POLICE BHAVAN KALABURAGI

POLICE BHAVAN KALABURAGI

29 August 2012

GULBARGA DISTRICT REPORTED CRIME


ಮನುಷ್ಯ ಕಾಣೆಯಾದ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ; ಶ್ರೀ ನಾಗೇಂದ್ರ ತಂದೆ ಯಂಕಪ್ಪ ರಾಸೂರ ಸಾ|| ಮ.ನಂ.204 ಗೋದುತಾಯಿ ನಗರ ಗುಲಬರ್ಗಾ ರವರು ನನ್ನ ಅಣ್ಣನಾದ ದೇವೆಂದ್ರಪ್ಪಾ ತಂದೆ ಯಂಕಪ್ಪಾ ರಾಸೂರ ಇತನು ನಮ್ಮ ಜೊತೆಯಲ್ಲಿ ನಮ್ಮ ಮನೆಯಲ್ಲಿಯೇ  ಇರುತ್ತಿದ್ದರು.  ದಿನಾಂಕ :17/07/2012 ರಂದು ಸಾಯಂಕಾಲ 6-00 ಗಂಟೆಗೆ ಮನೆಯಿಂದ ಹೋರಗೆ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಹುಡುಕಾಡಲಾಗಿ ಸಿಕ್ಕಿರುವದಿಲ್ಲ.ಕಾಣೆಯಾದ ನನ್ನ ಅಣ್ಣನ ಚಹರೆ ಪಟ್ಟಿ  ಎತ್ತರ 5 2 ,ವಯಸ್ಸು-65, ತೆಳ್ಳನೆಯ ಮೈಕಟ್ಟು, ಸಾದಕಪ್ಪು, ಎಡಕಿವಿಯ ಕೆಳಗಡೆ ಕಪ್ಪು ಗುಳ್ಳಿ, ಬಿಳಿ ಕೂದಲು, ಬಿಳಿ ಬಣ್ಣದ ಶರ್ಟ, ಬಿಳಿ ಬಣ್ಣದ ದೋತಿ ಧರಿಸಿರುತ್ತಾರೆ.  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.76/2012 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.ಸದರಿ ಠಾಣಾಧಿಕಾರಿಗಳು ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂ: 08472-263617, ಮೊಬಾಯಿಲ್ ಸಂ: 9480803545, ಕಂಟ್ರೋಲ್ ರೂಮ ನಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.