POLICE BHAVAN KALABURAGI

POLICE BHAVAN KALABURAGI

23 July 2013

GULBARGA DIST REPORTED CRIMES

ಗುಲಬರ್ಗಾ ಗ್ರಾಮೀಣ ಠಾಣೆ:
ಅಪಘಾತ ಪ್ರಕರಣ :
ದಿನಾಂಕ:-22/07/2013 ರಂದು ದಿಗಂಬರಾಯ ತಂದೆ ಸಿದ್ದರಾಮ ಬಿಲ್ಲಕಾರ ಸಾ:ನಿಲ್ಲೂರ ಹಾಗೂ ಸಾಯಿಬಣ್ಣಾ, ಹಾಗೂ ಶ್ರೀಧರ3 ಜನರು ಹೀರೋ ಹೊಂಡಾ ಸ್ಪ್ಲೇಡರ ಮೋ.ಸೈಕಲ ನಂ ಕೆಎ-36 ಎಸ್-212 ನೇದ್ದರ ಮೇಲೆ ನೀಲೂರದಿಂದ ಗುಲಬರ್ಗಾಕ್ಕೆ ಹೋಗುವಾಗ ಮೋಟಾರ ಸೈಕಲನ್ನು ಶ್ರೀಧರ ಚಲಾಯಿಸುತ್ತಿದ್ದು ಸಾವಳಗಿ ಸಿಮಾಂತರದ ಕಂಕರ ಮಶೀನ ಹತ್ತಿರ ಬರುವಾಗ ಎದುರಗಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ ನಂ ಕೆಎ-32 ಟಿ-ಎ-2461 ನೇದ್ದರ ಚಾಲಕನು ಅತೀವೇಗವಾಗಿ ಮತ್ತು ಅಡ್ಡಾ-ತಿಡ್ಡಿಯಾಗಿ ಚಲಾಯಿಸುತ್ತಾ ಬಂದು ಮೋ.ಸೈಕಲಕ್ಕೆ ಅಪಘತಪಡಿಸಿದ್ದರಿಂದ ಮೋಟಾರ ಸೈಕಲ ನಡೆಸುತ್ತಿದ್ದ ಶ್ರೀಧರನಿಗೆ ಟ್ರ್ಯಾಕ್ಟರನ ಟ್ರ್ಯಾಲಿ ಬಡಿದು ತಲೆಗೆ ಬಾರಿ ಪೆಟ್ಟಾಗಿ ಮೂಗಿನಿಂದ, ಬಾಯಿಯಿಂದ ರಕ್ತ ಸ್ರಾವವಾಗಿ ಸ್ದಳದಲ್ಲಿಯೇ ಮೃತಪಟ್ಟಿದ್ದು ದಿಗಂಬರಾಯ ಹಾಗು ಸಾಯಿಬಣ್ಣಾರಿಗೊ ಸಹ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಸದರಿ ಘಟನೆ ನಂತರ ಟ್ಯಾಕ್ಟರ ಚಾಲಕ ಟ್ಯಾಕ್ಟರ ಅಲ್ಲಿಯೇ ಬಿಟ್ಟು ಓಡಿ ಹೋದ ಬಗ್ಗೆ ಸಲ್ಲಿಸಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ
ಶಹಾಬಾದ ನಗರ ಠಾಣೆ:
ಅಪಘಾತ ಪ್ರಕರಣ :
ದಿನಾಂಕ:21/07/2013 ರಂದು ಪ್ರಕಾಶ ತಂದೆ ಲಕ್ಷ್ಮಣ ಚವ್ಹಾಣ ಸಾ:ಲಕ್ಷ್ಮೀಪುರ ವಾಡಿ ಈತನು ಗುಲಬರ್ಗಾಕ್ಕೆ ಹೋಗಿ ಬರುವ ಕುರಿತು ಬಜಾಜ್‌‌ ಡಿಸ್ಕವರ ಮೋ. ಸೈಕಲ ನಂ.ಕೆಎ-32 ಇಎ-8211 ನೇದ್ದರ ಮೇಲೆ ಹೋಗಿ ಮರಳಿ ಗುಲಬರ್ಗಾದಿಂದ ಲಕ್ಷ್ಮೀಪುರ ವಾಡಿಗೆ ಹೋಗುತ್ತಿರುವಾಗ ಮರತೂರಿನ ವಿಜ್ಞಾನೇಶ್ವರ ಭವನದ ಹತ್ತಿರ ಪ್ರಕಾಶನ ಮೋಟಾರ ಸೈಕಲಗೆ ಎದರುಗಡೆಯಿಂದ ಬರುತ್ತಿದ್ದ ಕ್ರುಶರ ಜೀಪ ನಂ.ಕೆಎ-32 ಎ-3036 ನೇದ್ದರ ಚಾಲಕ ಅತಿವೇಗವಾಗಿ ಶಹಾಬಾದ ಕಡೆಯಿಂದ ಬಂದು ಪ್ರಕಾಶನ ಮೋಟರ ಸೈಕಲಗೆ ಅಪಘಾತ ಪಡಿಸಿ ವಾಹನ ನಿಲ್ಲಿಸದೆ ವಾಹನದ ಸಮೇತ ಓಡಿ ಹೋಗಿ ಪ್ರಕಾಶನಿಗೆ ಅಲ್ಲಿದ್ದವರು 108 ಅಂಬುಲೇನ್ಸನಲ್ಲಿ ಗುಲಬರ್ಗಾ ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ದು ಪ್ರಕಾಶನ  ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಕಿವಿಯಿಂದ ಬರುತ್ತಿದ್ದು.  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟ ಬಗ್ಗೆ ಪ್ರಕಾಶನ ಸಹೋದರ ಕಾಶಿನಾಥ ಸಲ್ಲಿಸಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ತನಿಖೆ ಕೈಕೊಳ್ಳಲಾಗಿದೆ.