POLICE BHAVAN KALABURAGI

POLICE BHAVAN KALABURAGI

13 June 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಗುರುನಾಥ ರೆಡ್ಡಿ ತಂದೆ ರಾಮಣಗೌಡ ಚಿಕ್ಕಮೇಟಿ ಸಾ:ಬಸವೇಶ್ವರ ನಗರ   ಶಹಾಪೂರ ಜಿ||ಯಾದಗೀರ ರವರು ನಾನು ದಿನಾಂಕ:11/06/2012 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ನನ್ನ ಗೆಳೆಯನಾದ ಪ್ರಶಾಂತ ಸಾಸನೂರ ಶಹಾಪೂರ ಇವರಿಗೆ ಆರಾಮವಿಲ್ಲದ ಕಾರಣ ಅವರ ಸ್ವಂತ ಕಾರ ನಂ: ಕೆಎ 33 ಎಮ್ 2352 ನೇದ್ದರಲ್ಲಿ ಕುಳಿತುಕೊಂಡು ಶಹಾಪೂರ ದಿಂದ ಸೋಲಾಪೂರಕ್ಕೆ ಬೀನಿತ್ ಆಸ್ಪತ್ರೆಗೆ ಉಪಚಾರ ಸಲುವಾಗಿ ಹೋರಟಾಗ  ಕಾರ ನನ್ನ ಗೆಳೆಯನಾದ ಪ್ರಶಾಂತ ಇತನು ಚಲಾಯಿಸುತ್ತಿದ್ದನು. ರಾತ್ರಿ ಸೋಲಾಪೂರದಲ್ಲಿ ಉಳಿದುಕೊಂಡು ದಿನಾಂಕ:12/06/2012 ರಂದು ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ಸೋಲಾಪೂರ ದಿಂದ ಶಹಾಪೂರಕ್ಕೆ ಹೊರಟಾಗ ಕಾರ ಚಾಲಕನಾದ ಪ್ರಶಾಂತ ಇತನು ಸರಸಂಬಾ ಗ್ರಾಮದ ಸಮೀಪ ಶಿವಶರಣಪ್ಪ ಖೇಡ ಇವರ ಹೊಲದ ಹತ್ತಿರ ಅತೀವೇಗದಿಂದ, ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಮ್ಮಲೇ ಬ್ರೇಕ್ ಹಾಕಿದಾಗ ಕಾರ ಪಲ್ಟಿಯಾಗಿರುತ್ತದೆ. ಸದರಿ ಕಾರ ಜಖಂಗೊಂಡಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 28/2012 ಕಲಂ 279 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ ಚಂದ್ರಕಾಂತ ತಂದೆ ಬಸಣ್ಣಾ ದೇಶೆಟ್ಟಿ ಸಾ: ಸರಸಂಬಾ ರವರು ನಾನು ದಿನಾಂಕ: 09/06/2012 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಹೊಲದಲ್ಲಿ ಗಳ್ಯಾ  ಹೊಡೆಯುತ್ತಿದ್ದಾಗ ಸಿದ್ದಣ್ಣಾ ತಂದೆ ಭಾರತ ಪೂಲಾರೆ, ಮಲ್ಲಮ್ಮಾ ಗಂಡ ತುಕಾರಾಮ ದೇಶೆಟ್ಟಿ, ಲಕ್ಷ್ಮೀಣ ತಂದೆ ಚನ್ನಬಸಪ್ಪಾ ಪಾಟೀಲ ಸಾ:ಎಲ್ಲರೂ ಸರಸಂಬಾ ಹಾಗೂ ಇನ್ನೂ 3 ಜನರು  ಹೆಸರು ವಿಳಾಸ ಗೊತ್ತಿಲ್ಲಾ. ಇವರಲ್ಲಿ ಇಬ್ಬರು ಪೊಲೀಸ್ ಸಮವಸ್ತ್ರ ಹಾಕಿಕೊಂಡಿದ್ದು ಇನ್ನೂಬ್ಬ ಸಾದಾ ಉಡುಪು ಧರಿಸಿದ್ದನು. ಇವರು ನನ್ನ ಹತ್ತಿರ ಬಂದು ನಿನ್ನ ಮೇಲೆ ಸಿಮೆಂಟ ಕೇಸ್ ಆಗಿದೆ, ಅಂತಾ ಅಂದವರೆ ನನ್ನನೂ ಕೈ ಕಾಲು ಕಟ್ಟಿ ಜೀಪ್ ನಲ್ಲಿ ಹಾಕಿಕೊಂಡು ಮಹಾರಾಷ್ಟ್ರ ರಾಜ್ಯದ ಬೋಳೆಗಾಂವ ಗ್ರಾಮಕ್ಕೆ ತಂದು, ನನ್ನನೂ ಕೈಯಿಂದ ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:29/2012 ಕಲಂ 416,363,342,323, 504,506,ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ :ದಿನಾಂಕ 02.06.12 ರಂದು ಶಿವಶರಣಪ್ಪ ತಂದೆ ಚಂದಪ್ಪ ಕೊಗನೂರ ಸಾ|| ಕರಜಗಿ ಇವರ ಹೊಲದಲ್ಲಿ ಕೂಡಿಸಿದ ಆರು (6)  ವಿಧ್ಯುತ್ತ್ 6 ಕಂಬಗಳಿಗೆ  ಹಾಕಿದ ಅಲ್ಯುಮಿನಿಯಂ ವಾಯರ ಅಂಧಾಜು ಕಿಮ್ಮತ್ತು 18,000/- ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಮಳಸಿದ್ದಪ್ಪ ತಂದೆ ಸಾಯಿಬಣ್ಣ ನೀಲೂರ ಉ|| ಶಾಖಾಧಿಕಾರಿ ಕೆಇಬಿ ಕರಜಗಿ ತಾ||ಅಫಜಲಪೂರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 103/12 ಕಲಂ 379 ಐ ಪಿ ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಶರಣು ತಂದೆ ಶಿವಕುಮಾರ ಹಿರೇಮಠ ವ|| 21 ಸಾ|| ಯಂಕವ್ವ ಮಾರ್ಕೆಟ್ ಬ್ರಹ್ಮಪೂರ ಗುಲಬರ್ಗಾರವರು     ದಿನಾಂಕ 12-06-2012 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ನಾನು  ಹಾಗು ನನ್ನ  ಗೆಳೆಯ ವಿಶಾಲ ತಂದೆ ಪ್ರಕಾಶ ಸಿಂದೆ ಇಬ್ಬರೂ ಕೂಡಿಕೊಂಡು ಯಂಕವ್ವ ಮಾರ್ಕೆಟನಲ್ಲಿರುವ ರಟಕಲ್ ಹೊಟೆಲ್ ಹತ್ತಿರದಿಂದ ಮಾತಾಡುತ್ತಾ ಹೋಗುತ್ತಿರುವಾಗ ನಮ್ಮ ಎದುರಿಗೆ ಬಂದ ಸಂತೋಷ ಬೀದರ, ಸಂಗು, ನಾಗು ಹಡಗಿಲ್  ಈ ಮೂರು ಜನರು  ಕೂಡಿಕೊಂಡು ಸಂತೋಷ ಬೀದರ ಈತನು ಕೈಯಲ್ಲಿ  ಹಾಕಿ ಸ್ಟಿಕ್ ಹಿಡಿದುಕೊಂಡು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಅವಾಚ್ಯವಾಗಿ ಬೈದು ಈ ಏರಿಯಾದಲ್ಲಿ ಬಹಳ ದಾದಾಗಿರಿ ಆಗಿದೆ ಅಂತ ಅಂದವನೆ ಅವನ ಕೈಯಲ್ಲಿದ್ದ ಹಾಕಿ ಸ್ಟಿಕ್ ದಿಂದ ಹೊಡೆದನು, ಆ ಏಟು ನನ್ನ ಎಡಗಣ್ಣಿನ ಮೇಲೆ ಬಿದ್ದು ರಕ್ತಗಾಯವಾಗಿದೆ. ಅದೇ ಹಾಕಿ ಸ್ಟಿಕ್ ದಿಂದ ಎಡಗಾಲಿನ ಮೇಲೆ ಹೊಡೆದು ರಕ್ತಗಾಯಗೊಳಿಸಿದರು. ನನ್ನ ಜೊತೆಗಿದ್ದ ವಿಶಾಲ ಈತನಿಗೆ ಸಂಗು ಇವನು ಒಂದು ಜಾಲಿ ಬಡಿಗೆಯಿಂದ ಹೊಡೆದು ರಕ್ತಗಾಯಗೊಳಿಸಿದನು. ಹಾಗು ನಾಗು ಹಡಗಿಲ್ ಈತನು ಕೈಯಿಂದ ಕಪಾಳಕ್ಕೆ ಹೊಡೆದಿರುತ್ತಾನೆ. ವಿನಾಃಕಾರಣ ನನಗೆ ಹಾಗು ನನ್ನ ಗೆಳೆಯನಿಗೆ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ 41/12 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

12 June 2012

GULBARGA DIST REPORTED CRIMES


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ ಪ್ರಿಯಾಂಕ ಗಂಡ ಶ್ರೀಧರ ಮಾಡೋರಕರ ವ:19 ವರ್ಷ ಸಾ:ಸುಂದರ ನಗರ ಗುಲಬರ್ಗಾರವರು ನನ್ನ ತಂದೆ ತಾಯಿಗೆ 2 ಹೆಣ್ಣು 2 ಗಂಡು ಮಕ್ಕಳಿದ್ದುನಾನೇ ಕೊನೆಯವಳಿದ್ದುಪೊಲೀಸ್ ಕಾಲೋನಿ ಶಾಲೆಯಲ್ಲಿ ಓದುತ್ತಿರುವಾಗ 8 ನೇ ತರಗತಿಯಿಂದ 10 ನೇ ತರಗತಿಯವರೆಗೆ ಶ್ರೀದರನೊಂದಿಗೆ ಪ್ರೀತಿಸುತ್ತಿದ್ದುದಿನಾಂಕ: 11.11.2011 ರಂದು ನಾವಿಬ್ಬರೂ ರಾಮ ತೀರ್ಥ ಮಂದಿರದಲ್ಲಿ ಶ್ರೀಧರನ ಗೆಳೆಯರಾದ ಮೌನೇಶಮೋಹನಮತ್ತು ನನ್ನ ಗೆಳತಿ ಅರ್ಚನಾ ಇವರ ಸಮಕ್ಷಮದಲ್ಲಿ ಮದುವೆ ಮಾಡಿಕೊಂಡಿರುತ್ತೆವೆ. ಮದುವೆಯಾದ ಮೇಲೆ ನಾನು ಮತ್ತು ಶ್ರೀಧರ  ಯಾರಿಗೂ ನಮ್ಮ ಮನೆಯವರ ಕಡೆಗೆ ತಿಳಿಸದೇ ಶ್ರೀದರ ತಾಯಿಯಾದ ಸುನಿತಾ ಇವಳೊಂದಿಗೆ ಬೆಂಗಳೂರಿಗೆ ಹೋಗಿ ಚಾಮರಾಜಪೇಟೆಯಲ್ಲಿ ವಾಸವಾಗಿದೆವು,ಆ ಸಮಯದಲ್ಲಿ ನಾನು ನನ್ನ ತಾಯಿಯೊಂದಿಗೆ ಸಂಪರ್ಕದಲ್ಲಿರುವಾಗ ನನ್ನ ಗಂಡ ಅತ್ತೆ ನಿನ್ನ ತಾಯಿಯಿಂದ ಹಣ ತೆಗೆದುಕೊಂಡು ಬಾ ಅಂತಾ ದೈಹಿಕ ಮಾನಸಿಕ ಹಿಂಸೆಕೊಡಲು ಪ್ರಾರಂಬಿಸಿದನು. ದಿನಾಂಕ:27.05.2012 ರಂದು ನನ್ನ ಅತ್ತೆ ಹಾಗೂ ನನ್ನ ಗಂಡ ನಮ್ಮ ಸಂಭಂದಿಕರ ಮದುವೆ ಇದ್ದೆ ಅಂತಾ ಬೆಂಗಳೂರುನಿಂದ ಗುಲಬರ್ಗಾಕ್ಕೆ  ಕರೆದುಕೊಂಡು ಬಂದ್ದರು. ಇಲ್ಲಿ ಬೇರೆ ಮನೆ ಮಾಡುತ್ತೆವೆ. ನಿನ್ನ ತಾಯಿಯಿಂದ 30 ಸಾವಿರ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಿಂಸೆ ಕೊಟ್ಟಿರುತ್ತಾರೆ. ದಿನಾಂಕ: 11.06.12 ರಂದು ಸಂಜೆ 7.00 ಗಂಟೆ ಸುಮಾರಿಗೆ ನನ್ನ ಗಂಡ, ಮಾವನಾದ ರಾಜು, ಗಂಡನ ಚಿಕ್ಕಪ್ಪಾ  ಮೂರು ಜನರು ನನಗೆ ಜಬರ ದಸ್ತಿಯಿಂದ ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗಿ ಬಂಗಾರದ ತಾಳಿ ಚೈನು ಹಾಗೂ 30 ಸಾವಿರ ರೂ ತೆಗೆದುಕೊಂಡು ಬಾ ಅಂತಾ ದೂರದಲ್ಲಿ ನಿಂತು ಕಳುಹಿಸಿದರು. ನಮ್ಮ ತಂದೆ ತಾಯಿಯವರ ಹತ್ತಿರ ಹಣವಿರುವದಿಲ್ಲ ಅಂತಾ ತಿಳಿಸಿದಾಗ ಗಂಡನ ಮನೆಯವರು  ಕೈಯಿಂದ ಹೊಡೆದು, ಕಾಲಿನಿಂದ ಉದ್ದು, ನಾನು ಚಿರಾಡುತ್ತಿರುವಾಗ ನನ್ನ ಮಾವ ನನ್ನ ಬಾಯಿ ಒತ್ತಿ ಹಿಡಿದರು. ಸ್ವಲ್ಪ ಸಮಯ ನಂತರ ಕೈ ತೊಳೆದುಕೊಂಡು ಬಾ ಅಂತಾ ಹೊರಗೆ ಕಳುಹಿಸಿದರು. ನಾನು ನೀರು ತೆಗೆದುಕೊಂಡು ಕಾರಿಡರ ಗೋಡೆ ಹತ್ತಿರ ನಿಂತಿರುವಾಗ ನನ್ನ ಅತ್ತೆ , ಗಂಡ ನನ್ನನು ನೋಡಿ ನೀನು ಜೀವಂತ ವಿದ್ದರೆ ಪ್ರಯೋಜನ ವಿಲ್ಲಾ ನೀನು  ಹಣ ತರುವುದಿಲ್ಲಾ ನೀನು ಸತ್ತು ಹೋಗು ಅಂತಾ  ನನಗೆ 1 ನೇ ಅಂತಸ್ತಿನ ಮೇಲಿಂದ ನೂಕಿರುತ್ತಾರೆ.  ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ 46/12 ಕಲಂ 498(ಎ), 307 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ.,ಎಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಜೀತೇಂದ್ರ ತಂದೆ ರಾಮಶೆಟ್ಟಿ  ರಾಠೋಡ ಉ ;ಗ್ರಾಮ ಪಂಚಾಯತ ದಸ್ಯ,  ಸಾ ||ಚೌಕ ತಾಂಡಾ ಚಿಮ್ಮನಚೊಡ ತಾ||ಚಿಂಚೋಳಿ,  ಹಾ|||| ಮನೆ ನಂ 43/2  ನಂದನ ನಿವಾಸ,  ರಾಮ ತೀರ್ಥ ನಗರ  ಗುಲಬರ್ಗಾರವ ರು ನ್ನ ಟಾಟಾ ಇಂಡಿಕಾ ಕಾರ ನಂ: ಕೆಎ 33 ಎಮ್-4005 ನೇದ್ದು  ದಿನಾಂಕ  09-06-2012 ನೇದ್ದು ನಾನು ಬಾಡಿಗೆ ಮನೆಯ ಮುಂದೆ ನಿಲ್ಲಿಸಿ, ಊರಿಗೆ ಹೋಗಿರುತ್ತೆನೆ. ಮರಳಿ ದಿನಾಂಕ 10/06/12  ರಂದು ಮನೆಗೆ ಬಂದಾಗ, ನಾನು ಮನೆಯ ಮುಂದೆ ನಿಲ್ಲಿಸಿದ  ನನ್ನ ಕಾರ  ಇರಲಿಲ್ಲ , ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ಸಿಕ್ಕಿರುವದಿಲ್ಲ, ಯಾರೊ ಕಳ್ಳರು ಕಾರ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 199/12  ಕಲಂ 379 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ ಶ್ರೀ ಪಾಂಡು ತಂದೆ ಗಂಗಾರಾಮ ರಾಠೋಡ ಸಾ: ಮನೆ ನಂ 1-867/28ಸಿ ವೆಂಕಟೇಶ ನಗರ ಗುಲಬರ್ಗಾವರು ನಾನು ದಿನಾಂಕ 06-06-12 ರಂದು ಸಾಯಂಕಾಲ 4-30 ಗಂಟೆಗೆ ಮನೆಯ ಮುಂದೆ ಮೊ. ಸೈ ನಂ ಕೆ.ಎ 32 ಕ್ಯೂ 7587 ಹೀರೋ ಹೊಂಡಾ ಪ್ಲಸ್ ಬ್ಲಾಕ ಕಲರ ಇಂಜಿನ ನಂ 05ಎ15ಇ32704 ಚೆಸಿ ನಂ 05ಎ16ಎಫ್.32506 ಅ.ಕಿ 25000/- ರೂ  ನೇದ್ದು  ನಿಲ್ಲಿಸಿ ಮನೆಯ ಳಗಡೆ ಹೋಗಿದ್ದು, ಮನೆಯಿಂದ ಹೊರಗೆ ಬಂದು ನೋಡಲಾಗಿ ವಾಹನ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂ 83/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.                                                                     

GULBARGA DIST REPORTED CRIMES


ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಕು: ಸುನಂದ ತಂದೆ ರಾಮದಾಸ ರಾಠೋಡ ಸಾ: ಕೆ.ಹೆಚ್.ಬಿ ಕಾಲೋನಿ  ಸೋಲಾಪೂರ ರೋಡ ಬಿಜಾಪೂರರವರು ನಾನು ಮತ್ತು ನಮ್ಮ ದೊಡ್ಡಪ್ಪ ರೂಪಸಿಂಗ ರಾಠೋಡ, ಮತ್ತು ದೊಡ್ಡಮ ರುಕಾಮ್ಮಬಾಯಿ , ರೂಪಸಿಂಗ ಇವರ ಪಿ.ಎ ಶ್ರೀಶೈಲ , ಸಪಾರಿ ವಾಹನ ಚಾಲಕ ಕಮಲಪ್ಪ ಎಲ್ಲಾರೂ ಸಪಾರಿ ವಾಹನ ನಂಬರ ಕೆಎ. 28 ಎಮ್ 5605 ನೇದ್ದರಲ್ಲಿ ಕುಳಿತು ದಿನಾಂಕ: 11/06/2012 ರಂದು ಬೆಳ್ಳಗಿನ ಜಾವ 1-00 ಗಂಟೆಗೆ ಬಿಜಾಪೂರದಿಂದ ಹೈದ್ರಾಬಾದಕ್ಕೆ ಬರುತ್ತಿದ್ದಾಗ ರಾತ್ರಿ ಜೇವರ್ಗಿ ಸಮೀಪ ಸಪಾರಿ ವಾಹನ ಚಾಲಕ ಕಮಲಪ್ಪ ಇತನು ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ರೋಡಿನ ಸೈಡಿಗೆ ಯಾವುದೆ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ನಿಲ್ಲಿಸಿದ ಲಾರಿ ನಂ ಕೆಎ-36/5281 ನೇದ್ದಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ನನಗೆ  ಮತ್ತು ನಮ್ಮ ದೊಡ್ಡಪ್ಪ, , ದೊಡ್ಡಮ್ಮ , ವಾಹನ ಚಾಲಕ ಕಮಲ್ಲಪ್ಪ ಮೂವರಿಗೆ ಗಾಯಾ ಪೆಟ್ಟು ಆಗಿದ್ದು, ಪಿ.ಎ ಶ್ರೀಶೈಲ ಇತನಿಗೆ ಭಾರಿ ಗಾಯಾಗಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಲಾರಿ ಕ್ಲಿನರ ಹುಸೇನ ಭಾಷ ತಂದೆ ಮಹಿಬೂಬ ಇತನು ಕೂಡ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಫರತಬಾದ ಹತ್ತಿರ ಮೃತಪಟ್ಟಿರುತ್ತಾನೆ ಅವನ ಶವವು ಕೂಡ ಮರಳಿ ಸರಕಾರಿ ಆಸ್ಪತ್ರೆ ಜೇವರ್ಗಿಯಲ್ಲಿ ಇರುತ್ತದೆ. ಕಾರಣ ನಮ್ಮ ಸಪಾರಿ ವಾಹನ ಚಾಲಕ ಕಮಲ್ಲಪ್ಪ ಮತ್ತು ಲಾರಿ ಚಾಲಕ ಹುಸೇನ ಭಾಷ ಇವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 87/2012 ಕಲಂ 279, 337, 338, 283 , 304 (ಎ), ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.