POLICE BHAVAN KALABURAGI

POLICE BHAVAN KALABURAGI

12 September 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಅರ್ಜುನ  ತಂದೆ ಲಕ್ಷ್ಮಣ ಜಾದವ   ಸಾ:ಭಗತ ಸಿಂಗ ಚೌಕ ವಡ್ಡರಗಲ್ಲಿ ಬ್ರಹ್ಮಪೂರ ಗುಲಬರ್ಗಾರವರು ನಾನು ದಿನಾಂಕ:11-09-2012 ರಂದು 7-30  ಪಿ.ಎಮ್.ಕ್ಕೆ ಕೇಂದ್ರ ಬಸ್ ನಿಲ್ದಾಣದಲ್ಲಿ ನನ್ನ ಅಕ್ಕಳಿಗೆ ಶಾಹಾಬಾದಕ್ಕೆ ಕಳಿಸುವ  ಕುರಿತು ಬಸ್ ನಿಲ್ಲುವ ಸ್ಥಳದಲ್ಲಿ ಬಂದು ನನ್ನ ಅಕ್ಕಳಿಗೆ ಬಸ್ ಹತ್ತಿಸಿ  ನಿಂತಿರುವಾಗ ಕೆ.ಎಸ್.ಆರ್.ಟಿ.ಸಿ.ಬಸ್ ನಂ: ಕೆಎ 32 ಎಫ್ 884 ನೇದ್ದರ ಚಾಲಕ ತನ್ನ ಬಸ್ ನ್ನು ಅಲಕ್ಷತನದಿಂದ ಬಲಗಡೆ  ಚಲಾಯಿಸಿ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಬಸ್ಸ ಚಾಲಕ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 90/2012 ಕಲಂ 279, 338, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.