POLICE BHAVAN KALABURAGI

POLICE BHAVAN KALABURAGI

09 November 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮೌಲಾಲಿ ಕಿರಿಯ ಅಬಿಯಂತರರು ಶಾಖಾಧಿಕಾರಿಗಳು ಹಡಗಿಲ ಹಾರುತಿ ಗ್ರಾಮೀಣ ವಿಭಾಗ ಗುಲಬರ್ಗಾ ರವರು ದಿನಾಂಕ:08/11/2011 ರಂದು ಮುಂಜಾನೆ ಬಬಲಾದ (ಎಸ್) ಗ್ರಾಮದಲ್ಲಿ N.E.R.T.C ಬಸ್ಸು ಸಂಖ್ಯೆ K.A 32 F-941 ವಿದ್ಯುತ ಸರಬರಾಜು ಮಾಡುವ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 2 ವಿದ್ಯುತ್ತ ಕಂಬಗಳು ಮುರಿದು ವಿದ್ಯುತ್ತ ವ್ಯವಸ್ದೆ ಸಹ ನಿಂತು ಹೋಗಿದ್ದು ಅಲ್ಲದೆ ಊರಿನ ಜನರಿಗೆ ವಿದ್ಯುತ್ತ ತೊಂದರೆಯಾಗಿರುತ್ತದೆ. ಕಾರಣ ಗುಲಬರ್ಗಾ ವಿದ್ಯುತ್ ಸರಭರಾಜು ಕಂಪನಿಗೆ ಸುಮರು 13000/- ಹಾನಿ ಆಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 329/2011 ಕಲಂ 279 427 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಜೇವರ್ಗಿ ಪೋಲಿಸ ಠಾಣೆ :
ಶ್ರೀಮತಿ ಮಲ್ಕಮ್ಮ ಗಂಡ ಶರಣಪ್ಪ ರವರು ನಾನು ದಿನಾಂಕ 08-11-2011 ರಂದು ರಾತ್ರಿ 8-30 ಗಂಟೆಗೆ ಅಖಂಡೇಶ್ವರ ಮಾರ್ಗವಾಗಿ ಬಜಾರ ಮಾಡಲು ಹೊಗುತ್ತಿರುವಾಗ ಕೆ.ಎ.32-6548 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ವಾಹನದೊಂದಿಗೆ ಹಾಗೆ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 192/11 ಕಲಂ 279.337..ಐ.ಪಿ.ಸಿ. 187 ಐ.ಎಮ್.ವ್ಹಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
: ಕು|| ಮಹ್ಮದ ಸಲ್ಮಾನ ತಂದೆ ಮಕ್ಮದ ಸಲೀಮ ವ: 15 ವರ್ಷ ಉ; ವಿದ್ಯಾರ್ಧಿ ಸಾ; ಮನೆ ನಂ 11-1041/ಇಬಿ2 ಎಕ್ಬಾಲ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 06.11.2011 ರಂದು ಸಾಯಂಕಾಲ್ 7-00 ಗಂಟೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ನಂ:ಕೆಎ 32 ಎಫ್ 1562 ನೇದ್ದರ ಬಸ್ಸನಿಂದ ಕೇಂದ್ರ ಬಸ್ ನಿಲ್ದಾಣದ ಎದುರು ಇಳಿಯತ್ತಿರುವಾಗ ಬಸ್ಸ ಚಾಲಕನು ಅಲಕ್ಷತನದಿಂದ ಚಲಾಯಿಸಿಕೊಂಡು ಮುಂದು ಹೋಗಿದ್ದರಿಂದ ನಾನು ಬಾಗಿಲನಿಂದ ಕೆಳಗೆ ಬಿದ್ದು ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ ಅತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 142/11 ಕಲಂ: 279 .338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ :
ರೋಜಾ ಠಾಣೆ :
ಶ್ರೀ ಅಬ್ದುಲ ಬಾಕಿ ತಂದೆ ಅಬ್ದುಲ ರಹೀಮ ಸಾ:ಹಾಗರಗಾ ಕ್ರಾಸ್ ಹತ್ತಿರ ನೂರಾನಿ ಮೊಹಲ್ಲಾ ಗುಲಬರ್ಗಾರವರು ದಿನಾಂಕ:08/11/2011 ರಂದು 3:30 ಪಿಎಮ್ ದಿಂದ 7:00 ಪಿಎಮ್ ದ ನಡುವಿನ ಅವಧಿಯಲ್ಲಿ ನೂರಾನಿ ಮೊಹಲ್ಲಾ ಬಡಾವಣೆಯಲ್ಲಿರುವ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ರೂಮದಲ್ಲಿದ್ದ 10 ಗ್ರಾಮದ ಮಂಗಳಸೂತ್ರ ಅ.ಕಿ.10500/-ರೂ. ಮತ್ತು 9 ಗ್ರಾಮದ ಒಂದು ಜೊತೆ ಇಯರಿಂಗ್ ಅ.ಕಿ.9500/-ರೂ. ಹೀಗೆ ಒಟ್ಟು 20000/-ರೂ. ಬೆಲೆಬಾಳುವ ಬಂಗಾರದ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.105/2011 ಕಲಂ.454,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂರು ತನಿಖೆ ಕೈಕೊಂಡಿರುತ್ತಾರೆ.

08 November 2011

GULBARGA DIST REPORTED CRIMES

ಅಪಘಾತ ಪ್ರಕರಣ :
ಶಹಾಬಾದ ನಗರ ಪೊಲೀಸ ಠಾಣೆ
: ಶ್ರೀ ಶಿವರುದ್ರಪ್ಪಾ ತಂದೆ ಈರಣ್ಣಾ ನೆಲೋಗಿ ಸಾ:ಹಳೆ ಶಹಾಬಾದ ರವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆಂದರೆ ನನ್ನ ಹೆಂಡತಿ ಚಂದ್ರಕಲಾ ಇವಳು ಟ್ರಾಕ್ಟರ ನಂ. ಕೆಎ-32 ಟಿಎ-2295/96 ನೇದ್ದರಲ್ಲಿ ಕುಳಿತುಕೊಂಡು ಬರುತ್ತಿರುವಾಗ ಟ್ಟ್ರಾಕ್ಟರ ಚಾಲಕನಾದ ಅಂಬಾರಾಯ ತಂದೆ ಶಿವಶರಣಪ್ಪಾ ಸರಡಗಿ ಇತನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಕಟ ಮಾಡಿದ್ದರಿಂದ ಟ್ರಾಕ್ಟರ ಪಲ್ಟಿಯಾಗಿದ್ದರಿಂದ ನನ್ನ ಹೆಂಡತಿಗೆ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ 168/11 ಕಲಂ 279, 304(ಎ) ಐಪಿಸಿ ಸಂ:187 ಐಎಮ್‌ವಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ರಟಕಲ ಪೊಲೀಸ ಠಾಣೆ
: ಶ್ರೀಮತಿ ಲಾಲಾಬಾಯಿ ಗಂಡ ಮೋತಿರಾಮ ಪವಾರ ಸಾ||ಚೆಂಗಟಾ ರವರು ನಾನು ಬೆಳಿಗ್ಗೆ ಹೊಲಕ್ಕೆ ಹೋಗುವಾಗ ಅಂಬಾರಾಯ ತಂದೆ ಶಂಕ್ರೆಪ್ಪಾ ಕಣ್ಣಿ ಇತನು ನಾನು ನಿನ್ನೆ ನಿಮ್ಮ ತಾಂಡಾಕ್ಕೆ ಬಂದಾಗ ಕಲ್ಲಿನಿಂದ ಹೊಡೆದಿದ್ದಿ ಅಂತಾ ಅವಾಚ್ಯವಾಗಿ ಬೈಯ್ದು ಮಾನ ಭಂಗಮಾಡುವ ಉದ್ದೇಶದಿಂದ ಕೈಹಿಡಿದು ಎಳೆದು ಅವಮಾನ ಮಾಡಿ ಕೈಯಿಂದ ಹೊಡೆದು ಗುಪ್ತ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 61/2011 ಕಲಂ341,504,323,354,506 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ .

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ
: ಶ್ರೀಮತಿ ಅನ್ನಪೂರ್ಣ ಗಂಡ ಅಂಬಾರಾಯ ಕಲಾಮೂರ್ತಿ ಸಾಃ ಕಾಳಮಂದರಗಿ ರವರು ನಾನು ದಿನಾಂಕ: 07/11/2011 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನನ್ನ ಮನೆಯಲ್ಲಿದ್ದಾಗ ನನ್ನ ಮೈದುನ ಸತೀಷ ತಂದೆ ಲಿಂಗಪ್ಪಾ ವಯ: 28 ವರ್ಷ ಈತನು ನನಗೆ ನೋಡಿ, ವಿನಾಃಕಾರಣ ಅವಾಚ್ಯವಾಗಿ ಬೈದು ನನ್ನ ಹೆಂಡತಿ ತೀರಿಕೊಂಡಿದ್ದು. ನಾನು ಇನ್ನೊಂದು ಮದುವೆ ಮಾಡಿಕೊಳ್ಳಬೇಕು ಅಂತಾ ನಾನು, ನೋಡಿರುವ ಹೆಣ್ಣುಗಳಿಗೆ ಮದುವೆ ಮಾಡಿಕೊಳ್ಳಬೇಡಿ ಅಂತಾ ನನ್ನ ನೆಂಟಸ್ತನ ಮುರಿದಿದ್ದಿ ಎಂದು ನಿನಗೆ ಒಂದು ಕೈ ನೋಡುತ್ತೇನೆ ಅಂತಾ ಅವಾಚ್ಯವಾಗಿ ಬೈಯುತ್ತಾ ಕಲ್ಲು ಎತ್ತಿ ನನ್ನ ಬಲಗಾಲ ಮೇಲೆ ಹಾಕಿದ್ದರಿಂದ ನನ್ನ ಬಲಗಾಲಿನ ಹೆಬ್ಬಟ್ಟು, ಕಿರುಬರೆಳಿಗೆ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 139/2011 ಕಲಂ. 323, 324, 504 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ
: ಅಶೋಕ ತಂದೆ ಶಿವರಾಯ ಬಾಗೋಡಿ ಸಾಃ ಪ್ರಗತಿ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನನ್ನ ಮಗಳು ಪಾವನ ಇಬ್ಬರು ಕೂಡಿ ನಮ್ಮ ಮೋಟಾರ ಸೈಕಲ ನಂ. ಕೆ.ಎ 32 ಜೆ7252 ನೇದ್ದರ ಮೇಲೆ ಗುಬ್ಬಿ ಕಾಲೋನಿ ಹತ್ತಿರವಿರುವ ಭವಾನಿ ಹೊಲ್ ಸೆಲ್ ಅಂಗಡಿಯ ಮುಂದಿನಿಂದ ಹೋಗುತ್ತಿದ್ದಾಗ ಎದರುಗಡೆಯಿಂದ ಟಿ.ವಿ.ಎಸ್ ಎಕ್ಸ.ಎಲ್ ನಂ. ಕೆ.ಎ 32 ಎಕ್ಸ 8649 ನೇದ್ದರ ಚಾಲಕ ಚಂದ್ರಕಾಂತ ಕುಂಬಾರ ಇತನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ತಾವು ಕೂಡಾ ಕೆಳಗೆ ಬಿದ್ದಿದ್ದು ಅಪಘಾತದಿಂದ ನನ್ನ ಮಗಳಾದ ಪಾವನಾ ಇವಳಿಗೆ ಮತ್ತು ಚಂದ್ರಕಾಂತ ಮತ್ತು ಹಿಂದೆ ಕುಳಿತ ಸಿದ್ದು ಕುಂಬಾರ ಇವರಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 68/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಯು.ಡಿ.ಅರ್. ಪ್ರಕರಣ:
ಕಮಲಾಪೂರ ಠಾಣೆ :
ಶ್ರೀ, ಮೋನು ತಂದೆ ನಾನು ಚವ್ಹಾಣ ಸಾ:ಮಳಸಾಪೂರ ತಾಂಡಾ ತಾ:ಜಿ;ಗುಲಬರ್ಗಾ ರವರು ನಾನು ದಿನಾಂಕ;06/11/2011 ರಂದು ಬೆಳೆಗ್ಗೆ 10-00 ಗಂಟೆ ಸುಮಾರಿಗೆ ತಿಪ್ಪಿಬಾಯಿ ತೊಗರಿ ಬೆಳೆಗೆ ಕ್ರೀಮಿನಾಶಕ ಜೌಷಧಿ ಹೊಡೆದು ಮಧ್ಯಾಹ್ನ ತನ್ನ ಕೈ ತೊಳೆದು ಕೊಳ್ಳದೇ ಹಾಗೇಯೇ ಊಟ ಮಾಡಿದ್ದು, ನಂತರ ಮತ್ತೆ ತೊಗರಿಗೆ ಜೌಷಧಿ ಹೊಡೆಯುತ್ತಿದ್ದಾಗ ಮತ್ತೆ ಗಾಳಿಯ ಮುಖಾಂತರ ಕ್ರೀಮಿನಾಶಕ ಜೌಷಧಿ ತಿಪ್ಪಿಬಾಯಿ ಇವಳ ಬಾಯಿಯಲ್ಲಿ ಮತ್ತು ಮೂಗಿನಲ್ಲಿ ಸೇರಿದ್ದು, ಸಾಯಂಕಾಲ 5-00 ಗಂಟೆ ಸುಮಾರಿಗೆ ತಿಪ್ಪಿಬಾಯಿ ಇವಳು ಹೊಲದಲ್ಲಿ ಒಮ್ಮಿಲೇ ಚಕ್ಕರ ಬಂದು ಕುಸಿದು ಬಿದ್ದಾಗ ಉಪಚಾರಕ್ಕಾಗಿ ಸರ್ಕಾರಿ ಆಸ್ಪತ್ರೆ ಚಿಟಗುಪ್ಪಾಕ್ಕೆ ಹೋಗಿ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ರಾತ್ರಿ 8-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯುಡಿಅರ್ ನಂ: 11/2011 ಕಲಂ 174 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಯಡ್ರಾಮಿ ಪೊಲೀಸ್ ಠಾಣೆ
: ಶ್ರೀ ಬಸಣ್ಣ ತಂದೆ ಚನ್ನಪ್ಪ ಮುದ್ದೇಬಿಹಾಳ ಸಾ: ಕೊಂಡಗೂಳಿ ಹಾ:ವ ಬಿಜಾಪೂರ ರವರು ನಾನು ನಾನು ಮತ್ತು ಹಾಗೂ ತನ್ನ ತಂಗಿಯ ಗಂಡ ಮಡಿವಾಳಪ್ಪಗೌಡ ಇಬ್ಬರು ದಿನಾಂಕ 06-11-2011 ರಂದು ಹತ್ತಿ ಬೆಳೆಗೆ ಕೆಲಾಲ್ ನೀರು ಬಿಡುತ್ತಿದ್ದಾಗ ಗುರುಸಿದ್ದಪ್ಪಗೌಡ ತಂದೆ ಅಮರಪ್ಪಗೌಡ ಪೊಲೀಸ್ ಪಾಟೀಲ ಹಾಗೂ ಇನ್ನು ಇಬ್ಬರು ಸಾ: ಎಲ್ಲರೂ ಕೊಂಡಗಳು ಗ್ರಾಮದವರು ತಕರಾರು ಮಾಡಿ ಕಾಲುವೆ ಒಡೆದು ನೀರನ್ನು ತಗೆದುಕೊಂಡಿದನ್ನು ವಿಚಾರಿಸಿ ಮನೆಗೆ ಬರುತ್ತಿದ್ದಾಗ ಸಾಯಂಕಾಲ ಅವರೆಲ್ಲರೂ ಎದುರಿನಿಂದ ಬಂದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಕೈಯಿಂದ ಮತ್ತು ಗಳ್ಯಾದ ಕಬ್ಬಿಣದ ಪಲಗಾದಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 83/2011 ಕಲಂ 341,323,324,504,506,307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂತು ತನಿಖೆ ಕೈಕೊಳ್ಳಲಾಗಿದೆ.