POLICE BHAVAN KALABURAGI

POLICE BHAVAN KALABURAGI

03 September 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸೇಡಂ ಠಾಣೆ : ಶ್ರೀಮತಿ. ಶಾಂತಾಬಾತಿ ಗಂಡ ದಿ. ಶಾಮರಾವ ಹಂಗನಳ್ಳಿಕರ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುರುವಾರ ರವರು ನಮ್ಮ ಶಾಲೆಯ ವ್ಯಾಸಾಂಗ ಕೋಣೆಯ ಕೀಲಿ ಮುರಿದು ಕಟ್ಟಿಗೆ ಅಲಮಾರಿಯಿಂದ ಸಾಮಸ್ಯಾಂಗ ಕಲರ್ ಟೀವಿ 29 ಇಂಚ್ ಅಂ.ಕಿ. 18000/- ರೂಪಾಯಿ ನೇದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಹಲ್ಲೆ ಮಾಡಿ, ಮಾನಭಂಗಕ್ಕೆ ಪ್ರಯತ್ನ
ರಾಘವೇಂದ್ರ ನಗರ ಪೊಲೀಸ್ ಠಾಣೆ

ಫಿರ್ಯಾದಿ ಶ್ರೀಮತಿ ಶ್ರೀದೇವಿ ಗಂಡ ಶಿವಶರಣಪ್ಪ ಬೆಳಮಗಿ ರವರು ನಾನು ಸುಮಾರು 15 ದಿವಸಗಳ ಹಿಂದೆ ಯಂಕವ್ವನ ಮಾರ್ಕೆಟದಲ್ಲಿರುವ ಸಂಜು ಸೋನಾರ ಎಂಬುವವನ ಬಂಗಾರದ ಅಂಗಡಿಯಲ್ಲಿ ಬೆಳ್ಳಿಯ 9 ಹರಳು ಇದ್ದ ಬ್ರಾಸಲೆಟ್ ನಮೂನೆಯ ಕೈ ಮೇಲೆ ಕಟ್ಟಿಕೊಳ್ಳುವಗೋಸ್ಕರ ನನ್ನ ಮಗನ ಸಲುವಾಗಿ 5000/-ರೂ ರೂಪಾಯಿಗೆ ಖರಿದಿಸಿದ್ದು, ಅದನ್ನು ತನ್ನ ಮಗ ಕಟ್ಟಿಕೊಳ್ಳುವದಿಲ್ಲಾ ಅಂತ ಹೇಳಿದ್ದಕ್ಕೆ, ಮರಳಿ ದಿನಾಂಕ 02-09-2011 ರಂದು ಬೆಳಿಗ್ಗೆ ಬಂಗಾರದ ಅಂಗಡಿಯ ಸಂಜು ಈತನಿಗೆ ಬೆಳ್ಳಿಯ ಬ್ರಾಸಲೆಟ್ ಮರಳಿ ಕೊಡಲು ಹೋದಾಗ, ಅವಾಚ್ಯವಾಗಿ ಬೈದು ಕೈ ಮುಷ್ಠಿ ಮಾಡಿ ಬಾಯಿ ಮೇಲೆ ಹೊಡೆದದ್ದರಿಂದ ಮೇಲಿನ ತುಟಿ ಒಡೆದು ರಕ್ತ ಸೋರುತ್ತಿದ್ದು, ಸದರಿ ಫಿರ್ಯಾದಿದಾರಳಿಗೆ ಕೈ ಹಿಡಿದು ಎಳೆದಾಡಿ ಮಾನಭಂಗ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರಕರಣ :
ಆಳಂದ ಪೊಲೀಸ ಠಾಣೆ:
ದಿನಾಂಕ; 02-09-2011 ರಂದು ಮಧ್ಯಾಹ್ನ ದರ್ಗಾ ಬೇಸದಲ್ಲಿ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಪಿಐ ಆಳಂ ಮತ್ತು ಸಿಬ್ಬಂದಿಯವರು ಕೂಡಿಕೊಂಡು ಮಲ್ಲಪ್ಪಾ ತಂದೆ ತಿಪ್ಪಣ್ಣ ಇತನನ್ನು ವಶಕ್ಕೆ ತೆಗೆದುಕೊಂಡು ನೋಡಲಾಗಿ 1 ರೂ ಗೆ 80 ರೂ ಬರುತ್ತದೆ ಅಂತಾ ಜನರಿಗೆ ಮೋಸ ಮಾಡುತ್ತಾ ಚೀಟಿಗಳನ್ನು ಬರೆದುಕೊಂಡಿದ್ದವುಗಳನ್ನು ವಶಪಡಿಸಿ ನಗದು ಹಣ 400-0 ರೂ ಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣ :
ರೋಜಾ ಪೊಲೀಸ್ ಠಾಣೆ :
ಶ್ರೀ ಮಹಿಬೂಬ ಶಹಾ ತಂದೆ ಮಹ್ಮದ ಶಹಾ ಸಾ:ಡಂಕಾಕ್ರಾಸ್ ಗುಲಬರ್ಗಾ ರವರು ನಾನು ಸಡಿ ಪಾಯನ ಗಲ್ಲಿ ರೋಡಿನ ಬದಿಯಲ್ಲಿ ಅಟೋ ನಂ ಕೆಎ 32 ಎ 856 ಅ.ಕಿ 80000/-ರೂಪಾಯಿ ನೇದ್ದನ್ನು ನಿಲ್ಲಿಸಿ ಹೋಟೆಲ್ ದಲ್ಲಿ ಚಹಾ ಕುಡಿದುಕೊಂಡು ಮರಳಿ ಬಂದು ನೋಡಲು ಯಾರೋ ಕಳ್ಳರು ನನ್ನ ಆಟೋ ಕಳವು ಮಾಡಿಕೊಂಡು ಹೋಗಿದ್ದು ಈ ವಿಷಯ 10:00 ಪಿಎಮ್ ಕ್ಕೆ ರೋಜಾ ಠಾಣೆಯಲ್ಲಿ ಮೌಖಿಕವಾಗಿ ತಿಳಿಸಿ 11:45 ಗಂಟೆಗೆ ಆಟೋ ಹುಡುಕಾಡುತ್ತ ಡಂಕಾಕ್ರಾಸ್ ಹತ್ತಿರ ಬಂದು ನಿಂತಾಗ ಕಳುವಾದ ನನ್ನ ಆಟೋ ಒಬ್ಬನು ತೆಗೆದುಕೊಂಡು ಹೋಗುತ್ತಿದ್ದು ಬೆನ್ನು ಹತ್ತಿ ಹಿಡಿದುಕೊಳ್ಳುವಷ್ಟರಲ್ಲಿ ಕಳುವು ಮಾಡಿದ ಕಳ್ಳ ಆಟೋದಿಂದ ಓಡಿಹೋಗಲು ಯತ್ನಿಸಿದಾಗ ಆಟೋದ ರಾಡ್ ತಲೆಗೆ ಬಡೆದು ಮತ್ತು ರೋಡಿನ ಮೇಲೆ ಬೋರಲಾಗಿ ಬಿದ್ದು ರಕ್ತಗಾಯ ಮಾಡಿಕೊಂಡಿರುತ್ತಾನೆ. ಕಳವು ಮಾಡಿದ ವ್ಯಕ್ತಿಯ ಹೆಸರು ಅಯ್ಯುಬ ತಂದೆ ಖಾಜಾಸಾಬ ಅಂತಾ ಹೆಸರು ಗೊತ್ತಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಜಭರಿ ಸಂಭೋಗ :

ವಾಡಿ ಠಾಣೆ:ಶ್ರೀಮತಿ ಸಾವಿತ್ರ ಗಂಡ ಸುರೇಶ ಕೋಂಡಯ್ಯ ಸಾ|| ಇಂಗಳಗಿ ಗ್ರಾಮ ರವರು ನಾನು ನನ್ನ ಗ್ರಾಮದ ಮಲ್ಲು ತಂದೆ ಹಣಮಂತ ನಾಲವಾರ ಇತನ ಹತ್ತಿರ ಖಣಿ ಕೆಲಸಕ್ಕೆ ಹೋಗುತ್ತಿದ್ದು ಆತನ ಸ್ನೇಹ ಬೆಳೆದು ಆತನು ಸಲುಗೆಯಿಂದ ಮಾತನಾಡಿ ನಿನ್ನನ್ನು ಪ್ರತಿ ಮಾಡುತ್ತೆನೆ ಅಂತಾ ಹೇಳಿ ನಂಬಿಸಿ ಖಣಿ ಕೆಲಸಕ್ಕೆ ಹೋದಾಗ ಜಭ ರಿ ಸಂಭೋಗ ಮಾಡಿರುತ್ತಾನೆ. ನಂತರ ಒಂದು ವರ್ಷದ ಹಿಂದೆ ಹಲಕಟ್ಟಾ ಗ್ರಾಮದ ಸುರೇಶ ಇತನೊಂದಿಗೆ ಮದುವೆ ಮಾಡಿದ್ದು. ನನ್ನ ಗಂಡನು ಸಂಶಯ ಬಂದು ನನಗೆ ತವರು ಮನೆಗೆ ಕಳುಹಿಸಿ ಕೊಟ್ಟಿದ್ದು , ಇಂಗಳಗಿ ಗ್ರಾಮದಲ್ಲಿರುವ ಗಿರಿ ಪವಾರ ಸ್ಟೋನ ಪಾಲಿಶ ಮಶಿನದ ಕಟ್ಟಡದ ಮೇಲೆ ಕರೆದುಕೊಂಡು ಹೋಗಿ ಮಲ್ಲು ಇತನು ಬಾಯಿ ಒತ್ತಿ ಹಿಡಿದು ಅಂಜಿಕೆ ಹಾಕಿ ಜಬದಿ ಸಂಭೋಗ ಮಾಡಿರುತ್ತಾನೆ. ಇತನಿಗೆ ತಂದೆಯಾದ ಹಣಮಂತ, ತಾಯಿಯಾದ ದುರ್ಗಮ್ಮ, ಹಾಗು ಅಣ್ಣ ಅಯ್ಯಣ್ನ ಇವರ ಪ್ರಚೋದನೆ ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ

02 September 2011

GULBARGA DIST REPORTED CRIMES

ಹಲ್ಲೆ ಪ್ರಕರಣ :
ಕಮಲಾಪೂರ ಪೊಲೀಸ ಠಾಣೆ :
ಪುಷ್ಪರಾಜ ತಂದೆ ಕರಬಸಪ್ಪಾ ಪಾಟೀಲ ಸಾಃ ಡೊಂಗರಗಾಂವ ರವರು ನಾನು ನಿನ್ನೆ ಮಧ್ಯಾಹ್ನ ನಾನು, ನನ್ನ ಮಗ ಕುಮಾರ ಮತ್ತು ಆಳು ಮಗ ರಾಜಪ್ಪ ತಂದೆ ಜಗನ್ನಾಥ ಕಲ್ಲೂರ ನಮ್ಮ ಮನೆಯ ಮುಂದೆ ಕುಳಿತ್ತಿದ್ದಾಗ ನಮ್ಮ ಮನೆಯ ಪಕ್ಕದವರಾದ ಕಾಶಪ್ಪಾ ತಂದೆ ರಾಚಪ್ಪ ಮತ್ತು ಆತನ ಮಕ್ಕಳು ಕೂಡಿಕೊಂಡು ನಮ್ಮ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಹೆಸರು ಬೆಳೆ ತಂದು ಹಾಕಿದ್ದು ನಾನು ನನ್ನ ಮಗ ಕುಮಾರ ಇಬ್ಬರು ಕೂಡಿ ಅವರಿಗೆ ಹೆಸರು ಬೆಳೆ ಹಾಕಬೇಡ ಅಂತಾ ಹೇಳಿದಕ್ಕೆ ತಕರಾರು ಮಾಡಿರುತ್ತಾರೆ ನನ್ನ ತಮ್ಮ ಮಹೇಶ ಪಾಟೇಲ ಇತನೊಂದಿಗೆ ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದಾಗ ರಾತ್ರಿ ಕಾಶಪ್ಪ ತಂದೆ ರಾಚಪ್ಪಾ ಪಾಟೀಲ ಮತ್ತು ಆತನ ಮಕ್ಕಳಾದ ರಾಚಪ್ಪ ತಂದೆ ಕಾಶಪ್ಪಾ, ವಿಜಯಕುಮಾರ ತಂದೆ ಕಾಶಪ್ಪಾ ಎಲ್ಲರೂ ಕೂಡಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಕಮಲಾಪೂರ ಪೊಲೀಸ ಠಾಣೆ :
ಶ್ರೀ ರಾಚಪ್ಪಾ ತಂದೆ ಕಾಶಪ್ಪಾ ಪೂಲೀಸ ಪಾಟೀಲ ಸಾ:ಡೊಂಗರಗಾಂವ ತಾಃಗುಲಬರ್ಗಾ ನಾನು ನನ್ನ ತಂದೆ ಕಾಶಪ್ಪಾ ತಮ್ಮ ವಿಜಯಕುಮಾರ ಎಲ್ಲರೂ ಮನೆಯಲ್ಲಿ ಊಟ ಮಾಡುತ್ತಾ ಕುಳಿತಾಗ ಪುಷ್ಪರಾಜ ತಂದೆ ಕರಬಸಪ್ಪಾ ರವೀಂದ್ರ ತಂದೆ ಕರಬಸಪ್ಪಾ ಮಹೇಶ ತಂದೆ ಕರಬಸಪ್ಪಾ ಕುಮಾರ ತಂದೆ ಪುಷ್ಪರಾಜ ರಾಜಪ್ಪಾ ತಂದೆ ಜಗನ್ನಾಥ ಕಲ್ಲೂರ ಅಂಬ್ರೇಶ ತಂದೆ ಭೀಮಶ್ಯಾ ಪಂಡಿತ ತಂದೆ ಶರಣಪ್ಪಾ ರೇವಪ್ಪಾ ತಂದೆ ಗೌಡಪ್ಪಾ ರಾಂಪೂರೆ ರೇವಣಸಿದ್ದಪ್ಪಾ ತಂದೆ ಸಿದ್ರಾಮಪ್ಪಾ ರಾಂಪೂರೆ 1ಹೊನ್ನಪ್ಪಾ ತಂದೆ ಶರಣಪ್ಪಾ ಎಲ್ಲರೂ ಗುಂಪು ಕಟ್ಟಿಕೊಂಡು ಬಂದು ನಮ್ಮ ಮನೆಯ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಅವಾಚ್ಯವಾಗಿ ಬೈದು ಬಡಿಗೆಯಿಂದ, ಕಬ್ಬಿಣದ ಸಲಾಯಿಕೆಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 


 


 


 

GULBARGA DIST REPORTED CRIME

ನಗರದಲ್ಲಿ ಹಲವಾರು ದರೊಡೆ, ಕೊಲೆ ಪ್ರಯತ್ನ, ಹಲ್ಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ರೌಡಿ ಛೋಟ್ಯಾ ಬಂದನ :

ಗ್ರಾಮೀಣ ಠಾಣೆ : ಶ್ರೀ. ಚಂದ್ರಶೇಖರ ಬಿ.ಪಿ. ಸರ್ಕಲ್ ಇನ್ಸಪೆಕ್ಟರ ಎಂ.ಬಿ. ನಗರ ವೃತ್ತ ಗುಲಬರ್ಗಾ ರವರು ಸರಕಾರಿ ತರ್ಫೇಯಿಂದ ಫಿರ್ಯಾದಿಯಾಗಿ ಅರ್ಜಿ ಸಲ್ಲಿಸಿದ್ದೆನೆಂದರೆ, ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಕೊಠಾರಿ ಭವನ ಮುಂದೆ ಜೇವರ್ಗಿ ಸರ್ಕಲ ಪೆಟ್ರೊಲ್ ಪಂಪ ಹತ್ತಿರ ಛೋಟ್ಯಾ ಊರ್ಫ ಪ್ರಿಯದರ್ಶನ ಸಾ: ಪಂಚಶೀಲ ನಗರ ಗುಲಬರ್ಗಾ ಮತ್ತು ಆತನ ಸಹಚರರು ಹಣ ಹಾಗೂ ಬಂಗಾರದ ಒಡವೆ ದೋಚಿಕೊಂಡು ಮತ್ತು ಒಂದು ಮೋಟಾರ ಸೈಕಲದೊಂದಿಗೆ ಪರಾರಿಯಾಗಿರುತ್ತಾರೆ ಅಂತಾ ಕಂಟ್ರೋಲ ರೂಮದಿಂದ ಮಾಹಿತಿ ಬಂದಿರುತ್ತದೆ. ಹಾಗು ಮಾನ್ಯ ಎಸ್.ಪಿ.ಸಾಹೇಬರು ದೂರವಾಣಿ ಆದೇಶದ ಮೇರೆಗೆ ನಾನು ಮತ್ತು ಪಿ.ಎಸ್.ಐ. ವಿಶ್ವವಿದ್ಯಾಲಯ ಠಾಣೆಯ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಆರೋಪಿತರನ್ನು ಪತ್ತೆ ಮಾಡಿರಿ ಅಂತಾ ಆದೇಶಸಿದ ಪ್ರಕಾರ ನಾನು ಹಾಗೂ ಪಿ.ಎಸ್.ಐ. ಪಂಡಿತ ಸಗರ ವಿಶ್ವ ವಿದ್ಯಾಲಯ ಠಾಣೆಯ ಸಿಬ್ಬಂದಿಯವರಾದ ಮನೋಹರ ಗ್ರಾಮೀಣ ಠಾಣೆ, ಮೋಹನ, ರುದ್ರಗೌಡ, ಹಾಗೂ ಅಶೋಕ ನಗರ ಠಾಣೆಯ ಬಸವರಾಜ, ರಫೀಕ ಹಾಗೂ ಎಂ.ಬಿ. ನಗರ ಠಾಣೆಯ ಪ್ರಭಾಕರ ಪಿಸಿ ರವರೊಂದಿಗೆ ಆರೋಪಿತರ ಪತ್ತೆಗಾಗಿ ಪೆಟ್ರೊಲಿಂಗ ಮಾಡುತ್ತಾ ಶರಣ ಶಿರಸಗಿ ಹತ್ತಿರ ಹೋಗಿರಬಹುದೆಂದು ಸಂಶಯ ಮೇರೆಗೆ ಹೋದಾಗ ಶರಣ ಶಿರಸಗಿ ಗ್ರಾಮದ ಹತ್ತಿರ ಸುಣ್ಣದ ಬಟ್ಟಿ ಹತ್ತಿರ ಇರುವ ಗುಂಪಾದಲ್ಲಿ ಶರಣಪ್ಪ ಸಗರ ಇತನು ಆರೋಪಿ ಛೊಟ್ಯಾ ಊರ್ಫ ಆನಂದ ಊರ್ಪ ಪ್ರಿಯದರ್ಶನ ಇತನ ಸಹಚರರನ್ನು ಆಶ್ರಯ ಕೊಟ್ಟಿದ್ದರ ಬಗ್ಗೆ ತಿಳಿದು ಬಂದಿದ್ದು ಅಲ್ಲದೆ ಆರೋಪಿತನು ಸುಲಿಗೆ ಮಾಡಿಕೊಂಡು ಬಂದ ಹೊಂಡಾ ಎಕ್ಟೀವ್ ಕೆಎ 32 ಎಕ್ಷ 8038 ನೇದ್ದು ಗುಂಪಾದ ಹೊರೆಗೆ ನಿಲ್ಲಿಸಿದ್ದನ್ನು ನೋಡಿ ಆರೋಪಿತರು ಒಳಗೆ ಗುಂಪಾದಲ್ಲಿ ಇರುವ ಬಗ್ಗೆ ಸಂಶಯಗೊಂಡು ಅವರನ್ನು ದಸ್ತಗಿರಿ ಮಾಡಲು ಹೋಗುವ ಕಾಲಕ್ಕೆ ಗುಂಪಾದಿಂದ ಛೋಟ್ಯಾ ಹಾಗೂ ಇತರೆ ಸಹಚರರು ಒಮ್ಮೇಲೆ ಹೊರೆಗೆ ಬಂದು ದಸ್ತಗಿರಿ ಮಾಡಲು ನಿಂತಿದ್ದ ನನ್ನ ಹಾಗೂ ಪಿ.ಎಸ್.ಐ. ಪಂಡಿತ ವಿಶ್ವ ವಿದ್ಯಾಲಯ ಠಾಣೆ ಮತ್ತು ಸಿಬ್ಬಂದಿಯವರ ಮೇಲೆ ಛೋಟ್ಯಾ ಹಾಗೂ ಆತನ ಸಂಗಡವಿದ್ದ 3 ಜನ ಸಹಚರರು ತಮ್ಮ ಕೈಯಲ್ಲಿದ್ದ ಹರಿತವಾದ ತಲವಾರಗಳಿಂದ ನನಗೆ ಹಾಗೂ ಪಿ.ಎಸ್.ಐ. ಪಂಡಿತ ಮತ್ತು ಮನೋಹರ ಹೆಚ.ಸಿ ಗೆ ತಲವಾರ ದಿಂದ ಹೊಡೆಯುವ ಕಾಲಕ್ಕೆ ನಾವು ಸದರಿ ಹೆಚಸಿ ಮನೋಹರ ರವರನ್ನು ರಕ್ಷಿಸಿದೆವು. ಸದರಿ ಆರೋಪಿತರು ಪುನ: ಮುಂದುವರೆದು ಛೋಟ್ಯಾ ಹಾಗೂ ಆತನ ಸಹಚರರು ನಮ್ಮ ಮೇಲೆ ದಾಳಿ ಮಾಡಲು ಬಂದಾಗ ನನ್ನ ಹಾಗೂ ಪಿ.ಎಸ್.ಐ. ಮತ್ತು ಸಿಬ್ಬಂದಿಯವರ ಆತ್ಮ ರಕ್ಷಣೆಗಾಗಿ ನನ್ನಲ್ಲಿದ್ದ ಸರ್ವಿಸ ಪಿಸ್ತೂಲದಿಂದ ಗಾಳಿಯಲ್ಲಿ ಹಾಗೂ ನೆಲದ ಕಡೆಗೆ 3 ಸುತ್ತು ಗುಂಡು ಹಾರಿಸಿದೆನು. ಆಗ ಸದರಿ ಛೋಟ್ಯಾ ಊರ್ಫ ಆನಂದ ಊರ್ಫ ಪ್ರಿಯದರ್ಶನ ಇತನು ತಪ್ಪಿಸಿಕೊಂಡು ಕತ್ತಲಲ್ಲಿ ಓಡಿ ಹೋದೆನು. ಉಳಿದ ಮೂರು ಜನ ಆರೋಪಿತರನ್ನು ಹಿಡಿದುಕೊಂಡು ಅವರ ಹೆಸರು ಹಾಗೂ ವಿಳಾಸ ವಿಚಾರಿಸಲಾಗಿ ರವಿ ತಂದೆ ಮಾರುತಿ ಗಾರನ ವಯ : 27 ವರ್ಷ ಜಾತಿ ಕಬ್ಬಲಿಗೇರ ಉ:ಗೌಂಡಿ ಕೆಲಸ ಸಾ: ಬೆಂಗಳೂರ ಹಾ:ವಸ್ತಿ ಐನಾಪೂರ ತಾ: ಚಿಂಚೋಳಿ ಸಧ್ಯ ಶರಣ ಶಿರಸಗಿ, ಯಲ್ಲಾಲಿಂಗ ತಂದೆ ಮಾರುತಿ ಅಣ್ಣಿಗೇರ ವಯ :19 ವರ್ಷ ಜಾ: ಬೇಡರ ಉ:ಸೆಂಟ್ರಿಂಗ ಕೆಲಸ ಸಾ: ಶರಣ ಶಿರಸಗಿ ತಾ:ಜಿ: ಗುಲಬರ್ಗಾ, ಸುನೀಲ ತಂದೆ ಮಲ್ಲಿಕಾರ್ಜುನ ವಯ:19 ವರ್ಷ ಜಾತಿ ಹರಿಜನ ಉ:ಗೌಂಡಿ ಕೆಲಸ ಸಾ: ಚಿಮ್ಮು ಇದಲಾಯಿ ತಾ: ಚಿಂಚೋಳಿ ಹಾ:ವ|| ಪಂಚಶೀಲ ನಗರ ಗುಲಬರ್ಗಾ ಅಂತಾ ಹೇಳಿದರು, ಸದರಿ ಅರೋಪಿತರು ಛೊಟ್ಯಾ ಊರ್ಫ ಆನಂದ ಊರ್ಫ ಪ್ರಿಯದರ್ಶನ ಗಾಯಕವಾಡ ಮತ್ತು ಆತನ ಸಹಚರರು ನಮ್ಮ ಸಿಬ್ಬಂದಿ ಜನರ ಮೇಲೆ ಹಾಗೂ ನನ್ನ ಮೇಲೆ ತಲವಾರದಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಅರೋಪಿತರನ್ನು ಮತ್ತು ತಲವಾರಗಳು, ಹಾಗೂ ಹೊಂಡಾ ಎಕ್ಟೀವ ಕೆ.ಎ.32 ಎಕ್ಸ.8038 ಮತ್ತು 3 ಮೋಬಾಯಿಲಗಳು ವರದಿಯೊಂದಿಗೆ ಹಾಜರು ಪಡಿಸಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.