POLICE BHAVAN KALABURAGI

POLICE BHAVAN KALABURAGI

17 June 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಪರತಬಾದ ಪೊಲೀಸ್ ಠಾಣೆ: ಶ್ರಿ ಬಾಬು ತಂದೆ ಹಣಮಂತ ಚೆಟ್ಟಿ ಸಾ: ಗರೂರ(ಬಿ) ವರು ನಾನು ಮತ್ತು ನನ್ನ ಹೆಂಡತಿ ಮಕ್ಕಳೊಂದಿಗೆ ದಿನಾಂಕ: 16-6-2012 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಊಟ ಮಾಡಿ ರಾತ್ರಿ 10-00 ಗಂಟೆ ಸುಮಾರಿಗೆ ನಮ್ಮ ಮನೆಯ ಬಾಗಿಲಿಗೆ ಕೀಲಿ ಹಾಕಿ ಮನೆಯ ಮೇಲಿನ ಮಾಳಗಿಯ ಮೇಲೆ ಮಲಗಿಕೊಂಡಿದ್ದೇವು. ನಮ್ಮಂತೆ ನಮ್ಮ ಬಾಜು ಮನೆಯ ನನ್ನ ಅಣ್ಣನ ಮಗನಾದ ಪ್ರಭು ತಂದೆ ದೇವಿಂದ್ರಪ್ಪ ಚೆಟ್ಟಿ ಈತನು ಕೂಡಾ ಅವನ ಹೆಂಡತಿ ಮಕ್ಕಳೊಂದಿಗೆ ಮನೆಯ ಮಾಳಗಿಯ ಮೇಲೆ ಮಲಗಿಕೊಂಡಿದರು. ದಿನಾಂಕ: 17-6-2012 ರಂದು ಬೆಳಗಿನ ಜಾವ 3-00 ಗಂಟೆಯ ಸುಮಾರಿಗೆ ನಾನು ಮೂತ್ರ ವಿರ್ಸಜನೆಕ್ಕೆಂದು ಮನೆಯ ಮಾಳಗಿಯಿಂದ ಕೆಳಗೆ ಇಳಿಯುತ್ತಿದ್ದಾಗ ನಮ್ಮ ಬಾಗಿಲು ತೆರೆದಿದು ನೋಡಿ ಗಾಬರಿಯಾಗಿ ನನ್ನ ಹೆಂಡತಿ ಮಕ್ಕಳಿಗೆ ಎಬ್ಬಿಸಿ ಮನೆಯಲ್ಲಿ ಹೋಗಿ ನೋಡಲಾಗಿ ಮನೆಯ ಹಾಕಿದ ಬೀಗ ತೆರೆದಿದು, ಆಲಮಾರಿ ಬೀಗ ತೆರೆದಿದು ಆಲಮಾರಿ ಒಳಗೆ ಇಟ್ಟಿದ್ದ  10 ಗ್ರಾಂ ಬಂಗಾರದ ಲಾಕೇಟು, ಅ.ಕಿ. 25,000=00 ರೂ. 5 ಗ್ರಾಂ ಬಂಗಾರದ ಲಾಕೇಟು ಅ.ಕಿ. 12,500=00 ರೂ. 5 ಗ್ರಾಂ ಬಂಗಾರದ ಉಂಗೂರ ಅ.ಕಿ. 12,500=00 ರೂ. 10 ಗ್ರಾಂ ಬಂಗಾರದ ಬೊರಮಳ ಸರ ಅ.ಕಿ. 25,000=00 ರೂ. 30 ಗ್ರಾಂ ಬಂಗಾರದ ಸಿಂಗಾರದ ಕರಿಮಣಿ ಅ.ಕಿ. 75,000=00 ರೂ. 60 ಗ್ರಾಂ ಬೆಳ್ಳಿಯ ಹಾಲಗಡ ಜೈನ, ಉಡದಾರ ಅ.ಕಿ. 1800=00 ರೂ, ನಗದು ಹಣ 1500=00 ರೂ. ಯಾರೋ ಕಳ್ಳರು ಆಲಮಾರಿ ಬೀಗ ತೆರೆದು ದಿನಾಂಕ: 16-6-2012 ರ ರಾತ್ರಿಯಿಂದ ದಿನಾಂಕ: 17-3-2012 ರ 3-00 ಎಎಮ್‌ದ ಅವಧಿಯಲ್ಲಿ ಬೆಲೆ ಬಾಳುವ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮತ್ತು ನಮ್ಮ ಅಣ್ಣನ ಮಗನಾದ ಪ್ರಭು ತಂದೆ ದೇವಿಂದ್ರ ಚಟ್ಟಿ ಇವರ ಮನೆಯ ಬಾಗಿಲು ಕೀಲಿ ಮುರಿದು ಮನೆಯಲಿದ್ದ 5 ಗ್ರಾಂ ಬಂಗಾರದ ಜುಮಕಿ ಅ.ಕಿ. 12,500=00 ರೂ. ಹಾಗೂ 80 ಗ್ರಾಂ ಬೆಳ್ಳಿಯ ಉಡಿದಾರ ಹಾಗೂ ಹಾಲಗಡಗಾ ಮತ್ತು ಮನೆಯಲ್ಲಿದ್ದ ಒಂದು ಕಾರಬನ್ ಕಂಪನಿಯ ಮೊಬೈಯಲ್ ನಂ: 9945071612 ಮತ್ತು ನಗದು ಹಣ 300=00 ರೂ, ಹೀಗೆ ಒಟ್ಟು 15,700=00 ರೂ. ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 84/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ: ದಿನಾಂಕ:15-06-2012 ರಂದು ರಾತ್ರಿ 3-00 ಗಂಟೆ ಸುಮಾರಿಗೆ ರಾಜಶೇಖರ ತಂದೆ ಸಿದ್ದಣ್ಣ ಸೂಗೂರ ಹರಿಜನ ಮತ್ತು ಆತನ ಗೆಳೆಯರಾದ ಶಿವಕುಮಾರ ಕಲ್ಲಕ, ಮಲ್ಲಿಕಾರ್ಜುನ, ಸಿದ್ದಣಗೌಡ ತಂದೆ ಶರಣಗೌಡ, ರಾಘವೇಂದ್ರ ಸಾ|| ಚಿತಾಫೂರ ರವರು ಕೂಡಿಕೊಂಡು ಜೀಪ ನಂ ಕೆಎ-25-ಎನ್-3280 ನೇದ್ದರಲ್ಲಿ ನನ್ನ ತಂಗಿಯಾದ ಭುವನೇಶ್ವರಿ ವ-18 ಜಾ|| ಕಬ್ಬಲಿಗೇರ ಸಾ|| ಚಿತ್ತಾಫುರ ಇವಳನ್ನು ಅಪಹರಿಸಿಕೊಂಡು ಹೋಗಿರುತ್ತಾರೆಅಂತಾ ಶ್ರೀ ರಾಕೇಶ ತಂದೆ ದತ್ತಾತ್ರೇಯ ಶಾಖಾಪುರ ಸಾ|| ಚಿತ್ತಾಫೂರ  ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 61/2012 ಕಲಂ 366 ಸಂಗಡ 149 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ: 16/06/2012 ರಂದು 1730 ಗಂಟೆಗೆ ಶ್ರೀ.ಮಹಾಂತೇಶ ಮತ್ತು ಗಜೇಂದ್ರ,  ಬ್ರಹ್ಮಪೂರ ಪೊಲೀಸ್ ಠಾಣೆ ರವರು ಸುಪರ ಮಾರ್ಕೆಟದಿಂದ ತಹಶೀಲ ಆಫೀಸ ಹತ್ತಿರ ಪೆಟ್ರೋಲಿಂಗ್ ಕುರಿತು ಹೋದಾಗ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಗೆ ಬೈಯುವದು, ಹೊಡೆಯಲ್ಲಿಕೆ ಹೊದಂತೆ ಮಾಡಿ ಭಯಾನಕ ರೀತಿಯಿಂದ ರೌಡಿ-ಗುಂಡಾನಂತೆ ವರ್ತಿಸುತ್ತಿದ್ದು ಸಾರ್ವಜನಿಕ ಶಾಂತತೆಯನ್ನು ಹಾಳು ಮಡುವುದನ್ನು ಕಂಡು ಅವರನ್ನು ಹಿಡಿದು ಹೆಸರು ವಿಚಾರಿಸಿದ್ದು, ಚಂದ್ರಕಾಂತ ತಂದೆ ಕಲ್ಯಾಣಿ ಹರಳಯ್ಯ, ಸಾ|| ಹೋದಲೂರ, ತಾ|| ಆಳಂದ, ಫೀರೋಜ ತಂದೆ ಮಹ್ಮದ ಇಸ್ಮಾಯಿಲ ಸಾ||  ದರ್ಗಾ ಹತ್ತಿರ ಮುಸ್ಲಿಂ ಸಂಘ ಗುಲಬರ್ಗಾರವರು  ಸ್ಥಳದಲ್ಲಿ ಯಾಗೇಯೆ ಬಿಟ್ಟಲ್ಲಿ ಯಾವುದಾದರೊಂದು ಸಂಜ್ಞೆಯ ಅಪರಾಧ ಮಾಡಬಹುದೆಂದು ಮುಂಜಾಗೃತೆ ಕ್ರಮದ ದಸ್ತಗಿರಿ ಮಾಡಿ ವರದಿ ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 80/2012 ಕಲಂ: 110(ಇ) (ಜಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ ಶ್ರೀ ವಿಜಯಕುಮಾರ ತಂದೆ ನರಸಪ್ಪಾ ಗುರಮಿಟಕಲ್ ರು ನಾನು ದಿನಾಂಕ 15-06-2012 ರಂದು ರಾತ್ರಿ 8.30 ಸುಮಾರಿಗೆ ನ್ನ ಹೆಂಡತಿ ಮಕ್ಕಳೊಂದಿಗೆ ಮನೆಯಲ್ಲಿ ಊಟಕ್ಕೆ ಕುಳಿತ ಸಮಯದಲ್ಲಿ ಮದನ ಗೋಪಾಲ್ ತಂದೆ ನರಸಪ್ಪಾ ಗುರುಮಿಟಕಲ್, ಹಣಮಂತ ತಂದೆ ಮದನ ಗೋಪಾಲ ಮತ್ತು ರೇಣುಕಾಬಾಯಿ ಗಂಡ ಮದನ ಗೋಪಾಲ ಇವರೆಲ್ಲರೂ ಕೂಡಿ ನಮ್ಮ ಮನೆಗೆ ಬಂದು ನನಗೆ ಮತ್ತು ನನ್ನ ಹೆಂಡತಿ, ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರಿಂದ, ನಾನು ಹಾಗೂ ತನ್ನ ಮಗ ಅಶ್ವತ ಯಾಕೆ ಬೈಯುತ್ತಿದ್ದಿರಿ ಅಂತ ಕೇಳಿದ್ದಕ್ಕೆ, ಕೈಯಲ್ಲಿ ಚಾಕು ಹಿಡಿದುಕೊಂಡು ಜೀವ ತೆಗೆಯುತ್ತೇನೆ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 44/12 ಕಲಂ 341, 323, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ಕ್ರಮಕೈಕೊಂಡೆನು.
 ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :ಶ್ರೀ ಮದನಗೋಪಾಲ ತಂದೆ ನರಸಪ್ಪಾ ಗುರುಮಿಟಕಲ್ ವರು ನನ್ನ ಮನೆಯಲ್ಲಿ ದಿನಾಂಕ 15-06-2012 ರಂದು ರಾತ್ರಿ 9.30 ಗಂಟೆಗೆ ಇದ್ದಾಗ ಅ ಸಮಯಕ್ಕೆ ತನ್ನ ಅಣ್ಣನ ಮಕ್ಕಳಾದ ಅಶ್ವಥ, ಬಾಲಕೃಷ್ಣಾ ಇವರುಗಳು ಮನೆಗೆ ಬಂದು ಮನೆಯ ಹಂಚಿಕೆ ವಿಚಾರದಲ್ಲಿ ಮಾತಾನಾಡುವುದು ಇದೆ ನಮ್ಮ ಮನೆಗೆ ಹೋಗೋಣ ನಡೆ ಅಂತಾ ಕರೆದು ನಾನು ಹೀಗೇಕೆ ಮಾತಾನಾಡುವುದು ಸದರಿ ಮನೆಯ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಇದ್ದು, ನಾಳೆ ಬೆಳಿಗ್ಗೆ ಮಾತಾನಾಡೋಣ ಅಂತಾ ಅಂದರು ಸಹ ನನಗೆ ಕೇಳದೇ ಮನವೋಲಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ನನ್ನ ಅಣ್ಣ ವಿಜಯಕುಮಾರ ಈತನು ಮನೆಯ ವಿಷಯದಲ್ಲಿ ನನ್ನೊಂದಿಗೆ ಚರ್ಚಿಸುತ್ತಿದ್ದು, ನಾನು ಮನೆಯ ಬಗ್ಗೆ ನ್ಯಾಯಾಲಯದಲ್ಲಿ ತನಿಖೆ ನಡೆದಿದ್ದು ಅದು ಬರುವ ತನಕ ನೋಡೋಣ ಅಂತಾ ನಾನು ಹೇಳಿದಾಗ ನಮ್ಮ ಅಣ್ಣ ಅವಾಚ್ಯವಾಗಿ ಬೈದು  ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 45/12 ಕಲಂ 341, 323, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀಮತಿ ಸಾವಿತ್ರಿ ಗಂಡ ಪ್ರದೀಪ ಸಾ: ವೆಂಕಟೇಶ ನಗರ ವರು ನಾನು ದಿನಾಂಕ 16-06-2012 ರಂದು ಮುಂಜಾನೆ ಕೆಲಸ ಮುಗಿಸಿಕೊಂಡು ಹುಸೇನ ಸಾಗರ ಟ್ರೈನ ಮುಖಾಂತರ ಗುಲಬರ್ಗಾಕ್ಕೆ 20-00 ಗಂಟೆಗೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ಆಗ ಮಳೆ ಬರುತ್ತಿತ್ತು ನಾನು ಒಬ್ಬಳೆ ಇರುವದರಿಂದ ನಡೆಯುತ್ತಾ ಹೊರಟೇನು ವೆಂಕಟೇಶ ನಗರದಲ್ಲಿ ನಾನು ನಡೆಯುತ್ತಾ ಹೊರಟಾಗ ನನ್ನ ಪಕ್ಕದಲ್ಲಿ ಒಬ್ಬ ಹುಡಗ ನಡೆಯುತ್ತಾ ಬರುತ್ತಿದ್ದ ನನ್ನ ಮನೆ ಸಮೀಪ ಹೋದಾಗ ನ್ನ ಜೊತೆಯಲ್ಲಿಯೆ ಬರುತ್ತಿದ್ದ ಹುಡುಗ ನನಗೆ ದಬ್ಬಿಸಿಕೊಟ್ಟು ನನ್ನ ಕೊರಳಲ್ಲಿಯ ಮಂಗಳ ಸೂತ್ರಕ್ಕೆ ಕೈ ಹಾಕಿ ಜಗ್ಗಿ ಹರಿದುಕೊಂಡ ನಾನು ಚೀರಾಡಲು ಪ್ರಾಂಭಿಸಿದೆನು. ಆಗ ಓಣಿಯಲ್ಲಿ ಹೊಗುವವರು ಬಂದು ಸದರಿಯವನಿಗೆ ಹಿಡಿದುಕೊಂಡು ಅವನ ಹತ್ತಿರ ಇದ್ದ ನನ್ನ ಮಂಗಳ ಸೂತ್ರ ನನಗೆ ಮರಳಿ ಕೊಡಿಸಿರುತ್ತಾರೆ. ಸದರಿಯವನು ಓಡಿ ಹೋದನು ಅವನ  ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:85/12 ಕಲಂ 392, 511 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.