POLICE BHAVAN KALABURAGI

POLICE BHAVAN KALABURAGI

02 June 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ದಿನಾಂಕ 02.06.2019 ರಂದು ಮೃತ ಮಹ್ಮದ ಖಲೀಲ ಇತನು ತಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂ ಕೆಎ-14/ಇಎಮ್-8942 ನೇದ್ದರ ಹಿಂದುಗಡೆ ಫಿರೋಜ್ ಇತನನ್ನು ಕೂಡಿಸಿಕೊಂಡು ರೈಮಾನೀಯಾ ಮಜೀದನಿಂದ ರೈಲ್ವೆ ಸ್ಟೇಷನಲ್ಲಿ ಚಹಾ ಕುಡಿಯುವ ಸಲುವಾಗಿ ಜಿ.ಜಿ.ಹೆಚ್ ಸರ್ಕಲ ಮುಖಾಂತರವಾಗಿ ಮೋಟಾರ ಸೈಕಲ ಚಲಾಯಿಸಿಕೊಂಡು ರೈಲ್ವೆ ಸ್ಠೆಷನಕ್ಕೆ ಹೋಗುವಾಗ ದಾರಿ ಮದ್ಯ ಟೌನಹಾಲ ಕ್ರಾಸ ಹತ್ತೀರ ರೋಡ ಮೇಲೆ ಟಾಟಾ ಎಸ ಗೂಡ್ಸ ನಂ ಕೆಎ-32/ಬಿ-3325 ನೇದ್ದರ ಚಾಲಕ ದೇವಿಂದ್ರ ಇತನು ಎಸ.ವಿ.ಪಿ ಸರ್ಕಲ ಕಡೆಯಿಂದ ಜಿ.ಜಿ.ಹೆಚ್ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಎಡ ರೋಡಿಗೆ ಹೋಗದೆ ಬಲ ರೋಡಿಗೆ ಒಮ್ಮಲೇ ತಿರುಗಿಸಿ ಎದುರಿನಿಂದ ಚಲಾಯಿಸಿಕೊಂಡು ಹೋಗಿ ಮಹ್ಮದ ಖಲೀಲ ಇತನು ಚಲಾಯಿಸುತ್ತೀರುವ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಮಹ್ಮದ ಖಲೀಲ ಇತನಿಗೆ ಭಾರಿಗಾಯಗೊಳಿಸಿದ್ದರಿಂದ ಮಹ್ಮದ ಖಲೀಲ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ  ಅಂತಾ ಶ್ರೀ ಫಿರೋಜ್ ತಂದೆ ಹಾಜಿಮಿಯಾ ಸಾ: ಬಿ.ಶ್ಯಾಮಸುಂದರ ನಗರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಭುಮಣ್ಣ ತಂದೆ ಸೊಮಣ್ಣ ಸಲಗರೆ ಸಾ: ಜಿರೋಳ್ಳಿ ಹಾಲಿವಾಸ: ಶಿವಾಜಿ ನಗರ ಕಲಬುರಗಿ  ರವರ  ಹತ್ತಿರ 2 ಲಾರಿಗಳು ಇರುತ್ತವೆ ಅವುಗಳ ನಂ 1. KA 39 5094 ಇದನ್ನು  ನಾನು ಸುಮಾರು 05 ವರ್ಷಗಳ ಹಿಂದೆ ಖರಿಧಿ ಮಾಡಿದ್ದು ಇದನ್ನು ನಮ್ಮ (ಸಡಕ) ತಮ್ಮನಾದ ಪ್ರಕಾಶ ತಂದೆ ರಾಜಪ್ಪ ಸಾ: ಮುಗನೂರ ಇವರು ನಡೆಸಿಕೊಂಡು ಬರುತ್ತಿದ್ದರು ಇನ್ನೊಂದು ಲಾರಿನಂ KA 56  0131 ಇದನ್ನು ಒಂದುವರೆ ವರ್ಷದ ಹಿಂದೆ ಖರೀಧಿಸಿದ್ದು ಇದನ್ನು  ನಾನೇ ಸ್ವತಃ ಡ್ರೈವಿಂಗ ಮಾಡಿಕೊಂಡು ಬಾಡಿಗೆ ಹೊಡೆಯುತ್ತಾ ಉಪಜೀವಿಸುತ್ತೇನೆ. ಯಾವಾಗಲು ನನ್ನ ಲಾರಿಗಳನ್ನು ಬಾಡಿಗೆಯಿಂದ ಮರಳಿ ಬಂದಾಗ ನಮ್ಮ ಮನೆಯ ಹತ್ತಿರ ಪಾರ್ಕಿಂಗಗಾಗಿ ಸ್ಥಳ ಇಲ್ಲದೆ ಇದ್ದುದ್ದರಿಂದ ಕಲಬುರಗಿಯ ಆಟೋನಗರದ ಲಾರಿ ತಂಗುದಾಣದಲ್ಲಿ ನಮ್ಮ ಲಾರಿಗಳನ್ನು  ನಿಲ್ಲಿಸುತ್ತಾ ಬಂದಿರುತ್ತೇನೆ. ಈಗ ಸುಮಾರು ಎರಡೂವರೆ ತಿಗಂಳ ಹಿಂದೆ ನನ್ನ ಇನ್ನೊಂದು ಲಾರಿಯನ್ನು ನಡೆಯಿಸಿಕೊಂಡು ಬರುತ್ತಿದ್ದ ನಮ್ಮ ಸಡಕನ ತಮ್ಮನು ಲಾರಿ ನಡೆಯಿಸಿಕೊಂಡು ಬರುವುದು ಆಗುವುದಿಲ್ಲ ಅಂತಾ ಹೇಳಿದ್ದರಿಂದ ಅದಕ್ಕೆ ಯಾರೂ ಚಾಲಕರು ಇರದೇ ಇದ್ದುದ್ದರಿಂದ ಅದನ್ನು ಸುಮಾರು ಎರಡೂವರೆ ತಿಂಗಳಿಂದ ಕಲಬುರಗಿಯ ಆಟೋನಗರದ ಲಾರಿ ತಂಗುದಾಣದಲ್ಲಿಯೇ ನಿಲ್ಲಿಸಿದ್ದು ಇತ್ತು ಅದನ್ನು ನಾನು ಆಗಾಗ ಲಾರಿ ತಂಗುದಾಣಕ್ಕೆ ಹೋಗಿ ಸುಸ್ಥಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಾ ಬಂದಿದ್ದು ಇರುತ್ತದೆ. ಅದರಂತೆ ನಾನು ದಿನಾಂಕ 06.05.2019 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ನನ್ನ ಇನ್ನೊಂದು ಲಾರಿಯನ್ನು ಬಾಡಿಗೆಗೆ ತೆಗೆದುಕೊಂಡು ಹೋಗುವ ಮುಂಚೆ ನನ್ನ ಲಾರಿ ನಂ. KA 39 5094 ನೆದ್ದನ್ನು ಕಲಬುರಗಿಯ ಆಟೋನಗರ ಲಾರಿ ತಂಗುದಾಣದಲ್ಲಿ ಇರುವುದನ್ನು ನೋಡಿ ನನ್ನ ಇನ್ನೊಂದು ಲಾರಿ ವಾಹನದ ಮೇಲೆ ಬಾಡಿಗೆ ತಗೆದುಕೊಂಡು ನಾನು ಮೈಸೂರಿಗೆ ಹೋಗಿದ್ದು ಇರುತ್ತದೆ. ಮೈಸೂರದಿಂದ ಮರಳಿ ದಿನಾಂಕ.11.05.2019 ರಂದು ನಾನು ಬಾಡಿಗೆಗೆ ತೆಗೆದುಕೊಂಡು ಹೋಗಿದ್ದ ಇನ್ನೊಂದು ಲಾರಿಯನ್ನು ವಾಡಿಯಲ್ಲಿ ಅನಲೋಡ ಮಾಡಲು ಬಿಟ್ಟು ರಾತ್ರಿ 11.00 ಗಂಟೆ ಸುಮಾರಿಗೆ ಕಲಬುರಗಿಗೆ ಬಂದಿದ್ದು ರಾತ್ರಿ ಮನೆಯಲ್ಲಿದ್ದು ಮರುದಿನ ದಿನಾಂಕ.12.05.2019 ರಂದು ಬೆಳಿಗ್ಗೆ 8.00 ಗಂಟೆ ಸುಮಾರಿಗೆ ಆಟೋನಗರ ಲಾರಿ ತಂಗುದಾಣಕ್ಕೆ ಹೋಗಿ ಅಲ್ಲಿ ನಿಲ್ಲಿಸಿದ ನನ್ನ ಲಾರಿ ನಂ. KA 39 5094 ನೆದ್ದು ನೋಡಲಾಗಿ ಅದು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ನಾನು ಅಲ್ಲಿರುವ ಲಾರಿ ಗ್ಯಾರೇಜಿನವರಿಗೆ ಹಾಗೂ ಲಾರಿ ಆಫೀಸನವರಿಗೆ, ಹಾಗೂ ನನ್ನ ಲಾರಿಯನ್ನು ಈ ಮೊದಲು ನಡೆಸಿಕೊಂಡು ಬರುತ್ತಿದ್ದ ನಮ್ಮ (ಸಡಕ) ತಮ್ಮನಿಗೆ ವಿಚಾರಿಸಲಾಗಿ ಅವರು ನಮಗೆನು ಗೊತ್ತಿಲ್ಲ ಅಂತಾ ತಿಳಿಸಿರುತ್ತಾರೆ. ನಾನು ಇಂದಿನವರೆಗೆ ಎಲ್ಲಾ ಕಡೆಗೆ ಹುಡುಕಾಡಲಾಗಿ ನನ್ನ ಲಾರಿ ಎಲ್ಲಿಯೂ ಪತ್ತೆಯಾಗಲಿಲ್ಲ. ನನ್ನ ಲಾರಿಯನ್ನು ಯಾರೋ ಕಳ್ಳರು ದಿನಾಂಕ-06.05.2019ರ ಬೆಳಗಿನ 10.00 ಗಂಟೆಯಿಂದ ದಿನಾಂಕ-12.05.2019 ರ ಬೆಳಿಗ್ಗೆ 8.00 ಗಂಟೆಯ ಮದ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಸದರಿ ಕಳುವಾದ ನನ್ನ ಅಶೋಕ ಲೈಲಾಂಡ ಲಾರಿ ವಾಹನದ ವಿವರ ಈ ಕೆಳಗಿನಂತಿದೆ. ಲಾರಿ ವಿವರ  ASHOK LAYLAND , ಲಾರಿ ನಂ  KA 39 5094, ಲಾರಿ ಚೆಸ್ಸಿ ನಂ VFR234228, ಲಾರಿ ಇಂಜನ ನಂ VFH399784, ಲಾರಿ ಮಾದರಿ :2006, ಅಂದಾಜ ಕಿಮ್ಮತ್ತು  - 3,50,000/- ರೂಪಾಯಿ ಆಗಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.