POLICE BHAVAN KALABURAGI

POLICE BHAVAN KALABURAGI

30 August 2011

GULBARGA DIST REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀ ಮತಿ ಶರಣಮ್ಮ  ಗಂಡ ಅರ್ಜುನ ಭೀಮನಳ್ಳಿ ಸಾ: ಗುಲಾಬ ವಾಡಿ ಗುಲಬರ್ಗಾ ರವರು ನಾನು ಕೆ.ಬಿ.ಎನ್ ಕಾಂಪ್ಲೇಕ್ಸದಲ್ಲಿರುವ ಪ್ರೀನ್ಸ ಪೂಟವೇರ ಅಂಗಡಿ ಎದುರುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಕೆಎ 32 ಕೆ 4430 ನೇದ್ದರ ಮೋಟಾರ ಸೈಕಲ್ ಚಾಲಕ ಲಕ್ಷ್ಮಿಕಾಂತ ತಂದೆ ಮಾನಪ್ಪಾ ಇತನು ಅಲಕ್ಷತನದಿಂದ ನಡೆಯಿಸಿ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ :

ಫರಹತಾಬಾದ ಠಾಣೆ : ಶ್ರೀ ಕೃಷ್ಣಕುಮಾರ ಅಧೀಕ್ಷಕರು ಕೇಂದ್ರ ಕಾರಾಗೃಹ ಗುಲಬರ್ಗಾ ರವರು ನಮ್ಮ ಕಾರಾಗೃಹ ದಲ್ಲಿ ಮೃತ ಮಲ್ಲಿಕಾರ್ಜುನ ತಂದೆ ಸಾಯಪ್ಪಾ ಅಗಸರ ಸಾ: ಬಟಗೇರ (ಕೆ) ತಾ: ಸೇಡಂ ಈತನು ಸೇಡಂ ಪೊಲೀಸ್ ಠಾಣೆ ಗುನ್ನೆ ನಂ: 149/2011 ನೇದ್ದರ ಪ್ರಕರಣದಲ್ಲಿ ಆರೋಪಿತನಿರುವದರಿಂದ ದಸ್ತಗಿರಿ ಮಾಡಿ ನ್ಯಾಯಾಂಗಕ್ಕೆ ಕೊಟ್ಟು ಕಳುಹಿಸಿದ್ದು, ದಿನಾಂಕ: 28/8/2011 ರಂದು   ಕೇಂದ್ರ ಕಾರಾಗೃಹದಲ್ಲಿ ಸಾಯಂಕಾಲ 6-10 ಗಂಟೆಗೆ ವಿಚಾರಣಾ ಬಂಧೀ ಸಂಖ್ಯೆ 10477 ರಲ್ಲಿ ಸೇರಿಕೆಯಾಗಿದ್ದು,   ಮಲ್ಲಿಕಾರ್ಜುನ ಇತನು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳು ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಅಂದೇ ದಿನಾಂಕ: 28-8-2011 ರಂದು ರಾತ್ರಿ ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದು, ಸದರಿಯವನು ಉಪಚಾರ ಹೊಂದುತ್ತಾ ದಿನಾಂಕ: 29-8-2011 ರಂದು ಬೆಳಗ್ಗೆ 10-40 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸ ಪ್ರಕರಣ:

ಮಳಖೇಡ ಠಾಣೆ : ಶೇಖರ ತಂದೆ ಸಂಗಯ್ಯಾ ಜಂಗಮ್ ಸಾ: ಸತಗುರು ಕ್ಯಾರಿಯರ್ಸ ಆದೀತ್ಯ  ನಗರ ಮಳಖೇಡ ರವರು ನಾನು ಪ್ರತಿದಿನ ಲಾರಿಗಳಲ್ಲಿ ಸಿಮೆಟ್ ಲೋಡ್ ಮಾಡಿ ಬೇರೆ ಬೇರೆ ಕಡೆಗೆ ಕಳುಹಿಸಿತ್ತಿದ್ದು ಅದರಂತೆ ದಿ: 12-08-2011 ರಂದು 4 ಲಾರಿಗಳ ನಂ, ಎ.ಪಿ.ನಂ, 16-ಎಕ್ಸ್ 9986. 02] ಎ.ಪಿ. 12-ಯು.6962. 03]  ಎ.ಪಿ. 26. ಎಕ್ಸ್ -6872. 04] ಎ.ಪಿ. 22. ವ್ಹಿ -4309. ನೇದ್ದು ಕಳುಸಿದ್ದು, ದಿನಾಂಕ 13-08.2011. ರಂದು  ಎ.ಪಿ. 12 ಯು. 8586. ನೇದ್ದನ್ನು ಸಹ ಸದರಿ ವಿಳಾಸಕ್ಕೆ  ಕಳುಹಿಸಿದ್ದು  ನಂತರ ದಿನಾಂಕ  15-08-2011.ರಂದು ಲಾರಿ ನಂ, ಎ.ಪಿ. 12-ವ್ಹಿ.1512. ನೇದ್ದು ಕಳಿಸಿದ್ದು ಅದು ಸಹ ಸಿಮೆಂಟ್ ಲೋಡ ಮಾಡಿ  ಒಟ್ಟು 06. ಲಾರಿಗಳಲ್ಲಿ ಪ್ರತಿ ಲಾರಿಯಲ್ಲಿ 340. ಚೀಲದಂತೆ ಒಟ್ಟು 2040. ಚೀಲ ಸಿಮಂಟ್ ಒಟ್ಟು ಅಂದಾಜು ಕಿಮ್ಮತ್ತು 5.63.040=00 ರೂಗಳು. ನೇದ್ದರ ಸಿಮೇಂಟನ್ನು  M/S UTCL FALAKHNAMA Shivaramapally. ವಿಳಾಸಕ್ಕೆ ಸಿಮೆಂಟ್ ಖಾಲಿ ಮಾಡಲು ತಿಳಿಸಿ ಟಪಾಲ ಕೊಟ್ಟು ಕಳುಹಿಸಿದೆವು. ಆದರೆ ಸಿಮೆಂಟ್ ಲೋಡ ಮಾಡಿಸಿದ ಏಜೆಂಟ್ ಗೀರಿಧರ ಪಿ.ಆರ್, ಮತ್ತು ಲಾರಿ ನಂ, 01] ಎ.ಪಿ. 16. ಎಕ್ಸ್ 9986. ನೇದ್ದರ ಚಾಲಕ ರಫೀ ಮತ್ತು ಲಾರಿ ಮಾಲಕ ವೆಲು ಕೊಂಡಲ ಸಾ: ಗಗನ ಪವಾಡ 02] ಎ.ಪಿ. 12.ಯು.6962. ನೇದ್ದರ ಚಾಲಕ ಮೀನಾಜ ತಂದೆ ಲಾರಿ ಮಾಲಿಕ ಹುಸೇನ್ ಸಾ: ಕೀಶನ್ ಭಾಗ  03] ಎ.ಪಿ. 26. ಏಕ್ಸ್ -6872 ನೇದ್ದರ ಚಾಲಕ ರಫೀಕ ಮತ್ತು ಲಾರಿ ಮಾಲಿಕ ಮಹ್ಮದ ಮೌಲಾನಾ ಸಾ: ಕೀಶನ್ ಬಾಗ್  04] ಎ.ಪಿ. -22. ವ್ಹಿ 4309. ನೇದ್ದರ ಲಾರಿ ಚಾಲಕ ಇರ್ಸಾಧ ಮತ್ತು ಲಾರಿ ಮಾಲಿಕ ಹುಸೇನ ಖಾದರಿ  ಸಾ: ಎ.ಬಿ. ನಗರ  05] ಎ.ಪಿ. 12. ಯು, 8586 ನೇದ್ದರ ಲಾರಿ ಚಾಲಕ ಸುಧಾಕರ್ ಮತ್ತು ಲಾರಿ ಮಾಲಿಕ ಖಾಜಾಮೀಯಾ ಸಾ: ಕಿಶನ್ ಭಾಗ  06] ಎ.ಪಿ. 12. ವ್ಹಿ 1512 ನೇದ್ದರ ಲಾರಿ ಚಾಲಕ  ರಜಾಕ ಮತ್ತು ಲಾರಿ ಮಾಲಿಕ ಅಬ್ದುಲ್ ಗನಿ ಸಾ: ರಾಜೇಂದ್ರ ನಗರ ಇವರಲ್ಲರೂ ಕೂಡಿ ನಾನು ನಂಬಿಕೆಯ ಮೇಲೆ ಲೋಡ್ ಮಾಡಿ ಕಳಿಸಿದ ಸಿಮೆಂಟ್ M/S UTCL FALAKHNAMA Shivaramapally. ವಿಳಾಸಕ್ಕೆ ಸಿಮೆಂಟ್ ಮುಟ್ಟಿಸದೆ ಬೇರೆ ಕಡೆಗೆ ಸಾಗಿಸಿ ಲಾರಿ ಚಾಲಕರು ಮತ್ತು ಮಾಲಿಕರು  ಹಾಗೂ ಏಜೆಂಟ್  ಗೀರಿಧರ ಪಿ.ಆರ್ ಇವರು ಕೂಡಿ ಕೊಂಡು ನಮಗೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುತ್ತಾರೆ,  ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 August 2011

GULBARGA DIST REPORTED CRIMES

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ನರ್ಸಿಂಗ   ತಂದೆ ರಾಮಯ್ಯ  ಸಾ: ಭವಾನಿ ನಗರ ಮುಕ್ತಾಂಪೂರ  ಗುಲಬರ್ಗಾ    ರವರು ನಾನು ದಿನಾಂಕ: 28-08-2011 ರಂದು ಸಾಯಂಕಾಲ ಸುಮಾರಿಗೆ ಪಟೇಲ ಸರ್ಕಲ್ ದಿಂದ ಕೆಎ 32 ಬಿ 3986 ನೇದ್ದರ ಅಟೋರೀಕ್ಷಾ ದಲ್ಲಿ ಕುಳಿತು ಸುಪರ ಮಾರ್ಕೆಟ ಕಡೆ ಹೋಗುತ್ತಿದ್ದಾಗ ಲಾಹೋಟಿ ಕ್ರಾಸ್ ಹತ್ತಿರ  ಕಾರ ನಂ: ಕೆಎ 33 ಎಮ್ 1222 ನೇದ್ದರ ಚಾಲಕ ಲಾಹೋಟಿ ಕ್ರಾಸ್ ದಲ್ಲಿ ಖುಬಾ ಕಲ್ಯಾಣ ಮಂಟಪ ಕಡೆ ತಿರುಗಿಸಿಕೊಂಡು ಹೋಗುತಿದ್ದಾಗ, ಅಟೋ ಚಾಲಕ ತನ್ನ ಅಟೋವನ್ನು ಅಲಕ್ಷತನದಿಂದ ನಡೆಯಿಸಿ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿ ಗಾಯಗೊಳಿಸಿ ಅಟೋ ಚಾಲಕ ಓಡಿ ಹೋಗಿರುತ್ತಾನೆ ಅಂತ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.

ಅಪಘಾತ ಪ್ರಕರಣ:                                               

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ರಾಜಶೇಖರ   ತಂದೆ ಧೂಳಪ್ಪ ಗುಡ್ಡ  ಸಾ|| ಕರುಣೇಶ್ವರ ನಗರ  ಗುಲಬರ್ಗಾ ರವರು ನನಗೆ ವಿಜಯರೆಡ್ಡಿ ಈತನು  ಫೋನಮಾಡಿ ನಾನು ಮತ್ತು ನನ್ನ ಗೆಳೆಯ ಸಂತೋಷ ಕುಲಕರ್ಣಿ ಇಬ್ಬರು ಜೇವರ್ಗಿ ರೋಡಿನಲ್ಲಿ ಬರುವ ಜೆ.ಸಿ.ಬಿ.ಷೋ ರೂಮ ಹತ್ತಿರ ಮಾತನಾಡುತ್ತಾ ನಿಂತಾಗ ಅಟೋರೀಕ್ಷಾ ನಂ: ಕೆಎ 32 ಬಿ 648 ನೇದ್ದರ ಚಾಲಕ ಜೇವರ್ಗಿ ಕಾಲೋನಿ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಮೇಲೆ  ಪಲ್ಟಿಯಾಗಿ ಬಿದ್ದಿದ್ದು ಅದರಲ್ಲಿದ್ದ ನಾಗೇಂದ್ರಪ್ಪ ಇವರಿಗೆ ಭಾರಿ ಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲಾ. ಅವರನ್ನು ಬೇರೊಂದು ಅಟೋ ರೀಕ್ಷಾದಲ್ಲಿ ಹಾಕಿಕೊಂಡು ಧನ್ವಂತ್ರಿ ಆಸ್ಪತ್ರೆಗೆ ಒಯ್ಯುತ್ತಿದ್ದೇವೆ.ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿಕೊಂಡು ಧನ್ವಂತ್ರಿ ಆಸ್ಪತ್ರೆಗೆ ಹೋಗಿ ನನ್ನ ಅಣ್ಣ ನಾಗೇಂದ್ರಪ್ಪ ಇವರನ್ನು ನೊಡಲಾಗಿ ಅವರಿಗೆ ಭಾರಿ ಗಾಯವಾಗಿ ಮತನಾಡುತ್ತಿರಲಿಲ್ಲ ಉಪಚಾರ ಪಡೆಯುತ್ತಾ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಹಲ್ಲೆ ಪ್ರಕರಣ :

ಆಳಂದ ಪೊಲೀಸ ಠಾಣೆ: ಧೂಳಪ್ಪ ತಂದೆ ಶಾಲು ಸಾ|| ಆಳಂದ ಕಮಸೂರ ನಾಯಕ ತಾಂಡ ನಾನು ನಮ್ಮ ತಾಂಡದವನಾದ ಶಿವರಾಜ ಇತನಿಗೆ 8 ದಿನಗಳ ಹಿಂದೆ 100 ರೂ ಸಾಲ ಕೊಟ್ಟಿದೆ ಶಿವರಾಜ ಮತ್ತು ಆತನ ತಮ್ಮ ನಮ್ಮ ಮನೆಯ ಮುಂದೆ ಹೋಗುತ್ತಿರುವಾಗ ಸಾಲ ತೆಗೆದುಕೊಂಡಿರುವ ಹಣ ವಾಪಸ ಕೋಡು ಅಂತಾ ಕೇಳಿದ್ದಕ್ಕೆ ಶಿವರಾಜ ಇತನು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಕಿವಿಗೆ ರಕ್ತಗಾಯ ಪಡಿಸಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಕಮಲಾಪೂರ ಪೊಲೀಸ ಠಾಣೆ : ಶ್ರೀ ಪುಷ್ಪರಾಜ ತಂದೆ ಕರಬಸಪ್ಪಾ ಪಾಟೀಲ ಸಾಃ ಡೊಂಗರಗಾಂವತಾ;ಜಿ; ಗುಲಬರ್ಗಾ ರವರು ನಾನು ಮತ್ತು ಸಂತೋಷ ಇತನು ಮರಗುತ್ತಿ ಕ್ರಾಸಿನಲ್ಲಿ ಚಹಾ ಕುಡಿದು ಮಾತನಾಡುತ್ತಾ ಕುಳಿತುಕೊಂಡಾಗ ಸಾಯಂಕಾಲ ಸುಮಾರಿಗೆ ಹುಮನಾಬಾದ ಕಡೆಯಿಂದ ಲಾರಿ ನಂ. ಕೆಎ:16-8472 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ರೋಡಿನ ಎಡಗಡೆ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿದನು. ಲಾರಿ ಚಲಾಯಿಸುತ್ತಿದ್ದ ಚಾಲಕನಿಗೆ ಹೊರಗೆ ತೆಗೆದು ವಿಚಾರಿಸಲಾಗಿ, ತನ್ನ ಹೆಸರು ವೇಣುಕುಮಾರ ತಂದೆ ಮೂರ್ತಿ ಸಾಃ ಮಾಡಿಯಾಳ ತಾಃ ಅರಸಿಕೇರಾ ಜಿಃಹಾಸನ ಅಂತಾ ತಿಳಿಸಿದನು. ಈತನಿಗೆ ಟೊಂಕಕ್ಕೆ, ಬೆನ್ನಿಗೆ, ತಲೆಗೆ ಒಳಪೆಟ್ಟಾಗಿ ಗುಪ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು. ಅಪಘಾತದಲ್ಲಿ ಲಾರಿ ಜಖಂಗೊಂಡು ಹಾನಿಯಾಗಿದ್ದು ಅದೆ. ಗಾಯ ಹೊಂದಿದ ಲಾರಿ ಚಾಲಕನಿಗೆ ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಗುಲಬರ್ಗಾಕ್ಕೆ ಕೊಟ್ಟು ಕಳುಹಿಸಿ ಕೊಟ್ಟಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ:
ಶ್ರೀ ವಿಜಯಕುಮಾರ ತಂದೆ ಬಸವರಾಜ ನಿಂಬಾಳ ಸಾ|| ಉಪಳಾಂವ ತಾ|| ಗುಲಬರ್ಗಾ ರವರು ನಾನು ಊಟ ತರುವ ಕುರಿತು ಬೇಲೂರ ಕ್ರಾಸಿಗೆ ಟಂಟಂ ಕೆ.ಎ.32 9768 ನೇದ್ದರಲ್ಲಿ ಕುಳಿತು ಹೋಗುವಾಗ ಹಿಂದಿನಿಂದ ಕೆ.ಎ.32 ಬಿ.1673 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೋಡೆದನು ಇದರಿಂದ ಟಂಟಂ ಪಲ್ಟಿಯಾಗಿ ಬಿದಿದ್ದು ಅದರಲ್ಲಿಯ ಎಲ್ಲರಿಗೆ ಪೆಟ್ಟಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ