POLICE BHAVAN KALABURAGI

POLICE BHAVAN KALABURAGI

30 June 2011

GULBARGA DISTRICT REPORTED CRIMES

ಹಲ್ಲೆ ಪ್ರಕರಣ :

ಸ್ಟೇಶನ ಬಜಾರ ಠಾಣೆ : ಶ್ರೀ ಮಿರ್ಜಾ ಬೇಗ್ ತಂದೆ ಮಿರ್ಜಾ ಹಸನ್ ಬೇಗ ಸಾ|| ಜೈನ್ ಹಾಸ್ಟೆಲ್ ಹಿಂದುಗಡೆ ಶಹಬಾಜ ಕಾಲೋನಿ ಗುಲಬರ್ಗಾ ರವರು ರಾತ್ರಿ ತಮ್ಮ ರೆಡಿಮೆಡ್ ಅಂಗಡಿ ಮುಚ್ಚಿಕೊಂಡು ರಹಿಮತ ನಗರದಿಂದ ಹೊರಟಾಗ ಅಜರ ರಹೆಮತ ನಗರ ಇತನು ನನಗೆ ನಿನ್ನ ಅಂಗಡಿಗೆ ಬಂದರೆ ಮರ್ಯಾದೆ ಕೊಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು ಬ್ಲೇಡನಿಂದ ದೇಹದ ಭಾಗದ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ :

ಬ್ರಹ್ಮಪೂರ ಠಾಣೆ : ಶ್ರೀ ರವಿಂದ್ರನಾಥ .ಬಿ.ನಾಡಗೌಡ ಶ್ರೀಸಿದ್ದೇಶ್ವರ ಪೇಂಟ್ಸ ಹಾಗು ಹಾರ್ಡವೇರ ದರ್ಶನ ಎಡಿಶನ್ ಕಾಂಪ್ಲೇಕ್ಸ ಜಗತ ಗುಲಬರ್ಗಾ ರವರು ನಮ್ಮ ಅಂಗಡಿಗೆ ದಿನಾಂಕ: 28-06-2011 ರಂದು ರಾತ್ರಿ ಅಂಗಡಿಗೆ ಬೆಂಕಿ ಬಿದ್ದು ಅಂಗಡಿಯಲ್ಲಿದ್ದ ಪೇಂಟ್ ಸಾಮಾನುಗಳು, ಕಂಪ್ಯೂಟರ್ ಯಂತ್ರಗಳು ಹಾಗು ವಿದ್ಯುತ್ ಮೀಟರ ಮೀರಟಗಳು ಹೀಗೆ ಒಟ್ಟು 5,26,000-00 ಕಿಮ್ಮತ್ತಿನ ಮೌಲ್ಯದ್ದು ಆಕಸ್ಮಿಕವಾಗಿ ಸುಟ್ಟು ಕರಲಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

GULBARGA DISTIRCT REPORTED CRIMES

ಕಳ್ಳತನ ಪ್ರಕರಣ

ರೋಜಾ ಠಾಣೆ
: ಶ್ರೀ ಸುಧೀರ ತಂದೆ ಮಲ್ಲಿಕಾರ್ಜುನ ಅವಟೆ ಸಾ|| ಗಂಜ ಕಾಲೋನಿ ಗುಲಬರ್ಗಾ ರವರು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಬಾಗಿಲದ ಕೊಂಡಿ ಮುರಿದು ಅಡಿಗೆ ಮನೆಯಲ್ಲಿಟ್ಟದ್ದ 4 ತಾಮ್ರದ ಹಾಂಡೆ, ತಾಮ್ರದ ಕೊಡಗಳು , ತಾಮ್ರದ ಪೂಜಾ ಸಾಮಾನುಗಳು, ನಗದು ಹಣ 4700/-ರೂ. ಹೀಗೆ ಒಟ್ಟು ಅ.ಕಿ.19700/-ರೂಪಾಯಿ ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಸುಲೇಪೇಟ ಠಾಣೆ : ಶ್ರೀ ಅಶೊಕರಡ್ಡಿ ತಂದೆ
ಬಸವಂತರೆಡ್ಡಿ ಹಸರಗುಂಡಗಿ ಸಾ||
ಪರದರ ಮೊತಕಪಳ್ಳಿ ರವರು ನನ್ನ ಮಗಳು ರೇಖಾ ಮತ್ತು ಇತರ ಹುಡಗ ಹುಡಗಿಯವರು ನಮ್ಮೂರಿನಿಂದ
ಗರಗಪಳ್ಳಿ
ಗ್ರಾಮಕ್ಕೆ ಶಾಲೆಗೆ ಹೊಗುತ್ತಿರುವಾಗ ಮೊತಕಪಳ್ಳಿ ಗ್ರಾಮದ ಹತ್ತಿರ
ರೊಡಿನಲ್ಲಿ ಎದುರಿನಿಂದ ಗುಡ್ಸ ಆಟೊ
ನಂ
ಕೆ.-32 ಬಿ-4267 ನೇದ್ದರ ಚಾಲಕ
ನಬಿಪಟೇಲ ತಂದೆ
ಫತ್ರು ಪಟೇಲ
ಸಾ||
ದಸ್ತಾಪೂರ
ಇತನು ತನ್ನ ವಾಹನವನ್ನು ಅತಿವೇಗ ಮತ್ತು
ಅಜಾಗರೂಕತೆಯಿಂದ
ಚಲಾಯಿಸಿ ಕೊಂಡು ಬಂದು ತನ್ನ
ಮಗಳು ರೇಖಾ ಇವಳಿಗೆ ಡಿಕ್ಕಿ ಹೊಡೆದಿದ್ದರಿಂದ ರೇಖಾ ಇವಳಿಗೆ ತಲೆಗೆ ಮತ್ತು ದೇಹದ
ಇತರೆ ಭಾಗಗಳಿಗೆ ರಕ್ತಗಾಯಗಳಾಗಿದ್ದು, ಉಪಚಾರ ಕುರಿತು ಚಿಂಚೋಳಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ರೇಖಾ
ಇವಳು ಮೃತ ಪಟ್ಟಿರುತ್ತಾಳೆ
ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಜಾತಿ ನಿಂದನೆ ಪ್ರಕರಣ :

ಚೌಕ ಠಾಣೆ :
ಶ್ರೀ ಮಂಜುನಾಥ ತಂದೆ ಚಂದ್ರಶಾ ಮದನಕರ ಸಾಃ ತಾಜಸುಲ್ತಾನಪೂರ ಗುಲಬರ್ಗಾ ರವರು ನಾನು ದಿನಾಂಕ 29.06.2011 ರಂದು ಮದ್ಯಾಹ್ನ ಪ್ರಿಯಾ ಬಾರನಿಂದ ನನ್ನ ಗೆಳೆಯರಾದ ಪ್ರಕಾಶ ಮತ್ತು ಹಣಮಂತ ರವರು ಕೂಡಿಕೊಂಡು ಬಾರಿನಿಂದ ಹೊರಗಡೆಗೆ ಬರುತಿದ್ದಾಗ ಬಾರ ಮ್ಯಾನೇಜರನಾದ ಬಸವರಾಜ ಹಡಗಿಲ ಇತನು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

29 June 2011

GULBARGA DISTIRICT REPORTED CRIMES

ಕಳ್ಳತನ ಪ್ರರಕಣ :
ಅಶೋಕ ನಗರ ಠಾಣೆ : ಡಾ: ಮುರುಗೇಶ ತಂದೆ ಗುರುಶಾಂತಪ್ಪ ಪಸ್ತಾಪುರ ಸಾ|| ಭಗವತಿ ನಗರ ಗುಲಬರ್ಗಾ ರವರು ನಮ್ಮ ಪಸ್ತಾಫೂರ ದವಾಖಾನೆಯ ಜನರೇಟರ್ ಕೋಣೆಯ ಬಾಗಿಲ ಕೀಲಿ ಮುರಿದು ಜನರೇಟರ ಬ್ಯಾಟರಿ ನಂ. 95ಇ01612204ಸಿ10449 ನೇದ್ದು ಅ.ಕಿ. 10,000/- ರೂ ಕಿಮ್ಮತ್ತಿನದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಅಪಘಾತ ಪ್ರರಕಣ :

ಗ್ರಾಮೀಣ ಠಾಣೆ : ಶ್ರೀ ಶ್ರೀನಿವಾಸ ತಂದೆ ಸೂರ್ಯಕಾಂತ ಚವ್ಹಾಣ ಸಾ|| ಐಯರವಾಡಿ ಹುಮನಾಬಾದ ಬೆಸ ಹತ್ತಿರ ಗುಲಬರ್ಗಾ ರವರು ನಾನು ಮತ್ತು ನಮ್ಮ ತಂದೆ ನನ್ನ ಪರಿಚಯದವರಾದ ಸಿದ್ದಾರೋಡ ಅರಳಿಮರ ಎಲ್ಲರು ಕೂಡಿಕೊಂಡು ಸ್ವಾಮಿ ಸಮರ್ಥ ಮಂದಿರಕ್ಕೆ ಹೋಗುವ ಕುರಿತು ಆಟೋದಲ್ಲಿ ಹುಮನಾಬಾದ ರಿಂಗ ರೋಡಿಗೆ ಬಂದು ಅಲ್ಲಿ ಸೋಮಶೇಖರ ದುತ್ತರಗಿ ಹಾಗೂ ಸಿದ್ದಾರೋಡ ಅರಳಿಮರ ಇವರು ನಿಂತಿದ್ದು ಅವರ ಹತ್ತಿರ ಹೋಗುವ ಕುರಿತು ರೋಡ ದಾಟಲು ಹೋಗುವಾಗ ನಮ್ಮ ತಂದೆಗೆ ಲಾರಿ ನಂ ಕೆಎ 32 ಎ-4218 ಲಾರಿ ಚಾಲಕ ಕಾಶಪ್ಪಾ ಅಲ್ದಿಹಾಳ ಇತನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಂದೆಗೆ ಡಿಕ್ಕಿ ಪಡಿಸಿದ್ದು, ಡಿಕ್ಕಿ ಪಡಿಸಿದ್ದರ ಪರಿಣಾಮ ಭಾರಿ ರಕ್ತಗಾಯವಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಸಿದ್ದು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

GULBARGA DISTRICT REPORTED CRIMES

ಹಲ್ಲೆ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀಮತಿ ಗುಂಡಮ್ಮಾ ಗಂಡ ಅಂಬಾರಾಯ ಟೆಂಗಳಿ ಸಾಃ ಹಮಾಲವಾಡಿ ಗುಲಬರ್ಗಾರವರು ನಮ್ಮ ಓಣಿಯಲ್ಲಿಯ ವಿದ್ಯತ್ ಸರಭರಾಜಿನಲ್ಲಿ ತೊಂದರೆಯಾಗಿದ್ದರಿಂದ ಓಣಿಯಲ್ಲಿರುವ ಮನೆ ಮನೆಗೆ 10 ರೂ. ಅಂತೆ ಸಂಗ್ರಹಿಸುವಾಗ ನಮ್ಮ ಪಾಲಿನ ಹಣ ತೆಗೆದುಕೊಳ್ಳಿರಿ ಅಂತ ಹೇಳಿದಕ್ಕೆ ಸಿದ್ದು ಗೌಡ ಇತನು ಅವಾಚ್ಯ ಶಬ್ದಗಳಿಂದ ಬೈಯುತ್ತ ಮಾನಭಂಗ ಮಾಡಲು ಪ್ರಯತ್ನಿಸಿದ್ದು, ಬಿಡಿಸಲು ಬಂದ ನನ್ನ ಗಂಡನನ್ನು ಮತ್ತು ನನಗೆ ನಿಂಗಮ್ಮ ಜಮಾದಾರ ಮತ್ತು ಸುರೇಶ ಇವರು ಹೊಡೆಬಡೆ ಮಾಡಿರುತ್ತರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಅಪಘಾತ ಪ್ರಕರಣ :

ಮುದೋಳ ಠಾಣೆ : ಶ್ರೀಮತಿ ಮೊಗಲಮ್ಮ ಗಂಡ ದಸ್ತಪ್ಪಾ ಹಯ್ಯಾಳ ರವರು ನನ್ನ ಮಗನಾದ ಹುಸನೆಪ್ಪಾ ಇತನು ಮತ್ತು ಸಂಗಡ ಇನ್ನೂ 3 ಜನರು ಕೂಡಿಕೊಂಡು ಟ್ರಾಕ್ಟರ ನಂ: ಕೆಎ 32 ಟಿ-9104 ನೇದ್ದರಲ್ಲಿ ಕಳವಿ ಹುಲ್ಲು ತುಂಬಿಕೊಂಡು ಬುರಂಪೂರ ಗ್ರಾಮದಿಂದ ದಿಂದಮಾದ್ವಾರ ಗ್ರಾಮದ ಕಡೆಗೆ ಹೊರಟಿದ್ದಾಗ ಅಡಕಿ ಗ್ರಾಮದ ರಸ್ತೆಯಲ್ಲಿ ಟ್ರಾಕ್ಟರ ಚಾಲಕನು ತನ್ನ ವಾಹನವನ್ನು ನಿಷ್ಕಾಳಜಿತನದಿಂದ ನಡೆಸುತ್ತಾ ಬರುತ್ತಿರುವಾಗ ಹುಸೆನಪ್ಪಾ ಇತನು ಟ್ರಾಕ್ಟರದಿಂದ ಬಿದ್ದಿದ್ದು ಉಪಚಾರ ಪಳಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಲಿಗೆ ಪ್ರಕರಣ :

ಬ್ರಹ್ಮಪೂರ ಠಾಣೆ :
ಶ್ರೀ
ಅಮರಮೋದಿ ತಂದೆ ಪರಮೇಶ್ವರ ಮೋದಿ ಸಾ|| ಮಹಾಲಕ್ಷ್ಮಿ ಲೇಔಠ ಗುಲಬರ್ಗಾ ರವರು ನಾನು ಮತ್ತು ನನ್ನ ಸ್ನೇಹಿತರು ಕೂಡಿಕೊಂಡು ಎನ.ವಿ ಕಾಲೇಜು ಎದುರುಗಡೆ ನಿಲ್ಲಿಸಿದ ಪಾನಪೂರಿ ಬಂಡಿಯಲ್ಲಿ ಪಾನಿಪೂರಿ ತಿನ್ನುತ್ತಿರುವಾಗ ಯಾರೋ ಒಬ್ಬನು ಬಂದು ನಮ್ಮ ತಂಗಿಗೆ ಚುಡಾಯಿಸುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಕೊರಳಿಗೆ ಕೈ ಹಾಕಿ ಕೊರಳಿದ್ದ 60,000-00 ಮೌಲ್ಯದ ಬಂಗಾರದ ಲಾಕೇಟ ಜಬರದಸ್ತಿಯಿಮದ ಕಸಿದುಕೊಂಡು ಕೆಎ 32 ಡಬ್ಲೂ 9436 ಅಥವಾ ಕೆಎ 32 ವಿ- 9436 ದ್ವಿ ಚಕ್ರ ವಾಹನದ ಮೇಲೆ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

28 June 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :
ಮಹಿಳಾ ಠಾಣೆ :
ಶ್ರೀ ರಾಮರಾವ ತಂದೆ ನಾರಯಣರಾವ ಬಿರಾದಾರ ಸಾ|| ಶಕ್ತಿ ನಗರ ಗುಲಬರ್ಗಾ ರವರು ನನ್ನ ಮನೆಯಲ್ಲಿ ಕಾರ ಡೈವರ ಅಂತಾ ಕೇಲಸ ಮಾಡುತ್ತಿದ್ದ ಸಂಜುಕುಮಾರ ತಂದೆ ಬಾಬುರಾವ ನಂದೂರ ದಿನಾಂಕ: 03-05-2011 ರಂದು ನಾವು ಮನೆಯಲ್ಲಿ ಇರದೆ ಇದ್ದಾಗ ಮಗಳಾದ ಕು|| ರೇಖಾ ಇವಳನ್ನು ಜಬರ ದಸ್ತಿಯಿಂದ ಹೆದರಿಸಿ ಅಪಹರಣ ಮಾಡಿಕೊಂಡು ಹೋಗಿದ್ದು ಈ ವಿಷಯಕ್ಕೆ ಸಂಬಂದಿಸಿದಂತೆ ಅವರ ಅಣ್ಣನಾದ ರಾಜು ಇತನಿಗೆ ವಿಚಾರಿಸಿಸುವದಕ್ಕೆ ಹೋದಾಗ ಅವಾಚ್ಯ ಶಬ್ದಗಳಿಂದ ಬೈದು ಪೊಲೀಸ್ ಠಾಣೆಗೆ ಹೋಗಿ ಎನಾದರು ಅರ್ಜಿ ಅಥವಾ ದೂರು ಕೊಟ್ಟರೆ ನಿಮ್ಮ ಮಗಳ ಜೀವಕ್ಕೆ ಅಪಾಯ ಮಾಡುತ್ತೆನೆ ಅಂತಾ ಹೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾತಿ ನಿಂದೆನ ಪ್ರರಕಣ :

ಚಿಂಚೋಳಿ ಠಾಣೆ :
ಶ್ರೀ.  ಕೃಷ್ಣಪ್ಪಾ ತಂದೆ ರಾಮಣ್ಣಾ ದಂಡಿನ್ ಸಾಃ ತುಮಕುಂಟಾ ರವರು ನಾನು ನಿನ್ನೆ ಹೊರಡಗೆಯಿಂದ ಮನೆಯ ಕಡೆಗೆ ಹೊರಟಾಗ ಜಹೀರ ಪಟೇಲ ಇತನು ನನಗೆ ರಸ್ತೆಯಲ್ಲಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡುತ್ತಿದ್ದಾಗ ಬಿಡಿಸಲು ಬಂದ ನನ್ನ ಅಳಿಯನಾದ ಬಸವರಾಜನಿಗೆ ಜಹೀರ ಪಟೆಲ್ ತಮ್ಮನಾದ ಶರೀಪ ಪಟೇಲ್ ಹೊಡೆದು ರಕ್ತಗಾಯ ಮಾಡಿರುತ್ತಾನೆ ಮತ್ತು ನನಗೆ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ

GULBARGA DISTIRICT REPORTED CRIMES

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಮೊಹ್ಮದ ಖಾಜಾ ಮೈನೋದ್ದಿನ ತಂದೆ ಮಹ್ಮದ ಸಲಿಂ ಸಾಃ ಬಗದಾದ ಕಾಲನಿ ಶಾಹಬಾಜ ಸ್ಕೂಲ್ ಹತ್ತಿರ ಗುಲಬರ್ಗಾ. ನಾನು ಮತ್ತು ಶಾಬೋದ್ದೀನ ಇಬ್ಬರು ನಮ್ಮ ಮೋಟಾರ ಸೈಕಲದ ಮೇಲೆ ಘೋಡವಾಡಿ ದೇವರಿಗೆ ಹೋಗಿ ದರ್ಶನ ಮಾಡಿಕೊಂಡು ರಾತ್ರಿ ಗುಲಬರ್ಗಾಕ್ಕೆ ಬರುವಾಗ ಸ್ವಾಮಿ ಸಮರ್ಥ ರೊಡಿನಲ್ಲಿ ಎದುರುಗಡೆ ಯಿಂದ TATA MAGIC TEMPO No KA-32-B-1055 ಚಾಲಕನ ಅತೀವೇಗದಿಂದ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆ ಡಿಕ್ಕಿ ಪಡಿಸಿದ ಪರಿಣಾಮ ನಮಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಆಳಂದ ಠಾಣೆ :
ಶ್ರೀಶೈಲ್ ತಂದೆ ವಿಠಲ್ ನಡಗೇರಿ ಸಾ|| ಹಳ್ಳಿಸಲಗರ ರವರು ನಮ್ಮ ಅಣ್ಣನಾದ ಮಲ್ಲಿಕಾರ್ಜುನನು ಇತನು ಆಳಂದ ಕ್ಕೆ ಜೀಪಿನಲ್ಲಿ ಬಂದಿದ್ದು ರೇವಣಪ್ಪನಿಗೆ 100 ರೂಪಾಯಿ ಚಿಲ್ಲರೆ ಕೊಡುವ ವಿಷಯದಲ್ಲಿ ಜಗಳ ಆಗಿತ್ತು, ರೇವಣಪ್ಪಾ ಇತನು ನೀನು ಊರಿಗೆ ಬಂದಾಗ ನೋಡಿಕೊಳ್ಳತ್ತಿನಿ ಅಂತಾ ಬೇದರಿಕೆ ಹಾಕಿದ್ದು , ಇಂದು ದಿನಾಂಕ 27-06-2011 ರಂದು ಸಾಯಂಕಾಲ ಆನಂದರಾಯಗೌಡನ ಸಂಗಡ ಇನ್ನೂ 6 ಜನರು ಬಂದು ನಮ್ಮ ತಂದೆಯವರೊಂದಿಗೆ ಜಗಳ ತೆಗೆದು ನಮ್ಮಲ್ಲರಿಗು ಹೊಡೆ ಬಡೆ ಮಾಡಿ ಜಾತಿ ನಿಂದೆನೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 June 2011

GULBARGA DISTRICT REPORTED CRIME

ಜಾನುವಾರು ಕಳವು ಪ್ರರಕಣ :

ಚಿಂಚೋಳಿ ಠಾಣೆ :
ಶ್ರೀ ಮಲ್ಲಿಕಾರ್ಜುನ ತಂದೆ ಬಸವಂತರಾಯ ರಾಜಾಪುರ ಸಾ|| ಧನಗರಗಲ್ಲಿ ಚಿಂಚೋಳಿ ರವರು ನಾನು ನನ್ನ ಹೋಲ ಸರ್ವೇ ನಂ 48 ಇದ್ದು , ಹೊಲದಲ್ಲಿ ನನ್ನ ಎರಡು ಎತ್ತುಗಳು ಎರಡು ಹೋರಿಗಳು ಒಂದು ಆಕಳು ಕಟ್ಟುತ್ತಿದ್ದು ಎಂದಿನಂತೆ ದಿನಾಂಕ 24.06.2011 ರಂದು ರಾತ್ರಿ ಆಳು ಮಗನಾದ ನಾಗಪ್ಪಾ ಇತನು ಸಹ ಅಲ್ಲಿಯೇ ಮಲಗಿದ್ದು, ರಾತ್ರಿ ಸಮಯದಲ್ಲಿ ನಾಗಪ್ಪನಿಗೆ ನಿದ್ದೆ ಹತ್ತಿರುವಾಗ ಎರಡು ಎತ್ತುಗಳು ಎರಡು ಹೋರಿಗಳು ಒಂದು ಆಕಳನ್ನು ( ಅ|ಕಿ|| 1,35,000-00 ಕಿಮ್ಮತ್ತಿನ ಜಾನುವಾರಗಳನ್ನು) ವಾಹನ ತಂದು ತುಂಬಿಕೊಂಡು ಹೋಗಿದ್ದಾರೆ ಅಂತಾ ನಾಗಪ್ಪಾ ಇತನು ತಿಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :
ಶ್ರೀಮತಿ ಮಲ್ಲಮ್ಮ ಗಂಡ ಹನಮಂತರಾಯ ಪಂಡರಗೆರಿ ಸಾಃ ಉಪಳಾಂವ ಗುಲಬರ್ಗಾ ರವರು ನಾನು, ನನ್ನ ಮಕ್ಕಳಾದ ಶಾಂತಬಾಯಿ, ನಾಗಮ್ಮ, ಸಚಿನ, ಹಾಗು ಸಂಬಂಧಿಕರಾದ ಮಲ್ಲಮ್ಮ ಎಲ್ಲರೊ ಕೊಡಿಕೊಂಡು ಡೊಂಗರಗಾಂವ ಗ್ರಾಮಕ್ಕೆ ಬಂದು ಪುನಃ ನಮ್ಮೂರಿಗೆ ಕ್ರೋಜರ ಜೀಪ ನಂ. ಎಪಿ- 27, ಎಕ್ಸ: 6467 ನೇದ್ದರಲ್ಲಿ ಕುಳಿತುಕೊಂಡು ಬರುತ್ತಿರುವಾಗ ಕಮಲಾಪೂರದ ಸಮೀಪ ಜೀಪ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಜೀಪ ಅಪಘಾತ ಪಡಿಸಿದ್ದರಿಂದ ನಮ್ಮೆಲರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರರಕಣ :
ಶಹಾಬಾದ ನಗರ ಠಾಣೆ :     
ಶ್ರೀ ಹಾಜಿ ಕರೀಮ ತಂದೆ ಮೊಹ್ಮದ ಸಾಲರ ಸಾ|| ಎ.ಬಿ.ಎಲ್. ಕಾಲೋನಿ ಶಹಾಬಾದ ರವರು ನನ್ನ ಅಣ್ಣನ ಮಗ ಅಸ್ಲಾಮ ತಂದೆ ಮಹಿಬೂಬಸಾಬ ಮತ್ತು ಯಕಬಾಲ ತಂದೆ ಶೇಖ ಸೈಯದ ಇವರು ಮೊಟಾರ ಸೈಕಲ ನಂ:ಕೆಎ/32/ಉ-9845 ನೇದ್ದರ ಮೇಲೆ ಕಚಗಡದಿಂದ ಶಹಾಬಾದ ಕ್ಕೆ ವೇರಹೌಸ ಹತ್ತಿರ ಬರುತ್ತಿರುವಾಗ ಎದುರುಗಡೆಯಿಂದ ಒಂದು ಜೀಪ ನಂ: ಎಮ್.ಹೆಚ್.14/ಜಿ-3832 ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದು ಅಸ್ಲಾಮನಿಗೆ ಮತ್ತು ಇಕಬಾಲನಿಗೆ ರಕ್ತಗಾಯವಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣ :
ಚಿತ್ತಾಪೂರ ಠಾಣೆ :
ಶ್ರೀ ಎಮ್. ನರೇಂದ್ರ ಕುಮಾರ ತಂದೆ ಮಾರಯ್ಯಾ ಸಹಾಯಕ ಇಂಜನೀಯರ ಸಣ್ಣ ನೀರಾವರಿ ಉಪವಿಭಾಗ ಗುಲಬರ್ಗಾ ರವರು ಚಿತ್ತಾಫುರ ತಾಲೂಕಿನ ಕದ್ದರಗಿ ಗ್ರಾಮದ ಹತ್ತಿರ ಸಣ್ಣ ನೀರಾವರಿ ಇಲಾಖೆಯ ಗೋದಾಮಿನಲ್ಲಿ ಶೇಖರಿಸಿ ಇಟ್ಟಿದ್ದ ಬ್ಯಾರೇಜುಗಳ ಗೇಟುಗಳು ಮತ್ತು ಇತರೆ ಸಾಮಾನುಗಳು ಒಟ್ಟು 5,06,704/-ರೂ ಕಿಮ್ಮತ್ತಿನ ಮಾಲು ಯಾರೋ ಅಪರಿಚಿತ ಕಳ್ಳರು ಶೆಟರ ಬಾಗಿಲು ತೆಗೆದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಶಹಾಬಾದ ನಗರ ಠಾಣೆ ::
ಶ್ರೀ ಶೇಖ ರಫಿಕ ತಂದೆ ಇಮಾಮಸಾಬ ಸಾ|| ಎ.ಬಿ.ಎಲ್. ಕಾಲೋನಿ ಹೌಸಿಂಗ ಸೂಸೈಟಿ ಶಾಂತನಗರ ಭಂಕೂರ ರವರು ನಾನು ಕ್ರಾಸ ಹತ್ತಿರವಿರುವಾಗ ಚಿತ್ತಾಪೂರ ಕಡೆಯಿಂದ ಸಿಮೆಂಟ ತುಂಬಿದ ಲಾರಿ ಕೆ.ಎ-28/ಬಿ-7554 ನೇದ್ದು ತಂದು ರೋಡಿನ ಪಕ್ಕದಲ್ಲಿ ನಿಂದರಿಸಿ ಗುರಲಿಂಗಪ್ಪಾ ಇವರ ಹೊಟೆಲದಲ್ಲಿ ಚಹಾ ಕುಡಿದರು. ಆಗ ಲಾರಿಯ ಕ್ಲಿನರನಾದ ಮೊಹ್ಮದ ಸಾ|| ಮಳಖೆಡ್ ಇತನು ಲಾರಿಯ ಹಿಂದಿನ ಟೈರುಗಳ ಹವಾ ಇದ್ದ ಬಗ್ಗೆ ನೊಡುತ್ತಿದ್ದು, ಲಾರಿಯ ಚಾಲಕನು ಹಿಂದೆ ಮುಂದೆ ನೋಡದೆ ಲಾರಿ ಚಾಲು ಮಾಡಿ ನಿಷ್ಕಾಳಜಿತನದಿಂದ ಚಲಾಯಿಸಿದ್ದರಿಂದ ಲಾರಿ ಕ್ಲಿನರ್ ನ ತಲೆಯ ಮೇಲೆ ಹಾಯ್ದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ : ಜಾಹೀದ ತಂದೆ ಮಕಬುಲ್ ಹಾಸಮಿಯಾ ಸಾಃ ಅಮಸೀನ ಜಿಲ್ಲಾಃ ಅಕ್ಬಾರಪೋಡಾ ರಾಜ್ಯ : ಉತ್ತರ ಪ್ರದೇಶ ಸದ್ಯ ಕಾಂದಿವಾಲಿ , ಲೋಕಂಡವಾಲೆ ಬಿಸ್ಮಿಲ್ಲಾ ಚಾಳ ಮುಂಬೈ ಮಹಾರಾಷ್ಟ್ರ ರವರು ಗೆಳೆಯರಾದ ಪಿರೋಜ ಸಾ|| ಬಬಲಾದ (ಎಸ್‌) ಗ್ರಾಮದಲ್ಲಿ ದಿ|| 25/6/11 ರಂದು ಮದುವೆ ಇದ್ದ ಪ್ರಯುಕ್ತ ನಾನು ಮತ್ತು ನನ್ನ ಗೆಳೆಯರಾದ ದೀಪಕ ತಂದೆ ದಗಡುಖರಾತ ಮತ್ತು ಅತ್ತರ ತಂದೆ ಅಕ್ಬರ ಶೇಖ ಕೂಡಿಕೊಂಡು ಗುಲಬರ್ಗಾಕ್ಕೆ ಬಂದು ದಿನಾಂಕ: 25/6/11 ರಂದು 12:30 ಪಿಎಮಕ್ಕೆ ನಾನು & ದೀಪಕ ಮತ್ತು ಅತ್ತರ ಕೂಡಿಕೊಂಡು ಗುಲಬರ್ಗಾ ಕೇಂದ್ರ ಬಸ್ಸ ಸ್ಟ್ಯಾಂಡದ ಎದುರು ಆಟೋ ನಂ ಕೆಎ 32 ಎ- 8147 ನೇದ್ದರಲ್ಲಿ ಕುಳಿತುಕೊಂಡು ಬಬಲಾದ (ಎಸ್‌) ಗ್ರಾಮಕ್ಕೆ ಲಗ್ನಕ್ಕೆ ಹೋರಟಾಗ ಹೀರಾಪೂರ ರೇಲ್ವೆ ಗೇಟ ಸ್ವಲ್ಪ ಮುಂದೆ ಹೋಗುತ್ತಿದ್ದಾಗ ಎದುರಿನಿಂದ ಟಂ ಟಂ ನಂಬರ ಕೆಎ 32 ಬಿ 974 ನೇದ್ದರ ಚಾಲಕ ನಿಂಗಣ್ಣ ಸಾ|| ಹಿತ್ತಲಸಿರೂರ ಇತನು ತನ್ನ ವಾಹನವನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಗ್ರಾಮೀಣ ಠಾಣೆ :
ಶ್ರೀ ಕಲ್ಯಾಣಿ ತಂದೆ ಶಿವಪ್ಪಾ ಪೂಜಾರಿ ಸಾಃ ಗುಳೋಳ್ಳಿ ಸದ್ಯ ಸಾವಳಗಿ (ಬಿ) ರವರು ನನ್ನ ಸ್ವಂತ ಊರು ಗುಳೋಳ್ಳಿ ಗ್ರಾಮ ವಿದ್ದು ಅಲ್ಲಿ ನಾವು 5 ಜನರು ಅಣ್ಣ ತಮ್ಮಂದಿರಿದ್ದು ಸುಮಾರು 25 ವರ್ಷದ ಹಿಂದೆ ಎಲ್ಲರೂ ಆಸ್ತಿಯನ್ನು ಪಾಲುಕೊಂಡಿದ್ದು . ನನ್ನ ಆಸ್ತಿಯನ್ನು ಮಾರಿ ಸಾವಳಗಿ ಗ್ರಾಮದಲ್ಲಿ 15 ಎಕ್ಕರೆ , 8 ಗುಂಟೆ ಜಮೀನನ್ನು ಖರೀದಿ ಮಾಡಿದ್ದು, ಇದರಲ್ಲಿ ಪಾಲು ಕೊಡುವಂತೆ ನನ್ನ ತಮ್ಮಂದಿರು ಹಾಗೂ ತಮ್ಮನ ಮಕ್ಕಳು ತಕರಾರು ಮಾಡುತ್ತ ಬರುತ್ತಿದ್ದು ದಿನಾಂಕ 26/6/2011 ರಂದು ರಾತ್ರಿ ಮನೆಯ ಅಂಗಳದಲ್ಲಿ ಮಲಗಿಕೊಂಡಾಗ ಮಾಳಪ್ಪಾ , ಸೀನಪ್ಪಾ , ಸಾಯಿಬಣ್ಣ , ಅಂಬಾರಾಯ , ಗಂಗಪ್ಪಾ , ಕಾಶಿನಾಥ , ಶಂಕರ , ಹಾಗೂ ಬಾಬು ವಚನೆಗೋಳ , ಸುಂದರ ಕಾಂತ ರವರ ಮಗ ಎಲ್ಲರೂ ಕೂಡಿ ಜೀಪ ನಂ; ಕೆಎ 32 ಎಮ 856 ನೇದ್ದರಲ್ಲಿ ಬಂದವರೆ ಅವಾಚ್ಯ ಶಬ್ದಗಳಿಂದ ಬೈದು ಆಸ್ತಿಯಲ್ಲಿ ಭಾಗ ಕೊಡು ಅಂತಾ ನನ್ನನ್ನು ಜೀಪಿನಲ್ಲಿ ಕುಡಿಸಿಕೊಂಡು ಅಪಹರಣ ಮಾಡಿ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 June 2011

GULBARGA DISTRICT REPORTED CRIME

ಮದುವೆ ದಿಬ್ಬಣ ಲಾರಿ ಅಪಘಾತ ಒಂದು ಸಾವು ಹಲವರಿಗೆ ಗಾಯ :

ಚಿತ್ತಾಪುರ ಠಾಣೆ:
ಶ್ರೀ ಮಲ್ಲಿಕಾರ್ಜುನ ತಂದೆ ಗುಂಜಲಪ್ಪ ಮಡಿವಾಳ ಸಾ|| ಬಂದಳ್ಳಿ ತಾ||ಜಿ|| ಯಾದಗಿರರವರು ನಾನು ಊರ ಜನರು ಸುಮಾರು 60 ಜನರು ಕೂಡಿಕೊಂಡು ಮರೆಪ್ಪ ನಾರಾಯಣ ರವರ ಮಗಳಾದ ಸರೋಜಮ್ಮ ಇವಳ ಮದುವೆಯು ಕುರಿತು ಲಾರಿ ನಂ; ಕೆಎ-32-3294 ನೇದ್ದರಲ್ಲಿ ಡೊಣಗಾಂವ ಗ್ರಾಮದಿಂದ ಬಂದಳಿ ಗ್ರಾಮಕ್ಕೆ ಹೋಗಿದ್ದು ಮದುವೆ ಮುಗಿಸಿಕೊಂಡು ಬಂದಳ್ಳಿ ಗ್ರಾಮಕ್ಕೆ ಬರುವಾಗ ರಾಜೋಳಾ ಕ್ರಾಸ ಹತ್ತಿರ ಲಾರಿ ಚಾಲಕನು ಲಾರಿಯನ್ನು ನಿಷ್ಕಾಳಜಿನತದಿಂದ ನಡೆಸಿ ರೋಡಿನ ಪಲ್ಟಿ ಮಾಡಿದ್ದು, ಪಲ್ಟಿ ಮಾಡಿದ್ದ ಪರಿಣಾಮವಾಗಿ ಕ್ಲೀನರ ಮರೆಪ್ಪ ಈತನು ಲಾರಿ ಕೆಳಗೆ ಬಿದ್ದು ಮೃತಪಟ್ಟಿದ್ದು. ಮತ್ತು ಮಲ್ಲಮ್ಮ ಇವಳಿಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIME

ಕಳವು ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಮಲ್ಲಪ್ಪಾ ತಂದೆ ಶಂಕ್ರೆಪ್ಪಾ ವಟಗಲ್ ಸಾ|| ಪ್ರಭು ನಿಲಯ ಬಿದ್ದಾಪೂರ ಕಾಲನಿ ಗುಲಬರ್ಗಾ ರವರು ನನ್ನ ಮನೆಯ ಮುಂದೆ ನಿಲ್ಲಿಸಿದ ಹಿರೋ ಹೊಂಡಾ ಸ್ಪಲೆಂಡರ್ ಕೆಎ- 32 ಎಸ-2141 ನೇದ್ದು ಮನೆಯ ಮುಂದೆ ನಿಲ್ಲಿಸಿದ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 June 2011

GULBARGA DISTRICT REPORTED CRIMES

ಇಸ್ಪೀಟ ಜೂಜಾಟ ಪ್ರಕರಣ :

ಶಹಾಬಾದ ನಗರ ಠಾಣೆ :
ದಿನಾಂಕ:24/06/2011 ರಂದು ಮದ್ಯಾಹ್ನ ನಾನು ಶ್ರೀ ವಿ.ಹೆಚ್. ವಿಜಯಕುಮಾರ ಪಿ.ಐ ಶಹಾಬಾದ ನಗರ ಠಾಣೆ ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಚೌಕ ಹತ್ತಿರ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದೆ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಠಾಣೆಯಿಂದ ಹೊರಟು ಇಸ್ಪೀಟ ಆಡುತ್ತಿರುವ ಸ್ಥಳಕ್ಕೆ ಹೋಗಿ ನೋಡಲಾಗಿ ಕೆಲವು ಜನರು ಅಂದರ-ಬಾಹರ ಜೂಜಾಟ ಆಡುತ್ತಿರುವದು ಖಚಿತ ಪಡಿಸಿಕೊಂಡು ಇಸ್ಪೀಟ ಆಡುತ್ತಿರುವ ಮಾರುತಿ ತಂದೆ ಮಹಾದೇವ ಸಂಗಡ ಇನ್ನೂ 3 ಜನರನ್ನು ವಶಕ್ಕೆ ತೆಗದುಕೊಂಡು ಅವರಿಂದ ಇಸ್ಪೇಟ ಎಲೆಗಳು ಮತ್ತು ಒಟ್ಟು ನಗದು ಹಣ 1400/- ರೂಪಾಯಿಯನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ

ಶಹಾಬಾದ ನಗರ ಠಾಣೆ :
ಶ್ರೀ ಚಂದ್ರಾಯ ತಂದೆ ನಾಗಪ್ಪಾ ಬಡಿಗೇರ ಸಾ|| ನಾಲವಡಗಿ ತಾ|| ಶಹಾಪೂರ ರವರು ನಾನು ಮತ್ತು ಸುಬ್ಬಣ್ಣಾ, ಸುಮಂಗಲಾ, ಭಿಮಬಾಯಿ, ಮಂಜುನಾಥ, ಮಲ್ಲಮ್ಮಾ ಎಲ್ಲರೂ ಕೂಡಿಕೊಂಡು ನಾಲವಾಡಗಿ ಗ್ರಾಮದಿಂದ ಹೊನಗುಂಟಾ ಗ್ರಾಮದ ಕಡೆಗೆ ಹೊರಟಿದ್ದು ಶಹಾಬಾದದ ಜಗಜೀವನ ರಾಮ ಚೌಕ ಹತ್ತಿರ ಬರುತ್ತಿರುವಾಗ ಟಂ.ಟಂ. ಚಾಲಕನ ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತದಿಂದ ನಡೆಸುತ್ತಾ ಪಲ್ಟಿ ಮಾಡಿದ್ದರಿಂದ ನನಗೆ ಮತ್ತು ನನ್ನ ಜೋತೆಯಿದ್ದವರಿಗೆ ಸಣ್ಣ ಪುಟ್ಟ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ಬ್ರಹ್ಮಪೂರ ಠಾಣೆ :
ಶ್ರೀ ಯಶವಂತ ತಂದೆ ರುಕ್ಕಪ್ಪಾ ಗೋಳಾ ಸಾ|| ಭೀಮನಗರ ಜಗತ್ ಗುಲಬರ್ಗಾ ರವರು ನಾನು ರಾಜಕುಮಾರ ಮಾಡಗಿ ಇವರ ಅಂಗಡಿ ಸಂಖ್ಯೆ 2-481 ನೇದ್ದನ್ನು ಬಾಡಿಗೆಯಿಂದ ಪಡೆದುಕೊಂಡು ದಿನಾಂಕ: 31/05/2011 ರಂದು ಮುಕ್ತಾಯವಾಗುವದಿದ್ದು ದಿನಾಂಕ: 29/05/2011 ರಂದು ಸದರಿ ಅಂಗಡಿಯ ಅವಧಿಯನ್ನು ಮತ್ತೆ 11 ತಿಂಗಳ ವರೆಗೆ ಅಂಗಡಿಯ ಮಾಲಿಕ ರಾಜಕುಮಾರ ಮಾಡಗಿ ಇವರು ಮೃತಪಟ್ಟಿರುವದರಿಂದ ಅವರ ಹೆಂಡತಿಯವರಾದ ರಮಾದೇವಿಯವರು ಕರಾರು ನಂತೆ 11 ತಿಂಗಳ ವರೆಗೆ ಬಾಡಿಗೆಗೆ ಕೊಟ್ಟಿದ್ದು 10,000/- ರೂ ಮುಂಗಡವಾಗಿ ತಗೆದುಕೊಂಡು ಪ್ರತಿ ತಿಂಗಳ 1600/- ರೂಪಾಯಿಯಂತೆ ಬಾಡಿಗೆ ನಿಗದಿಪಡಿಸಿದ್ದು ಇರುತ್ತದೆ. ಬಾಡಿಗೆ ಅವಧಿ 30/04/2012 ರ ವರೆಗೆ ಇರುತ್ತದೆ. ಆದರೆ ದಿನಾಂಕ: 21/06/2011 ರಂದು ಮದ್ಯಾಹ್ನ ನಾನು ನನ್ನ ಅಂಗಡಿಯಲ್ಲಿ ಇರುವಾಗ ರಮಾದೇವಿ ಮಾಡಗಿ ಮತ್ತು ಅವರ ತಮ್ಮನಾದ ವಿನೋದಕುಮಾರ ಬಂದು ವಿನೋದಕುಮಾರ ಇತನು ನನ್ನನ್ನೂ ಅಂಗಡಿಯಿಂದ ಹೊರಗೆ ಕರೆದು ಏ ಯಶ್ವಂತ ನೀನು ನಮ್ಮ ಅಕ್ಕನ ಅಂಗಡಿ ಖಾಲಿ ಮಾಡು ನೀನು ಕೊಡುತ್ತಿರುವ ಬಾಡಿಗೆ ಬಹಳ ಕಡಿಮೆ ಇರುತ್ತದೆ ಅಂತಾ ಅಂದಾಗ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಹಲ್ಲೆ ಪ್ರಕರಣ:

ಗ್ರಾಮೀಣ ಠಾಣೆ : ಶ್ರೀ ಖಾಜಾ ತಂದೆ ಬಾಬು ಮಿಯಾ ವಯ 25 ವರ್ಷ ಸಾ|| ಯಾದುಲ್ಲಾ ಕಾಲನಿ ವಾಟರ ಟ್ಯಾಕ್ ಹತ್ತಿರ ಗುಲಬರ್ಗಾ ರವರು ನಾನು ಮಧ್ಯಾಹ್ನ ಸಾಗಾರ ದಾಬಾಕ್ಕೆ ಊಟ ಮಾಡುವ ಸಲುವಾಗಿ ಸಾಗರ ಧಾಬಾಕ್ಕೆ ಹೋಗಿದ್ದು ಊಟ ಮಾಡಿಕೊಂಡು ದಾಬಾದಿಂದ ಹೊರಗೆ ಬಂದು ಏಕಿ ಮಾಡುವಾಗ ಲತೀಫ, ಮತ್ತು ಮಹಿಬೂಬ ಇಬ್ಬರು ಸಾಗರ ದಾಬಾ ದವರು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 June 2011

GULBARGA DISTRICT REPORTED CRIMES

ಆಯುಧ ಪ್ರಕರಣ :

ನರೋಣಾ ಠಾಣೆ:
ಶ್ರೀ ಅನೀಲ ತಂದೆ ಹಣಮಂತ ರಂಜಾರೇ ಸಾ|| ಕಡಗಂಚಿ ರವರು ನಾನು ದಿನಾಂಕ: 23-06-2011 ರಂದು ಸಾಯಂಕಾಲ 07-30 ಗಂಟೆಗೆ ಕಡಗಂಚಿಯ ಕ್ರಾಸ ಹತ್ತಿರ ರೋಡಿನ ಹತ್ತಿರ ಇದ್ದಾಗ ಶ್ರೀಶೈಲ್ ತಂದೆ ಬಸವರಾಜ ಅಲ್ದಿ ಸಾ|| ಕಡಗಂಚಿ ಇತನು ತನ್ನ ಕೈಯಲ್ಲಿ ಒಂದು ಪಿಸ್ತೂಲ ಹಿಡಿದು ಕೊಂಡು ಹೋಗಿ ಬರುವ ಜನರಿಗೆ ಕೊಲೆ ಮಾಡುವ ಬೇದರಿಕೆ ಹಾಕುತ್ತಿದ್ದು, ಇದನ್ನು ಕಂಡು ಅಲ್ಲೆ ಇರುವ 10 ರಿಂದ 15 ಜನರು ಗುಂಪುವೊಂದು ಶ್ರೀಶೈಲ್ ನ ಹತ್ತಿರ ಬಂದವರೆ ಅವನಿಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಆಳಂದ ಠಾಣೆ :ಶ್ರೀ ದಯಾನಂದ ತಂದೆ ಶ್ರೀಪತರಾವ ಸಾ|| ರೇವಣಸಿದ್ದೇಶವರ ಕಾಲೋನಿ ಆಳಂದ ರವರು ನಾನು ದಿನಾಂಕ:23-06-20111 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ನನ್ನ ಬಂಗಾರದ ಅಂಗಡಿಗೆ ಬಂದು ಬಂಗಾರದ ಅಂಗಡಿಯ ಶೇಟ್ಟರ ಕೀಲಿ ತೆಗೆಯುವ ಕುರಿತು ನನ್ನ ಜೋತೆಯಲ್ಲಿ ತಂದಿರುವ ಹಸಿರು ಬಣ್ಣದ ಬ್ಯಾಗನಲ್ಲಿ 92 ಗ್ರಾಂ ಬಂಗಾರದ ಆಭರಣಗಳು ಮತ್ತು ನಗದು ಹಣ 9400-00 ರೂಪಾಯಿಗಳು ಹೀಗೆ ಒಟ್ಟು 221000-00 ಮೌಲ್ಯದ್ದು ಇರುವ ಬ್ಯಾಗನ್ನು ಕೆಳಗಡೆ ಇಟ್ಟು ಶೇಟ್ಟರ ತೆಗೆಯುತ್ತಿರುವಾಗ ಯಾರೋ ಇಬ್ಬರು ಕಳ್ಳರು ಬ್ಯಾಗ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಹಲ್ಲೆ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಮನೋಹರ ತಂದೆ ಶಿವಶರಣಪ್ಪ ಮದನಕರ ಸಾ|| ತಾಜಸುಲ್ತಾನ ಪೂರ ರವರು ನಾನು ಈ ಮೊದಲು 6-7 ತಿಂಗಳ ಹಿಂದೆ ಶೃತಿ ಎಂಬುವಳೊಂದಿಗೆ ಪ್ರೀತಿಸಿ ಲಗ್ನ ಮಾಡಿಕೊಂಡಿದ್ದು ಇದ್ದಕ್ಕೆ ಮನೆಯ ಹಿರಿಯರು ಒಪ್ಪಿಕೊಂಡಿದ್ದು ಆದರೆ ನಾನು ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದು, ಇಂದು ಮುಂಜಾನೆ ನಾನು ನನ್ನ ಹೆಂಡತಿ ಮನೆಯಲ್ಲಿದ್ದಾಗ ಶರಣಪ್ಪ ನರೋಣಾ, ತಮ್ಮ ನಾಗರಾಜ, ತಾಯಿ ಸುಜಾತಾ, ತಂದೆ ಶಿವಶರಣಪ್ಪಾ ಮತ್ತು ಇನ್ನಿಬ್ಬರು ಮನೆಯ ಹತ್ತಿರ ಬಂದು ಅವಾಚ್ಯವಾಗಿ ಬೈದು ಹೊಡೆದು ಕಾಲಿನಿಂದ ಒದೆಯುತ್ತಾ ಹಾಗು ಶರಣಪ್ಪಾ ನರೋಣಾ ಇತನು ನನಗೆ ಮತ್ತು ನನ್ನ ಹೆಂಡತಿಗೆ ಚಾಕುವಿನಿಂದ ಹೊಡೆದಿರುತ್ತಾನೆ ಎಲ್ಲರೂ ಸೇರಿ ಕೊಲೆ ಮಾಡಲು ಪ್ರಯತ್ತಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ
:ಶ್ರೀ ಮಹಮದ್ ಇಸ್ಮಾಯಿಲ್ ತಂದೆ ಇಮಾಮ ಪಟೇಲ್ ಸಾ|| ಮಿಸ ಭಾ ನಗರ ಎಮ.ಎಸ.ಕೆ.ಮಿಲ್ ರೋಡ ಗುಲಬರ್ಗಾ ರವರು ನಾನು ದಿನಾಂಕ; 01-05-2011 ರಂದು ಸಾಯಂಕಾಲ ನನ್ನ ಹಿರೋ ಹೊಂಡಾ ಪ್ಯಾಶನ ಕೆಎ 33 ಇ-5853 ನೇದ್ದನ್ನು ಚೇತನ ಸ್ಕೂಲ ಹತ್ತಿರ ನಿಲ್ಲಿಸಿದಾಗ ಯಾರೋ ಕಳ್ಳರು ನನ್ನ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರಕರಣ :

ಅಫಜಲಪೂರ ಠಾಣೆ :
ದಿನಾಂಕ 23/6/2011 ರಂದು ನಾನು (ಸರ್ಕಾರಿ ತರ್ಪೆಯಾಗಿ) ರಮೇಶ ಸಿ ಮೇಟಿ ಸಿಪಿಐ ಅಫಜಲಪೂರ ಮತ್ತು ನನ್ನ ಸಂಗಡ ಹೆಚ್ ಸಿ-510, ಪಿಸಿ-684,608 ರವರೆಲ್ಲರೂ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ ಅಬಜಲಖಾನ ಚೌಕ ಹತ್ತಿರ ಇಬ್ಬರು ವ್ಯಕ್ತಿಗಳು 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಚೀಟಿ ಬರೆದುಕೊಳ್ಳುತ್ತಿರುವಾಗ ನಾವೇಲ್ಲರೂ ಕೂಡಿಕೊಂಡು ಅವರನ್ನು ಹಿಡಿದು ವಿಚಾರಿಸಲಾಗಿ, ಶಿವಪ್ಪಾ ತಂದೆ ಕಲ್ಲಪ್ಪಾ ಪೂಜಾರಿ ಸಾ|| ಘತ್ತರಗಾ ಮತ್ತು ರೇವಣಸಿದ್ದಪ್ಪಾ ತಂದೆ ನಾಗಪ್ಪಾ ಜಮಾದಾರ ಸಾ|| ಬಂಕಲಗಾ ರವರು ಮಟಕಾ ಚೀಟಿ ಬರೆದುಕೊಳ್ಳುತ್ತಿರುವದರನ್ನು ದಸ್ತಗಿರಿ ಮಾಡಿ ಅವರಿಂದ ಎರಡು ಮೊಬಾಯಿಲ್ ಗಳು ಮತ್ತು 2410- ರೂಪಾಯಿಗಳು ಹಾಗು ಮಟಕಾ ಚೀಟಿಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 June 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :

ವಾಡಿ ಠಾಣೆ:
ಶ್ರೀ ಸುರೇಶ ತಂದೆ ನರಸಪ್ಪಾ ಹಡಪದ ಸಾ|| ಶಹಾಬಾದ ತಾ|| ಚಿತ್ತಾಪೂರ ರವರು ನನ್ನ ಮಗಳಾದ ಮಿನಾಕ್ಷಿ ಇವಳು ಶಹಾಬಾದ ಪಟ್ಟಣದ ಗಂಗಮ್ಮ ಶಾಲೆಯಲ್ಲಿ 10 ನೇ ತಗತಿಯಲ್ಲಿ ವಿದ್ಯಬ್ಯಾಸ ಮಾಡುತ್ತಿದ್ದಾಳೆ ಇದೆ ಗ್ರಾಮದ ನಾಗರಾಜ ತಂದೆ ಭೀಮರಾಯ ಪೂಜಾರಿ ಇತನು ದಿನಾಂಕ: 29-05-2011 ರಂದು ನನ್ನ ಅಪ್ರಾಪ್ತ ಮಗಳಿಗೆ ಶಹಾಬಾದದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.

ಕಾಣೆಯಾದ ಪ್ರಕರಣ :

ಚೌಕ ಠಾಣೆ :
ಶ್ರೀ ದಿಗಂಬರಾವ ತಂದೆ ಮಾಣಿಕರಾವ ಗೌಳಿ ಸಾ|| ಶಿವಾಜಿ ನಗರ ಗುಲಬರ್ಗಾ ರವರು ನನ್ನ ಮಗನಾದ ಸೋಮುಖ @ ವಿಶಾಲ ಇತನು 10 ನೇ ತರಗತಿಯಲ್ಲಿ ಓದುತ್ತಿದ್ದು , ಸಾದಾರಣ ಮೈಕಟ್ಟು, ದುಂಡು ಮುಖ, ಕೆಂಪು ಬಣ್ಣ ಹೊಂದಿದವನಾಗಿದ್ದು, ಕನ್ನಡ ಹಿಂದಿ ಮರಾಠಿ ಬಾಷೆಗಳನ್ನು ಬಲ್ಲವನಗಿರುತ್ತಾನೆ. ಸದರಿಯವನು ದಿನಾಂಕ: 22-06-2011 ರಂದು ಮದ್ಯಾಹ್ನ 08123097465 ನೇದ್ದರ ಸಿಮ್ ಇರುವ ಮೊಬಾಯಿಲ್ ದಲ್ಲಿ ಹಾಡುಗಳನ್ನು ಹಾಕಿಸಿಕೊಂಡು ಬರುತ್ತೆನೆಂದು ಅಂತಾ ಹೇಳಿ ಹೋದವನು ಮನೆಗೆ ಮರಳಿ ಬಂದಿರುವದಿಲ್ಲ. ಕಾರಣ ಮಗನ ಪತ್ತೆ ಮಾಡಿಕೊಡಲು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 June 2011

GULBARGA DISTRICT REPORTED CRIME






ಕೊಲೆ ಆರೋಪಿ ಬಂದನ :




ಶಹಾಬಾದ ನಗರ ಠಾಣೆ : ಶ್ರೀ ವಿರೇಶ ತಂದೆ ಗುರಲಿಂಗಪ್ಪಾ ಗುಳೇದ ದಳಪತಿ ಸಾ: ತೊನಸಳ್ಳಿ [ಎಸ್] ರವರು ದಿನಾಂಕ:20/06/2011 ರಂದು ತೊನಸಳ್ಳಿ [ಎಸ್] ಗ್ರಾಮದ ಮಲ್ಲಣ್ಣಾ ಮುತ್ತಾ ಗುಡಿಯ ಪಕ್ಕದಲ್ಲಿ ಮುಸ್ಲಿಂ ಅಪರಿಚಿತ ಹೆಣ್ಣು ಮಗಳನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಕಲ್ಲಿನಿಂದ ತಲೆಗೆ, ಹಣೆಗೆ , ಬಲಕಪಾಳಕ್ಕೆ, ಬಲಕಣ್ಣಿನ ಮೇಲೆ ಹೊಡೆದು ಬಾರಿ ರಕ್ತಗಾಯ ಪಡಿಸಿ ಕೊಲೆಮಾಡಿ ಮುಖದ ಮೇಲೆ , ತಲೆಯ ಮೇಲೆ ಮಣ್ಣು ಹಾಕಿ ಹೊಟ್ಟೆಯ ಮೇಲೆ ಕಲ್ಲು ಇಟ್ಟು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಸದ ಮೇಲಿಂದ ತನಿಖೆ ಕೈಕೊಂಡು ಇರುತ್ತದೆ.




ಮೃತಳ ಶವವನ್ನು ಶ್ರೀ ಲಾಲ ಅಹ್ಮದ ತಂದೆ ಮಹೇಬೂಬ ಸಾಬ ಶಿರಸಗಿ ಸಾ:ಮದರಿ ತಾ:ಜೇವರ್ಗಿ ಇತನು ಗುರುತಿಸಿ ಮೃತಳು ನನ್ನ ತಂಗಿ ಬಾಬನಬಿ ಗಂಡ ಅಲ್ಲಾ ಪಟೇಲ ಸಾ:ಭೋಸಗಾ ಹಾ:ವ:ಮದರಿ ಅಂತಾ ಹೇಳಿ ಮೃತ ಬಾಬನಬಿ ಇವಳಿಗೆ 3 ವರ್ಷದೊಳಗೆ 2 ಮದುವೆ ಮಾಡಿದರೂ ಕೂಡಾ ತೌವರು ಮನಗೆ ಬಂದು ತೌವರು ಮನೆಯಲ್ಲಿಯೂ ಯಾರಿಗೂ ಹೇಳದೇ ಕೇಳದೆ ಮನೆಯಿಂದ ಹೋಗುತ್ತಿದ್ದರಿಂದ ತಂದೆಯಾದ ಮಹಿಬೂಬಸಾಬ ಇತನು ನಮ್ಮ ಮನೆತನದ ಮರ್ಯಾದೆ ಕಳೆಯುತ್ತಿದ್ದಾಳೆ ಇವಳಿಗೆ ಮುಗಿಸಿಯೇ ಬಿಡಬೇಕು. ಅಂತಾ ನಿರ್ಧಾರ ಮಾಡಿಕೊಂಡು ಹೈದ್ರಾಬಾದಕ್ಕೆ ಮಗನ ಹತ್ತಿರ ಒಯ್ದು ಬಿಡುತ್ತೇನೆ ಅಂತಾ ಕರೆದುಕೊಂಡು ಹೋಗಿ ತೊನಸಳ್ಳಿ [ಎಸ್] ಗ್ರಾಮದ ಮಲ್ಲಣ್ಣಾ ಮುತ್ಯಾ ಗುಡಿಯ ಹತ್ತಿರ ದಿನಾಂಕ:19-20/06/2011 ರಂದು ರಾತ್ರಿ ಕಲ್ಲಿನಿಂದ ತಲೆಗೆ ಮುಖಕ್ಕೆ ಹೊಡೆದು ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿ ಮುಖವು ಗುರ್ತಿಸಲಾರದಂತೆ ಮುಖದ ಮೇಲೆ ಮಣ್ಣು ಹಾಕಿ ಹೊಟ್ಟೆಯ ಮೇಲೆ ಕಲ್ಲು ಇಟ್ಟು ಮುಖಕ್ಕೆ ಗುರ್ತಿಸಲಾರದಂತೆ ಹೋಗಿದ್ದ ಮಹಿಬೂಬಸಾಬ ಇತನನ್ನು ಇಂದು ದಿನಾಂಕ: 22-06-2011 ರಂದು ಶಹಾಬಾದ ನಗರ ಠಾಣೆಯ ಪೊಲೀಸ್ ಇನ್ಸಪೇಕ್ಟರ ಮತ್ತು ಠಾಣೆಯ ಸಿಬ್ಬಂದಿಯವರು ಕಟ್ಟಿ ಸಂಗಾಯಿಯ ಭೀಮಾ ಬ್ರಿಡ್ಜ್ ಹತ್ತಿರ ದಸ್ತಗಿರಿ ಮಾಡಿಕೊಂಡು ನ್ಯಾಯಾಂಗ ಬಂದನಕ್ಕೆ ಕಳುಹಿಸಿ ಕೊಡಲಾಗಿದೆ.

GULBARGA DISTRICT REPORTED CRIMES

ರಸ್ತೆ ಅಪಘಾತ ಪ್ರಕರಣ :

ಮಹಾಗಾಂವ ಠಾಣೆ : ಶ್ರೀ ಆನಂದ ತಂದೆ ಖೂಬು ಚವ್ಹಾಣ ಸಾ|| ಹರಸೂರ ತಾಂಡಾ ತಾ|| ಜಿ|| ಗುಲಬರ್ಗಾ
ರವರು ನನ್ನ ಮಗನಾದ ಸಾಗರ ಇತನು ದಿನಾಂಕ: 22/6/2011 ರಂದು ಬೆಳ್ಳಿಗ್ಗೆ 9 ಗಂಟೆಗೆ ಊಟ ಮಾಡಿಕೊಂಡು ಶಾಲೆಗೆ ಹೋಗುವ ಸಂಬಂಧ ಹರಸೂರದಿಂದ ತಾವರಗೇರಾ ಕ್ರಾಸಿಗೆ ಹೋಗುವ ರೋಡನ್ನು ದಾಟುತ್ತಿರುವಾಗ ಹರಸೂರ ತಾಂಡಾದ ಬಸ್ಸನಿಲ್ದಾಣದ ಹತ್ತಿರ ರೋಡ ದಾಟುತ್ತಿರುವಾಗ ಹರಸೂರ ಕಡೆಯಿಂದ ಜೀಪ ನಂ ಕೆಎ 32 ಎಮ್‌ 1267 ನೇದ್ದರ ಚಾಲಕ ಮಲ್ಲಿನಾಥ ತಂದೆ ಚನ್ನಪ್ಪಾ ಮುದ್ದಾ ಇತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸಾಗರ ಇತನಿಗೆ ಡಿಕ್ಕಿ ಪಡೆಸಿದ್ದಿಂದ ಆತನಿಗೆ ಮುಖದ ಮೇಲೆ ಎಡಗಲ್ಲಕ್ಕೆ ಹೊಟ್ಟೇಯ ಮೇಲೆ, ತರಚಿದ ರಕ್ತಗಾಯಗಳಾಗಿ ಎದೆಯ ಮೇಲೆ ತರಚಿದ ಗಾಯವಾಗಿ ಬಾರಿ ಒಳಪೆಟ್ಟಾಗಿ ಎಡಗೈ ಮುರಿದಂತೆ ಆಗಿದ್ದು ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ತೆಗೆ ಕರೆ ತರುವಾಗ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಬ್ರಹ್ಮಪೂರ ಠಾಣೆ :ಶ್ರೀ ಕೇದಾರನಾಥ ತಂದೆ ಕೀಶನ ಸೋಮಾಣಿ ಸಾ|| ಮಕ್ತಂಪೂರ ಗುಲಬರ್ಗಾ ರವರು ನಾನು ದಿನಾಂಕ: 02-04-2011 ರಂದು ಸಾಯಂಕಾಲ ಸುಮಾರಿಗೆ ನನ್ನ ಹಿರೋ ಹೊಂಡಾ ಮೊಟಾರ ಸೈಕಲ್ ನಂ: ಕೆಎ 32 ಕೆ 3785 ಅ||ಕಿ|| 25,000-00 ನೇದ್ದು ಕಾಮತ ಹೊಟೇಲ್ ಹತ್ತಿರ ಎದುರುಗಡೆ ನಿಲ್ಲಿಸಿದಾಗ ಯಾರೋ ಕಳ್ಳರು ನನ್ನ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಫರತಾಬಾದ ಠಾಣೆ :
ಶ್ರೀಮತಿ ಜಯಶ್ರೀ ಗಂಡ ರವಿ ಹಾರೋಳಿ ಅಂಗನವಾಡಿ ಶಿಕ್ಷಕಿ ಸಾ|| ಕೊಳ್ಳೂರ ರವರು ನಾನು ಕೊಳ್ಳೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿ ಅಂತಾ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ 20-6-11 ರಂದು ಮದ್ಯಾಹ್ನ ಮಕ್ಕಳು ಶಾಲೆಯಿಂದ ಹೋದ ನಂತರ ಬಾಗಿಲಿಗೆ ಬೀಗ ಹಾಕಿಕೊಂಡು ಗುಲಬರ್ಗಾಕ್ಕೆ ಬಂದಿರುತ್ತೆನೆ. ದಿನಾಂಕ 21-6-11 ರಂದು ಮುಂಜಾನೆ 8-30 ಗಂಟೆ ಸುಮಾರಿಗೆ ನನ್ನ ತಮ್ಮ ಶರಣಬಸಪ್ಪಾ ಇತನು ಕೊಳ್ಳೂರದಿಂದ ಫೋನ ಮಾಡಿ ನಿಮ್ಮ ಅಂಗನವಾಡಿ ಕೇಂದ್ರ ಕಳುವಾಗಿದೆ ಅಂತಾ ತಿಳಿಸಿದ ಕೂಡಲೆ ನಾನು ಕೊಳ್ಳೂರಕ್ಕೆ ಬಂದು ನೋಡಲಾಗಿ ಬಾಗಿಲಿಗೆ ಹಾಕಿದ ಕೀಲಿ ಇರಲಿಲ್ಲ. ಒಳಗಡೆ ಹೋಗಿ ನೋಡಲಾಗಿ ಮಕ್ಕಳ ಊಟಕ್ಕೆ ಇಟ್ಟಿರುವ ಪದಾರ್ಥಗಳು ಮತ್ತು ಮೆಡಿಸಿನ ಕಿಟ್, ಒಟ್ಟು ರೂ 1396 /- ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIME

ಅಪಘಾತ ಪ್ರಕರಣ :

ಯಡ್ರಾಮಿ ಠಾಣೆ : ಭಿಮರಾಯ ತಂದೆ ರಾವುತಪ್ಪಾ ದಿಡ್ಡಿಮನಿ ಸಾ|| ಯಡ್ರಾಮಿ ರವರು ನಾನು ಮತ್ತು ನಮ್ಮ ಓಣಿಯ ನಿಂಗಪ್ಪಾ ಮತ್ತು ಇತರರು ಕೂಡಿಕೊಂಡು ತಿಪ್ಪೆಯಲ್ಲಿನ ಗೊಬ್ಬರ ಟ್ರಾಕ್ಟರ ತುಂಬಿಕೊಂಡು ಹೊಲದಲ್ಲಿ ಹಾಕಿ ಬರುವಂತೆ ಹೇಳಿದ್ದರಿಂದ ಟ್ರಾಕ್ಟರ ನಂ: ಕೆಎ 32 ಟಿ- 4452-53 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೆಗವಾಗಿ ಮತ್ತು ಆಲಕ್ಷತನದಿಂದ ಚಲಾಯಿಸಿ ರೋಡಿನ ಮೇಲೆ ಬರುತ್ತಿದ್ದ ನನ್ನ ಮಗನಾದ ರಾವುತಪ್ಪಾ ಇತನಿಗೆ ಡಿಕ್ಕಿ ಪಡಿಸಿ ಓಡಿ ಹೋಗಿರುತ್ತಾನೆ ಮಗ ರಾವುತಪ್ಪಾ ಇತನ್ನು ಭಾರಿ ರಕ್ತಗಾಯ ಹೊಂದ್ದಿದರಿಂದ ದವಾಖಾನೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 June 2011

GULBARGA DISTRICT REPORTED CRIMES

ಅತ್ಯಾಚಾರ ಪ್ರಕರಣ :

ಫರತಾಬಾದ ಠಾಣೆ : ಕುಮಾರಿ ದಿವ್ಯಾ ತಂದೆ ಮಹಾದೇವ ಚವ್ಹಾಣ ರವರು ನನಗೆ ಶ್ಯಾಮ ತಂದೆ ಮೆಹರು ಪವಾರ ಸಾ|| ಹನುಮಾನ ತಾಂಡಾ ಗುಲಬರ್ಗಾ ದವನು ನನಗೆ ಎರಡು ತಿಂಗಳ ಹಿಂದೆ ಮಧ್ಯಾಹ್ನ ಶ್ರೀ ಗುರು ಶಾಲೆ ಖಣದಾಳದಲ್ಲಿ ನಾನು ಕೆಲಸದಲ್ಲಿದ್ದಾಗ ಶ್ಯಾಮ ಈತನು ನನಗೆ ಕರೆದು ಸಾಮಾನುಗಳಿವೆ ತೆಗೆದುಕೊಂಡು ಬರೋಣ ಅಂತಾ ಶಾಲೆಯ 3ನೇ ಅಂತಸ್ತಿನ ಬಾಥರೂಮಿನಲ್ಲಿ ಕರೆದುಕೊಂಡು ಹೋಗಿ ಬಾಗಿಲು ಕೊಂಡಿ ಹಾಕಿ ಜಬರಿ ಸಂಭೋಗ ಮಾಡಿ ಯಾರ ಮುಂದೆ ಹೇಳಬೇಡ, ಹೇಳಿದರೆ ನಿನ್ನ ಅಣ್ಣನಿಗೆ ಕೊಲೆ ಮಾಡುತ್ತೇನೆ. ಅಂತಾ ಹೇಳಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸ ಪ್ರಕರಣ :

ಮಾದನ ಹಿಪ್ಪರಗಾ ಠಾಣೆ : ಶ್ರೀ ರವಿಂದ್ರ ಆರ. ಕುಂದರವಾಡ ಶಾಖಾಧಿಕಾರಿಗಳು ಎಸ.ಬಿ.ಐ ಬ್ಯಾಂಕ್ ಮಾದನ ಹಿಪ್ಪರಗಾ ರವರು ಶಾಂತಪ್ಪಾ ತಂದೆ ಈರಣ್ಣ ಕೋರೆ ಮತ್ತು ಈರಣ್ಣಾ ತಂದೆ ಶಾಂತಪ್ಪಾ ಕೋರೆ ಸಾ|| ಇಬ್ಬರೂ ಪಡಸಾವಳಿ ರವರು ನಮ್ಮ ಬ್ಯಾಂಕಿನ ಮೊಹರು ತಯಾರಿಸಿ ಮ್ಯಾನೆಜರ ರವರ ನಕಲು ಸಹಿ ಮಾಡಿ ಬ್ಯಾಂಕನಲ್ಲಿ ಟ್ರಾಕ್ಟರ ಪಡೆದುಕೊಂಡು ಬ್ಯಾಂಕಿಗೆ ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಚೌಕ ಠಾಣೆ :
ಶ್ರೀ ಅರವಿಂದ ತಂದೆ ಮಹಾಲಿಂಗಪ್ಪಾ ಕೋರೆ ಸಾ|| ಕೈಲಾಸ ನಗರ ಆಳಂದ ರೋಡ ಗುಲಬರ್ಗಾ ರವರು ನಾನು ದಿನಾಂಕ: 18-06-2011 ರಂದು ರಾತ್ರಿ ಪೊರ್ಟ ರೋಡ ಮೂನ್ ಲೈಟ್ ಅಂಗಡಿ ಹತ್ತಿರ ಕೆಲಸವಿದ್ದ ಕಾರಣ ನನ್ನ ಹಿರೋ ಹೊಂಡಾ ಮೊಟಾರ ಸೈಕಲ್ ಕೆಎ- 32 ಎಸ-9909 ನೇದ್ದು ನಿಲ್ಲಿಸಿ ಕೆಲಸ ಮುಗಿಸಿಕೊಂಡು ಬರುವಷ್ಟರಲ್ಲಿ ಯಾರೋ ಕಳ್ಳರು ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


GULBARGA DISTRICT REPORTED CRIME

ಅಲಕ್ಷತನ ಪ್ರಕರಣ :

ಸೇಡಂ ಠಾಣೆ:
ಶ್ರೀ ಸುಭಾಷಚಂದ್ರ ತಂದೆ ವೀರಪ್ಪಾ ಕಾಳಗಿ ಸಾ|| ಬ್ರಾಹ್ಮಣ ಗಲ್ಲಿ ಸೇಡಂ ರವರು ನನಗೆ ಶಾಂತಾಬಾಯಿ ಅಂತಾ ಅಕ್ಕ ಇದ್ದು, ಸೇಡಂ ಪಟ್ಟಣದ ವಿಠಲ ತಂದೆ ವಿಶ್ವಾನಾಥ ಐನಾಪೂರ ರವರ ಪಾಂಡುರಂಗ ದಾಲಮೀಲದಲ್ಲಿ ಕುಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಳು
ಎಂದಿನಂತೆ ದಿನಾಂಕ: 20-06-2011 ರಂದು ಮುಂಜಾನೆ ಪಾಂಡುರಂಗ ಹೆಸರಿನ ದಾಲಮಿಲಕ್ಕೆ ಕೆಲಸಕ್ಕೆ ಹೊಗಿ ದಾಲಮೀಲದಲ್ಲಿ ಕೆಲಸ ಮಾಡುವಾಗ ದಾಲ ಮಿಲ್ ದ ಬೇಲ್ಟನಲ್ಲಿ ಸಿಕ್ಕಿಬಿದ್ದು ಮೃತ ಪಟ್ಟಿರುತ್ತಾಳೆ. ಪಾಂಡುರಂಗ ದಾಲಮೀಲದ ಮಾಲಿಕರಾದ ವಿಠಲ ತಂದೆ ವಿಶ್ವಾನಾಥ ಐನಾಪೂರ, ಅನೀಲಕುಮಾರ ತಂದೆ ಸುರೇಶ ಐನಾಪೂರ ಸೇಡಂ ರವರು, ದಾಲಮೀಲದಲ್ಲಿ ಕೆಲಸ ಮಾಡುವ ಲೇಬರಗಳಿಗೆ ಯಾವುದೆ ಸುರಕ್ಷಿತ ಸಲಕರಣೆಗಳನ್ನು ನೀಡದೇ ಅಲಕ್ಷತನ ತೋರಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 June 2011

GULBARGA DISTIRCT REPORTED CRIMES

ಅಪಘಾತ ಪ್ರಕರಣ

ಶಹಾಬಾದ ನಗರ ಠಾಣೆ : ಶ್ರೀ ಪರಶುರಾಮ ತಂದೆ ಹಣಮಂತ ಅರಸಣಗಿ ಸಾ|| ಜಾಂಬವಿ ನಗರ ವಾಡಿ ತಾ|| ಚಿತ್ತಾಪೂರ. ರವರು ನಾಣು ಜೇವರ್ಗಿಯಿಂದ ಮದುವೆ ಮುಗಿಸಿಕೊಂಡು ನನ್ನ ಮೊಟಾರ ಸೈಕಲ ನಂ:ಕೆಎ-33 ಹೆಚ್-1120 ಪ್ಯಾಶನ್ ಪ್ಲಸ್ ನೇದ್ದರ ಮೇಲೆ ಶಹಾಬಾದ ಇ.ಎಸ.ಐ ಆಸ್ಪತ್ರೆ ಹತ್ತಿರ ಬರುತ್ತಿರುವಾಗ ಎದರುಗಡೆಯಿಂದ ಲಾರಿ ನಂ:ಕೆಎ-32/ಬಿ-4159[54] ನೇದ್ದು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನನಗೆ ರಕ್ತ ಗಾಯ ಪಡಿಸಿ ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸಿದೇ ಹಾಗೇ ಒಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಮಹಿಳೆ ಕೊಲೆ ಪ್ರಕರಣ :

ಶಹಾಬಾದ ನಗರ ಠಾಣೆ :ಶ್ರೀ ವಿರೇಶ ತಂದೆ ಗುರುಲಿಂಗಪ್ಪಾ ಗೊಳೆದ ಸಾ:|| ತೊನಸಹಳ್ಳಿ (ಎಸ್) ರವರು ನಾನು ಮನೆಯಲ್ಲಿದ್ದಾಗ ನಮ್ಮೂರ ಮಲ್ಲಣ್ಣಾ ಮುತ್ತಾ ಗುಡಿಯ ಪಕ್ಕದಲ್ಲಿ ಒಬ್ಬ ಹೆಣ್ಣು ಮಗಳು ಕೊಲೆಯಾಗಿದೆ ಅಂತಾ ಗೊತ್ತಾಗಿ ನಾನು ಹೋಗಿ ನೋಡಲಾಗಿ ಸದರಿ ಹೆಣ್ಣು ಮಗಳ ಮೈಮೇಲೆ ಕಪ್ಪು ಬಣ್ಣದ ಬುರಕ ಇದ್ದು ಹೊಟ್ಟೆ ಮೇಲೆ ರಕ್ತ ಹತ್ತಿದ್ದ ಕಲ್ಲು ಇದ್ದ ಕುತ್ತಿಗೆಯು ಮಣ್ಣಲ್ಲಿ ಮುಚ್ಚಿದ್ದು ಇರುತ್ತದೆ. ಸದರಿ ಹೆಣ್ಣು ಮಗಳ ಗುರುತು ಸಿಗದ ಹಾಗೆ ಕಂಡು ಬರುತ್ತದೆ. ಸದರಿಯವಳು ಅಪರಿಚಿತಳಿರುತ್ತಾಳೆ, ತಲೆಗೆ ಮುಖಕ್ಕೆ ರಕ್ತಗಾಯವಾಗಿದ್ದು ಕಂಡು ಬಂದ್ದಿದ್ದು ಸದರಿಯವಳ ವಯಸ್ಸು 20-30 ಇರಬಹುದು. ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಕಲ್ಲಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಮಾಡಿ ಕೊಲೆಮಾಡಿ ತಲೆ ಮುಖದ ಮೇಲೆ ಮಣ್ಣು ಹಾಕಿ ಹೊಟ್ಟೆಯ ಮೇಲೆ ಕಲ್ಲಿಟ್ಟು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಅಪಹರಣ ಪ್ರಕರಣ :

ಮಳಖೇಡ ಠಾಣೆ : ಶ್ರೀ ಭೀಮರಾಯ ತಂದೆ ಬಸ್ಸಣ್ಣ ಮಡಿವಾಳ ಸಾ:ಮೀನಹಾಬಾಳ ತಾ:ಸೇಡಂ ರವರು ನನ್ನ ಹೆಂಡತಿಯಾದ ಘಾಳಮ್ಮ ಇವಳು ಅಂಗನವಾಡಿ ಕಾರ್ಯಕರ್ತೆ ಅಂತಾ ಕೆಲಸ ಮಾಡುತ್ತಾಳೆ, ಅವಳಿಗೆ ನಮ್ಮೂರ ಮಲ್ಲಪ್ಪ ತಂದೆ ಚಂದಪ್ಪ ಭಗವಂತೆನವರ ಇವನು ಆಗಾಗ ಹಿಂಬಾಲಿಸಿಕೊಂಡು ಹೋಗಿ ನಾನು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ, ನೀನು ನನಗೆ ಇಷ್ಟವಾಗಿದ್ದಿ ಅಂತಾ ಹೇಳುತ್ತಿದ್ದ ಬಗ್ಗೆ ನಮಗೆ ಗೊತ್ತಾಗಿ ಅವನಿಗೆ ತಿಳಿಸಿ ಹೇಳಿದ್ದು ಇರುತ್ತದೆ. ದಿನಾಂಕ 10-6-2011 ರಂದು ಶುಕ್ರವಾರ ದಿವಸ ಮಧ್ಯಾನ ನನ್ನ ಹೆಂಡತಿಗೆ ಮಲ್ಲಪ್ಪ ತಂದೆ ಚಂದಪ್ಪ ಭಗವಂತೆನವರ ಇವನು ಜಬರದಸ್ತಿಯಿಂದ ಅಪಹರಣ ಮಾಡಿಕೊಂಡು ಹೋಗಿದ್ದು, ಇದಕ್ಕೆ ನಮ್ಮೂರ ಚಂದಪ್ಪ ತಂದೆ ಭೀಮಣ್ಣ ಭಗವಂತೆನವರ, ಜಗನ್ನಾಥ ತಂದೆ ಭೀಮಣ್ಣ ಭಗವಂತೆನವರ, ಹಾಗು ಜಗಮ್ಮ ಗಂಡ ಸತ್ಯವಾನ ಭಗವಂತೆನವರ ಸಾ|| ಎಲ್ಲರೂ ಮೀನಹಾಬಾಳ ರವರು ಅಪಹರಣ ಮಾಡಲು ಕುಮ್ಮಕ್ಕು ಕೊಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಆಳಂದ ಠಾಣೆ : ಶ್ರೀ ಶರಣಪ್ಪಾ @ ಶರಣಬಸಪಪಾ ತಂದೆ ಶಾಂತಪ್ಪಾ ಹತ್ತರಕಿ ಸಾ|| ಬಾಳನಕೆರಿ ಆಳಂದ ರವರು ನಾನು ದಿನಾಂಕ: 16-06-2011 ರಂದು ಬೆಳಗ್ಗೆ ಆಳಂದ ಬಸ್ ಸ್ಟಾಂಡದ ನಾಗೇಶನ ಗ್ಯಾರೆಜ ಮುಂದೆ ನಿಂತಾಗ ಪಟ್ಟಣದಲ್ಲಿ ಬಾಳೆನಕೇರಿ ಕ್ರಾಸ್ ಬಳಿಯ ಬಾರುದ್ವಾಲೆ ಮನೆ ಹತ್ತಿರ ನಡೆದ ಜಗಳದ ದ್ವೇಶದಿಂದ ನನಗೆ ಚನ್ನಪ್ಪಾ ತಂದೆ ಮಲ್ಲಪ್ಪಾ ಹತ್ರಕಿ ಸಂಗಡ ಇನ್ನೂ 9 ಜನರು ಜಗಳ ತೆಗೆದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ಥಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ಲೀಲ ಚಿತ್ರ ಪ್ರದರ್ಶನ ಪ್ರಕರಣ :

ಬ್ರಹ್ಮಪೂರ ಠಾಣೆ : ಶ್ರೀ ವೀರಣ್ಣ ಎಮ. ಕುಂಬಾರ ಪಿ.ಎಸ.ಐ ಬ್ರಹ್ಮಪೂರ ಠಾಣೆರವರು ನಾನು ದಿನಾಂಕ : 19-06-2011 ರಂದು ಸಾಯಂಕಾಲ 4-00 ಗಂಟೆಗೆ ಕರ್ತವ್ಯದಲ್ಲಿದ್ದಾಗ ಸುಪರ ಮಾರ್ಕೆಟ ಚವ್ವಾಣ ಬಿಲ್ಟಿಂಗ ಮೊದಲನೆ ಅಂತ್ತಸ್ತಿನ ಶಕ್ತಿ ವಿಡಿಯೋ ಥೇಟರದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಅಶ್ಲೀಲ ಚಿತ್ರ ಪ್ರದರ್ಶಿಸಿರುತ್ತಾರೆ ಅಂತಾ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಮಾನ್ಯ ರವಿ ಡಿ.ಸಿ. ಎಸ.ಪಿ (ಪ್ರೊಬೇಶನರಿ) ಸಾಹೇಬರು ಮತ್ತು ಠಾಣೆಯ ಸಿಬ್ಬಂದಿಯವರು ಕೂಡಿಕೊಂಡು ಹಾಗು ಇಬ್ಬರ ಪಂಚರ ಸಮಕ್ಷಮ ಥೇಟರ ಒಳಗಡೆ ಹೋಗಿ ನೋಡಲಾಗಿ ರತಿ ಕ್ರಿಡೆಯಲ್ಲಿ ತೊಡಗಿರುವ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸುತ್ತಿರುವವದನ್ನು ಸುಮಾರು 8-10 ಜನರು ನೋಡುತ್ತಾ ಕುಳಿತಿದ್ದು ಅಶ್ಲೀಲ ಚಿತ್ರ ಪ್ರದರ್ಶಿಸುತ್ತಿದ್ದ ಅಪರೇಟರ ದೇವಿಂದ್ರ ತಂದೆ ಮಲ್ಲಿಕಾರ್ಜುನ ಮಾವಿನಸೂರ ಸಾ|| ಕೃಷ್ಣಾ ನಗರ ಗುಲಬರ್ಗಾ ರವರನ್ನು ದಸ್ತಗಿರಿ ಮಾಡಿ ಪೈನಿರ ಕಂಪನಿಯ ಡಿ.ವಿ.ಡಿ, ಪ್ರೋಜೆಕ್ಟರ್, ಅಶ್ಲೀಲ ಕ್ಯಾಸೆಟ ಒಂದು ಟೆಕೆಟ ಬುಕ್ ಅರ್ದ ಉಪಯೋಗಿಸಿದ್ದು, ಟೀಕೆಟ ಮಾರಿದ ನಗದು ಹಣ 2450/- ರೂಪಾಯಿಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಪರೇಟರ ಮತ್ತು ಮಾಲಕನ ವಿರುದ್ದ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 June 2011

GULBARGA DISTRICT REPORTED CRIME

ಕಳ್ಳತನ ಪ್ರಕರಣ :

ರಾಘವೇಂದ್ರ ನಗರ ಠಾಣೆ :
ಶ್ರೀಮತಿ, ಸಂಗಮ್ಮ ಗಂಡ ಶಿವಶರಣಪ್ಪ ರಾಂಪೂರೆ ಸಾ|| ದೇವಿ ನಗರ ಗುಲಬರ್ಗಾ ರವರು ನಾನು ದಿನಾಂಕ 17-06-2011 ರಂದು ರಾತ್ರಿ ಮನೆಗೆ ಬೀಗ ಹಾಕಿ, ಮನೆಯ ಮೇಲೆ ಮಲಗಿದ್ದು, ಬೆಳಿಗ್ಗೆ ಎದ್ದು ಕೆಳಗೆ ಬಂದು ನೋಡಲು, ಮನೆಗೆ ಹಾಕಿದ ಕೀಲಿ ಮುರಿದಿದ್ದು, ಮನೆಯಲ್ಲಿ ಹೋಗಿ ನೋಡಲು, ಅಲಮಾರದಲ್ಲಿಟ್ಟ ಬಂಗಾರದ ಆಭರಣ ಒಂದು ಮೊಬೈಲ್ ಹಾಗು ನಗದು ಹಣ 700/-ರೂ ಹೀಗೆ ಒಟ್ಟು 93,200/- ರೂಪಾಯಿಗಳನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

18 June 2011

GULBARGA DISTRICT REPORTED CRIMES

ಇಸ್ಪೀಟ ಆಟದ ಮೇಲೆ ದಾಳಿ :

ಬ್ರಹ್ಮಪೂರ ಠಾಣೆ : ದಿನಾಂಕ: 18-06-2011 ರಂದು ಮಧ್ಯ ರಾತ್ರಿ ನಾನು ವೀರಣ್ಣ ಕುಂಬಾರ ಪಿ.ಎಸ.ಐ ಮತ್ತು ಮಾನ್ಯ ರವಿ ಎಸ.ಪಿ (ಪ್ರೋಬೆಶನರಿ) ಹಾಗು ಠಾಣೆಯ ಸಿಬ್ಬಂದಿಯವರಾದ ಶಿವಪುತ್ರಪ್ಪಾ , ರಾಜಕುಮಾರ, ಆನಂದ, ವೀರಶೈವ ಕಲ್ಯಾಣ ಮಂಟಪ ಎದುರುಗಡೆ ಸಾರ್ವಜನಿಕ ಸ್ತಳದಲ್ಲಿ ಲೈಟಿನ ಬೆಳಕಿನಲ್ಲಿ ಅಂದರ ಬಾಹರ ಇಸ್ಪೀಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರಿಂದ, ನಾವೆಲ್ಲರೂ ಹೋಗಿ ನೋಡಲಾಗಿ ಇಸ್ಪೀಟ ಜೂಜಾಟ ಆಡುತ್ತಿರುವವರ ಮೇಲೆ ಇಬ್ಬರ ಪಂಚರ ಸಮಕ್ಷಮ ದಾಳಿ ಮಾಡಿ ಹೆಸರು ವಿಚಾರಿಸಲಾಗಿ ಭರತ ತಂದೆ ತಿಮ್ಮಯ್ಯಾ ತಾಂಡೂರಕರ, ಸಿದ್ದು ತಂದೆ ಸೂರೆಕಾಂತಕರ್, ಶ್ರಾವಣ ತಂದೆ ಕಲ್ಲಪ್ಪಾ ಹಿರೇಮಠ, ಸಂತೋಷ ತಂದೆ ಭಾಗಣ್ಣ ನಾಟಿಕಾರ, ಸುಭಾಶ ತಂದೆ ನಾಗಣ್ಣ ಸರಡಗಿ, ರಾಚಯ್ಯ ತಂದೆ ಶಾಂತಲಿಂಗಯ್ಯಾ, ರಾಜಶೇಖರ ತಂದೆ ಸಿದ್ರಾಮಪ್ಪಾ, ಶರಣಬಸಪ್ಪಾ ತಂದೆ ಅಂಬಣ್ಣ, ಮಲ್ಲಿಕಾರ್ಜುನ ತಂದೆ ಸಂಗಣ್ಣ, ಶಿವಕುಮಾರ ತಂದೆ ಬಸವಣಪ್ಪಾ ಸಾ|| ಎಲ್ಲರೂ ಗುಲಬರ್ಗಾರವರಿಂದ ಒಟ್ಟು ಹಣ 10,045-00 ರೂಪಾಯಿಗಳು ಮತ್ತು ಜೂಜಾಟಕ್ಕೆ ಬಳಸಿದ ಇಸ್ಪೀಟ ಕಾರ್ಡಗಳು ಜ್ತಪಿ ಪಡಿಸಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ಇಸ್ಪೀಟ ಆಟದ ಮೇಲೆ ದಾಳಿ :

ಸ್ಟೇಶನ ಬಜಾರ ಠಾಣೆ : ದಿನಾಂಕ: 18-06-2011 ರಂದು ಮಧ್ಯರಾತ್ರಿ ನಾನು ಬಿ.ಡಿ ಬುರ್ಲಿ ಪಿ.ಎಸ.ಐ ಕರ್ತವ್ಯಲ್ಲಿದ್ದಾಗ ಜೇಸ್ಕಾಂ ಕಛೇರಿಯ ಒಳಾಂಗಣದಲ್ಲಿ ಕೆಲವು ಜನರು ಇಸ್ಪೀಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ್ದಿದರಿಂದ, ನಾನು ಮತ್ತು ಸಿಬ್ಬಂದಿಯವರು ಇಸ್ಪೀಟ ಆಡುತ್ತಿರುವವರ ಮೇಲೆ ದಾಳಿ ಮಾಡಲಾಗಿ ಮಸೂದ ಅಹ್ಮದ ಎಮ.ಎಸ.ಕೆ.ಮಿಲ್ಲ, ಬಾಬಾ ತಂದೆ ಮಹಿಮೂದ ಸ್ಟೇಶನ ಏರಿಯಾ, ಅಶೋಕ ತಾರಪೈಲ್, ಸಂಜಯ ಐವಾನ ಶಾಹಿ ರಸ್ತೆ, ಖಲೀಲ ಉಪ್ಪರ ಲೈನ, ಶಕೀಲ ಹಳೆ ಜೇವರ್ಗಿ ರಸ್ತೆ ಮತ್ತು ಸಂಗಮನಾಥ ಕಪಾಳೆ ಸಾ|| ಎಲ್ಲರೂ ಗುಲಬರ್ಗಾರವರಿಗೆ ದಸ್ತಗಿರಿ ಮಾಡಿ ಇಸ್ಪೀಟ ಜೂಜಾಟಕ್ಕೆ ಬಳಸುತ್ತಿದ್ದ ನಗದು ಹಣ 3750/- ರೂಪಾಯಿಗಳು ಮತ್ತು 52 ಇಸ್ಪೀಟ ಎಲೆಗಳು ಸದರಿಯವರಿಂದ ವಶಪಡಿಸಿಕೊಂಡು ಬಂದು ಠಾಣೆಗೆ ವರದಿ ನೀಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಕಳವು ಪ್ರಕರಣ :

ಬ್ರಹ್ಮಪೂರ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಚಂದ್ರಶೇಖರ ಕೋಬಾಳ ಸಾ|| ಶಹಾಬಾದ ತಾ|| ಚಿತ್ತಾಪೂರ ಗುಲಬರ್ಗಾ ರವರು, ದಿನಾಂಕ: 14-04-2011 ರಂದು ಮದ್ಯಾಹ್ನ ತಮ್ಮ ಹಿರೋ ಹೊಂಡಾ ಕೆಎ 32 ಜೆ 8851 ಅಂದಾಜು ಕಿಮ್ಮತ್ತು 20,000-00 ನೇದ್ದು, ಜವಳಿ ಕಾಂಪ್ಲೇಕ್ಸ ಎದುರುಗಡೆ ನಿಲ್ಲಿದಾಗ, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ, ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :
ವಾಡಿ ಠಾಣೆ :
ಶ್ರೀಮತಿ ಸುಭದ್ರಭಾಯಿ ಗಂಡ ಗೋವಿಂದ ಕೈತಾಪೂರಕರ ಸಾ|| ಮರಗಮ್ಮ ಗುಡಿ ಹತ್ತಿರ ವಾಡಿ ಗುಲಬರ್ಗಾ ರವರು ನನ್ನ ಮಗನಾದ ಹಣಮಂತ @ ಪಾಪ್ಯಾ ಇತನು ತಾನು ಪ್ರೀತಿಸಿದ ಹುಡುಗಿಗೆ ಮದುವೆಯಾಗುದಕ್ಕೆ ಬೇಡ ಅಂದಿದಕ್ಕೆ, ತಾನು ಕೊರ್ಟ ಮದುವೆಯಾಗಿ ಬೇರೆ ಕಡೆ ಮನೆ ಮಾಡಿಕೊಂಡು ವಾಸವಾಗಿದ್ದು ನಾನು ನನ್ನ ಮಗಳ ಮದುವೆ ಪ್ರಯುಕ್ತ ಮದುವೆಗೆ ಬರಲು ಹೇಳಿ ಬಂದಿರುತ್ತೆನೆ. ದಿನಾಂಕ : 17-06-2011 ರಂದು ಹಣಮಂತ ಇತನು ತನ್ನ ಹೆಂಡಿತ ಭಾರತಿ, ಅತ್ತೆ ಸುಶೀಲಭಾಯಿ ರವರೊಂದಿಗೆ ನಾವಿರುವ ಮನೆಗೆ ಬಂದು ನಮಗೆ ಮನೆಯಿಂದ ಹೊರಗಡೆ ಹಾಕಿ ಮತ್ತೆ ಮದುವೆಗೆ ಕರೆಯುವದಕ್ಕೆ ಬಂದಿದ್ದಿಯಾ ಅಂತಾ ನನಗೆ ಅವಾಚ್ಯವಾಗಿ ಬೈದು ನನಗೆ ಕೆಳಗೆ ಕೆಡವಿದಾಗ ನನ್ನ ಮತ್ತೊಬ್ಬ ಮಗ ಲಕ್ಷ್ಮಣ ಇತನು ಯಾಕೊ ತಾಯಿಗೆ ಹೊಡೆತಿಯಾ ಅಂದಿದಕ್ಕೆ ಹಣಮಂತ ಇತನು ಹೆಂಡತಿ ಮತ್ತು ಅತ್ತೆ ಪ್ರಚೋದನೆಯಿಂದ ಲಕ್ಷ್ಮಣನ ಕುತ್ತಿಗಿಗೆ ಹಿಡಿದು ಎದೆಗೆ ಜೋರಾಗಿ ಗುದ್ದಿದರಿಂದ ಲಕ್ಷ್ಮಣ ಇತನು ಸ್ಥಳದಲ್ಲಿಯೇ ಮರಣ ಹೊಂದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ಮಾದನ ಹಿಪ್ಪರಗಾ ಠಾಣೆ: ಶ್ರೀಮಂತ ತಂದೆ ಶಾಂತಪ್ಪಾ ಹೊಸಳ್ಳಿ ಸಾ|| ಝಳಕಿ (ಬಿ) ರವರು ನಾನು ದಿನಾಂಕ: 15-06-2011 ರಂದು ಮನೆಯಲ್ಲಿದ್ದಾಗ ಚಿದಾನಂದ ಹೊಸಳಿ, ಮದುಕರನ, ಸುದಾಕರ, ಪ್ರಭಾಕರ, ಮಹಾದೇವಿ ಸಾ|| ಎಲ್ಲರೂ ಝಳಕಿ ರವರು ನನ್ನ ತಂದೆಗೆ ಮತ್ತು ನನ್ನ ಹೆಂಡತಿಗೆ ಜಗಳ ತೆಗೆದು ಕೈಯಿಂದ ಬಡಿಗೆಯಿಂದ ಹೊಡೆದು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 June 2011

GULBARGA DISTRICT REPORTED CRIMES

ದರೋಡೆ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಪ್ರವೀಣ ಕುಮಾರ ತಂದೆ ಹಣಮಂತರಾವ ಹೇರೂರ ಸಾ|| ರಾಜಾಪೂರ ಗುಲಬರ್ಗಾ ರವರು ನಾನು ಮತ್ತು ಪ್ರಿಯಾಂಕ ಶಹಾಬಾದ ಇಬ್ಬರೂ ಕೂಡಿಕೊಂಡು ಕಮಲಾಫೂರಕ್ಕೆ ಡಿ.ಎಡ್ ಪ್ರವೇಶದ ಅರ್ಜಿಗಳನ್ನು ತರುವ ಕುರಿತು ಮೋಟಾರ ಸೈಕಲ್ ಮೇಲೆ ದಿನಾಂಕ 16/06/2011 ರಂದು ಹೋಗುವಾಗ, ಹುಮನಾಬಾದ ರೋಡಿನ ಬಿರಾದಾರ ಪೆಟ್ರೋಲ್ ಸಮೀಪ ಒಂದು ಆಟೋದಲ್ಲಿ 5 -6 ಜನರು ಬಂದವರೆ, ನಮ್ಮ ಮೋಟಾರ ಸೈಕಲನ್ನು ತಡೆದು ಅವರೆಲ್ಲರೂ ನಮ್ಮ ಬಳಿ ಇರುವ ಸಾಮಾನುಗಳನ್ನು ಕೊಡುವದಕ್ಕೆ ಹೇಳುತ್ತಾ ಅದರಲ್ಲಿ ಒಬ್ಬನು ನನ್ನ ಗಾಡಿಯ ಕೀಯನ್ನು ತೆಗೆದುಕೊಂಡು ಮತ್ತೊಬ್ಬನ ನನ್ನ ಬಲಗೈ ಹಿಡಿದು ತೀರುವಿ ಗುಪ್ತಗಾಯಗೊಳಿಸಿ ಜಬರದಸ್ತಿಯಿಂದ ನನ್ನ ಹತ್ತಿರ ಇರುವ ಮೊಬಾಯಿಲ್ ಹಾಗು ನಗದು ಹಣ 1000 /- ರೂ. ಹೀಗೆ ಒಟ್ಟು ಎಲ್ಲಾ ಸೇರಿ 3000 /- ರೂ. ಕಿಮ್ಮತ್ತಿನದು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ, ಅವರೆಲ್ಲರೂ ಸುಮಾರು 20 ರಿಂದ 25 ವರ್ಷದವರು ಇರುತ್ತಾರೆ ಅಂತಾ ಇತ್ಯಾದಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಶಹಾಬಾದ ನಗರ ಠಾಣೆ :ಶ್ರೀ ಅಂಬುಬಾಯಿ ಗಂಡ ಶಂಕರ ರಾಠೋಡ ಸಾ|| ದೇವನ ತೆಗನೂರ ತಾಂಡ ನಾನು ನನ್ನ ಗಂಡ ಮಕ್ಕಳೊಂದಿಗೆ ದಿನಾಂಕ:14/06/2011 ರಂದು ರಾತ್ರಿ ಕೋಣೆಗೆ ಬೀಗ ಹಾಕಿ ಪಕ್ಕದ ರೂಮನಲ್ಲಿ ಮಲಗಿಕೊಂಡಿದ್ದು, ಬೆಳಗ್ಗೆ ಎದ್ದು ನೋಡಲಾಗಿ, ಮನೆಯ ಬಾಗಿಲು ತೆಗೆದಿದ್ದು ಇರುವುದು ಕಂಡು ಗಾಬರಿಯಾಗಿ ಒಳಗೆ ಹೋಗಿ ನೊಡಲಾಗಿ, ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಮನೆಯ ಬೀಗ ಮುರಿದು ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಒಟ್ಟು 96,000/- ರೂ ಬೆಲೆ ಉಳ್ಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ಸ್ಟೇಶನ ಬಜಾರ ಠಾಣೆ :
ಶ್ರೀ ರಾಮಾಚಾರ್ಯ ತಂದೆ ರಾಘವೇಂದ್ರಚಾರ್ಯ ಸಾ|| ವೆಂಕಟೇಶ ನಗರ ಗುಲಬರ್ಗಾ ರವರು ನಾನು ದಿನಾಂಕ: 13-06-2011 ರಂದು ಮನೆಯಲ್ಲಿ ಮಲಗಿದ್ದಾಗ ಯಾರೋ ಕಳ್ಳರು ಮನೆಯಲ್ಲಿ ಪ್ರವೇಶ ಮಾಡಿ ಚಾರ್ಚಿಗೆ ಹಚ್ಚಿದ ಒಂದು ನೊಕಿಯಾ ಮೊಬಾಯಿಲ್, ನಗದು ಹಣ 6040/- ಮತ್ತು ಬೆಳ್ಳಿ ಸಾಮಾನುಗಳು ಹೀಗೆ ಒಟ್ಟು 31,040/- ನೇದ್ದುವಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ಸ್ಟೇಶನ ಬಜಾರ ಠಾಣೆ :
ಶ್ರೀ ಎಸ.ಬಿ ಪತಂಗಿ ಪ್ರಾಚಾರ್ಯರು ಶಂಕರಗೌಡ ಪೊಲೀಸ್ ಪಾಟೀಲ್ ಅಂದೋಲಾ ಇಂಡಿಪೆಡೆಂಟ್ ಪಿಯು ಕಾಲೇಜ ಗುಲಬರ್ಗಾ ರವರು ನಮ್ಮ ಕಾಲೇಜಿನ ರೂಮಿನ ಬಾಗೀಲ ಕೀಲಿ ಮುರಿದು ಯಾರೋ ಕಳ್ಳರು ಪಿ.ವಿ.ಸಿ ಕೇಬಲ್ 20,000/- ನೇದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 June 2011

GULBARGA DISTRICT REPORTED CRIME

ಅಪಘಾತ ಪ್ರಕರಣ :

ಆಳಂದ ಠಾಣೆ : ಶ್ರೀ ಮಹಾಂತಪ್ಪಾ ತಂದೆ ಶ್ರೀಮಂತರಾವ ಸಾ|| ಮೋಘಾ (ಕೆ) ತಾ|| ಆಳಂದ ರವರು ನನ್ನ ಅಣ್ಣನಾದ ಚಂದ್ರಾಮಪ್ಪಾ ಇವರು ಮೋಘಾ (ಕೆ) ಗ್ರಾಮಕ್ಕೆ ಹೋಗುವ ಕುರಿತು ಆಳಂದ ಬಸ್ ನಿಲ್ದಾಣದ ಪ್ಲಾಟ ಪಾರ್ಮದಲ್ಲಿ ನಿಂತಿದ್ದಾಗ ಸರ್ಕಾರಿ ಬಸ್ ನಂ: ಕೆಎ 32 ಎಪ್- 1208 ಏದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಚಂದ್ರಮಪ್ಪಾ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ಸ್ಥಲದಲ್ಲಿಯೇ ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTIRICT REPORTED CRIMES

ಕಳವು ಪ್ರಕರಣ :     

ಗ್ರಾಮೀಣ ಠಾಣೆ : ಶ್ರೀ ಕಲ್ಲಪ್ಪಾ ತಂದೆ ವೀರಪಾಕ್ಷಪ್ಪಾ ಹೆಗ್ಗಣೆ ಸಾ|| ಶಿವಾಜಿ ನಗರ ಗುಲಬರ್ಗಾ ರವರು ನಮ್ಮ ದಾಲ್ ಮಿಲ್ ಕಪನೂರ 2ನೇ ಹಂತದ ಇಂಡಸ್ಟ್ರೀಯಲ್ ಏರಿಯದಲ್ಲಿ ಹೊಸದಾಗಿ ನಿರ್ಮಿಸಿ ದಾಲ ಮಿಲದ ಒಳಗೆ ಯಂತ್ರೊಪಕರಣ ಮತ್ತು ಕೇಬಲ್ ವೈರಗಳು ಜೋಡಸಿ ದಿನಾಂಕ 11/06/2011 ರಂದು ನಮ್ಮ ಮುನೀಮ ರಾತ್ರಿ 8 ಗಂಟೆಯವರಗೆ ಇದ್ದು ಕೀಲಿ ಹಾಕಿಕೊಂಡು ದಿನಾಂಕ 12/06/2011 ರ ಬೆಳಗಿನ ಜಾವ ದಾಲ ಮಿಲಗಿಗೆ ಬಂದು ಚಾವಿ ತೆಗೆದು ನೋಡಲಾಗಿ ಮಿಲಿಗೆ ಜೋಡಿಸಿದ ಹೊಸ ಕೇಬಲ ವೈರಗಳು ಇರಲಿಲ್ಲ ಯಂತ್ರೊಪಕರಣಕ್ಕೆ ಜೊಡನೆ ಮಾಡಿರು ಕೇಬಲ ವೈರ ಅಂದಾಜು 1 ಲಕ್ಷ ರೂ. ಬೇಲೆ ಬಾಳುವದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.
    

ಕೊಲೆ ಪ್ರಕರಣ :

ದೇವಲ ಗಾಣಗಾಪೂರ ಠಾಣೆ : ಶ್ರೀ ತುಕರಾಮ ತಂದೆ ಹಿರೆಗಪ್ಪ ಹಿರೆಕುರ ಸಾ|| ಕೆರಕನಳ್ಳಿ ತಾ|| ಅಫಜಲಪುರ ರವರು ನಾನು ಮತ್ತು ಕೊಲೆಯಾದ ಮಾಹಾಂತಪ್ಪ ತಂದೆ ಶಿವಲಿಂಗಪ್ಪ ಜಮಾದಾರ ಸಾ: ಕೆರಕನಳ್ಳಿ ಜೊತೆಗೆ ಹೀರೊಹುಂಡಾ ಸ್ಪೆಲೆಂಡರ್‌ ಮೋಟಾರ ಸೈಕಲ್‌ ನಂ.ಕೆ.ಎ.32. ಟಿ.ಆರ್‌. ನಂ.8878 ನೇದ್ದರ ಮೇಲೆ ದೇಸಾಯಿಕಲ್ಲೂರಿನಿಂದ ಕೆರಕನಳ್ಳಿಗೆ ದಿನಾಂಕ:15-06-2011 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಬರುತ್ತಿರುವಾಗ ಘೋಳನೂರ ಗ್ರಾಮ ದಾಟಿದ ನಂತರ ಅಮೋಗಿ ಜಮಾದಾರ ರವರ ಹೊಲದ ಹತ್ತಿರ ರೋಡಿನ ಮೇಲೆ ಭೀಮರಾಯ ಅಗಸಿ ಇತರೆ ಆರು ಜನರು ಜೀಪಿನಲ್ಲಿ ಬಂದು ತಮ್ಮ ಜೀಪನ್ನು ಅತೀವೇಗದಿಂದ ನಡೆಸಿಕೊಂಡು ಬಂದು ನಾವು ಕುಳಿತುಕೊಂಡು ಹೊರಟ್ಟಿದ್ದ ಮೋಟಾರ ಸೈಕಲ್‌ಗೆ ಹಾಯಿಸಿದ್ದು ನಾವಿಬ್ಬರೂ ಕೆಳಗೆ ಬಿದ್ದಿದ್ದು ಮಾಹಾಂತಪ್ಪನನ್ನು ಭೀಮರಾಯ, ಪರಸಪ್ಪಾ, ಮತ್ತು ರಮೇಶ ಅಗಸಿ ಹಾಘು ಲಕ್ಷ್ಮಣ, ಮುದ್ದಪ್ಪಾ ಮಹಾಂತಪ್ಪಾ ಕಲ್ಲಪ್ಪಾ ಸಾ|| ದೇಸಾಯಿ ಕಲ್ಲೂರ ರವರೆಲ್ಲರೂ ಸುತ್ತು ವರೆದು ಮಾರಕಾಸ್ತ್ರಗಳಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿ ಪಿಸ್ತೂಲಿನಿಂದ ತೆಲೆಗೆ ಗುಂಡು ಹಾರಿಸಿ ಕೊಲೆ ಮಾಡಿರುತ್ತಾರೆ, ಕೊಲೆಯಾದ ಮಹಾಂತಪ್ಪಾ ಇತನು ಒಂದುವರೆ ವರ್ಷದ ಹಿಂದೆ ಹೆಂಡತಿಯಾದ ರೇಣುಕಾ ಇವಳನ್ನು ಮೈಗೆ ಊರಿ ಹಚ್ಚಿ ಕೊಲೆ ಮಾಡಿರುತ್ತಾನೆ ಹಳೆ ದ್ವೇಷದ ಸಂಬಂಧ ಮಹಾಂತಪ್ಪಾ ಇತನನ್ನು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 June 2011

GULBARGA DISTRICT REPORTED CRIMES

ಕಾಣೆಯಾದ ಪ್ರಕರಣ :

ಅಶೋಕ ನಗರ ಪೊಲೀಸ್ ಠಾಣೆ : ಶ್ರೀ ಮಲ್ಲೇಶ ತಂದೆ ಹಣಮಂತ ವಡ್ಡನಡಗಿ ಸಾ: ಬಸವ ನಗರ ಗುಲಬರ್ಗಾ ರವರು ನನ್ನ ಮಗಳು ರೇಣುಕಾ ಮತ್ತು ಅಳಿಯ ಕೃಷ್ಣಾ ರವರು ದಿನಾಂಕ 09/06/2011 ರಂದು ಪೋನಾದಿಂದ ನಮಗೆ ಮಾತನಾಡುವ ಕುರಿತು ಗುಲಬರ್ಗಾಕ್ಕೆ ಬಂದ್ದಿದ್ದು, ದಿನಾಂಕ 12/06/2011 ರಂದು ಬೆಳಿಗ್ಗೆ ಅಳಿಯ ಕೃಷ್ಣಾ ತಂದೆ ಶರಣಪ್ಪ ಬೆಂಡೆ ವಯ: 35 ಸಾ: ಗೋಕಲೇ ನಗರ ಪೋನಾ ಇತನು ನಮಗೆ ಯಾವುದೇ ರೀತಿಯ ಮಾಹಿತಿ ತಿಳಿಸದೇ ಎಲ್ಲೋ ಹೋಗಿದ್ದು ಇರುತ್ತದೆ. ನಾವು ಎಲ್ಲಾ ಕಡೆ ಹುಡಕಾಡಿದರು ಸಿಕ್ಕಿರುವದಿಲ್ಲ ಕೃಷ್ಣಾ ಇತನು ಕಳೆದ 5-6 ವರ್ಷದಿಂದ ಟಿ.ಬಿ ಕಾಯಿಲೆಯಿಂದ ಬಳಲುತ್ತಿದ್ದು ಅಲ್ಲದೆ ಈಗ 4-5 ತಿಂಗಳಿಂದ ಮಾನಸಿಕ ಅಸ್ವಸ್ಥನಾಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಚಿಂಚೋಳಿ ಠಾಣೆ : ಶ್ರೀ ಮಹಮದ ಶಪೀ ತಂದೆ ಅಬ್ದುಲ್ ವಾಹೀದ ಮೀಯಾ ಸಾ|| ಹಳ್ಳೀಖೇಢ ತಾ|| ಹುಮನಬಾದ ಬೀದರ ರವರು ನನ್ನ ತಮ್ಮನಾದ ಮಹಮದ ಮೋಸಿನ್ ಮತ್ತು ಕ್ಲೀನರನಾದ ಮಹ್ಮದ ಮೈಬೂಬ ಇಬ್ಬರೂ ಕೂಡಿಕೊಂಡು ಲಾರಿ ನಂ. ಕೆ.ಎ 39, 5889 ನೇದ್ದನ್ನು ಚಲಾಯಿಸಿಕೊಂಡು ತಾಂಡೂರಿಗೆ ಬರುವಾಗ ಮಾರ್ಗ ಮಧ್ಯದಲ್ಲಿ ತುಮಕುಂಟಾ ಘಾಟದಲ್ಲಿ ನನ್ನ ತಮ್ಮನಾದ ಮಹ್ಮದ ಮೋಸೀನ್ ಇತನು ಲಾರಿಯನ್ನು ಅತೀವೇಗವಾಗಿ ಹಾಗೂ ನಿಸ್ಕಾಳಜೀತನದಿಂದ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಲಾರಿಯು ಪಲ್ಟಿಯಾಗಿ ಬಿದ್ದಿದ್ದು. ತಮ್ಮ ಮೋಸೀನ್ ಇತನು ಲಾರಿಯ ಕೇಳಗೆ ಸಿಕ್ಕಿಬಿದ್ದು ಭಾರಿ ರಕ್ತ ಹಾಗೂ ಗುಪ್ತ ಗಾಯ ಆಗಿದ್ದರಿಂದ ಸ್ಥಳದಲ್ಲಿಯೇ ಸತ್ತಿದ್ದು ಕ್ಲೀನರ ಮಹ್ಮದ ಮೈಬೂಬ ಇತನಿಗೆ ಕೈಯಿಗೆ ಪೆಟ್ಟಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTIRCT REPORTED CRIMES

ದರೋಡೆ ಪ್ರಕರಣ :

ಚೌಕ ಠಾಣೆ :ಶ್ರೀ ಅಪ್ಪಾರಾವ ತಂದೆ ಸಿದ್ರಾಮಪ್ಪ ಪಾಟೀಲ ಸಾಃ ಸಿರಗಾಪೂರ ಹಾಃವಃ ಭವಾನಿ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಮತ್ತು ಮಗಳು ಕೂಡಿಕೊಂಡು ಇಂದು ದಿನಾಂಕ: 14-06-2011 ರಂದು ರಾತ್ರಿ 09-30 ಗಂಟೆಯ ಸುಮಾರಿಗೆ ರಾಮನಗರದಿಂದ ಭವಾನಿ ನಗರದ ನಮ್ಮ ಮನೆಯ ಕಡೆಗೆ ನಡೆದುಕೊಂಡು ಬರುತಿದ್ದಾಗ ಭವಾನಿ ನಗರದ ರಸ್ತೆಯ ಮೇಲೆ ಎದುರಿನಿಂದ ಯಾರೋ ಇಬ್ಬರು ಮೊಟಾರ ಸೈಕಲ ಮೇಲೆ ಬಂದು ನನ್ನ ಮಗಳ ಕೊರಳಲ್ಲಿದ್ದ 4 ತೋಲೆ ಬಂಗಾರದ ಚೈನ ಮತ್ತು ಅರ್ಧಾ ತೊಲೆ ಬಂಗಾರದ ತಾಳಿ ಹೀಗೆ ಒಟ್ಟು ಅ||ಕಿ|| 90,000/- ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಿತ್ತಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಪ್ರಯತ್ನ :

ಚೌಕ ಠಾಣೆ :ಶ್ರೀ ಬಾಬು ತಂದೆ ಮೈಲಾರಿ ಹುಲಿ ಸಾ|| ಸಂಜೀವ ನಗರ ಗುಲಬರ್ಗ ರವರು ನಾನು ಮತ್ತು ಶಂಕರ ಜಮಾದಾರ ಮತ್ತು ಪವಣ್ಣ ದಯಣ್ಣನವರ ಕೂಡಿಕೊಂಡು ಸಂಗಮ ಟಾಕೀಜ ಹತ್ತಿರ ಬಟ್ಟೆ ಖರೀದಿಸಲು ಬಂದಾಗ ನನಗೆ ಸತೀಶ ತಂದೆ ವೆಂಕಟಸ್ವಾಮಿ ಇತನು ಅವಾಚ್ಯವಾಗಿ ಬೈದು ಎಲ್.ಐ.ಸಿ ಆಫೀಸ ಹತ್ತಿರ ಇರುವ ನೈಸ ಕ್ಲಬ್ ಕಂಪೌಂಡ ಒಳಗಡೆ ಕರೆದುಕೊಂಡು ಹೋಗಿ ಸತೀಶ, ಹೀರಾ ಬಸವನಗರ, ಪಿಂಟು ಇಂದ್ರಾನಗರ , ಶರಣು ಗಾಜಿಪೂರ ಮತ್ತು ಇತರ ಇಬ್ಬರು ಕೂಡಿ ಕೈಯಲ್ಲಿ ಮಚ್ಚು, ಬಡಿಗೆ ಹಿಡಿದುಕೊಂಡು ನನಗೆ ಜಾತಿ ಎತ್ತಿ ಬೈದು ಪಿಂಟು ಇತನು ಮಚ್ಚಿನಿಂದ ಬಲಗೈಗೆ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ಶಂಕರ ಇತನಿಗೆ ಹಿರಾ ಬಸವನಗರ ಮಚ್ಚಿನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ ಎಲ್ಲರೂ ಕೂಡಿಕೊಂಡು ಮಚ್ಚನಿಂದ ಮತ್ತು ಕಲ್ಲಿನಿಂದ ಮತ್ತು ಕಾಲಿನಿಂದ ಒದ್ದು ಜೀವದ ಭಯ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲಕ್ಷತನ ಪ್ರಕರಣ :

ಬ್ರಹ್ಮಪೂರ ಠಾಣೆ :ಶ್ರೀ ಏಡುಕೊಂಡಲ ತಂದೆ ವೆಂಕಟೇಶರಾವ ಸಾ|| ಪದಲಿ ಜಿಲ್ಲೆ || ಓಂಗಲ್ ಆಂದ್ರ ಪ್ರದೇಶ ರವರು ನಾನು ಹಾಗು ಶೇಖನಾಗು ಇಂದು ದಿನಾಂಕ: 14-06-2011 ರಂದು ಬೆಳಿಗ್ಗೆ ಸರ್ಕಾರಿ ಆಸ್ಪತ್ರೆಯ ಹತ್ತಿರ ಹೊಸದಾಗಿ ನಿರ್ಮಿಸುತ್ತಿರುವ ಆಸ್ಪತ್ರೆಯ ಗೋಡೆಗೆ ಪ್ಲಾಸ್ಟರ ಮಾಡುವ ಸಲುವಾಗಿ ಹೋಗಿದ್ದು ಶೇಖನಾಗು ಇತನು ಉಸುಕು ಮತ್ತು ಸಿಮೆಂಟ ತುಂಬಿದ ರಾಮಟೆರಿಯಲ್ ಬುಟ್ಟಿಯಲ್ಲಿ ಹಾಕಿಕೊಂಡು ತಲೆಯ ಮೇಲೆ ಹೊತ್ತಿಕೊಂಡು ಮೇಲೆ ಏರುತ್ತಿರುವಾಗ ಕಾಲು ಜಾರಿ ಬೇಸಮೆಂಟ ಪ್ಲೋರ ಮೇಲೆ ಬಿದ್ದು ರಕ್ತಗಾಯ ಆಗಿದ್ದು ಮತ್ತು ಎಡಗಾಲಿಗೆ ಗಾಯವಾಗಿ ಪ್ರಕ್ಚರ್ ಆದಂತೆ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಣಾಂತಿಕ ಹಲ್ಲೆ :
ಅಶೋಕ ನಗರ ಠಾಣೆ :
ಶ್ರೀ ಬಸವರಾಜ ತಂದೆ ಕುಪೇಂದ್ರ ದಂಡ್ರಾ ಕ್ರೂಶರ ಗಾಡಿ ನಂ:ಕೆಎ-49 6416 ನೇದ್ದರ ಮಾಲೀಕ ಹಾಗೂ ಚಾಲಕ ಸಾ: ಜೋಗುರು ರವರು ನಾನು ಜೋಗುರುದಿಂದ ಗುಲಬರ್ಗಾಕ್ಕೆ ಪ್ಯಾಸೆಂಜರ ತುಂಬಿಕೊಂಡು ಹೋಗಿ ಬರುವದು ಮಾಡುತ್ತೆನೆ. ಇಂದು ಸಾಯಂಕಾಲ ಸಹ ಜೋಗುರದಿಂದ ಗುಲಬರ್ಗಾಕ್ಕೆ ಬಂದು ಪ್ಯಾಂಸೇಜರ ಕೂಡಿಸಿಕೊಂಡು ಜೋಗುರಗೆ ಹೋಗಬೇಕೆಂದು ಗಾಡಿ ಚಾಲು ಮಾಡುವಷ್ಠರಲ್ಲಿಯೆ ತ್ರಿಶೂಲ್ ಬಾರ ಕಡೆಯಿಂದ ಇಬ್ಬರೂ ಹುಡುಗರು ಬಂದವರೇ ಗಾಡಿ ನಿಲ್ಲಿಸಲೇ ಅಂತಾ ಅವಾಚ್ಯಚಾಗಿ ಬೈದು ಇಬ್ಬರೂ ಒಮ್ಮಿದೊಮ್ಮೇಲೆ ಕೈಯಿಂದ ಮುಖದ ಮೇಲೆ ಎದೆಯ ಮೆಲೆ ಹೊಡೆಯಲು ಪ್ರಾರಂಭಿಸಿದರು. ನನಗೆ ಯಾಕೆ ಹೊಡೆಯುತ್ತಿರಿ ಅಂತಾ ಕೇಳಿದರೂ ನನ್ನ ಮಾತು ಕೇಳದೇ ಅವಾಚ್ಯವಾಗಿ ಬೈದು ಇನ್ನೂ ಇಬ್ಬರೂ ಕೂಡಿಕೊಂಡು ಗಾಡಿಯಿಂದ ಇಳಿಸಿ ಏಳೆದುಕೊಂಡು ಹೋಗಿ ಎಲ್ಲರೂ ಸೇರಿಕೊಂಡು ಗುಪ್ತಾಂಗಕ್ಕೆ ಹೊಡೆದು ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 June 2011

GULBARGA DISTRICT REPORTED CRIME

ಅಪಹರಣ ಪ್ರಕರಣ :

ನರೋಣಾ ಠಾಣೆ : ಶ್ರೀ.ತುಳಜಪ್ಪ ತಂದೆ ಗುಂಡಪ್ಪ ತಳಕೇರಿ ಸಾ:ಕುದಮುಡ್ ರವರು ನನ್ನ ಮಗಳಾದ ನಿರ್ಮಲಾ ಇವಳು ಅಂಬಲಗಾ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ದಿನಾಲು ತಮ್ಮ ಗೆಳತಿಯರೊಂದಿಗೆ ನಮ್ಮೂರಿನಿಂದ ಅಂಬಲಗಾ ಗ್ರಾಮಕ್ಕೆ ಹೋಗಿ ಬರುವದು ಮಾಡುತ್ತಾಳೆ. ಮಗಳ ಗೆಳತಿಯಾದ ಸಂಗಮ್ಮ ಇಬ್ಬರೂ ಕೂಡಿ ಶಾಳೆಗೆ ಹೋಗುತ್ತಿರುವಾಗ ನಿರ್ಮಲಾ ಇವಳಿಗೆ ಮಹೇಶ ತಂದೆ ಹಣಮಂತ ಮೇಲಿನಕೇರಿ ಇತನು ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES


:: ಪತ್ರಿಕಾ ಪ್ರಕಟಣೆ ::

ದಿನಾಂಕ: 9-6-11 ರಂದು ಶ್ರೀ ಮಲ್ಲಯ್ಯ ತಂದೆ ಸೈದಪ್ಪ ಗುತ್ತೇದಾರ ಸಾ: ಇಜೇರಿ ಇವರು ಜೇವರಗಿ ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ಈಗ 2-3 ದಿವಸಗಳ ಹಿಂದೆ ಜೇವರಗಿ-ಶಹಾಪೂರ ರೋಡಿನ ಪಕ್ಕದಲ್ಲಿ ಚಿಗರಳ್ಳಿ ಸೀಮೆಯಲ್ಲಿರುವ ಅರಣ್ಯ ಇಲಾಖೆ ಜಮೀನಿನಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಒಂದು ಬಲವಾದ ಕಾರಣಕ್ಕಾಗಿ ಅಂದಾಜು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ಹೆಣ್ಣು ಮಗಳಿಗೆ ಅವಳು ಉಟ್ಟುಕೊಂಡ ಸಿರೇಯಿಂದಲೆ ಕುತ್ತಿಗೆಗೆ ಉರಲು ಹಾಕಿ ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಹೆಣವನ್ನು ಸ್ಥಳದಿಂದ ಸ್ವಲ್ಪ ದೂರ ಎಳೆದು ಕಂಠಿಯ ಕೆಳಗಡೆ ಬಿಸಾಕಿ ಹೋಗಿರುತ್ತಾರೆ. ಅಂತಾ ಕೊಟ್ಟ ಅರ್ಜಿಯ ಮೇಲಿಂದ ಜೇವರಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ತನಿಖೆ ಕಾಲಕ್ಕೆ ಮೃತ ದೇಹವು ಬಸಮ್ಮ ಗಂಡ ಬೈಲಪ್ಪ ಮ್ಯಾಳಗಿ ವಯ: 46 ವರ್ಷ ಸಾ: ಶಹಾಪೂರ ಇವಳದು ಅಂತಾ ಅವರ ಸಂಬಂಧಿಕರು ಗುರುತಿಸಿ ಅವಳಿಗೆ ದಿ:7-6-11 ರಂದು ಶಹಾಪೂರ ಪಟ್ಟಣದ ಆಯೇಶಾ ಗಂಡ ಸಲೀಂ ಪಾಶಾ ಸಗರ ಇವಳು ತನ್ನ ಸಂಗಡ ಮನೆಯಿಂದ ಕರೆದುಕೊಂಡು ಹೋಗಿದ್ದು ಅವಳೆ ಬಸಮ್ಮಳಿಗೆ ಕೊಲೆ ಮಾಡಿಸಿರಬಹುದು ಅಂತಾ ಹೇಳಿಕೆ ನೀಡಿದ್ದರಿಂದ ಅಂದಿನಿಂದ ಸಂಶಯಾಸ್ಪದ ಆಯೇಶಾ ಇವಳಿಗೆ ವಿಚಾರಣೆಗೊಳಪಡಿಸಿದಾಗ ಅವಳು ಹೇಳಿದ್ದೇನೆಂದರೆ, ನಾನು ಬೇರೆಯವರ ಸಂಗಡ ಅನೈತಿಕ ಸಂಬಂಧ ಇಟ್ಟುಕೊಂಡ ವಿಷಯ ಬಸಮ್ಮ ಇವಳು ಹೊರ ದೇಶದಲ್ಲಿರುವ ನನ್ನ ಗಂಡನಿಗೆ ಮಾಹಿತಿ ತಿಳಿಸುತ್ತಿರುವದರಿಂದ ಗುಲಬರ್ಗಾ ನಗರದ 1. ಅರವಿಂದ ತಂದೆ ಕಾಂತಪ್ಪ ಕೂಡಿ 2. ಖಾಸಿಂಸಾಬ ತಂದೆ ಭಕ್ತರಸಾಬ ಮುಲ್ಲಾ 3. ರಮೇಶ ತಂದೆ ಮಹೇಶ ರಾಠೋಡ 4. ಯಲ್ಲಪ್ಪ ತಂದೆ ಮಾರುತಿ ದೊಡ್ಡಮನಿ ಇವರಿಗೆ ಬಸಮ್ಮಳಿಗೆ ಕೊಲೆ ಮಾಡಲು 15000/- ರೂ. ಕೊಡುವದಾಗಿ ಹೇಳಿದಕ್ಕೆ ಅವರು ಒಪ್ಪಿಕೊಂಡಿದ್ದರಿಂದ ಎಲ್ಲರೂ ಕೂಡಿ ಅವಳಿಗೆ ಕೊಲೆ ಮಾಡಿರುತ್ತೇವೆ. ಅಂತಾ ಹೇಳಿದಕ್ಕೆ ಇನ್ನೂಳಿದ 4 ಜನ ಆರೋಪಿತರನ್ನು ದಸ್ತಗೀರಿ ಮಾಡಿಕೊಂಡು ಬಂದು ವಿಚಾರಣೆ ಮಾಡಿದ್ದು, ದಿ: 7-6-11 ರಂದು ಆಯೇಶಾ ಇವಳು ನನ್ನ ಗಂಡ ಹೊರದೇಶದಿಂದ ಜೇವರಗಿಗೆ ಪಾರ್ಸಲ ಕಳುಹಿಸುತ್ತಿದ್ದಾನೆ ಜೇವರಗಿಗೆ ಹೋಗಿ ತೆಗೆದುಕೊಂಡು ಬರೋಣ ನಡಿ ಅಂತಾ ನಂಬಿಸಿ ಬಸಮ್ಮಳಿಗೆ ತನ್ನ ಸಂಗಡ ಜೇವರಗಿಗೆ ಕರೆದುಕೊಂಡು ಬಂದಾಗ ಮೇಲ್ಕಂಡ ಆರೋಪಿತರು ಗುಲಬರ್ಗಾದಿಂದ ಅಟೋ ನಂ, ಕೆಎ-32-ಬಿ-2851 ರಲ್ಲಿ ಚಿಗರಳ್ಳಿ ಕ್ರಾಸಿಗೆ ಬಂದು ಇಳಿದು ನಂತರ ಆರೋಪಿ ಖಾಸೀಂಸಾಬನು ಮರಳಿ ಜೇವರಗಿಗೆ ಬಂದು ಬಸಮ್ಮ ಮತ್ತು ಆಯೇಶಾ ಇಬ್ಬರಿಗೆ ಅದೆ ಅಟೋದಲ್ಲಿ ಶಹಾಪೂರಕ್ಕೆ ಹೋಗುವ ನೆಪ ಮಾಡಿಕೊಂಡು ಚಿಗರಳ್ಳಿ ಸಿಮೇಯ ಅರಣ್ಯ ಇಲಾಖೆಯ ಜಮೀನಿನವರೆಗೆ ಕರೆದುಕೊಂಡು ಹೋಗಿ ಅಲ್ಲಿ ಅಟೋ ನಿಲ್ಲಿಸಿ ಎಲ್ಲರೂ ಕೂಡಿ ಬಸಮ್ಮಳಿಗೆ ರೋಡಿನ ಪಕ್ಕದ ಕಂಠಿಯ ಹತ್ತಿರ ಕರೆದುಕೊಂಡು ಹೋಗಿ ಕುತ್ತಿಗೆ ಒತ್ತಿ ಕೊಲೆ ಮಾಡಿ ಶವ ಯಾರಿಗೂ ಕಾಣಬಾರದೆಂದು ಕಂಠಿಯ ಕೆಳಗೆ ಎಳೆದು ಹಾಕಿರುವದಾಗಿ ಒಪ್ಪಿಕೊಂಡಿರುತ್ತಾರೆ. ತನಿಖೆ ನಂತರ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

13 June 2011

GULBARGA DISTRICT REPROTED CRIMES

ಹಲ್ಲೆ ಪ್ರಕರಣ :

ಆಳಂದ ಠಾಣೆ :
ಶ್ರೀಮತಿ, ಭೀಮಭಾಯಿ ಗಂಡ ಗುರುಬಸಪ್ಪಾ ನಡಗೇರಿ ರವರು ದಿನಾಂಕ: 09-06-2011 ರಂದು ನನ್ನ ಮನೆ ಸಮೀಪ ರಮೇಶ ಭದ್ರೆ ಶರಣಪ್ಪಾ ನಡಗೇರಿ ಮತ್ತು ತುಳಜರಾಮ ರವರು ಬಂದು ಹಳೆ ದ್ವೇಶದ ಸಂಬಂದ ಅವಾಚ್ಯ ಶಬ್ದಗಳಿಂದ ಬೈದು ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ರಕ್ತಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಪ್ರಕರಣ :
ಚೌಕ ಠಾಣೆ :

ಶ್ರೀ
ಮಹಮದ ನವೀದ ತಂದೆ ಮಹಮದ ನಿಜಾಮೊದ್ದಿನ ಬಂದೂಕವಾಲ ಸಾ|| ಗುಲಬರ್ಗಾ ರವರು ನನ್ನ ತಮ್ಮನಾದ
ಸಾಜೀದ ಇತನು ದಿನಾಂಕ: 10-06-2011 ರಂದು ನಾವೆಲ್ಲರೂ ಮನೆಯಲ್ಲಿದ್ದಾಗ
ನೆಹರು ಗಂಜನಲ್ಲಿರುವ ವರ್ಕ ಶಾಪ್ಗೆ ಹೋಗಿ ಬರುತ್ತೆನೆಂದು ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


12 June 2011

GULBARGA DIST REPORTED CRIMES

ಶಹಾಬಾದ ನಗರ ಠಾಣೆ :ಶ್ರೀ ಬಸವರಾಜ ತಂದೆ ಶರಣಯ್ಯಾ ಮಠಪತಿ ರವರು, ನನ್ನ ಹಳೆ ಗೆಳೆಯ ಶಿಗ್ಗಾಂವ ತಾಲ್ಲೂಕಿನ ಪಾಣೆಗಟ್ಟಿ ಗ್ರಾಮದ ಮಂಜುನಾಥ ತಂದೆ ಶಿವಲಿಂಗಯ್ಯ ಹಿರೇಮಠ ಈತನು ನನಗೆ ಸುಮಾರು ದಿನಗಳಿಂದ ತನ್ನ ಮೊಬೈಲ ನಂಬರದಿಂದ ನನ್ನ ಮೊಬೈಲ ನಂಬರಿಗೆ ನೇದ್ದಕ್ಕೆ ಕರೆಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು, ಪೋನ ಯಾಕೆ ರಿಸೀವ ಮಾಡುತ್ತಿಲ್ಲಾ ಅಂತಾ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ. ಕಳುಹಿಸಬೇಡ ಅಂತಾ ಹೇಳಿದರೂ ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಲಘಾಣಗಾಪುರ ಠಾಣೆ :ಶ್ರೀ ಲಕ್ಷ್ಮಣ ತಂದೆ ಕಾಮಣ್ಣಾ ಕಾಂಬಳೆ ಸಾ: ಸಂಗಾಪುರ ರವರು, ದಿ: 11-06-11 ರಂದು ಮಧ್ಯಾಹ್ನ ನಾನು ಹೊಲಕ್ಕೆ ಹೋಗುವಾಗ ನಮ್ಮೂರಿನ ಯಲ್ಲಾಲಿಂಗ ತಂದೆ ಮಲ್ಲೇಶಿ ಪೂಜಾರಿ ಇತನು ನನ್ನನು ತಡೆದು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಘಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಪುರ ಠಾಣೆ :ಶ್ರೀ ಶಮಶೋದ್ದೀನ್ ತಂದೆ ಎಸ್ ಹಸನ ಹುಸೇನ್ ಸಾ|| ಪಾಚಾಪುರ ಎರಿಯಾ ರೋಜಾ ಗುಲಬರ್ಗಾ ರವರು, ದಿ:30-05-11 ರಂದು ಸಾಯಂಕಾಲ ಸುಪರಮಾರ್ಕೇಟದ ಮಹಾರಾಜ ಹೋಟಲ್ ಬಳಿ ನಿಲ್ಲಿಸಿದ್ದ ನನ್ನ ಹಿರೋ ಹೋಂಡಾ ಸ್ಪ್ಲೆಂಡರ ಪ್ಲಸ್ ನಂ. ಕೆಎ 32 ಕೆ 1671 ಅಂದಾಜು ರೂ. 23,000/- ಮೌಲ್ಯದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES



ಕುಖ್ಯಾತ ಅಂತರ ರಾಜ್ಯ ರಸ್ತೆ ದರೋಡೆ ಕೋರರ ಬಂಧನ

ಖಚಿತ ಮಾಹಿತಿ ಮೇರೆಗೆ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು
ಮಾನ್ಯಶ್ರೀ ಪ್ರವೀಣ ಪವಾರ ಮಧುಕರ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಗುಲಬರ್ಗಾ ನಗರದ ಕೇಂದ್ರ ಬಸ್ಸ ನಿಲ್ದಾಣ ಹಾಗೂ ನಗರದ ಹೊರ ವಲಯದ ರಾಣೇಶ ಪೀರ್ ದರ್ಗಾ ದ ಹತ್ತಿರ ದಾಳಿ ಮಾಡಿ 4 ಕುಖ್ಯಾತ ದರೋಡೆಖೋರರನ್ನು ಬಂಧಿಸಿ ಸದರಿಯವರಿಂದ ದರೋಡೆಗೊಳಗಾದ ಸುಮಾರು 2 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಮೊಬೈಲ್ ಫೋನ್ ಗಳು ನಗದು ಹಣ ಹಾಗೂ ದರೋಡೆಗೆ ಬಳಸಿದ ಆಟೋರಿಕ್ಷಾ ವಾಹನ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡು 4 ಜನ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಿನಾಂಕ:05-06-2011 ರ ರಾತ್ರಿ ಒಂದೇ ದಿನ ಎರಡು ರಸ್ತೆ ದರೋಡೆ ಪ್ರಕರಣಗಳು ವರದಿಯಾಗಿದ್ದು ಒಂದು ಪ್ರಕರಣ ಫರತಾಬಾದ್ ಠಾಣೆಯಲ್ಲಿ ದಾಖಲಾಗಿದ್ದು ಇನ್ನೊಂದು ಪ್ರಕರಣ ಆಳಂದ ರಸ್ತೆಯಲ್ಲಿ ಘಟಿಸಿದ್ದು ಈ ಬಗ್ಗೆ ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಶ್ರೀ ಖಾಜಾ ಹುಸೇನ್ ಇನಾಮದಾರ್ ಜೆಸ್ಕಾಂ ಇಂಜಿನಿಯರ್ ನರೋಣಾ ರವರ ಫಿರ್ಯಾದಿ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಶ್ರೀ ಖಾಜಾ ಹುಸೇನ್ ಇನಾಮದಾರ್ ರವರು ನರೋಣಾದಿಂದ ತಮ್ಮ ಸಂಭಂಧಿಕರೊಂದಿಗೆ ಗುಲಬರ್ಗಾಕ್ಕೆ ಬರುವ ಕಾಲಕ್ಕೆ ದರೋಡೆಕೋರರು ಖಾಜಾ ಹುಸೇನ್ ರವರ ವಾಹನವನ್ನು ತಡೆಗಟ್ಟಿ ಅವರಿಗೆ ಚಾಕು ಹಾಗೂ ಬಡಿಗೆಯಿಂದ ಹೊಡೆಬಡೆ ಮಾಡಿ ಅವರ ಬಳಿಯಿದ್ದ ನಗದು ಹಣ, ಬಂಗಾರದ ಆಭರಣಗಳು, ಮೊಬೈಲ್ ಫೋನ್ ಗಳು, ಕಾಗದ ಪತ್ತಗಳನ್ನು ದೋಚಿ ಪರಾರಿಯಾಗಿದ್ದು ಈ ಸದರಿ ಪ್ರಕರಣಗಳ ಪತ್ತೆಗಾಗಿ ಮಾನ್ಯಶ್ರೀ ಬಿ, ವ್ಹಿ ಯಲ್ಲಪ್ಪ ಹೆಚ್ಚುವರಿ ಎಸ್‌ಪಿ ಸಾಹೇಬರು ಗುಲಬರ್ಗಾ ಹಾಗೂ ಶ್ರೀ ಎಮ್‌, ವ್ಹಿ, ಸೂರ್ಯವಂಶಿ ಡಿವೈಎಸ್‌ಪಿ ಗ್ರಾಮೀಣ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದು ರಚನೆ ಮಾಡಿದ್ದು. ಸದರಿ ವಿಶೇಷ ತಂಡದಲ್ಲಿ ಶ್ರೀ ರವಿ ಡಿಸಿ ಐಪಿಎಸ್‌ (ಪ್ರೋ) ಹಾಗೂ ಶ್ರೀ ಬಿ, ಪಿ ಚಂದ್ರಶೇಖರ ಪಿಐ, ಶ್ರೀ ಬಸೀರ ಪಟೇಲ ಪಿಐ , ಶ್ರೀಮತಿ ವಿಜಯಲಕ್ಷ್ಮಿ ಸಿಪಿಐ ಗ್ರಾಮೀಣ ಹಾಗೂ ಶ್ರೀ ಆರ್‌, ವ್ಹಿ ಹಳಗೋದಿ ಪಿಎಸ್‌ಐ ಗ್ರಾಮೀಣ ಠಾಣೆ ಹಾಗೂ ಪಂಡಿತ ಸಗರ ಪಿಎಸ್‌ಐ ವಿವಿ ಠಾಣೆ ಗುಲಬರ್ಗಾ ಹಾಗೂ ಸಿಬ್ಬಂದಿಯವರಾದ ಲಕ್ಕಪ್ಪ ಹೆಚ್‌ಸಿ 36, ಪ್ರಭುಲಿಂಗ ಹೆಚ್‌ಸಿ 359, ಮೊಹಿಜ್ಜೋದ್ದೀನ ಪಿಸಿ 690, ಆನಂದ ಪಿಸಿ 986, ಪ್ರಭಾಕರ ಪಿಸಿ 44 ಚನ್ನಬಸವಯ್ಯ ಪಿಸಿ 1049 , ನರಸಿಂಹಲು
ಪಿಸಿ 08 ಅಸ್ಲಂ ಪಾಶಾ ಪಿಸಿ 966 ಕಂಠೆಪ್ಪ ಪಿಸಿ 796, ಹಾಗೂ ಗುಲಬರ್ಗಾ ಗ್ರಾಮೀಣ ಠಾಣೆ ಜೀಪ ಚಾಲಕ ಮಲ್ಲಿಕಾರ್ಜುನ ಪಿಸಿ 1694 ಹಾಗೂ ಪಾರುಬಾಯಿ ಮಪಿಸಿ 1253 ವಿವಿ ಠಾಣೆ ಗುಲಬರ್ಗಾ ಇರುತ್ತಾರೆ. ಸದರಿ ಎಲ್ಲರೂ ಕೂಡಿ ದಿನಾಂಕ 11/6/2011 ರಂದು ಗುಲಬರ್ಗಾ ಗ್ರಾಮೀಣ ಠಾಣೆಯ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ಅತ್ಯಂತ ವೈಜ್ಞಾನಿಕ ರೀತಿಯಿಂದ ತನಿಖೆ ಕೈಕೊಂಡು ಪ್ರಕರಣ ಪತ್ತೆ ಹಚ್ಚಿ ಆರೋಪಿತರಾದ 1) ಮಹ್ಮದಮೋಸೀನ ತಂ/ ಮಹ್ಮದ ಮೌಲಾಲಿ ವ: 19 ಜಾ:ಮುಸ್ಲಿಂ ಉ:ವಿದ್ಯಾರ್ಥಿ ಸಾ: ಎಸ್‌ಎಮ್‌ ಕೃಷ್ಣಾ ಕಾಲನಿ ಗುಲ್ಬರ್ಗಾ 2) ಪ್ರಕಾಶ ತಂದೆ ಮಹಾದೇವಪ್ಪ ವಠಾರ ಸಾ; ಕರೆಬೋಸಗಾ 3. ಶೇಖ ಸುಲ್ತಾನ ತಂದೆ ಶೇಖ ಸಲೀಮ ಸಾ: ಎಸ್‌ಎಮ್‌ ಕೃಷ್ಣಾ ಕಾಲನಿ ಗುಲ್ಬರ್ಗಾ 4. ಶೇಖಸಲೀಮ ತಂದೆ ಶೇಖ ಯಾಸೀನಸಾಬ ಆಟೋ ನಂ ಕೆಎ 32 4942 ಸಾ: ಎಸ್‌ಎಮ್‌ ಕೃಷ್ಣಾ ಕಾಲನಿ ಗುಲ್ಬರ್ಗಾ ಈ ನಾಲ್ಕು ಜನರನ್ನು ದಸ್ತಗಿರಿ ಮಾಡಿ ಅವರುಗಳ ರಸ್ತೆ ದರೋಡೆಯಲ್ಲಿ ದೋಚಿದಂತಹ 1. ಎರಡು ನೋಕಿಯೋ ಮೋಬೈಲ, 2 ಒಂದು ರಿಲಾಯನ್ಸ್‌ ಮೋಬೈಲ 3. ಒಂದು ಬೋರಮಳ ಸರ 4.ಕಿವಿ ಓಲೆ 5) ಆಟೋ ನಂ ಕೆ 32 4942 ಹಾಗೂ ಎಟಿಎಮ್‌‌ ಕಾರ್ಡ ಗುರುತಿನ ಪತ್ರಗಳನ್ನು ವಗೈರೆ ಒಟ್ಟು 2 ಲಕ್ಷ್ ಕಿಮ್ತತಿನ ವಸ್ತುಗಳನ್ನು ದರೋಡೆ ಕೋರರಿಂದ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ತಲೆ ಮರೆಯಿಸಿಕೊಂಡ ಆರೋಪಿತರ ಪತ್ತೆ ಕಾರ್ಯ ಜಾರಿಯಲ್ಲಿ ಇರುತ್ತದೆ. ತನಿಖೆ ನಂತರ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸದರಿ ತಂಡವು ವೈಜ್ಞಾನಿಕ ರೀತಿಯಿಂದ ತನಿಖೆ ಕೈಕೊಂಡು ರಸ್ತೆ ದರೋಡೆ ಪ್ರಕರಣವನ್ನು ಪತ್ತೆ ಮಾಡಿದ ಕಾರ್ಯಾವನ್ನು ಮಾನ್ಯ ಎಸ್‌‌ಪಿ ಸಾಹೇಬರು ಮೆಚ್ಚುಗೆ ವ್ಯಕ್ತಪಡಿಸಿದರು.

11 June 2011

ಕಳ್ಳತನ ಪ್ರಕರಣ :

ಅಶೋಕ ನಗರ ಠಾಣೆ : ಶ್ರೀ ರಾಜು ತಂದೆ ಕೃಷ್ಣಾಜಿ ಪತಂಗೇ ಸಾ: ಪ್ಲಾಟ ನಂ. 58 ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ನನ್ನ ಮೋಟಾರ ಸೈಕಲ್ ನಂ. ಕೆ.ಎ-32 ಎಲ್-5006 ಬಜಾಜ ಪ್ಲಸರ್ 150 ಸಿ.ಸಿ. ಕಂದು ಬಣ್ಣದ ವಾಹನ ಅ.ಕಿ. 25000/- ರೂ ಬೇಲೆವುಳ್ಳದ್ದು ಜಿ.ಡಿ.ಎ ಲೇಔಟದ ಅಲಾಟೇ ಕಾಂಪ್ಲೇಕ್ಸದ ಮುಂದುಗಡೆ ನಿಲ್ಲಿಸಿದ ಮೋಟರ ಸೈಕಲ್ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಮಲ್ಲಣ್ಣ ತಂದೆ ಭೀಮಶ್ಯಾ ಮೇಳಕುಂದಿ ಸಾ:ಹೀರಾಪೂರ ತಾ: ಜಿ: ಗುಲಬರ್ಗಾ ರವರು ನಾನು ಮನೆಯ ಬಾಗಿಲು ಖುಲ್ಲಾ ಇಟ್ಟು ಮಲಗಿಕೊಂಡಿದ್ದು ಮನೆಯಲ್ಲಿಟ್ಟ 4 ಮೋಬೈಲ ಹಾಗೂ ಸೋನಾಟಾ ಕೈಗಡಿಯಾರ ಹಾಗೂ ನನ್ನ ತಮ್ಮ ಸಂಗಣ್ಣ ಇತನ ಜೇಬಿನಲ್ಲಿದ್ದ 16000/- ರೂಪಾಯಿ ನಗದು ಹಣವನ್ನು ಯಾರೂ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 June 2011

GULBARGA DIST REPORTED CRIMES

ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ ಪ್ರಕರಣ :-
ಸ್ಟೇಷನ ಬಜಾರ ಠಾಣೆ :
ಶ್ರೀ ಶ್ರಿಮಂತ ತಂದೆ ಸೈಬಣ್ಣ ಪಟ್ಟೇದಾರ ಹಾವ|| ಪಿ.ಡಬ್ಲು.ಡಿ ಕ್ವಾಟರ್ಸ ಹಳೇ ಜೇವರ್ಗಿ ರಸ್ತೆ ಗುಲಬರ್ಗಾ ರವರು, ದಿ: 08-06-11 ರಂದು ಅಮರನಾಥ.ಎನ್.ಪಾಟೀಲ ಅಧ್ಯಕ್ಷರು (ಹೆಚ್.ಕೆ.ಎ.ಡಿ.ಬಿ) ಕಛೇರಿ ಗುಲಬರ್ಗಾ ಸಂಗಡ 15-20 ಜನರು ನನಗೆ ಮನೆಗೆ ಕರೆದು ಅವಾಚ್ಯ ಶಬ್ದಗಳಿಂದ ಬೈಯ್ದು ನಿನಗೆ ಎಷ್ಟು ಸೊಕ್ಕು, ಕರೆದರು ಬರುತ್ತಿಲ್ಲಾ ಮೇಡಂ ಇವರಿಗೆ ನಾನು ಬಂದಿದ್ದು ತಿಳಿಸು ಅಂತಾ ಹೇಳಿದರೂ ನೀನು ಯಾಕೆ ತಿಳಿಸಲಿಲ್ಲಾ ಅಂದಾಗ ನಿವೇನು ನನಗೆ ಹೇಳಿಲ್ಲಾ ಸರ್ ಆದ್ದರಿಂದ ತಿಳಿಸಿಲ್ಲಾ ಅಂತಾ ನಾನು ಹೇಳಿದ್ದು, ಆಗ ಅದ್ಯಕ್ಷರು ಮತ್ತೆ ಅವಾಚ್ಯ ಶಬ್ದಗಳಿಂದ ಬೈಯ್ದು, ಜಾತಿ ನಿಂದನೆ ಮಾಡಿ ಹೊಡೆ-ಬಡೆ ಮಾಡಿದ್ದು ಅಲ್ಲದೇ, ಕೆಳಗಡೆ ನಿಂತ 15-20 ಜನರಿಗೆ ಕರೆಯಿಸಿ ಹೊಡೆಬಡೆ ಮಾಡಿಸಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ :-
ಚಿಂಚೋಳಿ ಠಾಣೆ :
ಶ್ರೀ ಶಂಕರ ತಂದೆ ಕುಮ್ಲಾನಾಯಕ ರಾಠೋಡ ಸಾ|| ಕುಮ್ಲಾನಾಯಕ ತಾಂಡಾ ಚೆನ್ನೂರ ರವರು, ನಾನು ಮತ್ತು ನನ್ನ ತಾಯಿ ಪುನಿಬಾಯಿ ಮತ್ತು ತಂದೆ ಕುಮ್ಲಾನಾಯಕ ರಾಠೋಡ, ಮೂರು ಜನ ನಮ್ಮ ಹೊಲದಲ್ಲಿ ಬಿತ್ತುದ್ದಿದ್ದಾಗ ಬಾಜು ಹೋಲದವರಾದ ಚನ್ನೂರ ಗ್ರಾಮದ ರಾಜೇಪ್ಪಾ ತಂದೆ ವಿಠ್ಠಲ್ ಮುಸ್ತರಿ , ಹಣಮಂತ ತಂದೆ ವೀಠ್ಠಲ್ ಮುಸ್ತರಿ, ಶಾಂತಪ್ಪಾ ತಂದೆ ವೀಠ್ಠಲ್ ಮುಸ್ತರಿ, ಪ್ರಭಾವತಿ ಗಂಡ ರಾಜೇಪ್ಪಾ ಮುಸ್ತರಿ, ಜಗದೇವಿ ಗಂಡ ಪುಂಡಲೀಕ ಮುಸ್ತರಿ, ಹಾಗೂ ರೇಣುಖಾ ಗಂಡ ವೈಜೇಪ್ಪಾ ಮುಸ್ತರಿ ಈ ಆರು ಜನರು ಕೂಡಿಕೊಂಡು ನಮ್ಮ ಹೊಲದೊಳಗೆ ಅತೀಕ್ರಮ ಪ್ರವೇಶ ಮಾಡಿ ನಿನ್ನ ಎತ್ತುಗಳು ನನ್ನ ಹೋಲದಲ್ಲಿ ಯಾಕೇ ಬಂದಿವೆ? ಅಂತಾ ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು, ಹೊಡೆ ಬಡೆ ಮಾಡಿದ್ದು, ಬಿಡಿಸಲು ಬಂದ ನಮ್ಮ ತಂಗಿಯಾದ ಅಂಜುನಾಬಾಯಿ ಇವಳಿಗೂ ಹೊಡೆ ಬಡೆ ಮಾಡಿರುತ್ತಾರೆ. ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತುತ್ತಾರೆ. ಕಾರಣ ನಮಗೆ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :-
ಎಂ.ಬಿ.ನಗರ ಠಾಣೆ :
ಶ್ರೀ.ಮಾಬುಸಾಬ ತಂದೆ ಗೋಕುಲಸಾಬ ಅರಗಂಜಿ ಸಾ|| ಮುದುಗಲ್ ತಾ;ಲಿಂಗಸೂರ ಜಿ:ರಾಯಚೂರ ಹಾವ. ಜಾಗೃತಿ ಕಾಲೋನಿ ಗುಲಬರ್ಗಾ.ರವರು, ದಿ: 28-05-11 ರಂದು ಸ್ಪಂದನ ಸ್ಪೂರ್ತಿ ಫೈನಾನ್ಸ ಗುಲಬರ್ಗಾ-3 ನೆದ್ದರ ಬ್ರ್ಯಾಂಚಗೆ ಸಿಬಾಜಿ ಅನಿಮಿ ಎಂಬುವವರು ಮುಖ್ಯ ಕಛೇರಿಯಿಂದ ( ಹೆಚ.ಓ) ಬ್ಯ್ರಾಂಚ ಮ್ಯಾನೇಜರ ಆಗಿ ತರಬೇತಿಗಾಗಿ ಬಂದಿದ್ದು ರಾತ್ರಿ ನನ್ನೊಂದಿಗೆ ಇರುತ್ತಿದ್ದು . ಹೀಗಿದ್ದು ದಿನಾಂಕ.8-6-2011 ರಂದು ರಾತ್ರಿ 12-00 ಗಂಟೆಯ ಸುಮಾರಿಗೆ ನಮ್ಮ ಬ್ಯಾಂಕನಲ್ಲಿ ಸಿಬ್ಬಂದಿಯವರಾದ ಅನೀಲ್ , ಪ್ರಕಾಶ , ಬನದೇಶ್ವರ ಎಲ್ಲರೂ ಒಂದು ರೂಮಿನಲ್ಲಿ ಮಲಗಿಕೊಂಡರು ನಾನು ಮತ್ತು ಸಿಬಾಜಿ ಅನಿಮಿ ಇಬ್ಬರು ಲಾಕರ ರೂಮಿನಲ್ಲಿ ಮಲಗಿಕೊಂಡಾಗ ರಾತ್ರಿ ವೇಳೆ ನನ್ನ ತಲೆದಿಂಬಿನ ಕೆಳಗೆ ಇದ್ದ ಲಾಕರ ಚಾವಿಯನ್ನು ಸಿಬಾಜಿ ಅನಿಮಿ ತೆಗೆದುಕೊಂಡು, ಲಾಕರದಲ್ಲಿ ಇದ್ದ 2,32,360=50/- ರೂ ಮತ್ತು ನನ್ನ ಮೋಬಾಲ ಅಕಿ.1000/- ರೂ ಬೆಲೆಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ. ಕಾರಣ ಅವನನ್ನು ಪತ್ತೆ ಹಚ್ಚಿ ಅವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :-
ಚೌಕ ಠಾಣೆ :
ಶ್ರೀ ಶಿವಪುತ್ರಪ್ಪಾ ತಂದೆ ಚೆನ್ನಪ್ಪ ಚಿಂಚೋಳಿ ಸಾ: ಮಹಾಂತ ನಗರ ಗುಲಬರ್ಗಾ ರವರು, ನಾನು ದಿ: 09-06-11 ರಂದು ನೆಹರು ಗಂಜದ ಹೆಚ್ ಬಿ & ಕಂಪನಿಯ ಮಾಲಿಕರಿಗೆ ಭೇಟಿಯಾಗಲು ನನ್ನ ಕಾರಿನಲ್ಲಿ ಹೋಗಿದ್ದು, ಭೇಟಿಯಾಗಿ ಮರಳಿ ಬರುವಷ್ಟರಲ್ಲಿ ಯಾರೋ ಅಪರಿಚಿತ ಕಳ್ಳರು ನನ್ನ ಕಾರಿನ ಗ್ಲಾಸನ್ನು ಒಡೆದು ಕಾರನಲ್ಲಿದ್ದ ನಗದು ಹಣ 61,550/- ರೂ. ಇದ್ದ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಶವ ಪತ್ತೆ :-
ಜೇವರ್ಗಿ ಠಾಣೆ :
ಶ್ರೀ ಮಲ್ಲಯ್ಯ ತಂದೆ ಸೈದಪ್ಪಾ ಗುತ್ತೆದಾರ ಸಾ: ಇಜೇರಿ ತಾ: ಜೇವರ್ಗಿ ರವರು, ಜೇವರ್ಗಿ – ಶಹಾಪುರ ರೋಡಿನ ಪೂರ್ವಕ್ಕೆ ಚಿಗರಳ್ಳಿ ಸೀಮೇಯಲ್ಲಿರುವ ಅರಣ್ಯ ಇಲಾಖೆಯ ಜಮೀನಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಅಪರಿಚಿತ ಹೆಣ್ಣು ಮಗಳನ್ನು ಕೊಲೆ ಮಾಡಿ ಶವವನ್ನು ತಂದು ಹಾಕಿದ್ದು, ಮೈಮೇಲೆ ಹಸಿರು ಬಣ್ಣದ ಒಳಗೆ ಕಪ್ಪು ಚೌಕಡಿಯ ಗೆರೆಯಿದ್ದ ಪಾಲಿಸ್ಟರ ಸೀರೆ, ಬಿಳಿ ಬಣ್ಣದ ಜಂಪರ, ಬಿಳಿ ಬಣ್ಣದ ಲಂಗಾ ಧರಿಸಿದ್ದು, ಅಂದಾಜು 40 ರಿಂದ 45 ವರ್ಷ ವಯಸ್ಸಿನವಳಿರಬಹುದು. ಕಾರಣ ಕೊಲೆ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 June 2011

GULBARGA DIST REPORTED CRIMES

ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಬೆದರಿಕೆ ಹಾಕಿದ ಪ್ರಕರಣ :-

ಬ್ರಹ್ಮಪುರ ಠಾಣೆ : ಶ್ರೀಮತಿ ರಮಾದೇವಿ ಮಾಡಗಿ ಸಾ|| ಜಗತ್ ಗುಲಬರ್ಗಾ ರವರು, ಮಹ್ಮದ ಹಾರುನ ಖಾದರ ಮತ್ತು ಇಮ್ರಾನ್ ತಂದೆ ಜಾವಿದ ಇವರು ಸುಮಾರು ವರ್ಷಗಳಿಂದ ನಮ್ಮ ಕಾಂಪ್ಲೆಕ್ಸನಲ್ಲಿ ಅನಧಿಕೃತವಾಗಿ ಬಾಡಿಗೆ ಇರುತ್ತಾರೆ. ನಾನು ಬಾಡಿಗೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈಯ್ದು ಬಾಡಿಗೆ ಕೊಡುವುದಿಲ್ಲ. ಈ ವಿಷಯದ ಬಗ್ಗೆ ನಮ್ಮ ವಿರುದ್ದ ದೂರು ಕೊಟ್ಟಲ್ಲಿ ನನಗೆ ಹಾಗೂ ನನ್ನ ಮಕ್ಕಳಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಮದ್ಯ ವಶ ಇಬ್ಬರ ಬಂಧನ :-
ರೋಜಾ ಠಾಣೆ :
ರಾಮಜಿ ನಗರದ ಬುದ್ದ ಮಂದಿರದ ಗಲ್ಲಿಯಲ್ಲಿ ಯಾವುದೇ ದಾಖಲಾತಿ ಇಲ್ಲದೇ ಅನಧಿಕೃತವಾಗಿ ಕ್ವಾಟರ ಬಾಟಲ್ ಗಳನ್ನು ಮಾರಾಟ ಮಾಡುತ್ತಿದ್ದ ಅರ್ಜುನ್ ತಂದೆ ಮಲಕಪ್ಪ ಕುಂಟೆ ಮತ್ತು ನೀಲಕಂಠ ತಂದೆ ಹಣಮಂತರಾಯ ಇಬ್ಬರೂ ಸಾ|| ರಾಮಜಿ ನಗೆರ ಗುಲಬರ್ಗಾ ರವರನ್ನು ಬಂಧಿಸಿದ್ದು, ಬಂಧಿತರಿಂದ ಯು.ಎಸ್ ವಿಸ್ಕಿಯ 180 ಎಮ್ಎಲ್ ದ ಬಾಟಲ್ ಗಳನ್ನು ಮತ್ತು ನಗದು ಹಣ 1075/- ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈದ್ಯರ ನಿರ್ಲಕ್ಷತನದಿಂದ ಸಾವು ಸಂಭವಿಸಿದ ಪ್ರಕರಣ :-
ಅಶೋಕ ನಗರ ಠಾಣೆ :ಶ್ರೀ ಅಮೃತ ತಂದೆ ಬಾಪಣ್ಣ ಸಿಂಧೆ ಸಾ|| ರಾಮನಗರ ರಿಂಗ ರೋಡ ಗುಲಬರ್ಗಾ ರವರು ತಮ್ಮ ಹೆಂಡತಿ ಸರಸ್ವತಿ ಇವರಿಗೆ ಹೆರಿಗೆ ಕುರಿತು ಸಂಗಮೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿಸಿ ನಂತರ ಅದೇ ಆಸ್ಪತ್ರೆಯಲ್ಲಿ ದಿ:
16/03/2011 ರಂದು ಡಾ|| ಇಂದಿರಾ ಹಾಗೂ ಸಹ ವೈದ್ಯಾದಿಕಾರಿಗಳು ಪ್ಯಾಮಿಲಿ ಪ್ಲಾನಿಂಗ ಆಫರೆಶನ್ ಮಾಡಿ ಡಿಚಾರ್ಜ ಮಾಡಿದ ನಂತರ ಆಫರೆಶನ್ ಮಾಡಿದ ಸ್ಥಳದಲ್ಲಿ ಹೊಲಿಗೆ ಬಿಚ್ಚಿದ್ದರಿಂದ ಪುನಃ ಸಂಗಮೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿ ಮತ್ತೊಮ್ಮೆ ಆಫರೆಶನ್ ಮಾಡಿದ್ದು ನಂತರ ಐದಾರು ದಿವಸಗಳ ನಂತರ ಎದೆ ಕೆಳಗಡೆ ಗುಳ್ಳಿ ಆಗಿದ್ದು ಅದು ಬೆಳೆಯುತ್ತಾ ದೊಡ್ಡದಾಗಿ ಅದಕ್ಕೂ ಸಹ ಆಫರೆಶನ್ ಮಾಡಬೆಕಾಗಿದೆ ಎಂದು ದಿ:05- 04-11 ರಂದು ಮತ್ತೊಮ್ಮೆ ಆಫರೆಶನ್ ಮಾಡಿದ್ದು ಹೀಗೆ 3 ಭಾರಿ ಆಫರೆಶನ್ ಮಾಡಿದ್ದರಿಂದ ನನ್ನ ಹೆಂಡತಿ ಸರಸ್ವತಿ ಪರಸ್ಥಿತಿ ತುಂಬಾ ಕೆಟ್ಟು ಹೊಗಿದ್ದು ಗುಣಮುಖ ಆಗದೆ ಇರುವದರಿಂದ ದಿ:11/04/2011 ರಂದು ಡಾ||ಇಂದಿರಾರವರು ಬಸವೇಶ್ವರ ಆಸ್ಪತ್ರೆಗೆ ಪತ್ರ ಬರೆದು ಕಳುಹಿಸಿಕೊಟ್ಟಿದ್ದು ಬಸವೇಶ್ವರ ಆಸ್ಪತ್ರೆಯಲ್ಲಿ ಡಾ|| ಸುರೇಶ ಚಿಂಚೋಳಿಕರ ಮತ್ತು ಅವರ ಸಹಾಯಕರು ನನಗೆ ಪೆಸೆಂಟಗೆ ಎನಾಗಿದೆ ಅಂತಾ ಯಾವುದೆ ವಿಷಯ ಅಲ್ಲಿಯೂ ಸಹ ತಿಳಿಸದೆ ಐ.ಸಿ.ಯು ರೂಂನಲ್ಲಿ 2 ದಿವಸ ಉಪಚಾರ ಮಾಡಿ ಮತ್ತೆ ಪರಸ್ಥೀತಿ ಬಿಗಡಾಯಿದ್ದರಿಂದ ಹೆಚ್ಚಿನ ಉಪಚಾರಕ್ಕಾಗಿ ದಿ:13/04/2011 ರಂದು ಬಸವೇಶ್ವರ ಆಸ್ಪತ್ರೆಯಿಂದ ನನ್ನ ಹೆಂಡತಿಗೆ ಸೊಲ್ಲಾಪೂರದ ಯಶೋಧರಾ ಆಸ್ಪತ್ರೆಗೆ ತೆಗೆದುಕೊಂಡು ಹೊಗಿದ್ದು ಅಲ್ಲಿಯ ವೈದ್ಯಾಧಿಕಾರಿಗಳು ನನ್ನ ಹೆಂಡತಿಗೆ ಪರಿಕ್ಷಿಸಿ ನಿಮ್ಮ ಹೆಂಡತಿಗೆ 3 ಬಾರಿ ಆಫರೆಶನ ಮಾಡಿದ್ದರಿಂದ ಬಾಡಿ ತುಂಬಾ ಇನ್ ಪೆಕ್ಷನ್ ಆಗಿದೆ ಪೆಸೆಂಟ ತುಂಬಾ ಸಿರಿಯಸ್ ಆಗಿದೆ ಅಂತಾ ತಿಳಿಸಿ ತಮ್ಮ ಆಸ್ಪತ್ರೆಯಲ್ಲಿ 2 ದಿವಸಗಳ ಕಾಲ ಉಪಚಾರ ಮಾಡಿದರೂ ಸಹ ಸರಸ್ವತಿಗೆ ಉಪಚಾರ ಪಲಕಾರಿಯಾಗದೆ ದಿ:15/04/2011 ರಂದು ಮೃತಪಟ್ಟಿರುತ್ತಾಳೆ. ನನ್ನ ಹೆಂಡತಿಗೆ 3 ಬಾರಿ ಆಫರೆಶನ್ ಮಾಡಿ ಯಾವುದೆ ವಿಷಯವನ್ನು ಸರಿಯಾಗಿ ತಿಳಿಸದೆ ಅಲಕ್ಷತನದಿಂದ ಮತ್ತು ನಿಸ್ಕಾಳಜಿತನದಿಂದ ಆಫರೆಶನ ಮಾಡಿದ ಡಾ||ಇಂದಿರಾ ಮತ್ತು ಪೆಸೆಂಟಗೆ ಎನಾಗಿರುತ್ತದೆ ಎನ್ನುವ ವಿಷಯ ತಿಳಿಸದೆ 2 ದಿವಸ ನಿಸ್ಕಾಳಜಿತನದಿಂದ ಉಪಚಾರ ಮಾಡಿದ ಬಸವೇಶ್ವರ ಆಸ್ಪತ್ರೆಯ ಡಾ|| ಸುರೇಶ ಚಿಂಚೋಳಿಕರ ರವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


08 June 2011

GULBARGA DIST REPORTED CRIMES

ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ :-
ಶಹಾಬಾದ ನಗರ ಠಾಣೆ :
ಶ್ರೀ ಗುರುನಾಥ ತಂದೆ ಬಸವಣಪ್ಪಾ ಮೆಡಗುದೇ ಸಾ|| ತೊನಸಳ್ಳಿ [ಎಸ್‌] ರವರು, ದಿ:07-06-11 ರಂದು 11.00 ಎಎಂ ಸುಮಾರಿಗೆ ನಾನು ಸರೋಜಾ ವೈನ ಶಾಪ ಹತ್ತಿರ ಹೋಗುತ್ತಿರುವಾಗ ಮಾಣೆಕರಾವ ಮ್ಯಾನೇಜರ ಸರೋಜಾ ವೈನ ಶಾಪ ಇವನು ಬಂದು ನನಗೆ ತಡೆದು ವಿನಾ ಕಾರಣ ಜಗಳ ತೆಗೆದು ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ಕೊಡಬೇಕಾದ ಹಣ ಕೊಡು ಅಂತಾ ಹೇಳಿದೆನು. ನಾನೆಲ್ಲಿ ನಿನಗೆ ದುಡ್ಡು ಕೊಡುವದಿದೆ ಅಂತಾ ಅಂದಿದ್ದಕ್ಕೆ ಸದರಿ ಮಾಣೆಕರಾವ ಇವನು ನನ್ನ ಸಂಗಡ ಜಗಳ ತೆಗೆದು ಒಡೆದ ಬಾಟಲಿಯಿಂದ ನನ್ನ ಹೊಟ್ಟೆಗೆ ಹೊಡೆದನು. ಹಾಗೂ ನನಗೆ ಹಣ ಕೊಡಲಿಲ್ಲ ವೆಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ ಸದರಿಯವನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಯತ್ನ :-
ರಾಘವೇಂದ್ರ ನಗರ ಠಾಣೆ :
ಶ್ರೀ ಮಹ್ಮದ ಇರ್ಫಾನ್ ತಂದೆ ಮಹ್ಮದ ಜಾವೀದ ಶೇಖ ಸಾ|| ಹಿರಾಪೂರ ಗುಲಬರ್ಗಾ ರವರು, ನಾನು ಬಹುಮನಿ ಈದಗಾ ಹತ್ತಿರ ಇದ್ದಾಗ 1) ಕಲಿಂ ಮಿರ್ಜಾ, 2) ಫಯ್ಯುಮ ಮಿರ್ಜಾ, 3) ಸೈಬಾಜ ಅಲಿ, 4) ಅಮೀರ, 5) ರಿಯಾಜ್ ಸಾ|| ಎಲ್ಲರೂ ಬಿಲಾಲಬಾದ ಕಾಲೋನಿ ಗುಲಬರ್ಗಾ ಇವರೆಲ್ಲರೂ ನನಗೆ ಖರ್ಚಿಗೆ ಹಣ ಕೊಡು ಅಂತ ಒತ್ತಾಯಪಡಿಸಿದ್ದು, ಅದಕ್ಕೆ ನಾನು ನನ್ನ ಹತ್ತಿರ ಹಣ ಇಲ್ಲಾ ಅಂದಾಗ, ಆರೋಪಿತರೆಲ್ಲರು ಕೂಡಿಕೊಂಡು ತಲವಾರ, ಚಾಕು, ಕೈಯಿಂದ, ಹಾಗು ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ, ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :-
ಫರಹತಾಬಾದ ಠಾಣೆ :
ಶ್ರೀ ಅರ್ಜುನ ತಂದೆ ಈರಪ್ಪಾ ಬೆಳಗೇರಿ ಸಾ: ಅಲ್ಲೂರ(ಬಿ), ತಾ: ಚಿತ್ತಾಪೂರ, ಜಿ:ಗುಲಬರ್ಗಾ ರವರು, ನನ್ನ ಮಗಳಾದ ಮಹಾದೇವಿ ಇವಳಿಗೆ ನಡಿವಿನ ಹಳ್ಳಿ ಗ್ರಾಮದ ಬಸವರಾಜ ತಂದೆ ಯಲ್ಲಪ್ಪಾ ಶಹಾಪೂರ ಈತನಿಗೆ 2 ವರ್ಷಗಳ ಹಿಂದೆ ಲಗ್ನ ಮಾಡಿ ಕೊಟ್ಟಿರುತ್ತೇವೆ. ಈಗ ನನ್ನ ಮಗಳಿಗೆ ಒಂದುವರೆ ತಿಂಗಳಿನ ಗಂಡು ಮಗು ಇರುತ್ತದೆ. ಈಗ ಒಂದೂವರೆ ವರ್ಷದಿಂದ ಸದರಿ ನನ್ನ ಮಗಳಿಗೆ ಆಕೆಯ ಗಂಡನಾದ ಬಸವರಾಜ ಈತನು ಸಂಸಾರದ ವಿಷಯದಲ್ಲಿ ಕಿರುಕುಳ ಕೊಟ್ಟು ಹೊಡೆಬಡೆ ಮಾಡುತ್ತಿದ್ದನು. ಈ ವಿಷಯ ನನ್ನ ಮಗಳು ನಮಗೆ ಹೇಳಿದ್ದರಿಂದ ಈಗ 6 ತಿಂಗಳ ಹಿಂದೆ ನಾನು ನನ್ನ ಮಗ ಬಸವರಾಜ ನನ್ನ ಹೆಂಡತಿ ಮೂರು ಜನ ಕೂಡಿಕೊಂಡು ನನ್ನ ಅಳಿಯನಿಗೆ ಚೆನ್ನಾಗಿ ಇರುವಂತೆ ತಿಳಿ ಹೇಳಿದ್ದು ಇರುತ್ತದೆ. ನಂತರ ನನ್ನ ಮಗಳು ಮಹಾದೇವಿ ಹೆರಿಗೆ ಆದ ನಂತರ ನಡವಿನ ಹಳ್ಳಿ ಗ್ರಾಮಕ್ಕೆ ಕಳುಹಿಸಿಕೊಟ್ಟ 3, 4 ದಿನಗಳಲ್ಲಿ ಬಸವರಾಜ ಈತನು ದಿ: 1-6-11 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನನ್ನ ಮಗಳೊಂದಿಗೆ ಜಗಳ ತೆಗೆದು ಆಕೆಯ ಮೈಮೇಲೆ ಸೀಮೆ ಎಣ್ಣೆ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಆಕೆಗೆ ಬೆಂಕಿ ಹಚ್ಚಿರುತ್ತಾನೆ. ನನ್ನ ಮಗಳಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಉಪಚಾರ ಪಡೆಯುವ ವೇಳೆಯಲ್ಲಿ ಮೃತಪಟ್ಟಿರುತ್ತಾಳೆ. ಕಾರಣ ನನ್ನ ಮಗಳನ್ನು ಕೊಲೆ ಮಾಡಿದ ಆತನ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 June 2011

GULBARGA DIST REPORTED CRIMES

ಕಿರುಕುಳ ಪ್ರಕರಣ :-
ಶಹಾಬಾದ ನಗರ ಠಾಣೆ :
ಶ್ರೀಮತಿ ಅಂಬಿಕಾ ಗಂಡ ಮಲ್ಲಿಕಾರ್ಜುನ ತಳವಾರ ಸಾ|| ಮುತ್ತಗಾ ರವರು, ನನ್ನ ಮದುವೆಯಾಗಿ 2 ವರ್ಷಗಳಾಗಿದ್ದು, ಮದುವೆಯಾಗಿ 1 ವರ್ಷದವರೆಗೆ ನನ್ನ ಗಂಡ,ಅತ್ತೆ,ಮಾವಂದಿರೊಂದಿಗೆ ಮುತ್ತಗಾ ಗ್ರಾಮದಲ್ಲಿದ್ದೇವು. ನನ್ನ ಗಂಡ ಮಲ್ಲಿಕಾರ್ಜುನ ಅತ್ತೆ ನಿಂಗಮ್ಮಾ ಮಾವ ನಾಗಣ್ಣಾ ಮಾವನ ತಮ್ಮ ನಿಂಗಣ್ಣಾ ಇವರು ಆಗಾಗ ನನಗೆ ಕೆಲಸ ಸರಿಯಾಗಿ ಮಾಡುವದಿಲ್ಲ ಅಡಿಗೆ ಮಾಡುವದಿಲ್ಲ ಅಂತಾ ಕಿರುಕುಳ ಕೊಡುತ್ತಿದ್ದರು ಹೀಗಿರುವಾಗ ದಿ:20-05-11 ರಂದು ಸಾಯಂಕಾಲ ನನ್ನ ಗಂಡ, ಅತ್ತೆ, ಮಾವ, ಮಾವನ ತಮ್ಮ ಕೂಡಿ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ನಿನಗೆ ಅಡಿಗೆ ಮಾಡಲು ಬರುವದಿಲ್ಲ ಕೆಲಸ ಸರಿಯಾಗಿ ಮಾಡಲು ಬರುವದಿಲ್ಲ ಅಂತಾ ಕಿರುಕುಳ ಕೊಟ್ಟಿದ್ದು ಮತ್ತು ನನ್ನ ಗಂಡನು ಕೈಯಿಂದ ಹೊಡೆದಿರುತ್ತಾನೆ. ಕಾರಣ ನನ್ನ ಗಂಡ ಅತ್ತೆ, ಮಾವ, ಮಾವನ ತಮ್ಮ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಗಳ್ಳತನ ಪ್ರಕರಣ :-
ಎಂ.ಬಿ.ನಗರ ಠಾಣೆ :
ಶ್ರೀಮತಿ ಪುಷ್ಪಾ ಗಂಡ ಶಂಕರ ಗಾಜರೆ ಸಾ: ತಿಲಕ ನಗರ ಕಾಲೋನಿ ಕುಸನೂರ ರೋಡ ಗುಲಬರ್ಗಾ ರವರು, ದಿ: 06-06-11 ರಂದು ನಾನು ಮತ್ತು ನನ್ನ ಮಗಳು ನಿವೇದಿತ ಇಬ್ಬರು ಕೂಡಿಕೊಂಡು ಜಯನಗರದಲ್ಲಿರುವ ಕೇತಕಿ ಆಸ್ಪತ್ರೆಗೆ ಹೋಗು ಮರಳಿ ಮನೆಗೆ ಬರುವಾಗ 8-20 ಪಿ.ಎಂ.ಕ್ಕೆ ಡಾಕ್ಟರ ಕಾಲೂನಿಯ ಆಲದ ಮರದ ಸಮೀಪ ನಡೆದುಕೊಂಡು ಹೋಗುತ್ತಿರುವಾಗ, ಎದುರಿನಿಂದ ಬಂದ ಹೀರೋ ಹೊಂಡಾ ಮೋಟಾರ ಸೈಕಲ್ ಸವಾರನು ನನ್ನ ಕೊರಳಿಗೆ ಕೈಹಾಕಿ ಕೊರಳಲ್ಲಿ ಇದ್ದ 3 1/2 ತೊಲೆ ಮಂಗಳ ಸೂತ್ರ ಅಂದಾಜು 72,000/- ರೂ. ಬೆಲೆಬಾಳುವದನ್ನು ದೋಚಿಕೊಂಡು ಹೋಗಿರುತ್ತಾನೆ. ಕಾರಣ ಸದರ ಕಳ್ಳನನ್ನು ಪತ್ತೆ ಹಚ್ಚಿ, ಕಳುವಾದ ಬಂಗಾರದ ಮಂಗಳ ಸೂತ್ರ ಪತ್ತೆ ಮಾಡುವ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :-
ಆಳಂದ ಠಾಣೆ :
ಶ್ರೀಮತಿ ಶಾಂತಾಬಾಯಿ ಗಂಡ ಗುರಲಿಂಗಪ್ಪಾ ಸಾ: ತಂಬಾಕವಾಡಿ ರವರು, ದಿ: 06-06-11 ರಂದು ನನ್ನ ಗಂಡ ಗುರುಲಿಂಗಪ್ಪಾ ಇತನು ಮತ್ತಿತರ ಜನರ ಜೊತೆ ಆಳಂದದಿಂದ ತಂಬಾಕವಾಡಿಗೆ ಆಟೋ ನಂ. ಕೆ.ಎ 32 ಎ 5152 ರಲ್ಲಿ ಕುಳಿತು ತಡಕಲ್ ಮಾರ್ಗವಾಗಿ ಹೋಗುವಾಗ ಚಾಲಕ ಲಕ್ಷ್ಮಣ ತಂದೆ ಸಾಯಬಣ್ಣ ಸನಗುಂದಿ ಇತನು ತನ್ನ ಆಟೋವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ಪಲ್ಟಿ ಮಾಡಿದ್ದರಿಂದ ನನ್ನ ಗಂಡನಿಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮತ್ತು ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದ ನಂತರ ಚಾಲಕನು ಓಡಿಹೋಗಿರುತ್ತಾನೆ. ಕಾರಣ ಸದರಿ ಚಾಲಕನ ಮೇಲೆ ಕಾನೂನು ಸೂಕ್ತ ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :-
ಸಂಚಾರಿ ಠಾಣೆ :
ಶ್ರೀ ಅಂಬಣ್ಣಾ ತಂದೆ ವಿಠೋಬಾ ಅಂಕಲಗಿ ಸಾ : ಜೇವರ್ಗಿ ಕಾಲೋನಿ ಗುಲಬರ್ಗಾ ರವರು, ನಾನು ದಿ: 5-6-11 ರಂದು ಮಧ್ಯಾಹ್ನ ನನ್ನ ಮೋಟಾರ ಸೈಕಲ್ ಸಂ. ಕೆಎ 32 ಎಲ್ 9340 ನೇದ್ದರ ಮೇಲೆ ಕುಳಿತು ಹನುಮಾನ ಗುಡಿ ಹತ್ತಿರ ಬರುತ್ತಿರುವಾಗ, ಜಿಜಿಎಚ್ ಕಡೆಯಿಂದ ಬಂದ ಆಟೋ ನಂ. ಕೆಎ 32 ಬಿ 4260 ನೇದ್ದರ ಚಾಲಕ ತನ್ನ ಆಟೋವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಮೋಟಾರ ಸೈಕಲ್ ಗೆ ಅಪಘಾತಪಡಿಸಿ ಆಟೋ ಸಮೇತ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 June 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :
ಯಡ್ರಾಮಿ ಠಾಣೆ :
ಜಗನಾಥ ತಂದೆ ನಾಗಪ್ಪಾ ಪಡಶೆಟ್ಟಿ ಸಾ|| ಮಳ್ಳಿ ರವರು ನನ್ನ ಮಗಳಾದ ಲಕ್ಷ್ಮಿ ಇವಳಿಗೆ ದಿನಾಂಕ: 24-05-2001 ರಂದು ಸಿಂದಗಿ ಗ್ರಾಮದ ಭೀಮಾಶಂಕರ ಇವರ ಸಂಗಡ ಮದುವೆ ಮಾಡಿಕೊಟ್ಟಿದ್ದು, ದಿನಾಂಕ: 29-05-2011 ರಂದು ಉಡೆಕ್ಕಿ ಹಾಕುವ ಸಂಬಂಧ ಯಡ್ರಾಮಿ ಗ್ರಾಮಕ್ಕೆ ಬಂದಿದ್ದು, ರಾತ್ರಿ 10-00 ಗಂಟೆ ಸುಮಾರಿಗೆ ಪರಿಚಯವರಾದ ಮೆಲಪ್ಪಾ ಮತ್ತು ಮಲ್ಲಪ್ ಮಾಗಣಗೇರಿ ರವರ ಪೋನ ಬಂದಿದ್ದೆ ಅಂತಾ ಮಾತನಾಡುತ್ತಿರುವಾಗ ಇಬ್ಬರು ಕಾರಿನಲ್ಲಿ ಬಂದು ಲಕ್ಷ್ಮಿ ಇವಳಿಗೆ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಪ್ರಚೊದನೆ ಪ್ರಕರಣ :

ನಿಂಬರ್ಗಾ ಠಾಣೆ : ವೀರಯ್ಯ ತಂದೆ ಮಹಾದೇವಯ್ಯ ಗಣೆಚಾರಿ ಸಾ|| ನಿಂಬರ್ಗಾ ಗ್ರಾಮ ರವರು ನನ್ನ ಮಗಳಾದ ಈರಮ್ಮ ಇವಳಿಗೆ ಸಾಗರ ತಂದೆ ಸೋಮೇಶ ಬೂದಿಗುಂಪಿಮಠ ಸಾ|| ಹೊಸಪೇಟ ಹಾ||ವ|| ಶಾಂತಿ ನಗರ ಗುಲಬರ್ಗಾ ಇತನು ಈರಮ್ಮ ಇವಳಿಗೆ ವಿನಾಃಕಾರಣ ಮಾತನಾಡಿಸುವದು ಚುಡಾಯಿಸುವದು ಮಾಡಿ ಅನೈತಿಕವಾಗಿ ಇರುವಂತೆ ಒತ್ತಾಯ ಮಾಡಿ ಜೀವದ ಬೇದರಿಕೆ ಹಾಕಿದ್ದರಿಂದ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     

ದರೋಡೆ ಪ್ರರಕಣ :

ಫರಹತಾಬಾದ ಠಾಣೆ :
ಶ್ರೀ
ಮಾರುತಿ ತಂದೆ ನಿಂಗಪ್ಪಾ ಹಳ್ಳಾಳ ಸಾ:ರೇವಡಿ ಹಾಳ, ತಾ:ಹುಬ್ಬಳಿ, ಜಿ:ದಾರವಾಡ ರವರು ದಿನಾಂಕ 3-6-11 ರಂದು ಅರುಣ ಐಸಕ್ರೀಂ ಫ್ಯಾಕ್ಟರಿಯಿಂದ ಐಸ್‌ಕ್ರೀಂ ಟ್ರೇ ಬಾಕ್ಸಗಳನ್ನು ಎ.ಸಿ ಕಂಟೇನರ ವಾಹನ ನಂ. ಕೆ.ಎ-03/ಬಿ-5671 ನೇದ್ದರಲ್ಲಿ ಲೋಡ ಮಾಡಿಕೊಂಡು ನಾನು ಮತ್ತು
ವಾಹನ ಚಾಲಕ ಅಡವಯ್ಯ ತಂದೆ ಚೆನ್ನವಿರಯ್ಯ ಕುಂಟನೂರ ಇಬ್ಬರೂ ಕೂಡಿಕೊಂಡು ಬರುತ್ತಿರುವಾಗ ದಿನಾಂಕ 4-6-11 ರಂದು ಶಹಾಪೂರ, ಯಾದಗೀರಕ್ಕೆ ಬಂದು ಐಸಕ್ರೀಂಗಳನ್ನು ವಿತರಣೆ ಮಾಡಿ ದಿನಾಂಕ 5-6-11 ರಂದು ಗುರಮಟಕಲ್‌ ಸೇಡಂ, ಚಿತ್ತಾಪೂರ, ಗುಲಬರ್ಗಾಕ್ಕೆ ಬಂದು ಅಲ್ಲಿಯ ಅಂಗಡಿಗಳಿಗೆ ಐಸ್‌ಕ್ರೀಂ ವಿತರಣೆ ಮಾಡಿ ಗುಲಬರ್ಗಾದಿಂದ 10-30 ಪಿ.ಎಂ..ಕ್ಕೆಅಫಜಲಪೂರಕ್ಕೆ ಹೊರಟಿದ್ದು, ನಾಗದೇವತಿಯ ಗುಡಿಯಿಂದ ಸುಮಾರು 2 ಕಿ.ಮೀ ಮುಂದೆ ಹೋಗುತ್ತಿದ್ದಾಗ ರಾತ್ರಿ 11-00 ಗಂಟೆಯ ಸುಮಾರಿಗೆ ಎರಡು ಮೋಟಾರ ಸೈಕಲ್‌ಗಳ ಮೇಲೆ 6 ಜನರು, ನಮ್ಮ ವಾಹನದ ಮುಂದೆ ಬಂದು ನಿಲ್ಲಿಸಿ, ನನಗೆ ಮತ್ತು
ಡ್ರೈವರನಿಗೆ ಬಡಿಗೆಯಿಂದ ಕಾಲಿಗೆ ಮತ್ತು ತೊಡೆಗೆ ಹೊಡೆದು ಗುಪ್ತಗಾಯಪಡಿಸಿದ,  ಕ್ಯಾಶ ಬ್ಯಾಗ್‌ದಲ್ಲಿದ್ದ ಅಂದಾಜು 1,10,000/- ರೂ. ಬ್ಯಾಗನ್ನು ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 June 2011

GULBARGA DISTRICT REPORTED CRIMES

ಅಕ್ರಮ ಗಾಂಜಾ ಸಂಗ್ರಹಿಸಿಟ್ಟು ಮಾರುತ್ತಿದ್ದವರ ಬಂಧನ ;

ರಾಘವೇಂದ್ರ ನಗರ ಠಾಣೆ ;
ದಿನಾಂಕ 04-06-2011 ರಂದು ಸಾಯಂಕಾಲ ಬ್ರಹ್ಮಪೂರ ಬಡಾವಣೆಯ ಆಜಾದ ಚೌಕದಲ್ಲಿರುವ ಭೀಮಶ್ಯಾ ತಂದೆ ಶಂಕ್ರಪ್ಪ ಭೀಮಳ್ಳಿ ಇವರ ಮನೆಯಲ್ಲಿ ಗಾಂಜಾ ಮಾರಾಟ ಮಾಡ ಮಾಡಲು ಮನೆಯಲ್ಲಿ ಅಕ್ರಮವಾಗಿ ಗಾಂಝಾ ಸಂ್ರಹಿಸಿಟ್ಟಿದ್ದ ಬಗ್ಗೆ ಬಾತ್ಮಿ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸದರಿಯನನ್ನು ದಸ್ತಗೀರ ಮಾಡಿ ಮನೆಯಲ್ಲಿಟ್ಟ 4375/- ರೂ ಕಿಮ್ಮತ್ತಿನ 1 ಕೆಜಿ 700 ಗ್ರಾಂ ಗಾಂಜಾ ಜಪ್ತಮಾಡಿಕೊಂಡಿದ್ದು ಈ ಬಗ್ಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೌಕ ಠಾಣೆ ;ದಿನಾಂಕ 04-06-2011 ರಂದು ಸಾಯಂಕಾಲ ಪ್ರಕಾಶ ಟಾಕೀಜದ ಕಿಲ್ಲಾ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಒಬ್ಬನು ಗಾಂಜಾ ಮಾರುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಎ.ಎಸ್.ಪಿ. ಸಾಹೆಬರು ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬ ವ್ಯಕ್ತಿಯನ್ನು ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಯೂನುಸ ತಂದೆ ಬಾಬುಮಿಯಾ ಬ್ಯಾಂಡವಾಲೆ ಸಾ;ಖಾರಿಬಾವಡಿ ಮೋಮಿನಪುರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವನಿಂದ 150/- ರೂ ನಗದು ಹಣ ಮತ್ತು 1 1/2 ಕೆಜಿ ಗಾಂಜಾ ವಶಪಡಿಸಿಕೊಂಡು ಮುಂದುವರೆದು ಗಾಂಜಾ ಬಗ್ಗೆ ವಿಚಾರಿಸಲು ಸದರಿಯವನು ತನಗೆ ರಾಜು ತಂದೆ ಸಿದ್ದಣ್ಣ ನಾಟೀಕಾರ ಸಾ;ರಾಣೆಶ್ವರ ಪೀರ ದರ್ಗಾ ಆಶ್ರಯ ಕಾಲನಿ ಗುಲಬರ್ಗಾ ಮತ್ತು ಭೀಮಶ್ಯಾ ತಂದೆ ಶಂಕ್ರೆಪ್ಪಾ ಭೀಮಳ್ಳಿ ಸಾ; ಬ್ರಹ್ಮಪೂರ ಅಪ್ಪರ ಲೈನ ಗುಲಬರ್ಗಾ ಇವರು ಗಾಂಜಾ ತಂದು ಜೊಡುತ್ತಿದ್ದು ನಾನು ಮಾರಾಟ ಮಾಡುತ್ತೆನೆ ಅಂತಾ ತಿಳಿಸಿದ್ದು ಸದರಿಯವರ ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣಗಳು ;
ಆಳಂದ ಠಾಣೆ ;
ಶ್ರೀ ಬಸವರಾಜ ತಂದೆ ರೇವಣಸಿದ್ದಪ್ಪ ಚೌವಲ ಸಾ; ಸಂಗೋಳಗಿ (ಜೆ) ರವರು ದಿನಾಂಕ 03-06-2011 ಸಾಯಂಕಾಲ ಮನೆಗೆ ಬೀಗ ಹಾಕಿಕೊಂಡು ಮತ್ತೂರಾದ ಕೊರಳ್ಳಿಗೆ ಹೋಗಿದ್ದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಕೊಂಡಿ ಮುರಿದು ಒಳಗೆ ಪ್ರವೇಶ ಮಾಡ ಅಲಮಾರಾ ತೆರೆದು ಅಲಮಾರದಲ್ಲಿ ಇಟ್ಟಿದ್ದ ನಗದು ಹಣ 20,000/- ಮತ್ತು 30 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಒಂದು ನೋಕಿಯಾ ಮೊಬೈಲ್ ಫೋನ ಹೀಗೆ ಒಟ್ಟು 80,500/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಂಬರ್ಗಾ ಠಾಣೆ ;ಶ್ರೀ ಜಗದೀಶ ತಂದೆ ಕಲ್ಯಾಣರಾವ ಮದರಿ ಸಾ; ಭೂಸನೂರ ಗ್ರಾಮ ಹಾವಃ ಶಹಾಬಜಾರ ಗುಲಬರ್ಗಾ ರವರ ಹೋಲದಲ್ಲಿ ಇರುವ ಮನೆಯಲ್ಲಿ ದಿನಾಂಕ 19-05-2011 ರಿಂದ 20-05-2011 ರ ಬೆಳಗ್ಗೆ 9 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿಟ್ಟಿದ್ದ ಒಂದು ಟೇಬಲ್ ಪ್ಯಾನ ಮತ್ತು ಒಂದು ವಾಟರ ಹೀಟರ ಕಾಯಿಲ್ ಅ.ಕಿ. 1900/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಹರಣ ಪ್ರಕರಣ ;
ಯಡ್ರಾಮಿ ಠಾಣೆ ;
ದಿನಾಂಕ 29-05-2011 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಶ್ರೀ ಜಗನ್ನಾಥ ತಂದೆ ನಾಗಪ್ಪಾ ಪಡಶೆಟ್ಟಿ ಸಾ; ಮಳ್ಳಿ ತಾ;ಜೇವರ್ಗಿ ಇವರ ಮಗಳಾದ ಲಕ್ಷ್ಮೀ ಗಂಡ ಭೀಮಾಶಂಕರ ಅಕಸ್ತಿ ಇವಳಿಗೆ ಮೆಲಪ್ಪಾ ತಂದೆ ನಾಗಪ್ಪಾ ಮಾಣಗೇರಿ ಮತ್ತು ಮಲ್ಲಪ್ಪ ತಂದೆ ಸಂಗಣ್ಣ ಮಾಣಗೇರಿ ಸಾ; ಮಳ್ಳಿ ಇವರು ಕುಡಿಕೊಂಡು ಲಕ್ಷ್ಮಿ ಇವಳಿಗೆ ಯಡ್ರಾಮಿ ಸರಕಾರಿ ಬಾಲಕಿಯರ ಶಾಲೆ ಹಿಂದುಗಡೆ ನಿಸರ್ಗಕರೆಗೆ ಹೋದಾಗ ಕಾರಿನಲ್ಲಿ ಬಂದು ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ;
ಆತ್ಮ ಹತ್ಯೆಗೆ ಪ್ರಚೋದನೆ ನಿಡಿದ ಪ್ರಕರಣ ;
ನಿಂಬರ್ಗಾ ಠಾಣೆ ;
ಸಾಗರ ತಂದೆ ಸೊಮೇಶ ಬೂದಿ ಇತನು ಈರಮ್ಮ ತಂದೆ ನವೀರಯ್ಯ ಗಣೆಚಾರಿ ಇವಳಿಗೆ ವಿನಾಕಾರಣ ಮಾತನಾಡುವುದು, ಕೆಣುಕುವುದು, ಹಿಂಬಾಲಿಸುವುದು ಮಾಡುತ್ತಿದ್ದು ಹೀಗಿದ್ದು ದಿನಾಂಕಃ 03-06-2011 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಶ್ರೀ ಶರಣಬಸವೇಶ್ವರ ಗುಡಿಯ ಪಕ್ಕದಲ್ಲಿ ಈರಮ್ಮಳೊಂದಿಗೆ ಬಲವಂತನಾಗಿ ಮಾತನಾಡಿ ನೀನು ನನ್ನೊಂದಿಗೆ ಮಲಗು ಇಲ್ಲದಿದ್ದರೆ ಸಾಯಿ, ನೀನು ನನ್ನೊಂದಿಗೆ ಮಲಗುವವರೆಗೆ ನಿನಗೆ ಬಿಡುವುದಿಲ್ಲ ಎಂದು ಜೀವದ ಭಯಹಾಕಿ ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದರಿಂದ ಮಗಳಾದ ಈರಮ್ಮ ವಯಃ 18 ವರ್ಷ ಇವಳು ಮನೆಯ ಅಡುಗೆ ಕೋಣೆಯಲ್ಲಿ ಇಟ್ಟಿದ್ದ ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ನಂತರ ಉಪಚಾರ ಪಡೆಯುತ್ತಾ ಗುಲಬರ್ಗಾ ಸರಕಾರಿ ಆಸ್ಪತ್ರೆಯಲ್ಲಿ ರಾತ್ರಿ 02:20 ಗಂಟೆಗೆ ಮೃತಪಟ್ಟಿರುತ್ತಾಳೆ. ಅಂತ ಶ್ರೀ ವೀರಯ್ಯಾ ತಂದೆ ಮಾಹಾದೇವಯ್ಯಾ ಗಣೆಚಾರಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಲಿಗೆ ಪ್ರಕರಣ ;

ಬ್ರಹ್ಮಪೂರ ಠಾಣೆ ;ದಿನಾಂಕ 03-06-2011 ರಂದು ರಾತ್ರಿ ಶ್ರೀ ಮೈಲಾರಿ ತಂದೆ ಯಶವಂತ ಶಳ್ಳಗಿ ಸಾ;ಭೂಪಾಲ ತೆಗನೂರ ಸಧ್ಯ ವಿರೇಂದರ ಪಾಟೀಲ ಬಡಾವಣೆ ಗುಲಬರ್ಗಾ ರವರು ಕೆರೆಯ ರಸ್ತೆ ಡಿಸಿಸಿ ಬ್ಯಾಂಕ ಹಿಂದುಗಡೆಯಿಂದ ಹೋಗುತ್ತಿದ್ದಾಗ 1.ಹಣಮಂತ ತಂದೆ ರಾಣಪ್ಪಾ 2.ರಾಜು ತಂದೆ ಹಣಮಂತ 3.ಭೀಮಣ್ಣಾ ತಂದೆ ಹಣಮಂತ 4.ವಿಜಯಕುಮಾರ ತಂದೆ ಸಾತಪ್ಪಾ 5.ವಿನೋದ ತಂದೆ ಸಾತಪ್ಪಾ ಸಾ; ಎಲ್ಲರು ಭೂಪಾಲ ತೆಗನೂರ ಇವರು ಕುಡಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಮಗನಿಗೆ ಹಚ್ಚಿ ಕೇಸ ಮಾಡಿಸಿದ್ದಿಯಾ ಅಂತಾ ಅಂದು ಹೊಡೆಬಡೆ ಮಾಡಿ ಕೊರಳಲ್ಲಿದ್ದ ಬಂಗಾದ ಲಾಕೆಟ ಮತ್ತು ನಗದು ಹಣ 5000/- ರೂ ಕಸಿದುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 June 2011

GULBARGA DISTRICT PRESS NOTE

ಪತ್ರಿಕಾ ಪ್ರಕಟಣೆ

ಗುಲಬರ್ಗಾ ಜಿಲ್ಲೆಯ ಮಹಾ ಸಾರ್ವಜನಿಕರಲ್ಲಿ, ಈ ಮೂಲಕ ತಿಳುವಳಿಕೆ ನೀಡುವುದೇನೆಂದರೆ, ಗುರುಟೀಕ್ ಇನ್ ವೆಸ್ಟ್ ಮೆಂಟ್ (ಮೈಸೂರು) ಸಂಸ್ಥೆಯವರು ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸಿಕೊಂಡು ವಂಚನೆ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಕಾರಣ ಗುಲಬರ್ಗಾ ಜಿಲ್ಲೆಯಲ್ಲಿ ಇಂತಹ ಗುರುಟೀಕ್ ಇನ್‌ವೆಸ್ಟ್ ಮೆಂಟ್ ಸಂಸ್ಥೆಯಲ್ಲಿ ಯಾರಾದರೂ ಠೇವಣಿ ಸಂಗ್ರಹ ಮಾಡಿಕೊಳ್ಳುತ್ತಿದ್ದಲ್ಲಿ ಕೂಡಲೇ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದಲ್ಲದೇ ಇಂತಹ ಸಂಸ್ಥೆಯಲ್ಲಿ ಹೂಡಿಕೆದಾರರು ಠೇವಣಿ ಹೂಡಬಾರದು ಮತ್ತು ವಂಚನೆಗೊಳಗಾಗಬಾರದು ಅಂತಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:

1. ಜಿಲ್ಲಾ ಪೊಲೀಸ್ ಕಛೇರಿ ಸಂ: 08472-263602

2. ಮೋಬೈಲ್ ಸಂ: 9480803501