POLICE BHAVAN KALABURAGI

POLICE BHAVAN KALABURAGI

05 April 2016

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಶಿವಶಂಕರ ತಂದೆ ಶರಣಪ್ಪ ಪಾಸೋಡಿ ಪಾಟೀಲ ಸಾ: ಹಾವನೂರ ಹಾ;; ಶಾಂತಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ  ನಮ್ಮದು ಅವಿಭಕ್ತ ಕುಟುಂಬವಿದ್ದು ಒಟ್ಟು 6 ಜನ ಅಣ್ಣ ತಮ್ಮಂದಿರುತ್ತೇವೆ. 6 ಜನರಲ್ಲಿ ಬಸವರಾಜ ಮತ್ತು ಮಹಾಂತ ಇವರು ಮೃತಪಟ್ಟಿರುತ್ತಾರೆ. ಮಹಾಂತ ಇವರಿಗೆ ಪಾರ್ವತಿ ಮತ್ತು ಅನಿತಾ ಅಂತಾ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಅನಿತಾ ಇವಳು ಗೋದುತಾಯಿ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದಲ್ಲಿ ವಿದ್ಯಾಬ್ಯಾಸ ಮಾಡಿಕೊಂಡು ಶಾಂತಿ ನಗರದ ನಮ್ಮ ಮನೆಯಲ್ಲಿಯೇ ಇರುತ್ತಿದ್ದಳು. ನಮ್ಮ ಊರಿನ ಶಿವಯೋಗಪ್ಪ  ಕಲಶೆಟ್ಟಿ ಇತನ ಮಗನಾದ ಪ್ರಭಾಕರ ಇತನು ಯಾವಾಗಲು ನಮ್ಮ ಮನೆಯ ಮುಂದೆ ತಿರುಗಾಡುವುದು ನಮ್ಮ ಮನೆಯ ಸುತ್ತ ಮುತ್ತ ಅಡ್ಡಾಡುತ್ತಿದ್ದನು. ಈ ವಿಷಯ ಬಗ್ಗೆ ನಾವು ಎರಡು ಮೂರು ಸಲ ನಾನು ಪ್ರಭಾಕರ ಇತನಿಗೆ ನಮ್ಮ ಮನೆಯ ಮುಂದೆ ಏಕೆ ಅಡ್ಡಾಡುತ್ತಿಯಾ ಅಂತಾ ಕೇಳಿ ಬುದ್ದಿವಾದ ಹೇಳಿದ್ದು ಕೂಡ ಇರುತ್ತದೆ, ಪ್ರಭಾಕರ ಇತನು ನನ್ನ ಇನ್ನೊಬ್ಬ ತಮ್ಮನ ಮಕ್ಕಳಾದ ಶರಣಗೌಡ ವಿನೋದ ಮತ್ತು ವಿಶಾಲ ಇತನಿಗೆ ನೀನು ರಸ್ತೆ ಕಟ್ಟಿ ಆಳುತ್ತಿ ನಿಮಗೆ ನೋಡಿ ಕೊಳ್ಳುತ್ತೇನೆ ಅಂತಾ ಹೆದರಿಸಿದ್ದು ಕೂಡ ಇರುತ್ತದೆ.         ದಿನಾಂಕ 03.04.2016 ರಂದು  ತಮ್ಮ ಮಹಾಂತ  ಇತನ ಮಗಳಾದ ಅನಿತಾ ಇವಳು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಮ್ಮ ಮನೆಯ ಮುಂದೆ ಹೊರಗಡೆ ಗೇಟ ಹತ್ತಿರ ನಿಂತುಕೊಂಡಾಗ ಪ್ರಭಾಕರ ಇತನು ಬಂದವನೇ ತನ್ನ ಯಾವುದೋ ಮೋಟಾರ ಸೈಕಲ ಮೇಲೆ ಅನಿತಾ ಇವಳಿಗೆ ಕೂಡಿಸಿಕೊಂಡು ಹೊರಟು ಹೋದನು.  ನಾನು ಕೂಡಲೇ ಅವನಿಗೆ  ಹಿಂಬಾಲಿಸಿದಾಗ ಅವನು  ನನ್ನಿಂದ ತಪ್ಪಿಸಿಕೊಂಡು ಓಡಿ ಹೋದನು  ಕಾರಣ ಅಪ್ರಾಪ್ತ ವಯಸ್ಸಿನ ನನ್ನ ತಮ್ಮನ ಮಗಳಾದ ಅನಿತಾ ಇವಳಿಗೆ ಅಪಹರಿಸಿಕೊಂಡು ಹೋದ ಪ್ರಭಾಕರ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ಮಲ್ಲಪ್ಪ ತಂದೆ ಕಲ್ಲಪ್ಪಾ ಮರಗುtiತಿ ಸಾ:ತೆಲಕೂರ ಇವರ ತಾಯಿ ಫೋನ ಮಾಡಿ ಊರಲ್ಲಿಯ ಜೀಪ ಮಾಡಿಕೊಂಡು ಬಾ ಕಾಮರೆಡ್ಡಿ ಆಸ್ಪತ್ರೆಗೆ ಹೋಗಿ ನಿಮ್ಮ ಅಣ್ಣ ನಾಗಪ್ಪ ಇತನಿಗೆ ಕರೆದುಕೊಂಡು  ಬರೋಣ ಅಂತ ತಿಳಿಸಿದ ಮೇರೆಗೆ ನಮ್ಮ ಗ್ರಾಮದ ಬಸವರಾಜ ಕೊಂಡಂಪಳ್ಳಿ ಇವರ ಜೀಪ ನಂ.ಎಂಎಚ-26-5146 ನೇದ್ದನ್ನು ಕಿರಾಯಿ ಮಾಡಿಕೊಂಡು ಫೀರ್ಯಾದಿ ಹಾಗೂ ಆತನ ಗೆಳೆಯನಾದ ಯಲ್ಲಾಲಿಂಗ ಹಾಗೂ ಜೀಪ ಚಾಲಕ ಶರಣಪ್ಪ ಆತನ ಗೆಳೆಯ ಅಂಬರೀಶ 4 ಜನರೂ ಕೂಡಿ 6 ಪಿಎಂಕ್ಕೆ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಗೆ ಬಂದು ನಂತರ 9 ಪಿಎಂದ ಸುಮಾರಿಗೆ ಫಿರ್ಯಾದಿಯ ಅಣ್ಣ ನಾಗಪ್ಪ ತಾಯಿ ಸರಸ್ವತಿ ಹಾಗೂ ಗೆಳೆಯ ಯಲ್ಲಾಲಿಂಗ ಹಾಗೂ ಅವರ ಸಂಗಡ ಬಂದಿದ ಅಂಬರೀಶ ಎಲ್ಲರೂ ಕೂಡಿ ಸದರಿ ಜೀಪನಲ್ಲಿ ಕುಳಿತುಕೊಂಡು ಹೊರಟಾಗ ಜೀಪನು ಶರಣಪ್ಪ ಇತನೂ ಚಲಾಯಿಸುತ್ತಿದ್ದು ಅಂದಾಜು 10 ಪಿಎಂದ ಸುಮಾರಿಗೆ ಮಲಕೂಡ ಹದ್ದಿಯ ಪೆಟ್ರೋಲ ಪಂಪ ಸ್ವಲ್ಪ ದಾಟಿದ ನಂತರ ಸದರಿ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ಎದುರಿಗೆ ಹೋಗುತ್ತಿದ್ದ ಒಂದು ಟ್ರ್ಯಾಕ್ಟರಗೆ ಹಿಂದುಗಡೆಯಿಂದ ಜೋರಾಗಿ ಡಿಕ್ಕಿ ಪಡಿಸಿ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಪಡಿಸಿ ನಿಲ್ಲಿಸಿ ಆಗ ಫಿರ್ಯಾದಿದಾರನಾದ ಮಲ್ಲಪ್ಪ ಇತನಿಗೆ ಬಲಭುಜಕ್ಕೆ,ಎಡಗಾಲ ತೊಡೆಗೆ ಗುಪ್ತಗಾಯವಾಗಿದ್ದು ಅವರ ತಾಯಿ ಸರಸ್ವತಿ ಇವಳಿಗೆ ತಲೆಯ ಹಿಂದೆ ಭಾರಿ ರಕ್ತಗಾಯ ಮತ್ತು ಎಡಗಣ್ಣಿಗೆ,ಎಡಕಪ್ಪಾಳಕ್ಕೆ ಕಂದುಗಟ್ಟಿದ ತೆರಚಿದ ಗಾಯಗಳಾಗಿದ್ದು, ಅಣ್ಣ ನಾಗಪ್ಪನಿಗೆ ಬಲ ಮುಖಕ್ಕೆ,ಹಣೆಗೆ ತಲೆಯ ಮಧ್ಯ ಭಾರಿ ರಕ್ತಗಾಯವಾಗಿದ್ದು, ಯಲ್ಲಾಲಿಂಗ ಇತನಿಗೆ ಎಡಗಾಲಿನ ತೊಡೆಯ ಮೂಳೆ ಮುರಿದು ಭಾರಿರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು, ಅಂಬರೀಶನಿಗೆ ಎರಡು ಹಲ್ಲುಗಳು ಮುರಿದು ರಕ್ತಗಾಯವಾಗಿದ್ದು ಬಲ ತೊಡೆಗೆ ರಕ್ತಗಾಯವಾಗಿದ್ದು ನಂತರ ಟ್ರ್ಯಾಕ್ಟರನಲ್ಲಿ ಕುಳಿತ ಹೆಣ್ಣುಮಗಳಾದ ಲಕ್ಷ್ಮಿ ಸಾ:ಹೂಡಾ(ಬಿ) ಇವಳಿಗೆ ಬೆನ್ನಿಗೆ,ಟೊಂಕಕ್ಕೆ ಒಳಪೆಟ್ಟಾಗಿದ್ದು, ಹಾಗೂ ಕಾರಿನಲ್ಲಿ ಕುಳಿತ ಹೆಣ್ಣು ಮಗಳಾದ ಕಾಂಚನಾ ಗುತ್ತೆದಾರ ಇವಳಿಗೆ ಬಲ ತೊಡೆಗೆ ಎಡಪಾದಕ್ಕೆ ರಕ್ತಗಾಯವಾಗಿದ್ದು ನಂತರ ರಸ್ತೆಗೆ ಹೋಗಿ ಬರುವವರು ಜಿವಿಆರ ಅಂಬುಲೇನ್ಸ ಹಾಗೂ 108ಗೆ ಫೋನ ಮಾಡಿ ತಿಳಿಸಿದರಿಂದ ನಮ್ಮಗೆಲ್ಲರಿಗೂ ಅದರಲ್ಲಿ ಹಾಕಿಕೊಂಡು ಸರರ್ಕಾರಿ ಆಸ್ಪತ್ರೆ ಕಲಬುರಗಿಗೆ ಬಂದಾಗ ಮಾನ್ಯ ವೈದ್ಯಾಧಿಕಾರಿಗಳು ಫಿರ್ಯಾದಿದಾರನ ತಾಯಿ ಸರಸ್ವತಿ ಹಾಗೂ ಅಣ್ಣನಾದ ನಾಗಪ್ಪ ಇವರನ್ನು ಚಕ್ ಮಾಡಿ ನೋಡಲಾಗಿ ಸದರಿಯವರು ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದು  ಫಿರ್ಯಾದಿದಾರನಾದ ಮಲ್ಲಪ್ಪ ಇತನೂ ಹೋರ ರೋಗಿ ಅಂತ ಚಿಕಿತ್ಸೆ ಪಡೆದುಕೊಂಡಿದ್ದು ಅಂಬರೀಶ,ಯಲ್ಲಾಲಿಂಗ ಮತ್ತು ಲಕ್ಷ್ಮಿ ಸದರಿಯವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಯಲ್ಲಾಲಿಂಗ ಹೆಚ್ಚಿನ ಉಪಚಾರ ಕುರಿತು ಕಾಮರೆಡ್ಡಿ ಆಸ್ಪತ್ರೆಗೆ ಕಳಿಸಿದ್ದು ಕಾಂಚನಾ ಎಂಬುವವರಿ ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ. ಸದರಿ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ಎದುರಿಗೆ ಹೋಗುತ್ತಿದ್ದ ಒಂದು ಟ್ರ್ಯಾಕ್ಟರ ನಂ ಕೆಎ-32 ಟಿಎ-7401 ನೇದ್ದಕ್ಕೆ ಹಿಂದುಗಡೆಯಿಂದ ಜೋರಾಗಿ ಡಿಕ್ಕಿ ಪಡಿಸಿ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರ ನಂ.ಕೆಎ-32 ಎನ-4757 ನೇದ್ದಕ್ಕೆ  ಡಿಕ್ಕಿ ಪಡಿಸಿ ಭಾರಿ ರಕ್ತಗಾಯ,ಗುಪ್ತಗಾಯ,ಸಾದಾಗಾಯ ಪಡಿಸಿ ತನ್ನ ಜೀಪನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 03.04.2016 ರಂದು ಸಾಯಂಕಾಲ 06:30 ಗಂಟೆಯ ಸುಮಾರಿಗೆ ಜೇವರಗಿಯ ಕಡೆಗೆ ಬರುವ ಕುರಿತು ಬಿ.ಎನ್. ಪಾಟೀಲ್ ಇವರ ದಾಲ್‌ ಮಿಲ್‌ ಎದುರುಗಡೆ ಜೇವರಗಿ ಶಹಾಪುರ ರಸ್ತೆ ಮೆಲೆ ಕಿರಣ ಈತನು ನಡೆಸುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ32ಈಕೆ1767 ನೇದ್ದರ ಮೇಲೆ  ನಾನು ಮತ್ತು ಈಶ್ವರ ಮೂವರು ಕುಳಿತುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ಜೇವರಗಿ ಕಡೆಯಿಂದ ಒಂದು ಮಿನಿ ಲಾರಿ ನಂ ಕೆ.ಎ37ಎ3370 ನೇದ್ದರ ಚಾಲಕನ ತನ್ನ ಮಿನಿ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾವು ಕುಳಿತುಕೊಂಡುಹೋಗುತ್ತಿದ್ದ ಮೋಟಾರು ಸೈಕಲ್‌ಗೆ ಎದುರಾಗಿ ಡಿಕ್ಕಿ ಪಡಿಸಿದ್ದರಿಂದ ನಮ್ಮೆಲ್ಲರಿಗೆ ಭಾರಿ ಗಾಯಗಳಾಗಿದ್ದು ಅಪಘಾತದ ನಂತರ ಸದರಿ ಮಿನಿ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀ ಗೌತಮ ತಮದೆ ಲೋಕೇಶ ಕೊಡಚಿ ಸಾ : ಶಾಸ್ತ್ರಿ ಚೌಕ್ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.