POLICE BHAVAN KALABURAGI

POLICE BHAVAN KALABURAGI

30 May 2011

ಗುಲಬರ್ಗಾ ಜಿಲ್ಲೆ ಅಪರಾಧಗಳ ಮಾಹಿತಿ

ಮಾಡಬೂಳ ಪೊಲೀಸ್‌ ಠಾಣೆ

ಹಸನಪ್ಪ ತಂದೆ ದ್ಯಾವಪ್ಪ ದ್ಯಾಗೆ ಬೀರನಳ್ಳಿರವರು ಮುಚಖೇಡ ಗ್ರಾಮದಲ್ಲಿ ಲಗ್ನ ಮುಗಿಸಿಕೊಂಡು ಬರುತ್ತಿರುವಾಗ ಖಬಲಾ ತಂದೆ ಮೌಲಾನ ಪಟೇಲ್ ಸಂಗಡ 10 ಎಲ್ಲರು ಬೀರನಳ್ಳಿಯವರು ಸೇರಿಕೊಂಡು ಹಸನಪ್ಪ ರವರನ್ನು ಹೊಡೆದು ಅವರ ಜೀವಕ್ಕೆ ಜೆದರಿಕೆ ಹಾಕಿ ಜಾತಿನಿಂದನೆ ಮಾಡಿರುತ್ತಾರೆ. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಗುಲಬರ್ಗಾ ಗ್ರಾಮೀಣ ಠಾಣೆ

ಬಿದ್ದಾಪೂರ ಕಾಲನಿಯಲ್ಲಿ ಶ್ರೀ ಸುರೇಶ ತಂದೆ ದಿವಾಕರರಾವ ಕುಲಕರ್ಣಿರವರು ರಾತ್ರಿ ಮನೆಯಲ್ಲಿ ರಾತ್ರಿ ಮಲಗಿಕೊಂಡಾಗ ಯಾರೋ ಕಳ್ಳರು ಬೇಡ್ ರೂಮಿನ ಸೈಡಿನ ಕಿಡಕಿಯ ರಾಡು ಮುರಿದು ಒಳಗೆ ಬಂದು ಬೇಡ್ ರೂಮಿನಲ್ಲಿರುವ 16 ತೊಲೆಯ ಬಂಗಾರು 4 ಕೆ.ಜಿ. 700 ಗ್ರಾಮ್ ಬೆಳ್ಳಿ ಹಾಗೂ ಸೀರೆಗಳು ಮತ್ತು ನಗದು ಹಣ 8000 ಕಳವು ಮಾಡಿಕೊಂಡು ಹೊಗಿರುತ್ತಾರೆ. ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹೆಚ್ಚುವರಿ ಸಂಚಾರಿ ಪೊಲೀಸ್‌ ಠಾಣೆ ಗುಲಬರ್ಗಾ

ಶ್ರೀಮತಿ ಶರಣಮ್ಮ ಮತ್ತು ಅವರ ಮಗನಾದ ಮೃತ ಬಸವರಾಜ ವಯಸ್ಸು 16 ಇವರು ಕೂಡಿಕೊಂಡು ಐ-ವಾನ್-ಇ-ಶಾಹಿ ಹತ್ತಿರ ಹೋಗುತ್ತಿರುವಾಗ ಲಾರಿ ನಂ ಕೆಎ 32-9200 ರ ಚಾಲಕ ಫತ್ರುಸಾಬ ತಂದೆ ಮಹ್ಮಮದ ಸಾಬನು ಲಾರಿ ವೇಗವಾಗಿ ತಂದು ಶ್ರೀಮತಿ ಶರಣಮ್ಮ ಮತ್ತು ಅವರ ಮಗನಾದ ಮೃತ ಬಸವರಾಜರವರಿಗೆ ಟಿಕ್ಕಿ ಪಡಿಸಿದ್ದ ಕಾರಣ ಬಸವರಾಜ ಸ್ಥಳದಲ್ಲಿಯೇ ಮೃತಪಟ್ಟಿದ್ದು ಶರಣಮ್ಮರವರಿಗೆ ಗಾಯಗಳಾಗಿರುತ್ತವೆ. ಹೆಚ್ಚುವರಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

ಚಿಂಚೋಳಿ ಪೊಲೀಸ್ ಠಾಣೆ

ಅಬ್ದುಲ್ ರಹೀಮಾನ ತಂದೆ ಅಲ್ಲಾ ಬಕ್ಸ್ ಮತ್ತು ಅಯ್ಯೂಬ ತಂದೆ ಅಬ್ದುಲ್ ನಬಿ ಮುಂಬೈವಾಲೇ ಸಾ|| ಬೈವಾಡ ಚಿಂಚೋಳಿ ಪೆಟ್ರೋಲ ಬಂಕ್ ಹತ್ತಿರ ಕೂಡಿಕೊಂಡು ಅವರ ಮೋಟರ್ ಸೈಕಲ್ ನಂ. ಕೆ.ಎ 32 ಯು. 7245 ನೇದ್ದರ ಮೇಲೆ ಹೊಸಳ್ಳಿ ಗ್ರಾಮದ ಹೋಟಲಗಲಿಗೆ ಹಾಲಿನ ಪಾಕೀಟ ಮಾರಿ ವಾಪಸ್ ಬರುವಾಗ ಚಿಂಚೋಳಿ ಕಡೆಯಿಂದ ಮೋಟರ ಸೈಕಲ್ ನಂ. ಕೆ.ಎ 32 ಎಕ್ಸ್ 4231 ನೇದ್ದರ ಚಾಲಕನು ಅತಿವೇಗದಿಂದ ಹಾಗೂ ನಿಷ್ಕಾಳಜೀತನದಿಂದ ನಡೆಸುತ್ತಾ ತಂದು ಡಿಕ್ಕಿ ಪಡಿಸಿದ ಕಾರಣ ಅಬ್ದುಲ್ ರಹೀಮಾನ ತಂದೆ ಅಲ್ಲಾಬಕ್ಸ್ ಇವರಿಗೆ ತೆಲೆಗೆ ಬಾರಿ ರಕ್ತ ಗಾಯವಾಗಿ ಉಪಚಾರ ಪಡೆಯುತ್ತಾ ಮೃತಪಟ್ಟಿರುತ್ತಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

ನಿಂಬರ್ಗಾ ಪೊಲೀಸ್‌ ಠಾಣೆ

ರಯಾಬಾಯಿ ಗಂಡ ಪ್ರಭುರಾಯ ಕವಲಗಿರವರ ಮೃತ ಪ್ರಭುರಾಯನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ ಬಿಸಿ ಊಟದ ಅಡಿಗೆ ಮಾಡುವವಳಾದ ಮಂಗಲ ಇವಳೊಂದಿಗೆ ಮೃತನು ಅನೈಕಿಕ ಸಂಬಂದ ಹೊಂದಿದ್ದನೆಂದು ಸಿದ್ದಪ್ಪ ಉಡಗಿ ಶಿವಕುಮಾರ ಯಳಸಂಗಿ, ಸಂತೋಷ, ಗಣಪತಿ ಚವ್ಹಾಣ ಹಾಗು ಇತರೆ 3 ಜನರು ಕೂಡಿಕೊಂಡು ಮೃತನ ಮೇಲೆ ಸಂಶಯಪಟ್ಟು ಕೆಲವು ದಿನಗಳಹಿಂದೆ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಮೃತನು ಜೀವನದಲ್ಲಿ ಭಯಗೊಂಡು ಮಾಡಿಯಾಳ ಸಿಮಾಂತರದಲ್ಲಿ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನಿಂಬರ್ಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

29 May 2011

Gulbarga Daily Crime Repor

ಬ್ರಹ್ಮಪೂರ ಪೊಲಿಸ ಠಾಣೆ ಗುಲ್ಬರ್ಗಾ : ದಿನಾಂಕ:28/05/2010 ರಂದು 1100 ಗಂಟೆಗೆ ಪಿರ್ಯಾಧಿದಾರಾದ ಶ್ರೀ ಅಮೀತ ತಂದೆ ಬಾಭುರಾವ ಸಾ: ಲೋಹಾರಗಲ್ಲಿ ಮಹಾದೇವ ನಗರ ಗುಲ್ಬರ್ಗಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ: 19/05/2011 ರಂದು ಮದ್ಯಾಹ್ಮ 12-30 ರಿಂದ 13-00 ಗಂಟೆಯ ವೇಳೆಯಲ್ಲಿ ತಮ್ಮ ಹಿರೋಹೊಂಡಾ ಸ್ಪೆಂಡರ್ ಪ್ಲಸ್ ನಂ: ಕೆಎ-32 ವಿ 7728 , ಬಣ್ಣ: ಸಿಲ್ವರ್ ಅ.ಕಿ. 36,000/- ನೇದ್ದನ್ನು ವೀರಶೈವ ಕಲ್ಯಾಣ ಮಂಟಪ ಎದುರುಗಡೆ ನಿಲ್ಲಿಸಿದಾಗ ಯಾರೋ ಕಳ್ಳರು ಕಲ್ಲತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಇತ್ಯಾತದಿ ಕೊಟ್ಟ ದೂರಿನ ಸಾರಾಂಶ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 106/11 ಕಲಂ: 379 ಐ.ಪಿ.ಐ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ನಿಂಬರ್ಗಾ ಪೊಲೀಸ ಠಾಣೆ: ದಿ: 28/052011 ರಂದು 12:00 ಪಿಎಂ ಕ್ಕೆ ಮಲ್ಲಿಕಾರ್ಜುನ ಪಿ.ಸಿ 1228 ರವರು ರಮಾಬಾಯಿ ಗಂಡ ಪ್ರಭುರಾಯ ಕವಲಗಿವಾಸ: ಮಡಿಯಾಳ ಗ್ರಾಮ ಹೇಳಿಕೆ ದೂರನ್ನು ಠಾಣೆಯಲ್ಲಿ ಹಾಜರು ಪಡಿಸಿದ್ದು ಸದರಿ ದೂರಿನ ಸಂಕ್ಷಿಪ್ತ ವಿವರವೇನೆಂದರೇ ಪಿರ್ಯಾದಿದಾರಳ ಗಂಡನಾದ ಮೃತ ಪ್ರಭುರಾಯನು ತಾನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ ಬಿಸಿಊಟದ ಅಡಿಗೆ ಮಾಡುವವಳಾದ ಮಂಗಲ ಇವಳೊಂದಿಗೆ ಮೃತನು ಅನೈತಿಕ ಸಂಬಂಧ ಇಟ್ಟು ಕೊಂಡಿರುತ್ತಾನೆಂದು ಮೇಲೆ ನಮೂದಿಸಿದ ಆರೋಪಿತರು ಸಂಶಯ ಪಟ್ಟು ಒಂದು ತಿಂಗಳ ಹಿಂದೆ ಮೃತನನ್ನು ಬಲವಂತವಾಗಿ ಸೋಲಾಪುರಕ್ಕೆ ಕರದುಕೊಂಡು ಹೊಗಿ ಅಕ್ರಮವಾಗಿ ಕೂಡಿ ಹಾಕಿ ಪ್ರಾಣ ಬೆದರಿಕೆ ಹಾಕಿ ಮೃತನನ್ನು ನಿನ್ನನ್ನು ಕೊಲೆ ಮಾಡುತ್ತೇವೆ ಅಂತಾ ಕೊಲೆ ಬೆದರಿಕೆ ಹಾಕಿದ್ದು ಅಲ್ಲದೇ ನೀನಾಗಿಯೇ ಸಾಯಿ ಅಂತಾ ಆತ್ಮ ಹತ್ಯೆಗೆ ಪ್ರಚೋದನೆ ನಿಡಿದ್ದಂದ ಮೃತನು ಆರೋಪಿತರನ್ನು ಹೆದರಿ ದಿ:28/05/2011 ರಂದು ಮುಂಜಾನೆ 9.300 ಗಂಟೆಗೆ ಮಾಡಿಯಾಳಸಿಮಾಂತರದಲ್ಲಿರುವ ಕಾಶಿನಾಥ ಸುತಾರ ಇವರ ಹೊಲದಲ್ಲಿರುವ ಬೇವಿನ ಗಿಡದ ಟೊಂಗೆಗೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ವಗೈರೆ ನೀಡಿರುವ ಸೂರಿನ ಸಾರಾಂಶದ ಮೇರೆಗೆ ಈ ಮೇಳಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

ಅಶೋಕ ನಗರ ಪೊಲೀಸ್ ಠಾಣೆ : ಇಂದು ದಿನಾಂಕ 28/05/2011 ರಂದು 10-52 ಪಿ.ಎಮ್.ಕ್ಕೆ ಶ್ರೀ.ಫಕೀರಪ್ಪಾ ತಂದೆ ನಿಂಗಪ್ಪಾ ಗುಡಿಕಟ್ಟಿ ಕೆ.ಎಲ್‌.ಇ ಸಂಸ್ಠೆಯ ಪಿ.ಯು ಕಾಲೇಜ ಪ್ರಾಚಾರ್ಯರು ಅಂಕಲಿ ತಾ:ಚಿಕ್ಕೊಡಿ ಜಿ: ಬೆಳಗಾಂವಿ ವಿಳಾಸ: ಮನೆ ನಂ. 173 ಆಶಿರ್ವಾದ ನಿಲಯ ಸಿ.ಐ.ಬಿ ಕಾಲೋನಿ ಗುಲಬರ್ಗಾದ ರವರು ಸಲ್ಲಿಸಿದ ಲಿಖಿತ ಪಿರ್ಯಾದಿ ಅರ್ಜಿ ಸಾರಾಂಶವೆನೆಂದರೆ ಇಂದು ದಿನಾಂಕ 28/05/2011 ರಂದು ಶನಿವಾರ ಇರುವುದ್ದರಿಂದ ಕಾಲೇಜ ಕೆಲಸ ಮುಗಿಸಿಕೊಂಡು ಚಿಕ್ಕೊಡಿಯಿಂದ ಬಿಜಾಪೂರ ಮಾರ್ಗವಾಗಿ ಕೆ.ಎಸ್‌.ಆರ್‌.ಟಿಸಿ ಬಸ್ಸಿನಲ್ಲಿ ಗುಲಬರ್ಗಾ ಬಸ ನಿಲ್ದಾಣಕ್ಕೆ ಬಂದು ಇಳಿದು ಅಲ್ಲಿಂದ ಮನೆಗೆ ಹೊಗಲು ಕಬಿನಿ ಲಾಡ್ಜ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೊಗುತ್ತಿರುವಾಗ ನನ್ನ ಹಿಂದೆ 4 ಜನ ಅಪರಿಚಿತ ಹುಡುಗರು ಫಾಲೋ ಮಾಡುತ್ತಾ ಬಂದು ಕತ್ತಲಲ್ಲಿ ಒಮ್ಮೇಲೆ ಮೈಮೇಲೆ ಹಲ್ಲೆ ಮಾಡಿ ಜಬರದಸ್ತಿಯಿಂದ ಕೈಯಲ್ಲಿದ್ದ ಈ ಕಳಕಂಡ ವಸ್ತು ಹಾಗು ಬಂಗಾರದ ಉಂಗುರುಗಳನ್ನು ಕಸಿದುಕೊಂಡು ಹೊಗಿರುತ್ತಾರೆ. ಇದರಿಂದ ನನ್ನ ಬಲಗೈ ತೊರಬೆರಳಿಗೆ ತರಚಿದ ಗಾಯ ಆಗಿರುತ್ತದೆ. ಹಾಗು ಬಾಯಿ ತುಟಿಗೆ ಸಣ್ಣ ಗಾಯವಾಗಿರುತ್ತದೆ. ಆಗ ರಾತ್ರಿ 9 ಗಂಟೆ ಆಗಿರಬಹುದು. ಅವರು ಅಂದಾಜು 20-25 ವಯಸ್ಸಿನವರಿದ್ದರು. ನೊಡಿದರೇ ಗುರ್ತಿಸುತ್ತೆನೆ. ಕಸಿದುಕೊಂಡು ಹೊಗಿದ್ದ ವಸ್ತುಗಳು ಈ ರೀತಿ ಇರುತ್ತವೆ. 1)ಒಂದು ಸ್ಯಾಮಸಂಗ ಎಸ್‌-5620 ಹ್ಯಾಂಡಸೇಟ ಅದರಲ್ಲಿ ಬಿ.ಎಸ್‌.ಎನ್‌.ಎಲ್‌ ಸೀಮ ಕಾರ್ಡ ನಂ. 9448301557 ಐ.ಎಂ.ಇ.ಐ ನಂ. 352053042490139 ಇರುತ್ತದೆ. ಇದರ ಅಂದಾಜು ಕಿಮ್ಮತ್ತು 9500/- ರೂಪಾಯಿ 2) ಬಲಗೈ ತೊರಬೆರಳಿನಲ್ಲಿದ್ದ ನವರತ್ನ ಹರಳುಗಳುಳ್ಳ 12 ಗ್ರಾಂ ಬಂಗಾರದ ಉಂಗುರು ಇದರ ಅಂದಾಜು ಕಿಮ್ಮತ್ತು 20,000/- ರೂಪಾಯಿ 3)ಎಡಗೈ ತೊರಬೇರಳಿನಲ್ಲಿದ್ದ 4 ಗ್ರಾಂ ಬಂಗಾರದ ಉಂಗುರು ಇದರ ಅಂದಾಜು ಕಿಮ್ಮತ್ತು 8000/- ರೂಪಾಯಿ
ಹೀಗೆ ಒಟ್ಟು ಅಂದಾಜು 37,500/- ರೂಪಾಯಿ ಬೆಲೆವುಳ್ಳ ಮೋಬೈಲ ಹಾಗು ಬಂಗಾರದ ಉಂಗುರುಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ಹೊಗಿದ್ದ ಅಪರಿಚಿತ ಹುಡುಗರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳಬೇಕೆಂದು ವಿನಂತಿ.ಅಂತಾ ಪಿರ್ಯಾದಿ ಅರ್ಜಿಯ ಸಾರಾಂಶ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯ ಗುನ್ನೆ ನಂ. 58/2011 ಕಲಂ. 397 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

28 May 2011

ಗುಲಬರ್ಗಾ ಜಿಲ್ಲೆ ಅಪರಾದಗಳ ಮಾಹಿತಿ

ಚಿಂಚೋಳಿ ಪೊಲೀಸ್‌ ಠಾಣೆ .

ಲಕ್ಷ್ಮ ಗಂಡ ಜಗನ್ನಾಥ ಅವಂಟಗಿ ಐನ್ನೋಳಿರವರ ಮಗಳಾದ ಮಿನಾಕ್ಷಿ ವಯಸ್ಸು 16 ಪಕ್ಕದ ಮನೆಯವನಾದ ಸುರೇಶ ತಂದೆ ನರಸಪ್ಪಾ ಕೊರವೆಯರ ಇತನು ಮದುವೆ ಆಗುತ್ತೇನೆ ಅಂತಾ ನಂಬಿಸಿ ಮಿನಾಕ್ಷಿಯನ್ನು ದಿನಾಂಕ 24/05/2011 ರಂದು ಅಪಹರಿಸಿಕೊಂಡು ಹೋಗಿರುತ್ತಾನೆ ಅಪ್ರಾಪ್ತ ವಯಸ್ಸಿನವಳಾದ ಮಿನಾಕ್ಷಿ ಇವಳಿಗೆ ಕಳೆದ 24/05/2011 ರಿಂದ ಮನೆಯವರು ಹುಡುಕಾಡಿರುತ್ತಾರೆ. ಅವಳಿಗೆ ಅಪಹರಿಸಿಕೊಂಡು ಹೋಗಿರುವ ಕಾರಣ ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾಧಿ ಸಾರಾಂಶದ ಮೇಲೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಜೇವರ್ಗಿ ಪೊಲೀಸ್ ಠಾಣೆ

ಜೇವರ್ಗಿ ತಾಲೂಕಿನ್ ಮುದಬಾಳ (ಬಿ) ಗ್ರಾಮದ ಹತ್ತಿರ ಯಾವುದೋ ವಾಹನವು ರಾತ್ರಿ ವೇಳೆಯಲ್ಲಿ ಸಂತೋಷ ಕುಮಾರ ತಂದೆ ಮೋಹನರಾವ ಪತ್ತಾರ ಆಳಂದ ಇವರಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಹಾಗೇಯೇ ಹೋಗಿದ್ದು ಪರಿಣಾಮ ಸಂತೊಷ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಸ್ಟೇಷನ ಬಜಾರ ಪೊಲಿಸ್ ಠಾಣೆ

ಸ್ಟೇಷನ ಬಜಾರ ಹತ್ತಿರ ಚಿಕನ ಫುಡ್ ಸೆಂಟರ ಮುಂದೆ ಶಿವು ತಂದೆ ಸಂಗಣ್ಣ ಮತ್ತುಕೊ ಅವನ ಜೊತೆ ಎರಡು ಜನರು ಕುಡಿಕೊಂಡು ಕ್ಷುಲ್ಲಕ ಕಾರಣಕ್ಕಾಗಿ ಜಗಳತೆಗೆದು ಆನಂದನಿಗೆ ಹೊಡೆದು ಗಾಯಪಡಿಸಿದ್ದ ಕಾರಣ ಅನಂದ ಈತನು ಬಸವೇಶ್ವರ ಆಸ್ಪತ್ರೆ ಯಲ್ಲಿ ಉಪಚಾರ ಪಡೆದುತ್ತಿರುತ್ತಾನೆ ಮತ್ತು ಜೀವಕ್ಕೆ ಭಯ ಹಾಕಿರುತ್ತಾರೆ.
ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.