POLICE BHAVAN KALABURAGI

POLICE BHAVAN KALABURAGI

26 July 2011

GULBARGA DISTRICT REPORTED CRIMES

ಗೃಹಿಣಿಗೆ ಕಿರುಕುಳ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀಮತಿ ನಸೀಮಾ ಬಾನು ಗಂಡ ಮಹ್ಮ,ದ ಮುಸ್ತಾಕ ಪಟೇಲ ಉ|| ಉಪನ್ಯಾಸಕಿ ಸಾ: ಜುಬೇರಾ ಕಾಲನಿ ಹಾಗರಗಾ ಕ್ರಾಸ ಗುಲಬರ್ಗಾ ರವರು ನನಗೆ ಮೂರುವರೆ ವರ್ಷದ ಹಿಂದೆ ಚಿಕ್ಕಪ್ಪ ಮತ್ತು ಅಣ್ಣಂದಿರು ಕೂಡಿ ಜುಬೇರಾ ಕಾಲನಿ ಮಹ್ಮದ ಮುಸ್ತಾಕ ಪಟೇಲ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಗಂಡ ಹಾಗೂ ಅತ್ತೆ ಮಾವ ಮೈದುನರು ನನಗೆ ಅಡಿಗೆ ಮಾಡಲು ಬರುವುದಿಲ್ಲ ಮನೆಯ ಕೆಲಸ ಬರುವುದಿಲ್ಲ ಅಂತಾ ಸಣ್ಣ ಪುಟ್ಟ ವಿಷಯಗಳಿಗೆ ಮಾನಸಿಕ ತೊಂದರೆ ಕೊಡುವದು ಹಾಗೂ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸುವದು ಹಾಗೂ ತವರು ಮನೆಯಿಂದ ಹಣವನ್ನು ತರುವಂತೆ ಹಿಂಸೆಯನ್ನು ಕೊಡುತ್ತಾ ಬಂದಿರುತ್ತಾರೆ ಅವರುಗಳ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ
:
ಶ್ರೀ ಶರಣಬಸಪ್ಪ ತಂದೆ ಪರಮೇಶ್ವರ ಕಣ್ಣಿ ಸಾ|| ಶರಣಸಿರಸಗಿ ತಾಂಡಾ ರವರು ನಾನು ನಮ್ಮ ದೊಡ್ಡಪ್ಪ ಶಿವಶರಣಪ್ಪ ಕಣ್ಣಿ ಇವರು ಈಚಲ ಕರಂಜಿ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಇವರ ಮೃತ ದೇಹ ಬರುವಿಕೆಗಾಗಿ ಕಾಯುತ್ತಾ ನಿಂತಿದ್ದೇವು. ನಮ್ಮ ಅಳಿಯ ಜಟ್ಟೆಪ್ಪ ತಂದೆ ಸಿದ್ಧಪ್ಪ ಮಲ್ಲಾಬಾದಿ ಈತನು ಗುಲಬರ್ಗಾಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನನ್ನ ಹಿರೋ ಹೊಂಡಾ ಸೂಪರ ಸ್ಪೆಂಡರ ಕೆಎ 32 ವಿ 2436 ತೆಗೆದುಕೊಂಡು ಹೋಗಿ ಶರಣ ಶಿರಸಗಿ ತಾಂಡಾದ ಪೂಲಿನ ಹತ್ತಿರ ಅತೀವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಹೋಗಿ ವೇಗದ ಆಯ ತಪ್ಪಿ ಪೂಲಿನ ಹತ್ತಿರ ಬಿದ್ದಿದ್ದು, ಅವನ ತಲೆಗೆ ಮತ್ತು ಕೈಗಳಿಗೆ ರಕ್ತಗಾಯಗಳಾಗಿದ್ದು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ದೇವಲ ಗಾಣಗಾಪೂರ ಠಾಣೆ : ಶ್ರೀ ತಾರಾಬಾಯಿ ಗಂಡ ರಾಮಚಂದ್ರ ಹಯ್ಯಾಳಕರ ಸಾ|| ಟಾಕಳಿ ರವರು ನನ್ನ ಮೊಮ್ಮಗ ಹಾಗು ಗೀತಾಬಾಯಿ ಮಗ ಇಬ್ಬರೂ ಕೂಡಿಕೊಂಡು ಮೈಮೇಲೆ ನೀರು ಎರಚುಕೊಳ್ಲುತ್ತಿರುವಾಗ ಗೀತಾಬಾಯಿ ಇವಳು ಬೈಯುತ್ತಿದ್ದು, ನಾನು ಯಾಕೆ ಬೈಯುತ್ತಿ ಅಂದಿದ್ದಕ್ಕೆ ಗೀತಾಬಾಯಿ ಮತ್ತು ಸಂಗಡ ಇಬ್ಬರೂ ಕೂಡಿಕೊಂಡು ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಯಡ್ರಾಮಿ ಠಾಣೆ : ಶ್ರೀ ಶರಣಗೌಡ ತಂದೆ ಭೀಮರಾಯಗೌಡ ಒಣಕಿಹಾಳ ಸಾ: ಅಂಬರಖೇಡ ತಾ: ಜೇವರ್ಗಿ ರವರು ನಾನು ಹಾಗು ಶರಣಗೌಡ ಅಸ್ಕಿ ನಾಗಮ್ಮ , ಹೊನ್ನವ್ವ ಮತ್ತು ಪ್ರಶಾಂತ ಸಾ|| ಎಲ್ಲರೂ ಅಂಬರಖೇಡ ಕೂಡಿಕೊಂಡು ಟಂ-ಟಂ ನಂ ಕೆ-ಎ 33-6201 ನೇದ್ದರಲ್ಲಿ ಕುಳಿತುಕೊಂಡು ಹೊಗುವಾಗ ಟಂ-ಟಂ ಚಾಲಕನಾದ ನಾಗಪ್ಪ ಇತನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಅಯ್ಯಣ್ಣ ಹೊಸಮನಿ ಇವರ ಹೋಲದ ಹತ್ತಿರ ಬರುತ್ತಿದ್ದಂತೆ ಒಮ್ಮೆಲೆ ಬ್ರೆಕ್ ಹೊಡೆದು ಟಂ-ಟಂ ಪಲ್ಟಿ ಮಾಡಿದ್ದು ಅದರಲ್ಲಿಯ ಪ್ರಶಾಂತ ಎಂಬುವನಿಗೆ ತಲೆಯ ಹಿಂಬಾಗದಲ್ಲಿ ಬಲ ಕಪಾಳಕ್ಕೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಇನ್ನುಳಿದವರಿಗೆ ಭಾರಿ ಗಾಯ ಮತ್ತು ಗುಪ್ತ ಗಾಯವಾಗಿದ್ದು, ಟಂ-ಟಂ ಚಾಲಕನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 July 2011

GULBARGA DIST REPORTED CRIME

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ
:

ಇಂದ್ರಾಬಾಯಿ ಗಂಡ ಪರಶುರಾಮ ರಾಮಗೊಂಡ ಸಾ
|| ಚಿಕ್ಕ ಸಿಂದಗಿ ಜಿ|| ಬಿಜಾಪೂರ ಹಾ|| || ಘತ್ತರಗಾ ತಾ|| ಅಫಜಲಪೂರ ರವರು ನಾನು ಮತ್ತು ನಮ್ಮ ತಂದೆಯ ಹತ್ತಿರ ಕೆಲಸ ಮಾಡುವ ಶಿವಾಜಿ ಕೂಡಿಕೊಂಡು ದಿನಾಂಕ 24-7-2011 ರಂದು ಸಾಯಂಕಾಲ ಹೀರೊ ಹೊಂಡಾ ಮೋಟರ್ ಸೈಕಲ ನಂ. ಕೆಎ-32 ಯು-2228 ನೇದ್ದರ ಮೇಲೆ ಬಗಲೂರ ಕಡೆಯಿಂದ ಘತ್ತರಗಾ ಕಡೆಗೆ ಬರುತ್ತಿರುವಾಗ ಭೀಮಾ ಬ್ರಿಜ್ ಕಡೆಯಿಂದ ಲಾರಿ ನಂ. ಕೆಎ-32 ಎ-7835 ನೇದ್ದರ ಚಾಲಕ ವೀರಶೆಟ್ಟಿ ತಂದೆ ಗುಂಡಪ್ಪ ಮಂದಕನಳ್ಳಿ ಈತನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಶಿವಾಜಿ ಈತನು ಲಾರಿಯ ಹಿಂದಿನ ಮಡಗಟ್ಟಿನಲ್ಲಿ ಸಿಕ್ಕಿಬಿದ್ದು ತಲೆಯ ಹಿಂಬಾಗ ಭಾರಿ ರಕ್ತಗಾಯ ಮತ್ತು ಮೂಗಿನಿಂದ ರಕ್ತಸ್ರಾವ ಆಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ :
ಫರಹತಾಬಾದ ಠಾಣೆ :
ಶ್ರೀ ಮಹ್ಮದ ಶಬ್ಬೀರ ತಂದೆ ಮಹ್ಮದ ದಸ್ತಗಿರ ಸಾ: ಎಮ್.ಎಸ್.ಕೆ.ಮಿಲ್ ಖಾದ್ರಿ ಚೌಕ ಜಿಲಾನಾಬಾದ ಗುಲಬರ್ಗಾ ರವರು ನಾನು ನನ್ನ ಗೆಳೆಯನೊಂದಿಗೆ ನಂದಿಕೂರ ತಾಂಡಾದ ಹತ್ತಿರ ಗುಟಾಕಾ ತಗೆದಕೊಂಡು ಬರಲು ರೋಡ ದಾಟುತ್ತಿರುವಾಗ ಅಟೋ ನಂ: ಕೆಎ 32 ಎ 9750 ನೇದ್ದರ ಚಾಲಕನು ತನ್ನ ಅಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಆಳಂದ ಠಾಣೆ : ಶ್ರೀ, ಆರೀಫ ತಂದೆ ಇಸ್ಮಯಿಲಸಾಬ ಬಾಗವಾನ ಸಾ|| ಖಾನಬೌಡಿಗಲ್ಲಿ ಆಳಂದ ರವರು ನಾನು ಆಟೋ ನಂ. ಕೆಎ 32 ಎ 4181 ನೆದ್ದರಲ್ಲಿ ಮಾವಿನ ಹಣ್ಣು ತುಂಬುತ್ತಿರುವಾಗ ಇಸಾಮ ಅನ್ಸಾರಿ ಸಾ|| ಆಳಂದ ರವರು ತನ್ನ ಜೀಪನ್ನು ತಂದು ಆಟೋಕ್ಕೆ ಡಿಕ್ಕಿ ಪಡಿಸಿ ಆತನೆ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಕಿವಿಗೆ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಕಮಲಾಪೂರ ಠಾಣೆ : ಶ್ರೀ ಷಣ್ಮುಖಪ್ಪಾ ತಂದೆ ಚೆನ್ನಪ್ಪಾ ಜೋಜನ ಸಾಃ ಬಾಚೆಪಳ್ಳಿ ತಾಃ ಔರಾದ ಜಿಃ ಬೀದರ ರವರು ನಾನು ನನ್ನ ಅಣ್ಣನ ಮಗನಾದ ಶಾಲಿವಾನ, ಆತನ ಹೆಂಡತಿ ಭಾಗ್ಯವತಿ ಆತನ ಮಗಳು ಅಂಬಿಕಾ, ಕೇತಕಿ ಸಂಗಮೇಶ ಮಲ್ಲಿಕಾರ್ಜುನ ಶಿವಪೂಜೆ ಎಲ್ಲರೂ ಕೂಡಿಕೊಂಡು ಟಾಟಾ ಇಂಡಿಕಾ ಕಾರ ನಂ. ಕೆಎ: 38-5207 ನೇದ್ದರಲ್ಲಿ ಕುಳಿತುಕೊಂಡು ಘಾಣಗಾಪೂರಕ್ಕೆ ಹೋಗಿ ಮರಳಿ ಬೀದರಕ್ಕೆ ಹೊರಟಿದ್ದು ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ. 218 ನೇದ್ದರ ರೋಡಿನ ಮರಗುತ್ತಿ ಕ್ರಾಸ ಹತ್ತಿರ ಎದುರುಗಡೆಯಿಂದ ಕ್ರೋಜರ ಜೀಪ ನಂ. ಕೆಎ:39-7061 ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಅಡ್ಡಾತಿಡ್ಡಿಯಾಗಿ ಚಲಾಯಿಸುತ್ತಾ ಎಡದಿಂದ ಬಲಕ್ಕೆ ಬಂದು ನಮ್ಮ ಕಾರಿನ ಎದುರುಗಡೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಭಾರಿ ಗುಪ್ತಗಾಯವಾಗಿರುತ್ತದೆ, ನನ್ನ ಭಾವನಾದ ಶಾಲಿವಾನ ಮತ್ತು ಅಕ್ಕ ಭಾಗ್ಯವತಿ ಇವರು ತಲೆಗೆ, ಮುಖಕ್ಕೆ ಭಾರಿ ರಕ್ತಗಾಯ, ಮತ್ತು ಎದೆಗೆ ಒಳಪೆಟ್ಟಾಗಿ ಭಾರಿ ಗುಪ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಂಬಿಕಾ, ಕೇತಕಿ, ಸಂಗಮೇಶ ಎಲ್ಲರೂ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಗುಲಬರ್ಗಾಕ್ಕೆ ಬರುತ್ತಿರುವಾಗ ಅಂಬಿಕಾ ಇವಳಿಗೆ ಆದ ಭಾರಿ ಗಾಯದಿಂದ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.