POLICE BHAVAN KALABURAGI

POLICE BHAVAN KALABURAGI

22 August 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ
:
ಶ್ರೀ.ಅಂಬರಾಯ ತಂದೆ ಬಸವರಾಜ ಅಂತಪನಾಳ ಸಾ|| ತಾಜಸುಲ್ತಾನಪೂರ ತಾ;ಜಿ;ಗುಲಬರ್ಗಾ ರವರು ನಾನು ಮತ್ತು ನನ್ನ ಅಣ್ಣ ಸಂಗಪ್ಪಾ ಮತ್ತು ಗ್ರಾಮದ ಶಿವಪ್ಪಾ ಚಿಮಟೆ ಎಲ್ಲೂ ಕೂಡಿಕೊಂಡು ದಿನಾಂಕ.20/08/11 ರಂದು ಸಾಯಂಕಾಲ ಬಂಬು ಬಜಾರದಿಂದ ಸುಲ್ತಾನಪೂರಕ್ಕೆ ಆಟೋರಿಕ್ಷಾ ನಂ.ಕೆ.ಎ 32 ಎ-2422 ನೆದ್ದರಲ್ಲಿ ಹೋಗುವಾಗ ಕಮಲನಗರ ಕಾಲೂನಿಯ ಹತ್ತಿರ ಆಟೋ ಚಾಲಕನು ಅತೀವೇಗ & ನಿಸ್ಕಾಳಜಿತನದಿಂದ ನಡೆಯಿಸಿ ಆಟೋ ಪಲ್ಟಿ ಮಾಡಿದನು ಇದರಿಂದ ನಮಗೆ ಗುಪ್ತ ಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ಪ್ರಕರಣ :

ಗ್ರಾಮೀಣ ಠಾಣೆ : ದಿನಾಂಕ.20/08/11 ರಂದು ಮದ್ಯಾಹ್ನ ಸೈಯದ ಚಿಂಚೋಳಿ ರಸ್ತೆ ಖೇಮಜಿರವರ ಹೊಲದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿದಾಗ ಅಂದರ ಬಾಹರ ಜೂಜಾಟ ಆಡುತ್ತಿರುವವರನ್ನು ಹೆಸರು ವಿಚಾರಿಸಲಾಗಿ ತುಕಾರಾಮ ತಂದೆ ಮಾಣಿಕರಾವ ದುಗಲಗುಂಡಿ ಸಾ: ಗಂಗಾನಗರ ಗುಲಬರ್ಗಾ, ಶಿವಕುಮಾರ ತಂದೆ ಬಸವರಾಜ ಪ್ಯಾಟಿ ಸಾ; ಮೇಳಕುಂದಿ ಗುಲಬರ್ಗಾ, ದಸ್ತಗಿರಿ ತಂದೆ ಮೃತುಜಾ ಸಾ: ರಾಜೀವಗಾಂಧಿ ನಗರ ಗುಲಬರ್ಗ, ಶರಣು ತಂದೆ ಜೇಮುಸಿಂಗ ಚವ್ಹಾಣ ಸಾ: ವಿಷ್ಣು ನಗರ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ಹಣ 6800/- ರೂ ಹಾಗೂ ಎರಡು ಮೋಬೈಲಗಳು ಅ, ಕಿ 2500/- ರೂ ಹಾಗೂ ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡ್ಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ಪ್ರಕರಣ :

ಗ್ರಾಮೀಣ ಠಾಣೆ : ದಿನಾಂಕ.20/08/11 ರಂದು ಮದ್ಯಾಹ್ನ ಸೈಯದ ಚಿಂಚೋಳಿ ರಸ್ತೆ ಸುಬಾಷ ರಾಠೋಡ ಇವರ ಹೊಲದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿದ್ದು ಮಲ್ಲಿಕಾರ್ಜುನ ತಂದೆ ಬಸಣ್ಣ ನೆಲೋಗಿ ಸಾ: ರಾಜೀವ ಗಾಂಧಿ ನಗರ ಗುಲ್ಬರ್ಗಾ, ಮಲ್ಲಿಕಾರ್ಜುನ ತಂದೆ ಹಣಮಂತ ಕೋಟನೂರ ಸಾ; ರಾಜೀವ ಗಾಂಧಿ ನಗರ ಗುಲ್ಬರ್ಗಾ, ಲಕ್ಷ್ಮಿಕಾಂತ ತಂದೆ ಸಂಗಪ್ಪ ಚರಕಾರ ಸಾ: ರಾಜೀವ ಗಾಂಧಿ ನಗರ ಗುಲ್ಬರ್ಗಾ, ಶಾಂತಪ್ಪ @ ಶಾಂತು ತಂದೆ ಶ್ರೀಮಂತ ಖ್ಯಾಡ ಸಾ:ರಾಜೀವ ಗಾಂಧಿ ನಗರ ಗುಲ್ಬರ್ಗಾ ರವ ರು ಜೂಜಾಟ ಆಡುತ್ತಿದ್ದು ಇವರನ್ನು ವಶಕ್ಕೆ ತೆಗೆದುಕೊಂಡು ಇವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 850/- ರೂ ಹಾಗೂ ಎರಡು ಮೋಬೈಲಗಳು ಹಾಗೂ ಒಂದು ಮೋಟಾರ ಸೈಕಲ ಹಾಗೂ ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡ್ಡಿದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 August 2011

GULBARGA DIST REPORTED CRIME

ಅಪಘಾತ ಪ್ರಕರಣ ಒಂದು ಸಾವು:

ಕಮಲಾಪೂರ ಪೊಲೀಸ ಠಾಣೆ : ಸುಭಾಶ ತಂದೆ ವಿಠಲ ರಾಠೋಡ ಸಾಃ ಮರಮಂಚಿ ತಾಂಡಾ ತಾಃಜಿಃ ಗುಲಬರ್ಗಾ ಹಾಃವಃ ಟಾಟಾ ಪಾವರ ಸಿಲ್ ರೋಡ ಕಲ್ಯಾಣ ಈಸ್ಟ್ (ಎಂ.ಹೆಚ್) ನಾನು ನಮ್ಮ ತಾಂಡಾದವರಾದ ಬಾಬು ತಂದೆ ದೇವಲಾ 2. ಗಣಪತಿ ತಂದೆ ಗಮ್ಮು ಜಾಧವ 3. ರಾಮಸಿಂಗ್ ತಂದೆ ದೇವಲಾ ಚವ್ಹಾಣ 4. ಸುನೀತಾ ಗಂಡ ದೇವಲಾ ಜಾಧವ ಎಲ್ಲರೂ ಕೂಡಿಕೊಂಡು ದಿನಾಂಕ:21/08/2011 ರಂದು ಕಮಲಾಪೂರ ದಲ್ಲಿ ಸಂತೆ ಇದ್ದ ಪ್ರಯುಕ್ತ ಜೀಪ ನಂ. ಕೆಎ:32, ಎಮ್:1811 ನೇದ್ದರ ಚಾಲಕನು ನಮಗೆ ನೋಡಿ ಕಮಲಾಪೂರಕ್ಕೆ ಹೋಗುತ್ತಿದೆ ಅಂತಾ ಹೇಳಿದನು ನಾವೇಲ್ಲರೂ ಅದೇ ಜೀಪಿನಲ್ಲಿ ಕುಳಿತುಕೊಂಡು ಕಮಲಾಪೂರ ಕಡೆಗೆ ಬರುತ್ತಿರುವಾಗ ಭೀಮನಾಳ ಕ್ರಾಸನಲ್ಲಿ ನಾವು ಕುಳಿತಿರುವ ಜೀಪಿನ ಹಿಂದುಗಡೆ ಇನ್ನೊಂದು ಜೀಪ ನಂ. ಕೆಎ:32,ಎಮ್:2766 ನೇದ್ದರ ಚಾಲಕನು ತನ್ನ ಜೀಪಿನಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ನಾವು ಕುಳಿತಿರುವ ಜೀಪಿಗೆ ಓವರ ಟೇಕ ಮಾಡುತ್ತಿರುವಾಗ ನಾವು ಕುಳಿತಿರುವ ಜೀಪ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಓವರ ಟೇಕ ಮಾಡುತ್ತಿರುವ ಜೀಪಿನ ಮಗ್ಗುಲಿಗೆ ಜೀಫ ತಗುಲಿ ನಮ್ಮ ಜೀಪ ಚಾಲಕನು ತನ್ನ ನಿಯಂತ್ರಣ ಕಳೆದುಕೊಂಡು ರೋಡಿನ ಎಡಬದಿಯಲ್ಲಿರುವ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿದ್ದರಿಂದ ಬಾಬು ಇತನಿಗೆ ಎದೆಗೆ ಒಳಪೆಟ್ಟಾಗಿ ಭಾರಿ ಗುಪ್ತಗಾಯ, ಬಲಗಾಲಿನ ಮುರಿದು ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಜೀಪಿನಲ್ಲಿ ಕುಳಿತವರಿಗೆ ರಕ್ತಗಾಯವಾಗಿರುತ್ತದೆ ಜೀಪ ಚಾಲಕರು ಅಪಘಾತ ಪಡಿಸಿ ಓಡಿ ಹೋಗಿರುತ್ತಾರೆ. ಬಾಬು ಇತನಿಗೆ ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಆಸ್ಪತ್ರೆಗೆ ತರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

20 August 2011

GULBARGA DIST REPORTED CRIMES

ಕುಡಕ ಗಂಡನ ಕಾಟ ತಾಳಲಾರದಕ್ಕೆ ಸಿಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ಮಗು ತಾಯಿಯನ್ನು ತಬ್ಬಿ ಕೊಂಡಿದ್ದರಿಂದ ಮಗು ಸಾವು :

ಆಳಂದ ಪೊಲೀಸ ಠಾಣೆ: ದಿನಾಂಕ 19/08/2011 ರಂದು ಸಾಯಂಕಾಲ ಸುಮಾರಿಗೆ ರುದ್ರವಾಡಿ ಗ್ರಾಮದಲ್ಲಿ ರೇಖಾ @ ಸುನಿತಾ ಗಂಡ ಶಂಕರ ಬಿರಾದಾರ ಸಾ|| ರುದ್ರವಾಡಿ ಇವಳು ಗಂಡನಾದ ಶಂಕರ ಇತನಿಗೆ ಕುಡಿಯುದು ಬಿಡು ಅಂತ ಎಷ್ಟು ಸಾರಿ ಹೇಳಿದರು ಕೇಳದೆ ಇದ್ದ ಕಾರಣ ರೇಖಾ ಇವಳು ನಾನೆ ಆತ್ಮಹತ್ಯೆ ಮಾಡಿಕೊಂಡರೆ ಯಾವದೇ ತೊಂದರೆ ಇರುವದಿಲ್ಲ ಅಂತಾ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಾಗ ರೇಖಾಳ 2 ವರ್ಷದ ಮಗ ಕಾಳಪ್ಪ ಇತನು  ಬಂದು ತಬ್ಬಿಕೊಂಡಿದ್ದರಿಂದ ಮಗು ಬೆಂಕಿಯಲ್ಲಿ ಬೆಂದಿರುತ್ತದೆ ಮಗುವಿಗೆ ಉಪಚಾರ ಕುರಿತು ಗುಲ್ಬರ್ಗಾ ಸರ್ಕಾರಿ ಆಸ್ಪತ್ರೆಗೆ ತರುತ್ತಿರುವಾಗ ಮಾರ್ಗ ಮಧ್ಯದಲ್ಲಿಯೇ ಮಗು ಮೃತಪಟ್ಟಿರುತ್ತದೆ. ಹಾಗು ರೇಖಾ ಗಂಡ ಶಂಕರ ಇವಳು ಉಪಚಾರದಲ್ಲಿರುತ್ತಾಳೆ ಅಂತಾ ಎ.ಎಸ.ಐ ರವರು ವರದಿ ಸಲ್ಲಿಸಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ:
ಬ್ರಹ್ಮಪೂರ ಠಾಣೆ
: ಶ್ರೀ.ದೀಪಕ ತಂದೆ ಬಾಬು ಉಪಾದ್ಯ, ಸಾ|| ಬಾಪೂನಗರ ರವರು ನನ್ನ ಮಗಳಾದ ಕೋಮಲು ಇವಳು ದಿನಾಂಕ: 19/08/2011 ರಂದು ಮಧ್ಯಾಹ್ನ ಬಾಪೂನಗರ ಬಡಾವಣೆಯ ತಮ್ಮ ಮನೆಯಲ್ಲಿ ಅಡುಗೆ ಮಾಡುವ ಸಲುವಾಗಿ ಸ್ಟೋ ಹಚ್ಚುವಾಗ ಸ್ಟೋ ಎಣ್ಣೆ ಆಕಸ್ಮಿಕವಾಗಿ ಮೈಮೇಲೆ ಸಿಡಿದಿದ್ದು ಅವಳು ಉಟ್ಟ ಬಟ್ಟೆಗೆ ಬೆಂಕಿ ಹತ್ತಿ ಮುಖ ಹೊಟ್ಟೆ ಬೆನ್ನು, ಎರಡು ಕೈಗಳು ಸುಟ್ಟಿದ್ದು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಲಾಗಿತ್ತು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಯು.ಡಿ.ಅರ್. ಪ್ರಕರಣ ದಾಖಲಾಗಿದೆ.