POLICE BHAVAN KALABURAGI

POLICE BHAVAN KALABURAGI

19 September 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ ಸುದಾಕರ ತಂದೆ ಬಲಭಿಮ ಚವ್ಹಾಣ  ¸Á|| ಹೊದಲೂರು||ಆಳಂದ ಜಿ||ಗುಲ್ಬರ್ಗಾ ರವರು ನನ್ನ ತಂದೆಯವರಾದ ಶ್ರೀ ಬಲಭಿಮ ತಂದೆ ಆನಂದರಾವ ಚವ್ಹಾಣ ರವರು ದಿನಾಂಕ:18-09-2012 ರಂದು ರಾತ್ರಿ 8-15 ಗಂಟೆಗೆ ಚಂದಾಪೂರದಲ್ಲಿರುವ ಶ್ರೀ ಹನುಮಾನ ಮಂದಿರಕ್ಕೆ ಚಿಂಚೋಳಿ-ತಾಂಡೂರು ಮುಖ್ಯ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಚೆಟ್ಟಿನಾಡ ಕಂಪನಿಯಿಂದ ಸಿಮೆಂಟನ್ನು ಲೋಡ ಮಾಡಿಕೊಂಡು ಬಂದ ಅಶೋಕ ಲೈಲ್ಯಾಂಡ ಲಾರಿ ನಂ ಎಮ್ ಎಚ್ 25,ಬಿ 9095 ನೇದ್ದರ ಚಾಲಕನಾದ ಮೈಮುದ ತಂದೆ ಮಕ್ಬೂಲುಸಾಬ ಬೆಲ್ದಾರ ಸಾ||ಚಂದಾಪೂರ ತಾ||ಚಿಂಚೋಳಿ ಇತನು ಸದರಿ ಲಾರಿಯನ್ನು ಅತೀವೇಗದಿಂದ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನ್ನ ತಂದೆಯ ತಲೆ ಮತ್ತು ಮೂಖದ ಮೇಲಿಂದ ಹಾಯಿಸಿಕೊಂಡು ಹೋಗಿದ್ದರಿಂದ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ:86/2012 ಕಲಂ 279,304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.