POLICE BHAVAN KALABURAGI

POLICE BHAVAN KALABURAGI

13 February 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಸೈಯದ ಅಹ್ಮದ ತಂದೆ ಸೈಯದ ಇಬ್ರಾಹಿಂ ತಾಬರ ಸಾ 6 ನೇ ಕ್ರಾಸ ತಾರಫೈಲ್ ಗುಲಬರ್ಗಾರವರು ನಾನು ದಿನಾಂಕ 12/02/12 ರಂದು 11-45 ಎ.ಎಂ ಸುಮಾರಿಗೆ ಸ್ಟೇಷನ ಬಜಾರ ಏರಿಯಾದಿಂದ ಮನೆಗೆ ಹೋಗುವಾಗ 6 ನೇ ಕ್ರಾಸ ತಾಫೈಲ್ ದಲ್ಲಿನ ರಸ್ತೆಯ ಮೇಲೆ ಯುಸಫ,ಆಸಿಫ, ಮುಸ್ತಫಾ ಸಾ ಎಲ್ಲರೂ ತಾರಫೈಲ್ ರವರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಮತ್ತು ಕಲ್ಲಿನಿಂದ ಹೊಡೆದು ಬಾಯಿಂದ ಕಿವಿ ಕಚ್ಚಿ ಕಾಲಿನಿಂದ ಒದ್ದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 17/12 ಕಲಂ 341, 323, 324, 504, 506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ :
ಶ್ರೀ ರಾಜು ತಂದೆ ತಿಪ್ಪಣ್ಣ ಜಾಧವ ಸಾ: ಕುರುಕುಂಟಾ ತಾ: ಸೇಡಂ ಜಿ:ಗುಲ್ಬರ್ಗಾ ರವರು ನಾನು ಮತ್ತು ಭರತ ಇಬ್ಬರೂ ಮೋಟಾರ ಸೈಕಲ ನಂ: ಕೆಎ 32 ವಿ-5622 ನೇದ್ದರ ಮೇಲೆ ದಿನಾಂಕ: 12/2/2012 ರಂದು ಮದ್ಯಾಹ್ನ ಅವರಾದ (ಬಿ) ಗ್ರಾಮ ದಾಟಿ ಹೋಗುತ್ತಿದ್ದಾಗ ಹುಮನಾಬಾದ ಕಡೆಯಿಂದ ಮಾರುತಿ ಕಾರ ನಂ ಎಪಿ 09 ಎಜಿ 4998 ನೇದ್ದರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಪಡೆಸಿ ಭಾರಿಗಾಯ ಮತ್ತು ಸಾದಾಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 46/2012 ಕಲಂ 279, 337, 338 ಐಪಿಸಿ ಸಂಗಡ 187 ಐ.ಎಮ.ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಠಾಣೆ:
ದಿನಾಂಕ 12/2/2012 ರಂದು ಮದ್ಯಾಹ್ನ 4.45 ಗಂಟೆಯ ಸುಮಾರಿಗೆ ಭೀಮ್ಮಳ್ಳಿ ಗ್ರಾಮದ ಸೀಮಾಂತರದಲ್ಲಿ ಬರುವ ಭಾರತ ಟೈರ ಇವರ ಬಾಳೆ ಹೊಲದಲ್ಲಿ ಇಸ್ಪೇಟ ಜೂಜಾಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಪಿ.ಎಸ.ಐ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಜೂಜಾಟ ಆಡುತ್ತಿರುವ ಲಾಲ ಪಟೇಲ ತಂದೆ ಮಹಿಬೂಬಪಟೇಲ ವ: 25 ಸಾ: ದೇವಿ ನಗರ ಗುಲಬರ್ಗಾ,ಸಂತೋಷ ತಂದೆ ಬಸವರಾಜ ಮಠ ಸಾ: ದೇವಿನಗರ ಗುಲಬರ್ಗಾ, ಶಿವಕುಮಾರ ತಂದೆ ಶಂಕರ ಮಹಾಗಾಂವ ಸಾ: ಶಿವನಗರ ಗುಲಬರ್ಗಾ, ಮಹಿಬೂಬ ತಂದೆ ಅಬ್ಬಾಸಲಿ ಸಾ: ಆಳಂದ ಕಾಲೋನಿ ಗುಲಬರ್ಗಾ, ಸುಲ್ತಾನ ಅಹ್ಮದ ತಂದೆ ಮಕಬೂಲ ಅಹ್ಮದ ಶಿವ ನಗರ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ 3380/- ರೂ ಹಾಗೂ ಇಸ್ಪೇಟ ಎಲೆಗಳನ್ನು ಜಪ್ತ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 47/2012 ಕಲಂ 87 ಕೆ.ಪಿ ಆಖ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ
:ಶ್ರೀ ಮುಸ್ತಾಫ ತಂದೆ ಕೌಸರ ಖುರೇಶಿ ಸಾ ಮೋಮಿನಪುರ ಗುಲ್ಬರ್ಗಾ ರವರು ನಾನು ದಿನಾಂಕ 12/2/2012 ರಂದು ಸಾಯಂಕಾಲ ಸುಮಾರಿಗೆ ಗುಲಬರ್ಗಾ ಹುಮನಾಬಾದ ಮುಖ್ಯ ರಸ್ತೆಯ ಸಫಾರಿ ಧಾಬಾದ ಮುಂದಿನ ರಸ್ತೆಯ ಮೇಲೆ ಮೋಟಾರ ಸೈಕಲ ನಂ ಕೆಎ 04 ಹೆಚ್‌‌ 9730 ನೇದ್ದರ ಮೇಲೆ ಹೋಗುತ್ತಿದ್ದಾಗ ಟ್ಯಾಂಕರ ಲಾರಿ ನಂ MWU- 3409 ನೇದ್ದರ ಚಾಲಕ ತನ್ನ ಟ್ಯಾಂಕರನ್ನು ಅತಿ ವೇಗವಾಗಿ ನಡೆಯಿಸಿಕೊಂಡು ಹೊರಟವೇನ ಒಮ್ಮೇಲೆ ಯಾವುದೇ ಮುನ್ಸೂಚನೆ ಇಲ್ಲದೆ ಟ್ಯಾಂಕರನ್ನು ಬ್ರೇಕ ಮಾಡಿದ್ದು ಇದರಿಂದ ನನಗೆ ಮತ್ತು ನನ್ನ ಮೋಟಾರ ಸೈಕಲ್ ಹಿಂದೆ ಕುಳಿತು ಇಬ್ಬರ ಮುಖಕ್ಕೆ ಸಾದಾ ಗಾಯವಾಗಿದ್ದು, ಟ್ಯಾಂಕರ ಚಾಲಕ ಟ್ಯಾಂಕರನ್ನು ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 48/2012 ಕಲಂ 279 337 ಐಪಿಸಿ ಸಂ/ 187 ಐಎಂವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ:
ಶ್ರೀ ಅಮೃತ ತಂದೆ ರಾಣಪ್ಪ ಸಂಗಾಯಿ ವ: 40 ಸಾ: ಹಾಗರಗಾ ತಾ: ಜಿ: ಗುಲಬರ್ಗಾ ರವರು ದಿನಾಂಕ: 12/2/2012 ರಂದು ಸಾಯಂಕಾಲ ಸುಮಾರಿಗೆ ನಾನು ಟಂ ಟಂ ಕೆಎ 39/6327 ನೇದ್ದರಲ್ಲಿ ಅವರಾದ (ಬಿ) ಗ್ರಾಮ ದಾಟಿ ಸ್ವಾಮಿ ಸಮರ್ಥ ಗುಡ್ಡದ ಬಸ್ಸ ಸ್ಟಾಪ ಹತ್ತಿರ ಬರುತ್ತಿದ್ದಾಗ ಹಿಂದಿನಿಂದ ಕೆಎಸ್‌ಆರ್‌ ಟಿಸಿ ಬಸ್ಸ ನಂ ಕೆಎ 38 ಎಪ್‌ 342 ನೇದ್ದರ ಚಾಲಕ ತನ್ನ ಬಸ್ಸನ್ನು ಅತಿವೇಗದಿಂದ ನಡೆಯಿಸಿಕೊಂಡು ಬಂದು ನಾವು ಕುಳಿತು ಹೊರಟ ಟಂ ಟಂ ಕ್ಕೆ ಡಿಕ್ಕಿ ಹೊಡೆದಿದ್ದರಿಂದ ಟಂಟಂ ಪಲ್ಟಿಯಾಗಿ ಅದರಲ್ಲಿ ಕುಳಿತ ಮೂರು ಜನರಿಗೆ ಗಾಯವಾಗಿರುತ್ತವೆ. ಬಸ್ಸ ಚಾಲಕ ಬಸ್ಸನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 49/12 ಕಲಂ, 279 333 ಐಪಿಸಿ ಸಂಗಡ 187 ಐಎಂವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

12 February 2012

GULBARGA DIST REPORTED CRIMES

ಅಪಘಾತ ಪ್ರಕರಣ;
ಕಮಲಾಪೂರ ಠಾಣೆ:
ಶ್ರೀ ಸಿದ್ದಣ್ಣ ತಂದೆ ಈರಣ್ಣ ಮಾಗಾ ಸಾ:ಅಂತಪ್ಪನಾಳ ತಾ:ಜಿ: ಗುಲಬರ್ಗಾ ರವರು ನಾನು, ನನ್ನ ಗೆಳೆಯರಾದ ಚಾಂದ ತಂದೆ ಖಾಸೀಮ ಪಟೇಲ ಸಾ:ಅಂತಪ್ಪನಾಳ ಮತ್ತು ಬಸವರಾಜ ತಂದೆ ರಾಜಶೇಖರ ಗಡ್ಡೆನ್ನವರ ಸಾ:ಅಂತಪ್ಪನಾಳ ಒಟ್ಟು 3 ಜನ ಕೂಡಿಕೊಂಡು ಮೊಟಾರ ಸೈಕಲ್ ನಂಬರ ಕೆ.ಎ-32-ಡಬ್ಲೂ-2047 ನೇದ್ದರಲ್ಲಿ ಅಂತಪ್ಪನಾಳದಿಂದ ಕಮಲಾಪೂರಕ್ಕೆ ದಿನಾಂಕ: 11/02/2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಖಾಸಗಿ ಕೆಲಸದ ನಿಮಿತ್ತ ಬರುತ್ತಿದ್ದೆವು ಚಾಂದ ಮೊಟಾರ ಸೈಕಲ್ ಚಲಾಯಿಸುತ್ತಿದ್ದು, ಕಮಲಾಪೂರ ಇನ್ನು 1 ಕಿ.ಮೀ ಅಂತರದಲ್ಲಿದ್ದಾಗ ಚಾಂದ ಪಟೇಲ ಇತನು ನಾನು ಎಷ್ಟು ಹೇಳಿದರೂ ಕೇಳದೇ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಇನ್ನೊಂದು ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿರುತ್ತಾರೆ. ಅಪಘಾತದಲ್ಲಿ ನಮಗೆ ಗಾಯಗಳಾಗಿದ್ದು, ಡಿಕ್ಕಿ ಪಡಿಸಿಕೊಂಡ ಮತ್ತೊಂದು ಮೋಟಾರ ಸೈಕಲ್ ನಂಬರ ಕೆ.ಎ-32-ಎಸ್-0304 ನೇದ್ದರ ಚಾಲಕ ಗುರುನಾಥ, ತುಕಾರಾಮ ರಾಥೋಡ ಮತ್ತು ಮಿಥುನ ರಾಥೋಡ ಮೂವರು ಕವನಳ್ಳಿ ತಾಂಡಾದವರಿದ್ದು ಗುರುನಾಥನಿಗೆ ರಕ್ತಗಾಯವಾಗಿರುತ್ತವೆ ಅಪಘಾತದಲ್ಲಿ ಎರಡೂ ಮೊಟಾರ ಸೈಕಲಗಳು ಜಖಂಗೊಂಡಿರುತ್ತವೆ. ಎರಡು ಮೋಟರ್ ಸೈಕಲ್ ಚಾಲಕರ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 12/2012 ಕಲಂ 279.337 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದನದ ಕೊಬ್ಬು ಸಂಗ್ರಹಣೆ :
ರಾಘವೇಂದ್ರ ನಗರ ಠಾಣೆ:
ಶ್ರೀ ಗಂಗಾಧರ ತಂದೆ ಶಿವಪ್ಪ ನೈರ್ಮಲ್ಯ ನಿರೀಕ್ಷಕರು ಮಹಾನಗರ ಪಾಲಿಕೆ ಗುಲಬರ್ಗಾರವರು ನಾನು ಮತ್ತು ಆರ.ಜಿ.ನಗರ ಠಾಣಾ ಸಿಬ್ಬಂದಿಯವರಾದ ಪಾಂಡುರಂಗ, ಪಂಡಿತ ರವರೊಂದಿಗೆ ಸಾರ್ವಜನಿಕರ ಮಾಹಿತಿ ಹಾಗು ಆಯುಕ್ತರ ದೂರವಾಣಿ ಸೂಚನೆ ಮೇರೆಗೆ ದಿನಾಂಕ 12-02-2012 ರಂದು ಬೆಳಿಗ್ಗೆ 11- ಗಂಟೆಗೆ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಿಲಾನಾಬಾದ ಹತ್ತಿರ ಮೌಲಾಲಿ ಕಟ್ಟಾದಲ್ಲಿರುವ ಮನೆಯೊಂದಕ್ಕೆ ಹೋಗಿ ಪರಿಶೀಲಿಸಿ ವಿಚಾರಣೆ ಮಾಡಲಾಗಿ,ಮನೆಯಲ್ಲಿದ್ದ ಚಾಂದಸಾಬ ತಂದೆ ಅಲ್ಲಾಬಕ್ಷ ಖುರೇಷಿ ಇವರ ಹೇಳಿಕೆ ಪ್ರಕಾರ ಸದರಿಯವನು ಮದಿನಾ ಕಾಲೋನಿ, ಜಿಲಾನಾಬಾದ ಹಲವು ಮನೆಗಳಿಂದ ದನಗಳ ಚರ್ಬಿಯನ್ನು ಸಂಗ್ರಹಿಸಿ 33ಡಬ್ಬಿಗಳಷ್ಟು ಪ್ರತಿಯೊಂದು 15 ಕೆ.ಜಿ ಯಷ್ಟು ತೂಕವುಳ್ಳವುಗಳು ಕೊಬ್ಬನ್ನು ಸಂಗ್ರಹಿಸಿಟ್ಟಿದ್ದು ಇರುತ್ತದೆ. ಇದರಿಂದ ಬಡಾವಣೆಯಲ್ಲಿರುವ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಇದ್ದು, ಪರಿಸರ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ. ಕಾರಣ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೊಬ್ಬು ತುಂಬಿದ ಸಂಗ್ರಹಿಸಿಟ್ಟ 33 ಟೀನ ಡಬ್ಬಿಗಳು ಹಾಗು ಚಾಂದಸಾಬ ತಂದೆ ಅಲ್ಲಾಬಕ್ಷ ಖುರೇಷಿ ಸಾ ಮೌಲಾಲಿ ಕಟ್ಟಾ ಜಿಲಾನಾಬಾದ ಇತನೊಂದಿಗೆ ಠಾಣೆಗೆ ತಂದು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 10/12, U/S S 269, 278, 290 IPC 1860, & KARNATAKA CORPORATION ACT U/s-387 & ENVIRONMENT (PROTECTION) ACT, 1986 U/s-7, 8, 15 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಇಟ್ಟಂಗಿ ಭಟ್ಟಿ ಮಾಲಿಕನಿಂದ ಅಪಹರಣ, ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ಪರಶುರಾಮ ತಂದೆ ಹಣಮಂತ ತಳಕೇರಿ ವ ಸಾ: ಸಂಗೋಳಗಿ (ಜಿ) ನಾನು ಕಳೆದ ಎರಡು ವರ್ಷದ ಹಿಂದೆ ಪೂಣಾ ಪಟ್ಟಣದ ಮಾರೋಂಜಿ ಎಂಬ ಏರಿಯಾದಲ್ಲಿ ಸುಬಾಷ ಬುಚಡೆ ಎಂಬುವರ ಹತ್ತಿರ ಇಟ್ಟಂಗಿ ಭಟ್ಟಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆ 2011ನೇ ಸಾಲೀನ ಜೂನ್ ತಿಂಗಳಲ್ಲಿ ಇಟ್ಟಂಗಿ ಭಟ್ಟಿ ಮಾಲಿಕರಾದ ಸುಬಾಷ ಬುಚಡೆ ಇವರು ನಿಮ್ಮೂರ ಕಡೆಯಿಂದ 10 ಜನ ಕೂಲಿ ಆಳುಗಳಿಗೆ ಕರೆದುಕೊಂಡು ಬರಬೇಕು ಅವರಿಗೆ ನಾನು ಅಡ್ವಾನ್ಸ್ ಹಣ ಕೊಡುತ್ತೇನೆ ಎಂದು ಹೇಳಿದ್ದರಿಂದ ನಾನು ಊರಿಗೆ ಬಂದು ತಿಪ್ಪಣ ರಾಠೋಡ, ಅಣ್ಣಪ್ಪ ಹೊನ್ನಳ್ಳಿ ಹಾಘು ಇತರೆ 8 ಜನರಿಗೆ ಕರೆದುಕೊಂಡು ಹೋಗಿ ನಮ್ಮ ಇಟ್ಟಂಗಿ ಭಟ್ಟಿ ಮಾಲಿಕರ ಮುಂದೆ ಭೇಟಿ ಮಾಡಿಸಿರುತ್ತೇನೆ ಅವರು ಕೆಲಸಕ್ಕಾಗಿ ಬಂದಿದ್ದ ನಮ್ಮೂರಿನ ಜನರಿಂದ ಕರಾರು ಬರೆದುಕೊಂಡು ಪ್ರತಿಯೊಬ್ಬರಿಗೆ ಮುಂಗಡವಾಗಿ ಹಣ ಕೊಟ್ಟಿರುತ್ತಾರೆ.ಜೂನ್ ತಿಂಗಳು ಮಳೆ ಪ್ರಾರಂಭವಾಗಿದ್ದರಿಂದ ಇಟ್ಟಂಗಿ ಕೆಲಸ ಬಂದಾಗಿದ್ದು ಕೆಲಸ ಮಾಡಲು ಬಂದ ಎಲ್ಲಾ ಜನರು ಮರಳಿ ಊರಿಗೆ ಬಂದು ಬೇರೆ ಕೆಲಸಗಳಲ್ಲಿ ತೊಡಗಿರುತ್ತಾರೆ. ದೀಪಾವಳಿ ಹಬ್ಬ ಆದ ನಂತರ ಸುಬಾಷ ಬುಚಡೆ ಇವರು ಮಹಾರಾಷ್ಟ್ರದ ಪೂನದಿಂದ ಫೋನ ಮಾಡಿ ಇಟ್ಟಂಗಿ ಕೆಲಸ ಮಾಡುವ ಜನರು ಕೆಲಸಕ್ಕೆ ಬಂದಿಲ್ಲ ಹಣ ತೆಗೆದುಕೊಂಡು ಅಲ್ಲಿಯೇ ಇದ್ದಾರೆ ಅವರು ಯಾವಗಾ ಬರುತ್ತಾರೆ ಅಂತಾ ನನಗೆ ಕೇಳಿದರು ನಾನು ಬೇರೆ, ಬೇರೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ ಅಂತಾ ಹೇಳಿದೆ. ದಿನಾಂಕ: 21/12/2011 ರಂದು ಮದ್ಯಾಹ್ನದ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಇಟ್ಟಂಗಿ ಭಟ್ಟಿಯ ಮಾಲೀಕನಾದ ಸುಬಾಷ ಬುಚುಡೆ ಮತ್ತು ಬಸ್ಸು ಸೀನೂರ ಸಾ: ದೂದುನಿ ಸಂಗಡ 6 ಜನರು ಕೂಡಿಕೊಂಡು ಸ್ಕಾರಪಿಯೋ ನಂಬರ ಎಮ್‌ಹೆಚ್‌ 14 – 7878 ನೇದ್ದರಲ್ಲಿ ನನಗೆ, ನನ್ನ ಹೆಂಡತಿ ವಿಠಬಾಯಿ ಮತ್ತು 5 ತಿಂಗಳ ಮಗುವಿಗೆ ಎಲ್ಲರೂ ಕೂಡಿ ನನಗೆ ನನ್ನ ಕಣ್ಣನಿಗೆ ಬಟ್ಟೆ ಕಟ್ಟಿ ಜಬರ ದಸ್ತಯಿಂದ ಸ್ಕಾರಪಿಯೋದಲ್ಲಿ ಕೂಡಿಸಿಕೊಂಡು ಆಪಹರಣ ಮಾಡಿಕೊಂಡು ಹೋಗಿ ಸುಬಾಷ ಬುಚಡೆ ಇತನು ಮರಾಠಿ ಬಾಷೆಯಲ್ಲಿ ಅವಾಚ್ಯವಾಗಿ ಬೈಯುತ್ತಿದ್ದು ಮುಂಡದವಾಗಿ ನೀಡಿದ ಹಣ ಕೊಡು ಎಂದು ಕೈಯಿಂದ ಕಪಾಳಕ್ಕೆ ಹೋಡೆದು ಬೂಟಗಾಲಿನಿಂದ ಒದ್ದಿರುತ್ತಾನೆ.” ಮತ್ತು ಬಸ್ಸು ಇತನು ನನ್ನ ಬೆನ್ನಿನಲ್ಲಿ ಕೈಯಿಂದ ಗುದ್ದಿರುತ್ತಾನೆ. ನಂತರ ನನಗೆ ಅಲ್ಲಿ ಬಿಡದೇ ಪೂಣಾಕ್ಕೆ ಕರೆದುಕೊಂಡು ಹೋಗಿ ಪೂನಾ ಪಟ್ಟಣದ ಮಾರುಂಜಿ ಏರಿಯಾದ ಒಂದು ರೋಮಿನಲ್ಲಿ ನನಗೂ ಮತ್ತು ನನ್ನ ಹೆಂಡತಿಗೆ ಒಂದೇ ಹೊತ್ತು ಊಟ ಕೊಟ್ಟು ಕೂಡಿ ಹಾಕಿ ಕಿರುಕುಳ ನೀಡಿರುತ್ತಾರೆ. ನಾನು ದಿನಾಂಕ 05/02/2012ರಂದು ಇಟ್ಟಂಗಿ ಭಟ್ಟಿಯ ಮಾಲೀಕರಿಂದ ತಪ್ಪಿಸಿಕೊಂಡು ಬಂದಿರುತ್ತೇನೆ. ನನ್ನ ಹೆಂಡತಿ ಮತ್ತು ಮಗ ಪೂನಾದಲ್ಲಿಯೇ ಇರುತ್ತಾರೆ. ಮುಂಗಡವಾಗಿ ಹಣ ತೆಗೆದುಕೊಂಡವರಿಗೆ ಬಿಟ್ಟು ನನಗೆ ಮತ್ತು ನನ್ನ ಹೆಂಡತಿ ಮತ್ತು 5 ತಿಂಗಳ ಮಗುವಿಗೆ ಅಪಹರಣ ಮಾಡಿಕೊಂಡು ಹೋಗಿ ಹೊಡೆ ಬಡೆ ಮಾಡಿ ಮಾಡಿದ ಸುಬಾಷ ಬುಚಡೆ ಮತ್ತು ಬಸ್ಸು ಸೀನೂರ ಸಾ: ದುದುನಿ ಸಂಗಡ 6 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 35/2012 ಕಲಂ 143.147.149.323.355.365.504.342.ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ:
ಶ್ರೀಮತಿ ದೇವಕಿ ಗಂಡ ದೇವಿಂದ್ರ ಮನ್ನೇರಿ ಸಾ ಯರಗಲ್ ರವರು ನಾನು ಗುಡಿಯ ಹತ್ತಿರ ಕಸ ಗುಡಿಸುತ್ತಿರುವಾಗ ಹೊಲದಲ್ಲಿ ಪಾಲ ಕೊಡು ಅಂತಾ ಸಿದ್ದಪ್ಪ ಮನೇರಿ, ಬಸವಂತಪ್ಪ ಮನೇರಿ, ಅನುಪಾ ಮನೇರಿ, ಚಂದ್ರಪ್ಪ ಮನೇರಿ, ಮಂಜುಳಾ ಗಂಡ ರವಿ ಮನೇರಿ, ಲಕ್ಷ್ಮೀ ಗಂಡ ಚಂದ್ರಪ್ಪ ಮನೇರಿ ಸಾ:ಎಲ್ಲರೂ ಯರಗಲ್ ಗ್ರಾಮದವರು ಬಂದು ಫಲಗಾದಿಂದ ಹೊಡೆದು ರಕ್ತ ಗಾಯಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ .14/2012 ಕಲಂ 147,148,323,324,504,506 ಸಂ.149 ಐಪಿಸಿ ನೇದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಮತ್ತು ಬೇದರಿಕೆ ಪ್ರಕರಣ:
ರೋಜಾ ಪೊಲೀಸ್ ಠಾಣೆ:
ದಿನಾಂಕ:11-02-2012 ರಂದು ಠಾಣೆಯ ಕೋರ್ಟ ಕರ್ತವ್ಯದ ಪಿ.ಸಿ-74 ಸುರೇಶ ಕದಂ ರವರು ಮಾನ್ಯ ಪ್ರೀನ್ಸಿಫಲ ಜೆ,ಎಂ.ಎಫ್.ಸಿ ಕೋರ್ಟ ಗುಲಬರ್ಗಾದ ಪಿ.ಸಿ ನಂ:30/2012 ದಿನಾಂಕ:08-02-2012 ಕಲಂ 156 (3)ಸಿ.ಆರ್.ಪಿ,ಸಿ ಪ್ರಕಾರ ಶ್ರೀ ಮಹ್ಮದ ಮೆಹಬೂಬ ತಂದೆ ಮಹ್ಮದ ಮಸ್ತಾನ ಸಾನೂರಾನಿ ಮೊಹಲ್ಲಾ ಗೋಲ್ಡ ರೋಜ ಸ್ಕೂಲ ಹತ್ತಿರ ಗುಲಬರ್ಗಾರವರು ದೂರಿನ ಸಾರಂಶವೇನೆಂದರೆ, ದಿನಾಂಕ: 24-01-2012 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ನಾನು ಗೋಲ್ಡ ರೋಜ ಸ್ಕೂಲ ಮುಂದಿನಿಂದ ಹೋಗುತ್ತಿರುವಾಗ ಮಹ್ಮದ ಯುನೂಸ ಪಟೇಲ ತಂದೆ ಮಹ್ಮದ ಮಗದುಮ್ ಪಟೇಲ ಸಾ: ಸಂತ್ರಾಸವಾಡಿ ಮತ್ತು ಶೇಕ ಅಜರ ಹುಸೇನಿ ತಂದೆ ಶೇಕ ಅಫ್ಸರ್ ಹುಸೇನಿ ಸಾಸಂತ್ರಾಸವಾಡಿ ಇವರಿಬ್ಬರು ಬಂದು ನನಗೆ ಪ್ಲಾಟಿನ ಸಂಬಂಧವಾಗಿ ವಿಶ್ವ ವಿದ್ಯಾಲಯ ಠಾಣೆಯಲ್ಲಿ ದಾಖಲ ಮಾಡಿದ ಕೇಸನ್ನು ವಾಪಸ್ಸ ತೆಗೆದುಕೊಳ್ಳ ಬೇಕು ಅಂತಾ ಅವಾಚ್ಯವಾಗಿ ಬೈದು ಚಾಕುದಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿ,ನನಗೆ ಚಾಕು ತೊರಿಸಿ ಪಾಕೀಟದಲ್ಲಿದ್ದ 2000/- ರೂಪಾಯಿಗಳನ್ನು ಜಬರ ದಸ್ತಿಯಿಂದ ಕಸಿದು ಕೊಂಡು ಓಡಿ ಹೋಗಿರುತ್ತಾರೆ ಅಂತಾ ಸಾರಾಂಶ ಮೇಲಿಂದ ರೋಜಾ ಠಾಣೆಯ ಗುನ್ನೆ ನಂ:12/2012 ಕಲಂ:341,392,504,506, ಸಂ: 34 ಐ.ಪಿ,ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.