POLICE BHAVAN KALABURAGI

POLICE BHAVAN KALABURAGI

31 July 2011

GULBARGA DIST REPORTED CRIMES

ಗಂಡನ ಕಿರಕುಳ ತಾಳಲಾರದೆ ಹೆಂಡತಿ ವಿಷ ಸೇವಿಸಿ ಆತ್ಮಹತ್ಯೆ :

ಸೇಡಂ ಠಾಣೆ : ಶ್ರೀಮತಿ ನಾಗಮ್ಮಾ ಗಂಡ ಈರಣ್ಣ ಬಡಿಗೇರ ಸಾ|| ಸಣ್ಣ ಅಗಸಿ ಸೇಡಂ ರವರು ನನ್ನ ಮಗಳಾದ ರೇಣುಕಾ ಇವಳಿಗೆ ಅಳಿಯ ಪೀರಪ್ಪ ಇತನು ಸುಮಾರು 4 ತಿಂಗಳಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದರಿಂದ ನನ್ನ ಮಗಳು ದಿನಾಂಕ: 18-7-11 ರಂದು ಮೇವು ( ಹುಲ್ಲು) ಗೆ ಹೊಡೆಯುವ ಎಣ್ಣೆ ಕುಡಿದು ಉಪಚಾರ ಹೊಂದುತ್ತಾ ದಿನಾಂಕ: 29-7-11 ರಂದು ಸಾಯಾಂಕಾಲ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಸಂಚಾರಿ ಠಾಣೆ : ಶ್ರೀ ಮಹಮದ್ ಹಾವೇಜ್ ತಂದೆ ಅನ್ವರ್ ಹುಸೇನ್ ವಾಲಿಬ ಸಾ: ರೆಹಮತ್ ನಗರ ಗುಲಬರ್ಗಾ ರವರು ನಾನು ಮತ್ತು ಮಹಮದ ಫಯಜ್ ಇಬ್ಬರು ಕುಡಿಕೊಂಡು ಮೋಟಾರ ಸೈಕಲ್ ನಂ: ಕೆಎ.32 ವಾಯ್ 5794 ನೇದ್ದರ ಮೇಲೆ ಖಾಜಾ ಬಂದೇ ನವಾಜ್ ದರ್ಗಾಕ್ಕೆ ದಿಂದ ಮನೆಗೆ ಮರಳಿ ಪಾಯನ್ ಗಲ್ಲಿ ರಸ್ತೆ ಮಾರ್ಗವಾಗಿ ಹೊಗುತ್ತಿರುವಾಗ ಮಹಮದ್ ಫಯಾಜ್ ಈತನು ತನ್ನ ಮೋಟಾರ ಸೈಕಲ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ  ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ ಸೈಕಲ ಸ್ಕೀಡ್ ಆಗಿ ಬಿದ್ದು ನನಗೆ ಹಾಗೂ ಫಯಾಜ್ ಇಬ್ಬರಿಗೆ ಗಾಯಗಳಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 July 2011

GULBARGA DISTRICT REPORTED CRIMES

ಜಾನುವಾರು ಕಳ್ಳತನ ಪ್ರಕರಣ:

ನರೋಣಾ ಪೊಲೀಸ ಠಾಣೆ: ಶಿವಾಜಿ ತಂದೆ ಕಾಶೀಬಾ ಗಾಯಕವಾಡ ಸಾ: ಬೆಟ್ಟಜೇವರ್ಗಿ ರವರು ನಾನು ದಿನಾಂಕ :27,28-07-2011 ರ ಮಧ್ಯರಾತ್ರಿಯ ಅವಧಿಯಲ್ಲಿ ಕೊಠಗಿಯಲ್ಲಿ ಕಟ್ಟಿದ್ದ ಆಕಳು ಕರುಗಳನ್ನು ಯಾರೋ ಕಳ್ಳರು ಬಿಚ್ಚಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಮಾಡಬೂಳ ಠಾಣೆ: ಶ್ರೀ ಯಲ್ಲಾಲಿಂಗ ತಂದೆ ಚಂದ್ರಶಾ ನಿಪ್ಪಾಣಿ ಸಾ|| ಮುಗಟಾ ತಾ:ಚಿತ್ತಾಪೂರ ರವರು ನಾನು ದಿನಾಂಕ:-29/07/2011 ರಂದು ಗುಲ್ಬರ್ಗಾದಿಂದ ಕೂಲಿ ಕೆಲಸ ಮುಗಿಸಿಕೊಂಡು ನನ್ನ ಊರಿಗೆ ಬರುತ್ತಿರುವಾಗ ಮುಗಟಾ ಗ್ರಾಮದ ಬ್ರೀಡ್ಜ್
ಹತ್ತಿರ ರಾತ್ರಿ ಟಿಪ್ಪರ ನಂ. ಕೆ.. 32 ಬಿ 3568 ನೇದ್ದರ ಚಾಲಕ ಶಿವರಾಮ ತಂದೆ ಬಾಬು ದಂಡಗೂಲಕರ್ ಸಾ:ಚಂದರ ನಗರ ಇತನು ಅತೀವೇಗ ಹಾಗು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ತನ್ನ ಟಿಪ್ಪರ ಪಲ್ಟಿ ಮಾಡಿಕೊಂಡನು. ನಾನು ಮತ್ತು ಹಿಂದೆ ಬರುತ್ತಿದ್ದ ಟಿಪ್ಪರ ನಂ. ಕೆ.. 32 ಬಿ 2022 ನೇದ್ದರ ಚಾಲಕ ಹಾಗೂ ಅದರಲ್ಲಿದ್ದ ಇನ್ನೊಬ್ಬ ಕೂಡಿ ಶಿವರಾಮನಿಗೆ ನೋಡಲಾಗಿ ಬಲಗೈ ಹತ್ತಿರ ಬಲ ತಲೆಗೆ ಭಾರಿ ರಕ್ತಗಾಯ, ಬಾಯಿ ಮೂಗಿನಿಂದ ರಕ್ತ ಸೊರುತ್ತಿದ್ದು, ಎಡ ಮುಂಡಿಗೆ ರಕ್ತಗಾಯವಾಗಿ ನರಳಾಡುತ್ತಿದ್ದು ನೋಡಿ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಸುವ ಸಲುವಾಗಿ ನಾನು ರಾಜಕುಮಾರ ಹಾಗು ಟಿಪ್ಪರ ಚಾಲಕ ಫಾರುಕ ಹರಸೂರ ಕೂಡಿಕೊಂಡು ಸರಕಾರಿ ಆಸ್ಪತ್ರೆ ಗುಂಡಗುರ್ತಿಗೆ ಕರೆದುಕೊಂಡು ಬರುತ್ತಿರುವಾಗ ಟಿಪ್ಪರ ಚಾಲಕ ಶಿವರಾಮ ತಂದೆ ಬಾಬು ದಂಡಗೂಲಕರ್ ಸಾ:ಚಂದರ ನಗರ ಮಾರ್ಗ ಮಧ್ಯದಲ್ಲಿಯೆ ಮೃತ ಪಟ್ಟಿರುತ್ತಾನೆ ಅಂತ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ :.
ಶ್ರೀ ಪ್ರದೀಪ ತಂದೆ ವೈಜಿನಾಥ ಭಾವೆ ಸಾ|| ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು ನಾನು ದಿನಾಂಕ 29.07.2011 ರಂದು ಸಾಯಂಕಾಲ ನನ್ನ ಮೋಟಾರ ಸೈಕಲ ತೊಳೆಯಲು ಮೈಕಾನ ಬಾರ ಹತ್ತಿರ ಇರುವ ಸಾಯಿ ವಾಟರ ವಾಸಿಂಗ ಹತ್ತಿರ ಬಂದು ನನ್ನ ಮೋಟಾರ ಸೈಕಲ ತೊಳೆದುಕೊಳ್ಳುತ್ತಿದ್ದಾಗ ಶ್ರೀಕಾಂತ, ಶಿವ ಸಂಗಡ 7-8 ಜನರು ಕೂಡಿಕೊಂಡು ಬಂದು ಹಳೆಯ ವೈಷಮ್ಯದಿಂದ ಜಾತಿ ಎತ್ತಿ ಬೈದು ಮೊಟಾರ ಸೈಕಲ ಮೇಲೆ ಕೂಡಿಸಿಕೊಂಡು ಶ್ರೀಕಾಂತನ ಜಿಮ್ಮಿನಲ್ಲಿ ಕರೆದುಕೊಂಡು ಹೋಗಿ ರಾಡು, ಹಾಕಿಸ್ಟೀಕ ಹಾಗೂ ಬಡಿಗೆಯಿಂದ ಎಡಗೈ, ಮೊಳಕೈ, ಹೊಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಹಲ್ಲೆ ಪ್ರಕರಣ :
ಬ್ರಹ್ನಪೂರ ಠಾಣೆ :
ಶ್ರೀಮತಿ.ರಮಾದೇವಿ ಗಂಡ ದಿ:ರಾಜಕುಮಾರ ಮಾಡಗಿ, ಸಾ|| ಮಾಡಗಿ ಕಾಂಪ್ಲೇಕ್ಸ್ ಜಗತ ಗುಲಬರ್ಗಾರವರು ನಾನು ದಿನಾಂಕ: 29/07/11 ರಂದು ಸಾಯಂಕಾಲ್ ಸುಮಾರಿಗೆ ಈ ಮೊದಲು ದಾಖಲಾದ ಪ್ರಕರಣದ ವಿಚಾರಣೆ ಕುರಿತು ತಹಶೀಲ ಕಾರ್ಯಾಲಯಕ್ಕೆ ಬಂದಿದ್ದು, ವಿಚಾರಣೆ ಮುಗಿದ ನಂತರ ಹೊರಗಡೆ ಬಂದಾಗ ಯಶವಂತ ತಂದೆ ರುಕ್ಕಪ್ಪ ಗೋಳಾ, ಮಹೇಶ ಬಾಬು ಗೋಳಾ, ಅನೀಲಕುಮಾರ ಗೋಳಾ, ಮಹಾದೇವಿ ಗಂಡ ಯಶವಂತ ಗೋಳಾ ಇವರೆಲ್ಲರೂ ಸೇರಿ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈ ಹಿಡಿದು ಎಳೆದಾಡಿ ಕೈಯಿಂದ ಹೊಡೆದು, ಜೀವದ ಬೆದರಿಕೆ ಹಾಕಿ ಅವಮಾನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮಾನಭಂಗ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀ ನಾಗರಾಜ ತಂದೆ ಮಚಲ್ಯಾ ಕಾಳೇ ಸಾ|| ತಾಜಸುಲ್ತಾನಪೂರ ಗ್ರಾಮ ಸಧ್ಯ ಬೋಯಿನಪಲ್ಲಿ ಹೈದ್ರಾಬಾದ ನಾನು ನನ್ನ ಹೆಂಡತಿ ದಿನಾಂಕ 28-07-2011 ರಂದು ಮನೆಯ ಎದುರು ಕುಳಿತುಕೊಂಡು ಮಾತನಾಡುತ್ತಿರುವಾಗ ನಮ್ಮ ಜನಾಂಗದ ಹಡಗಿಲ ಗ್ರಾಮದ ಲಕ್ಷ್ಮಣ ತಂದೆ ಶಾಮರಾವ ಶಂಕರ ತಂದೆ ಲಕ್ಷ್ಮಣ, ರಾಮು ತಂದೆ ಲಗಮ್ಯಾ, ಗಂಗ್ಯಾ ತಂದೆ ಜುಗಟ್ಯಾ, ಹೀರಾಬಾಯಿ ಗಂಡ ಲಕ್ಷ್ಮಣ ಇವರೆಲ್ಲರೂ ಅವಾಚ್ಯವಾಗಿ ಬೈದು ನನ್ನ ಹೆಂಡತಿ ಅಂಜನಮ್ಮಾ ಇವಳಿಗೆ ಮಾನಭಂಗ ಮಾಡುವ ಉದ್ದೇಶದಿಂದ ಕೈ ಹಿಡಿದು ಜಗ್ಗಿ ಬ್ಲೋಜ ಹರಿದರು. ನನಗೆ ಲಕ್ಷ್ಮಣ ಈತನು ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಮೊಳಕಾಲ ಮೇಲೆ ಹೊಡೆದು ಗುಪ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .

29 July 2011

GULBARGA DISTRICT REPORTED CRIMES

ಗಂಡನ ಮನೆಯವರಿಂದ ಕಿರುಕುಳ ತಾಳಲಾರದೇ ಗೃಹಿಣೆ ಆತ್ನಹತ್ಯೆ

ದೇವಲ ಗಾಣಗಾಪೂರ ಠಾಣೆ: ಶ್ರೀ ಶರಣಪ್ಪ ತಂದೆ ಅಯ್ಯಪ್ಪಗೌಡ ಪೊಲೀಸ ಪಾಟೀಲ ಸಾ|| ಮನೆ ನಂ 10/49 ಭವಾನಿ ಪೇಠ ಗೋಂಗಡೆ ವಸ್ತಿ ಸೋಲಾಪೂರ ರವರು ನನ್ನ ತಂಗಿ ಶಕುಂತಲಾ ಇವಳಿಗೆ ಅಫಜಲಪೂರ ತಾಲೂಕಿನ ಹಾವನೂರ ಗ್ರಾಮದ ನಿವೃತ್ತ ಅಬಕಾರಿ ಎ.ಎಸ್.ಐ ಜಟ್ಟೆಪ್ಪ ಪೂಜಾರಿ ರವರ ಮಗನಾದ ಅಮೀತಕುಮಾರನೊಂದಿಗೆ 2005 ಸಾಲಿನಲ್ಲಿ ಲಗ್ನ ಮಾಡಿ ಕೊಟ್ಟಿರುತ್ತೇವೆ, ಲಗ್ನದ ಸಮಯದಲ್ಲಿ ವರನಿಗೆ 2 ಲಕ್ಷ ರೂಪಾಯಿ, 4 ತೊಲಿ ಬಂಗಾರ ಮತ್ತು ಗೃಹಬಳಿಕೆ ಸಾಮಾನುಗಳೆಲ್ಲ ಕೊಟ್ಟು ಮದುವೆ ಮಾಢಿ ಕೊಟ್ಟಿರುತ್ತೇವೆ. ತಂಗಿ ಶಕುಂತಲಾಗೆ ಅವಳ ಗಂಡ, ಅತ್ತೆ :ಮಹಾದೇವಮ್ಮಾ ,ಮಾವ ಜೆಟ್ಟಪ್ಪಾ ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದನ್ನು ತಾಳಲಾರದೆ ಗಂಡನ ಮನೆಯಲ್ಲಿ ಮೈಮೆಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಸ್ಟೇಷನ ಬಜಾರ ಠಾಣೆ : ಶ್ರೀ ಅಮರಯ್ಯ ಪೊಲೀಸ್ ಪೇದೆ ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ ರವರು ನಾನು ಬೆಳಿಗ್ಗೆಯಿಂದ ಪಟೇಲ್ ವೃತ್ತದಲ್ಲಿ ಸಂಚಾರಿ ನಿಯಂತ್ರಣ ಕರ್ತವ್ಯದಲ್ಲಿ ನಿರತನಾಗಿದ್ದು 11:45 ಎ.ಎಮ್. ಕ್ಕೆ ಶಾಂತಿ ಸಾಗರ ಹೊಟೇಲ್ ಮುಂದುಗಡೆ ಸಂಚಾರ ನಿಷೇಧಿತ ಸ್ಥಳದಲ್ಲಿ ಆಟೋ ರಿಕ್ಷಾ ನಂ ಕೆ.ಎ.-32/ಎ-1072 ನೇದ್ದರ ಚಾಲಕನು ಆಟೋ ನಿಲ್ಲಿಸಿದಾಗ ನಾನು ಆಟೋ ತಗೆಯಲು ಹೇಳಿದಾಗ ಆಟೋ ಚಾಲಕ ವಿಠಲ್ ತಂದೆ ಶಿವಪ್ಪ ಧರೆನ್ನವರನು ಕರ್ತವ್ಯ ನಿರತ ನನಗೆ ಮುಂದಕ್ಕೆ ಹೋಗುವುದಿಲ್ಲ ಬೋಸಡಿ ಮಗನೆ ಅಂತಾ ಬೈದಾಗ ಆಗ ನಾನು ಸಂಗಡ ಕರ್ತವ್ಯದಲ್ಲಿದ್ದ ರಾಜೇಂದ್ರ ಪ್ರಸಾದ ಹೆಚ್.ಸಿ. ಇಬ್ಬರೂ ಕೂಡಿಕೊಂಡು ಯಾಕೆ ತೆಗೆಯುವದಿಲ್ಲ ಅಂತಾ ಕೇಳಿದಾಗ ಆಟೋ ಚಾಲಕನು ಈ ಗುಲಬರ್ಗಾದಲ್ಲಿ ಸಂಚಾರಿ ನಿಯಂತ್ರಣ ಕರ್ತವ್ಯ ಹೇಗೆ ಮಾಡುತ್ತಿ ನೋಡಿಕೊಳ್ಳುತ್ತಿನಿ ಅಂತಾ ಬೆದರಿಕೆ ಹಾಕುತ್ತಾ ಸಮವಸ್ರ್ತ ಹಿಡಿದು ಜಗ್ಗಾಡಿ ಶರ್ಟನ್ನು ಹರಿದಿದ್ದು ಅಲ್ಲದೇ ಕರ್ತವ್ಯಕ್ಕೆ ಅಡೆತಡೆಯನ್ನುಂಟು ಮಾಡಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

GULBARGA DIST REPORTED CRIMES

ಹಲ್ಲೆ ಪ್ರಕರಣ:
ಮಳಖೇಡ ಠಾಣೆ:
ದೇವಿಂದ್ರಪ್ಪ ತಂದೆ ಕರೆಪ್ಪ ಸಿಂಗೆನವರ ಸಾ|| ಹಂಗನಳ್ಳಿ ತಾ|| ಸೇಡಂ ರವರು ನಾನು ಹೊಲ ಕಡತ ಹಾಕಿಕೊಂಡ ಗುರುಲಿಂಗಪ್ಪ ಗೌಡರ ಹೊಲದಲ್ಲಿ ಕೆಲಸ ಮಾಡುತ್ತ ಇದ್ದಾಗ ಸಾಯಂಕಾಲ ಸುಮಾರಿಗೆ ಮರೆಪ್ಪ ತಂದೆ ಪೀರಪ್ಪ ಕಲಕಂಬದವರ ಸಾ|| ಹಂಗನಳ್ಳಿ ಇತನು ತನ್ನ ದನಗಳನ್ನು ಮೇಯಿಸುತ್ತಾ ಹೋಲದಲ್ಲಿ ಬಂದಾಗ ನಮ್ಮ ಹೊಲದಲ್ಲಿ ಯಾಕೆ ದನಗಳನ್ನು ಹೊಡೆದುಕೊಂಡು ಹೊರಟಿದ್ದಿ ಅಂತ ಕೆಳಿದ್ದಕ್ಕೆ ಮರೆಪ್ಪಾ ಇತನು ಅವಾಚ್ಯವಾಗಿ ಬೈದು ತನ್ನ ಹತ್ತಿರ ಇದ್ದ ಕೊಡಲಿಯಿಂದ ಎಡಗೈ ಮೊಳಕೈ ಹತ್ತಿರ ಕೊಡೆದು ರಕ್ತ ಗಾಯಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಹಲ್ಲೆ ಪ್ರಕರಣ:

ಅಶೋಕ ನಗರ ಠಾಣೆ : ಶ್ರೀ ಮಾಣಿಕರೆಡ್ಡಿ ತಂದೆ ಗುಂಡಾರೆಡ್ಡಿ ಅನಂತರೆಡ್ಡಿ ಸಾ: ಕರುಣೇಶ್ವರ ನಗರ ಗುಲಬರ್ಗಾ ರವರು ನಾನು ದಿನಾಂಕ: 28-7-2011 ರಂದು ಬೆಳಿಗ್ಗೆ ಕೇಂದ್ರ ಬಸ್ಸ ನಿಲ್ದಾಣದ ಎದುರುಗಡೆ ಇರುವ ಕಮಲ ಹೋಟಲ ಎದುರಿನ ರೋಡಿನ ಮೇಲೆ ನಿಂತಾಗ ರಾಜೇಶ ಮತ್ತು ಇನ್ನು ಇಬ್ಬರು ಬಂದು ಪ್ಲಾಟ ಮಾರಾಟದ ಹಣದ ವಿಷಯದಲ್ಲಿ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ತಲೆಗೆ ಮತ್ತು ನನ್ನ ಬಲಗಡೆ ಕಾಲಿನ ಟೊಂಕಿನ ಮೇಲೆ ಒದ್ದು ಗುಪ್ತ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಜಶೇಖರ ತಂದೆ ಸಂಗಣ್ಣಪ್ಪ ಉಪ್ಪಿನ ಗುಲಬರ್ಗಾ   ರವರು ನಾನು ದಿನಾಂಕ: 27-07-2011 ರಂದು ಬೆಳಗ್ಗೆ  ಐವಾನ ಈ ಶಾಹಿ ರೋಡಿನಲ್ಲಿರುವ ಕುವೇಂಪು ನಗರ ಕ್ರಾಸ್ ಹತ್ತಿರ ಅಟೋರೀಕ್ಷಾ ನಂ:ಕೆಎ 32 ಎ 8295 ನೇದ್ದರ ಚಾಲಕ ತನ್ನ ಅಟೋವನ್ನು ಅತಿವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟಿ.ವಿ.ಎಸ್.ಮೇಲೆ ನಂ: ಕೆಎ 32 ವಿ 2146 ನೆದ್ದರ ಮೇಲೆ ಬರುತ್ತಿದ್ದ ಸಿದ್ದಣ್ಣ ಮೇಳಕುಂದಿ ಇವರಿಗೆ ಎದುರಿನಿಂದ ಡಿಕ್ಕಿ ಪಡಿಸಿ ತನ್ನ ಅಟೊರೀಕ್ಷಾ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಹರಣ ಪ್ರಕರಣ:
ಗ್ರಾಮೀಣ ಠಾಣೆ.
ಶ್ರೀ ಶಿವಶರಣಪ್ಪಾ ತಂದೆ ಸಾಯಿಬಣ್ಣಾ ಬೆಳಕೋಟಾ ಸಾ; ಭೀಮನಗರ ರಾಮನಗರ ಕಾಲೂನಿ ರಿಂಗರೋಡ ಗುಲಬರ್ಗಾ ರವರು ನನ್ನ ಇಬ್ಬರು ಮಕ್ಕಳಾದ ಪುಷ್ಪಾ 15 ವರ್ಷ ಮತ್ತು ಅಂಬಿಕಾ 11 ವರ್ಷ ಇಬ್ಬರು ರಾಮ ನಗರದಲ್ಲಿರುವ ಶಿವಲಿಂಗೇಶ್ವರ ಹಿರಿಯ ಪ್ರಾರ್ಥಮಿಕ ಶಾಲೆಯ ಹತ್ತಿರ ಗೋಗುತ್ತಿರುವಾಗ ಶಿವಕುಮಾರ ತಂದೆ ಸಿದ್ದಪ್ಪಾ ಶಿಲ್ಡ ಇತನು ಬಂದು ನನ್ನ ಮಗಳು ಅಪ್ರಾಪ್ತ ಬಾಲಕಿ ಪುಷ್ಪಾ ಇವಳಿಗೆ ದಿನಾಂಕ. 27-07-2011 ರಂದು ಮುಂಜಾನೆ ಜಬರ ದಸ್ತಿಯಿಂದ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿರುತ್ತಾನೆ. ಅಪಹರಿಸಿಕೊಂಡು ಹೋಗಲು ಆತನ ಹೆಂಡತಿ ರಮಾಬಾಯಿ , ತಂದೆಯಾದ ಸಿದ್ದಪ್ಪಾ ಶಿಲ್ಡ ತಾಯಿ ಮಹಾದೇವಿ ಹಾಗು ಕಾರ ಚಾಲಕ ಇವರು ಅಪಹರಿಸುವದಕ್ಕೆ ಸಹಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ: ದಾಖಲಾಗಿದೆ.

ಅಫಘಾತ ಪ್ರಕರಣ:

ಗ್ರಾಮೀಣ ಠಾಣೆ  :   ಶ್ರೀ ಮಲ್ಲೇಶಿ ತಂದೆ ಸಾಬಣ್ಣ ಬುಡಗ ಜಂಗಮ ಸಾ: ದಂಡೋತಿ ತಾ: ಚಿತ್ತಾಪೂರ ರವರು ನಾನು ನನ್ನ ಹೆಂಡತಿ ಶಾಂತಮ್ಮ ಹಾಗು ಮಗ ಆಕಾಶ ಕೂಡಿಕೊಂಡು ದಿನಾಂಕ 28-7-11 ರಂದು ಮಧ್ಯಾಹ್ನ ಚಿಂಚೋಳಿ ಕ್ರಾಸ ಹತ್ತಿವಿರುವ ವೀರಭದ್ರಶ್ವೇರ ಗುಡಿಯ ಎದುರಿನ ರಸ್ತೆಯಲ್ಲಿ ಹೊರಟಿದ್ದು, ಆಳಂದ ಚೆಕ್ಕ ಪೋಸ್ಟ ಕಡೆಯಿಂದ ಆಟೋ ಕೆಎ 32 ಎ 8502 ನೇದ್ದರ ಚಾಲಕ ಅತಿವೇಗ ಮತ್ತು ನಿರ್ಲಕ್ಷತನದಿಂದ ಹಾಗೂ ಅಡ್ಡಾ ತಿಡ್ಡಿ ನಡೆಸುತ್ತಾ ಬಂದವನೇ ರೋಡ ಬದಿ ಹೊರಟ ನನ್ನ ಮಗ ಆಕಾಶನಿಗೆ ಡಿಕ್ಕಿ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 July 2011

GULBARGA DIST REPORTED CRIMES

ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಆರೋಪ :

ಸ್ಟೇಷನ ಬಜಾರ ಠಾಣೆ: ಶ್ರೀ. ಎಮ್.ಬಿ.ಶಾಸ್ತ್ರಿ. ಅಪರ ಜಿಲ್ಲಾಧಿಕಾರಿಗಳು ಮಿನಿ ವಿಧಾನ ಸೌಧ, ಗುಲಬರ್ಗಾ ರವರು ಆಧಾರ ಗುರುತಿನ ಚೀಟಿ ಯೋಜನೆ ಕೇಂದ್ರ ಜೋನಲ್ ನಂ 1 ನೇದ್ದಕ್ಕೆ ಬೇಟಿ ನೀಡಿದಾಗ ಶ್ರೀ. ಶರಣಯ್ಯಾ ಹಿರೇಮಠ ಎಂಬುವರು ತಮಗೆ ಸಂಬಂಧ ಇರಲಾರದ ಜನರ ಅರ್ಜಿಗಳನ್ನು ತಂದು ಆಧಾರ ನೊಂದಣಿ ಮಾಡಲು ಅಲ್ಲಿದ್ದ ಸಿಬ್ಬಂದಿಯವರಿಗೆ ಒತ್ತಾಯಿಸುತಿದ್ದು ಹಾಗೂ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುತ್ತಿರುವದು ನನ್ನ ಗಮನಕ್ಕೆ ಬಂತು, ಸದರಿಯವನಿಗೆ ವಿಚಾರಿಸಲಾಗಿ ತಾನು ನೀರಾವರಿ ಇಲಾಖೆಯ ಸಿಬ್ಬಂದಿ ಇರುವದಾಗಿ ಹೇಳಿಕೊಂಡಿದ್ದು, ನಾನು ಆಧಾರ ನೊಂದಣಿ ಮಾಡಿಸಿಕೊಳ್ಳಲು ಬಂದಿರುವದಾಗಿ ಹೇಳಿಕೆ ನೀಡಿರುತ್ತಾರೆ, ಆದರೆ ಆಧಾರ ಕೇಂದ್ರದಲ್ಲಿ ಇವರ ಹೆಸರಿನ ಯಾವುದೆ ಅರ್ಜಿಯು ನೊಂದಣಿ ಆಗಿರುವದಿಲ್ಲಾ , ಇವರು ಜನರಿಂದ ಹಣ ಪಡೆದು ದಿನಾಲು ಇದೆ ರೀತಿ ಕೇಂದ್ರಕ್ಕೆ ಬಂದು ತೊಂದರೆ ಕೊಡುತ್ತಾರೆ ಅಂತ ಅಲ್ಲಿನ ಸಿಬ್ಬಂದಿ ತಿಳಿಸಿರುತ್ತಾರೆ, ಈ ವ್ಯಕ್ತಿಯು ಸರಕಾರಿ ಕೆಲಸದಲ್ಲಿ ಅಡಚಣೆ ಉಂಟು ಮಾಡಿ, ಸಿಬ್ಬಂದಿ ಜನರಿಗೆ ಹೆದರಿಸುವದು ಮಾಡುತ್ತಿದ್ದಾನೆ ಅಂತಾ ಅಪರ ಜಿಲ್ಲಾಧಿಕಾರಿಗಳು ಲಿಖಿತ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಂದಿ ಜಪ್ತಿ ಪ್ರಕರಣ :
ಸೇಡಂ ಠಾಣೆ
: ದಿನಾಂಕ: 28-7-11 ರಂದು  ಮುಂಜಾನೆ ಬಸವ ನಗರ ತಾಂಡಾದಲ್ಲಿ ಅಕ್ರಮ ಸೆಂದಿ ಮಾರಾಟ ಮಾಡುತ್ತಿದ್ದ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ಹಾಗು ಸಿಬ್ಬಂದಿ ಹಾಗೂ ಪಂಚರೊಂದಿಗೆ ಆ ಸ್ಥಳಕ್ಕೆ ಹೋಗಿ ನೋಡಲಾಗಿ ಪ್ರಕಾಶ ತಂದೆ ಬಾಬುಸಿಂಗ ಚವ್ಹಾಣ ಸಾ|| ಬಸವನಗರ ಸೇಡಂ ರವರು ಅಕ್ರಮ ಸೆಂದಿ ಮಾರಾಟ ಮಾಡುತ್ತಿದ್ದು ಅವನನ್ನು ವಶಕ್ಕೆ ತೆಗೆದುಕೊಂಡು ಅವನಿಂದ 150 ಲೀಟರ ಸೆಂದಿ ಜಪ್ತಿ ಮಾಡಿಕೊಂಡಿದ್ದರಿಂದ ಸೇಡಂ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ
:
ಶ್ರೀ ರಾಮಚಂದ್ರ ತಂದೆ ಮಾಹಾದೇವಪ್ಪ ಹರಸೂರ ಸಾ: ಆಲಗೂಡ ಗ್ರಾಮ ರವರು ನಾವು 4 ಜನ ಅಣ್ಣ ತಮ್ಮಂದಿರರಿದ್ದು, ನಾವು ಬೇರೆಯಾಗಿ 4 ವರ್ಷವಾಗಿದ್ದು, ಬೇರೆಯಾಗುವ ಸಮಯದಲ್ಲಿ 25,000/-ರೂಯಪಾಯಿಗಳು ಇತ್ತು ಆ ಹಣ ಎಲ್ಲಾ ಅಣ್ಣ ತಮ್ಮಂದಿರಿಗೆ ಸಮನಾಗಿ ಕೊಡುತ್ತೇನೆ ಅಂತಾ ಹೇಳಿದ್ದು, ನನಗೆ ಕೊಡಬೇಕಾದ ಹಣ ಕೊಡು ಅಂತಾ ಕೇಳಲು ಹೋದಾಗ ನನ್ನ ತಮ್ಮ & ಅವನ ಹೆಂಡತಿ ಇಬ್ಬರೂ ಅವ್ಯಾಚ್ಛವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:

ಮಳಖೇಡ ಠಾಣೆ: ಸಂಗಮ್ಮ ಗಂಡ ತುಕಾರಾಮ ಕಲಗುರ್ತಿ ಸಾ|| ಮಳಖೇಡ ರವರು ನಾನು ರಜನಿಕಾಂತ, ಶಶಿಕಲಾ, ಮಾಣಿಕಮ್ಮ  ಇವರೊಂದಿಗೆ ಶಿವಭದ್ರಮ್ಮ ರವರ ಮನೆಯ ಹತ್ತಿರ ನಿಂತಾಗ   ಗೌತಮ ಮತ್ತು ಭಗವಾನ, ಗೈಬಣ್ಣ ಕಾಳಿಂಗ ಸುಭಾಸ, ದೇವಿಂದ್ರಪ್ಪ, ಪಾರಮ್ಮ ಸಾ|| ಎಲ್ಲರೂ ಮಳಖೇಡ ರವರು   ಕುಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ವಿನಾಕಾರಣ ಕಲ್ಲುಗಳಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಗಾಯಗೊಳಿಸಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಮಳಖೇಡ ಠಾಣೆ: ಶ್ರೀದೇವಿ ಗಂಡ ದೇವಿಂದ್ರಪ್ಪ ನಿಂಗಮಾರಿ ಸಾ|| ಮಳಖೇಡ ತಾ|| ಸೇಡಂ ರವರು ನನ್ನ ಗಂಡನೊಂದಿಗೆ ನನ್ನ ಮನೆಯ ಮುಂದೆ ನಿಂತಾಗ   ಶ್ರೀಕಾಂತ ಮತ್ತು ಮಹಾಂತೇಶ, ಮಾರುತಿ, ದೇವಿಂದ್ರ, ಚಂದ್ರಪ್ಪ, ಶಿವರಾಯ, ರಾಮು, ಶಿವಭದ್ರಮ್ಮ, ಸರಡಗಿ ರವರು ಸಾ|| ಎಲ್ಲರೂ ಮಳಖೇಡ ರವರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ಹಿಡಿದುಕೊಂಡು ವಿನಾಕಾರಣ ಆವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ನನಗೆ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ :
ಬಸವರಾಜ ತಂದೆ ಶರಣಪ್ಪ ನಿಂಬರಗಿ ಸಾ|| ಗೌರ (ಬಿ) ಹಾ|| ವ|| ಅಫಜಲಪೂರ ರವರು ನನಗೆ ಶರಣು ದೆಗಿನಾಳ ಈತನು ವಿನಾಯಕ ಹೋಟಲಕ್ಕೆ ಊಟ ಮಾಡಲು ಕರೆದಿದ್ದರಿಂದ ನಾನು ವಿನಾಯಕ ಹೋಟಲಕ್ಕೆ ಬರುತ್ತಿದ್ದಾಗ ಎದುರಿನಿಂದ ಶರಣು ತನ್ನ ಕಾರನ್ನು ನಡೆಸಿಕೊಂಡು ಬಂದಿದ್ದು ಅದರಲ್ಲಿ ಕೂಡಿಸಿಕೊಂಡು ಮಣೂರ ಗ್ರಾಮದ ಮುಖಾಂತರ ಅಗರಖೇಡ ರೋಡಿಗೆ ಹೋಗಿ ಆಚೆ ಕಡೆ ಭೀಮಾ ಬ್ರಿಡ್ಜ ಗೆ ಕಾರ ನಿಲ್ಲಿಸಿ ತನಗೆ 2 ಲಕ್ಷ ರೂ ಕೊಡು ಇಲ್ಲದಿದ್ದರೆ ಭೀಮಾ ನದಿಯಲ್ಲಿ ಹಾಕುತ್ತೇವೆ ಎಂದು ಹೆದರಿಕೆ ಹಾಕಿದ್ದರಿಂದ ನಾನು ಹೆದರಿಕೊಂಡು ನನ್ನ ಹತ್ತಿರ ಹಣವಿಲ್ಲ. ಬ್ಯಾಂಕಿನಲ್ಲಿ 1 ಲಕ್ಷ ರೂ. ಇರುತ್ತವೆ. ಎ ಟಿ ಎಂ ಇದೆ ತೆಗೆದುಕೊಳ್ಳಿರಿ ಎಂದು ಅವರಿಗೆ ಹೆದರಿಕೊಂಡು ನನ್ನ ಹತ್ತಿರವಿದ್ದ ಎ.ಟಿ.ಎಂ. ಶರಣು ದೆಗಿನಾಳ ಈತನಿಗೆ ಕೊಟ್ಟಿರುತ್ತೇನೆ. ಅಲ್ಲಿಂದ ಕಾರಿನಲ್ಲಿ ಇಂಡಿ. ಸಿಂದಗಿ, ಗ್ರಾಮಕ್ಕೆ ಹೋಗಿ ಅಲ್ಲಿಂದ ದೇವರ ಹಿಪ್ಪರಗಿ ರೋಡಿಗೆ ಹೊರಟು ಸಿಂದಗಿಯಿಂದ 2 ಕಿ.ಮೀ. ಅಂತರ ಕಾರ ಕೆಟ್ಟು ನಿಂತಿತು. ಶರಣು ಮತ್ತು ಆತನ ಜೊತೆಗೆ ಇನ್ನು ಒಬ್ಬನು ಸಿಂದಗಿಗೆ ಕರೆದುಕೊಂಡು ಬಂದು ದಿನಾಂಕ 27/7/2011 ರಂದು ಬೆಳಿಗ್ಗೆ ಯುನಿಯನ್ ಬ್ಯಾಂಕಿಗೆ ಹೋಗಿ ನನ್ನ ಎ.ಟಿ.ಎಂ. ದಿಂದ 20,000=00 ರೂ. ಡ್ರಾ ಮಾಡಿಕೊಂಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಅಶೋಕ ನಗರ ಠಾಣೆ : ಶ್ರೀ ಶರಣು ತಂದೆ ಮಲ್ಲಪ್ಪ ತೆಕಡರ ಸಾ|| ಬಸವ ನಗರ ಗುಲಬರ್ಗಾ ರವರ   ನಾನು ದಿನಾಂಕ 27/07/2011 ರಂದು ಮಧ್ಯಾಹ್ನ ನನ್ನ ಬಾಡಿಗೆ ಮನೆಯ ಹತ್ತಿರ ನಿಂತಾಗ ನಮ್ಮ ಮನೆಯ ಸಮೀಪದಲ್ಲಿಯೆ ಇರುವ ಶರಣಬಸಪ್ಪ, ಮತ್ತು ಆತನ ಹೆಂಡತಿ ರೇಣುಕಾ ಅವರ ತಾಯಿ ವಿಠಾಬಾಯಿ ಅಲ್ಲದೆ ಇತರೆ ಇನ್ನೂ ಇಬ್ಬರು ಹುಡುಗರು ಕೂಡಿಕೊಂಡು ನನ್ನ ಹತ್ತಿರ ಬಂದು ಅವಾಚ್ಯವಾಗಿ ಬೈದು ನಮ್ಮ  ಹುಡುಗಿಗೆ ನೋಡಿ ಚುಡಾಯಿಸುತ್ತಿ ಮಗನೇ ಅಂತಾ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡಗಿಗೆ ಚುಡಾಯಿಸಿ ಹುಡಗಿಯ ತಂದೆ ತಾಯಿಯ ಮೇಲೆ ಹಲ್ಲೆ:

ಅಶೋಕ ನಗರ ಠಾಣೆ : ಶರಣಬಸಪ್ಪ ತಂದೆ ಬಸಣ್ಣ ಅನ್ವರ ಸಾ|| ಬಸವ ನಗರ ಗುಲಬರ್ಗಾ ರವರು ನಾನು ದಿನಾಂಕ 27/07/2011 ರಂದು ಮನೆಯಲ್ಲಿ ಇದ್ದಾಗ ಶರಣು ತಂದೆ ಮಲ್ಲಪ್ಪ ಇತನು ಬಂದವನೇ ಅವಾಚ್ಯವಾಗಿ ಬೈದು ನಿನ್ನ ಮಗಳಿಗೆ ಚುಡಾಯಿಸಿದ್ದೇನೆ. ಅಂತಾ ಬೈಯುತ್ತಿರಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಹೊರಗೆ ಬರಲು ಎದೆಯ ಮೇಲೆ ಮತ್ತು ಹೊಟ್ಟೆಯಲ್ಲಿ ಹೊಡೆದಿದ್ದು, ಬಿಡಿಸಲು ಬಂದ ನನ್ನ ಹೆಂಡತಿ ರೇಣುಕಾ ಇವಳಿಗೂ ಸಹ ಕೈಯಿಂದ ಹೊಡೆದಿರುತ್ತಾನೆ, ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 July 2011

GULBARGA DISTRICT REPORTED CRIME

ಹಲ್ಲೆ ಪ್ರಕರಣ :

ಬ್ರಹ್ಮಪೂರ ಠಾಣೆ : ಶ್ರೀ ಅಪ್ಪರಾವ ತಂದೆ ಮಾಣಿಕರಾವ ಕಾಂಬಳೆ ಸಾ: ಸುಂದರ ನಗರ ಗುಲಬರ್ಗಾ ರವರು ನಾನು ಹಾಗು ನನ್ನ ಮೊದಲನೇಯ ಹೆಂಡತಿಯಾದ ಚಂದ್ರಭಾಗಾ ಇಬ್ಬರು ಮನೆಯ ಮುಂದೆ ಮಾತಾಡುತ್ತಾ ಕುಳಿತಿರುವಾಗ ನನ್ನ ಮಗ ಸಂದೀಪ ಇತನು ಮನೆಯ ಒಳಗಿನಿಂದ ಹೊರಗೆ ಬಂದು ನನಗೆ ಖರ್ಚಿಗೆ ಹಣ ಕೊಡು ಅಂತಾ ಕೇಳಿದನು ಅದಕ್ಕೆ ನಾನು ನನ್ನ ಹತ್ತಿರ ಹಣ ಇಲ್ಲಾ ನಿನ್ನ ಖರ್ಚಿಗಾಗಿ ಯಾವುದಾದರೊಂದು ಕೆಲಸ ಮಾಡಿಕೊ ಅಂತಾ ಅಂದಿದಕ್ಕೆ ನನ್ನ ಮಗನು ನನ್ನೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಮುಖದ ಮೇಲೆ ಹೊಡೆದಿದ್ದಲ್ಲದೆ ತನ್ನ ಕಿಶೆಯಲ್ಲಿದ್ದ ಬ್ಲೇಡನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

GULBARGA DIST REPORTED CRIME

ಹಲ್ಲೆ ಪ್ರಕರಣ:

ಬ್ರಹ್ಮಪೂರ ಠಾಣೆ :ಶ್ರೀ ಸಂದೀಪ ತಂದೆ ಅಪ್ಪಾರಾವ ಕಾಂಬಳೆ ಸಾ|| ಸುಂದರ ನಗರ ಗುಲಬರ್ಗಾ ರವರು ಹಲ್ಲೆಗೊಳಗಾದ ಬಗ್ಗೆ ಎಮ್.ಎಲ್.ಸಿ ವಸೂಲಾಗಿದ್ದು, ಸಂದೀಪ ಇತನು ಬೇಹುಷ ಸ್ಥಿತಿಯಲ್ಲಿ ಇರುವದರಿಂದ ಆತನ ತಾಯಿಯಾದ ಮಂಗಲಾಬಾಯಿ ಕಾಂಬಳೆ ರವರು ನಾನು ಹಾಗು ನನ್ನ ಮಗನಾದ ಸಂದೀಪ್ ಇತನು ಮನೆಯ ಮುಂದೆ ಕುಳಿತಿರುವಾಗ ಹೊರಗಡೆ ಹೊಗಿದ್ದ ನನ್ನ ಗಂಡ ಅಪ್ಪಾರಾವ ಇವರು ಬಂದವರೆ ನನ್ನ ಮಗ ಸಂದೀಪನೊಂದಿಗೆ ಜಗಳಕ್ಕೆ ಬಿದ್ದು ಇಲ್ಲೆಕೆ ಕುಳಿತಿರುವಿ ಯಾವುದಾದರೊಂದು ಕೆಲಸ ಮಾಡುವಂತೆ ನಿನಗೆ ಎಷ್ಟು ಸಾರಿ ಹೇಳಿದರು ಸಹ ನೀನು ಕೆಲಸ ಮಾಡುತ್ತಿಲ್ಲಾ ಅಂತಾ ಅಲ್ಲೆ ಬಿದ್ದ ಕಲ್ಲಿನಿಂದ ಸಂದೀಪನ ತೆಲೆಗೆ ಹೊಡೆದಿದ್ದು ಇದರಿಂದ ಸಂದೀಪನು ಬೆಹುಷ ಆಗಿ ನೇಲದ ಮೇಲೆ ಬಿದ್ದಾಗ ಅವನಿಗೆಕೆ ಹೊಡೆಯುತ್ತಿರುವಿರಿ ಅಂತಾ ನಾನು ಕೇಳಿದಕ್ಕೆ ನನಗೂ ಕೂಡಾ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ ಇಷ್ಟಕ್ಕೆಲ್ಲಾ ನೀನೆ ಕಾರಣ ನಾಳೆಯಿಂದ ಅವನು ಕೆಲಸಕ್ಕೆ ಹೊಗದಿದ್ದರೆ ನಿಮ್ಮಿಬ್ಬರಿಗೆ ಹೊಡೆಯುತ್ತೆನೆ ಅಂತಾ ಬೇದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

26 July 2011

GULBARGA DISTRICT REPORTED CRIMES

ಹಲ್ಲೆ, ಕೊಲೆ ಪ್ರಯತ್ನ :

ಜೇವರ್ಗಿ ಠಾಣೆ: ಶ್ರೀ ಲಾಲಸಾಬ ತಂದೆ ಮೈಬೂಬ ಸಾಬ ಗಬಸಾವಲಗಿ ರವರು ನಾನು ಮತ್ತು ನನ್ನ ಅಣ್ಣ ಪೈಗಂಬರ ಇಬ್ಬರು ಕೂಡಿ ಗ್ರಾಮದ ಹೋಟೆಲದಲ್ಲಿದ್ದಾಗ ಗುಡು ಪಟೇಲ ಮತ್ತು ಅಮೀನ ಪಟೇಲ ಇವರು ಟಾಟಾ ಸೂಮೊದಲ್ಲಿ ಸಂಗಡ 10-12 ಜನರಿಗೆ ಕರೆದು ಕೊಂಡು ಬಂದು ಕೊಲೆ ಮಾಡುವ ಉದೇಶದಿಂದ ತಿಂಡಿ ತಿಂದ ಹಣ ಕೇಳತ್ತಿ ಅಂತ ಕೈಯಲ್ಲಿ ರಾಡು ಚಾಕು ಬಡಿಗೆ ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಪೈಗಂಬರನಿಗೆ ಗುಡು ಪಟೇಲ ಇತ್ತನು ರಾಡಿನಿಂದ ಹಣೆಯ ಹುಬ್ಬಿನ ಮೇಲೆ ಹೋಡೆದು ಮತ್ತು ಇಮಾಮಬಿ ಬಾಬಾಬಿ ಇವರಿಗೆ ಇನ್ನಿತರರೂ ಬಡಿಗೆಯಿಂದ ಹೊಡೆದು ಗುಪ್ತಗಾಯಗೊಳಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಸ್ಟೇಶನ ಬಜಾರ ಠಾಣೆ: ಶ್ರೀ ಸಿದ್ದಣ್ಣ ತಂದೆ ಸಂಗನ ಬಸಪ್ಪ ಸಾ|| ಕರುಣೇಶ್ವರ ನಗರ ಮಾನಕರ್ ಲೇಔಟ್ ಗುಲಬರ್ಗಾ ರವರು ನಾನು ಜೇವರ್ಗಿ ರಸ್ತೆಗೆ ಹೊಂದಿಕೊಂಡಿರುವ ಕೃಷ್ಣಾ ಬ್ಯಾಂಕಿನ ಪಕ್ಕದಲ್ಲಿರುವ ಮೊದಿ ಟ್ರೆಡರ್ಸ ಎಂಬ ಹಾರ್ಡವೇರ್ಸ ಮಳಿಗೆ ಇಟ್ಟಿಕೊಂಡು ವ್ಯಾಪರ ಮಾಡುತ್ತೆನೆ. ಮಳಿಗೆಯಲ್ಲಿ ಹಾರ್ಡವೇರ್ ಸಾಮಾನುಗಳು, ಇರುತ್ತವೆ ದಿನಾಂಕ: 25.07.11 ರಂದು ಪ್ರತಿ ದಿವಸದಂತೆ ರಾತ್ರಿ ಅಂಗಡಿಯನ್ನು ಮುಚ್ಚಿಕೊಂಡು ಕಿಲಿ ಹಾಕಿಕೊಂಡು ಮನೆಗೆ ಹೋಗಿರುತ್ತೆನೆ. ಬೆಳಗ್ಗೆ ಬಂದು ನೋಡಲಾಗಿ ಅಂಗಡಿಯ ಕಬ್ಬಿಣದ ಶೇಟರ್ ಬಲಗಡೆಯ ಭಾಗವನ್ನು ಯಾರೋ ಕಳ್ಳರೂ ಮುರಿದು ಅಂಗಡಿಯಲ್ಲಿದ್ದ ಹಾರ್ಡವೇರ ಸಾಮಾನುಗಳು ಅಕಿ 34,750/- ರೂ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ವಿಶ್ವವಿದ್ಯಾಲಯ ಠಾಣೆ : ಶ್ರೀ ಅಣವೀರಯ್ಯ ತಂದೆ ಶಿವಶರಣಯ್ಯ ಬಿದಿಮನಿ ಸಾ: ಬಿದ್ದಾಪೂರ ಕಾಲನಿ ರವರು ನಾನು ದಿನಾಂಕ 7-06-2011 ರಂದು ಹಿರೊ ಹೊಂಡಾ ಸಿಡಿ-100 ನಂ ಕೆಎ 32 ಜೆ 1399 ಮೊಟಾರ ಸೈಕಲ ಪದವಿ ಕಾಲೇಜ ಆವರಣದಲ್ಲಿ ನಿಲ್ಲಿಸಿ ಪ್ರಯೋಗ ಕಛೇರಿಗೆ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ

GULBARGA DISTRICT REPORTED CRIMES

ಗೃಹಿಣಿಗೆ ಕಿರುಕುಳ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀಮತಿ ನಸೀಮಾ ಬಾನು ಗಂಡ ಮಹ್ಮ,ದ ಮುಸ್ತಾಕ ಪಟೇಲ ಉ|| ಉಪನ್ಯಾಸಕಿ ಸಾ: ಜುಬೇರಾ ಕಾಲನಿ ಹಾಗರಗಾ ಕ್ರಾಸ ಗುಲಬರ್ಗಾ ರವರು ನನಗೆ ಮೂರುವರೆ ವರ್ಷದ ಹಿಂದೆ ಚಿಕ್ಕಪ್ಪ ಮತ್ತು ಅಣ್ಣಂದಿರು ಕೂಡಿ ಜುಬೇರಾ ಕಾಲನಿ ಮಹ್ಮದ ಮುಸ್ತಾಕ ಪಟೇಲ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಗಂಡ ಹಾಗೂ ಅತ್ತೆ ಮಾವ ಮೈದುನರು ನನಗೆ ಅಡಿಗೆ ಮಾಡಲು ಬರುವುದಿಲ್ಲ ಮನೆಯ ಕೆಲಸ ಬರುವುದಿಲ್ಲ ಅಂತಾ ಸಣ್ಣ ಪುಟ್ಟ ವಿಷಯಗಳಿಗೆ ಮಾನಸಿಕ ತೊಂದರೆ ಕೊಡುವದು ಹಾಗೂ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸುವದು ಹಾಗೂ ತವರು ಮನೆಯಿಂದ ಹಣವನ್ನು ತರುವಂತೆ ಹಿಂಸೆಯನ್ನು ಕೊಡುತ್ತಾ ಬಂದಿರುತ್ತಾರೆ ಅವರುಗಳ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ
:
ಶ್ರೀ ಶರಣಬಸಪ್ಪ ತಂದೆ ಪರಮೇಶ್ವರ ಕಣ್ಣಿ ಸಾ|| ಶರಣಸಿರಸಗಿ ತಾಂಡಾ ರವರು ನಾನು ನಮ್ಮ ದೊಡ್ಡಪ್ಪ ಶಿವಶರಣಪ್ಪ ಕಣ್ಣಿ ಇವರು ಈಚಲ ಕರಂಜಿ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಇವರ ಮೃತ ದೇಹ ಬರುವಿಕೆಗಾಗಿ ಕಾಯುತ್ತಾ ನಿಂತಿದ್ದೇವು. ನಮ್ಮ ಅಳಿಯ ಜಟ್ಟೆಪ್ಪ ತಂದೆ ಸಿದ್ಧಪ್ಪ ಮಲ್ಲಾಬಾದಿ ಈತನು ಗುಲಬರ್ಗಾಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನನ್ನ ಹಿರೋ ಹೊಂಡಾ ಸೂಪರ ಸ್ಪೆಂಡರ ಕೆಎ 32 ವಿ 2436 ತೆಗೆದುಕೊಂಡು ಹೋಗಿ ಶರಣ ಶಿರಸಗಿ ತಾಂಡಾದ ಪೂಲಿನ ಹತ್ತಿರ ಅತೀವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಹೋಗಿ ವೇಗದ ಆಯ ತಪ್ಪಿ ಪೂಲಿನ ಹತ್ತಿರ ಬಿದ್ದಿದ್ದು, ಅವನ ತಲೆಗೆ ಮತ್ತು ಕೈಗಳಿಗೆ ರಕ್ತಗಾಯಗಳಾಗಿದ್ದು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ದೇವಲ ಗಾಣಗಾಪೂರ ಠಾಣೆ : ಶ್ರೀ ತಾರಾಬಾಯಿ ಗಂಡ ರಾಮಚಂದ್ರ ಹಯ್ಯಾಳಕರ ಸಾ|| ಟಾಕಳಿ ರವರು ನನ್ನ ಮೊಮ್ಮಗ ಹಾಗು ಗೀತಾಬಾಯಿ ಮಗ ಇಬ್ಬರೂ ಕೂಡಿಕೊಂಡು ಮೈಮೇಲೆ ನೀರು ಎರಚುಕೊಳ್ಲುತ್ತಿರುವಾಗ ಗೀತಾಬಾಯಿ ಇವಳು ಬೈಯುತ್ತಿದ್ದು, ನಾನು ಯಾಕೆ ಬೈಯುತ್ತಿ ಅಂದಿದ್ದಕ್ಕೆ ಗೀತಾಬಾಯಿ ಮತ್ತು ಸಂಗಡ ಇಬ್ಬರೂ ಕೂಡಿಕೊಂಡು ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಯಡ್ರಾಮಿ ಠಾಣೆ : ಶ್ರೀ ಶರಣಗೌಡ ತಂದೆ ಭೀಮರಾಯಗೌಡ ಒಣಕಿಹಾಳ ಸಾ: ಅಂಬರಖೇಡ ತಾ: ಜೇವರ್ಗಿ ರವರು ನಾನು ಹಾಗು ಶರಣಗೌಡ ಅಸ್ಕಿ ನಾಗಮ್ಮ , ಹೊನ್ನವ್ವ ಮತ್ತು ಪ್ರಶಾಂತ ಸಾ|| ಎಲ್ಲರೂ ಅಂಬರಖೇಡ ಕೂಡಿಕೊಂಡು ಟಂ-ಟಂ ನಂ ಕೆ-ಎ 33-6201 ನೇದ್ದರಲ್ಲಿ ಕುಳಿತುಕೊಂಡು ಹೊಗುವಾಗ ಟಂ-ಟಂ ಚಾಲಕನಾದ ನಾಗಪ್ಪ ಇತನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಅಯ್ಯಣ್ಣ ಹೊಸಮನಿ ಇವರ ಹೋಲದ ಹತ್ತಿರ ಬರುತ್ತಿದ್ದಂತೆ ಒಮ್ಮೆಲೆ ಬ್ರೆಕ್ ಹೊಡೆದು ಟಂ-ಟಂ ಪಲ್ಟಿ ಮಾಡಿದ್ದು ಅದರಲ್ಲಿಯ ಪ್ರಶಾಂತ ಎಂಬುವನಿಗೆ ತಲೆಯ ಹಿಂಬಾಗದಲ್ಲಿ ಬಲ ಕಪಾಳಕ್ಕೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಇನ್ನುಳಿದವರಿಗೆ ಭಾರಿ ಗಾಯ ಮತ್ತು ಗುಪ್ತ ಗಾಯವಾಗಿದ್ದು, ಟಂ-ಟಂ ಚಾಲಕನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 July 2011

GULBARGA DIST REPORTED CRIME

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ
:

ಇಂದ್ರಾಬಾಯಿ ಗಂಡ ಪರಶುರಾಮ ರಾಮಗೊಂಡ ಸಾ
|| ಚಿಕ್ಕ ಸಿಂದಗಿ ಜಿ|| ಬಿಜಾಪೂರ ಹಾ|| || ಘತ್ತರಗಾ ತಾ|| ಅಫಜಲಪೂರ ರವರು ನಾನು ಮತ್ತು ನಮ್ಮ ತಂದೆಯ ಹತ್ತಿರ ಕೆಲಸ ಮಾಡುವ ಶಿವಾಜಿ ಕೂಡಿಕೊಂಡು ದಿನಾಂಕ 24-7-2011 ರಂದು ಸಾಯಂಕಾಲ ಹೀರೊ ಹೊಂಡಾ ಮೋಟರ್ ಸೈಕಲ ನಂ. ಕೆಎ-32 ಯು-2228 ನೇದ್ದರ ಮೇಲೆ ಬಗಲೂರ ಕಡೆಯಿಂದ ಘತ್ತರಗಾ ಕಡೆಗೆ ಬರುತ್ತಿರುವಾಗ ಭೀಮಾ ಬ್ರಿಜ್ ಕಡೆಯಿಂದ ಲಾರಿ ನಂ. ಕೆಎ-32 ಎ-7835 ನೇದ್ದರ ಚಾಲಕ ವೀರಶೆಟ್ಟಿ ತಂದೆ ಗುಂಡಪ್ಪ ಮಂದಕನಳ್ಳಿ ಈತನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಶಿವಾಜಿ ಈತನು ಲಾರಿಯ ಹಿಂದಿನ ಮಡಗಟ್ಟಿನಲ್ಲಿ ಸಿಕ್ಕಿಬಿದ್ದು ತಲೆಯ ಹಿಂಬಾಗ ಭಾರಿ ರಕ್ತಗಾಯ ಮತ್ತು ಮೂಗಿನಿಂದ ರಕ್ತಸ್ರಾವ ಆಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ :
ಫರಹತಾಬಾದ ಠಾಣೆ :
ಶ್ರೀ ಮಹ್ಮದ ಶಬ್ಬೀರ ತಂದೆ ಮಹ್ಮದ ದಸ್ತಗಿರ ಸಾ: ಎಮ್.ಎಸ್.ಕೆ.ಮಿಲ್ ಖಾದ್ರಿ ಚೌಕ ಜಿಲಾನಾಬಾದ ಗುಲಬರ್ಗಾ ರವರು ನಾನು ನನ್ನ ಗೆಳೆಯನೊಂದಿಗೆ ನಂದಿಕೂರ ತಾಂಡಾದ ಹತ್ತಿರ ಗುಟಾಕಾ ತಗೆದಕೊಂಡು ಬರಲು ರೋಡ ದಾಟುತ್ತಿರುವಾಗ ಅಟೋ ನಂ: ಕೆಎ 32 ಎ 9750 ನೇದ್ದರ ಚಾಲಕನು ತನ್ನ ಅಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಆಳಂದ ಠಾಣೆ : ಶ್ರೀ, ಆರೀಫ ತಂದೆ ಇಸ್ಮಯಿಲಸಾಬ ಬಾಗವಾನ ಸಾ|| ಖಾನಬೌಡಿಗಲ್ಲಿ ಆಳಂದ ರವರು ನಾನು ಆಟೋ ನಂ. ಕೆಎ 32 ಎ 4181 ನೆದ್ದರಲ್ಲಿ ಮಾವಿನ ಹಣ್ಣು ತುಂಬುತ್ತಿರುವಾಗ ಇಸಾಮ ಅನ್ಸಾರಿ ಸಾ|| ಆಳಂದ ರವರು ತನ್ನ ಜೀಪನ್ನು ತಂದು ಆಟೋಕ್ಕೆ ಡಿಕ್ಕಿ ಪಡಿಸಿ ಆತನೆ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಕಿವಿಗೆ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಕಮಲಾಪೂರ ಠಾಣೆ : ಶ್ರೀ ಷಣ್ಮುಖಪ್ಪಾ ತಂದೆ ಚೆನ್ನಪ್ಪಾ ಜೋಜನ ಸಾಃ ಬಾಚೆಪಳ್ಳಿ ತಾಃ ಔರಾದ ಜಿಃ ಬೀದರ ರವರು ನಾನು ನನ್ನ ಅಣ್ಣನ ಮಗನಾದ ಶಾಲಿವಾನ, ಆತನ ಹೆಂಡತಿ ಭಾಗ್ಯವತಿ ಆತನ ಮಗಳು ಅಂಬಿಕಾ, ಕೇತಕಿ ಸಂಗಮೇಶ ಮಲ್ಲಿಕಾರ್ಜುನ ಶಿವಪೂಜೆ ಎಲ್ಲರೂ ಕೂಡಿಕೊಂಡು ಟಾಟಾ ಇಂಡಿಕಾ ಕಾರ ನಂ. ಕೆಎ: 38-5207 ನೇದ್ದರಲ್ಲಿ ಕುಳಿತುಕೊಂಡು ಘಾಣಗಾಪೂರಕ್ಕೆ ಹೋಗಿ ಮರಳಿ ಬೀದರಕ್ಕೆ ಹೊರಟಿದ್ದು ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ. 218 ನೇದ್ದರ ರೋಡಿನ ಮರಗುತ್ತಿ ಕ್ರಾಸ ಹತ್ತಿರ ಎದುರುಗಡೆಯಿಂದ ಕ್ರೋಜರ ಜೀಪ ನಂ. ಕೆಎ:39-7061 ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಅಡ್ಡಾತಿಡ್ಡಿಯಾಗಿ ಚಲಾಯಿಸುತ್ತಾ ಎಡದಿಂದ ಬಲಕ್ಕೆ ಬಂದು ನಮ್ಮ ಕಾರಿನ ಎದುರುಗಡೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಭಾರಿ ಗುಪ್ತಗಾಯವಾಗಿರುತ್ತದೆ, ನನ್ನ ಭಾವನಾದ ಶಾಲಿವಾನ ಮತ್ತು ಅಕ್ಕ ಭಾಗ್ಯವತಿ ಇವರು ತಲೆಗೆ, ಮುಖಕ್ಕೆ ಭಾರಿ ರಕ್ತಗಾಯ, ಮತ್ತು ಎದೆಗೆ ಒಳಪೆಟ್ಟಾಗಿ ಭಾರಿ ಗುಪ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಂಬಿಕಾ, ಕೇತಕಿ, ಸಂಗಮೇಶ ಎಲ್ಲರೂ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಗುಲಬರ್ಗಾಕ್ಕೆ ಬರುತ್ತಿರುವಾಗ ಅಂಬಿಕಾ ಇವಳಿಗೆ ಆದ ಭಾರಿ ಗಾಯದಿಂದ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 July 2011

GULBARGA DISTRICT REPORTED CRIEMS

ಮುಂಜಾಗ್ರತೆ ಅಡಿಯಲ್ಲಿ ಪ್ರಕರಣ:
ಆಳಂದ ಠಾಣೆ :
ಬಸ್ಸಪ್ಪ ತಂದೆ ಚನ್ನಪ್ಪ ನಾಗುರೆ ಸಾ: ಪಡಸಾವಳಿ ಮತ್ತು ಕುಪೆಂದ್ರ ತಂದೆ ಶರಣಪ್ಪ ಚಾರಿ ಸಂಗಡ ಒಬ್ಬ ಸಾ:ಪಡಸಾವಳಿ ಮದ್ಯ, ಸುಮಾರು ವರ್ಷಗಳಿಂದ ಪಡಸಾವಳಿ ಗ್ರಾಮದ ಹೊಲ ಸರ್ವೆ ನಂ 269 ನೆದ್ದರ ವಿಷಯದಲ್ಲಿ ವೈಮನಸ್ಸು ಇದ್ದು, ಸದರಿಯವರು ಈ ವಿಷಯವಾಗಿ ಯಾವುದೇ ಸಮಯದಲ್ಲಿ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟು ಮಾಡಬಹುದು, ಎಂಬ ಕಾರಣಕ್ಕೆ 2 ಪಾರ್ಟಿ ಜನರ ಮೇಲೆ ಮುಂಜಾಗೃತ ಕ್ರಮದ ಅಡಿಯಲ್ಲಿ ಪ್ರರಕಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ:
ಆಳಂದ ಠಾಣೆ :
ಕಾಶಿನಾಥ ತಂದೆ ಭಿಮಾಶಂಕರ ಪಾಟೀಲ್ ಸಾ|| ಜಮಗಾ ಜೆ ರವರು ನನ್ನ ಮತ್ತು ರಾಜಶೇಖರ ಮಧ್ಯ ನಡುವೆ ಹೊಲ ಸರ್ವೆ ನಂ 119/5 ನೆದ್ದರ ವಿಷಯದಲ್ಲಿ ವೈಮನಸ್ಸು ಇದ್ದು ದಿನಾಂಕ 22/07/2011 ರಂದು ಸಾಯಂಕಾಲ ನನ್ನ ಮನೆ ಹತ್ತಿರ ರಾಜಕುಮಾರ ತಂದೆ ಪಂಡಿತರಾವ ಪಾಟೀಲ್ ಸಂಗಡ ಒಬ್ಬ ಸಾ:ಸಾ|| ಜಮಗಾ ಜೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಸರಪಳಿಯಿಂದ ಮತ್ತು ಕೈಯಿಂದ ಹೊಡೆದು ರಕ್ತಗಾಯ ಗೊಳಿಸಿರುತ್ತರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ವಂಚನೆ ಪ್ರಕರಣ:

ಶಹಾಬಾದ ನಗರ ಠಾಣೆ : ದಿನಾಂಕ: 01-02-2010 ರಿಂದ 31-05-20110 ರ ಅವಧಿಯಲ್ಲಿ ನಗರ ಸಭೆ ಕಾರ್ಯಲಯದ ಪೌರಾಯುಕ್ತರು ಆಗಿದ್ದ ಎಮ್‌.ಬಿ. ನಡುವಿನಮನಿ ಸಿಎಮ್‌ಸಿ ಕಮೀಷನರ ಬಸವಕಲ್ಯಾಣ ರವರು ಕುಡಿಯುವ ನೀರಿನ ಸಾಮಾಗ್ರಿ, ನೈರ್ಮಲ್ಯ ಸಾಮಾಗ್ರಿ ಹಾಗು ವಿದ್ಯುತ್ ಸಾಮಾಗ್ರಿ ಖರೀದಿಯಲ್ಲಿ ಒಟ್ಟು 20,91102-00 ರೂಪಾಯಿಗಳು ದೂರುಪಯೋಗ ಮಾಡಿಕೊಂಡಿರುತ್ತರೆ ಅಂತಾ ರಾಜಾ ಪಟೇಲ ಐ/ಸಿ ಕಮೀಶನರ ಸಿಎಮ್‌ಸಿ ಶಹಾಬಾದ ರವರು ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ಕಳವು ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಮಲ್ಲಿನಾಥ ತಂದೆ ಶ್ಯಾಮರಾವ ಪೂಜಾರಿ ಸಾ: ಶಿವಾಜಿ ನಗರ ಗುಲಬರ್ಗಾ ರವರು ನನ್ನ ಮೋಟಾರ ಸೈಕಲ ನಂ ಕೆಎ 32 ಡಬ್ಲು 2027 ನೇದ್ದು ದಿನಾಂಕ 4/5/2011 ರಂದು ಮುಂಜಾನೆ ಹುಮನಾಬಾದ ರಿಂಗ ರೋಡದ ಹತ್ತಿರ ಸಾಗರ ಧಾಬಾದ ಮುಂದೆ ನಿಲ್ಲಿಸಿ ಧಾಬಾದ ಒಳಗಡೆ ಹೋಗಿ ಊಟ ಮಾಡಿಕೊಂಡು ಹೊರಗೆ ಬಂದು ನೋಡಲಾಗಿ ಅಲ್ಲೆ ನಿಲ್ಲಿಸಿದ ನನ್ನ ಮೋಟಾರ ಸೈಕಲ್ ಅ||ಕಿ|| 35680/- ರೂಗಳದ್ದು ಯಾರು ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ಕೂಲಿ ಕೆಲಸ ಮಾಡುತ್ತಿರುವಾಗ ಮೊದಲನೆ ಮಹಡಿಯಿಂದ ಬಿದ್ದು ಮಹಿಳೆ ಸಾವು :

ವಿಶ್ವ ವಿದ್ಯಾಲಯ ಠಾಣೆ : ಶ್ರೀ ನರಸಿಂಹಲು ತಂದೆ ಶಾಂತಯ್ಯಾ ತಿಮ್ಮಾನೂರ ಸಾ|| ಗಾಜಲ ಪೇಠ ರವರು ನನ್ನ ಹೆಂಡಿತಿಯಾದ ಅಂಜಮ್ಮಾ ಇವಳು ದಿನಾಂಕ 23-07-2011 ರಂದು ಮದ್ಯಾಹ್ನ ಇವಳು ಹೊಸದಾಗಿ ಕಟ್ಟುತ್ತಿರುವ ಇ.ಎಸ್.ಐ ಆಸ್ಪತ್ರೆಯ ಮೇಡಿಕಲ್ ವಿಬಾಗದಲ್ಲಿ ಮೋದಲನೇ ಅಂತಸ್ತಿನಲ್ಲಿ ಇತರೆ ಜನರೊಂದಿಗೆ ಕೆಲಸ ಮಾಡುತ್ತಿದ್ದಾಗ, ಮೊದಲನೇ ಅಂತಸ್ತಿನಿಂದ ಕೆಳಗೆ ಬಿದ್ದು, ಭಾರಿ ಗಾಯ ಹೊಂದಿದ್ದು ಉಪಚಾರ ಕುರಿತು ಆಸ್ಪತ್ರೆ ದಾಖಲ ಮಾಡಿದ್ದು ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ , ಈ ಘಟನೆಗೆ ಇ.ಎಸ್.ಐ ಆಸ್ಪತ್ರೆ ಕಟ್ಟಲು ಗುತ್ತೆ ಹಿಡಿದ ಗುತ್ತೆದಾರ ಮತ್ತು ಮಾಲೀಕ ಇತರೆ ಇಂಜಿನೀಯರ್, ಸುಪರ್ ವೈಜರ್ಗಳ ನಿರ್ಲಕ್ಷತನದಿಂದ ನನ್ನ ಹೆಂಡತಿ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

23 July 2011

GULBARGA DISTRICT REPORTED CRIMES

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ
: ಶ್ರೀ ಸುಬಾಸ ತಂದೆ ಅಮಲಪ್ಪಾ ನಡುವಿನಮನಿ ಸಾ: ಅರಿಕೇರಾ(ಜೆ) ತಾ: ಸುರಪೂರ ರವರು ನಾನು ಮತ್ತು ಕಾಕನ ಮಗ ಭೀಮರಾಯ ತಂದೆ ಶರಣಪ್ಪಾ ನಡುವಿನಮನಿ ಇಬ್ಬರೂ ಕೂಡಿಕೊಂಡು ಲಾರಿ ನಂ ಕೆ.ಎ-32, 8814 ನೇದ್ದರಲ್ಲಿ ಹೊರಟಿದ್ದು, ಕೆಲ್ಲೂರ ಸಮೀಪ ಏಕಿ ಮಾಡಲು ಭೀಮರಾಯ ಇತನು ಇಳಿದಾಗ ಲಾರಿ ಚಾಲಕ ಸೂರ್ಯಾಕಾಂತ ಇತನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಸ್ತಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ
:ಶ್ರೀ ವೆಂಕಟೇಶ ತಂದೆ ಏಮಜೀ ರಾಠೋಡ ಸಾಃ ಪಾಣೆಗಾಂವ ತಾಃಜಿಃ ಗುಲಬರ್ಗಾ ರವರು ನಾನು, ನನ್ನ ಹೆಂಡತಿ ಕಲಾವತಿ, ನಮಗಳಾದ ಪಾರ್ವತಿ, ಅಣ್ಣನ ಮಗನಾದ ಕುಪೇಂದ್ರ ಹಾಗು ನಮ್ಮ ತಾಂಡಾದವರಾದ ಶಿವರಾಮ ಎಲ್ಲರೂ ಕೂಡಿಕೊಂಡು ಕಾಳಮಂದರಗಿ ತಾಂಡಾಕ್ಕೆ ಹೋಗಿ ತಾಂಡಾದಲ್ಲಿ ಯಾರೂ ಇರದ ಕಾರಣ ಓಕಳಿ ಕ್ರಾಸಿಗೆ ಹೋಗಿ ಚಹಾ ಕುಡಿದು ರೋಡಿನ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದುಗಡೆಯಿಂದ ಬಸ್ಸ ಕೆಎ:32, ಎಫ್: 1258 ನೇದ್ದರ ಚಾಲಕನಾದ ವಿಶ್ವನಾಥ ಮ್ಯಾಕೆಲೆ ಸಾಃಹಣಮಂತವಾಡಿ ತಾಃಬಸವಕಲ್ಯಾಣ ಜಿಃ ಬೀದರ ಇತನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಹೆಂಡತಿ ಕಲಾವತಿ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಅವಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯ ಮತ್ತು ಬಲ ಮೆಲಕಿಗೆ ಒಳಪೆಟ್ಟಾಗಿ ಗುಪ್ತಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಚೀನ ತಂದೆ ತಿರುಪತಿ ಪಾಟೀಲ ಭಾಗ್ಯವಂತಿ ನಗರ ಗುಲಬರ್ಗಾ ರವರು ಹೈಕೋರ್ಟ ಕಡೆಯಿಂದ ಜೇವರ್ಗಿ ರಿಂಗ ರೋಡ ಕಡೆ ಹೋಗುವ ರೋಡಿನಲ್ಲಿ ಮಹಾರಾಜ ಲೇಔಟ ಹತ್ತಿರ ರಿಂಗ ರೋಡಿನ ಮೇಲೆ ಹೈಕೋರ್ಟ ಕಡೆಯಿಂದ ಟಿಪ್ಪರ ಲಾರಿ ನಂಬರ ಕೆಎ 32 ಬಿ 1900 ನೆದ್ದರ ಚಾಲಕ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರ ನಂ: ಕೆಎ 32 ಎಮ್ 9368 ನೆದ್ದಕ್ಕೆ ಓವರ ಟೆಕಮಾಡಿ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

GULBARGA DIST REPORTED CRIME

ಮನುಷ್ಯ ಕಾಣೆಯಾದ ಪ್ರಕರಣ :
ದೇವಲ ಗಾಣಗಾಪೂರ ಠಾಣೆ :
ಶ್ರೀಮತಿ ಆಲವೇಲು ಗಂಡ ಸಾಲಯ್ಯ ಕಾಮಶೇಟ್ಟಿ ಸಾ|| ಪುಲಿಚರಲ್ ತಾ|| ಪೆದ್ಡಾಪೂರ್ ಜಿಲ್ಲೆ || ನಲಗೊಂಡ ರಾಜ್ಯ ಆಂದ್ರ ಪ್ರದೇಶ ರವರು ನಾನು ಮತ್ತು ನನ್ನ ಗಂಡ ಸಾಲಯ್ಯ ದಿನಾಂಕ:15-07-2011 ರಂದು ಮಧ್ಯಾಹ್ನ ದೇವಲಗಾಣಗಾಫುರಕ್ಕೆ ಬಂದು ಶ್ರೀ ದತ್ತಾತ್ರೇಯ ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಾಗ ನನ್ನ ಗಂಡ ಕಾಣೆಯಾಗಿರುತ್ತಾನೆ ಇಲ್ಲಿಯವರೆಗೂ ಎಲ್ಲಾ ಕಡೆ ಹೂಡುಕಾಡಿದರೂ ಸಿಕ್ಕಿರುವುದಿಲ್ಲಾ ಅಂತಾ ದೂರು ಸಲ್ಲಿಸಿದ ಮೇರೆಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 July 2011

GULBARGA DISTRICT REPORTED CRIME

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ
:

ಶ್ರೀ ಶೇಖ ಸದ್ದಾಂ ತಂದೆ ಶೇಖ ಮಹ್ಮದ ತಾರಫೈಲ ಸ್ಟೇಷನ ಏರಿಯಾ ಗುಲಬರ್ಗಾ
ರವರು ನಾನು ಮತ್ತು ಸೈಯದ್ ಇಮ್ರಾನ್ ಕೂಡಿಕೊಂಡು ದಿನಾಂಕ:22-07-2011 ರಂದು ಮುಂಜಾನೆ ಸಾಯಿ ಮಂದಿರ ಕ್ರಾಸ್ ಹತ್ತಿರ ರಿಂಗ ರೋಡಿನ ಮೇಲೆ ಹೋಗುತ್ತಿರುವಾಗ ಕ್ರೋಜರ ಜೀಪ ನಂ:ಕೆಎ 37-4552 ನೇದ್ದರ ಚಾಲಕ ಸಂಜೀವಕುಮಾರ ಈತನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ ನಂಬರ ಕೆಎ-32 ಡಬ್ಲೂ 6976 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

GULBARGA DIST REPORTED CRIMES

ಮುನ್ನೆಚ್ಚರಿಕೆ ಕ್ರಮವಾಗಿ :

ಸೇಡಂ ಪೊಲೀಸ ಠಾಣೆ : ದೇವಿಂದ್ರಪ್ಪ ತಂದೆ ಈರಪ್ಪ ಬುಡ್ಡನವರ ಸಾ|| ತೆಲ್ಕೂರ ಗ್ರಾಮ ರವರು ಸರ್ವೆ ನಂ 12 ಮತ್ತು 13 ರಲ್ಲಿ ಒಟ್ಟು 43 ಎಕರೆ ಹೊಲ ಇದ್ದು, ಈ ಹೊಲವನ್ನು ವನಮಾಲ ಗಂಡ ರಂಗಾರಾವ ದೇಸಪಾಂಡೆ ಸಾ|| ತೆಲ್ಕೂರ ಇವರ ಹೆಸರಿನಲ್ಲಿ ಇದ್ದು, ಈ ಹೊಲವನ್ನು ನಾನು ಪಾಲಿನಿಂದ ಮಾಡುತ್ತಾ ಬಂದಿರುತ್ತೇನೆ. ಆದರೆ ಸಾಬಣ್ಣ ತಂದೆ ರಾಯಪ್ಪ ಆಚಕೇರಿ ಸಾ|| ತೆಲ್ಕೂರ ಸಂಗಡ 4-5 ಜನರು ಈ ಹೊಲ ಸರಕಾರ ನಮಗೆ ಟೆನಂಟದಲ್ಲಿ ಕೊಟ್ಟಿರುತ್ತಾರೆ, ಆದ್ದರಿಂದ ಕಬ್ಜೆ ಬೀಡಲು ನನ್ನ ಸಂಗಡ ಜಗಳ ಮಾಡುತ್ತಿದ್ದಾರೆ ಅಂತಾ ಅರ್ಜಿ ನೀಡಿದ್ದರಿಂದ, ಪಿ.ಎಸ.ಐ ಸೇಡಂ ರವರು ದಿನಾಂಕ: 21-7-11 ರಂದು ಮುಂಜಾನೆ ತೆಲ್ಕೂರ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ಮಾಡಲಾಗಿ, ತೆಲ್ಕೂರ ಸಿಮಾಮತರದಲ್ಲಿರುವ ಹೊಲ ಸರ್ವೆ ನಂ 12 ಒಟ್ಟು 24 ಎಕರೆ 36 ಗುಂಟೆ ಸರ್ವೆ ನಂ 13 19 ಎಕರೆ 34 ಗುಂಟೆ ಹೊಲವಿದ್ದು ಈ ಹೊಲವನ್ನು ವನಮಾಲಬಾಯಿ ಗಂಡ ರಂಗರಾವ ದೇಶಪಾಂಡೆ ಇವರ ಹೆಸರಿನಲ್ಲಿ ಇದ್ದು ಸದರಿ ಹೊಲವನ್ನು ದೇವಿಂದ್ರಪ್ಪ ತಂದೆ ಈರಪ್ಪ ಬುಡ್ಡನವರ ಇತನು ಪಾಲಿನಿಂದ ಮಾಡುತ್ತಿದ್ದು ಈ ಹೊಲವನ್ನು ಸರಕಾರವು ಟೆನಂಟದಲ್ಲಿ ನಮ್ಮ ಹೆಸರಿಗೆ ಆಗುವುದಿದೆ ಮತ್ತು ಸರಕಾರಕ್ಕೆ ನಾವು ಹೊಲದ ಹಣ ತುಂಬಿರುತ್ತೇವೆ ತಹಸಿಲ್ದಾರರು ಈ ಹೊಲವನ್ನು ನಮ್ಮ ಹೆಸರಿ ಮಾಡುವುದಿದ್ದಾರೆ ಅಂತಾ ಸಾಬಣ್ಣ ತಂದೆ ರಾಯಪ್ಪ ಆಚಕೇರಿ ಸಾ|| ತೆಲ್ಕೂರ ಸಂಗಡ 4-5 ಜನರು ದೇವಿಂದ್ರಪ್ಪಾ ಇವರ ಜೋತೆ ತಕರಾರು ಮಾಡುತ್ತಿದ್ದು ಇರುತ್ತದೆ. ಸಧ್ಯ ಹೊಲದ ಮಾಲಿಕರು ಊರಲ್ಲಿ ಇರುವುದಿಲ್ಲಾ ಹಾಗೂ ಸಾಬಣ್ಣ ಇವರ ಹೆಸರಿನಿಂದ ಯಾವುದೇ ಕಾಗದ ಪತ್ರಗಳು ಇರುವುದಿಲ್ಲಾ, ಈ ಉಬಯ ಪಾರ್ಟಿ ಜನರು ಸರ್ವೆ ನಂ 12 ಮತ್ತು 13 ರಲ್ಲಿ ಹೊಲದ ಕಬ್ಜೆ ಸಂಭಂದವಾಗಿ ಊರಲ್ಲಿ ತಲಾ ಒಂದು ಗುಂಪು ಕಟ್ಟಿಕೊಂಡು ಒಬ್ಬರಿಗೊಬ್ಬರು ಜಗಳ ಮಾಡಿಕೊಳ್ಳುತ್ತಿದ್ದು ಇದರಿಂದ ಊರಲ್ಲಿ ಒಬ್ಬರಿಗೊಬ್ಬರು ಹೊಡದಾಡಿ ಜೀವ ಹಾನಿ ಮಾಡಿಕೊಳ್ಳುವ ಸಂಭವ ಇರುತ್ತದೆ. ಗ್ರಾಮದಲ್ಲಿ ಸಾರ್ವಜನಿಕ ಶಾಂತತೆಗೆ ಭಂಗವುಂಟಾಗುವ ಸಂಭವ ಇರುವದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಉಭಯ ಪಾರ್ಟಿ ಜನರ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಲಾಗಿದೆ .

21 July 2011

GULBARGA DIST REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ
: ಶ್ರೀ ಚನ್ನಬಸಪ್ಪ ತಂದೆ ಸೂಗಣ್ಣ ಹುಂಡೇಕರ್ ಸಾ|| ಜಯನಗರ ಗುಲಬರ್ಗಾ ರವರುನಾನು ಮತ್ತು ಸಂತೋಷ ಇಬ್ಬರು ಖಣದಾಳ ಸರಕಾರಿ ಶಾಲೆಯಲ್ಲಿ ನೌಕರಿ ಮುಗಿಸಿಕೊಂಡು ವಾಪಸ್ ಮನೆಗೆ ಮೋಟಾರ ಸೈಕಲ್ ನಂ: ಕೆಎ
32 ವಿ 3580 ನೇದ್ದರ ಮೇಲೆ ಜೇವರ್ಗಿ ಕಾಲೋನಿ ಮುಖಾಂತರ ರಾಷ್ಟ್ರಪತಿ .ಸರ್ಕಲ್ ಕಡೆಗೆ ಬರುತ್ತಿದ್ದಾಗ ಆರ್ಕಿಡ್ಸ ಪೌಂಡೇಶನ ಸ್ಕೂಲ್ ಎದುರು ಎಡಗಡೆಯಿಂದ ಮೋಟಾರ ಸೈಕಲ್ ನಂ; ಕೆಎ 33 6253 ನೆದ್ದರ ಚಾಲಕ ಅರುಣಕುಮಾರ ತಂದೆ ಶಿವಲಿಂಗಪ್ಪಾ ಸಿರನೂರ ಈತನು ತನ್ನ ಮೋಟಾರ ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಡಿಕ್ಕಿ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆಯಾದ ಪ್ರಕರಣ :

ರೋಜಾ ಠಾಣೆ: ಶ್ರೀ ಮಹಿಬೂಬ ತಂದೆ ಕಾಸಿಮ ಅಲಿ ಸಾ:ಮಿಜಗುರಿ ಬಕರಿಕಮೇಲಾ ಹತ್ತಿರ ಗುಲಬರ್ಗಾ ನಾನು ದಿನಾಂಕ;14/07/2011 ರಂದು ಮಧ್ಯಾನ ಬಜಾರಕ್ಕೆ ಹೋಗುತ್ತಿರುವಾಗ ನನ್ನ ತಮ್ಮ ಜಾವೀದ ತಂದೆ ಕಾಸಿಮ ಅಲಿ ಇತನು ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತಿದ್ದನು ಬಜಾರಕ್ಕೆ ಹೋಗಿ ಮನೆಗೆ ಬಂದು ನೋಡಲು ತಮ್ಮ ಜಾವೀದ ಈತನು ಮನೆಯಲ್ಲಿ ಇರಲಿಲ್ಲಾ, ಹತ್ತಿರದ ಮಜ್ಜೀದಗಳಲ್ಲಿ, ದರ್ಗಾಗಳಲ್ಲಿ ಮತ್ತು ಸಂಬಂದಿಕರಲ್ಲಿ ಹುಡುಕಾಡಿದರೂ ಇಲ್ಲಿಯವರೆಗೆ ಸಿಕ್ಕಿರುವದಿಲ್ಲಾ ಕಾಣಿಯಾಗಿರುತ್ತಾನೆ. ಅವನಿಗೆ ಫಿಟ್ಸ್ ಬೇನೆ ಇದ್ದು ಆಗಾಗ ಸಿಟ್ಟಿಗೆ ಬರುವದು ಚೀರಾಡುವದು ಮಾಡುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 July 2011

GULBARGA DIST REPORTED CRIMES

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಮಹ್ಮದ ಬಸೀರ ತಂದೆ ಶಮ್ಮಶೋದೀನ ಪಟವಾರಿ ಉ: ಟ್ರಾನ್ಸಪೋರ್ಟ ಕೇಲಸ ಸಾ: ಇಸ್ಲಾಮಾಬಾದ ಕಾಲನಿ ಗುಲಬರ್ಗಾ ರವರು ನಾನು ದಿನಾಂಕ 19/7/2011 ರಂದು ಮದ್ಯಾಹ್ನ ಸುಮಾರಿಗೆ ನನ್ನ ಮೋಟಾರ ಸೈಕಲ ನಂ ಕೆಎ 32 ವೈ 3720 ನೇದ್ದರ ಮೇಲೆ ಹೋಗುತ್ತಿದ್ದಾಗ ಎದುರಿನ ರಾಂಗ ಸೈಡಿನಿಂದ ಹಿರೋ ಹೊಂಡಾ ಸ್ಪ್ಲೇಂಡರ ನಂ: ಕೆಎ 32 ವ್ಹಿ 9116 ನೇದ್ರ ಸವಾರ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಬಿರಬಟ್ಟಿ ಸಾ: ಶಿವಾಜಿನಗರ ಗುಲಬರ್ಗಾ ಇತನು ತನ್ನ ಮೋಟಾರ ಸೈಕಲನ್ನು ಅತೀ ವೇಗ & ಅಜಾಗರೂಕತೆಯಿಂದ ನಡೆಯಿಸಿಕೊಂಡು ಬಂದು ನನಗೆ ಡಿಕ್ಕಿ ಹೊಡೆದು ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಆಳಂದ ಠಾಣೆ
: ಸಿದ್ರಾಮಪ್ಪ ತಂದೆ ಹಣಮಂತರಾವ ಪಾಟೀಲ್ ಸಾ|| ಹೊಡಲುರ ರವರು ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದೆನೆ, ನನಗೂ ನನ್ನ ಸ್ವಂತ ತಮ್ಮ ಅಮೃತ ನಡುವೆ ಜಮಿನಿನ ವಿಷಯದಲ್ಲಿ ತಕರರು ನಡೆದಿದೆ, ದಿನಾಂಕ 20/07/2011 ರಂದು ಬೆಳಿಗೆ ನಾನು ಮತ್ತು ಕೂಲಿ ಕೆಲಸಕ್ಕೆ ಬಂದಿದ ಬಹದ್ದೂರ ಪಟೇಲ, ಈರಣ್ಣ ಸಿರೋಳ್ಳಿ ಎಲ್ಲರೂ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು ಬೆಳಿಗ್ಗೆ ಸುಮಾರಿಗೆ ನಮ್ಮ ಮೇಲೆ ದ್ವೇಶ ಭಾವನೆ ಹೊಂದಿರುವ ನನ್ನ ತಮ್ಮ ಅಮೃತ ಮತ್ತು ಅವನ ಮಕ್ಕಳಾದ ಹಿರೇಶ, ಗಿರೀಶ, ಶರಣು ಎಲ್ಲರೂ ಅವಾಚ್ಯವಾಗಿ ಬೈಯುತ್ತಾ ಹೊಲ ಹ್ಯಾಂಗ ಸಾಗುವಳಿ ಮಾಡುತ್ತಿಯ ಅಂತಾ ಗೀರಿಶ ಪಾಟೀಲ್ ಇವನು ಕೈಯಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಮಾರಣಾಂತಿಕ ಹಲ್ಲೆ

ದೇವಲ ಗಾಣಗಾಪೂರ ಠಾಣೆ : ಸಿದ್ದಣ್ಣ ತಂದೆ ಶಂಕರಗೌಡ ಪೊಲೀಸ ಪಾಟೀಲ ರವರು ನಾನು ದಿನಾಂಕ:19-07-2011 ರಂದು ಮದ್ಯಾಹ್ನ ಶರಣಬಸವೇಶ್ವರ ಮಂದಿರ ಹತ್ತಿರದಿಂದ ನನ್ನ ಅಕ್ಕನ ಮನೆಗೆ ಹೊರಟ್ಟಿದ್ದಾಗ, ಕಲ್ಲಪ್ಪ ಪಡಶೆಟ್ಟಿ ನನಗೆ ನಿಲ್ಲಿಸಿ ಅವಾಚ್ಯವಾಗಿ ಬೈದು ನಿಮ್ಮ ಅಕ್ಕಳ ಪರವಾಗಿ ನನಗೆ ಹೊಡೆಯಲು ಬಂದಿರುವಿ ಅಂತ ಕೈಯಿಂದ ಮತ್ತು ಮಚ್ಚನಿಂದ ಹೊಡೆದು ಭಾರಿ ರಕ್ತ ಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

ಕೊಲೆ ಪ್ರಕರಣ:
ದೇವಲ ಗಾಣಗಾಪೂರ ಠಾಣೆ :
ಮಾಹಾದೇವಿ ಗಂಡ ಶಿವಾನಂದ ಹುಮಾನಾಬಾದ ಸಾ|| ಗೊಬ್ಬುರ(ಬಿ) ರವರು ನನ್ನ ಗಂಡನಾದ ಶಿವಾನಂದ ತಂದೆ ಗುರುಲಿಂಗಪ್ಪ ಹುಮಾನಾಬಾದ ಸಾ|| ಗೊಬ್ಬುರ(ಬಿ) ರವರು ಮದ್ಯಾಹ್ನ ಸುಮಾರಿಗೆ ಗೊಬ್ಬುರ( ಬಿ) ಗ್ರಾಮದ ಧನ್ವಂತರಿ ದವಾಖಾನೆ ಎದುರುಗಡೆ ಬರುತ್ತಿರುವಾಗ ನನ್ನ ಗಂಡನಿಗೆ ಕಲ್ಲಪ್ಪ ತಂದೆ ಗುರುಲಿಂಗಪ್ಪ ಪಡಶೆಟ್ಟಿ ಸಂಗಡ ಇನ್ನೊಬ್ಬನು ಸಾ|| ಇಬ್ಬರೂ ಗೊಬ್ಬುರ(ಬಿ) ಗ್ರಾಮ ದವರು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾತಿ ನಿಂದನೆ ಪ್ರಕರಣ :

ಬ್ರಹ್ಮಪೂರ ಠಾಣೆ : ಶ್ರೀ ಶಂಬೂಲಿಂಗ ತಂದೆ ನಾಗಪ್ಪ ಗಡಸೆ ಸಾ|| ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು ನಾನು ದಿನಾಂಕ|| 17/07/2011 ರಂದು ವಿಜಯಕುಮಾರ ಸೇವಲಾನಿ ಇವರು ನಮ್ಮ ಮಗ ಗೌರಿಶಂಕರ ವಿರುದ್ದ ವಿನಾಕಾರಣ ಡಕಾಯಿತಿ ಪ್ರಕರಣ ದಾಖಲಿಸಿದ್ದು ಈ ಬಗ್ಗೆ ಇಂದು ದಿನಾಂಕ|| 19/07/2011 ರಂದು 1900 ಗಂಟೆ ಸುಮಾರಿಗೆ ನಾನು ಹಾಗು ಅಶೋಕ ತಂದೆ ಹುಸನಪ್ಪ ಸೋನಾಗಾರ ಹಾಗು ಇತರರು ಕೂಡಿಕೊಂಡು ವಿಜಯಕುಮಾರ ಸೇವಲಾನಿ ಇವರ ಮನೆಗೆ ಹೊಗಿ ವಿಜಯಕುಮಾರ ಇವರಿಗೆ ನೀವು ನಮ್ಮ ಮಗನ ಮೇಲೆ ಡಕಾಯಿತಿ ಕೇಸ ಯಾಕೆ ಮಾಡಿಸಿರುವಿರಿ ಅಂತಾ ಅಂದಿದಕ್ಕೆ ನಮ್ಮಲ್ಲರಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ವಿಜಯಕುಮಾರನ ಮಗನಾದ ಆಕಾಶ ಹಾಗು ಇತರೆ 7-8 ಜನರು ಬಂದು ನಮ್ಮಲ್ಲರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆ ಅಂತಾ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀ ಸಂಗಯ್ಯ ತಂದೆ ಶಿವನಂದಯ್ಯ ಹಿರೇಮಠ ವ: 20 ಉ:ಚಾಲಕ ಸಾ: ಬಸವನ ಸಂಗೋಳಗಿ ತಾ: ಆಳಂದ ಹಾ:ವ; ಆಸ್ರಯ ಕಾಲನಿ ಗುಲಬರ್ಗಾ ರವರು ನಾನು ಮೋಟಾರ ಸೈಕಲ ಮೇಲೆ ಹೋಗುತ್ತಿದ್ದಾಗ ಮುಂದೆ ಅವರ ಅಕ್ಕನ ಗಂಡ ಬಸಯ್ಯ ಹಿರೇಮಠ ಇವರು ಸಹ ಮೋಟಾರ ಸೈಕಲ ನಂ ಕೆಎ 03 ವೈ 1813 ನೇದ್ದರ ಮೇಲೆ ಹೋಗುತ್ತಿದ್ದಾಗ ಹುಮನಾಬಾದ ರಿಂಗ ರೋಡ ಹತ್ತಿರ ಇರುವ ಟಿವಿ ಸ್ಟೇಷನ್‌ ಎದುರು ಹೋಗುವಾಗ ಅಜಾಗರೂಕತೆಯಿಂದ ನಡೆಸುತ್ತಿದ್ದಾಗ ಸ್ಕೀಡ ಆಗಿ ಬಿದ್ದಿರಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗ ಸೊಸೆಯಿಂದ ತಂದೆ ತಾಯಿಯ ಮೇಲೆ ಹಲ್ಲೆ :

ಗ್ರಾಮೀಣ ಪೊಲೀಸ ಠಾಣೆ: ಶ್ರೀ ಮಾಧುರಾಯ ತಂದೆ ಪೀರಪ್ಪ ಹಂಗರಗಿ ಸಾ|| ಪಟ್ಟಣ ತಾ:ಜಿ: ಗುಲಬರ್ಗಾ ರವರು ನಮಗೆ ಸಂಬಂಧ ಪಟ್ಟ ಪಟ್ಟಣ ಸೀಮೆಯಲ್ಲಿ ಬರುವ ಹೊಲ ಸರ್ವೆ ನಂ. 145 ರಲ್ಲಿ ಒಟ್ಟು 31 ಎಕರೆ 9 ಗುಂಟೆ ಹೊಲ ಇದ್ದು ಸದರಿ ಈ ಹೊಲದಲ್ಲಿ 3 ಜನ ಮಕ್ಕಳಿಗೆ ತಲಾ 9 ಎಕರೆಯಂತೆ ಹಂಚಿಕೆ ಮಾಡಿದ್ದು ಇರುತ್ತದೆ. ಉಳಿದ 4 ಎಕರೆ 9 ಗುಂಟೆ ತಮ್ಮ ಉಪಜೀವನಕ್ಕೆ ಇಟ್ಟುಕೊಂಡಿರುತ್ತೆವೆ. ಇಂದು ದಿನಾಂಕ 19/7/11 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ತಮ್ಮ ಹಿರಿಯ ಮಗನಾದ ಮಲ್ಲಿಕಾರ್ಜುನ ಮತ್ತು ಹಿರಿಯ ಸೊಸೆ ಭಾಗ್ಯವಂತಿ ಇವರಿಬ್ಬರು ನಮ್ಮ ಹೆಸರಿನಲ್ಲಿದ್ದ ಹೊಲದಲ್ಲಿ ನೇಗಿಲು ಹೊಡೆಯಲು ಬಂದಾಗ ನಮ್ಮ ಪಾಲಿನ ಹೊಲ ನಾವು ಸಾಯುವವರೆಗೆ ಕೊಡುವುದಿಲ್ಲ ಅಂತಾ ಅಂದಿದ್ದಕ್ಕೆ ಮಗ ಮತ್ತು ಸೊಸೆ ನನಗೆ ಮತ್ತು ನನ್ನ ಹೆಂಡತಿಗೆ ಅವ್ಯಾಚ್ಛವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಚಿತ್ತಾಪುರ ಠಾಣೆ:

ಶ್ರೀ ಮಹಾದೇವಪ್ಪ ತಂದೆ ಮರುಗಪ್ಪ ಕಲ್ಲಕ ಸಾ||ಬಾಹರಪೇಠ ಚಿತ್ತಾಪೂರ ರವರು ನಾನು ದಿನಾಂಕ 19/7/2011 ರಂದು ಕಸಬಾ ಚಿತ್ತಾಪೂರ ಸೀಮೆಯಲ್ಲಿ ಇರುವ ಹೊಲ ಸರ್ವೇ ನಂ 404 ವಿಸ್ತೀರ್ಣ 9 ಎಕರೆ 12 ಗುಂಟೆಯ ಹೊಲದಲ್ಲಿ ನಾಗಪ್ಪ ತಂದೆ ಸುಭಾಷ ಕಲ್ಲಕ
, ಹಣಮಂತ ತಂದೆ ಸುಭಾಷ ಕಲ್ಲಕ, ಆನಂದ ತಂದೆ ಸಾಯಬಣ್ಣ ಕಲ್ಲಕ, ರವಿ ತಂದೆ ಸಾಯಬಣ್ಣ ಕಲ್ಲಕ, ಭಜಂತ್ರಿ. ಸಾ|| ಎಲ್ಲರೂ ಚಿತ್ತಾಫೂರ ರವರು ಉದ್ದೇಶ ಪೂರ್ವಕವಾಗಿ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲ ಹರಗುತ್ತಿರುವಾಗ ನಾನು ಹೋಗಿ ಏಕೆ ನನ್ನ ಹೊಲ ಹರಗುತ್ತಿರುವಿರಿ ಅಂತಾ ಕೇಳಿದ್ದಕ್ಕೆ ಎಲ್ಲರೂ ಕೂಡಿಕೊಂಡು ತಕರಾರು ತಗೆದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ಸ್ಟೇಷನ ಬಜಾರ ಠಾಣೆ:
ಶ್ರೀ. ನಿಂಗಪ್ಪ ತಂದೆ ಶರಣಪ್ಪಾ ಸಾ|| ಮನೆ ನಂ 4122/1 13 ನೇ ಕ್ರಾಸ ತಾರಫೈಲ್ ಗುಲಬರ್ಗಾ ರವರು ನನ್ನ ಶ್ರೀ.ಶರಣಪ್ರೀಯಾ ಸ್ಯಾನಿಟರಿ ಶಾಪ್ ಹಳೇ ಜೇವರ್ಗಿ ರಸ್ತೆ ಅಂಡಗಿಯಲ್ಲಿರುವ ಸ್ಯಾನಟರಿ ಸಾಮಾಗ್ರಿಗಳನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಘಾತ ಪ್ರಕರಣ :
ಚಿಂಚೋಳಿ ಠಾಣೆ
:
ವಿಜಯಕುಮಾರ ತಂದೆ ಉಮೇಶ ಜಾದವ ಸಾಃ ಚಂದನಕೇರಾ ರವರು ನಾನು ದಿನಾಂಕ 17.07.2011 ರಂದು ಬೆಳಿಗ್ಗೆ ಸುಮಾರಿಗೆ ನಾನು ನನ್ನ ಹೆಂಡತಿಯ ಅಕ್ಕಳಾದ ಬೀಮಬಾಯಿ ಗಂಡ ಅಶೋಕ ಇವಳನ್ನು ಕರೆಯಲು ಪಾಲತ್ಯಾನ ತಾಂಡಕ್ಕೆ ಹೋಗಿ ಪಾಲತ್ಯಾನ ತಾಂಡಾದಿಂದ ಚಿಮ್ಮನಚೋಡ ಮುಖಾಂತರ ಚಂದನಕೇರಾಕ್ಕೆ ಜೀಪ ನಂ ಕೆ.ಎ 39 ಎಮ 41 ನೇದ್ದರಲ್ಲಿ ಕುಳಿತು ಹೋರಟಿದ್ದೇವು. ಜೀಪ ಚಾಲಕನು ತನ್ನ ಜೀಪನ್ನು ಅತೀ ವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಹತ್ತಿದಾಗ ನಾನು ಆತನಿಗೆ ಸಾವಕಾಶವಾಗಿ ಚಲಾಯಿಸಲು ಹೇಳಿದೆನು. ಪಾಲತ್ಯಾನ ತಾಂಡಾ ಹಾಗೂ ಸೇರಿ ಕ್ರಾಸ ಮದ್ಯದಲ್ಲಿ ಫೂಲಿನ ಹತ್ತಿರ ಬಂದಾಗ ಅತೀ ವೇಗದಲ್ಲಿದ್ದ ಜೀಪನ್ನು ಒಮ್ಮಲೇ ಬ್ರೇಕ್ ಹಾಕಿದ್ದಾಗ ಕೊನೆಯಲ್ಲಿ ಕುಳಿತ ನಾನು ಕೆಳಗೆ ಬಿದ್ದೆನೆ . ನನಗೆ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 July 2011

GULBARGA DISTRICT REPORTED CRIMES

ಮಧ್ಯ ಮಾರಾಟ ಒಬ್ಬನ ಬಂದನ :
ನಿಂಬರ್ಗಾ ಠಾಣೆ:
ದಿನಾಂಕ;18-07-2011 ರಂದು ಮಧ್ಯಾಹ್ನ ಮಾಡಿಯಾಳ ಗ್ರಾಮದಲ್ಲಿಯ ಕನಕದಾಸ ಕಟ್ಟೆಯ ಹತತ್ಇರ ಸಾರ್ವಜನಿಕ ಸ್ಥಳದಲ್ಲಿ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ನಿಂಬರ್ಗಾ ರವರು ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ರಾಜಕುಮಾರ ತಂದೆ ಸಿದ್ರಾಮಪ್ಪಾ ಗಾಯಕವಾಡ ಸಾ|| ಮಾಡಿಯಾಳ ಇತನು ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು ಅವನನ್ನು ವಶಕ್ಕೆ ತೆಗೆದುಕೊಂಡು ನಗದು ಹಾಗು ಮಧ್ಯದ ಬಾಟಲಿಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಹರಣ ಪ್ರಕರಣ :
ಸೇಡಂ ಠಾಣೆ:
ಶ್ರೀ ಚಂದ್ರಪ್ಪ ತಂದೆ ಹನಮಪ್ಪ ಮಡಗು ಸಾ|| ಈರನಾಪಲ್ಲಿ ತಾ: ಸೇಡಂ ರವರು ನನ್ನ ಮಗಳಾದ ಕಲ್ಪನಾ ಇವಳು ಪಟ್ಟಣದ ಕೆಇಬಿ ಕಾಲೋನಿಯಲ್ಲಿ ಬಾಡಿಗೆಯಿಂದ ರೂಮ ತೆಗೆದುಕೊಂಡು ಇದ್ದಿದ್ದು ನಾನು ದಿನಾಂಕ: 12-7-11 ರಂದು ಸಾಯಾಂಕಾಲ ಮಗಳ ರೂಮಿಗೆ ಬಂದು ನೋಡಲಾಗಿ ಮಗಳು ಕಲ್ಪನಾ ರೂಮಿನಲ್ಲಿ ಇರಲಿಲ್ಲಾ ಅವಳ ಗೆಳತಿ ಅರುಣಾ ಇವಳಿಗೆ ವಿಚಾರಿಸಲಾಗಿ ನಿಮ್ಮ ಮಗಳು ಕಲ್ಪನಾ ಇಂದು ಮುಂಜಾನೆ 11-30 ಗಂಟೆಗೆ ನಿಮ್ಮ ಹತ್ತಿರ ಕೆಲಸ ಮಾಡುವ ಅನೀಲ ತಂದೆ ಸದಾನಂದ ಸಾ; ಲಿಂಗಮಪಲ್ಲಿ ಇತನು ನಿಮ್ಮ ಮಗಳಿಗೆ ಹೈದ್ರಾಬಾದಿಗೆ ಹೋಗಣೋ ಬಾ ಅಂತಾ ಬಲವಂತವಾಗಿ ಕರೆದುಕೊಂಡು ಹೋದನು ಅಂತಾ ತಿಳಿಸಿದಳು. ನಾನು ಅಂದೆ ರಾತ್ರಿ 8 ಗಂಟೆ ಸುಮಾರಿಗೆ ಅನೀಲನ ತಂದೆಯಾದ ಸದಾನಂದ ಇವರಿಗೆ ನಿಮ್ಮ ಮಗ ನನ್ನ ಮಗಳಿಗೆ ಕರೆದುಕೊಂಡು ಹೋಗಿರುತ್ತಾನೆ ನನ್ನ ಮಗಳಿಗೆ ಕೊಡಿಸು ಅಂತಾ ಕೇಳಿದಾಗ ಸದಾನಂದ ಇತನು ಅವಾಚ್ಯವಾಗಿ ಬೈದು ನಿನ್ನ ಮಗಳಿಗೆ ಕರೆದುಕೊಂಡು ಹೋಗಿ ಮದುವೆ ಮಾಡಿಕೋ ಅಂತಾ ನಾನೆ ನನ್ನ ಮಗನಿಗೆ ಖರ್ಚಿಗೆ 5 ಸಾವಿರ ರೂ ಕೊಟ್ಟು ಕಳಿಸಿರುತ್ತೆನೆ ತಿಳಿಸಿದ್ದು, ನನ್ನ ಮಗಳಿಗೆ ಅಪಹರಣ ಮಾಡಿಕೊಂಡು ಹೋಗಲು ಅನೀಲ ಇತನಿಗೆ ಅವನ ತಂದೆ ಸದಾನಂದ ಕಲಾಲ ಹಾಗೂ ಮುಕಂದ ಕಲಾಲ ಸಾ; ಲಿಂಗಮಪಲ್ಲಿ ಇವರು ಸಹಾಯ ಮಾಡಿದ್ದು ಇರುತ್ತದೆ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ದೇವಲ ಗಾಣಗಾಪೂರ ಠಾಣೆ :
ಶರಣಪ್ಪ ತಂದೆ ಖಾಜಾಪ್ಪ ದೊಡ್ಡಮನಿ ಸಾ|| ಹೂವಿನಹಳ್ಳಿ ರವರು, ನಮ್ಮೂರಿನ ಸಿದ್ದಪ್ಪ ತಂದೆ ಮಾಹಾಂತಪ್ಪ ಕಟ್ಟಿಮನಿ ಎಂಬಾತನು ನಿನ್ನೆ ದಿನಾಂಕ:18-7-2011 ರಂದು ಸಾಯಂಕಾಲ ಸುಮಾರಿಗೆ ನಮ್ಮ ಎತ್ತುಗಳ ಕೊಟ್ಟಿಗೆಯ ಮುಂದೆ ಸರಾಯಿ ಕುಡಿದ ಒದರಾಡುತಿದ್ದಾಗ ಇಲ್ಲಿ ಒದರಾಡಬೇಡಂತಾ ಹೇಳಿದ್ದಕ್ಕೆ ಸಿದ್ದಪ್ಪನು ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ನಾನು ಕೈಯಿಂದ ಹೊಡೆದಿರುತ್ತೇನೆ. ನಾನು ಅರ್ದ ಗಂಟೆ ನಂತರ ಕಮೀಟಿ ಹಾಲ ಮುಂದಿನಿಂದ ಮನೆಗೆ ಹೊರಟಿದ್ದಾಗ ಸಿದ್ದಪ್ಪ ತಂದೆ ಮಾಹಾಂತಪ್ಪ ಕಟ್ಟಿಮನಿ, ಹೊನ್ನಪ್ಪ ತಂದೆ ಮಾಹಾಂತಪ್ಪ ಕಟ್ಟಿಮನಿ, ಮಾಹಾಂತಪ್ಪ ತಂದೆ ಹೊನ್ನಪ್ಪ ಕಟ್ಟಿಮನಿ ಮತ್ತು ಶರಣಪ್ಪ ತಂದೆ ಹೊನ್ನಪ್ಪ ಕಟ್ಟಿಮನಿ ರವರೆಲ್ಲರೂ ಬಂದು ನನಗೆ ನಿಲ್ಲಿಸಿ ಸಿದ್ದಪ್ಪನು ಇತನು ನನಗೆ ಚಾಕುವಿನಿಂದ ಹೊಟ್ಟೆಗೆ ಹೊಡೆದ ಭಾರಿ ರಕ್ತಗಾಯ ಪಡಿಸಿರುತ್ತಾನೆ. ಜಗಳ ಬಿಡಿಸಲು ಬಂದ ನನ್ನ ತಾಯಿ ಲಕ್ಷ್ಮೀಬಾಯಿಗೂ ಶರಣಪ್ಪನು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ:

ನರೋಣಾ ಠಾಣೆ
:ಶ್ರೀ ಶಾಂತಪ್ಪ ತಂದೆ ಶಿವಲಿಂಗಪ್ಪ ಮಲಶೇಟ್ಟಿ ಮು: ಧುತ್ತರಗಾಂವ ರವರು ನಾನು ದಿನಾಂಕ: 18/07/2011 ರಂದು ಮುಂಜಾನೆ ಸುಮಾರಿಗೆ ನನ್ನ ಜೀಪನಲ್ಲಿ ಲಾಡ ಚಿಂಚೋಳಿ ಕ್ರಾಸದಿಂದ ಕೆಲವು ಶಾಲೆಯ ಹುಡುಗರನ್ನು ಜೀಪನಲ್ಲಿ ಕೂಡ್ರಿಸಿಕೊಂಡು ಧುತ್ತರಗಾಂವ ಕ್ಕೆ ಹೊರಟೇನು. ಲಾಡ ಚಿಂಚೋಳಿಯಿಂದ ಅಂದಾಜು ಅರ್ಧ ಕಿ;ಮಿ; ದೂರ ಧತ್ತರಗಾಂವ ಕಡೆಗೆ ಹೋಗುವಾಗ ದೌಲತರಾವ ಇವರ ಹೊಲದ ಹತ್ತಿರ ರೋಡಿನಲ್ಲಿ ಒಬ್ಬ ಮನುಷ್ಯನಿಗೆ ನಾಲ್ಕು ಜನರು ಕೂಡಿಕೊಂಡು ಕೈಯಲ್ಲಿ ಬಡಿಗೆ, ಕೊಡಲಿ ಹಿಡಿದುಕೊಂಡು ಹೊಡೆಯುತ್ತಿದ್ದರು. ನಾನು ಇದನ್ನು ಕಂಡು ಸ್ವಲ್ಪ ಅಂತರದಲ್ಲಿ ನನ್ನ ಜೀಪ ನಿಲ್ಲಿಸಿ ನೋಡಲು ಕೊರಳ್ಳಿ ಗ್ರಾಮದ ಭೋಗವಂತರಾವ ಹೊದಲೂರ ಮು: ಕೊರಳ್ಳಿ ಇವರಿಗೆ ಲಾಡ ಚಿಂಚೋಳಿ ಗ್ರಾಮದ ಮಹಾಂತೇಶ ತಂದೆ ಬಾಬು , ಪರಮೇಶ್ವರ ತಂದ ಬಾಬು ಜವಳಿ, ಶರಣಪ್ಪ ತಂದೆ ಬಾಬು ಜವಳಿ ,ಈರಣ್ಣಾ ತಂದೆ ಬಾಬು ಜವಳಿ , ಇವರು ಹೊಡೆಯುತ್ತಿದ್ದು ಮಹಾಂತೇಶ ಈತನ ಕೈಯಲ್ಲಿ ಕೊಡ್ಲಿ ಯಿದ್ದು ಬೋಗವಂತರಾಯನ ತಲೆಯ ಹಿಂಬದಿಯಲ್ಲಿ ಕೊಡಲಿಯಿಂದ ಹೊಡೆದನು ಪರಮೇಶ್ವರ ಮತ್ತು ಶರಣಪ್ಪ ಮತ್ತು ಈರಣ್ಣ ಇವರ ಕೈಗಳಲ್ಲಿ ಬಡಗಿಗಳಿದ್ದು ಒಂದೆ ಸವನೆ ಏಟಿನ ಮೇಲೆ ಏಟು ಬೋಗವಂತರಾಯನಿಗೆ ಹೊಡೆಯುತ್ತಿದ್ದರು ಯಾವುದು ಒಂದು ಉದ್ದೇಶ ಹೊಡೆ ಬಡೆ ಮಾಡಿ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ :
ಶ್ರೀ ಬಸವರಾಜ ತಂದೆ ಅಂಬಣ್ಣ ಕಡಗಂಚಿ ಉ: ಎಮ್‌ಟಿಎಸ್‌ ಏಜೇನನ್ಸಿ ಯಲ್ಲಿ ಕೆಲಸ ಸಾ: ಹಳೇಯ ಶೆಟ್ಟಿ ಕಾಂಪ್ಲೇಕ್ಸ್‌ ಎದುರುಗಡೆ ಸುಬಾಷ ನಗರ ಶಹಾಬಜಾರ ಗುಲಬರ್ಗಾ ರವರು ನಾನು ಮತ್ತು ಚೇತನ ಇಬ್ಬರೂ ಕೂಡಿಕೊಂಡು ಸೇಲ್ಸ್ ಕಲೇಕ್ಷನ ತರುವ ಕುರಿತು ಹೀರೋ ಹೋಂಡಾ ಪ್ಯಾಶನ ಮೋ ಸೈಕಲ ನಂ ಕೆಎ 32 ವ್ಹಿ 916 ನೇದ್ದರ ಮೇಲೆ ಕಮಲಾಪೂರಕ್ಕೆ ಹೋಗಿದ್ದು, ಕೆಲಸ ಮುಗಿಸಿಕೊಂಡು ಮದ್ಯಾಹ್ನ ಗುಲಬರ್ಗಾಕ್ಕೆ ಬರುತ್ತಿರುವಾಗ ಕಪನೂರ ಇಂಡಸ್ಟ್ರಿಯಲ್ ಏರಿಯಾದ ಸಫಾರಿ ಧಾಬಾ ದಾಟಿ ಮುಂದೆ ಬರುತ್ತಿರುವಾಗ ಗುಲಬರ್ಗಾ ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್ಸ ನಂ ಕೆಎ 32 ಎಪ್‌ 1122 ನೇದ್ದರ ಚಾಲಕ ಚಾಲಕ ಶೇಖ ಮುಬಿನ ಬಸ್ಸನ್ನು ಅತೀವೇಗ ಮತ್ತು ನಿಷ್ಕಾಳಜಿತನ ದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ ನನ್ನ ಗಾಡಿಯ ಹಿಂದೆ ಕುಳಿತ ಚೇತನ ಇತನಿಗೆ ಹಣೆಗೆ ತಲೆಗೆ ಜೋರಾಗಿ ಪೆಟ್ಟಾಗಿ ಹಣೆಯ ಮದ್ಯದಲ್ಲಿ ಬಾರಿ ರಕ್ತಗಾಯವಾಗಿ, ಸ್ಥಳದಲ್ಲಿಯೇ ಮೃತ್ತಪಟ್ಟಿರುತ್ತಾನೆ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಪೆಟ್ರೋಲ್ ಪಂಪ ಗ್ಲಾಸ್ ಹಾನಿ ಮಾಡಿದ ಬಗ್ಗೆ:

ಗ್ರಾಮೀಣ ಪೊಲೀಸ ಠಾಣೆ : ಶ್ರೀ ಶಿವಕಾಮತ ತಂದೆ ಶಿವಾರಾಯ ರೆಡ್ಡಿ ಸಾ|| ಎನ.ಜಿ.ಓ ಕಾಲೋನಿ ಗುಲಬರ್ಗಾ ರವರು ನಮ್ಮ ಪೆಟ್ರೋಲ್ ಪಂಪ್ ಹಿರಾಪೂರ ಕ್ರಾಸ್ ದಲ್ಲಿ ಇದ್ದು, ದಿನಾಂಕ 18/7/11 ರಂದು ರಾತ್ರಿ ಸುಮಾರಿಗೆ ಪೆಟ್ರೋಲ ಪಂಪಕ್ಕೆ 8-10 ಜನ ಹುಡುಗರು ಮೋಟಾರ ಸೈಕಲಗಳ ಮೇಲೆ ಬಂದು ಪೆಟ್ರೋಲ ಹಾಕಲು ಹೇಳಿದಾಗ ನಮ್ಮ ಕೆಲಸ ಮಾಡುವ ಹುಡುಗರು ಈಗ ಹಾಕುವುದಿಲ್ಲ ಅಂತಾ ತಿಳಿಸಿದಕ್ಕೆ ಅವರಲ್ಲಿ 2 ಜನರು ಅವ್ಯಾಚ್ಛವಾಗಿ ಬೈದು ಕಲ್ಲುಗಳನ್ನು ತೆಗೆದುಕೊಂಡು ಡಿಸೇಲ ಪಂಪಗೆ ಕಲ್ಲಿನಿಂದ ಹೊಡೆದು ಅದರ ಗ್ಲಾಸು ಒಡೆದಿರುತ್ತಾರೆ. ಕಲ್ಲಿನಿಂದ ಹೊಡೆದ ಪರಿಣಾಮ 45000./- ರೂಪಾಯಿಗಳ ಮೌಲ್ಯದ್ದು ಗ್ಲಾಸ ಲುಕ್ಸಾನ ಆಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಗ್ರಾಮೀಣ ಠಾಣೆ ಜೈಬೀಮ ತಂದೆ ಕಂಠೆಪ್ಪ ಹಡಗಿಲ ಉ: ಪೆಟಿಂಗ ಕೆಲಸ ಸಾ: ಅಂಬೇಡ್ಕರ ನಗರ ಶರಣಸಿರಸಗಿ ತಾಃ ಜಿಃ ಗುಲಬರ್ಗಾ. ಇತನಿಗೆ ಸದರ ಚೇತನ ಮಾಲಗತ್ತಿ ಹಾಗು ಇನ್ನೂ 3 ಜನರು ಬಂದು ಹಣ ಕೊಡುವ ವಿಷಯದಲ್ಲಿ ಮನೆಯ ಹತ್ತಿರ ಬಂದು ನನಗೆ ಜಬರ ದಸ್ತಿಯಿಂದ ಗಾಡಿಯ ಮೇಲೆ ಕರೆದುಕೊಂಡು ಹೋಗುವಾಗ ನನ್ನ ತಾಯಿ ಮತ್ತು ಅಣ್ಣ ಶಿವಪುತ್ರ ಕರೆದುಕೊಂಡು ಹೊಗಬೇಡ ಅಂತಾ ಹೇಳಿದರು ಬ್ರಹ್ಮಪೂರ ಗಲ್ಲಿಯಲ್ಲಿ ತಂದು ಕಲ್ಲಿನಿಂದ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





18 July 2011

GULBARGA DIST REPORTED CRIMES

ಕಳ್ಳತನ ಪ್ರಕರಣ

ಸ್ಟೇಷನ ಬಜಾರ ಠಾಣೆ:
ಶ್ರೀ. ಎಸ್.ಎಮ್. ದೇವಯ್ಯಾ ಸಾ|| ಮನೆ ನಂ 200 ಐವಾನ-ಎ-ಶಾಹಿ ಎರಿಯಾ ಗುಲಬರ್ಗಾ ರವರು ದಿನಾಂಕ 17.07.11 ರಂದು ರಾತ್ರಿ ವೇಳೆಯಲ್ಲಿ ಮನೆ ಮುಂದೆ ನಿಲ್ಲಿಸಿದ ಕಾರ್ ನಂ ಕೆಎ 02 , ಎಮ್ ಎ 4699 ನೇದ್ದರ ಕಾರ್ ಟೇಪ ರಿಕಾರ್ಡರ್ ಹಾಗೂ ಡ್ಯಾಶ ಬೋರ್ಡನಲ್ಲಿಟ್ಟಿದ್ದ ಸಿ.ಡಿ. ಕ್ಯಾಸೆಟ್ ಹಾಗೂ ಕಾರಿನ ದಾಖಲೆಗಳು ಅ||ಕಿ|| 15,000-00 ರೂಪಾಯಿಗಳ ಮೌಲ್ಯದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕ್ರಮ ಮಧ್ಯ ಮಾರಾಟ :
ನಿಂಬರ್ಗಾ ಠಾಣೆ:
ಇಂದು ದಿನಾಂಕ: 18-07-2011 ರಂದು ಮುಂಜಾನೆ ಬೂಸನೂರ ಕ್ರಾಸ ಹತ್ತಿರ ಜಿ ದಾಬಾ ಮುಂದುಗಡೆ ರೋಡಿನ ಪಕ್ಕದಲ್ಲಿ ದಸ್ತಗಿರ ಸಾಬ ತಂದೆ ಮದರಸಾಬ ಗೌರ ಸಾ|| ಭೂಸನೂರ ಗ್ರಾಮ ತಾಃ ಆಳಂದ ರವರು ಆಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಮತ್ತು ಸಾಗಾಣೆ ಮಾಡುತ್ತಿರುವಾಗ ಪಿ.ಎಸ.ಐ ರವರು ಆತನನ್ನು ವಿಚಾರಿಸಿ ಮಧ್ಯ ಮಾರಾಟ ಮಾಡಿದ ನಗದು ಹಣ 240-00 ರೂ. ಹಾಗು ಮಧ್ಯದ ಬಾಟಲಿಗಳು ಜಪ್ತಿ ಪಡಿಸಿಕೊಂಡು ಆತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲಾಗಿದೆ .

ಯು.ಡಿ.ಅರ್. ಪ್ರಕರಣ :

ಬ್ರಹ್ಮಪೂರ ಠಾಣೆ : ದಿನಾಂಕ: 17/07/2011 ರಂದು ಪಿಸಿ 29 ಶ್ರೀ ಚಂದ್ರಾಮ ರವರು ವರದಿ ಸಲ್ಲಿಸಿದ ಸಾರಾಂಶದ ಎನೆಂದರೆ, ಜಿಲ್ಲಾ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಅಂದಾಜ 70 ವರ್ಷ ವಯಸ್ಸಿನವನು ಯಾವುದೋ ಒಂದು ಕಾಯಿಲೆಯಿಂದ ಮರಣ ಹೊಂದಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ವರದಿಯ ಮೇಲೆ ಯು,ಡಿ,ಆರ್. ಪ್ರಕಾರ ಪ್ರಕರಣ ದಾಖಲಿಸಿಕೊಂಡು ಪಿ.ಎಸ.ಐ ರವರು ಮುಂದಿನ ತನಿಖೆ ಕೈಕೊಂಡಿರುತ್ತಾರೆ. ಅಪರಿಚಿತ ಮನುಷ್ಯ 70 ವಯಸ್ಸಿನವನಾಗಿದ್ದು, ಎತ್ತರ 5.6 ಇಂಚ್ ಸಾದಾ ಕಪ್ಪು ಬಣ್ಣ ತಲೆಯಲ್ಲಿ ಉದ್ದನೆ ಬಿಳಿ ಕೂದಲು ತೆಳ್ಳನೆ ಮೈಕಟ್ಟು ಯಾವದೋ ರೋಗದಿಂದ ನರಳುತ್ತಾ ಮೃತಪಟ್ಟಂತೆ ಕಂಡು ಬರುತ್ತದೆ ಮೃತನ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆ 08472-263618 ಅಥವಾ ಕಂಟ್ರೋಲ್ ರೂಮ್ ನಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.

GULBARGA DIST REPORTED CRIMES

ದರೋಡೆ ಪ್ರಕರಣ:

ಬ್ರಹ್ಮಪೂರ ಠಾಣೆ: ಶ್ರೀ ವಿಜಯ ಕುಮಾರ ತಂದೆ ದ್ವಾರಕದಾಸ ಸೇವಲಾನಿ ಸಾ: ಶರಣನಗರ ಗುಲಬರ್ಗಾ ರವರು ನಾನು ನನ್ನ ಮಕ್ಕಳು ಹೆಂಡತಿಯೊಂದಿಗೆ ಮನೆಯಲ್ಲಿ ಇದ್ದಾಗ ದಿನಾಂಕ 17/07/2011 ರಂದು ಸಾಯಂಕಾಲ ಸುಮಾರಿಗೆ 8 ಜನರು ಅಪರಿಚಿತರು ಕೈಯಲ್ಲಿ ಲಾಂಗು. ಮಚ್ಚು ಹಿಡಿದುಕೊಂಡು ಬಂದು ನಮ್ಮ ಮನೆಯಲ್ಲಿ ಬಂದು ಮನೆಯಲ್ಲಿರುವ ಒಡವೆ ಬಂಗಾರ ಹಣ ಎಲ್ಲವು ಕೊಡಬೇಕು ಅಂತಾ ಹೆದರಿಸುತ್ತಿದ್ದು ಆಗ ನಾನು ನೀವು ಯಾರು ಎಂದು ಕೇಳಿದಾಗ ನನಗೆ ಮಚ್ಚಿನಿಂದ ತೆಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಕೊರಳಲ್ಲಿದ್ದ ಬಂಗಾರದ ಲಾಕೇಟ ಕಿತ್ತುಕೊಂಡು ಹೊಗಲು ಪ್ರಯತ್ನಿಸಿದ್ದು ಅಲ್ಲದೇ ನಮಗೆ ಮನೆಯಿಂದ ಹೊರೆಗೆ ಹೊಗದಂತೆ ಹೆದರಿಸುತ್ತಿರುವಾಗ ನಾವು ಚಿರಾಡುವದನ್ನು ನೋಡಿ ಆಜು ಬಾಜು ಜನರು ಬಂದಾಗ ಓಡಿ ಹೊಗಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ

ಬ್ರಹ್ಮಪೂರ ಠಾಣೆ: ಶ್ರೀ ಕಿರಣ ತಂದೆ ರಾಮು ಜಾದವ ಸಾ|| ಒಡ್ಡರ ಗಲ್ಲಿ ಭಗತಸಿಂಗ ಚೌಕ ಗುಲಬರ್ಗಾ ರವರು ನಾನು ದಿನಾಂಕ 17/07/2011 ರಂದು ಸಾಯಂಕಾಲ ಪೇಟ್ರೋಲ ತಗೆದುಕೊಂಡು ಮೋರೆ ಆಸ್ಪತ್ರೆ ಹತ್ತಿರ ಬರುತ್ತಿರುವಾಗ ನಮ್ಮ ಮಾವನ ಮಗ ರತನ ಇತನ ಜೋತೆಗೆ ಜಗಳ ಮಾಡುತ್ತಿದ್ದು ನಾನು ಹತ್ತಿರ ಹೊದಾಗ ಅಲ್ಲಿದ್ದ 7-8 ಜನರು ನನ್ನೊಂದಿಗೆ ಜಗಳಕ್ಕೆ ಬಿದ್ದು ನೀನು ನಮಗೆ ಹೊಡೆಯಲು ಬಂದಿರುವಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ, ಕಲ್ಲಿನಿಂದ ಹಾಗು ಬಡಿಗೆಯಿಂದ ಹೊಡೆ-ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಶಂದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 July 2011

GULBARGA DIST REPORTED CRIMES

ಅಪಘಾತ ಪ್ರಕರಣ :
ಕಮಲಾಪೂರ

ಠಾಣೆ :
ಶ್ರೀ ಅಂಜಯ್ಯ ತಂದೆ ನರಸಿಂಹಲು ಸಾಃ ಶಾಹದ ನಗರ ಮೊಹಲ್ಲಾಗಿಡ್ಡಾ ಜಿಃ ಮಹಿಬೂಬ ನಗರ (ಎ.ಪಿ) ರವರು ನಾನು ಸಂತೋಷ ತಂದೆ ಮಾದುರಾವ ಸಾ: ಮಹಾಗಾಂವ ಕ್ರಾಸ ತಾಃಜಿಃ ಗುಲಬರ್ಗಾ ರವರು ಲಾರಿ ನಂ. ಎಪಿ: 04, ಟಿ:1337 ನೇದ್ದರಲ್ಲಿ ಹೈದ್ರಾಬಾದದಿಂದ ಲಾರಿಯಲ್ಲಿ ಬಿಸ್ಕಿಟ್ ಲೋಡ ಮಾಡಿಕೊಂಡು ಗುಲಬರ್ಗಾಕ್ಕೆ ಹುಮನಾಬಾದ ಗುಲಬರ್ಗಾ ರಾಷ್ಟ್ರಿಯ ಹೆದ್ದಾರಿ ರೋಡಿನ ಮರಗುತ್ತಿ ಕ್ರಾಸ ದಾಟಿ ಕುದುರೆ ಮುಖ ಇಳುಕಿನಲ್ಲಿ ಬರುತ್ತಿರುವಾಗ ಸಂತೋಷ ಲಾರಿ ಚಾಲಕನು ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ, ಅಪಘಾತ ಪಡಿಸಿದ್ದರಿಂದ ನನಗೆ ಮತ್ತು ಸಂತೋಷನಿಗೆ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ದೇವಲ ಗಾಣಗಾಪೂರ

ಠಾಣೆ :
ಹಜರತ ಪಿ.ಸಿ. ರೇವೂರ ಪೊಲೀಸ ಠಾಣೆ ರವರು ನಾನು ಚೌಡಾಪುರ ಕ್ರಾಸ ಬಸ ನಿಲ್ದಾಣದ ಎದರುಗಡೆ ಮೋಟಾರ ಸೈಕ್‌ಲ್‌ ಮೇಲೆ ಹೋಗುತ್ತಿರುವಾಗ ಜೀಪ ನಂ.ಕೆ.ಎ.32.ಎಮ್‌.ಎ.1000 ನೇದ್ದರ ಚಾಲಕ ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಜೂಜಾಟ ಪ್ರಕರಣ :
ಚಿತ್ತಾಪುರ ಠಾಣೆ:
ದಿನಾಂಕ 17/07/11 ರಂದು ಚಿತ್ತಾಫೂರದ ಆಶ್ರಯ ಕಾಲನಿಯಲ್ಲಿ ಸಾರ್ವಜನಿಕ ಸ್ಥೃಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅದೃಷ್ಟ ಅವಲಂಬಿತ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿಯ ಮೇರೆಗೆ ಚಿತ್ತಾಪೂರ ಠಾಣೆಯ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ
ಸುನಿಲ ತಂದೆ ಪ್ರಕಾಶ ಕಲ್ಲಕ, ಶಾಮ ತಂದೆ ವಿಜಯಕುಮಾರ ಬಸುದೆ, ಬಾಲರಾಜ ತಂದೆ ಸುರೆಶ ಗುತ್ತೆದಾರ, ಶ್ರೀಧರ ತಂದೆ ಈರಣ್ಣ ಚೌಧರಿ, ಜಗನ್ನಾತ ತಂದೆ ಚಂದಯ್ಯಾ ಗುತ್ತೇದಾರ, ಶಿವರಾಜ ತಂದೆ ಅಶೋಕ ಕಲ್ಲಕ, ವಿಜಯ ತಂದೆ ಪ್ರಕಾಶ ಕಲ್ಲಕ, ಕಿರಣ ತಂದೆ ಅಶೋಕ ಈಳಗೇರ, ಸಂತೋಷ ತಂದೆ ನಾಗಣ್ಣ ರಾಮತೀರ್ಥ, ಶರಣು ತಂದೆ ವೀರಭದ್ರಪ್ಪ ಹಳ್ಳಿ, ಸುರೆಶ ತಂದೆ ಮರೆಪ್ಪ ನರಿಬೋಳಿ, ಚಂದ್ರು ತಂದೆ ಮಲಕಣ್ಣ ಭಜಂತ್ರಿ. ಸಾ| ಎಲ್ಲರೂ ಚಿತ್ತಾಫೂರ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 4250/-ರೂ, 6 ಮೊಬೈಲುಗಳು ಅಕಿ: 1800/-ರೂ, 52 ಇಸ್ಪೇಟ ಎಲೆಗಳು ಅಕಿ: 00, ಮತ್ತು ಒಂದು ಪ್ಲಾಸ್ಟಿಕ ಚಾಪೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ .

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ :
ರಾಧಿಕಾ ಗಂಡ ಆನಂದ ಮೋರೆ ಸಾಃ ಜೀವಣಗಿ ರವರು ನಾನು ಕಿರಾಣಿ ಅಂಗಡಿಗೆ ಸಾಮಾನುಗಳನ್ನು ತರಲು ಹೋಗುತ್ತಿರುವಾಗ ನನ್ನ ಚಿಕ್ಕಪ್ಪ ಸದನ ಇತನ ಹೆಂಡತಿಯಾದ ರೇಖಾ, ಇವಳ ಮಗನಾದ ಶೇಖರ ಮತ್ತು ಇತನ ಹೆಂಡತಿ ಸಂಗೀತ ಇವರು ತಮ್ಮ ಮನೆಯ ಮುಂದೆ ನಿಂತು ನನಗೆ ಅವಾಚ್ಯವಾಗಿ ಬಯದು ನೀನು ಬೇರೆ ಜಾತಿಯವಳುನ ಸಂಗಡ ಮದುವೆ ಹೇಗೆ ಆಗಿದ್ದಿಯಾ ಅಂತಾ ನಿನ್ನ ತಂದೆ ಆಸ್ತಿಯಲ್ಲಿ ನಿನಗೆ ಪಾಲು ಕೊಡುವುದಿಲ್ಲಾ ಅಂತಾ ಅನ್ನುತ್ತಿದ್ದಾಗ, ನಾನು ನನ್ನ ತಂದೆಯ ಆಸ್ತಿಗೆ ಹೇಗೆ ತೋಗಬೇಕೋ ನನಗೆ ಗೊತ್ತಿದೆ ಅಂತಾ ಅನ್ನುತ್ತಾ ಮುಂದೆ ಹೋಗುತ್ತಿರುವಾಗ ನನ್ನ ಚಿಕ್ಕಮ್ಮ ರೇಖಾ ಸೊಸೆ ಸಂಗೀತಾ ಇವರು ಬಡಿಗೆಯಿಂದ ಹೊಡೆದು ರಕ್ತಗಾಯ ಗುಪ್ತಗಾಯ ಪಡಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಕಮಲಾಪೂರ ಠಾಣೆ : ಪವನ ತಂದೆ ಪ್ರಕಾಶ ಬಮ್ಮಳಗಿ ಸಾಃ ಮರ್ಜಾಪೂರ ತಾಃಜಿಃ ಬೀದರ ಹಾಃವಃ ಕೆ.ಇ.ಬಿ ರೋಡ ಮೋಹನ ಮಾರ್ಕೇಟ ಬೀದರ ರವರು ನಾನು ಮತ್ತು ನನ್ನ ತಂದೆ ಪ್ರಕಾಶ, ನನ್ನ ತಮ್ಮಂದಿರಾದ ಪ್ರದೀಪ, ಪ್ರವೀಣ ಮತ್ತು ನಮ್ಮ ಮಾವನಾದ ಸಂದೀಪ ಪಾಟೀಲ ಎಲ್ಲರೂ ಕೂಡಿಕೊಂಡು ಇಂಡಿಕಾ ಕಾರ ನಂ. ಎಂಹೆಚ್:03, ಎಸ್:4762 ನೇದ್ದರಲ್ಲಿ ತಮ್ಮನಾದ ಪ್ರದೀಪ ಇತನ ಬಿಇ ಕೌನ್ಸಲಿಂಗ ಗುಲಬರ್ಗಾದಲ್ಲಿ ಇದ್ದ ಪ್ರಯುಕ್ತ ಕೌನ್ಸಲಿಂಗ್ ಮುಗಿಸಿಕೊಂಡು ಮರಳಿ ಬೀದರಕ್ಕೆ ಹೊರಟಿದ್ದು ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ನಂ. 218 ನೇದ್ದರ ರೋಡಿನ ಕಿಣ್ಣಿ ಸಡಕ ಗ್ರಾಮದ ವಿಶ್ವನಾಥ ಒಣಕೇರಿ ಇವರ ಹೊಲ ಹತ್ತಿರ ಹೋಗುತ್ತಿರುವಾಗ ಎದುರುಗಡೆಯಿಂದ ಟ್ರ್ಯಾಕ್ಟರ ನಂ. ಕೆಎ: 32, ಟಿಎ:1185-86 ನೇದ್ದರ ಚಾಲಕನಾದ ವೀರಭದ್ರೇಶ ತಂದೆ ಕಲ್ಯಾಣರಾವ ಸಾಃ ಮರಗುತ್ತಿ ಇತನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ರೋಡಿನ ತುಂಬಾ ಅಡ್ಡಾತಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ನಮ್ಮ ಕಾರಿನ ಮುಂದಿನ ಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ, ನನಗೆ ರಕ್ತಗಾಯವಾಗಿದ್ದು ಮತ್ತು ನನ್ನ ತಮ್ಮಂದಿರಾದ ಪ್ರದೀಪ, ಪ್ರವೀಣ ಮತ್ತು ನನ್ನ ತಂದೆಗೆ ಭಾರಿ ರಕ್ತಗಾಯಗಳಾಗಿದ್ದು ಉಪಚಾರ ಕುರಿತು ಆಸ್ಪತ್ರಗೆ ಸೇರಿಯಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ;

ಮಳಖೇಡ ಠಾಣೆ: ಶ್ರೀ ಗುರುದೇವಿ ತಂದೆ ಸಂತೋಷಕುಮಾರ ರವರು ನಾನು ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವಾಗ ಅನುಸುಯಾ ಗಂಡ ದೇವಪ್ಪಾ ಬೆಣ್ಣುರ ಇವಳು ನನ್ನಗೆ ಅವಾಚ್ಚವಾಗಿ ಬೈಯುತ್ತಾ ಸಾರ್ವಜನಿಕರ ಮಧ್ಯದಲ್ಲಿ ಅವಮಾನ ಮಾಡಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೈಪುಗಳ ಕಳ್ಳ ಸಾಗಾಣಿಕೆ 4 ಜನರ ಬಂದನ

ಆಳಂದ ಠಾಣೆ : ನಾನು ಪಿ..ಎಸ.ಐ ಆಳಂದ ದಿನಾಂಕ 15/07/2011 ರಂದು ರಾತ್ರಿ ಗಸ್ತು ಚಕಿಂಗ ಮತ್ತು ರೋಡ ಪೆಟ್ರೋಲಿಂಗ ಕರ್ತವ್ಯದಲ್ಲಿರುವಾಗ ಮಧ್ಯರಾತ್ರಿ ಸುಮಾರಿಗೆ ಆಳಂದ ಆರ್.ಟಿ.ಓ ಚಕ್ ಪೊಸ್ಟ ಹತ್ತಿರ ಆಳಂದ ಗುಲಬರ್ಗಾ ರೋಡಿನಲ್ಲಿ ಹನಿ ನೀರಾವರಿಗೆ ಬಳಸುವ ಪೈಪಗಳು ಅ.ಕಿ.5000/-ರೂ ನೆದ್ದವುಗಳನ್ನು ಟಂ.ಟಂ.ನಂ.ಕೆಎ-39 3166 ನೆದ್ದರಲ್ಲಿ ಸಂಜಯ ತಂದೆ ದಶರಥ ಕಸಬೆ ಸಂಗಡ 3 ಜನರು ಸಾ: ಎಲ್ಲರೂ ಆಳಂದ ರವರು ತುಂಬಿಕೊಂಡು ಬರುತ್ತಿರುವಾಗ ಸಂಶಯದ ಮೇಲೆ ಹಿಡಿದು ವಿಚಾರಿಸಲಾಗಿ ಸದರ ಪೈಪಗಳ ಬಗ್ಗೆ ಸಮರ್ಪಕ ಉತ್ತರ ಕೊಡದೆ ಇರುವುದರಿಂದ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.


 

16 July 2011

GULBARGA DISTRICT REPORTED CRIMES

ನಕಲಿ ಗೊಬ್ಬರ ಮಾರಾಟ ಇಬ್ಬರ ಬಂದನ : .
ಫರಹತಾಬಾದ ಠಾಣೆ :
ಶ್ರೀ ಸಮದ ಪಟೇಲ ಸಹಾಯಕ ನಿದೇರ್ಶಕರು ಕೃಷಿ ಇಲಾಖೆ ಗುಲಬರ್ಗಾ ರವರು ಫರತಬಾದದಲ್ಲಿ ದಿನಾಂಕ: 16-7-2011 ರಂದು ಮುಂಜಾನೆ ಯಾವುದೇ ಅಧೀಕೃತ ಪರವಾನಿಗೆ ಇಲ್ಲದೆ "ವಿಜನ್ ನಂ:01" ಎಂಬ ಹೆಸರಿನ ಸಾಯುವವ ಗೊಬ್ಬರವನ್ನು ಸುನೀಲ ಭಾಗಶೇಟ್ಟಿ ತಂದೆ ಮಲ್ಲಿಕಾರ್ಜುನ ಭಾಗಶೇಟ್ಟಿ ಸಾ: ಹೊನ್ನಕಿರಣಗಿ, ಸಂಗಡ ಒಬ್ಬ ರವರು ಮಾರಾಟ ಮಾಡುತ್ತಿದ್ದಾಗ ನಾನು ನನ್ನ ತಂಡದೊಂದಿಗೆ ದಾಳಿ ಮಾಡಿ ಅವರ ತಾಬೆಯಿಂದ 40 ಕೆ. ಜಿ ತೂಕದ 46 ಚೀಲಗಳನ್ನು ಅಂದಾಜ ಕಿಮ್ಮತ್ತು 28750=00 ರೂ. ( 625 X 46 = 28750 ) ಮತ್ತು ಒಂದು ಡಿಲೇವರಿ ಚಾಲನ್ ನಂ: 034 ಮತ್ಗು 035 ಮತ್ತು ಒಂದು ಬಿಲ್ಲ ಬುಕ್ ನಂ: 3411 ರಿಂದ 3420 ನೇದ್ದನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಸದರಿ ಗೊಬ್ಬರವನ್ನು ಮಂಜುನಾಥ ತಂದೆ ರುದ್ರಪ್ಪಾ ಮ್ಯಾನೇಜಿಂಗ್ ಡ್ಯಾರೇಕ್ಟರ್ ವಿದ್ಯಾ ನಗರ ದಾವಣಗೇರಾ ಇವರಿಂದ ತಂದು ನಕಲಿ ಗೊಬ್ಬರವನ್ನು ಯಾವುದೇ ಲೈಸನ್ಸ್ ಇಲ್ಲದೆ ರೈತರಿಗೆ ಮಾರಾಟ ಮಾಡಿ ಮೊಸ ಮಾಡಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ರೋಜಾ ಠಾಣೆ :
ಶ್ರೀ ಶೇಖಬುರಾನುದ್ದಿನ ತಂದೆ ಶೇಖ ಅಹ್ಮದ ಕೊಹಿರಿ ಸಾ:ಅಮೀನಾ ಆಸ್ಪತ್ರೆಯ ಹತ್ತಿರ ಖಾಜಾ ಕಾಲೋನಿ ಗುಲಬರ್ಗಾ ರವರು ನಾವು ದಿನಾಂಕ;15,16/07/2011 ರ ಮಧ್ಯರಾತ್ರಿ ವೇಳೇಯಲ್ಲಿ ಮನೆಯ ಬಾಗಿಲ ಕೀಲಿಯನ್ನು ಮುರಿದು ಲಾಕರದಲ್ಲಿ ಇಟ್ಟ 2 ಗ್ರಾಮದ ಇಯರ ರಿಂಗ ಅ.ಕಿ 4000/- ರೂ. , ನಗದು ಹಣ 3000/-ರೂ. ಒಂದು ಲೇಡೀಜ ಕೈಗಡಿಯಾರ ಟೈಟಾನ್ ಕಂಪನಿಯದ್ದು ಅ.ಕಿ.3000/-ರೂಪಾಯಿ ಹೀಗೆ ಒಟ್ಟು 10,000/-ರೂಪಾಯಿ ಬೆಲೆ ಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಶ್ವನಾಥ ತಂದೆ ಅಣವೀರಪ್ಪ ಟೆಂಗಳಿ ಸಾ; ಖಾದ್ರಿ ಚೌಕ ಗುಲಬರ್ಗಾ ರವರು ದಿನಾಂಕ: 15-07-2011 ರಂದು 6=45 ಪಿ.ಎಮ್.ಕ್ಕೆ ಖಾದ್ರಿ ಚೌಕ ಕಡೆಯಿಂದ ಆಳಂದ ಚೆಕ್ಕ ಪೊಸ್ಟ ಕಡೆ ರೋಡಿನ ಬಾಂಬೆ ಗ್ಯಾರೇಜ ಎದುರುಗಡೆ ರೋಡಿನ ಮೇಲೆ ಟ್ಯಾಕ್ಟರ ನಂ:ಕೆಎ 32-8339 ನೆದ್ದರ ಚಾಲಕ ಶಾಹಾಬಜಾರ ನಾಕಾ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ನಂ:ಕೆಎ 32 ಡಬ್ಲೂ 5795 ನೆದ್ದಕ್ಕೆ ಓವರ ಟೆಕ ಮಾಡಿ ಒಮ್ಮಲೆ ಎಡಕ್ಕೆ ಕಟ್ಟ ಹೊಡೆದು ಡಿಕ್ಕಿ ಪಡಿಸಿ ಹಿಂದೆ ಕುಳಿತ ನಾಗೇಶ ಇಬ್ಬರಿಗು ತನ್ನ ಟ್ಯಾಕ್ಟರ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIME

ಮುಂಜಾಗ್ರತೆ ಕ್ರಮ :

ಚಿತ್ತಾಪುರ ಪೊಲೀಸ್ ಠಾಣೆ :
ದಿನಾಂಕ 15/07/11 ರಂದು ರಾತ್ರಿ ಶ್ರೀ ಚಾಂದಪಾಶಾ ಎ.ಎಸ್.ಐ ಚಿತ್ತಾಫುರ ಪೊಲಿಸ್ ಠಾಣೆ ರವರು ವರದಿ ಸಲ್ಲಿಸಿದ್ದರ ಮೇರೆಗೆ 1 ನೇ ಪಾರ್ಟಿ ಜನರಾದ ಬುಡ್ಡ ಬಸಪ್ಪ ತಂದೆ ಮಾರ್ತಾಂಡಪ್ಪ ಬೂತಪುರ ಮಹಾದೇವ ತಂದೆ ಬುಡ್ಡ ಬಸಪ್ಪ ಬೂತಪುರ, ನಾಗಮ್ಮ ಗಂಡ ಹಣಮಂತ ಹಿರಿನಿಂಗಣ್ಣನವರ, ರಾಜಶೇಖರ ತಂದೆ ಬುಡ್ಡ ಬಸಪ್ಪಪ ಬೂತಪೂರ, ಶರಣಪ್ಪ ತಂದೆ ಬುಡ್ಡ ಬಸಪ್ಪ ಬೂತಪೂರ, ಈಶಪ್ಪ ತಂದೆ ಬುಡ್ಡ ಬಸಪ್ಪ ಬೂತಪುರ, ಸಿದ್ರಾಮಪ್ಪ ತಂದೆ ಬುಡ್ಡಬಸಪ್ಪ ಬೂತಪೂರ, ಭಾಗಮ್ಮ ಗಂಢ ರಾಜಶೇಖರ ಬೂತಪುರ ಮಹೇಶಮ್ಮ ಗಂಡ ಶರಣಪ್ಪ ಬೂತಪೂರ ದೇವಿಂದ್ರಮ್ಮ ಗಂಡ ಈಶಪ್ಪ ಬೂತಪೂರ ಹಾಗು 2ನೇ ಪಾರ್ಟಿ ಜನರಾದ ದೇವಿಂದ್ರಪ್ಪ ತಂದೆ ಮಾರ್ತಾಂಡಪ್ಪ ಬೂತಪುರ, ಬಸಪ್ಪ ತಂದೆ ಮಾರ್ತಾಂಡಪ್ಪ ಬೂತಪುರ ಸಾ|| ಎಲ್ಲರೂ ದಂಡಗುಂಡ ಗ್ರಾಮ ತಾ|| ಚಿತ್ತಾಪುರ ರವರ ಮುಂಜಾಗ್ರತೆ ಕ್ರಮ ಕುರಿತು ಸಿ.ಅರ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಾ ಮಾಡಿಕೊಳ್ಳಲಾಗಿದೆ .

ಖೋಟಾ ನೋಟು ಪ್ರಕರಣ :
ಸ್ಟೇಷನ ಬಜಾರ ಠಾಣೆ
; ಶ್ರೀ ಕೆ.ವೇಣುಗೋಪಾಲ ತಂದೆ ಪಾಂಡುರಂಗ ಶೆಣೈ ಸಿನಿಯರ್ ಮ್ಯಾನೇಜರ ಸಿಂಡಿಕೇಟ್ ಬ್ಯಾಂಕ ಕರೆನ್ಸಿ ಚೆಕ್ಕ ಎಸ್.ವಿ.ಪಿ. ಚೌಕ್. ಗುಲಬರ್ಗಾ ರವರು ನಮ್ಮ ಸಿಂಡಿಕೇಟ ಬ್ಯಾಂಕ ಕರೆನ್ಸಿ ಚೆಸ್ಟ ಎಸ್.ವಿ.ಪಿ. ಚೌಕ ಗುಲಬರ್ಗಾ ಪರಿವೀಕ್ಷಣೆಯನ್ನು ದಿನಾಂಕ 24-12-2010 ರಂದು ಆರ್.ಬಿ.ಐ ಬೆಂಗಳೂರಿನ ಪರಿವಿಕ್ಷಕರು ಕೈಕೊಂಡಿದದು, ಪರೀವಿಕ್ಷಣೆ ಕೈಕೊಂಡ ಕಾಲಕ್ಕೆ ಐದನೂರು ರುಪಾಯಿ ಮುಖಬೆಲೆಯುಳ್ಳ ಮೂರು ಖೋಟಾ ನೋಟುಗಳು ಸಿಕ್ಕಿದ್ದು ಈ ಬಗ್ಗೆ ನಮ್ಮೆ ಮೇಲಾಧಿಕಾರಿಗಳಲ್ಲಿ ಚರ್ಚಿಸುವ ಸುಲವಾಗಿ ಅರ್ಜಿ ಕೊಡಲು ವಿಳಂಬವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸ ಪ್ರಕರಣ :

ಶಹಾಬಾದ ನಗರ ಠಾಣೆ : ಶ್ರೀಮತಿ ನೀಲಮ್ಮಾ ಗಂಡ ಅಯ್ಯಪ್ಪಾ ಹಂದರಕಿ ಸಾ:ಭಂಕೂರ ರವರು ದಿ:10/01/1999 ರಿಂದ 05/09/2007 ರವರೆಗೆ ನನ್ನ ಹೊಲ ಸರ್ವೆ ನಂ.133/1, 2 ಎಕರೆ 18 ಗುಂಟೆ ನನ್ನ ಗಂಡನಿಗೆ 85,000/- ರೂ ಗೆ ಮಾರಾಟ ಮಾಡಿ ಸ್ಟಾಂಪಗಳು ಬರೆದು ಕೊಟ್ಟು ಮತ್ತು ಬಿಳಿ ಪೇಪರನಲ್ಲಿ ಮಾರಾಟ ಪತ್ರ ಅಂತಾ ಬರೆದುಕೊಟ್ಟು ನೊಂದಣೆ ಮಾಡದೆ ಮೋಸ ಮಾಡಿರುತ್ತಾನೆ. ನಾವು ಕೇಳಲಿಕ್ಕೆ ಹೋದರೆ ಬೆದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 July 2011

GULBARGA DIST REPORTED CRIMES

ಹಲ್ಲೆ ಪ್ರಕರಣ :

ಆಳಂದ ಪೊಲೀಸ ಠಾಣೆ : ಕಾಶಿನಾಥ ತಂದೆ ನಾಗಪ್ಪ ಅಣದೂರಗಿ ಸಾ: ಜಮಗಾ (ಜೆ)
ರವರು ನನಗೆ ಹಳೇ ದ್ವೇಶದ ಹಿನ್ನೆಲೆಯಲ್ಲಿ ಶರಣಬಸಪ್ಪಾ ತಂದೆ ವಿಠಲ್ ಕಾಳಮಂದರಿ ಸಂಗಡ 3 ಜನರು ಕೂಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ರಕ್ತ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಹಲ್ಲೆ ಪ್ರಕರಣ :

ಆಳಂದ ಪೊಲೀಸ ಠಾಣೆ : ಶರಣಬಸಪ್ಪ ತಂದೆ ವಿಠಲ ಕಾಳಮದರಿ ಸಾ: ಜಮಗಾ (ಜೆ) ರವರು ನನಗೆ ಕಾಶಿನಾಥ ತಂದೆ ನಾಗಪ್ಪ ಅಣದೂರಗಿ ಸಂಗಡ 3 ಜನರು ಕ್ಷುಲ್ಲಕ ಕಾರಣಕ್ಕಾಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಹಲ್ಲೆ ಪ್ರಕರಣ:

ಆಳಂದ ಠಾಣೆ : ಶ್ರೀ ಪದ್ಮನಾಜ ತಂದೆ ಹಿರಾಚಂದ ದುರ್ಗೆ ಸಾ:ಜೈನ ಗಲ್ಲಿ ಆಳಂದ ರವರು ನನಗೆ ಮಗನದ ಹಿರಾಚಂದ ಇತನು ಹೊಲ ಕೆರೆಯಲ್ಲಿ ಹೊಗಿದು ಹಣ ಬಂದಿದೆ ಹಣ ಕೊಡು ಅಂತ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಮತ್ತು ಕೈಯಿಂದ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಅಪಘಾತ ಪ್ರರಕಣ :
ಆಳಂದ ಪೊಲೀಸ ಠಾಣೆ
: ಪ್ರಭಾಕರ ಸೂಗುರ
A.E. ಜೆಸ್ಕಾಂ ಶಾಖಾಧಿಕಾರಿಗಳು ಆಳಂದ ರವರು ಕೆಎ 32. 5557 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಾಯಕ ನಗರದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಕಂಬ ಮುರಿದು ಜೆಸ್ಕಾಂಗೆ ಅಂದಾಜು 9000/- ರೂಪಾಯಿ ಹಾನಿ ಮಾಡಿದ್ದು ವಾಹನದ ಚಾಲಕ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಮತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಆಕಸ್ಮಿಕ ಸಾವು :

ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸಂತೋಷ ತಂದೆ ರುಕ್ಕಯ್ಯಾ ಕಲಾಲ ಸಾಃ ಸಿಂದಗಿ ತಾಃ ಜಿಃ ಗುಲಬರ್ಗಾ ರವರು ನನ್ನ ತಂಗಿಯಾದ ಸುಶಿಲಾಬಾಯಿ ದಿನಾಂಕ 13/7/2011 ರಂದು 10 ಎಎಮ್ ಕ್ಕೆ ಹೊಲಕ್ಕೆ ಕಾಯಿಪಲ್ಲೆ ತರಲು ಹೋಗಿದ್ದು ಸಾಯಾಂಕಾಲ ಆದರು ಮನೆಗೆ ಬರದೆ ಇರುವದರಿಂದ ನಮ್ಮ ತಂದೆ ತಾಯಿ ಹಾಗೂ ತಮ್ಮ ಇವರೆಲ್ಲರೂ ಹುಡುಕಾಡಿದರು ಸಿಕ್ಕಿರುವದಿಲ್ಲ ದಿನಾಂಕ 14/7/2011 ರಂದು ಮುಂಜಾನೆ ನಮ್ಮ ತಮ್ಮನಾದ ರವಿ ಇತನು ನಮ್ಮ ಹೊಲಕ್ಕೆ ಹೋಗಿದ್ದು ಹೊಲದಲ್ಲಿಯ ಭಾವಿಯ ಹತ್ತಿರ ಹೋಗಿ ನೋಡಲಾಗಿ ಭಾವಿಯಲ್ಲಿ ಸುಶಿಲಾಬಾಯಿ ಇವಳ ಶವ ತೆಲುತ್ತಿರುವದನ್ನು ನೋಡಿ ನನಗೆ ಹಾಗೂ ನಮ್ಮ ತಂದೆ ತಾಯಿಗೆ ಫೋನ ಮಾಡಿ ತಿಳಿಸಿದ್ದು ನಾವು ಹೋಗಿ ನೋಡಲಾಗಿ ಸದರಿ ಶವವು ನಮ್ಮ ತಂಗೆಯಾದ ಸುಶಿಲಾಬಾಯಿ ಇವಳದ್ದು ಭಾವಿಯಲ್ಲಿ ನೀರು ತರಲು ಹೋಗಿದ್ದು ಕಾಲು ಜಾರಿ ಆಕಸ್ಮಿಕವಾಗಿ ಭಾವಿಯಲ್ಲಿ ಬಿದ್ದು ನೀರು ಕುಡಿದು ಉಸಿರು ಗಟ್ಟಿ ಮೃತ ಪಟ್ಟಿರಬಹುದು ಅವಳ ಸಾವಿನಲ್ಲಿ ನಮಗೆ ಯಾರೆ ಮೇಲೆ ಸಂಶಯವಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 July 2011

GULBARGA DIST REPORTED CRIME

ಕಳ್ಳತನ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ಶಿವಾನಂದಯ್ಯ ತಂದೆ ಗುರುಪಾದಯ್ಯ ಗದ್ಗಿಮಠ ಸಾ|| ದಂಗಾಪೂರ ಗ್ರಾಮ ರವರು ನನ್ನ ಕಿರಾಣಿ ಅಂಗಡಿ ಶೇಟ್ಟರ ಎಂದಿನಂತೆ ದಿ:13-07- 2011 ರಂದು ರಾತ್ರಿ ಬೀಗ ಹಾಕಿ ಬೆಳಿಗ್ಗೆ ಬಂದು ನೋಡಲು ಅಂಗಡಿಯ ಶೇಟ್ಟರ ಕೀಲಿ ಮುರಿದು ನಗದು ಹಣ 20,000-00 ರೂಪಾಯಿಗಳು ಹಾಗು ಇನ್ನಿತರ ಸಾಮಾನುಗಳು ಸೇರಿ ಒಟ್ಟು 23,950-00 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಕಳ್ಳತನ ಪ್ರಕರಣ:

ರಾಘವೇಂದ್ರ ನಗರ ಠಾಣೆ : ಶ್ರೀ ಮುಸದ್ದಿಕ ಪಟೇಲ್ ತಂದೆ ಇಬ್ರಾಹಿಂ ಪಟೇಲ್ ರವರು ನಾನು ದಿನಾಂಕ 01-07-2011 ರಿಂದ ದಿನಾಂಕ 04-07-2011 ರ ಅವಧಿಯಲ್ಲಿ ಮನೆಯ ಅಲಮಾರಲ್ಲಿಟ್ಟಿದ್ದ ಬಂಗಾರದ ಆಭರಣಗಳು ಹಾಗು ನಗದು ಹಣ 15,000/-ರೂಪಾಯಿ ಒಟ್ಟು 1,71,800/-ರೂಪಾಯಿಗಳದ್ದು ಕಳ್ಳತನವಾಗಿರುತ್ತದೆ. ಸದರಿ ಆಭರಣಗಳು ಹಾಗು ನಗದು ಹಣ ಮನೆಯಲ್ಲಿ ಕೆಲಸ ಮಾಡುವಾಕೆ ರಾಬಿಯಾ ತಂದೆ ಖಾಸಿಂಸಾಬ ಮೇಲೆ ಸಂಶಯವಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ವಿಶ್ವ ವಿದ್ಯಾಲಯ ಠಾಣೆ
: ಶ್ರೀ ಅಜ್ಮೀರ ಪಟೇಲ ತಂದೆ ಅಬ್ದುಲ ಖಾದೀರ ಪಟೇಲ ಸಾ|| ಗುಲಷನ ಅರಾಫತ ಕಾಲೋನಿ ಗುಲಬರ್ಗಾ ಇತನು ದಿನಾಂಕ: 13-07-2011 ರಂದು ಮದ್ಯಾಹ್ನ ಮನೆಯ ಮುಂದೆ ನಿಂತು ಬಾಜು ಮನೆಯವರಾದ ಅಲ್ಲಾ ಪಟೇಲ ತಂದೆ ಖಾದೀರ ಪಟೇಲ ಮತ್ತು ಆತನ ಮಗನಾದ ಶಬ್ಬೀರ ಇವರಿಗೆ ನಿಮ್ಮ ಮನೆಯ ಬಚ್ಚಲು ನೀರು ನಮ್ಮ ಮನೆಯ ಬಾಗಲಿಗೆ ಬಂದು ಬಹಳ ತೊಂದರೆಯಾಗುತ್ತಿದೆ ತಗ್ಗು ತೊಡಿಕೊಳ್ಳಿ ಅಂದಿದ್ದಕ್ಕೆ ಅವರಿಬ್ಬರೂ ಈ ಭೋಸಡಿ ಮಗನದು ಬಹಳ ಸೊಕ್ಕು ಬಂದಿದೆ ಅಂತಾ ಅವಾಚ್ಯವಾಗಿ ಬೈದು ಶಬ್ಬಿರ ಕಟ್ಟೆಗೆಯಿಂದ ನನಗೆ ಎಡಗಾಲಕ್ಕೆ ಹೊಡೆದು ಗುಪ್ತ ಗೊಳಿಸಿದನು ಮತ್ತು ಅಲ್ಲಾ ಪಟೇಲ ಕೈಯಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡಿತರ ಚೀಟಿಯವರಿಗೆ ವಿತರಣೆ ಮಾಡಬೇಕಾದ ಸೀಮೆ ಎಣ್ಣೆ, ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ಮೇಲೆ ಪೊಲೀಸರ ದಾಳಿ :

ಚೌಕ ಠಾಣೆ : ಸರ್ಕಾರಿ ತರ್ಪೆಯಾಗಿ ಶ್ರೀ ವೀರೇಶ ಪಿಐ ಚೌಕ ಠಾಣೆ ರವರು ನಿನ್ನೆ ಮಧ್ಯಾಹ್ನ ನೆಹರು ಗಂಜ ಭವಾನಿ ನಗರದಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿಯ ಮೇಲೆ ವಿತರಿಸಬೇಕಾದ ಸೀಮೆ ಎಣ್ಣೆಯನ್ನು ಸಂತೋಷ ಖೋಬಾ ಸಾಃ ಗುಲಬರ್ಗಾ, ವೀರಪಾಕ್ಷಯ್ಯ ಮಠಪತಿ ಸಾಃ ಗುಲಬರ್ಗಾ ಶ್ರೀನಿವಾಸ ತಂದೆ ಶರಣಪ್ಪ ಪೂಜಾರಿ ಸಾಃ ಚೆನ್ನವೀರ ನಗರ ಗುಲಬರ್ಗಾ,, ಸಂತೊಷ ಮೋಹನರಾವ ಕುಲಕರ್ಣಿ ಸಾಃ ಭವಾನಿ ನಗರ ಗುಲಬರ್ಗಾ ರಾಜು ತಂದೆ ಮಲ್ಲಿಕಾರ್ಜುನ ಪೂಜಾರಿ ಸಾಃ ಭವಾನಿ ನಗರ ಗುಲಬರ್ಗಾ, ಅನಿಲ ತಂದೆ ಅಶೋಕ ಪೂಜಾರಿ ಸಾಃ ಭವಾನಿ ನಗರ ರವರು ಕಾಳೆ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾಗ ಅವರ ಮೇಲೆ ದಾಳಿ ಮಾಡಿ ಅವರಿಂದ 8.5 ಬ್ಯಾರಲ ಸೀಮೆ ಎಣ್ಣೆ ಅಃಕಿಃ 24450/- , ನಗದು ಹಣ 24640/-, ಹಾಗು ಸೀಮೆ ಎಣ್ಣೇ ಮಾರಾಟ ಮಾಡುವ ಮಾಪನಗಳು ಜಪ್ತಿ ಮಾಡಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರೂಗಿಸಿಲಾಗಿದೆ .

ಪಡಿತರ ಚೀಟಿಯವರಿಗೆ ವಿತರಣೆ ಮಾಡಬೇಕಾದ ಸೀಮೆ ಎಣ್ಣೆ, ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ಮೇಲೆ ಪೊಲೀಸರ ದಾಳಿ :

ಗ್ರಾಮೀಣ ಪೊಲೀಸ ಠಾಣೆ : ಮಾನ್ಯ ಎಸ್.ಪಿ. ಗುಲಬರ್ಗಾ, ಅಪರ ಎಸ್.ಪಿ. ಗುಲಬರ್ಗಾ ಮತ್ತು ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ, ಮಾನ್ಯ ಸಿಪಿಐ ಗ್ರಾಮೀಣ ವ್ರತ್ತ ರವರ ಮತ್ತು ಶ್ರೀ ರವಿ ಡಿ.ಸಿ. ಐ.ಪಿ.ಎಸ್. (ಪ್ರೊ) ರವರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರನ್ನು ಮತ್ತು ಸಿಬ್ಬಂದಿಯವರಾದ ರವರನ್ನು ಜೊತೆಯಲ್ಲಿ ಕರೆದುಕೊಂಡು ಹುಮನಾಬಾದ ರಿಂಗ ರೋಡ ಕ್ರಾಸಿನ ರಾಜು ರೆಡ್ಡಿ ಕಾಂಪ್ಲೆಕ್ಸ ಎದುರುಗಡೆ ಒಬ್ಬನು ಸೀಮೆ ಎಣ್ಣೆಯ ಎರಡು ಬಾರಲ ಇಟ್ಟುಕೊಂಡು, ಪೈಪು ಮುಖಾಂತರವಾಗಿ ಬ್ಯಾರೆಲದಿಂದ ಸೀಮೆ ಎಣ್ಣೆ ಹೊರ ತೆಗೆದು ಒಂದು ಲೀಟರ ಮಾಪ ಮತ್ತು ನಳಿಕೆ ಇಟ್ಟುಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು, ದಾಳಿ ಮಾಡಲು ಸೀಮೆ ಎಣ್ಣೆ ಮಾರಾಟದಲ್ಲಿ ತೊಡಗಿದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ರಾಜು ತಂದೆ ಶಾಮರಾವ ರೋಣದ ವ:46 ವರ್ಷ ಉ:ವ್ಯಾಪರ ಸಾ: ಕೆ.ಐ.ಜಿ.ಡಿ. ಆಫೀಸ ಹತ್ತಿರ ಬಂಬು ಬಜಾರ ಗುಲಬರ್ಗಾ ಅಂತಾ ತಿಳಿಸಿದೆನು. ಅವನಿಗೆ ಲೈಸನ್ಸ ಕೇಳಲಾಗಿ ಅವನು ತನ್ನ ಹತ್ತಿರ ಯಾವುದೇ ಲೈಸನ್ಸ ಇರುವುದಿಲ್ಲಾ ಎಂದು ತಿಳಿಸಿದನು. ಶೆಟರ ಅಂಗಡಿಯ ಮುಂದೆ ಇಟ್ಟ ಒಂದು ಕೆಂಪು ಬಣ್ಣದ 200 ಲೀಟರ ಒಂದು ಕಬ್ಬಿಣದ ಬ್ಯಾರಲ ಅಂದಾಜ 30 ಸೀಮೆ ಎಣ್ಣೆ ಇರುತ್ತದೆ. ಅ:ಕಿ: 660 ರೂ. ಇನ್ನೊಂದು ನೀಲಿ ಬಣ್ಣದ 200 ಲೀಟರ ಒಂದು ಕಬ್ಬಿಣದ ಬ್ಯಾರಲ ಇದ್ದು ಅಂದಾಜ 150 ಸೀಮೆ ಎಣ್ಣೆ ಇರುತ್ತದೆ. ಅ:ಕಿ: 3300 ರೂ. ಅಗುತ್ತಿದ್ದು, ಒಂದು ಉದ್ದನೆಯ ಪ್ಲಾಸ್ಟಿಕ ಒಂದು ಮಾಪನ (ಸೀಮೆ ಎಣ್ಣೆ ಅಳೆಯವುದು) ಮತ್ತು ಸೀಮೆ ಎಣ್ಣೆ ಮಾರಾಟದಿಂದ ಬಂದ ನಗದು ಹಣ 605 ರೂ. ಆರೋಪಿತನ ಕಡೆಯಿಂದ ಜಪ್ತಿ ಮಾಡಿಕೊಂಡಿದ್ದರ ಮೇರೆಗೆ ಆರೋಪಿತನ ವಿರುದ್ದ ಕಾನೂನು ಕ್ರಮ ಜರೂಗಿಸಲಾಗಿದೆ.

ಅಪಘಾತ ಪ್ರಕರಣ ಒಂದು ಸಾವು ಇತರರಿಗೆ ಗಾಯ :

ಕಮಲಾಪೂರ ಪೊಲೀಸ ಠಾಣೆ :ಶ್ರೀ ರವಿ ತಂದೆ ಬಸಪ್ಪಾ ತಳಕೇರಿ ಸಾಃ ಹೂವಿನ ಹಳ್ಳಿ ತಾಃ ಅಫಜಲಪೂರ ರವರು ನಾವು ಚಿದಾನಂದ ಕೂಡಿಕೊಂಡು ದಿನಾಂಕ: 13/07/2011 ರಂದು ಸಾಯಂಕಾಲ ನಂದೂರ ಇಂಡಿಯನ್ ಆಯಿಲ್ ಡೀಪೂದಿಂದ ಡಿಸೇಲ್ ಟ್ಯಾಂಕರ ನಂ.ಕೆಎ:39-450 ನೇದ್ದರಲ್ಲಿ ಡಿಸೇಲ್ ಲೋಡ ಮಾಡಿಕೊಂಡು ಗುಲಬರ್ಗಾದಿಂದ ಬಿಟ್ಟು ಹುಮನಾಬಾದ ಮಾರ್ಗವಾಗಿ ಬಸವ ಕಲ್ಯಾಣಕ್ಕೆ ರಾಷ್ಟ್ರೀಯ ಹೆದ್ದಾರಿ ನಂ. 218 ನೇದ್ದರ ರೋಡ ಮುಖಾಂತರ ಹೊರಟಿದ್ದು. ಮರಗುತ್ತಿ ಕ್ರಾಸ ದಾಟಿ ಚಾಂದ ಪಾಶಾ ಇತನ ಚಹಾ ಹೋಟೆಲ ಹತ್ತಿರ ರೋಡಿನ ಮೇಲೆ ಹೋಗುತ್ತಿರುವಾಗ ಸಾಯಂಕಾಲ 6-00 ಗಂಟೆಯ ಸುಮಾರಿಗೆ ಎದುರುಗಡೆಯಿಂದ ಲಾರಿ ನಂ. ಕೆಎ:32-9798 ನೇದ್ದರ ಚಾಲಕನಾದ ಅಬ್ದುಲ ಮುಜೀಬ @ ಮಜೀದ ತಂದೆ ಖಾಜಿ ಅಬ್ದುಲ್ ರಹೀಮ್ ಇತನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಟ್ಯಾಂಕರದ ಮುಂದಿನ ಭಾಗಕ್ಕೆ ಡಿಕ್ಕಿ ಹೊಡೆದು ರೋಡಿನ ಎಡಗಡೆ ಇರುವ ಹೊಲದ ಕಡೆಗೆ ಹೋಗಿ ರೋಡಿನ ಬದಿಯಲ್ಲಿರುವ ಮರಕ್ಕೆ ತಗುಲಿ ಒಂದಕ್ಕೊಂದು ಅಂಟಿಕೊಂಡು ನಿಂತಿರುತ್ತವೆ. ಅಪಘಾತದಲ್ಲಿ ನನಗೆ, ಚಿದಾನಂದ ಮತ್ತು ಲಾರಿ ಚಾಲಕ ಅಬ್ದುಲ ಮುಜೀಬ ಎಲ್ಲರಿಗೂ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಇರುತ್ತದೆ. ಲಾರಿಯಲ್ಲಿ ಕುಳಿತ ಲಾರಿ ಮಾಲಿಕನಾದ ದಸ್ತಗಿರಿ ತಂದೆ ಮಹಿಬೂಬಸಾಬ ಸಾಃ ಎಂ.ಎಸ್.ಕೆ.ಮಿಲ್ ಗುಲಬರ್ಗಾ ಇವರು ಲಾರಿ ಮತ್ತು ಟ್ಯಾಂಕರ ನಡುವೆ ಸಿಕ್ಕಿ ಬಿದ್ದು ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 July 2011

GULBARGA DIST. MURDER CASE ACCUSED PERSONS ARRESTED


ಕಳೆದ ಮೂರು ತಿಂಗಳ ಹಿಂದೆ ಬರ್ಬರ ಹತ್ಯೆ ಮಾಡಿ ನಾಪತ್ತೆಯಾದ ಆರೋಪಿಗಳ ಬಂದನ

ಶ್ರೀ ಗುರಯ್ಯ ತಂದೆ ಪಂಚಯ್ಯ ಹಿರೇಮಠ ರವರು ಸಾ|| ಅಫಜಲಪೂರ ರವರು ನನ್ನ ಮಗನಾದ ವೀರಭದ್ರಯ್ಯ ಇತನಿಗೆ ಕೆಲವು ರೌಡಿ ಜನರು ಗುಂಪು ಕಟ್ಟಿಕೊಂಡು ಹರಿತವಾದ ಅಯುಧದಿಂದ ಹೊಡೆದು ಕೊಲೆ ಮಾಡಿ ರಮೇಶ ಪದಕಿ ಹೊಲದ ಬಾಂದಾರಿಯ ರೋಡ ಎಡಭಾಗದ ಮುಳ್ಳಿನಲ್ಲಿ ಬಿಸಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಮಾನ್ಯ ಎಸ.ಪಿ ಸಾಹೇಬ ಗುಲಬರ್ಗಾ ರವರ ಮತ್ತು ಮಾನ್ಯ ಹೆಚ್ಚುವರಿ ಎಸ.ಪಿ ಸಾಹೇಬರ ಮಾರ್ಗದರ್ಶನ ಮೇರೆಗೆ ಮತ್ತು ಎಸ.ಬಿ ಸಾಂಬಾ ಆಳಂದ ಡಿ.ಎಸ.ಪಿ ರವರ ನೇತ್ರತ್ವದಲ್ಲಿ ಅಪಜಲಪೂರ ವೃತ್ತ ನಿರೀಕ್ಷಕರಾದ ಕೆ. ರಾಜೇಂದ್ರ ರವರು ತನಿಖೆ ವಹಿಸಿಕೊಂಡು ಕೊಲೆ ಮಾಡಿದ ಆರೋಪಿಗಳಾದ ಶಿವ @ ಶಿವಾನಂದ ತಂದೆ ಕಲ್ಲಪ್ಪಾ ಪಾಟೀಲ್ ಸಾ|| ಗುಟ್ಯಾಳ ತಾ|| ಇಂಡಿ ಹಾ||ವ|| ಅಫಜಲಪೂರ,ಸಿದ್ದರಾಮ @ ಸಿದ್ದು ತಂದೆ ನಾಗಣ್ಣ ನಿಂಬಾಳ ಸಾ|| ಕಾರ ಬೋಸಗಾ ಹಾ|| ವ|| ಅಫಜಲಪೂರ, ಗಣೇಶ ತಂದೆ ಬಸವರಾಜ ರಾಂಪೂರೆ ಸಾ|| ಅಫಜಲಪೂರ, ನಾಗೇಶ ತಂದೆ ಹಣಮಂತ ಬಾಗೆವಾಡಿ ಸಾ|| ಅಫಜಲಪೂರ, ಪ್ರೇಮಕುಮಾರ ತಂದೆ ಸುಭಾಶ ಕಡಣಿ ಸಾ|| ಅಫಜಲಪೂರ ಸಂಜಯಕುಮಾರ ತಂದೆ ಅವಣ್ಣ ಬಂಗಿ ಸಾ|| ಅಫಜಲಪೂರ, ಭೀಮು @ ಭೀಮಾಶಂಕರ ತಂದೆ ಮಹಾದೇವ ಈರಶೇಟ್ಟಿ ಸಾ|| ಕಾಸಲಿಂಗ ಜೇವೂರ ಹಾ|| ವ|| ಅಫಜಲಪೂರ ಇಲ್ಲರೆಲ್ಲರೂ ಇರುವಿಕೆಯ ಮಾಹಿತಿ ಪಡೆದುಕೊಂಡು ಕೊಲೆ ಮಾಡಿದವರನ್ನು ವಶಕ್ಕೆ ತೆಗೆದಕೊಂಡಿದ್ದು ಇರುತ್ತದೆ. ಪತ್ತೆ ಕಾರ್ಯದಲ್ಲಿ ತೊಡಿಗದ್ದ ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ. ರಾಜೇಂದ್ರ , ಪಿ.ಎಸ.ಐ ಶ್ರೀ ಮಂಜುನಾಥ ಎಸ. ಹಾಗು ಸಿಬ್ಬಂದಿಯವರಾದ ರಾಮಚಂದ್ರ ಹೆಚ.ಸಿ, ಮಾರುತಿ ಹೆಚಸಿ, ಸಾಯಿಬಣ್ಣ , ನರಸರೆಡ್ಡಿ ಮತ್ತು ಅರವಿಂದ ಎಲ್ಲರಿಗೂ ಮಾನ್ಯ ಎಸ.ಪಿ ಸಾಹೇಬ ಗುಲಬರ್ಗಾ ರವರು ಪತ್ತೆ ಕಾರ್ಯ ಮಾಡಿದಕ್ಕೆ ಪ್ರಶಂಸಿರುತ್ತಾರೆ . ತನಿಖೆ ಮುಂದುವರೆದಿರುತ್ತದೆ .

GULBARGA DIST REPORTED CRIMES

ಕಾಣೆಯಾದ ಮನುಷ್ಯನ ಪ್ರಕರಣ:
ಆಳಂದ ಠಾಣೆ
:
ಶ್ರೀ ಬಸವಣಪ್ಪಾ ತಂದೆ ಶಿವರಾಯ ಪೊಲೀಸ್ ಪಾಟೀಲ್ ಮು|| ಶಕಾಪೂರ ರವರು ನನ್ನ ಮಗನಾದ ನಾಗಶೇಟ್ಟಿ ತಂದೆ ಬಸವಣಪ್ಪಾ ಪಾಟಿಳ್ ಇತನು ದಿನಾಂಕ: 11-07-2011 ರಂದು ಶುಕ್ರವಾರ ಶಕಾಪೂರ ಗ್ರಾಮದಿಂದ ಗುಲಬರ್ಗಾ ಆಸ್ಪತ್ರೆಗೆ ಹೋಗುತ್ತೆನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ . ಕಾಣೆಯಾದ ಮನುಷ್ಯನ ಚಹರೆ ಪಟ್ಟಿ ಸಾದರಣ ಮೈಕಟ್ಟು ಕಪ್ಪು ಬಣ್ಣ , ಬದಾಮ ಕಲರ್ ಶರ್ಟ ಲೈನಿಂಗ ಪ್ಯಾಂಟ ಕನ್ನಡ ಭಾಷೆ ಮಾತನಾಡುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕಾಣೆಯಾದ ಮನುಷ್ಯನ ಸುಳಿವು ದೊರೆತಲ್ಲಿ ಕಂಟ್ರೊಲ್ ರೂಮ ಗುಲಬರ್ಗಾ 08472-263608, 263604 ಸಿಪಿಐ ಆಳಂದ 94808083539 ಪಿ.ಎಸ.ಐ ಆಳಂದ 94808083563 ಅಥವಾ 08477 202222 ಅಳಂದ ಠಾಣೆ ರವರಿಗೆ ಸಂಪರ್ಕಿಸಲು ಕೋರಲಾಗಿದೆ.)

ಹಲ್ಲೆ ಪ್ರಕರಣ :
ಮಾಡಬೂಳ ಠಾಣೆ :
ಶ್ರೀ ಶಂಕ್ರಯ್ಯ ಸ್ವಾಮಿ ತಂದೆ ವೀರಯ್ಯ ಸ್ವಾಮಿ ಸಾ:ಶಹಾಬಾಜಾರ ಗುಲ್ಬರ್ಗಾ ರವರು ನಾನು

ನಿನ್ನೆ ದಿನಾಂಕ:-12/07/2011 ರಂದು ರಾತ್ರಿ ಕೆಲಸ ಮುಗಿಸಿ ಆಫೀಸ್ ಕೋಣೆಯಲ್ಲಿ ನಾನು ಮತ್ತ ನನ್ನ ಜೊತೆ ಹೆಲ್ಪರ ಕೆಲಸ ಮಾಡುತ್ತಿದ್ದ ಬಾಬು ತಂದೆ ಭೀಮಶಾ ಕಟ್ಟಿಮನಿ ಇಬ್ಬರು ಕೂಡಿ ಮಲಗುತ್ತಿದ್ದೇವು. ಆಗ ಪಪ್ಪು ಪಟೇಲ್ ತಂದೆ ಮಹಿಬೂಬ ಪಟೇಲ್ ಸಾ:ಮುಗಟಾ ಈತನು ಮಧ್ಯರಾತ್ರಿ 2 ಗಂಟೆಗೆ ಬಂದು ಮಲಗಿದ ಕೋಣೆಯ ಬಾಗಿಲಿಗೆ ಬಡೆಯುತ್ತಿದ್ದಾಗ ನಾವು ನಿದ್ರೆಯಲ್ಲಿ ಬಾಗಿಲು ತೆರೆದಾಗ ಅವಾಚ್ಯವಾಗಿ ಬೈದು ಕ್ರಶರ ಮಶೀನ ಯಾಕೆ ಚಾಲು ಮಾಡಿದ್ದಿ. ನಿನ್ನ ಮಾಲಿಕನು ನನಗೆ ಕೊಡ ತೊಗೊಳ್ಳುವ ವ್ಯವಹಾರ ಇನ್ನು ಮುಗದಿಲ್ಲ ಅಂತ ಸಿಕ್ಕಪಟ್ಟಿ ಒದ್ದು, ಹೊಡೆದು ತನ್ನಲ್ಲಿದ್ದ ಚಾಕು ತೆಗೆದು ಕಕ್ಕಾಬಿಕ್ಕಿ ತಿವಿದನು. ಆಗ ಶರೀರ ರಕ್ತಗಾಯವಾಗಿರುತ್ತದೆ. ಖಾಲಾಸ ಮಾಡುತ್ತೇನೆ ಅಂತ ಜೀವದ ಬೆದರಿಕೆ ಹಾಕಿ, ನನ್ನನ್ನು ಹಿಡಿದು ಆಫೀಸ ಕೋಣೆಯ ಒಳಗೆ ಕಟ್ಟಿ ಹಾಕಿ ಲಾಕ ಮಾಡಿ ಹೋಗಿದ್ದು. ಎನಾದರೂ ಕ್ರಶರ ಮಶೀನ ಚಾಲು ಮಾಡಿದರೆ ನಿನಗೆ ಮತ್ತು ನಿನ್ನ ಮಾಲಿಕನಿಗೆ ಖಾಲಾಸ ಮಾಡುತ್ತೇನೆ ಅಂತ ಜೀವ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ:

ಸ್ಟೇಶನ ಬಜಾರ ಠಾಣೆ: ಶ್ರೀ ಆರ್.ರವಿಂದ್ರನಾಥ ಪಿಎಸ್ಐ[ಕಾ.ಸು] ಸ್ಟೇಷನ ಬಜಾರ ಪೊಲೀಸ ಠಾಣೆ ಗುಲಬರ್ಗಾ ರವರು ಠಾಣೆ ಸರಹದ್ದಿನಲ್ಲಿ ಪೆಟ್ರೋಲಿಂಗ್ ಕರ್ತವ್ಯ ಕುರಿತು ಮಹಲ-ಇ-ಶಾಹಿ ಅಥಿತಿ ಗೃಹ ಲೋಕೊಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಥತಿ ಗೃಹದ ಒಳ ಅವರಣದಲ್ಲಿ ಕೆಲವು ಜನರು ಅಪರಿಚಿತ ಗಂಡು ಮನುಷ್ಯನ ಶವ ವಯಸ್ಸು ಅಂದಾಜು 55-60 ವರ್ಷ ಇದ್ದಿದ್ದು ಕಂಡು ಬರುತಿದ್ದು ಆತನ ಮೈ ಮೇಲೆ ಧರಿಸಿದ ಒಂದು ಬಿಳಿ ಬಣ್ಣದ ಫುಲ್ ಶರ್ಟ & ಒಂದು ಬಿಳಿ ಬಣ್ಣದ ಫುಲ್ ಬನಿಯಾನ ಹಾಗೂ ಕಂಪನಿಯ ಹಸಿರು ಬಣ್ಣದ ಒಂದು ಅಂಡರ್ ವೇರ್ ಇದ್ದು ಅಲ್ಲದೆ ಒಂದು ಬಿಳಿ ಬಣ್ಣದ ಪ್ಯಾಂಟ ಇದ್ದು ಟೊಂಕದಲ್ಲಿ ಕರಿ ಉಡದಾರ ಕೊರಳಲ್ಲಿ ಕೆಂಪು ದಾರದಲ್ಲಿ ಒಂದು ರುದ್ರಾಕ್ಷಿ ಮತ್ತು ಕೊರಳಲ್ಲಿ ನೀಲಿ ಮತ್ತು ಬಿಳಿ ಮಣಿ ಸರ ಇದ್ದು ಇದರಲ್ಲಿ ಗೋಲಾಕಾರವಾದ ಚಿಕ್ಕದಾದ ಅಂಬೇಡ್ಕರ ಭಾವಚಿತ್ರ ಉಳ್ಳದ್ದು ಇದ್ದು ಮೃತನ ಶವವನ್ನು ನೋಡಲಾಗಿ ಇತನ ತಲೆಯ ಎಡ ಭಾಗದಕ್ಕೆ ಭಾರಿ ರಕ್ತಗಾಯವಾಗಿ ಮಾಂಸ ಕಾಣುತಿದ್ದು ಅಲ್ಲದೆ ಸ್ಥಳದಲ್ಲಿ ಮಣ್ಣಿನ ಮೆಲೆ ರಕ್ತ ಬಿದ್ದಿದ್ದು ಇತನ ಬಲಗೈ ಹೆಬ್ಬರಳ ಸಂದಿಯಲ್ಲಿ ರಕ್ತಗಾಯವಾಗಿದ್ದು ಅಲ್ಲದೆ ಇತನ ಎಡಗೈಯಲ್ಲಿ ಕೈ ಗಡಿಯಾರ ಇದ್ದು ಮತ್ತು ಇತನು ಧರಿಸಿದ ಶರ್ಟನ ಪಾಕಿನಲ್ಲಿ ಜೇಸ್ಕಾಂ ಕಂಪನಿಯ ವಿದ್ಯೂತ್ ಬಿಲ್ ಆರ.ಆರ. ನಂ 55972 ನೇದ್ದು ಸಿಕ್ಕಿದ್ದು ಅಲ್ಲದೆ ಶವದ ಪಕ್ಕದಲ್ಲಿ ಎರಡು ಸಿಮೆಂಟಿನ ಕಲ್ಲುಗಳು ಬಿದ್ದು ಇರುತ್ತದೆ ಕಾರಣ ಅಪರಿಚಿತ ವ್ಯೆಕ್ತಿಗೆ ಯಾರೋ ದುಶರ್ಕ್ಮಿಗಳು ಇತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು ಕಂಡು ಬರುತ್ತಿದ್ದು ಈ ಘಟನೆಯು ದಿನಾಂಕ 12.07.2011 ರಂದು 7.30 ರಿಂದ 13.07.2011 ರ ಬೆಳಗಿನ ಅವಧಿಯಲ್ಲಿ ಮಧ್ಯದಲ್ಲಿ ಈ ಕೊಲೆ ಜರುಗಿದ್ದು ಕಂಡು ಬರುತ್ತದೆ ಕೊಲೆಗೀಡಾದ ವ್ಯೆಕ್ತಿ ಅಪರಿಚಿತ ವ್ಯೆಕ್ತಿ ಇದ್ದು , ಈ ಕೊಲೆ ಮಾಡಿದವರು ಯಾರು ಮತ್ತು ಎತಕ್ಕಾಗಿ ಕೊಲೆ ಮಾಡಿದ್ದಾರೆ ಅಂತ ಸದ್ಯಕ್ಕೆ ತಿಳಿದು ಬಂದಿರುವದಿಲ್ಲಾ ಅದ್ದರಿಂದ ಮುಂದಿನ ಕ್ರಮ ಜರುಗಿಸುವ ಕುರಿತು ಕೊಟ್ಟ ಸರ್ಕಾರಿ ತರ್ಪೆಯಾಗಿ ಪಿರ್ಯಾದಿ ಸಲ್ಲಿಸಿದದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 


 


 

GULBARGA DISTRICT REPORTED CRIMES

ಅಪಘಾತ ಪ್ರಕರಣ:

ಫರಹತಾಬಾದ ಠಾಣೆ : ಪರಶುರಾಮ ತಂದೆ ಸಾಯಬಣ್ಣ ಮಂಜೂಳಕರ ವಯ: 20 ವರ್ಷ ಸಾ:ಮನೆ ನಂ: 11 2383/4 ಲಕ್ಷ್ಮಿ ನಗರ ಹೀರಾಪೂರ ಗುಲಬರ್ಗಾ ರವರು ನಾನು ದಿನಾಂಕ: 12-7-2011 ರಂದು ಮದ್ಯಾಹ್ನ ಜೆವರ್ಗಿ ಕಡೆಯಿಂದ ನನ್ನ ಟಂ ಟಂ ನಂ: ಕೆಎ 32 ಎ 6243 ನೇದನ್ನು ಚಲಾಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 218 ರ ಮೂಲಕ ಫರಹತಾಬಾದದ ಕೆ.ಇ.ಬಿ ಹತ್ತಿರ ಬರುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಒಂದು ಹಾಲಿನ ಟ್ಯಾಂಕರ ನಂ: ಕೆಎ 14 ಡಿ 4515 ನೇದ್ದರ ಚಾಲಕನು ತನ್ನ ಟ್ಯಾಂಕರನ್ನು ಅತಿವೇಗದಿಂದ, ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಟಂ ಟಂ ಕ್ಕೆ ಡಿಕ್ಕಿ ಪಡಿಸಿ, ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಸಂಚಾರಿ ಠಾಣೆ : ಚಂದ್ರಕಾಂತ ತಂದೆ ಕಾಶಿನಾಥ ವ: 78 ವರ್ಷ ಸಾ: ಮಕ್ತಮಪೂರ ಗುಲಬರ್ಗಾ ರವರು ದಿನಾಂಕ:09/07/2011 ರಂದು ಸಾಯಂಕಾಲ್ ನಾನು ಸರಾಫ್ ಬಜಾರದ ಕಡೆಗೆ ನಡೆದುಕೊಂಡು ಬರುವಾಗ ಗಣೇಶ ಮಂದಿರ ಕಡೆಯಿಂದ ಯಾರೋ ಒಬ್ಬ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಹಿಂದಿನಿಂದ ಬಂದು ಬಲಗಾಲ ತೊಡೆಗೆ ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ ಒಂದು ಸಾವು :

ಗ್ರಾಮೀಣ ಠಾಣೆ : ಶ್ರೀ ಶೇಖಬುರಾನ ತಂದೆ ಅಬ್ದುಲ ಖಾದರ ಜಿಲಾನಿ ಉಃ ಲಾರಿ ಮೇಕ್ಯಾನಿಕ ಕೆಲಸ ಸಾಃ ಖಿಲ್ಲಾ ಹೆಡ ಪೋಸ್ಟರ್ ಹತ್ತಿರ ಗುಲಬರ್ಗಾ ರವರು ನಾನು ದಿನಾಂಕ 12/7/2011 ರಂದು ಮಧ್ಯಾಹ್ನ ಅಂಗಡಿಯಲ್ಲಿದ್ದಾಗ ನನಗೆ ಪರಿಚಯದ ಮಹ್ಮದ ಅತೀಕ ಊರ ರಹೇಮಾನ ತಂದೆ ಖಾಸೀಮ ಅಲಿ ಪರವಾನಾ ಸಾ|| ಬುಲಂದ ಪರವೇಜ ಕಾಲನಿ ಗುಲಬರ್ಗಾ ಮತ್ತು ಮಹ್ಮದ ಮುಕ್ಕಿರೋದ್ದಿನ ತಂದೆ ಮೈನೋದ್ದಿನ ಮಾರುಪವಾಲೆ ಸಾಃ ಜವಾಹರ ಹಿಂದ ಶಾಲೆ ಗುಲಬರ್ಗಾ ಇವರಿಬ್ಬರು ತಮ್ಮ Hero Honda Passion M/c No. KA-32-Q-0553 ಮೇಲೆ ಬಂದು ನನಗೆ ಅವರಿಬ್ಬರು ಮುಸ್ಲಿಂ ಚೌಕ ಹತ್ತಿರ ನಮ್ಮ ಕಟ್ಟಿಗೆ ತುಂಬಿದ ಲಾರಿ ಬ್ಯಾಟರಿ ರಿಪೇರಿ ಮಾಡಲು ಅಂತ ತಿಳಿಸಿದ್ದ ಮೇರೆಗೆ ಮೋಟಾರ ಸೈಕಲ್ ಮೇಲೆ ಕುಳಿತು ಕೊಂಡು ಆಳಂದ ಚಕ್ಕ ಪೋಸ್ಟ್ ದಿಂದ ಕಾಕಡೆ ಚೌಕ ರಿಂಗ ರೋಡಿನ ಸರ್ಕಲ್ ಬಂದಾಗ ಹುಮನಾಬಾದ ರಿಂಗ ರೋಡ ಕಡೆಯಿಂದ ಒಬ್ಬ ಟ್ಯ್ರಾಕ್ಟರ್ ಚಾಲಕ ಟ್ರ್ಯಾಕ್ಟರ ಚಾಲಕ ಅತೀವೇಗ ಮತ್ತು ನಿಲರ್ಕ್ಷತನದಿಂದ ನಡೆಸುತ್ತ ಬಂದವನೆ ಕಾಕಡೆ ಚೌಕ ಸರ್ಕಲ್ ದಲ್ಲಿ ವೇಗದಲ್ಲಿ ಒಮ್ಮೆಲ್ಲೆ ರೈಟ್ ಟರ್ನ ಮಾಡಿದವನೆ ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದನು ಇದರಿಂದಾಗಿ ನಾವು ಮೋಟಾರ ಸೈಕಲ್ ಮೇಲೆ ಇದ್ದ 3 ಜನರು ರೋಡಿಗೆ ಬಿದ್ದೆವು ಟ್ರ್ಯಾಕ್ಟರ್ ಚಾಲಕ ಸ್ವಲ್ಪ ಮುಂದೆ ಹೋಗಿ ಟ್ಯ್ರಾಕ್ಟರ್ ನಿಲ್ಲಿಸಿ ಓಡಿ ಹೋದನು ಟ್ರ್ಯಾಕ್ಟರ ನಂಬರ ನೋಡಲಾಗಿ KA-32-TA-1226-1227 ಇರುತ್ತದೆ. ಇದ್ದರಿಂದಾಗಿ ಮೋಟಾರ ಸೈಕಲ ಮೇಲೆ ಇದ್ದ 3 ಜನರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ದಾಖಲ ಮಾಡಿದಾಗ ವೈದ್ಯರು ಮಹ್ಮದ ಅತೀಕ ಇತನು ಈಗಾಗಲೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಅಫಜಲಪೂರ ಠಾಣೆ : ಶ್ರೀ ಕೈಮೊದ್ದಿನ ತಂದೆ ಖಾಸಿಂಸಾಬ ಜೇಸ್ಕಾಂ ಅಪೀಸ್ ಅಫಜಲಪೂರ ಸಬ್ ದಿವಿಜನ್ ರವರು ದಿನಾಮಕ: 09-07-2011 ರ ಮಧ್ಯರಾತ್ರಿ ನಂದರ್ಗಾ ಮತ್ತು ಗೌರ (ಬಿ) ಗ್ರಾಮದ ಮಧ್ಯದಲ್ಲಿ ಕಂಬಕ್ಕೆ ಹಾಕಿದ ಅಲುಮಿನಿಯಂ ವೈರ ಅಕಿ 40,000-00 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ಥಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಲಾಗಿದೆ

12 July 2011

GULBARGA DISTRICT REPORTED CRIMES

ಕೊಲೆ ಪ್ರಯತ್ನ ಪ್ರಕರಣ:
ಫರಹತಾಬಾದ ಠಾಣೆ :
ಶ್ರೀಮತಿ ಸರುಬಾಯಿ ಗಂಡ ಬಂಡಪ್ಪಾ ಜಾನಕರ ಸಾ:ನಂದಿಕೂರ ಹಾ:ವ:ಉದನೂರ ರವರು ನಮ್ಮ ಜಮೀನ ನಂದಿಕೂರ ಗ್ರಾಮದಲ್ಲಿದ್ದು, ಸದರಿ ಜಮೀನನ್ನು ಸಾರ್ವಜನಿಕರಿಗೆ ಸಂಡಾಸಕ್ಕೆಂದು ಸರಕಾರವು ವಶಪಡಿಸಿಕೊಂಡಿದ್ದು, ಅದರ ಹಣವನ್ನು ತರಲು ನನ್ನ ಗಂಡನಾದ ಬಂಡಪ್ಪಾ ಇತನು ದಿನಾಂಕ: 9-7-2011 ರಂದು ಮುಂಜಾನೆ ಉದನೂರ ಗ್ರಾಮದಿಂದ ನಂದಿಕೂರ ಗ್ರಾಮಕ್ಕೆ ಹೋಗಿದ್ದು, ಅದೇ ದಿವಸ ಸಾಯಂಕಾಲ ಕೆಲಸ ಮುಗಿಸಿಕೊಂಡು ಬರುತ್ತಿರುವಾಗ ಕೇಂದ್ರ ಕಾರಾಗೃಹದ ಮುಂದೆ ಇರುವ ಸಾರ್ದಜಿ ದಾಭಾದ ಹತ್ತಿರ ಮಾರುತಿ ಹೊಸಮನಿ ಮತ್ತು ಸಂಗಡಿಗರು ಕೂಡಿಕೊಂಡು ನನ್ನ ಗಂಡನಿಗೆ ಹಣ ಕೊಡು ಅಂತಾ ಜಗಳ ತಗೆದು ಅವಾಚ್ಯ ಶಬ್ದಗಳಿಂದ ಬೈದು ರಾಡಿನಿಂದ, ಕಲ್ಲಿನಿಂದ ಹಣೆಗೆ, ಎದೆಗೆ, ಹೊಡೆದು ಭಾರಿ ರಕ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ಶಹಾಬಾದ ನಗರ ಠಾಣೆ
: ಶ್ರೀಮತಿ ಇಮ್ತಿಯಾಜಬೀ ಗಂಡ ಅಬ್ದುಲ ಅಲಿಂ ಸಾ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಂಬೊ ಫೈಲ ಶಹಾಬಾದ ರವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿ ಊಟದ ಕೋನೆಯ ಬಾಗೀಲ ಬೀಗ ಮುರಿದು ಮಕ್ಕಳಿಗೆ ಊಟ ಮಾಡಲು ಬಳಸುತ್ತಿದ್ದ 2 ಗ್ಯಾಸ್ ಸಿಲಿಂಡರಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಅಪಘಾತ ಪ್ರಕರಣ :
ನೆಲೋಗಿ ಠಾಣೆ :
ಶ್ರೀಮತಿ ಭಾಗಮ್ಮ ಗಂಡ ಮಲ್ಲಪ್ಪಾ ಬಡಿಗೇರ ಸಾ|| ಚಾಂದಕೋಟೆ ಹಾ|| ವ|| ಮಂದೆವಾಲ್ ರವರು ನನ್ನ ಗಂಡ ಮಲ್ಲಪ್ಪ ಇತನು ಮಕ್ಕಳಿಗೆ ತಿನ್ನಲು ಹಣ್ಣುಗಳು ತರಲು ಮಂದೆವಾಲ್ ಬಸ್ಸ ನಿಲ್ದಾಣದಕ್ಕೆ ಬಂದು ಹಣ್ಣುಗಳನ್ನು ತೆಗೆದುಕೊಂಡು ಸೈಕಲ್ ಮೇಲೆ ಬರುತ್ತಿರುವಾಗ ಜೇವರ್ಗಿ –ಸಿಂದಗಿ ಮುಖ್ಯ ರಸ್ತೆಯ ಬ್ರಿಡ್ಜ ಹತ್ತಿರ ಜೇವರ್ಗಿ ಕಡೆಯಿಂದ ಚಾಲುಕ್ಯ ಬಸ್ ನಂ: ಕೆಎ 19 ಸಿ- 4824 ನೇದ್ದರ ಚಾಲಕ ಹಣಮಂತ ಶಿವಣಗಿ ಇತನು ತನ್ನ ಬಸ್ಸ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ನನ್ನ ಗಂಡನಿಗೆ ಡಿಕ್ಕಿ ಪಡಿಸಿದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಯತ್ನ ಪ್ರಕರಣ:
ಮಹಿಳಾ ಠಾಣೆ :
ಶ್ರೀಮತಿ ಗೀತಾ ಗಂಡ ವಿಕಾಸ ಹೂಗಾರ ಸಾ|| ಶಿವಾಜಿ ನಗರ ಗುಲಬರ್ಗಾ ರವರು ನನ್ನ ಮದುವೆಯು ವಿಕಾಸ ತಂದೆ ವೀರಣ್ಣಾ ಹೂಗಾರ ಸಾ|| ಶಿವಾಜಿ ನಗರ ಎಂಬಾತನೊಂದಿಗೆ ದಿನಾಂಕ: 20-02-2011 ರಂದು ನೇರವರಿದ್ದು, ಮದುವೆ ಕಾಲಕ್ಕೆ 11 ಸಾವಿರ ರೂಪಾಯಿ ನಗದು ಹಣ 2 ತೊಲಿ ಬಂಗಾರ ಹಾಗು ಇನ್ನಿತರ ಸಾಮಾನುಗಳು ತೆಗೆದುಕೊಂಡು ಮದುವೆ ಮಾಡಿಕೊಂಡಿದ್ದು . ಮದುವೆ ಯಾದ ಒಂದು ವಾರ ನನ್ನ ಜೋತೆ ಸರಿಯಾಗಿದ್ದು ನಂತರ ಶೀಲ ಶಂಕಿಸಿ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಮನೆಯಲ್ಲಿದ ಸ್ಟೋ ಎತ್ತಿ ಮೈಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPPORTED CRIMES

ದರೋಡೆ ಪ್ರರಕಣ :
ಅಶೋಕ ನಗರ ಠಾಣೆ :
ಶ್ರೀ ನಂದಕಿಶೋರ ತಂದೆ ಸತ್ಯನಾರಾಯಣ ಜೋಶಿ ಸಾ|| ಆಜಾರಾ (ಎಕತಾಲ್ ಕಾಂಪ್ಲೇಕ್ಸ 'ಬಿ' ಬ್ಲಾಂಕ್ ಬಿಲ್ಡಿಂಗ ನಂ. 113 ರೂಮ್ ನಂ. 12 ತಾ: ಕರವೀರ ಜಿಲ್ಲಾ: ಕೊಲ್ಲಾಪುರ (ಮಾಹಾರಾಷ್ಟ್ರ ರಾಜ್ಯ) ರವರು ನಾನು ದಿನಾಂಕ 11/07/2011 ರಂದು ಕೆಲಸದ ನಿಮಿತ್ಯ ಗುಲಬರ್ಗಾಕ್ಕೆ ಬಂದ್ದಿದ್ದು ಕೆಲಸ ಮುಗಿಸಿಕೊಂಡು ಕೇಂದ್ರ ಬಸ್ಸ ನಿಲ್ದಾಣಕ್ಕೆ ಬಂದು ಕೊಲ್ಲಾಪುರಕ್ಕೆ ಹೋಗಲು ರೇಲ್ವೆ ಸಮಯ ಕೇಳುವ ಕುರಿತು ಬಸ್ಸ ನಿಲ್ದಾಣದ ಹೊರಗಡೆ ಬಂದು ಒಬ್ಬ ವ್ಯಕ್ತಿಗೆ ವಿಚಾರಿಸಿ ನಂತರ ಲ್ಯಾಪ್ ಟಾಪ್ ನಲ್ಲಿ ಮೇಸೆಜ್ ಮಾಡಿದ್ದು ಆ ವ್ಯಕ್ತಿ 28 ರಿಂದ 30 ವಯಸ್ಸ ಉಳ್ಳನಿದ್ದು ತಾನು ಸಹ ಸ್ಟೇಷನಕ್ಕೆ ಬರುವುದಾಗಿ ಹೇಳಿ ನನಗೆ ಬಸ್ಸ ನಿಲ್ದಾಣದ ಎಡರಸ್ತೆಗೆ ಕರೆತಂದು ಪೋನಿನಲ್ಲಿ ಮಾತನಾಡುತ್ತಾ ನಂತರ 3 ಜನರು ಮೋಟಾರ ಸೈಕಲ್ ಮೇಲೆ ಬಂದವರೇ ನನಗೆ ಹೊಡೆಬಡೆ ಮಾಡಿ ನನ್ನ ಹತ್ತಿರ ಇದ್ದ ಲ್ಯಾಪ್ ಟಾಪ್ ಅ.ಕಿ. 9000/- ರೂ, ಎರಡು ಮೋಬಾಯಿಲ್ ಅ.ಕಿ. 10,000/- ರೂ, ಒಂದು ಕ್ಯಾಮರಾ ಅ.ಕಿ. 500/- ರೂ, ರುದ್ರಾಕ್ಷಿ ಹರಳು ಅ.ಕಿ. 12,000/- ರೂ ಎ.ಟಿ.ಎಮ್.ಕಾರ್ , ಡ್ರೈವಿಂಗ ಲೈಸನ್ಸ, ಚುನಾವಣೆ ಗುರುತಿನ ಚೀಟಿ, ನಗದು ಹಣ 3200/- ರೂ ಹೀಗೆ ಒಟ್ಟು 34,700/- ರೂ ಸಾಮಾನುಗಳು ನನಗೆ ಹೊಡೆ ಬಡೆ ಮಾಡಿ ಮೋಟಾರ ಸೈಕಲ್ ಕೆ.ಎ-32 /1431, ಇನ್ನೊಂದು ಮೋಟಾರ ಸೈಕಲ್ ನಂ. ಕೆ.ಎ-32 /9008 ಇನ್ನೊಂದು ಗಾಡಿಯು ಹೊಸದಾಗಿ ಇದ್ದು ಅದಕ್ಕೆ ನಂಬರ ಪ್ಲೇಟ ಬರೆದಿರುವುದಿಲ್ಲಾ. ಮೋಟಾರ ಸೈಕಲ್ ಪ್ಲಸರದಾಗಿದ್ದು ಕಪ್ಪು ಬಣ್ಣದಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲೀಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಮಟಾಕ ಪ್ರಕರಣ :
ರೋಜಾ ಠಾಣೆ :
ಸರ್ಕಾರಿ ತರ್ಪೆಯಾಗಿ ನಾನು ಶ್ರೀ ರಾಜಣ್ಣ ಪಿ.ಐ ರೋಜ ಠಾಣೆ ನನಗೆ ದಿನಾಂಕ:11/07/2011 ರಂದು ಸಾಯಂಕಾಲ್ ಮಾಹಿತಿ ಬಂದಿದ್ದೇನೆಂದರೆ ರಾಮಜೀ ನಗರ ಖುರೇಶಿ ಮಜ್ಜೀದ ಹತ್ತಿರ ರಾಜಶೇಖರ ತಂದೆ ರಾಮಚಂದ್ರ ಮರತೂರ ಸಾ:ಹರಳಯ್ಯಾ ಸಮಾಜ ರಾಮಜೀ ನಗರ ಗುಲಬರ್ಗಾ ಇತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದಾನೆ ತಿಳಿಸಿದ ಮೇರೆಗೆ ನಾನು ಮತ್ತು ಠಾನೆಯ ಸಿಬ್ಬಂದಿಯವರು ಡಿ.ಎಸ.ಪಿ ಸಾಹೇಬರ ಮಾರ್ಗದರ್ಶನ ಮೇರೆಗೆ ಆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆತನಿಂದ ಮಟಕಾ ಚೀಟಿಗಳು, ನಗದು ಹಣ 1640/- ರೂಪಾಯಿ ನೋಕಿಯಾ ಮೊಬಾಯಿಲ್ ಜಪ್ತಿ ಮಾಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ರೋಜಾ ಠಾಣೆ : ಸೈಯ್ಯದ ಅಜೀಮ ತಂದೆ ಸೈಯ್ಯದ ಉಮರ ಸಾ:ಟಿಪ್ಪು ಸುಲ್ತಾನ ಚೌಕ ಹತ್ತಿರ ಆಜಾದಪೂರ ರೋಡ್ ಗುಲಬರ್ಗಾ ರವರು ನಾನು ದಿನಾಂಕ;10/07/2011 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಖಾಜಾ ಬಜಾರದ ಹಿಂದಿನ ಗೇಟಿನ ಹತ್ತಿರ ಅಟೋದಿಂದ ಇಳಿಸಿ 25/- ರೂಪಾಯಿ ಭಾಡಿಗೆ ಕೆಳಲು ಮುಜಿಬಸಾಭ ಇತನು ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಚಾಕುದಿಂದ ಹೊಡೆದು ರಕ್ತಗಾಯ ಪಡೆಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯದ ಬಾಟಲಿಗಳ ಜಪ್ತಿ ಪ್ರಕರಣ:
ಸೇಡಂ ಠಾಣೆ:
ಸೇಡಂ ಠಾಣೆಯ ಸರಹದ್ದಿನ ಧಾಬಾದಲ್ಲಿ ಕಾಶಿನಾಥ ತಂದೆ ರಾಮಚಂದ್ರ ಹರಿಹರ್ ಜೆ
,ಕೆ ರೋಡ ಕಾವೇರಿ ದಾಭಾ ಸೇಡಂ ಹಾಗು ಶೇಸಿ ತಂದೆ ಅಶೋಕ ಗುತ್ತೆದಾರ್ ಸಾ|| ಗುರುರಾಜ ವೈನ್ಸ್ ಶಾಪ ಸೇಡಂ, ರವರು ಯಾವುದೆ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸೇಡಂ ಠಾಣೆಯ ಪಿ,ಎಸ್,ಐ ರವರು ಹಾಗೂ ಸಿಬ್ಬಂದಿ ಜನರ ಕೂಡಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ,ಬೀಯರ್ ಬಾಟಲ್, ಎಂಸಿ. ವಿಸ್ಕಿ ಎಂಎಲನ, ಬಾಟಲಿಗಳು ಹಾಗು ನಗದು ಹಣ 350/- ನಗದು ಹಣ, ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಸೈಯದ ಶಾಹೀನ ಗಂಡ ಸೈಯದ ಶಹಾಬುಜರುಕ ಸಾಹೇಬ ಸಾ|| ನಂದೂರ (ಬಿ) ಗ್ರಾಮ ತಾ:ಜಿ:ಗುಲಬರ್ಗಾ ರವರು ದಿನಾಂಕ 11-07-2011 ರಂದು ಸೀಮೆ ಎಣ್ಣೆ ಹಂಚುವ ಕುರಿತು ತಮ್ಮ ಮನೆಯ ಹಿಂಭಾಗದ ಜಾಗೆಯಲ್ಲಿ ಮೈಬೂಬಸಾಬ ತಂದೆ ಮಶಾಕಸಾಬ ಹರಕಂಚಿ, ಖಾಜಾಬೀ ಗಂಡ ದಿ| ಮಶಾಕಸಾಬ ಆಸ್ಮಾ ಗಂಡ ಮೈಬೂಬಸಾಬ ಸಾ: ಎಲ್ಲರು ನಂದೂರ(ಬಿ) ಗ್ರಾಮ ತಾ:ಜಿ:ಗುಲಬರ್ಗಾ , ರವರು ನನ್ನ ಜಾಗೆಯಲ್ಲಿದ್ದ ಸಂಡಾಸ ರೂಮಿನ ಹತ್ತಿರ ಬಂದು ಮಧ್ಯಾಹ್ನ ಸುಮಾರಿಗೆ ಸಂಡಾಸ ಶೌಚಾಲಯದ ಬಾಗಿಲಿಗೆ ಕೀಲಿ ಹಾಕಿ ಮುಳ್ಳು ಹಚ್ಚುತ್ತಿದ್ದಾಗ ನಾನು ಅವರಿಗೆ ನಮ್ಮ ಶೌಚಾಲಯಕ್ಕೆ ಯಾಕೆ ಕೀಲಿ ಹಾಕಿದ್ದಿರಿ ಅಂತಾ ಕೇಳಿದ್ದಕ್ಕೆ ಅವಾಚ್ಯವಾಗಿ ಬೈದು ಬಡಿಗೆಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.