POLICE BHAVAN KALABURAGI

POLICE BHAVAN KALABURAGI

15 December 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ
:ಜಾವೀದ ತಂದೆ ಜಬ್ಬರಸಾಬ ಚೆಂಗಟಾ, ಸಾಃ ಇಸ್ಲಾಮಬಾದ ಕಾಲೂನಿ ಗುಲಬರ್ಗಾರವರು ನಾನು ಚಾಹ ಕುಡಿಯುವ ಕುರಿತು ನಡೆದುಕೊಂಡು ಬಸವೇಶ್ವರ ಕಾಲೂನಿ ಕ್ರಾಸ ಹತ್ತಿರ ಹೋಗುತ್ತಿರುವಾಗ ಮೋಟಾರ ಸೈಕಲ ನಂ. ಕೆ.ಎ 32 ಕ್ಯೂ 995 ನೇದ್ದರ ಚಾಲಕನು ತನ್ನ ಮೊಟಾರ ಸೈಕಲ್ ನ್ನು ರಿಂಗ ರೋಡ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಮೊಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆನಂ: 77/2011 ಕಲಂ 279,337 ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಮಾದನ ಹಿಪ್ಪರಗಾ ಠಾಣೆ
: ಶ್ರೀ ಕರಬಸಪ್ಪ ಎ.ಎಸ್.ಐ ಮಾದನ ಹಿಪ್ಪರಗಾ ಪೊಲೀಸ್ ಠಾಣೆರವರು ನಾನು ಮತ್ತು ಗುರುಪಾದಪ್ಪಾ ಸಿಪಿಸಿ ರವರು ದಿನಾಂಕ 15/12/2011 ರಂದು ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯದಲ್ಲಿದ್ದಾಗ ಆಳಂದ ವಾಗ್ದರಗಿ ರೋಡ ಹಿರೋಳ್ಳಿ ಗ್ರಾಮದಿಂದ ಅಂದಾಜ 2-3 ಕಿ.ಮೀ ಅಂತರದಲ್ಲಿ ಮಧ್ಯರಾತ್ರಿ 2 ಎ.ಎಮ್.ಗಂಟೆಯ ಸುಮಾರಿಗೆ ರೋಡಿನಲ್ಲಿ ಪೆಟ್ರೋಲಿಗ್ ಕರ್ತವ್ಯ ಮಾಡುತ್ತಾ ಬರುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದನು ನಾವು ಹಿಡಿಯಲು ಹೊದಾಗ ಅವನು ನಮಗೆ ನೋಡಿ ಓಡಿ ಹೋಗಿತ್ತಿದ್ದನ್ನು ಹಿಡಿದು ವಿಳಾಸ ವಿಚಾರಿಸಲು ಅವನು ಸರಿಯಾದ ಹೆಸರು ವಿಳಾಸ ನಿಡಲಿಲ್ಲಾ ನಾವು ಮತ್ತೆ ವಿಚಾರಿಸಲು ತನ್ನ ಹೆಸರು ಶಿವರಾಯ ತಂದೆ ದುರ್ಯೋದನ ವಾಡೆದ ವಯ:20 ವರ್ಷ ಸಾ: ಹಿರೋಳ್ಳಿ ಅಂತಾ ಹೇಳಿದನು ರಾತ್ರಿ ವೇಳೆಯಲ್ಲಿ ರೋಡಿನ ಮೇಲೆ ಯಾಕೆ ತಿರುಗಾಡುತ್ತಿ ಅಂತಾ ವಿಚಾರಿಸಿಲು ಅವನು ಬೇರೆ ಬೇರೆ ರೀತಿಯಲ್ಲಿ ಹೇಳಿ ಸರಿಯಾದ ಉತ್ತರ ನೀಡಲ್ಲಿಲ್ಲಾ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ಕಂಡು ಬಂದಿರುವದರಿಂದ ಠಾಣೆಗೆ ಬಂದು ವರದಿ ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ 75/2011 ಕಲಂ 107,151 ಸಿ,ಆರ್,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ತಾಮ್ರದ ವೈರ ಜಪ್ತಿ:
ಮಾದನ ಹಿಪ್ಪರಗಾ ಠಾಣೆ:
ಶ್ರೀ.ಮೈನೊದ್ದೀನ ತಂದೆ ಕಾಶೀಮ ಸಾಬ ಮುಖ್ಯ ಪೇದೆ ಆಳಂದ ಪೊಲೀಸ್ ಠಾಣೆ ನಾನು ಮತ್ತು ಠಾಣೆಯ ಪೊಲೀಸ್ ಪೇದೆ ಚಂದ್ರಶೇಖರ ಇಬ್ಬರೂ ಮಾನ್ಯ ಸಿ.ಪಿ.ಐ. ಸಾಹೇಬ ಆಳಂದ ರವರ ಆಧೇಶ ಪ್ರಕಾರ ಆಳಂದ ಪೊಲೀಸ್ ಠಾಣೆ ಗುನ್ನೆ ನಂ 243/2011 ಕಲಂ 457, 380. ಐ.ಪಿ.ಸಿ. ಆಳಂದ ಠಾಣೆ ಗುನ್ನೆ ನಂ 224/2011 ಕಲಂ 379, ಐ.ಪಿ.ಸಿ, ಆಳಂದ ಠಾಣೆ ಗುನ್ನೆ ನಂ 189/2011 ಕಲಂ 379 ಐ.ಪಿ.ಸಿ, ಆಳಂದ ಪೊಲೀಸ್ ಠಾಣೆ ಗುನ್ನೆ ನಂ 67/2011 ಕಲಂ 379 ಐ.ಪಿ.ಸಿ. ನೇದ್ದರಲ್ಲಿ ಕಳುವಾದ ಮಾಲು ಮತ್ತು ಆರೊಪಿತರ ಪತ್ತೆಗಾಗಿ ದಿನಾಂಕ 15/12/2011 ರಂದು ಬೆಳಗಿನ ಜಾವ ಆಳಂದ ದಿಂದ ಮಾದನಹಿಪ್ಪರಗಾ ಕಡೆ ಹೊಗುತ್ತಿದ್ದಾಗ ಬೆಳಿಗ್ಗೆ 6 ಗಂಟೆ ಸುಮಾರಿಗೆ ಮೋಘಾ [ಬಿ] ಕ್ರಾಸ ಹತ್ತಿರ ಹತ್ತಿರ ಬರುವಾಗ ಅಲ್ಲಿ 3 ಜನರು ನಿಂತಿದ್ದರು ಅವರಲ್ಲಿ ಒಬ್ಬನ ಹತ್ತಿರ ಒಂದು ಬ್ಯಾಗ ಇದ್ದದು ನೋಡಿ ವಿಚಾರಿಸಲು ಅವರ ಹೆಸರು ವಿಳಾಸ ಕೇಳಲಾಗಿ ಅಸಮರ್ಪಕ ಉತ್ತರ ಕೊಟ್ಟರು ಅವರಲ್ಲಿ ಒಬ್ಬನು ಶಂಕರ ತಂದೆ ಶಾಲು ಪವಾರ ಸಾ: ಹಿರೋಳ್ಳಿ, ರಾಮು ತಂದೆ ಸೊಪಾನ ಪವಾರ ಸಾ: ಹಿರೋಳ್ಳಿ, ಬೇಸ್ಯಾ ತಂದೆ ಸೊನು ಪವಾರ ಸಾ: ಶಾಕಾಪೂರ, ಶಂಕರನ ಹತ್ತಿರ ಇದ್ದ ಬ್ಯಾಗನ್ನು ನಾವು ಚೆಕ್ಕ ಮಾಡಲು ಆ ಬ್ಯಾಗಿನಲ್ಲಿ ಸುಟ್ಟ ತಾಮ್ರ ವೈರ ಇತ್ತು ಎಲ್ಲಿಂದ ತಂದಿರುವಿರಿ ಅಂತಾ ನಾವು ಕೇಳಲು ದಿನಾಂಕ 10/12/2011 ರಂದು ರಾತ್ರಿ ವೇಳೆಯಲ್ಲಿ ಹಿರೋಳ್ಳಿ ಸಿಮಾಂತರದಲ್ಲಿನ ಹೊಲದಲ್ಲಿ ಕೇಬಲ ವೈರ್ ಕಳುವು ಮಾಡಿಕೊಂಡು ಬಂದು ಮಾರಾಟ ಮಾಡಿ ಹಣ ತೆಗೆದುಕೊಳಲು ಹಿರೊಳ್ಳಿ ಗುಡ್ಡದಲ್ಲಿ ಸುಟ್ಟಿರುತ್ತೆವೆ. ಅದನ್ನು ಆಳಂದಕ್ಕೆ ಮಾರಾಟ ಮಾಡಲು ತೆಗೆದುಕೊಂಡು ಹೊಗುತ್ತಿದ್ದೆವೆ ಅಂತಾ ತಿಳಿಸಿದ ಮೇರೆಗೆ 3 ಜನರನ್ನು ಹಾಗು ಮುದ್ದೆ ಮಾಲು ಸಮೇತ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 76/2011 ಕಲಂ 41(ಡಿ)102 ಸಿ,ಆರ್,ಪಿ,ಸಿ ಮತ್ತು 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.