POLICE BHAVAN KALABURAGI

POLICE BHAVAN KALABURAGI

07 June 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಬ್ರಹ್ಮಾನಂದ ತಂದೆ ಗುರುಶಾಂತಪ್ಪ ಧನ್ನಿಕರ ಸಾ: ಯಳವಂತಗಿ (ಕೆ) ಗ್ರಾಮ ತಾ||ಜಿ||ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯನಾದ ಬಾಬುರಾವ ಮತ್ತುಅಣವೀರಪ್ಪಾ ಮೂವರು ಕೂಡಿಕೊಂಡು ಪಟ್ಟಣ ಕ್ರಾಸ ಹತ್ತಿರ ದಿನಾಂಕ. 06-6-2012 ರಂದು 1 ಮಧ್ಯಾಹ್ನ 1-00 ಗಂಟೆಗೆ ಮಾವಿನ ಹಣ್ಣು ಖರೀದಿ ಮಾಡುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಕಾರ ಕೆಎ 32 ಬಿ-4464 ಚಾಲಕ ಅತೀವೇಗವಾಗಿ ನಡೆಸುತ್ತಾ ಬಂದು ಮಾವಿನ ಹಣ್ಣು ಖರೀದಿ ಮಾಡುತ್ತಿದ್ದ ನನಗೆ ಮತ್ತು ನನ್ನ ಗೆಳೆಯರಿಗೆ ಹಾಗೂ ಮಾವಿ ಬಂಡಿಗೆ ಮತ್ತು ಪಾನ ಡಬ್ಬಿಗೆ ಡಿಕ್ಕಿ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:187/12 ಕಲಂ 279,337,  ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀ ಕುಮಾರ ಸ್ವಾಮಿ ತಂದೆ ಮನ್ಮಥಯ್ಯಾ ಸ್ವಾಮಿ   ಉ:ಖಾಸಗಿ ಇಂಜನಿಯರ ಕೆಲಸ ಸಾ: ಕ್ರಿಷ್ಣಾ ನಗರ ಗುಲಬರ್ಗಾರವರು  ನಾನು ದಿನಾಂಕ 06-06-12 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಲಾಹೋಟಿ ಪೆಟ್ರೋಲ್  ಬಂಕದಿಂದ ಐವಾನ ಈ ಶಾಹಿ ರೋಡಿನಲ್ಲಿ ಬರುವ ಹುಡಗಿಯರ ಹಾಸ್ಟೇಲ ಹತ್ತಿರ ರೋಡಿನ ಮೇಲೆ ನನ್ನ ಮೋಟಾರ ಸೈಕಲಗೆ ಕಾರ ನಂ:ಕೆಎ-32ಎಮ್-9473 ನೇದ್ದರ ಚಾಲಕ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ  ಭಾರಿಗಾಯಗೊಳಿಸಿ ಕಾರ ಸಮೇತ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 64/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

06 June 2012

GULBARGA DIST REPORTED CRIMES


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ. ಅಭೀಷೇಕ ತಂದೆ ಅಪ್ಪಾರಾವ ಫರತಾಬಾದ ಸಾ: ಮನೆ ನಂ. 11-1776 ವಿದ್ಯಾನಗರ ಗುಲಬರ್ಗಾ ರವರು ನಾನು  2-3 ದಿವಸಗಳ ಹಿಂದೆ ಮಿಲಿಂದ ಶಾಲೆಯ ಆಟದ ಮೈದಾನದಲ್ಲಿ ಆಟ ಆಡುತ್ತಿರುವಾಗ ಮಹೇಶ ತಂದೆ ಕಾಶಿನಾಥ ಎನ್ನುವವನು ಬಂದು ನನ್ನೊಂದಿಗೆ ಜಗಳ ಮಾಡಿ ಹೋಗಿದ್ದ. ನಿನ್ನೆ ದಿನಾಂಕ:05/06/2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ನಮ್ಮ ಮನೆ ಹತ್ತಿರ ಮಹೇಶ ತಂದೆ ಕಾಶಿನಾಥ ಎನ್ನುವವನು ಬಂದು, ನನಗೆ ಹೊರೆಗೆ ಕರೆದು ಅವಾಚ್ಯವಾಗಿ ಜಾತಿ ಎತ್ತಿ ಬೈದು ತೆಕ್ಕೆ ಕುಸ್ತಿಗೆ ಬಿದ್ದು ಹೊಡೆ ಬಡೆ ಮಾಡಿರುತ್ತಾನೆ . ಮತ್ತೆ ರಾತ್ರಿ 10-00 ಗಂಟೆಗೆ ಪುನಃ ನಮ್ಮ ಮನೆಯ ಹತ್ತಿರ ಬಂದು ಅವಾಚ್ಯವಾಗಿ ಬೈದು ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ 323, 504, 506 ಐ.ಪಿ.ಸಿ ಮತ್ತು 3 (1) (10) ಎಸ್.ಸಿ/ಎಸ್.ಟಿ  ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ರಾಣಾಪ್ರತಾಪ ತಂದೆ ಟೀಕಾರಾಮ ತಿವಾರಿ, ಸಾ|| ಮನೆ ನಂ 9-137, ಕಟಗರಪೂರ, ಶಹಬಜಾರ ಗುಲಬರ್ಗಾರವರು ನನ್ನ ಖುಲ್ಲಾ  ಪ್ಲಾಟ ದೇವಿ ನಗರ ಬಡಾವಣೆಯಲ್ಲಿದ್ದು, ದಿನಾಂಕ:06-06-2012 ರಂದು ಮಧ್ಯಾಹ್ನ ನನ್ನ ಪ್ಲಾಟದಲ್ಲಿ ಕಂಪೌಂಡ ಕಟ್ಟುತ್ತಿರುವಾಗ, ಮಹಿಬೂಬ, ನಜೀರ, ರಹಿಮ ಸಂಗಡ ಇನ್ನೂ 8-10 ಜನರು ಸಾ|| ಎಲ್ಲರೂ ಖಾದ್ರಿ ಚೌಕ ಗುಲಬರ್ಗಾ ರವರು ಗುಂಪು ಕಟ್ಟಿಕೊಂಡು ನಮ್ಮ ಪ್ಲಾಟಿನ ಹತ್ತಿರ ಬಂದು  ಈ ಪ್ಲಾಟ ನಮಗೆ ಸಂಬಂಧಿಸಿದ್ದು, ನೀವು ಯ್ಯಾಕೆ  ಕಟ್ಟುತ್ತಿದ್ದಿರಿ? ಅಂತ ಅಂದವರೇ, ಅವರಲ್ಲಿದ್ದ ಹರಿತವಾದ ಆಯುಧಗಳಿಂದ (ಜಂಬೆ), (ತಲವಾರ) ಗಳಿಂದ ನನಗೂ ಹಾಗು ನನ್ನ ಮಗನಾದ ಪ್ರಮೋದ ಕುಮಾರ ತಿವಾರಿ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:40/12 ಕಲಂ 143, 147, 148, 504, 307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

05 June 2012

GULBARGA DIST REPORTED CRIMES


ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ: 4/06/2012 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಶಂಕರವಾಡಿ ಗ್ರಾಮದ ದಸ್ತಗಿರ ಇವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಆಡುತ್ತಿದ್ದಾರೆ, ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶರಣಪ್ಪಾ ಹಿಪ್ಪರಗಿ  ಪಿ.ಐ  ಶಹಾಬಾದ ರವರು ತಮ್ಮ ಸಿಬ್ಭಂದಿಯವರಾದ ಗುಂಡಪ್ಪಾ, ಪರಶುರಾಮ,ಬಸವರಾಜ,ಮತ್ತು ಜೀಪ ಚಾಲಕ ಹಣಮಂತರಾಯ ಎಹಚ.ಸಿ ರವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಸಂಜು ತಂದೆ ಶಿವಯೋಗಿ ಬಾಗೋಡಿ ಸಾ: ಶಂಕರವಾಡಿ. ರಾಜು ತಂದೆ ಶರಣಪ್ಪಾ ಪರೀಟ ಸಾ: ಶಂಕರವಾಡಿ,ಶಂಕರ ತಂದೆ ಸಿದ್ದಣ್ಣಾ ಉಡಗಿ ಸಾ: ಶಂಕರವಾಡಿ,ನಾಗರಾಜ ತಂದೆ ಬಸಣ್ಣಾ ಚಿತ್ತಾಫೂರ ಸಾ: ಶಂಕರವಾಡಿ, ರವರಿಂದ  ಒಟ್ಟು 530/-ರೂ ನಗದು ಹಣ  ಮತ್ತು ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 78/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸಂತೋಷ ತಂದೆ ಶಂಕರರಾವ ಮಾಲಿ ಪಾಟೀಲ್  ಸಾ: ಹೇರೂರ ತಾ:ಚಿತ್ತಾಪೂರ ಜಿ: ಗುಲಬರ್ಗಾರವರು ದಿನಾಂಕ: 04-06-2012 ರಂದು 1-00 ಗಂಟೆಗೆ ಹುಮನಾಬಾದ ರೋಡ ತಾವರಗೇರಾ ಕ್ರಾಸ ಹತ್ತಿರ  ಜೀಪ ನಂ.ಕೆ.ಎ.21 ಎಂ. 1028 ನೇದ್ದರ ಚಾಲಕ ತನ್ನ ಜೀಪನ್ನು ಅತೀವೇಗ ಮತ್ತು ನಿಸ್ಕಾಳಜಿತನ ದಿಂದ ನಡೆಯಿಸಿ ಎದುರಿನಿಂದ ಬರುತ್ತಿದ್ದ ಮಾರುತಿ ಸುಜುಕಿ ಎಸ್.ಎಕ್ಸ 4 ನಂ ಕೆ.ಎ.38 ಎಂ.7111 ನೇದ್ದಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಾರನಲ್ಲಿದ ಒಬ್ಬನಿಗೆ ಹಾಗೂ ಜೀಪಿನಲ್ಲಿದ್ದ 7-8 ಜನರಿಗೆ ಸಾದಾ ಹಾಗೂ ಭಾರಿಗಾಯಗಳಾಗಿರುತ್ತವೆ ಜೀಪ ಚಾಲಕ ತನ್ನ ಜೀಪನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 183/12 ಕಲಂ 279,337,338,ಐಪಿಸಿ ಸಂಗಡ 187 ಐಎಂವಿ ಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಅಪಘಾತ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ: ದಿ:04/06/2012 ರಂದು ಮಧ್ಯಾಹ್ನ 12-30 ಗಂಟೆಗೆ ದಮ್ಮೂರ ಕ್ರಾಸ ಹತ್ತಿರ ರಸ್ತೆಯ ಮೇಲೆ ಶರಣಪ್ಪ ತಂದೆ ಚಂದ್ರಪ್ಪ ಪೂಜಾರಿ ಇತನು ಆರಫಾದಿನ ಟಂ ಟಂ ನಂಬರ ಕೆಎ 32 ಎ 8970 ನೇದ್ದರಲ್ಲಿ ಕಳಿತುಕೊಂಡು ಹೋಗುತ್ತಿರುವಾಗ ದಮ್ಮೂರ ಕ್ರಾಸ ಹತ್ತಿರ ಟಂ ಟಂ ಚಾಲಕ ಹಣಮಂತ ಇತನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿದ್ದರಿಂದ ಟಂಟಂ ಪಲ್ಟಿಯಾಗಿ ಬಿದ್ದಿದ್ದರಿಂದ ಭಾರಿಗಾಯವಾಗಿರುತ್ತವೆ ಅಂತಾ ಶ್ರೀ ರಮೇಶ ತಂದೆ ಮಾಣಿಕಪ್ಪ ಪೂಜಾರಿ ಸಾ:ದಮ್ಮೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:50/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.