ಕೊಲೆ ಮಾಡಲು ಪ್ರಯತ್ನ ;
ಮಾಹಾಂಗಾವ ಠಾಣೆ ;ಶ್ರೀ ಶರಣು @ ಶರಣಬಸಪ್ಪ ತಂ, ಲಾಲಪ್ಪ ಮೇಲಿನಮನಿ, ಸಾ||ಬೇಲೂರು ಜೆ. ರವರು ದಿನಾಂಕ 25-05-2011 ರಂದು ಬೆಳಿಗ್ಗೆ ಕಮಲಾಪೂರಕ್ಕೆ ತನ್ನ ಹಿರೋ ಹೊಂಡಾ ಮೋಟಾರ ಸೈಕಲ್ ನಂ: ಕೆ,ಎ-39-8414 ನೇದ್ದರ ಮೇಲೆ ಕಮಲಾಪೂರಕ್ಕೆ ಮದುವೆಗೆ ಹೋಗಿ ಮರಳಿ ಮಧ್ಯಾಹ್ನ ಹಳೆಯ ಅಂಕಲಗಿ ಕ್ರಾಸ್ ಹತ್ತಿರ ಹೋದಾಗ ಅಲ್ಲಿ 4 ಜನ ಅಪರಿಚಿತರು ತಡೆದು ನಿಲ್ಲಿಸಿ ಬಿಗಿಯಾಗಿ ಹಿಡಿದು ವಿಷವನ್ನು ಬಾಯಿಯಲ್ಲಿ ಹಾಕಿ ಕುಡಿಸಿದ್ದು ಅವರು ಅಂದಾಜು 25-30 ವರ್ಷದ ವಯಸ್ಸಿನವರಾಗಿರುತ್ತಾರೆ ನಂತರ ಉಪಚಾರ ಕುರಿತು ಡಾ||ಚಿಂಚೋಳ್ಳಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಕೊಲೆ ಮಾಡುವ ಉದ್ದೇಶದಿಂದ ಒತ್ತಾಯ ಪೂರ್ವಕವಾಗಿ ಬಿಗಿಯಾಗಿ ಹಿಡಿದು ಬಾಯಿಯಲ್ಲಿ ವಿಷ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;
ದ್ವೀಚಕ್ರ ವಾಹನ ಕಳವು ಪ್ರಕರಣ ;
ಬ್ರಹ್ಮಪೂರ ಠಾಣೆ :ಶ್ರೀ ಅಂಬರೀಶ ತಂದೆ ವಿಜಯಕುಮಾರ ಚಿಂಚೋಳಿ ಸಾ; ಮಾಹಾಗಾಂವವಾಡಿ ರವರು ದಿನಾಂಕ 26-05-2011 ರಂದು ಮಧ್ಯಾಹ್ನ 12 ರಿಂದ 1 ಗಂಟೆಯ ಅವಧಿಯಲ್ಲಿ ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ ಪ್ಲಸ ನಂ ಕೆಎ 32 ಆರ್ 1727 ಅ.ಕಿ. 20000/- ನೇದ್ದನ್ನು ಸುಪರ ಮಾರ್ಕೆಟದ ಅಮಾನತ್ ಬ್ಯಾಂಕಿನ ಎದುರುಗಡೆ ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
POLICE BHAVAN KALABURAGI
27 May 2011
GULBARGA DISTRICT REPORTED CRIMES
26 May 2011
GULBARGA DISTRICT REPORTED CRIMES
ಅಪಘಾತ ಪ್ರಕರಣ ;
ಗ್ರಾಮೀಣ ಠಾಣೆ ;ದಿನಾಂಕ 25-05-2011 ರಂದು ಶ್ರೀಮತಿ ಜಯಶ್ರೀ ಗಂಡ ಅಮೃತ ಪೊಲೀಸ ಪಾಟೀಲ ಸಾ: ನಿಪ್ಪಣಿ ತಾ: ಚಿತ್ತಾಪೂರ ಹಾ:ವ: ಎಸ್ಬಿ ಪಾಟೀಲ ಕಂಪನಿ ಕಪನೂರ ಗುಲಬರ್ಗಾ ಇವರು ತಮ್ಮ ಮಗಳಾದ ರೇಷ್ಮ ಇವಳ ಮದುವೆ ಪ್ರಯುಕ್ತ ಪಿರ್ಯಾದಿದಾರಳು ಹಾಗೂ ಅಮೃತ ಇಬ್ಬರು ಮಾಸಾಪ್ತಿ ದರ್ಗಾಕ್ಕೆ ದೀನ ನಮಸ್ಕಾರದ ಹರಕೆಯನ್ನು ಹೊತ್ತಿದ್ದು. ಅದರಂತೆ ಸಂಬಂದಿಕರೊಂದಿಗೆ ಮದ್ಯಾಹ್ನ 12:30 ಗಂಟೆಯ ಸುಮಾರಿಗೆ ದೀನ ನಮಸ್ಕಾರ ಹಾಕುತ್ತಾ ಮುಖ್ಯ ರಸ್ತೆಯ ಏರಲೈನ್ಸ್ ಧಾಬಾದ ಮುಂದಿನ ರಸ್ತೆಯ ಹತ್ತಿರ ಬಂದಾಗ ಹುಮನಾಬಾದ ಕಡೆಯಿಂದ ಒಂದು ಟಾಟಾ ಇಂಡಿಕಾ ಕಾರ ನಂ ಕೆಎ 32 ಎಮ್ 4689 ನೇದ್ದರ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಎಲ್ಲರಿಗೆ ಡಿಕ್ಕಿ ಹೊಡೆದುಕೊಂಡು ಸೈಡಿಗೆ ನಿಲ್ಲಿಸಿರುವದರಿಂದ ಪಿರ್ಯಾದಿಯ ಗಂಡ ಹಾಗೂ ಸಂಬಂದಿಕರಾದ ಶಿವಕಾಂತಮ್ಮ ತೆಲಂಗಾಣ ಹಾಗೂ ಇತರರೆಲ್ಲರಿಗೂ ಸಾದಾ & ಬಾರಿಗಾಯವಾಗಿದ್ದು ಅಮೃತ ಇತನು ಬೇಹುಷ ಆಗಿದ್ದು ಅವನನ್ನು 108 ಅಂಬುಲೈನ್ಸ್ದಲ್ಲಿ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ 1 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಗಳು ಕಾಣೆಯಾದ ಪ್ರಕರಣ ;
ಎಮ್ ಬಿ ನಗರ ಠಾಣೆ ;ಶ್ರೀ ವಾಯ.ಎಂ.ಜಯರಾಜ ಪ್ರೋಫೆಸರ ಮೈಕ್ರೋಬಯಾಲಜಿ ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ ಸಾ; " ವಿನಾಯಕ "ಪ್ಲಾಟ ನಂ.20 ನಿಯರ ಹನುಮಾನ ಟೆಂಪಲ್ ಜಯನಗರ ಕಾಲೂನಿ ಸೇಡಂ ರೋಡ ಗುಲಬರ್ಗಾರವರ ಮಗನಾದ ಸಂತೋಷಕುಮಾರ ಇವನ ಹೆಂಡತಿ ಶ್ರೀಮತಿ ಶಿಲ್ಪಾ ಇವಳು ದಿನಾಂಕ ದಿನಾಂಕ.23-5-2011 ರಂದು 12-00 ಗಂಟೆಯಿಂದ 1-45 ಪಿ.ಎಂ.ದ ಮದ್ಯದ ಅವಧಿಯಲ್ಲಿ ಮನೆಯಿಂದ ಯಾರಿಗೂ ಏನು ಹೇಳದೆ ಕೇಳದೆ ಲಗೇಜ ತೆಗೆದುಕೊಂಡು ಹೋಗಿದ್ದು ದಿನಾಂಕ. 23-5-2011 ರಿಂದ ಇವತ್ತಿನವರೆಗೆ ಅಂದರೆ 25-5-2011 ವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಕಾಣೆಯಾಗಿರುತ್ತಾಳೆ, ಕಾಣೆಯಾದ ಮಹಿಳೆಯ ಚಹರೆ ಪಟ್ಟಿ;- ಎತ್ತರ 4'8" ಗುಂಡನೆಯ ಮುಖ ,ಸದೃಡ ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ , ಕಣ್ಣುಗಳ ಕೆಳ ರೆಪ್ಪೆ ಕಪ್ಪಾಗಿರುತ್ತವೆ , ಸ್ಪೀಡಾಗಿ ಮಾತನಾಡುತ್ತಾಳೆ, ಕನ್ನಡ , ಹಿಂದಿ , ಇಂಗ್ಲೀಷ ಬರೆಯಲು , ಮಾತನಾಡಲು , ಓದಲು ಬರುತ್ತದೆ. ಡಾರ್ಕ ಕಲರನ ಚುಡಿದಾರ , ಕುರತ ಸೆಲವಾರ ಬಟ್ಟೆಗಳು ಧರಿಸಿರಬಹುದು ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್ ಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
25 May 2011
GULBARGA DISTRICT REPORTED CRIMES
ನಿಂದನೆ ಪ್ರಕರಣ ;
ಬ್ರಹ್ಮಪೂರ ಠಾಣೆ ;
ಶ್ರೀ ದತ್ತಾತ್ರೇಯ ತಂದೆ ರಾಮಚಂದ್ರ ಮತ್ತು ಹಣಮವ್ವ ಗಂಡ ಮಾಹಾದೇವಪ್ಪಾ ದೊಡ್ಡಮನಿ ಗೋವಾ ಹೋಟೆಲ ಹತ್ತಿರ ಹೋಟೆಲ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವಾಗ ಸಿಲೆದಿನಾಂಕ 24-05-2011 ರಂದು ರಾತ್ರಿ ಪಕ್ಕದ ಗ್ಯರೇಜ ನವರಾದ ಅಬ್ದುಲ ಗಫೂರ ತಂದೆ ಅಬ್ದುಲ ಜಬ್ಬಾರ ಮಹ್ಮದ ಹಮೀದ ಹುಸೇನ ಮತ್ತು ಇವರ ಅಣ್ಣನ ಮಗ ಮತ್ತು ಮುರಲಿಧರ ರತ್ನಗೀರಿ ಇವರು ಕೊಡಿಕೊಂಡು ಗ್ಯಾರೆಜನಲ್ಲಿ ಸೀಲೆಂಡರನಿಂದ ಬೇರೆ ವಾನಗಳಿಗೆ ಹಾಕುತ್ತಿದ್ದು ಗ್ಯಾಸದ ದುರ್ವಾಸನೆ ಬರುತ್ತಿದ್ದು ಇಲ್ಲಿ ಗ್ಯಾಸ ತುಂಬಬೇಡರಿ ವಾಸನೆ ಬರತ್ತಾಇದೆ ಅಂತಾ ಹೇಳಲು ಹೋದ ನಾನು ಮತ್ತು ನನ್ನ ಅತ್ತೆ ಹಣಮವ್ವ ಇಬ್ಬರ ಜೋತೆಗೆ ಜಗಳಕ್ಕೆ ಬಿದ್ದು ಹೊಡೆಬಡೆಮಾಡಿ ಅವಾಚ್ಯಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ ;
ಗ್ರಾಮೀಣ ಠಾಣೆ ;ಶ್ರೀ ಮಹ್ಮದ ನಿಜಾಮೋದ್ದೀನ ತಂದೆ ಸುಲೇಮಾನಸಾಬ ತೇಲಿ ಸಾ:ಮೇ:ಪೀರ ಇಂಡಸ್ಟ್ರಿಜ್ ಪ್ಲಾಟನಂ 18(ಎ) 18(ಬಿ) & 17 ಕೆಐಡಿಬಿ ಇಂಡಸ್ಟ್ರಿ ಯಲ್ ಏರಿಯಾ 2 ನೇ ಹಂತ ಗುಲಬರ್ಗಾ ಇವರು ದಿನಾಂಕ 13-05-2011 ರಂದು ತನ್ನ ಮಗನ ಮದುವೆ ಇರುವದರಿಂದ ರಾಜಸ್ತಾನಕ್ಕೆ ಹೋಗುವಾಗ ತಮ್ಮ ಪ್ಯಾಕ್ಟರಿ ಬಂದ ಮಾಡಿಕೊಂಡು ಹೋಗಿದ್ದು ಈ ವೇಳೆಯಲ್ಲಿ ನಮ್ಮ ಮುನಿಮನಾದ ಗೌಸ ಇತನು ದಿನಾಂಕ 22-05-2011 ರಂದು ಪೋನ ಮಾಡಿ ಪ್ಯಾಕ್ಟರಿಯ ಹಿಂದಿನ ಗೋಡೆ ಸ್ವಲ್ಪ ಒಡೆದು ಪ್ಯಾಕ್ಟರಿಯಲ್ಲಿಯ ತೋಗರಿ ಬೆಳೆ ಕಳುವು ಮಾಡಿಕೊಂಡು ಹೋಗಿ ರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ರಾಜಸ್ತಾನದಿಂದ ದಿನಾಂಕ 23-05-2011 ರಂದು ಮದ್ಯಾಹ್ನ ಗುಲಬರ್ಗಾಕ್ಕೆ ಬಂದು ನನ್ನ ಪ್ಯಾಕ್ಟ್ರಿ ಹತ್ತಿರ ಹೋಗಿ ಮುನಿಮನಾದ ಗೌಸ ಇತನೊಂದಿಗೆ ಪ್ಯಾಕ್ಟರಿಯ ಶೆಟರ್ ತೆಗೆದು ನೋಡಲಾಗಿ ಪ್ಯಾಕ್ಟ್ರಿಯ ಹಿಂದಿನ ಗೋಡೆ ಸ್ವಲ್ಪ ಒಡೆದು ಪ್ಯಾಕ್ಟ್ರಿಯಲ್ಲಿಯ ಸುಮಾರು 2,24,000/- ರೂಪಾಯಿ ಕಿಮ್ಮತ್ತಿನ 50 ಕೆಜಿಯ ತೋಗರಿ ಬ್ಯಾಳಿಯ 80 ಬ್ಯಾಗಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ ;
ಆಳಂದ ಠಾಣೆ ;ಶ್ರೀಮತಿ ಪೂಜಾ ಗಂಡ ರಮೇಶ ಲೋಹರ ಸಾ; ರೇವಣಸಿದ್ದೇಶ್ವರ ಕಾಲೂನಿ ಆಳಂದ ರವರ ದಿನಾಂಕ 24-05-2011 ರಂದು ಕರ್ನಾಟಕ ಮೆಡಿಕಲದ ಆಸೀಫ ಹಾಗೂ ಆತನ ತಮ್ಮ ಯುನುಸ ಮತ್ತು ಸಂಗಡ 4-5 ಜನರು ಕುಡಿಕೊಂಡು ನಮ್ಮ ಮೆಡಿಕಲ್ ಅಂಗಡಿಗೆ ಬಂದು ವಿ:ನಾಕಾರಣ ಜಗಳ ತೆಗೆದು ಅಂಗಡಿಯಲ್ಲಿ ಕೆಲಸ ಮಾಡುವ ಕಾಸಿನಾಥ ಮತ್ತು ಹಣಮಂತ ಹಾಗು ನನ್ನ ಗಂಡನಾದ ರಮೇಶ ಇವರಿಗೆ ಕೊಲೆ ಮಾಡುವ ಉದ್ಧೇಶದಿಂದ ಚಾಕುವಿನಿಂದ ಕಬ್ಬಿಣದ ರಾಡಿನಿಂದ ಹೊಡೆದು ಗಾಯಗಳಿಸಿ ಅಂಡಿಯ ಕೌಂಟರ ಗ್ಲಾಸ ಮತ್ತು ಔಸಧ ಬಾಟಲಗಳನ್ನು ಒಡೆದು ಹಾಳುಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.