ರಂದು ಸಾಯಾಂಕಾಲ 3:30 ಗಂಟೆಯ ಸುಮಾರಿಗೆ ಮೋಟಾರ ಸೈಕಲ ನಂ ಕೆ.ಎ 01 ಇ-ಎಲ್-3226 ನೇದ್ದರ ಮೇಲೆ ಆಳಂದ ಚೆಕ್ಕ ಪೊಸ್ಟ ಹತ್ತಿರ ಈರಫಾರ ಇತನಿಗೆ ಬೇಟ್ಟಿ ಆಗುವ ಕುರಿತು ಹೋಗಿ ಮರಳಿ ಮೋಟಾರ ಸೈಕಲ ಮೇಲೆ ಬರುವಾಗ ಮಿಜಬಾನಗರ ಕ್ರಾಸ ಹತ್ತಿರ ಹಿಂದಿನಿಂದ ಲಾರಿ ನಂ ಕೆ.ಎ 32 ಬಿ-1154 ನೇದ್ದರ ಚಾಲಕ ಶಿವಕುಮಾರ ಖಾಜಾ ಕೊಟನೋರ ಇತನು ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಯಾವುದೇ ಹಾರ್ನ ವಗೈರೇ ಹಾಕದೇ ಒಮ್ಮಲೇ ತಂದು ಹಿಂದಿನಿಂದ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಲಾರಿ ಮುಂದಿನ ಎಡ ಬಾಗದ ಟೈರ  ಮಹಮ್ಮದ ಅನ್ವರ ಇತನ ತಲೆಯ ಮೇಲೆ ಹೋಗಿ ತಲೆ ಮುಖ ಪೂರ್ತಿ ಜಜ್ಜಿ ಮೆದಳು ಹೊರ ಬಂದು ಸ್ದಳದಲ್ಲಿಯೇ ಮೃತ ಪಟ್ಟಿದ್ದು ನನಗೆ ಸಾದಾ ಗಾಯಗಳು ಆಗಿರುತ್ತವೆ, ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 213/2012 ಕಲಂ 279 337 304(ಎ) ಐಪಿಸಿ ಸಂಗಡ 187 ಐಎಮ್‌ವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

21 June 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಮಲ್ಲಿಕಾರ್ಜುನ ತಂ ಶಿವಶರಣಪ್ಪ ಕಲಬುರ್ಗಿ ಸಾ: ಕಾವೇರಿ ನಗರ ಗುಲಬರ್ಗಾರವರು ಠಾಣಾ ವ್ಯಾಫ್ತಿಯ ಕಲ್ಲಹಂಗರಗಾ ಗ್ರಾಮದ ಸರ್ವೆ ನಂ. 2 ರಲ್ಲಿ ನಿರ್ಮಿಸಿರುವ ಓಡಾಪೊನ್ ಟವರ್‌ಕ್ಕೆ ಅಳವಡಿಸಿದ ಆರ್‌ಎಫ್‌ ಕೇಬಲ್‌ ಸುಮಾರು ಅಂದಾಜು 200 ಮೀಟರ್‌  ಉದ್ದ  ಅಕಿ. 23500/-ರೂಗಳು ಕಿಮ್ಮತ್ತಿನದ್ದನ್ನು ಯಾರೋ ಕಳ್ಳರು  ದಿ:09/06/2012 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ:10/6/2012 ರಂದು ಮಧ್ಯರಾತ್ರಿ 1-00 ಗಂಟೆಯವರೆಗೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 211/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಸಿದ್ದಪ್ಪಾ ತಂದೆ ರಾಯಪ್ಪ ದೇಶಪಾಂಡೆ  ಸಾ: ಪೊಲಕಪಳ್ಳಿ ತಾ; ಚಿಂಚೋಳಿರವರು ನಾನು ದಿನಾಂಕ:20-06-2012 ರಂದು ಬೆಳಿಗ್ಗೆ ಹೆಂಡತಿಯಾದ ವಿದ್ಯಾವತಿ ಮತ್ತು ಅಳಿಯ ಹಾಗು ಮಗಳು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು ಮನೆಗೆ ಹೋಗಬೇಕು ಅಂತಾ ಗೋವಾ ಹೋಟೇಲ ರವರಿಗೆ ನಡೆದುಕೊಂಡು ಬಂದು ಗೋವಾ ಹೋಟೇಲ  ಹತ್ತಿರ ಅಟೋ ಮೂಲಕ ಹೋಗಬೇಕು ಗೋವಾ ಹೋಟೇಲ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಮೋಟಾರ ಸೈಕಲ ನಂ:ಕೆಎ 32 ಜೆ 9488 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ವಾಹನ  ಸಮೇತ ಹೊರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 65/2012 ಕಲಂ 279,338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ,|| ಏರಟೇಲ ನೇಟವರ್ಕದಲ್ಲಿ ಪೆಟ್ರೊಲಿಂಗ ಸುಪರವೈಸರ, ಸಾ|| ಕಾವೇರಿ ನಗರ ಗುಲಬರ್ಗಾರವರು ಮಾಡಿಯಾಳ ಗ್ರಾಮದ ಪ್ಲಾಟ ನಂ:16 & 17 ರಲ್ಲಿ ನಿಲ್ಲಿಸಿರುವ ಏರಟೇಲ ಟವರ್  ಶೇಲ್ಟರ ಕೋಣೆಯಲ್ಲಿ ಅಳವಡಿಸಿರುವ 18 ಬ್ಯಾಟರಿಗಳು ಅಂದಾಜ ಕಿಮ್ಮತ್ತು 22000/- ರೂಪಾಯಿ ನೇದ್ದವುಗಳು ದಿನಾಂಕ 28/04/2012 ರ 20-00 ಗಂಟೆಯಿಂದ 29/04/2012 ರ 07-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರಬಹುದು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 47/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶಿವಲಿಂಗಪ್ಪ ತಂದೆ ಮಲ್ಲಿಕಾರ್ಜುನ @ ಮಲ್ಲಣ್ಣ  ಮದರಿ ಸಾ: ಸಿಂದಗಿ (ಬಿ) ತಾ: ಜಿ: ಗುಲಬರ್ಗಾರವರು ನಾನು ಮತ್ತು ನನ್ನ ಗೆಳೆಯನಾದ ಅಣ್ಣಪ್ಪಾ ಇಬ್ಬರೂ ಕೂಡಿಕೊಂಡು ದಿನಾಂಕ: 19/6/2012 ರಂದು ಸಾಯಂಕಲ 5:30 ಪಿಎಮ ಸುಮಾರಿಗೆ ಮೋಟಾರ ಸೈಕಲ ನಂಬರ: ಕೆಎ 33 ಇ 5855 ನೇದ್ದರ ಮೇಲೆ ಕುಳಿತುಕೊಂಡು ಆಳಂದ ರೋಡಿನ ವಿಶ್ವರಾದ್ಯ ಗುಡಿಯ ಹತ್ತಿರ ಇರುವ ಪೆಟ್ರೋಲ ಪಂಪಗೆ ಪೆಟ್ರೋಲ ಹಾಕಿಸಿಕೊಳ್ಳಲು ಹೋಗುತ್ತಿರುವಾಗ  ಆಳಂದ ರಸ್ತೆ ಕಡೆಯಿಂದ ಒಂದು ಬುಲೆರೋ ಜೀಪ ನಂ ಎಮ್‌ಹೆಚ್‌ 43 ಎನ್‌ 1618 ನೇದ್ದನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈ ಕಲಗೆ ಡಿಕ್ಕಿ ಹೊಡೆದಿದ್ದರಿಂದ ಕೆಳಗೆ ಬಿದ್ದು ಮೈಕೈಗೆ ಭಾರಿಗಾಯ ಹಾಗೂ ಸಾದಾಗಾಯವಾಗಿ ರಕ್ತಗಾಯವಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 212/2012 ಕಲಂ 279, 338 ಐಪಿಸಿ ಸಂಗಡ 187 ಐ,ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

20 June 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ ರಹೀಸಾ ಫಾತಿಮಾ ಗಂಡ ಶೌಖತ ಪಟೇಲ ಸಾ|| ವಿದ್ಯಾನಗರ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ಸಲ್ಲಿಸಿದ್ದು ಸಾರಾಂಶ ಏನೆಂದರೆ ಬಂಗಾರದ ಹಣ ಮತ್ತು ವಿದ್ಯಾಬ್ಯಾಸಕ್ಕಾಗಿ ಖಾನಾಪೂರದ ನನ್ನ ಸಂಬಂಧಿಕರಾದ ಮುನ್ನಿ ಬೇಗಂ ಇವರ ಹತ್ತಿರ 80,000/-ರೂ ಮತ್ತು ದಿನ ಬಳಕೆಯ ಬಂಗಾರದ ಆಭರಣಗಳು ಇದ್ದು ನನಗೆ ನನ್ನ ಸಂಬಂಧಿಕರ ಹತ್ತಿರ ಮನೆ ಬಳಕೆಯ ಆಭರಣಗಳು ಇದ್ದು ನನಗೆ ನನ್ನ ಸಂಬಂಧಿಕರ ಹತ್ತಿರ ಹೈದ್ರಾಬಾದಕ್ಕೆ ಹೋಗುವದಿದ್ದು ನಾನು ಹಣ ಮತ್ತು ಬಂಗಾರ ನನ್ನ ಮನೆಯ ಅಲಮಾರದ ಲಾಕರದಲ್ಲಿ ಇಟ್ಟಿದ್ದು ಮೈಮೇಲೆ ಹಾಕಿಕೊಂಡು ಹೋಗದೇ ರೇಲ್ವೆದಲ್ಲಿ ಯಾರಾದರೂ ಕಳುವ ಮಾಡಬಹುದೆಂಬ ಹೆದರಿಕೆಯಿಂದ ಮನೆಯಲ್ಲಿಯೆ ಸುರಕ್ಷಿತವಾಗಿ ಇರುತ್ತವೆ ಅಂತಾ ಲಾಕರದಲ್ಲಿಟ್ಟು, ದಿನಾಂಕ 16/06/2012 ರಂದು ನನ್ನ ಕುಟುಂಬದವರೊಂದಿಗೆ ಮನೆಗೆ ಬೀಗ ಹಾಕಿ ನಾವೇಲ್ಲರೂ ಹೈದ್ರಾಬಾದಕ್ಕೆ ಹೋಗಿರುತ್ತೇವೆ.ದಿನಾಂಕ:19/06/2012 ರಂದು ಹೈದ್ರಾಬಾದದಿಂದ ಮರಳಿ ಗುಲಬರ್ಗಾದ ನನ್ನ ಮನೆಗೆ ರಾತ್ರಿ ಬಂದು ನೋಡಲಾಗಿ ಮನೆಯ ಕಂಪೌಂಡ ಗೇಟಿಗೆ ಹಾಕಿದ ಬೀಗ ಹಾಗೇಯೆ ಇದ್ದು, ಯಾರೋ ಕಳ್ಳರು ಕಂಪೌಂಡ ಹಾರಿ ಮನೆ ಒಳಗಿನ ಮೂರನೆಯ ರೂಮಿನ ಬಾಗಿಲದ ಕೀಲಿ ಮುರಿದು ಅಲಮಾರಿಯಲ್ಲಿಟ್ಟ ಬಂಗಾರದ ಮಂಗಳಸೂತ್ರ ಮತ್ತು ಬಂಗಾರದ ಆಭರಣ ಒಟ್ಟು 16 ತೋಲಿ, ನಗದು ಹಣ 80,000/- ರೂ, ಹೀಗೆ ಒಟ್ಟು4, 79,500/- ಬೇಲೆ ಬಾಳುವವು ಯಾರೋ ಕಳ್ಳರು ಮನೆಯಲ್ಲಿ ಯಾರು ಇಲ್ಲದ್ದ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀಮತಿ ರಹೀಸಾ ಫಾತಿಮಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:53/2012 ಕಲಂ. 454,457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ: ಶ್ರೀ, ಅಬ್ದುಲ ಸಲಾಂ ತಂದೆ ಉಸ್ಮಾನ ಅಲಿ ಸಾ: ಖಾರಿ ಬೌಲಿ ಮೊಮಿನಪೂರ ಗುಲಬರ್ಗಾ ರವರು ನಾನು ದಿನಾಂಕ:12-06-2012 ರಂದು ನನ್ನ ಹೀರೊ ಹೊಂಡಾ ಫ್ಯಾಶನ ಪ್ರೋ ಮೊಟಾರ ಸೈಕಲ ನಂ:ಕೆಎ 32 ವಾಯ್-8083 ಅಃಕಿಃ35,000/-ರೂ. ನೇದ್ದರ  ಮೇಲೆ ಶಹಾಬಾದ, ಭಂಕೂರ ಗ್ರಾಮಕ್ಕೆ ಹೋಗಿ ಅಲ್ಲಿಂದ ನಂದೂರ ಮೂಲಕ ಗುಲಬರ್ಗಾಕ್ಕೆ ಹೋರಟಾಗ ನಂದೂರ (ಕೆ) ಗ್ರಾಮ  ದಾಟಿ ಐ.ಓ.ಸಿ ಸಮೀಪ ರಸ್ತೆ ಕಾಮಗಾರಿ ನಡೆದಿದ್ದರಿಂದ ನಿಧಾನವಾಗಿ  ಫೂಲ್ ಸಮೀಪ ಬರುತ್ತಿರುವಾಗ ಅಂದಾಜು 7-30 ಗಂಟೆ ಸುಮಾರಿಗೆ ಒಬ್ಬನು ರಸ್ತೆಯ ಬದಿಯಲ್ಲಿ ನಿಂತು ನನ್ನ ಮೋಟಾರ ಸೈಕಲ್ ಗೆ ಕೈ ಮಾಡಿದ್ದರಿಂದ ನಾನು ಮೋಟಾರ ಸೈಕಲ್ ನಿಲ್ಲಿಸಿದೇನು. ಅವನು ನಾನು ಗುಲಬರ್ಗಾಕ್ಕೆ ಬರುತ್ತೇನೆ ಅಂತಾ ಕೇಳಿಕೊಂಡಿದ್ದರಿಂದ ನಾನು ಮೋಟಾರ ಸೈಕಲ ನಿಲ್ಲಿಸಿದೆನು, ನನಗೆ  ಮೂತ್ರ ವಿಸರ್ಜನೆ ಬಂದಿದ್ದರಿಂದ ನಾನು ಮೋಟಾರ ಸೈಕಲ ನಿಲ್ಲಿಸಿದ್ದೆನು. ನನಗೆ ಕೈ ಮಾಡಿ ನಿಲ್ಲಿಸಿದ ಅಪರಿಚಿತ ವ್ಯಕ್ತಿ ನನ್ನ ಮೋಟಾರ ಸೈಕಲ್ ಚಾವಿ ಅದಕ್ಕೆ ಇರುವದರಿಂದ  ಅವನು ನನ್ನ ಮೋಟಾರ ಸೈಕಲ್ ಚಾಲು ಮಾಡಿಕೊಂಡು ಗುಲಬರ್ಗಾ ಕಡೆಗೆ ಕತ್ತಲಲ್ಲಿ ಮೋಟಾರ ಸಮೇತ ಹೋರಟು ಹೋಗಿರುತ್ತಾನೆ . ಸದರಿ ಮೋಟಾರ ಸೈಕಲ ಚೆಸ್ಸಿ ನಂ:MBLHS 10EWBGF27757 & ಇಂಜನ ನಂ: HA10EDBF55424  ಕಪ್ಪು ಬಣ್ಣದ್ದು ಇದ್ದು, ಮೋಟಾರ ಸೈಕಲ ಪತ್ತೆ ಮಾಡಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 146/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.