POLICE BHAVAN KALABURAGI

POLICE BHAVAN KALABURAGI

18 October 2011

GULBARGA DIST REPORTED CRIMES

ಸ್ಟೇಷನ ಬಜಾರ ಠಾಣೆ :ಶ್ರೀ ರಾಜ ತಂದೆ ಲಾಲಚಂದ ಧಾರುಂಗ ಸಾ: ಸಿಕಾತೊಡೆ ಪೋಸ್ಟ : ಪಸ್ಟ ಸಿಲೆ ಜಿ : ಈಸ್ಟಸಿಯಾಂಗ ಅರುಣಾಚಲ ಪ್ರದೇಶ ಹಾ.ವ : ಎಮ್.ಎ.ಎಮ್. ಹಾಸ್ಟೇಲ ಗುಲಬರ್ಗಾ ರವರು, ನನ್ನ ಗೆಳೆಯರಾದ, ಬಾಸಕ್ ಕೋಯ್ಯೋ, ದೋರ್ಜಿ ಸೇರಿಂಗ್, ಲಿಂಗ ಬಿತ್ತಿನ್, ಆನಂದ ಪೈಥ ಧರ್ಮೇಶ, ವಿಚಿಕತಾ, ಮತ್ತು ರಫಿಯಾ ಥಾಯಾಂಗ, ಎಲ್ಲರೂ ಕೂಡಿಕೊಂಡು ಎಮ್.ಎ.ಎಮ್. ಹಾಸ್ಟೇಲ ದಿಂದ ಪಿ.ಡಿ.ಎ. ಕಾಲೇಜಿಗೆ ಬರುವಾಗ ಕೋರಂಟಿ ಹನುಮಾನ ದೇವಾಲಯದ ಹತ್ತಿರ ಇರುವ ನೀರಿನ ಟ್ಯಾಂಕ ಹತ್ತಿರ ಸಂದೀಪ, ಶ್ರೀನಿವಾಸ, ಆಕಾಶ, ಸಂಗಡ ಸುಮಾರು 15 ಜನರು ಕೂಡಿ ಬಂದು ನಮಗೆ ನಿಲ್ಲಿಸಿ ನಮಗೆ ಹೊಡೆಬಡೆ ಮಾಡಿ ಗುಪ್ತಗಾಯ ಮತ್ತು ರಕ್ತಗಾಯ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಗುನ್ನೆ ಸಂಖ್ಯೆ 186/11 ಕಲಂ 147, 148, 341, 323, 324,325, 506, ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ಸ್ಟೇಷನ ಬಜಾರ ಠಾಣೆ :ಶ್ರೀ ಸಂದೀಪ ತಂದೆ ಕೃಷ್ಣಾ ಸಿಂದೆ. ಸಾ: ಸಂತೋಷ ಕಾಲೋನಿ ಗುಲಬರ್ಗಾ ರವರು ದಿನಾಂಕ : 17-10-2011 ರಂದು 12:30 ರ ಸುಮಾರಿಗೆ ಫಿರ್ಯಾದಿದಾರರು ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜ ಕ್ಯಾಂಪಸ್ ನ ಆಟೋಮೊಬೈಲ್ ಡಿಪಾರ್ಟಮೆಂಟ ಎದುರಿಗೆ ಸ್ನೇಹಿತರಾದ ಶ್ರೀನಿವಾಸ ಚಿದರೆ, ಆಕಾಶ ಒಂಟಿ, ಎಲ್ಲರೂ ಮಾತನಾಡುತ್ತಾ ನಿಂತಾಗ ಪಿ.ಡಿ.ಎ. ಕಾಲೇಜಿನ ಕೆಲ ವಿದ್ಯಾರ್ಥಿಗಳು ಬಾಯಿ ಮಾತಿನ ತಕರಾರು ಮಾಡುತ್ತಿದ್ದುದನ್ನು ನಾನು ಮತ್ತು ನನ್ನ ಸ್ನೇಹಿತರು ನೋಡಿ ಅವರಿಗೆ ಬುದ್ದಿವಾದ ಹೇಳುವಾಗ ಅವರಲ್ಲಿದ್ದ ರಫಿಯಾ ಎಂಬುವವನು ನನಗೆ ನೀವೇನು ಹೇಳುತ್ತಿ ಎಂದು ಕೇಳಿ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಆನಂದ ಉತ್ತಮ ರಕ್ತಗಾಯಪಡಿಸಿದ್ದು ಆಗ ಬಿಡಿಸಲು ಬಂದ ಶ್ರೀನಿವಾಸನಿಗೆ ಕೂಡಾ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿದ್ದು ಮತ್ತು ಜೀವ ಬೆದರಿಕೆ ಹಾಕಿರುತ್ತಾರೆ. ಕಾರಣ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಗುನ್ನೆ ನಂ 185/2011 ಕಲಂ 147, 148, 323, 324, 504, 506, ಸಂ 149 ಐಪಿಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ :-
ಮಳಖೇಡ ಠಾಣೆ :
ಶ್ರೀಮತಿ ಮೆಹಬೂಬಿ ಗಂಡ ಮೆಹಬುಬ ಶಾಹಾ ಧರವೇರ ಸಾ|| ಹುಡಾ ಬಿ ರವರು, ನಾನು ಮತ್ತು ನನ್ನ ಗಂಡ ಸೇಡಂ ಗುಲಬರ್ಗಾ ರೋಡಿ ನ ಮೇಲೆ ನಡೆದುಕೊಂಡು ಸರ್ಕಾರಿ ಆಸ್ಪತ್ರೆ ಮಳಖೇಡಕ್ಕೆ ಬರುತ್ತಿರುವಾಗ ಮೋಟಾರು ಸೈಕಲ್ ನಂ ಎಪಿ 28 ಎ.ಎಸ್ 6226 ನೇದ್ದರ ಸವಾರ ಶೇಖ ಹಬೀಬ ಸಾ|| ತಾಂಡೂರ ಇವನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಬಂದು ನನಗೆ ಅಪಘಾತ ಪಡಿಸಿ ಭಾರಿ ಗಾಯಗೊಳಿಸಿದ್ದು ಕಾರಣ ಶೇಖ ಹಬೀಬ ಇವನ ವಿರುಧ್ಧ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಗುನ್ನೆ ನಂ 95/2011 ಕಲಂ 279. 338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.

ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ :-
ವಿಶ್ವವಿದ್ಯಾಲಯ ಠಾಣೆ :
ಶ್ರೀ ರಾಚಣ್ಣ ತಂದೆ ರಾಮಚಂದ್ರಪ್ಪಾ ಮಾಲಿ ಪಾಟೀಲ ಸಾ|| ಸಣ್ಣೂರು ಗ್ರಾಮ ತಾ:ಜಿ: ಗುಲಬರ್ಗಾ ರವರು, ದಿನಾಂಕ 16-10-2011 ರಂದು ಸಾಯಂಕಾಲ ನಮ್ಮೂರ ಅಂದರೆ ಸಣ್ಣೂರು ಗ್ರಾಮ ಪಂಚಾಯತ ಪಿ.ಡಿ.ಓ ಅಧಿಕಾರಿಗಳಾದ ಮಂದಾಕಿನಿ ಇವರು ಗುಲಬರ್ಗಾದ ಬಿ.ಶ್ಯಾಮಸುಂದರ ಬಡಾವಣೆಯ ತಮ್ಮ ಮನೆಯಲ್ಲಿ ನೆಣು ಹಾಕಿಕೊಂಡು ಮೃತಪಟ್ಟ ಹಿನ್ನಲೆಯಲ್ಲಿ ಗುಲಬರ್ಗಾದ ರಾಘವೇಂದ್ರ ನಗರ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ರಾತ್ರಿ 11-30 ಪಿಎಮ ಕ್ಕೆ ನಮ್ಮ ಗ್ರಾಮಕ್ಕೆ ಬಂದು ನಮ್ಮ ಗ್ರಾಮದ ಜಗದೀಶ ತಂಧೆ ಶರಣಪ್ಪಾ ನಂದೂರ ಇವರಿಗೆ ಹಿಡಿದುಕೊಂಡು ಹೋದ ಮೇಲೆ ಅವರ ಮನೆಗೆ ಬಂದಾಗ ಅವನಿಗೆ ಹಿಡಿದುಕೊಂಡು ಹೋಗುವ ಕಾಲಕ್ಕೆ ನಾನು ಮತ್ತು ನಮ್ಮೂರ ಇತರೆ ಜನರು ನೋಡುತ್ತಾ ನಿಂತಾಗ ಜಗದೀಶ ನಂದೂರ ಇತನ ಅಣ್ಣ ಶಿವಪುತ್ರಪ್ಪಾ ತಂದೆ ಶರಣಪ್ಪಾ ನಂದೂರ ಮತ್ತು ತಮ್ಮ ಮಲ್ಲಿಕಾರ್ಜುನ ತಂದೆ ಶರಣಪ್ಪಾ ನಂದೂರ ಇವರು ನನ್ನ ಹತ್ತಿರ ಬಂದವರೆ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ನಮ್ಮ ಮನೆ ಪೊಲೀಸರಿಗೆ ನೀನೆ ತೋರಿಸಿ ನನ್ನ ತಮ್ಮ ಜಗದೀಶ ನಿಗೆ ಹಿಡಿದುಕೊಟ್ಟಿರುವಿ ಶಿವಪುತ್ರಪ್ಪಾ ಮತ್ತು ಮಲ್ಲಿಕಾರ್ಜುನ ಇಬ್ಬರೂ ಹೊಡೆಬಡೆ ಮಾಡಿರುತ್ತಾರೆ.ಮತ್ತು ನನ್ನ ತಮ್ಮ ಜಗದೀಶನಿಗೆ ಏನಾದರೂ ಶಿಕ್ಷೆ ಆದರೆ ನಿನಗೆ ಖಲಾಸ ಮಾಡುತ್ತೇವೆ. ಅಂತಾ ಜೀವದ ಭಯ ಹಾಕಿರುತ್ತಾರೆ. ಕಾರಣ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಗುನ್ನೆ ನಂ. 235/11 ಕಲಂ 341.323.504.506 ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :-
ಜೇವರ್ಗಿ ಠಾಣೆ :
ಶ್ರೀ ಸುಲ್ತಾನ ತಂದೆ ಜಾಫರ ಸಾ|| ಹೀರೆಬೂದುರ ರವರು ದಿನಾಂಕ 16-10-2011 ರಂದು ನಾನು ಮತ್ತು ನಮ್ಮ ಮನೆಯವರೆಲ್ಲರೂ ಗುಲಬರ್ಗಾದ ಬಂದೆ ನವಾಜ ದರ್ಗಾ ಜಾತ್ರೆ ಮುಗಿಸಿಕೊಂಡು ನಮ್ಮೂರಿಗೆ ಹೋಗುವಾಗ ಕೆಲ್ಲೂರ ಗ್ರಾಮದ ಹತ್ತಿರ ನಾವೆಲ್ಲೂರ ಮೂತ್ರ ವಿಸರ್ಜನೆಗೆ ಇಳಿದಿದ್ದೆವು ಹಾಗೂ ನನ್ನ ಮಗ ಬಾಬು ಮೂತ್ರ ವಿಸರ್ಜನೆ ಮಾಡಲು ರೋಡ ಕ್ರಾಸ ಮಾಡುತ್ತಿದ್ದಾಗ ಜೇವರ್ಗಿ ಕಡೆಯಿಂದ ಯಾರೋ ಕಾರ್ ಚಾಲಕ ನನ್ನ ಮಗನಾದ ಬಾಬುಗೆ ಅಪಘಾತ ಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ. ಅವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಗುನ್ನೆ ನಂ 183/11 ಕಲಂ 279.337..ಐ.ಪಿ.ಸಿ. 187 ಐ.ಎಮ್.ವ್ಹಿ ಆಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.