POLICE BHAVAN KALABURAGI

POLICE BHAVAN KALABURAGI

10 February 2014

Gulbarga District Reported Crimes

ಅನಧಿಕೃತ ಮಧ್ಯ ಮಾರಾಟಗಾರನ ಬಂಧನ :
ರಟಕಲ ಠಾಣೆ : ರಟಕಲ ಪೊಲೀಸ ಠಾಣೆಯ ಸರಹದ್ದಿನ ಸಾಸರಗಾಂವ ಗ್ರಾಮದಲ್ಲಿ ಯಾರೋ ಒಬ್ಬ ಅನದಿಕೃತವಾಗಿ ಕ್ವಾಟರ ಬಾಟಲಗಳು ಮಾರಾಟ ಮಾಡುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಅಕ್ಕಮಹಾದೇವಿ ವಿ. ನೀಲೆ ಪಿ.ಎಸ್.ಐ ಸಂಗಡ ಸಿಬ್ಬಂದಿ ಜನರನ್ನು ಹಾಗು ಇಬ್ಬರು ಪಂಚರನ್ನು ಕರೆದು ಕೊಂಡು ಸದರಿ ಗ್ರಾಮಕ್ಕೆ ಹೋಗಿ ಬಾತ್ಮಿ ಇದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಕ್ವಾಟರ ಬಾಟಲಗಳನ್ನು ಮಾರಾಟ ಮಾಡುತ್ತಿರುವುದನ್ನು ನೋಡಿ ಸಿಬ್ಬಂದಿ ಸಹಾಯದಿಂದ ಸದರಿಯವನಿಗೆ ದಾಳಿ ಮಾಡಿ ಸಿದ್ದಪ್ಪ ತಂದೆ ಸಾಯಬಣ್ಣ ಮಡಿವಾಳ  ಸಾ||ಸಾಸರಗಾಂವಇವನನ್ನು ಹಿಡಿದು ಸದರಿಯವನಿಂದ ನಗದು ಹಣ 100/- ರೂ ಹಾಗು ಯು.ಎಸ್ ವಿಸ್ಕಿ 180 ಎಂ.ಎಲ್ 40 ಬಾಟಲಗಳುನಾಕೌಟ ಸ್ಟ್ರಾಂಗ ಬೀರ 330 ಎಂ.ಎಲ್ 22 ಬಾಟಲಗಳು ಒಟ್ಟು ಅ.ಕಿ 2950/- ರೂ ನೇದ್ದನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ರಟಕಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮುರಳಿಧರ ತಂದೆ ನಾರಾಣರಾವ ರವರು ದಿನಾಂಕ: 10-02-2014  ರಂದು ಮಧ್ಯಾಹ್ನ 12=15 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ಇಇ 6055 ನೆದ್ದರ ಮೇಲೆ ರಘುನಾಥರಾವ ಈತನಿಗೆ ಹಿಂದೆ ಕೂಡಿಸಿಕೊಂಡು ಮನೆಯಿಂದ  ಕೇಂದ್ರ ಬಸ್ ನಿಲ್ದಾಣದ ಮುಖಾಂತರ  ಎಸ್.ವಿ.ಪಿ.ಸರ್ಕಲ್ ಕಡೆಗೆ ಬರುವ ಕುರಿತು ಆರ್.ಪಿ.ಸರ್ಕಲ್ ದಾಟಿ ಬಸ್ ಡಿಪೊ ಎದುರು ರೋಡ ಮೇಲೆ ಹಿಂದಿನಿಂದ ಟ್ಯಾಂಕರ ನಂ: ಕೆಎ 29-6611 ನೆದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನ್ಯಾಶನಲ್ ಪೆಟ್ರೋಲ್ ಪಂಪ ಕಡೆಗೆ ತಿರುಗಿಸಲು ಹೊಗಿ ನನ್ನ ಮೋ/ಸೈಕಲ್ ಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಮತ್ತು ಆತನ ಮೋ/ಸೈಕಲ್ ಹಿಂದೆ ಕುಳಿತಿದ್ದ ರಘುನಾಥರಾವ ಇವರಿಗೆ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯರ ನಿರ್ಲಕ್ಷದಿಂದ ಗೃಹಿಣಿ ಸಾವು :
ಅಶೋಕ ನಗರ ಠಾಣೆ : ಶ್ರೀ ರಾಜಶೇಖರ ತಂದೆ ಭೀಮರಾವ ದಪ್ಪೆದಾರ  ಸಾ: ಎಲ್.ಐ.ಜಿ-10 ಶಾಂತಿನಗರ ಗುಲಬರ್ಗಾ ರವರ ಹೆಂಡತಿ ಶೀಲಾ ಇವಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ,  ನಮ್ಮ ಮನೆಯ ಹತ್ತಿರದ ಡಾ|| ಶೋಭಾ ಪಾಟೀಲ ರವರ ಹತ್ತಿರ ದಿನಾಂಕ 22-01-2014 ರಂದು ತೋರಿಸಿದ್ದೆವು. ಆಗ ಅವರು ಸ್ಕ್ಯಾನಿಂಗ ಮಾಡಿಕೊಂಡು ಬರಲು ಹೇಳಿದ್ದರಿಂದ ಗಿರೀಶ ಸ್ಕಾನಿಂಗ ಹತ್ತಿರ ಸ್ಕ್ಯಾನಿಂಗ ಮಾಡಿಸಿ ವರದಿ  ಕೊಟ್ಟಾಗ  ಅಪೇಂಡಿಕ್ಸ ಆಗಿರುತ್ತದೆ. ಅಪರೇಶನ ಮಾಡಿಸಬೇಕು ಅಂತಾ ಹೇಳಿದಾಗ ನಾವು ಅಪರೇಶನ ಎಷ್ಟು ಖರ್ಚಾಗುತ್ತದೆ ಅಂತಾ ಕೇಳಿದಕ್ಕೆ 12,000/- ರೂ ಆಗುತ್ತದೆ ಅಂತಾ ಹೇಳಿದರು.  ದಿನಾಂಕ 27-01-2014 ರಂದು ನನ್ನ ಹೆಂಡತಿಗೆ ವಿಪರೀತ ಹೊಟ್ಟೆನೋವು ಆಗುತ್ತಿದ್ದರಿಂದ ನಾನು ಮತ್ತು ನನ್ನ ಅತ್ತೆ ಲಕ್ಷ್ಮಿಬಾಯಿ,  ಬಾಬು ಎಲ್ಲರೂ ಕೂಡಿ ಡಾ|| ಶೋಭಾ ಪಾಟೀಲ ಹತ್ತಿರ ತೋರಿಸಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸಾಯಂಕಾಲ 6-00ಗಂಟೆಗೆ ಅಪೇಂಡೆಕ್ಸ ಅಪರೇಶನ ಮಾಡಿರುತ್ತಾರೆ. 3 ದಿವಸ ಆಸ್ಪತ್ರೆಯಲ್ಲಿ ಇದ್ದು ದಿನಾಂಕ 01-02-2014 ರಂದು ಡಿಸಜಾರ್ಜ ಮಾಡಿದರು. ಒಂದು ದಿವಸದ ನಂತರ ಜ್ವರ ಬರುತ್ತಿದ್ದರಿಂದ ಡಾ: ಶೋಭಾ ಪಾಟೀಲ ರವರಿಗೆ ತೊರಿಸಿದಾಗ ಡಾ: ವೆಂಕಟೇಶ ದೇಶಾಯಿ ರವರ ಹತ್ತಿರ ತೊರಿಸಲು ಹೇಳಿದ್ದುಅವರು ಗುಳಿಗೆ ಕೊಟ್ಟರು. ನಂತರ ಪುನ:  ದಿನಾಂಕ 04-02-2014 ರಂದು ಹೊಟ್ಟೆ ಉಬ್ಬಿದಂತೆ ಆಗಿ ಉಸಿರಾಡದ ತೊಂದರೆ ಆಗುತ್ತಿದ್ದರಿಂದ ಡಾ|| ಶೋಬಾ ಪಾಟೀಲ ಹತ್ತಿರ ತೊರಿಸುವಾಗ  ಆಸ್ಪತ್ರೆಯಲ್ಲಿಯೇ ನನ್ನ ಹೆಂಡತಿ ಬೆಹುಶಃ ಆಗಿದಳು.   ಆಗ ಡಾ|| ಶೋಬಾ ಪಾಟೀಲ ರವರು ಲೋ- ಬಿಪಿ ಮತ್ತು ಪಿತ್ತ ಹೆಚ್ಚಾಗಿರುತ್ತದೆ ಅಂತಾ ಹೇಳಿ ಬಸವೇಶ್ವರ ಆಸ್ಪತ್ರೆಯಲ್ಲಿ ತೋರಿಸುವಂತೆ ರೇಪರ್ಡ ಮಾಡಿದರು.  ಅಗ ಬಸವೇಶ್ವರ ಆಸ್ಪತ್ರೆಯಲ್ಲಿ ತೋರಿಸಿದಾಗ ಡಾಕ್ಟರ ರವರು ಅಪರೇಶನ ಮಾಡಿದ ಜಾಗದಲ್ಲಿ  ಪಸ್ಸ (ಕಿವಾ) ಆಗಿದೆ.  ಅಂತಾ ಹೇಳಿ ಹೊಲಿಗೆಗಳನ್ನು ಬಿಚ್ಚಿ ಕಿವಾ ತೆಗೆದಿದರು. ನಂತರ ನನ್ನ ಹೆಂಡತಿಯ ಸ್ಥೀತಿ ಗಂಭೀರ ಆಗಿದ್ದರಿಂದ ಅಲ್ಲಿಯೇ ಡಾಕ್ಟರ ರವರು ಸೊಲ್ಲಾಪೂರಕ್ಕೆ ಒಯ್ಯಲು ಹೇಳಿದ್ದರಿಂದ ದಿನಾಂಕ 06-02-2014 ರಂದು ರಾತ್ರಿ ವೇಳೆಗೆ ಸೊಲ್ಲಾಪೂರದ ಅಶ್ವಿನಿ ಆಸ್ಪತ್ರೆಗೆ ಒಯ್ದು ತೋರಿಸಿದಾಗ ಅಲ್ಲಿಯ ಡಾಕ್ಟರ ರವರು ಪೇಶಂಟ ಕಂಡಿಶನ ಕಾರಾಬ ಆಗಿದೆ ಇದಕ್ಕೆ ನಾವು ಜವಾಬ್ದಾರರು ಅಲ್ಲಾ ಏನಾದರೂ ಆಗಲೀ ನಾವು ಜವಾಬ್ದಾರರು ಅಲ್ಲಾ ಅಂತಾ ಹೇಳಿದರು.  ಆಗ ನಾವು ಏನಾದರೂ ಆಗಲೀ ನೀವು ಚಿಕಿತ್ಸೆ ಕೊಡುವಂತೆ ಕೇಳಿಕೊಂಡಾಗ 3 ದಿವಸ ಸೊಲ್ಲಾಪೂರದ ಅಶ್ವಿನಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುವಾಗ ಅಪರೇಶನ ಮಾಡಿದ ಡಾಕ್ಟರವರು ನೆಗಲಿಜನ್ಸಿ ಮಾಡಿದರಿಂದ ಈ ರೀತಿ ಆಗಿರುತ್ತದೆ ಎಂದು ಹೇಳಿದರು. ಚಿಕಿತ್ಸೆ ಪಲಕಾರಿಯಾಗದೇ  ಇಂದು ದಿನಾಂಕ 10-2-2014 ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ನನ್ನ ಹೆಂಡತಿ ಶೀಲಾ ಇವಳು  ಮೃತಪಟ್ಟಿರುತ್ತಾಳೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes


ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ನಾಗೇಂದ್ರ ತಂದೆ ಯಲ್ಲಪ್ಪ ರವರು ದಿನಾಂಕ: 09-02-2014 ರಂದು ಸಾಯಂಕಾಲ 5=15 ಗಂಟೆ ಸುಮಾರಿಗೆ ತನ್ನ ಮೋ/ಸೈಕಲ್ ನಂ: ಕೆಎ 32 ಇಡಿ 2034 ನೆದ್ದರ ಮೇಲೆ ಜಗತ ಸರ್ಕಲ್ ದಿಂದ ಗೋವಾ ಹೊಟೇಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಯಲ್ಲಮ್ಮ ಟೆಂಪಲ್ ದೇವಸ್ಥಾನ ಎದುರಿನ ರೋಡಿನ ಮೇಲೆ ಗೋವಾ ಹೊಟೇಲ ಕಡೆಯಿಂದ ಮೋ/ಸೈಕಲ್ ನಂ: ಕೆಎ 32 ಇಡಿ 7536 ರ ಸವಾರನು ತನ್ನ ಮೋ./ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಫಿರ್ಯಾದಿ ಮೋ.ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿಗಾಯಗೊಳಿಸಿ ಮೋ/ಸೈಕಲ್ ಅಲ್ಲೆ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಆಕ್ರಮ ಮರಳು ಸಾಗಾಣೆಕೆದಾರರ ಬಂಧನ :
ಫರತಾಬಾದ ಠಾಣೆ : ಶ್ರೀ ಗುರುಲಿಂಗಯ್ಯ ಸಿಹೆಚ್.ಸಿ 377 ರವರು ಸೋಮನಾಥ ಹಳ್ಳಿ ಗ್ರಾಮದ ಸೀಮಾಂತರ  ಬೀಮಾ ನದಿಯಲ್ಲಿ ಆಕ್ರಮವಾಗಿ ಕಳ್ಳತನದಿಂದ  ಹಿಟಾಚಿಯಿಂದ ಮರಳು ತೆಗೆದು ಟ್ಯಾಕ್ಟರಗಳನ್ನು ತುಂಬಿ ಸಂಬಂಧ ಪಟ್ಟ ಇಲಾಖೆಯ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳು ಸರಬುರಾಜು ಮಾಡುತ್ತಿದ್ದಾರೆ ಅಂತಾ ಭಾತ್ಮಿ ಬಂದಿದ್ದು. ಪಿಎಸ್‌ಐ ಸಾಹೇಬರು ಮಾನ್ಯ ಮುಖ್ಯಮಂತ್ರಿಗಳ ಬಂದೋಬಸ್ತ ಕರ್ತವ್ಯ ಕುರಿತು ಯಾನಗುಂದಿಗೆ ಹೊಗಿರುತ್ತೆನೆ ನೀವು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಲು ಮೌಖಿಕವಾಗಿ ನನಗೆ ಫೊನ್‌ ಮೂಲಕ ತಿಳಿಸಿದ ಮೇರೆಗೆ ಸಿಬ್ಬಂದಿ ಮತ್ತು ಪಂಚರನ್ನು ಕರೆದುಕೊಂಡು ಸೊಮನಾಥ ಹಳ್ಳಿಯ ಕಡೆಗೆ ಎಡಗಡೆ ತಿರುಗಿಸಿಕೊಂಡು ಕಚ್ಚಾ ರಸ್ತೆ ಮೂಲಕ ಜೀಪ ತೆಗೆದುಕೊಂಡು  ಹೋಗಿ ಸೋಮನಾಥ ಹಳ್ಳಿ ಗ್ರಾಮದ ಹತ್ತಿರ ಭೀಮಾ ನದಿಯ ದಂಡೆಯ ಮೇಲೆ ದೂರಲ್ಲಿ 5.30 ಎಎಮ್‌ಕ್ಕೆ ಜೀಪ ನಿಲ್ಲಿಸಿದ್ದು, ಬೀಮಾ ನದಿಯ ದಂಡೆಯಲ್ಲಿ ಟ್ಯ್ರಾಕ್ಟರಗಳು ನಿಲ್ಲಿಸಿದ್ದು,ಭೀಮಾ ನದಿ ದಂಡೆಯಲ್ಲಿನ ಮರಳನ್ನು ಕಳ್ಳತನದಿಂದ ಹಿಟಾಚಿಯ ಸಹಾಯದಿಂದ ಅಗೆದು ತುಂಬುವುದನ್ನು ದೂರದಿಂದ ಜಾಲಿ ಕಂಠಿಯ ಮರೆಯಲ್ಲಿ ನಿಂತು ನೋಡಿ ದಾಳಿ ಮಾಡಿ  ಸುತ್ತುವರೆದು ಹಿಡಿಯುತ್ತಿದ್ದಾಗ ಅದರಲ್ಲಿ ಒಬ್ಬ ವ್ಯಕ್ತಿಯು ಕಂಠಿಯಲ್ಲಿ ಓಡಿ ಹೋದನು. ಆಗ ಸ್ಥಳದಲ್ಲಿದ 3 ಜನ ವ್ಯಕ್ತಿಗಳನ್ನು ಹಿಡಿದು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ಅವರು ತಮ್ಮ ಹೆಸರು 1. ಮಾರುತಿ ತಂದೆ ಸುಭಾಶ್ಚಂದ್ರ ನಾಯ್ಕೋಡಿ ಸಾಃ ನರಬೋಳಿ ತಾ|| ಜೇವರ್ಗಿ 2. ಗಣೇಶ ತಂದೆ ಸುಭಾಶ್ಚಂದ್ರ ನಾಯ್ಕೋಡಿ ಸಾಃ ನರಬೋಳಿ ತಾ|| ಜೇವರ್ಗಿ 3. ಪ್ರದೀಪ ತಂದೆ ಶಿವರಾಯ ದೊಡ್ಮನಿ ಸಾ:ಐನೊಳ್ಳಿ ತಾ:ಚಿಂಚೊಳಿ ಅಂತಾ ತಿಳಿಸಿದರು. ಒಡಿ ಹೊದವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಹಣಮಂತ ತಂದೆ ಬಾಬುರಾಯ ಡೊಂಬರಿ ಸಾ;ಸೊಮನಾಥ ಹಳ್ಳಿ ಅಂತಾ ತಿಳಿಸಿರುತ್ತಾರೆ.ಮತ್ತು  ಸ್ಥಳದಲ್ಲಿದ್ದ 1. ಟ್ಯ್ರಾಕ್ಟರ ನಂ. ಕೆಎ 32 ಟಿಎ-145 ಮರಳು ತುಂಬಿಕೊಂಡು ಒಯ್ಯಲು ಬಂದಿದ್ದು ಮತ್ತು  2. ಟ್ಯ್ರಾಕ್ಟರ ನಂ. ಕೆಎ 32 ಟಿಎ 5360 ನೇದ್ದು ಮರಳು ತುಂಬಿದು ಇರುತ್ತದೆ. ಟ್ಯ್ರಾಕ್ಟರನಲ್ಲಿದ್ದ ಮರಳಿನ ಅ:ಕಿ:4000=00/- ಇರುತ್ತದೆ. ಕಳ್ಳತನದಿಂದ ಮರಳು ತುಂಬಲು ತಂದಿದ್ದ ಹಿಟಾಚಿಯ ಡಿಸೇಲ್‌ ಆಗಿದ್ದರಿಂದ ಸ್ಥಳದಲ್ಲಿಯೇ ಬಿಟ್ಟು 2 ಟ್ಯ್ರಾಕ್ಟರಗಳನ್ನು ಮತ್ತು 3 ಜನರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಸಂದು ಸದರಿಯವರ ವಿರುದ್ಧ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 09-02-2014 ರಂದು  ಬೆಳೆಗ್ಗೆ 07-00 ಗಂಟೆಯ ಸುಮಾರಿಗೆ ಶ್ರೀ ಸಂಜೀವ ತಂದೆ ಮನೋಹ್ರ ವಾಡಿ  ಸಾ;ಕಾಳಮಂದರ್ಗಿ ರವರ ಮನೆಯ ಮುಂದಿದ್ದ ಬಟ್ಟೆ  ಒಗೆಯುವ ಕಲ್ಲನ್ನು  ಚಿತ್ರಾಬಾಯಿ ಗಂಢ ಕಲ್ಲಪ್ಪ  ಟೈಗರ ಸಂಗಡ 3 ಜನರು ಸಾಎಲ್ಲರೂ  ಕಾಳಮಂದರ್ಗಿ  ತಾ;ಜಿಗುಲಬರ್ಗಾ  ತಮ್ಮ  ಮನೆಯ  ಮುಂದೆ  ಹಾಕಿಕೊಂಡಿದ್ದು , ನಮ್ಮ ಮನೆಯ ಮುಂದಿದ್ದ  ಬಟ್ಟೆ  ಒಗೆಯುವ  ಕಲ್ಲನ್ನು  ನೀವು  ಯಾಕೆ  ತೆಗೆದುಕೊಂಡು  ಹೋಗಿದ್ದೀರಿ  ಅಂತಾ  ಕೇಳಿದ್ದಕ್ಕೆ  ಆರೋಫಿತರು ಫಿರ್ಯಾದಿಗೆ  ಕಲ್ಲಿನಿಂಧ  ಹೊಡೆ ಬಡೆ  ಮಾಡಿ ಅಪಮಾನ ಮಾಡಿ ಜೀವದ  ಬೆದರಿಕೆ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿ ಕಬ್ಬಿನ ಗದ್ದೆ ಭಸ್ಮ :
ಕಮಲಾಪೂರ ಠಾಣೆ : ದಿನಾಂಕ:08-02-2014 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ತನ್ನ ಓಕಳಿ ಸೀಮಾಂತ ರದಲ್ಲಿರುವ ಹೊಲ ಸರ್ವೆ ನಂ: 14/1 ನೇದ್ದರಲ್ಲಿ ಬೆಳೆದ ಎರಡು ಎಕರೆ ಕಬ್ಬಿಗೆ ಆಕಸ್ಮೀಕವಾಗಿ ವಿದ್ಯೂತ ತಂತಿಗಳು ಕೂಡುವಿಕೆಯಿಂದ ಬೆಂಕಿ ತಗುಲಿ ಕಬ್ಬು ಸುಟ್ಟಿದ್ದು ಇದರಿಂದ ತನಗೆ ಅಂದಾಜು 200000/- (ಎರಡು ಲಕ್ಷ ) ರೂಪಾಯಿಯಷ್ಟು ನಷ್ಟವಾಗಿರುತ್ತದೆ ಅಂತಾ ಶ್ರೀ ಶಿವಪುತ್ರ ತಂದೆ ಬಸಣ್ಣ ಮುಗಳಿ ಸಾ:ಓಕಳಿ ತಾ:ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.