POLICE BHAVAN KALABURAGI

POLICE BHAVAN KALABURAGI

31 July 2014

Gulbarga District Reported Crimes

ಅಶೋಕ ನಗರ ಪೊಲೀಸರಿಂದ ಸರಗಳ್ಳರ ಮತ್ತು ವಾಹನಗಳ್ಳರ  ಬಂಧನ 2,29,000/- ರೂ ಮೌಲ್ಯದ  ವಾಹನ ಮತ್ತು ಬಂಗಾರ ಜಪ್ತಿ
ಅಶೋಕ ನಗರ ಪೊಲೀಸ ಠಾಣಾ ವ್ಯಾಫ್ತಿಯಲ್ಲಿ ಸರಗಳ್ಳತನಗಳು ಆಗುತ್ತಿದ್ದರಿಂದ ಮಾನ್ಯ ಅಮೀತಸಿಂಗ ಎಸ.ಪಿ ಗುಲಬರ್ಗಾ ಮತ್ತು ಮಹಾನಿಂಗ ನಂದಗಾಂವಿ ಡಿ.ಎಸ.ಪಿ (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಪಿಐ, ಕೆ.ಎಸ್.ಕಲ್ಲದೇವರು ಪಿ.ಎಸ್.ಐ (ಕಾ.ಸು), ಸತ್ಯನಾರಾಯಣ ಪಿ.ಎಸ್.ಐ (ಅ.ವಿ), ಸಿಬ್ಬಂದಿಜನರಾದ ರವಿಕುಮಾರ ಹೆಚ್.ಸಿ 433, ಶಿವಪ್ರಕಾಶ ಪಿಸಿ 615, ಸುರೇಶ ಪಿಸಿ 534, ಗಜಾನಂದ ಪಿಸಿ 821, ಜ್ಯೋತಿರ್ಲಿಂಗ ಪಿಸಿ 1159,  ಚಂದ್ರಕಾಂತ ಪಿಸಿ 176, ಬಸವರಾಜ ಪಿಸಿ 765, ಹಣಮಂತ ಪಿಸಿ 1166, ಅನೀಸ ಪಿಸಿ 12, ಮಹೇಶ ಪಿಸಿ 1151, ಸಂತೋಷ ಪಿಸಿ 961 ಸಂಜೀವಕುಮಾರ ಪಿಸಿ 245 ಚಾಲಕ  ಶಿವಯ್ಯ ಎಪಿಸಿ,   ರವರ ಒಳಗೊಂಡ ತಂಡವನ್ನು ರಚನೆ ಮಾಡಿದ್ದು ಈ ತಂಡವು ಮಾನ್ಯ ಎಸ್‌.ಪಿ ಗುಲಬರ್ಗಾ,  ಡಿ.ಎಸ್‌.ಪಿ  ಎ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ,  ಹೀರಾಪೂರ ಮತ್ತು ಉದನೂರ ರಸ್ತೆಯ ಮಾಣಿಕ ಪ್ರಭು ಕಾಲೋನಿಯಲ್ಲಿದ್ದ 1) ಬಸವರಾಜ ತಂದೆ ಶ್ಯಾಮರಾವ ಪಾಟೀಲ 2) ಅಂಬರೀಶ ತಂದೆ ಣಾಗಣ್ಣ ತೆಗನೂರ  ರವರಿಗೆ  ದಸ್ತಗಿರಿ ಮಾಡಿ ಅವರಿಂದ 5 ದ್ವಿಚಕ್ರ ವಾಹನಗಳು ಮತ್ತು 15 ಗ್ರಾಂ ಬಂಗಾರದ ಆಭರಣಗಳು ಹೀಗೆ ಒಟ್ಟು 2,29,000/- ರೂ ಬೆಲೆಬಾಳುವ ಬಂಗಾರ ಮತ್ತು ಮೋಟರ ಸೈಕಲಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಸರಗಳ್ಳರು/ವಾಹನಗಳ್ಳರು ಗುಲಬರ್ಗಾದಲ್ಲಿ ಕಳ್ಳತನ ಮಾಡಿದ ನಂತರ ದುದನಿಗೆ ಹೋಗಿ ಇಸ್ಪೇಟ ಜೂಜಾಟ ಆಡುವ ಪ್ರವೃತ್ತಿವುಳ್ಳವರು ಇದ್ದರು ಅಂತಾ ತನಿಖೆಯಿಂದ ತಿಳೀದುಬಂದಿರುತ್ತದೆ. 
ದ್ವೀಚಕ್ರ ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ರಮೇಶ ತಂದೆ ರಾಣಪ್ಪ ರೆಡ್ಡಿ ಸಾ: ಎಮ್.ಆರ್.ಎಮ್.ಸಿ  ಕಾಲೇಜ ಎದುರುಗಡೆ ಸುಂದರ ನಗರ ಸೇಡಂ ರೋಡ ಗುಲ್ಬರ್ಗಾ ರವರು ದಿನಾಂಕ: 29/04/2014 ರಂದು ರಾತ್ರಿ 9-00 ಗಂಟೆ ಸುಮಾರಿಗೆ ತನ್ನ ಹೀರೋಹೊಂಡಾ ಫ್ಯಾಶನ ಪ್ಲಸ್ ಮೋಟಾರ್ ಸೈಕಲ ನಂ ಕೆಎ-32 ಡಬ್ಲ್ಯೂ 0492 ನೇದ್ದು ಆಳಂದ ಚೆಕ್ ಪೊಸ್ಟದ  ಆಕಾಶ ದಾಬಾದ ಎದುರುಗಡೆ ನಿಲ್ಲಿಸಿ ಊಟ ಮಾಡಿಕೊಂಡು ಮರಳಿ 10-30 ಪಿಎಮ್ ಕ್ಕೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ ಇದ್ದಿರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಸದರಿ ಮೋಟಾರ ಸೈಕಲ ಚೆಸ್ಸಿ ನಂ – MBLHA10EL99K04550 ಇಂಜಿನ ನಂ – HA10EB99KO4844  ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸ್ವತ್ತು ಹಾಳು ಮಾಡಿ ಕಳವು ಮಾಡಿದಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮುಜಿಬುರ್ ರೆಹಮಾನ್ ತಂದೆ ಅಬ್ದುಲ್ ನಬಿ ಸಾಬ್ ಸಾಃ ಮನೆ ನಂ. 4-601/76ಎ, ಎಂ.ಬಿ ನಗರ ಗುಲಬರ್ಗಾ ಇವರಿಗೆ ದಿನಾಂಕಃ 29/07/2014 ರಂದು 6.00 ಪಿಎಂ ಕ್ಕೆ ಆರೋಪಿತರಾದ 1) ಮಹ್ಮದ ಫೆರೋಜ್ ಅಹ್ಮದ 2) ಅಫ್ರೋಜ್ ಅಹ್ಮದ 3) ಶ್ರೀನಿವಾಸ 4) ಶಹನಾಜ್ ಬೇಗಂ ಗಂಡ ಮಹ್ಮದ್ ಫಿರೋಜ್ ಅಹ್ಮದ್ ಮತ್ತು 5) ಮಹ್ಮದ್ ಪಿರೋಜ್ ಅಹ್ಮದ್ ಇವರ ತಾಯಿ ಇವರೆಲ್ಲರು ಕೂಡಿಕೊಂಡು ಕೈಯಲ್ಲಿ ತಲವಾರ್ ಮತ್ತು ಇತರೆ ಆಯುಧಗಳನ್ನು ಹಿಡಿದು ಫಿರ್ಯಾದಿದಾರರ ಮನೆಗೆ ಬಂದು, ಫಿರ್ಯಾದುದಾರರ ಮನೆಯ ಬಾಗಿಲು, ಕಿಡಕಿ ಮುರಿದು ಮನೆಯಲ್ಲಿದ್ದ 1) ಒಂದು ಅಲಮಾರ 2) ಒಂದು ಬೋರವೆಲ್ ಪಂಪಸೆಟ್ ಮೋಟಾರ್ 3) ನಗದು ಹಣ 25,000/- ರೂ 4) 03 ಗ್ರಾಂ ಬಂಗಾರದ ಉಂಗುರ ಮತ್ತು ಎಲೆಕ್ಟ್ರಿಕಲ್ ಮೀಟರ್, ವಾಟರ್ ಟ್ಯಾಂಕ್ , ಮನೆ ಬಳಕೆಯ ಇತರೆ ಸಾಮಾನುಗಳನ್ನು ಆರೋಪಿತರು ಒಡೆದು ತೆಗೆದುಕೊಂಡು ಹೋಗಿದ್ದು, ಅಲ್ಲದೆ ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ನಾ ಬಸವೇಶವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 July 2014

Gulbarga District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಗುಂಡಮ್ಮಾ ತಂದೆ ಬಸಯ್ಯಾ ಗುತ್ತೆದಾರ ಸಾ|| ಬಳೂರ್ಗಿ ಇವರು 2008 ನೇ ಸಾಲಿನಲ್ಲಿ ನಮ್ಮುರ ಅಪ್ಪಾಸಾಬ ತಂದೆ ಬಾಷಾ ಪಟೇಲ ಸಾ||ಬಳೂರ್ಗಿ ಹಾಗೂ ಇತನ ಹೆಂಡತಿಯಾದ ತಾರಾ ಗಂಡ ಅಪ್ಪಾಸಾಬ ಇವರ ಸಮಕ್ಷಮದಲ್ಲಿ  3 ಲಕ್ಷ ರುಪಾಯಿ ಸಾಲವನ್ನು ಕೊಟ್ಟಿದ್ದು ನನ್ನ ಹಣ ಕೊಡು ಅಂತಾ ದಿನಾಂಕ 24/07/2014 ರಂದು ಬೆಳಿಗ್ಗೆ 10.00 ಎಎಮ್ ಸುಮಾರಿಗೆ ರುಪಾಯಿ ಕೇಳಲು ಅಪ್ಪಾಸಾಬ ರವರ ಮನೆಯ ಕಡೆಗೆ ಹೊರಟಾಗ ಅವರ ಮನೆಯ ಮುಂದೆ ಅಪ್ಪಾಸಾಬ ನಿಂತಿದ್ದು ಅವನಿಗೆ ನಾನು ಹಣದ ಬಗ್ಗೆ ವಿಚಾರಿಸಲು ಸದರ ಅಪ್ಪಾಸಾಬ ಇತನು ನನಗೆ ಮಾತನಾಡದೆ ಮನೆಯ ಒಳಗೆ ಹೋಗುವಾಗ ನಾನು ಅದಕ್ಕೆ ನಿನು ಮನೆಯ ಒಳಗೆ ಹೋದರೆ ಹೇಗೆ ನನಗೂ ಬಾಹಳ ಅಡಚಣೆ ಇದೆ ನಾನು ಕೊಟ್ಟ ರೂಪಾಯಿ ಕೊಡು ಅಂತ ಹೇಳಿದಾಗ ಅದಕ್ಕೆ ಇತನು ಎನು ಮಾತ ನಾಡದೇ ಸುಮ್ಮನೆ ನಿಂತಾಗ ನಂತರ ವಿಚಾರಿಸಲು ನಾನು ಹೊರಟಿದ್ದಾಗ ಅಪ್ಪಾಸಾಬ ಮತ್ತು ಆತನ ಹೆಂಡತಿಆದ ತಾರಾ ನನಗೆ ರಂಡಿ ನಿನ್ನ ರೂಪಾಯಿ ಕೊಟ್ಟಿರುತ್ತೇನೆ ನಿಲ್ಲು ಅಂತ ಅಂದವಳೇ ನನ್ನ ಕುದಲು ಹಿಡಿದು ಜಗ್ಗಾಡಿ ತನ್ನ ಕಾಲಲ್ಲಿ ಇದ್ದ ಚಪ್ಪಲಿಯಿಂದ ಮತ್ತು ಕೈಯಿಂದ ನನಗೆ ಹೊಡೆ ಬಡೆ ಮಾಡಿದ್ದಳು ಜೋತೆ ಇದ್ದ ಅಪ್ಪಾಸಾಬ ಇತನು ರಂಡಿಗೆ ಬಿಡಬೇಡ ಸರಿಯಾಗಿ ಹೊಡೆ ಇನ್ನೋಮ್ಮೆ ರುಪಾಯಿ ಕೇಳಲು ಬಂದರೆ ಕೈ ಕಾಲು ಮುರಿದು ಹಾಕೊಣ ಇಲ್ಲದಿದ್ದರೆ ಜೀವ ಹೊಡೆಯುತ್ತೇವೆ ಅಂತಾ ಬೇದರಿಕೆ ಹಾಕಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 27-07-2014 ರಂದು ರಾತ್ರಿ 08-00 ಪಿ.ಎಮ್ ಕ್ಕೆ ಶ್ರೀಮತಿ ಚನ್ನಮ್ಮಾ ಗಂಡ ವಿಶ್ವನಾಥ ಪಠಪತಿ, ಸಾಃ ಮ. ಸಂ. 5-665, ಛೋಟಾ ರೋಜಾ (ಕೆ) ಗುಲಬರ್ಗಾ ರವರು ತನ್ನ ಮನೆಯಿಂದ ನಡೆದುಕೊಂಡು ಮನೆಯ ಎದುರುಗಡೆ ರೋಡ ದಾಟುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 37 ಎಚ್. 7028 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಎಡಗಾಲಿಗೆ ಭಾರಿ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 July 2014

Gulbarga District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಪ್ರಕಾಶ ತಂದೆ ಶಂಕರ ಹನಗುಂದಿ ಸಾ: ಹರಿಕ್ರಷ್ಣ ನಗರ ಸಂತೋಷ ಕಾಲೋನಿ ಗುಲಬರ್ಗಾ ರವರು ದಿನಾಂಕ 25/07/2014 ರಂದು ರಾತ್ರಿ ವೇಳೆಯಲ್ಲಿ ತನ್ನ ದ್ಚಿಚಕ್ರ ವಾಹನವನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿದ್ದು ಮುಂಜಾನೆ ಎದ್ದು ನೋಡಲು ನನ್ನ ಬೈಕ್ ಇರಲಿಲ್ಲಾ. ಎಲ್ಲಾ ಕಡೆಗೆ ಹುಡುಕಾಡಿದ್ದು ಸಿಕ್ಕಿರುವುದಿಲ್ಲಾ. ಕಾರಣ ನನ್ನ ಹೊಂಡಾ ಶೈನ್ ದ್ವಿಚಕ್ರ ವಾಹನ ನಂ. ಕೆ.ಎ-51 ಇಎ-6641 ಚೆಸ್ಸಿ ನಂ. ME4JC36DGB8144688 ಇಂಜನ ನಂ. JC36E2419368  ಇದರ ಕಿಮ್ಮತ್ತು  45,000/- ರೂ ನೇದ್ದನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ವಸಂತಾ ಗಂಡ ದೇವಿದಾಸ ಲಂಬುನವರ  ಸಾ: ಗುಬ್ಬಿ ಕಾಲೋನಿ ಸೇಡಂ ರೋಡ  ಗುಲಬರ್ಗಾ ರವರು ದಿನಾಂಕ: 28/07/2014 ರಂದು ಬೆಳಿಗ್ಗೆ 8=15 ಗಂಟೆಗೆ ಫಿರ್ಯಾದಿಯು ಆರ್.ಟಿ.ಓ ಕ್ರಾಸ್ ಹತ್ತಿರ ಅಟೋರೀಕ್ಷಾ ನಂ: ಕೆಎ 32 6453 ನೆದ್ದರಲ್ಲಿ ಕುಳಿತು ಜಿ.ಜಿ.ಹೆಚ್. ಸರ್ಕಲ್ ಕಡೆಗೆ ಬರುತ್ತಿದ್ದಾಗ ಎಮ್.ಆರ್.ಎಮ್.ಸಿ. ಕಾಲೇಜ ಎದುರಿನ ರೋಡ ಮೇಲೆ ಅಟೋರೀಕ್ಷಾ ಚಾಲಕ ಅಟೋರೀಕ್ಷಾ ಎಡ ಬಲ ತಿರುಗಿಸಿ ಕಟ್ ಹೊಡೆದು ಒಮ್ಮೇಲೆ ಬ್ರೇಕ್ ಹಾಕಿ ಅಟೋರೀಕ್ಷಾ ಪಲ್ಟಿ ಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಚಾಲಕ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.