POLICE BHAVAN KALABURAGI

POLICE BHAVAN KALABURAGI

23 February 2012

GULBARGA DIST REPORTED CRIME

ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:
ಶ್ರೀ ನಿಂಗನಗೌಡ ತಂದೆ ಮಲ್ಲಣ್ಣಗೌಡ ಬಿರಾದಾರ ಸಾ:ಕೊಡಚಿ ತಾ: ಜೇವರ್ಗಿ ರವರು ನನ್ನ ಮಗನಾದ ಸಿದ್ದಣ್ಣ ಮತ್ತು ಅವನ ಗೆಳೆಯರಾದ ದೇವಪ್ಪ ಮತ್ತು ಭೀಮಣ್ಣ ಮೂವರು ಕೂಡಿಕೊಂಡು ನಿನ್ನೆ ದಿನಾಂಕ 22-02-2012 ರಂದು ಸಾಯಾಂಕಾಲ ಹೀರೋ ಹೊಂಡಾ ಪ್ಯಾಶನ್ ಮೋಟರ ಸೈಕಲ್ ನಂ ಕೆ.ಎ.31 ಕೆ. 8986 ನೇದ್ದರ ಮೇಲೆ ಕೊಡಚಿಯಿಂದ ಚಿಗರಳ್ಳಿಗೆ ಬರುತ್ತಿದ್ದಾಗ ರಾತ್ರಿ 8-00 ಗಂಟೆಗೆ ಸುಮಾರಿಗೆ ಮುಂದಬಾಳ (ಬಿ) ಗ್ರಾಮದ ಹತ್ತಿರ ಸಿದ್ದಣ್ಣ ಇತನು ಮೋಟರ ಸೈಕಲ್ ನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನ ಸೈಡಿಗೆ ಇದ್ದ ಕಲ್ಲಿಗೆ ಡಿಕ್ಕಿ ಪಡೆಯಿಸಿದ ಪ್ರಯುಕ್ತ ಸಿದ್ದಣ್ಣ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ದೇವಪ್ಪ ಮತ್ತು ಭೀಮಣ್ಣನಿಗೆ ಸಾದಾ ಮತ್ತು ಭಾರಿ ಪೆಟ್ಟು ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 25/2012 ಕಲಂ 279,337,338,304 (ಎ) ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಮಾನಭಂಗ ಮತ್ತು ಕೊಲೆಗೆ ಯತ್ನ:
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ಆನಂದ ತಂದೆ ಶಿವಲಿಂಗಪ್ಪಾ ಹುಂಡೆಕರ ಸಾ:ಶಂಕರವಾಡಿ ರವರು ನನ್ನ ತಂಗಿ ನಂದಿನಿಯು ಕಸ ಚಲ್ಲಲು ಹೋದಾಗ ಶಿವಮುರ್ತಿ ತಂದೆ ಮಹಾದೇವ ಕಮಲಾಪೂರ ಸಾ ಶಂಕರವಾಡಿ ಇವನು ನನ್ನ ತಂಗಿಗೆ ಕೈಹಿಡಿದು ತನ್ನ ಮನೆಯಲ್ಲಿ ಕರೆದುಕೊಂಡು ಹೋಗಿ ಮೈಮೇಲಿನ ಬಟ್ಟೆಗಳನ್ನು ಹರಿದು ಮಾನಭಂಗ ಮಾಡಲು ಯತ್ನಿಸಿದಾಗ ನನ್ನ ತಂಗಿ ಚೀರಾಡುವಾಗ ಇವಳನ್ನು ಮುಗಿಸಿಯೇ ಬಿಡಬೇಕು ಅಂತಾ ತೊಗರಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧವನ್ನು ಜಬರ ದಸ್ತಿಯಿಂದ ಕೂಡಿಸಿದ್ದಾನೆ, ಅಷ್ಟರಲ್ಲಿ ನಾನು ಮತ್ತು ಮಹೇಶ ಹೋಗಿ ನೋಡುವಷ್ಟರಲ್ಲಿ ಓಡಿ ಹೋಗಿರುತ್ತಾನೆ. ನಾವು ಉಪಚಾರ ಕುರಿತು ಮೇಡಿಕೇರ ಆಸ್ಪತ್ರೆ ಗುಲಬರ್ಗಾ ಕ್ಕೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಇನ್ನೂ ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಶಿವಮುರ್ತಿ ಇತನು ನನ್ನ ತಂಗಿಗೆ ಮಾನಭಂಗಮಾಡಿ ಕೊಲೆ ಮಾಡಲು ಪಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2012 ಕಲಂ 354, 307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮತಿ ನಾಗಮ್ಮಾ ಗಂಡ ಮಾಹಾಂತೇಶ ನಾಟೀಕರ ಸಾ: ಪಟ್ಟಣ ಗ್ರಾಮ ತಾ:ಜಿ: ಗುಲಬರ್ಗಾರವರು ನಾವು ದಿಃ 21-02-2012 ರಂದು ಅಮವಾಸ್ಯೆ ದಿನವಿದುದ್ದರಿಂದ ಆಫಜಲಪೂರ ತಾಲೂಕಿನ ಫತ್ತರಗಾ ಗ್ರಾಮದ ಭಾಗ್ಯವಂತಿ ದೇವಿಯ ದರ್ಶನಕ್ಕೆ ಹೋಗುವ ಕುರಿತು ನಾನು ಮತ್ತು ನನ್ನ ತಂಗಿ ರಾಚಮ್ಮಾ ಹಾಗು ಅವಳ ಮಗಳಾಧ ರಂಜಿತಾ ಕೂಡಿ ಟಂಟಂ ನಂ ಕೆಎ 32 ಬಿ-1602 ನೇದ್ದರಲ್ಲಿ ಹೋಗುವಾಗ ಸದರ ಟಂಟಂ ಚಾಲಕನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಪಟ್ಟಣ ಕ್ರಾಸ ಹತ್ತಿರ ಇರುವ ಪಾಟಿ ಹಳ್ಳದ ಹತ್ತಿರ ಒಮ್ಮಲೇ ಬ್ರೇಕ ಹಾಕಿದ್ದರಿಂದ ಟಂಟಂ ಎಡಬಾಗಕ್ಕೆ ಪಲ್ಟಿಯಾಗಿ ಭಾರಿ ರಕ್ತಗಾಯ ಮತ್ತು ಸಾದಾ ರಕ್ತಗಾಯ ಮತ್ತು ಗುಪ್ತಗಾಯಗಳು ಆಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 59/2012 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:
ದಿನಾಂಕ 22-02-2012 ರಂದು ಸಾಯಂಕಾಲ ಸುಮಾರಿಗೆ ಠಾಣಾ ವ್ಯಾಪ್ತಿಯ ಬ್ರಹ್ಮಪೂರ ಬಡಾವಣೆಯ ಶಹಾ ಹುಸೇನಿ ಚಿಲ್ಲಾ ಎದುರಿಗೆ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು, ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿದ್ದಪ್ಪ ಎ.ಎಸ್.ಐ, ಪಾಂಡುರಂಗ ಹೆಚ್.ಸಿ, ಮತ್ತು ಪಂಡಿತ, ಚನ್ನಮಲ್ಲಪ್ಪ, ನೀಲಪ್ಪ ಪಿಸಿರವರೊಂದಿಗೆ ಹೋಗಿ ಮಟಕಾ ಜೂಜಾಟ ನಡೆಸುತ್ತಿದ್ದ ದೇವಿಂದ್ರ ತಂದೆ ಸಿದ್ರಾಮಪ್ಪ ಕೋರೆ, ವಿಶ್ವನಾಥ ತಂದೆ ಪ್ರಭುಲಿಂಗ ಕೊರೆ ಇವರಿಗೆ ದಸ್ತಗಿರಿ ಮಾಡಿಕೊಂಡು ಅವರಿಂದ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 3461/-ರೂಪಾಯಿಗಳು, ಮಟಕಾ ನಂಬರ ಬರೆದ ಚೀಟಿಗಳು ಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 12/12 ಕಲಂ 78 (iii) ಕರ್ನಾಟಕ ಪೊಲೀಸ್ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಠಾಣೆ:
ಶ್ರೀ ತಮ್ಮಣ್ಣಾ ತಂದೆ ನಾಗಪ್ಪ ತಳಕೇರಿ ಸಾ: ಪಂಚಶೀಲ ನಗರ ನಿಂಬಾಳ ಇವರು ನಾವು ದಿನಾಂಕ: 21/02/2012 ರಾತ್ರಿ ವೇಳೆ 11-30 ರಿಂದ ಬೇಳಗಿನ 5 ಗಂಟೆಯವರೆಗಿನ ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ಮನೆಯಲ್ಲಿದ್ದ ನಗದು 30,000/-, ಬಂಗಾರ ಆಭರಣಗಳು ಮತ್ತು ರೇಷ್ಮೆ ಸೀರೆಗಳು ಇತರೆ ಬಟ್ಟೆಗಳು ಅಂದಾಜು ಹಿಗೆ ಒಟ್ಟು 43,500/ ರೂಪಾಯಿ ಕೀಮತ್ತಿನದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 5/2012 ಕಲಂ 457, 380 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 February 2012

GULBARGA DIST REPORTED CRIMES


ಕಮಲಾಪೂರ ಠಾಣೆ:
ಹೆಣ್ಣು ಮಗಳು ಕಾಣೆಯಾದ ಪ್ರಕರಣ: ಶ್ರೀ ಶಿವಾಜಿ ತಂದೆ ನಾರಯಣರಾವ ಪಾಂಡೆ ಸಾ|| ಶಿವ ನಗರ ಹುಮನಬಾದ ತಾ|| ಹುಮನಬಾದ ಜಿ|| ಬೀದರ ರವರು ನನ್ನ ಮಗಳಾದ ಶ್ರೀಮತಿ ನಾಗೇಶ್ವರಿ ಗಂಡ ಪರಶುರಾಮ ಖಂಡೇಕರ ವ|| 22 ವರ್ಷ, ಜಾ|| ಮರಾಠ, ಸಾ|| ನಿಪ್ಪಾಣಿ ತಾ|| ಚಿತ್ತಾಪೂರ ಜಿ|| ಗುಲಬರ್ಗಾ ಇವರು ದಿನಾಂಕ: 28-12-2012 ರಂದು ಬೆಳಿಗ್ಗೆ 9-00 ಗಂಟೆಗೆ ಕಮಲಾಪೂರ ಬಸ್ಸ ನಿಲ್ದಾಣದಿಂದ ಕಾಣೆಯಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/2012 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಾಣೆಯಾದ ಹೆಣ್ಣು ಮಗಳ ಚಹರೆ ಪಟ್ಟಿ ಎತ್ತರ 5 ಪೀಟ, ತಳ್ಳನೆಯ ಮೈಕಟ್ಟು, ಗೋದಿ ಬಣ್ಣ, ದುಂಡು ಮುಖ, ನೇರ ಮೂಗು, ಕಪ್ಪು ಕೂದಲು ಇರುತ್ತವೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು 084728-221306, ಸಿಪಿಐ ಗ್ರಾಮಿಣ ವೃತ್ತ ಕಛೇರಿ ದೂ. ನಂ: 08472-263630 ಅಥವಾ ಗುಲಬರ್ಗಾ ಕಂಟ್ರೋಲ್ ರೂಮ್ ದೂ. ಸಂಖ್ಯೆ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ದರೋಡೆ ಪ್ರಕರಣ:
ಆಳಂದ ಪೊಲೀಸ ಠಾಣೆ: ಗುಂಡಪ್ಪ ತಂದೆ ಅಂಬದಾಸ ಸಾಳುಂಕೆ ಸಾ: ನಿಂಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಅನಿತಾಬಾಯಿ ಇಬ್ಬರೂ ಕೂಡಿಕೊಂಡು ಮೋಟರ ಸೈಕಲ ಮೇಲೆ ನಂ ಕೆ.ಎ 32.ಎಕ್ಸ್ 2074 ನೇದ್ದರ ಮೇಲೆ ದಿನಾಂಕ 21/02/2012 ರಂದು ನಿರಗುಡಿ ಗ್ರಾಮದಿಂದ ನಿಂಬರ್ಗಾಕ್ಕೆ ಬರುತ್ತಿರುವಾಗ ರಾತ್ರಿ 8.00 ಗಂಟೆ ಸುಮಾರಿಗೆ ಕೋರಳಿ ರಸ್ತೆ ಸಂಗೊಳಗಿ ಕ್ರಾಸ ಹತ್ತಿರ ಮೋಟರ ಸೈಕಲ ಮೇಲೆ 3 ಜನರು ಬಂದು ನಮ್ಮ ಮೋಟರ ಸೈಕಲ ಎದುರುಗಡೆ ಅವರ ಮೋಟಾರ ಸೈಕಲ ನಿಲ್ಲಿಸಿ ಅವರಲ್ಲಿ ಒಬ್ಬನು ಮಚ್ಚು ನನ್ನ ಕುತ್ತಿಗಿಗೆ ಹಚ್ಚಿ ಏ ಬೋಸಡಿ ಮಗನೆ ನೀನ ಹತ್ತಿರ ಎಷ್ಟು ದುಡ್ಡು ಇವೆ ಮತ್ತು ಎಷ್ಟು ಬಂಗಾರ ಇವೆ ಕೊಡು ಅಂತ ಕೇಳುತ್ತಿದ್ದಾಗ ಇನ್ನೊಬ್ಬನು ತನ್ನ ಕೈಯಲ್ಲಿದ ರಾಡಿನಿಂದ ಎಡ ರಟ್ಟೆ ಮೇಲೆ ಜೋರಾಗಿ ಹೊಡೆದು ಗಾಯ ಮಾಡಿದನು. ನನ್ನ ಹೆಂಡತಿ ಹತ್ತಿರ ಏನು ಬಂಗಾರದ ಓಡವೆ ಸಾಮನುಗಳು ಇದೆ ಕೊಡು ಇಲ್ಲದ್ದಿದರೆ ನಿನ್ನ ಗಂಡನಿಗೆ ಬಿಡುವುದ್ದಿಲ್ಲ ಅಂತಾ ಜಬರ ದಸ್ತಿಯಿಂದ ನನ್ನ ಹೆಂಡತ್ತಿ ಹತ್ತಿರ ಇದ್ದ ಕಿವಿ ಹೂ 2 ಗ್ರಾಂ ಅಂದಾಜ ಕಿಮ್ಮತ 4000/- ಸಾವಿರ ರೂಪಾಯಿ, ಮಂಗಳಸೂತ್ರ ಹಾಗೂ 4 ಗುಂಡು ಅಂದಾಜ ಕಿಮ್ಮತ 8000/- ರೂಪಾಯಿ ಹಾಗೂ ನನ್ನ ಜೇಬಿನಲ್ಲಿದ ಎರಡು ಮೊಬೈಲ್ ಗಳು ನೊಕಿಯಾ ಕಂಪನಿದ್ದು ನಂ 9980010153 ಹಾಗೂ ಕಾರ್ಬನ್ ಕಂಪನಿದ್ದು ನಂ 8971637783 ಅಂದಾಜು ಕಿಮ್ಮತ್ 6000/- ರೂಪಾಯಿ ಹೇಗೆ ಒಟ್ಟು 18,000-00 ರುಪಾಯಿಗಳು ನಗುದು ಹಣ 4500 ರುಪಾಯಿಗಳು ಹೇಗೆ ಒಟ್ಟು 22,500-00 ಜಬರ ದಸ್ತಿನಿಂದ ಬೆಲೆಬಾಳುವವದನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು ಸದರಿಯವರು ಅವಾಚ್ಯ ಶಬ್ದಗಳಿಂದ ಕನ್ನಡ ಹಿಂದಿ ಮತ್ತು ಮರಾಠಿ ಬಾಷೆಯಲ್ಲಿ ಬೈಯುತ್ತಿದ್ದರು ಮತ್ತು ಅವರಲ್ಲಿ ಒಬ್ಬನ ಎತ್ತರ 5 ಪೀಟ್ ಇನ್ನೂ ಇಬ್ಬರ 5 ½ ಪೀಟ್ ಇರುತ್ತಾರೆ ಒಬ್ಬನು ಗೋದಿ ಬಣ್ಣವುಳ್ಳವನಾಗಿರುತ್ತಾನೆ ಇಬ್ಬರೂ ಕಪ್ಪು ಬಣ್ಣ ಹೊಂದಿರುತ್ತಾರೆ. ಇವರು ಸಾಮಾನ್ಯವಾಗಿ 20 ರಿಂದ 25 ವರ್ಷದವರುಳ್ಳವರಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 39/2012 ಕಲಂ 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮುಂಜಾಗ್ರತೆ ಕ್ರಮ:


ಬ್ರಹ್ಮಪೂರ ಠಾಣೆ: ದಿನಾಂಕ: 22/02/12 ರಂದು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ಜಿ.ಜಿ.ಹೆಚ್ ಸರ್ಕಲ ಹತ್ತಿರ 10-30 ಗಂಟೆಗೆ ಮೂರು ಜನ ಹುಡುಗರು ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಅಂಬರೀಶ ತಂದೆ ದೇವಿಂದ್ರ ಚವ್ಹಾಣ, ಸಾ|| ಸೇವಲಾಲ ದೇವಾಲಯದ ಹಿಂದುಗಡೆ ಭರತನಗರ ತಾಂಡಾ ಬಾಪೂನಗರ ಗುಲಬರ್ಗಾ.ರಾಹುಲ ತಂದೆ ಲಕ್ಷ್ಮಣ ಪವಾರ, ಸಾ|| ವಳಕೇರಿ ಮನೆಯ ಹತ್ತಿರ ಭರತನಗರ ತಾಂಡಾ ಬಾಪೂನಗರ ಗುಲಬರ್ಗಾ. ಶಿವಕುಮಾರ ತಂದೆ ಜಯರಾಮ ರಾಠೋಡ, ಸಾ|| ಭರತನಗರ ತಾಂಡಾ ಬಾಪೂನಗರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡದೆ ಇರುವದರಿಂದ ಸದರಿಯವರನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಸೂಕ್ತ ಕ್ರಮಕ್ಕಾಗಿ ಪಿಸಿಗಳಾದ ಶ್ರೀ.ರಾಜಕುಮಾರ, ಮಹಾಂತೇಶ, ಸುಧಾಕರ ರವರು ವರದಿ ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 28/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.