POLICE BHAVAN KALABURAGI

POLICE BHAVAN KALABURAGI

25 October 2011

GULBARGA DISTRICT REPORTED CRIMES

ಕಳ್ಳತನ ಪ್ರಕರಣ:

ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ ಡಾಃ ಹನುಮಂತಪ್ಪ ತಂದೆ ಬಸವಣಪ್ಪಾ ಕಲಾಸಗಿ ಸಾಃ ಗಾಜಿಪೂರ ಗುಲಬರ್ಗಾ ರವರು ನಾನು ದಿನಾಂಕ 19/10/2011 ರಂದು ರಂದು ಮಧ್ಯಾಹ್ನ ನನ್ನ ಹಿರೊ ಹೊಂಡಾ ಸ್ಪೆಂಡರ್ ಪ್ಲಸ್ (ಕಪ್ಪು ಬಣ್ಣದ್ದು) ಮೋಟಾರ ಸೈಕಲ ನಂ. ಕೆ.ಎ 32 ಎಸ್ 7012 ನೇದ್ದನ್ನು ಸಿಂಡಿಕೇಟ್ ಬ್ಯಾಂಕ್ ಹತ್ತಿರ ನಿಲ್ಲಿಸಿ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಮೋಟಾರ ಸೈಕಲನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 148/2011 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಅಬ್ದುಲ್ ರಹಿಮ ತಂದೆ ಅಬ್ದುಲ ಅಲೀಮ ಸಾ: ಮನೆ 9-566/11 ವಿಜಯ ನಗರ ರವರು ನಾನು ದಿನಾಂಕ 24.10.11 ರಂದು ಸಾಯಂಕಾಲ್ ಎಸ್.ವಿ.ಪಿ.ಸರ್ಕಲ್ ದಿಂದ ಪಿ.ಡಿ.ಎ.ಕಾಲೇಜ ರೋಡಿನಲ್ಲಿ ಬರುವ ಸಪ್ನಾ ಝೆರಾಕ್ಸ ಅಂಗಡಿ ಎದುರುಗಡೆಯಿಂದ ನನ್ನ ಮೋಟಾರ್ ಸೈಕಲ್ ನಂ: ಕೆಎ 32 ಎಲ್ 3103 ನೇದರ ಮೇಲೆ ಹೋಗುತ್ತಿದಾಗ ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಮೋಟರ ಸೈಕಲ ನಂ ಕೆ.ಎ 32 ಡಬ್ಲೂ 8700 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿ ಅಪಫಾತ ಮಾಡಿ ಗಾಯಗೂಳಿಸಿರುತ್ತಾನೆ ಅಂತಾ ದೂಋಉ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 135/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ವಿಶ್ವವಿದ್ಯಾಲಯ ಪೊಲೀಸ ಠಾಣೆ:
ಶ್ರೀಮತಿ ಶೋಭಾ ಗಂಡ ಅಂಬಾರಾಯ ಅಂಬಲಗಿ ಉ:ಸ.ಹಿ.ಪ್ರಾ.ಶಾಲೆ ಹಲೇ ಶಾಬಾದದಲ್ಲಿ ಸಹ ಶಿಕ್ಷಕಿ ಸಾ: ರಾಜಾಪೂರ ಬಡೇಪೂರ ಬಡಾವಣೆ ಜಿಡಿಎ ಪ್ರಶಾಂತ ನಗರ (ಬಿ) ಗುಲಬರ್ಗಾ ರವರು ನಾನು ಮತ್ತು ನಮ್ಮ ಅತ್ತೆ ಗಂಗಮ್ಮ ಇಬ್ಬರೂ ಮದ್ಯಾಹ್ನ ಕೆನರಾ ಬ್ಯಾಂಕ್ ಗೆ ಹಣ ತರುವ ಕುರಿತು ಹೋಗುವಾಗ, ನನ್ನ ಮಗನಿಗೆ ಎದುರು ಮನೆಯಲ್ಲಿ ಬಿಟ್ಟು ಹೋಗಿದ್ದು, ಒಂದೂವರೆ ಗಂಟೆಯ ನಂತರ ಎದುರು ಮನೆಯವರು ಪೋನ್ ಮಾಡಿ ನಿಮ್ಮ ಮನೆಯ ದ್ವಾರದ ಕೀಲಿ ಮುರಿದಿದೆ ತಿಳಿಸಿದ್ದರಿಂದ ನಾನು ಮತ್ತು ನನ್ನ ಅತ್ತೆ ಇಬ್ಬರೂ ಕೂಡಿ ಮನೆಗೆ ಬಂದು ನೋಡಲಾಗಿ ಬೆಡ್ ರೂಮ್ ದಲ್ಲಿದ್ದ ಅಲಮಾರಿ ಮುರಿದಿದ್ದು ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಅಂದಾಜ ಕಿಮ್ಮತ್ತು 65.000/- ರೂ ಮೌಲ್ಯದ ಕಳವುವಾ್ಇದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 244/2011 ಕಲಂ 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

ಕಳ್ಳತನ ಪ್ರಕರಣ :

ಸ್ಟೇಷನ ಬಜಾರ ಪೊಲೀಸ ಠಾಣೆ: ಪಾಲರಾಜ ತಂದೆ ಮಣಿಕರಾವ ವ|| 37 ವರ್ಷ ವೈದ್ಯಕೀಯ ಟೆಕ್ನಾಲೊಜಿಸ್ಟ್ ಸರಕಾರಿ ಆಸ್ಪತ್ರೆ ಗುಲಬರ್ಗಾ ಸಾ|| ಮನೆ ನಂ 125/2/ಸಿ/ಪಿಡಬ್ಲುಡಿ ಕ್ವಾಟರ್ಸ ಐವಾನ-ಇ-ಶಾಹಿ ಕಾಲೊನಿ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಇಬ್ಬರು ಸರಕಾರಿ ನೌಕರರಿದ್ದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು ನಮಗೆ ಒಂದೇ ಹೆಣ್ಣು ಮಗು ಇದ್ದು ಅವಳು ಮಧ್ಯಾನ 4.00 ಗಂಟೆಗೆ ಮನೆಗೆ ಶಾಲಯಿಂದ ಮನೆಗೆ ಬರುತಿದ್ದು ಅವಳ ಯೋಗಕ್ಷೇಮ ನೋಡಿಕೊಳ್ಳಲು ಕು. ಸುನೀತಾ ಎನ್ನುವವಳಿಗೆ ತಿಂಗಳಿಗೆ 400/- ರೂ ಸಂಬಳ ಕೊಡುತಿದ್ದು ಅವಳು ಸುಮಾರು 3 ವರ್ಷದಿಂದ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುತ್ತಾಳೆ. ದಿನಾಂಕ 21.10.2011 ರಂದು ನನ್ನ ಹೆಂಡತಿ ತನ್ನ ಕರ್ತವ್ಯ ಮುಗಿಸಿಕೊಂಡು ಸಂಜೆ 4.30 ಗಂಟೆಗೆ ಮನೆಗೆ ಬಂದು ಸುನೀತಾಳಿಗೆ ಕೊಡಬೇಕಾದ ಸಂಬಳ 400/- ರೂ ತೆಗೆದುಕೊಳ್ಳುವಂತೆ ಡೈನಿಂಗ್ ಟೇಬಲ್ ಮೇಲೆ ಇಟ್ಟು ಅಲ್ಲಿಂದ ನೇರವಾಗಿ ಬೆಡ್ ರೂಮಿಗೆ ಹೋಗಿ ಕೊರಳಲ್ಲಿಯ ಮಂಗಳಸೂತ್ರ ಮತ್ತು ಬಳೆ ಗಡಿಯಾರ ಅಲ್ಲಿಯೇ ಇಟ್ಟು ಮುಖ ತೊಳೆದುಕೊಳ್ಳಲು ಹೋಗುವಾಗ ಕು.ಸುನೀತಾಳಿಗೆ ಮಗುವಿಗೆ ಮ್ಯಾಗಿ ತಯ್ಯಾರ ಮಾಡು ಅಂತಾ ಹೇಳಿ ಒಳಗೆ ಹೋಗಿದ್ದು ಸುನೀತಾ ಇವಳು ಮ್ಯಾಗಿ ತಯ್ಯಾರಿಸಲು ಅಡುಗೆ ಮನೆಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಮನೆಯಲ್ಲಿ ಪ್ರವೇಶ ಮಾಡಿ ಡೈನಬಿಂಗ್ ಟೇಬಲ್ ಮೇಲೆ ಇಟ್ಟ 400/- ರೂ ಗಡಿಯಾರ ಹಾಗೂ ಬಂಗಾರದ ಬಳೆ, ಮಂಗಳಸೂತ್ರ ಒಟ್ಟು 5,1/2 ತೊಲೆ ಬಂಗಾರದವುಗಳು ಅ.ಕಿ. 1,50,000/- ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 189/11 ಕಲಂ 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಹಣಮಂತ ತಂದೆ ರಾಮಣ್ಣ ನವಲೇಕಾರ ಸಾ; ತಾಜಸುಲ್ತಾನಪೂರ ತಾ;ಜಿ;ಗುಲಬರ್ಗಾ ರವರು ನಾನು ದಿನಾಂಕ.24-10-2011 ರಂದು ಅಶೋಕ ಅಟ್ಟೂರ ಇವರ ಮನೆಯ ಎದರುಗಡೆ ಬರುತ್ತಿರುವಾಗ ಶರಣಪ್ಪಾ ಮದನಕರ , ಕೃಷ್ಣಾ ತಂದೆ ಶರಣಪ್ಪ ಮದನಕರ, ವಿಠಲ ತಂದೆ ಶರಣಪ್ಪ ಮದನಕರ ಸಾ: ತಾಜಸುಲ್ತಾನಪೂರ ರವರು ಅವ್ಯಾಚ್ಛ ಶಬ್ದಗಳಿಂದ ಬೈದು ಬಡಿಗೆಯಿಂದ ನನ್ನ ಬಲಗಾಲು ತೊಡೆಗೆ ಜೋರಾಗಿ ಹೋಡೆದಿರುತ್ತಾರೆ ವಿಠಲ ಇತನು ಬ್ಲೇಡ (ರೇಜರ) ದಿಂದ ನನ್ನ ಎದೆಯ ಮೇಲೆ ಹೊಡೆದನು ರಕ್ತ ಗಾಯ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 312/2011 ಕಲಂ. 341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮೇಹಿಬೂಬ ಅಲಂ ತಂದೆ ಮಹಮ್ಮದ ಹುಸೇನ ಖಾಜಿ ವಯಾ:45 ವರ್ಷ ಜಾ: ಮುಸ್ಲಿಂ ಉ: ಕಿರಾಣಿ ಅಂಗಡಿ ಸಾ: ತಾಜನಗರ ಗುಲಬರ್ಗಾ ನಾನು ರವರು ದಿನಾಂಕ, 24/10/2011 ರಂದು ಮದ್ಯಾಹ್ನ ಸುಮಾರಿಗೆ ಹುಮನಾಬಾದ ರಿಂಗ ರೋಡ ಮೇಲೆ ನನ್ನ ಮಗಳು ನಡೆದುಕೊಂಡು ಹೊರಟಾಗ ಹಿಂದಿನಿಂದ ಯಾವುದೊ ಒಂದು ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಅಲಕ್ಷತನ ದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಬಲಗಾಲಿಗೆ ಬಾರಿ ಗುಪ್ತಗಾಯ, ಬಲ ಮೇಲಕಿನ ಹತ್ತಿರ ಗುಪ್ತಗಾಯಗಳು ಪಡಿಸಿ ತನ್ನ ವಾಹನವನ್ನು ಹಾಗೇ ಒಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 313/11 ಕಲಂ 279 338 ಐಪಿಸಿ ಸಂ/ 187 ಐಎಂವಿ ಎಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅನಧಿಕೃತವಾಗಿ ಅಕ್ಕಿ ಸಾಗಾಣೆ ಮಾಡುತ್ತಿದ್ದ ಬಗ್ಗೆ :

ಫರಹತಾಬಾದ ಠಾಣೆ : ಶ್ರೀ ಎ.ಟಿ ಜಯಪ್ಪಾ ಉಪ ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಇಲಾಖೆ ಗುಲಬರ್ಗಾ ರವರು ನಾನು ಮತ್ತು ಸಿಬ್ಬಂದಿಯವರಾದ ವಿಜಯಾನಂದ, ಡಿ.ಬಿ ಪಾಟೀಲ, ರವಿ, ಹುಸೇನ ಭಾಷಾ ಇವರೊಂದಿಗೆ ಭಾತ್ಮಿ ಬಂದಿದ್ದ ಮೇರೆಗೆ ಹೋಗಿದ್ದು ಗುಲಬರ್ಗಾ – ಜೇವರ್ಗಿ ಹೆದ್ದಾರಿ ಮೇಲೆ ಫರಹತಾಬಾದ ಸಮೀಪ 7-00 ಪಿಎಮ್‌ಕ್ಕೆ ಲಾರಿ ನಂ: ಜಿಜೆ-25 ಟಿ- 5393 ನೇದ್ದನ್ನು ನಿಲ್ಲಿಸಿ ಚೆಕ್ ಮಾಡಲಾಗಿ ಚಾಲಕನ ಹೆಸರು ಕೃಷನಬಾಯಿ ತಂದೆ ಕಾನಾಬಾಯಿ ಸಾ: ರಾಸಾಬಾವು ತಾ:ಜಿ: ಪೂರಬಂದರ (ಗುಜರಾತ) ಅಂತಾ ತಿಳಿಸಿದ್ದು ಸದರಿ ಲಾರಿಯಲ್ಲಿ ಗುಲಬರ್ಗಾದ ಕೆ.ಎಮ್.ಜಿ ಟಾನ್ಸಪೋರ್ಟದಲ್ಲಿ 50 ಕೆ. ಜಿ ಯ 440 ಚೀಲಗಳ ಅಕ್ಕಿಯನ್ನು ಅಂದರೆ 220 ಕ್ವಿಂಟಾಲ ಪಡಿತರ ಅಕ್ಕಿಯ ಅ.ಕಿ. 2,06,800=00 ರೂ. ಯಾವುದೇ ದಾಖಲಾತಿ ಇಲ್ಲದೆ ಗುಲಬರ್ಗಾದಿಂದ ಜೇವರ್ಗಿ ಕಡೆಗೆ ಹೊರಟ್ಟಿದ್ದು ಅವುಗಳನ್ನು ಇಬ್ಬರ ಪಂಚರ ಸಮಕ್ಷಮದಲ್ಲಿ 7-30 ಪಿ.ಎಮ್‌ದಿಂದ 8-30 ಪಿಎಮ್‌ ದ ವರೆಗೆ ಪಂಚನಾಮೆ ಮಾಡಿಕೊಂಡು ಹೀಗೆ ಲಾರಿ ಸಮೇತ ಅ.ಕಿ. ಒಟ್ಟು 12,06,800=00 ರೂ. ನೇದ್ದು ಜಪ್ತಿ ಪಡಿಸಿಕೊಂಡಿಸಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 200/2011 ಕಲಂ 3 & 7 ಇ.ಸಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

24 October 2011

GULBARGA DIST REPORTED CRIME

ಹಲ್ಲೆ ಪ್ರಕರಣ:

ದೇವಲ ಗಾಣಗಾಪೂರ ಠಾಣೆ:ಶ್ರೀ ಮೌಲಾಲಿ ತಂದೆ ಖಾಜಾಮಿಯಾ ಹಾಜಿ ರವರು ನಾನು ಜೀಪ ಖರಿದಿ ಮಾಡಲು ರಶೀದ ತಂದೆ ಹುಸೇನ ಪಟೇಲ್ ಇತನಿಗೆ ಹಣ ಕೊಟ್ಟಿದ್ದು, ಹಣ ಕೊಡು ಅಂತಾ ಕೇಳಿದಾಗ ರಶೀದ ಮತ್ತು ಆತನ ಹೆಂಡತಿ ಮಗ ಕೂಡಿಕೊಂಡು ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ : 102/2011 ಕಲಂ.341,323,504,506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

GULBARGA DIST REPORTED CRIMES

ಜೂಜಾಟ ಪ್ರಕರಣ:
ಬ್ರಹ್ಮಪೂರ ಠಾಣೆ
: ಶ್ರೀ.ಶರಣಬಸವೇಶ್ವರ ಬಿ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ದಿನಾಂಕ: 23/10/2011 ರಂದು ಸಾಯಂಕಾಲ್ ಖಚಿತ ಬಾತ್ಮಿ ಮೇರೆಗೆ ಬಾಪೂನಗರ ಬಡಾವಣೆಯ ವಿಠಲ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಆಡುತತ್ಇದ್ದ ಸ್ಥಳಕ್ಕೆ ಸಿಬ್ಬಂದಿ ಜನರೊಂದಿಗೆ ಸ್ಥಳಕ್ಕೆ ಹೋಗಿ ಜ್ಯೋತಿಬಾ ತಂದೆ ಸುಭಾಶ ಜಾಧವ, ಸಾ|| ಐಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ, ಯಲ್ಲಾಲಿಂಗ ತಂದೆ ಭೀಮರಾವ ಸುತ್ತಾರ, ಸಾ|| ನಾಗನಹಳ್ಳಿ, ಬಸವರಾಜ ತಂದೆ ಸಿದ್ರಾಮಪ್ಪ ಶಿವಶಕ್ತಿ, ಸಾ|| ನಾಗನಹಳ್ಳಿ, ರಾಜಾಬಕ್ಷರ ತಂದೆ ಗುಡುಸಾಬ ನದಾಫ, ಸಾ|| ಗೌಡಗಾಂವ, ಪ್ರಭು ತಂದೆ ಸಿದ್ದಣ್ಣಾ ಪಾಟೀಲ, ಸಾ|| ಹನುಮಾನ ಗುಡಿಯ ಹತ್ತಿರ ಭವಾನಿ ನಗರ ಗುಲಬರ್ಗಾ, ಸುದೇಶ ತಂದೆ ರವಿದಾಸ ಉಪಾದ್ಯ, ಸಾ|| ಬಾಪೂನಗರ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 6125/-, 52 ಇಸ್ಪೇಟ ಎಲೆಗಳು, ಜಪ್ತ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:197/2011 ಕಲಂ: 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. 

ಹಲ್ಲೆ ಪ್ರಕರಣ:
ಬ್ರಹ್ಮಪೂರ ಠಾಣೆ
: ಶ್ರೀ.ಸಚಿನ ತಂದೆ ಶರಣಪ್ಪ ಸಜ್ಜನ ಸಾ|| ಬಾಪೂನಗರ ಗುಲಬರ್ಗಾ ರವರು ನಾನು ಲಿಂಗರಾಜ, ಬಾಬು, ಭರತ ನಾವೇಲ್ಲರೂ ಬಟ್ಟೆ ಖರೀದಿ ಗೋಸ್ಕರ ಮಾರ್ಕೆಟಿಗೆ ಹೋಗಿದ್ದು, ಅರುಣಕುಮಾರ ಶಹಾ ಆಸ್ಪತ್ರೆಯ ಎದುರುಗಡೆ ಭರತ ಇವನು ನನಗೆ ಯಾಕಲೆ ಮಗನೆ ಲೇಟ ಮಾಡಿ ಬಂದಿದ್ದಿಯಾ ಅಂತಾ ಹೊಡೆದಾಗ ನಾನು ಕೂಡ ಅವನಿಗೆ ಕಾಲಿನಿಂದ ಎದೆಯ ಮೇಲೆ ಹೊಡೆದಿದ್ದು ಇದರಿಂದ ಅವನು ಬೇಹುಶ ಆಗಿ ಕೆಳಗೆ ಬಿದ್ದಾಗ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಭರತನಿಗೆ ಮರಣ ಹೊಂದಿರುತ್ತಾನೆ ಅಂತಾ ಹೇಳಿದ್ದರಿಂದ ಅವನ ಸಂಬಂಧಿಕರಾದ ಲವ, ಕುಶ, ಚಿನ್ನೇಶ ಎಲ್ಲರೂ ಸಾ|| ಬಾಪೂನಗರ ಮೂರು ಜನರು ಕೂಡಿ ನಮ್ಮ ಭರತನಿಗೆ ಕೊಲೆ ಮಾಡಿದಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಕಾಲಿನಿಂದ, ಮೈಮೇಲೆ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 198/11 ಕಲಂ: 323, 504, 341, ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ಅಫಜಲಪೂರ ಪೊಲೀಸ್ ಠಾಣೆ :
ಗುರುಬಾಳಪ್ಪ ತಂದೆ ದುಂಡಪ್ಪ ನವಲಗಿರಿ ಸಾ|| ಆನೂರು ರವರು ಆನೂರು ಸರ್ಕಾರಿ ಶಾಲೆಯ ಕಾರ್ಯಾಲಯದ ಎರಡು ಕೀಲಿಗಳು ಮುರಿದು ಹೋದ ಬಗ್ಗೆ ನಮ್ಮ ಶಾಲೆಯ ಅಡುಗೆಯವರು ಮೊಬೈಲ ಮೂಲಕ ತಿಳಿಸಿದರು ಆವಾಗ ನಾನು ನಮ್ಮ ಸಹ ಶಿಕ್ಷಕರಾದ ವಿಶ್ವನಾಥ ಇಬ್ಬರೂ ಸೇರಿಕೊಂಡು ನೋಡಿದಾಗ ಒಳಗಡೆ ಇರುವ 1 ಸಮ್ ಸಂಗ ಕಲರ ಟಿ ವಿ, 1 ಸೈಕಲ್ ಅಂಧಾಜು ಕಿಮ್ಮತ್ತು 23,000/- ರೂ ಕಿಮ್ಮತ್ತಿನ ಮಾಲು ಯಾರೊ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 173/11 ಕಲಂ 457 380 ಐ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ವಿಶ್ವವಿದ್ಯಾಲಯ ಪೊಲೀಸ ಠಾಣೆ:
ಶ್ರೀ ಶ್ರೀಮಂತ ತಂದೆ ಭಗವಂತಪ್ಪ ಸೋಮಜಾಳ ಸಾ: ಸರ್ವೆ ನಂ 1/2 ಕುಸನೂರ ಗುಲಬರ್ಗಾ ರವರು ನಾನು  ದಿನಾಂಕ 23-10-2011 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಬ್ಲಾಕ ನಂ-4 ಉಪನ್ಯಾಸಕರ ಕೋಣೆ ನಂ-2 ರಲ್ಲಿ ಕೆ.ಎಸ.ಈ.ಟಿ ಪರೀಕ್ಷೆಯ ಪೇಪರ-1 ವಿದ್ಯಾರ್ಥಿಗಳಿಗೆ ನೀಡುತ್ತಾ ಮುಂದೆ ಸಾಗಿದೆ. ನೊಂದಣಿ ಸಂಖ್ಯೆ -16140052 ನೇದ್ದರ ವಿದ್ಯಾರ್ಥಿಯು ಗೈರು ಹಾಜರಾಗಿದ್ದು ಕಾರಣ ಸದರಿಯವರ ಟೇಬಲ ಮೇಲೆ ಬುಕಲೇಟ ಇಟ್ಟು ಮುಂದೆ ಸಾಗಿದೆ. ಅಷ್ಟರಲ್ಲಿ ನೊಂದಣಿ ಸಂಖ್ಯೆ ಹುಡುಕುತ್ತಾ ಬಂದಾಗ ಯಾರೂ ಒಬ್ಬ ವಿದ್ಯಾರ್ಥಿನಿ ಬಂದು ಟೇಬಲ ಮೇಲೆ ಇಟ್ಟಂತ ಬುಕಲೇಟ್ ಪೇಪರ -1 ತೆಗೆದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 241/11  ಕಲಂ 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.