POLICE BHAVAN KALABURAGI

POLICE BHAVAN KALABURAGI

01 November 2011

GULBARGA DIST REPORTED CRIMES

ಹಲ್ಲೆ ಪ್ರಕರಣ :
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ಸಂತೋಷ ತಂದೆ ನಾಗಪ್ಪಾ ಗೌಳಿ ಸಾ|| ಗಾಂದಿ ಚೌಕ ಶಹಾಬಾದ ರವರು ಸುವರ್ಣ ವೈನ ಶಾಪನಲ್ಲಿ ಕುಡಿಯುತ್ತ ಕುಳಿತಾಗ ಮಲ್ಲಿಕಾರ್ಜುನ ಯಡ್ರಾಮಿ ಇತನು ನನಗೆ ಬಂದು ಕ್ವಾಟರ ಕುಡಿಸು ಅಂತಾ ಕೇಳಿದನು ಆಗ ನಾನು ನನ್ನ ಹತ್ತಿರ ಹಣವಿಲ್ಲವೆಂದು ಹೇಳಿದ್ದಕ್ಕೆ ನನಗೆ ಕುಡಿಸಲು ಹಣ ಇಲ್ಲಾ ಅಂತಾ ಹೇಳುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನನಗೆ ಅಂಗಿ ಹಿಡಿದು ಎಳೆದಾಡಿ ಹಿಡಿಗಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ 162/2011 ಕಲಂ: 504 324 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :
ಅಬ್ದುಲ ಮಜೀದ ತಂದೆ ಅಬ್ದುಲ ರಹೀಮ ಸಾಃ ಮದಿನಾ ಕಾಲೋನಿ ಜೀಲಾನಾಬಾದ ಗುಲಬರ್ಗಾ ಇವರು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರ ಸಂ. 465/11 ನೇದ್ದನ್ನು ಸಲ್ಲಿಸಿದ ಖಾಸಗಿ ಅರ್ಜಿ ಸಾರಾಂಶವೆನೇಂದರೆ, ದಿನಾಂಕ: 13/07/2011 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಮೃತ ದಸ್ತಗೀರ ತಂದೆ ಮಹಿಬೂಬಸಾಬ ಇಬ್ಬರು ಕೂಡಿಕೊಂಡು ಲಾರಿ ನಂ. ಕೆಎ:32-9798 ನೇದ್ದನ್ನು ಹುಮನಾಬಾದ ಕಡೆಯಿಂದ ಗುಲಬರ್ಗಾಕ್ಕೆ ಬರುತ್ತಿರುವಾಗ ಎದುರುಗಡೆಯಿಂದ ವಾಹನ ನಂ. ಕೆಎ:39-450 ನೇದ್ದರ ಚಾಲಕನಾದ ರವಿ ತಂದೆ ಬಸಪ್ಪಾ ತೆಳಕೇರಿ ಸಾಃಹೂವಿನಹಳ್ಳಿ ತಾಃಅಫಜಲಪೂರ ಜಿಃಗುಲಬರ್ಗಾ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಈ ಅಪಘಾತದಲ್ಲಿ ನಮ್ಮ ವಾಹನದ ಮಾಲಿಕರು ಮೃತಪಟ್ಟಿರುತ್ತಾರೆ ನನಗೆ ಭಾರಿ ಗಾಯವಾಗಿರುತ್ತದೆ. ಅಪಘಾತ ಪಡಿಸಿದನ ವಿರುದ್ದ ಪ್ರಕರಣ ದಾಖಲಾಗದೇ ಇರುವದರಿಂದ ಮಾನ್ಯ 1ನೇ ಅಪರ ಜೆ.ಎಂ.ಎಫ್.ಸಿ ನ್ಯಾಯಾಲಯ ಗುಲಬರ್ಗಾ ರವರ ಆದೇಶ ಕಲಂ. 156(3) ಸಿಆರ್.ಪಿಸಿ ನೇದ್ದರ ಪ್ರಕಾರ ಠಾಣೆ ಗುನ್ನೆ ನಂ.136/2011 ಕಲಂ.279,337,338,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ತನಿಖೆ ಕೈಕೊಳ್ಳಲಾಗಿದೆ

GULBARGA DIST REPORTED CRIMES


ಗುಲಬರ್ಗಾ ನಗರದ ಮಹಾತ್ಮ ಬಸವೇಶ್ವರ ನಗರ ವೃತ್ತದ ಪೊಲೀಸರ ಕಾರ್ಯಚರಣೆಯಿಂದ 3 ಜನ ಸುಲಿಗೆಕೊರರ ಬಂದನ , 4.01 ಲಕ್ಷ ರೂಪಾಯಿ ನಗದು ಹಣ, ಕಾರು, ಮೊಟಾರ ಸೈಕಲ ಜಪ್ತಿ.

ಖಚಿತ ಮಾಹಿತಿ ಅನ್ವಯ ದಿನಾಂಕ 31/10/2011 ರಂದು ರಾತ್ರಿ ಕುಸನೂರ ರಸ್ತೆ ಎಸ್.ಆರ್.ವಿ ಬಾರ & ರೆಸ್ಟೋರೆಂಟ ಹತ್ತಿರ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು 3 ಜನ ಕುಖ್ಯಾತ ಸುಲಿಗೆಕೋರರನ್ನು ಬಂಧಿಸಿ ಅವರಿಂದ 4.01 ಲಕ್ಷ ನಗದು ಹಣ, ಒಂದು ಚಾಕು, ಮಾರುತಿ ಸ್ವೀಪ್ಟ ಕಾರ, 2 ಮೊಟಾರ ಸೈಕಲ, ಮೊಬಾಯಿಲ್ ಪೊನ್ , ಸಿಮ್ ಕಾರ್ಡ ವಗೈರೆಗಳನ್ನು ವಶ ಪಡಿಸಿಕೊಂಡಿದ್ದು ಪರಾರಿ ಇರುವ ಇನ್ನೊರ್ವ ಆರೋಪಿ ಪತ್ತೆಗಾಗಿ ತನಿಖೆ ಮುಂದುವರೆಯಿಸಿರುತ್ತಾರೆ. ದಿನಾಂಕ 15/9/2011 ರಂದು ಮದ್ಯಾಹ್ನ ಕಾಳಗಿ ಗುಲಬರ್ಗಾ ರಸ್ತೆಯ ಮಾರ್ಗ ಮದ್ಯದಲ್ಲಿ ಹಾಡು ಹಗಲೇ ಕಾಳಗಿ ಗ್ರಾಮದ ದತ್ತಾ ವೈನ ಶಾಪನ ಮಾಲಿಕರಾದ ಶ್ರೀ ದತ್ತು ಗುತ್ತೆದಾರ ನೇದ್ದರ ಮ್ಯಾನೇಜರರಾದ ಶ್ರೀ ಅನೀಲ ಜಂಭಗಿ ಮತ್ತು ಖತಲಯ್ಯಾ ಗುತ್ತೆದಾರ ನೇದ್ದವರು ಮೊಟಾರ ಸೈಕಲನಿಂದ ನಗದು ಹಣ 6,38,000/- ರೂಪಾಯಿಗಳನ್ನು ಗುಲಬರ್ಗಾ ಬ್ಯಾಂಕಿಗೆ ಪಾವತಿಸಲು ತರುತ್ತಿದ್ದಾಗ ಸಂಚು ಹೂಡಿದ ಆರೊಪಿತರು ಮಾರ್ಗ ಮದ್ಯದಲ್ಲಿ ಫಿರ್ಯಾದಿದಾರರ ಮೊಟಾರ ಸೈಕಲ ತಡೆದು ಅಡ್ಡ ಗಟ್ಟಿ ಚಾಕು ಮತ್ತು ಬಡಿಗೆಯಿಂದ ಹಲ್ಲೆ ಮಾಡಿ ಹಣ ದೊಚಿಕೊಂಡು ಫರಾರಿಯಾಗಿದ್ದು ಈ ಬಗ್ಗೆ ಗುಲಬರ್ಗಾ ನಗರದ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ.ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಶ್ರೀ ಹೆಚ್. ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಶ್ರೀ ಪಂಡಿತ ಸಗರ ಪಿ.ಎಸ್.ಐ ವಿವಿ ಠಾಣೆ, ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಮ್.ಬಿ ನಗರ ಠಾಣೆ ಹಾಗೂ ಸಿಬ್ಬಂದಿಯವರಾದ ಸಿದ್ರಾಮ, ಶಿವಪುತ್ರಸ್ವಾಮಿ, ಮನೋಹರ, ರವಿಂದ್ರ, ವೇದರತ್ನಂ ಯಲ್ಲಪ್ಪಾ, ಸುರೇಶ, ಪ್ರಭಾಕರ, ಅಶೋಕ, ಅರ್ಜುನ, ಇಮ್ತಿಯಾಜ, ಚಂದ್ರಕಾಂತ ಮುರುಡ ಬಲರಾಮ, ಮಶಾಕ, ರಮೇಶ ರವರು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಯಿಸಿ ಆರೋಪಿತರನ್ನು ಪತ್ತೆ ಹಚ್ಚಿದ್ದು ಆರೋಪಿತರಾದ ಧನರಾಜ @ ಚಿನ್ಯಾ ತಂದೆ ಮೈಲಾರಿ ಶೇಳ್ಳಗಿ ವಃ 19 ವರ್ಷ ಉಃ ವಿದ್ಯಾರ್ಥಿ ಸಾ|| ಭೂಪಾಲ ತೆಗನೂರ ಹಾಲಿ ಜಿಡಿಎ ಕಾಲೋನಿ ಗುಲಬರ್ಗಾ, ಬಸು @ ಬಸವರಾಜ ತಂದೆ ಜಗದೀಶ ಹೊಸಮನಿ ವಃ 19 ವರ್ಷ ಉಃ ವಿದ್ಯಾರ್ಥಿ ಸಾ|| ಕಾಳಗಿ, ದತ್ತು ತಂದೆ ಹಣಮಂತ ಪೂಜಾರಿ ವಃ 22 ವರ್ಷ ಉಃ ವಿದ್ಯಾರ್ಥಿ ಸಾ|| ಹಾಗರಗಾ, ರಾಕೇಶ ತಂದೆ ಚಂದ್ರಕಾಂತ ಭಂಢಾರಿ ವಃ 22 ವರ್ಷ ಉಃ ವಿದ್ಯಾರ್ಥಿ ಸಾ|| ಪೂಜಾ ಕಾಲೋನಿ ಗುಲಬರ್ಗಾರವರು ಸಂಚು ಮಾಡಿ ಹೊಂಚು ಹಾಕಿ ಅಪರಾದವೆಸಿರುತ್ತಾರೆ. ತನಿಖೆಯ ಕಾಲಕ್ಕೆ ಆಪಾದಿತನಾದ ಕಾಳಗಿಯ ಬಸು @ ಬಸವರಾಜ ತಂದೆ ಜಗದೀಶ ಸಾ|| ಕಾಳಗಿ ಇತನು ಪಿರ್ಯಾದಿದಾರರು ಹಣ ತೆಗೆದುಕೊಂಡು ಹೋಗುವದನ್ನು ಮುಂಚಿತವಾಗಿ ತಿಳಿದುಕೊಂಡು ಗುಲಬರ್ಗಾದಲ್ಲಿದ್ದ ಧನರಾಜ, ರಾಕೇಶ ಮತ್ತು ದತ್ತು ಇವರಿಗೆ ಹಣ ತೆಗೆದುಕೊಂಡು ಹೊರಟ ವ್ಯಕ್ತಿಗಳ ಚಹರೆ ಪಟ್ಟಿ ಹಾಗೂ ಮೊಟಾರ ಸೈಕಲ್ ನಂಬರ ಮೊಬಾಯಿಲ್ ಪೊನ್ ಮೂಲಕ ತಿಳಿಸಿದ ಮೇರೆಗೆ 3 ಜನ ಆರೋಪಿತರು ಖಾಜಾ ಕೊಟನೂರ ಬಳಿ ಹೋಗಿ ಮೊಟಾರ ಸೈಕಲಕ್ಕೆ ಅಡ್ಡ ಗಟ್ಟಿ ಅವರಲ್ಲಿದ್ದ 6,38,000/- ರೂಪಾಯಿಗಳನ್ನು ನಗದು ಹಣ ದೋಚಿ ಮೊಟಾರ ಸೈಕಲ ಹಾಗೂ ಕಾರಿನ ಮೂಲಕ ಪರಾರಿಯಾದ ಬಗ್ಗೆ ತನಿಖೆ ಕಾಲಕ್ಕೆ ತಿಳಿದು ಬಂದಿರುತ್ತದೆ. ವೈಜ್ಞಾನಿಕ ರೀತಿಯಲ್ಲಿ ತನಿಖೆ ಕೈಕೊಂಡು ಪ್ರಕರಣವನ್ನು ಭೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಇಲಾಖೆ ವತಿಯಿಂದ ಬಹುಮಾನ ಘೋಷಣೆ ಮಾಡಲಾಗಿದೆ,

GULBARGA DIST REPORTED CRIMES

ಮುಂಜಾಗ್ರತೆ ಕ್ರಮ :
ಎಂ.ಬಿ.ನಗರ ಪೊಲೀಸ್ ಠಾಣೆ
: ಶ್ರೀ ಶ್ರೀನಿವಾಸರೆಡ್ಡಿ ಸಿ.ಪಿ.ಸಿ ರವರು ದಿನಾಂಕಃ 31/10/2011 ರಂದು ಬೆಳಗ್ಗೆ 08:00 ಗಂಟೆಯಿಂದ ಮದ್ಯಾಹ್ನ 02:00 ಗಂಟೆಯವರೆಗೆ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಬಸವೇಶ್ವರ ಆಸ್ಪತ್ರೆಯ ಹತ್ತಿರ ಒಬ್ಬ ವ್ಯಕ್ತಿ ಅನುಮಾನಸ್ಪದ ರೀತಿಯಲ್ಲಿ ಓಡಾಡುತ್ತಿದ್ದು ಸದರಿಯವನನನ್ನು ವಿಚಾರಿಸಲು ಸಂತೋಷ ತಂದೆ ಮರೆಪ್ಪಾ ಸಾಃ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನನ್ನು ಪುನಃ ವಿಚಾರಿಸಲು ಅವನು ತನ್ನ ನಿಜವಾದ ಹೆಸರು ಆಜಾದ ತಂದೆ ರವಿ ಕಾಂಬಳೆ ವಯಃ 22 ವರ್ಷ ಉಃ ಬೇಕಾರ ಸಾಃ ಬಾಪು ನಗರ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನನ್ನು ಯಾಕೆ ಮುಖ ತಪ್ಪಿಸಿಕೊಂಡು ಓಡುತ್ತಿರುವಿ ಅಂತಾ ಕೇಳಿದಕ್ಕೆ ಯಾವುದೇ ಸಮರ್ಪಕವಾದ ಉತ್ತರ ನೀಡಲಿಲ್ಲ. ಆತನನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 154/2011 ಕಲಂ. 109 ಸಿ.ಆರ್.ಪಿಸಿ. ನೆದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ
: ಶ್ರೀ ಶರಣಬಸಪ್ಪ ತಂದೆ ರಾಜಣ್ಣ ಸೀರ ಸಾ|| ಚಿಂಚನಸೂರ ರವರ ( ದೂರು ಹೇಳಿಕೆ ಮತ್ತು ವರದಿಯನ್ನು ಶ್ರೀ ಹೈದರ ಖಾನ ಪಿ.ಸಿ ಹೆಚ್ಚುವರಿ ಸಂಚಾರಿ ಠಾಣೆ ಗುಲಬರ್ಗಾ ರವರು ಹಾಜರ ಪಡಿಸಿದ್ದರ ಸಾರಾಂಶವೆನಂದರೆ) ನಾನು ದಿನಾಂಕ:29/10/2011 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಆದಿತ್ಯಾ ಹೊಟೇಲ ಹತ್ತಿರ ಅಕ್ಕನ ಮನೆಗೆ ನಡೆದುಕೊಂಡು ಹೊಗುತ್ತಿರುವಾಗ ತೋಳನವಾಡಿ ಗ್ರಾಮದ ಬಸವರಾಜ ಮಾಮಾ, ಸಿದ್ದಾರಾಮ, ಶಿವಾನಂದ ಬುಟ್ಟಿ, ಶರಣಬಸಪ್ಪ ಬುಟ್ಟಿ, ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ಮಗನೆ ಆರು ತಿಂಗಳ ಹಿಂದೆ ನಮ್ಮ ಮೇಲೆ ಕೇಸು ಮಾಡಿದ್ದಿ ಆ ಕೇಸನ್ನು ವಾಪಸ ತಗೆದುಕೊ ಅಂತಾ ನೀನಗೆ ಎಷ್ಟು ಸಾರಿ ಹೇಳಿದರು ನೀನು ಕೇಸ ವಾಪಸ ತಗೆದುಕೊಂಡಿರುವದಿಲ್ಲಾ ಅಂತಾ ಅಂದವರೆ ಹೊಡೆ ಬಡೆ ಮಾಡಿರುತ್ತಾರೆ ನಾನು ಬೇಹುಸ ಆಗಿ ಬಿದ್ದಾಗ ಯಾರೋ ನನಗೆ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಂತರ ನನ್ನನ್ನೂ ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ಗಂಗಾ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದ್ದು ಸದ್ಯ ನಾನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದನೆ. ನನಗೆ ಹೊಡೆ ಬಡೆ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:205/2011 ಕಲಂ: 341, 323, 324,114, 504, 506, ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
: ಶ್ರೀ ನಿಬಾರಾನ ತಂದೆ ಅಸಾಳಿ ಮೋದಿ ವರ್ಷ ಉ: ಸೆಂಟ್ರಿಂಗ ಕೆಲಸ ಸಾ: ಗೋವಿಂದಪುರ ಜಿ||ಪುರಲಿಯಾ ರಾಜ್ಯ || ಪಶ್ಚಿಮ ಬಂಗಾಳ ರಾಜ್ಯ ರವರು ನಾನು ಮಹ್ಮದ ಸಾಬ ಅಟೋರೀಕ್ಷಾ ಕೆಎ 32 ಎ 9220 ನೇದ್ದವನ ಅಟೋದಲ್ಲಿ ಕುಳಿತುಕೊಂಡು ಹೊರಟಾಗ ಮಿನಿವಿದಾನ ಸೌಧ 2 ನೇ ಗೇಟಿನ ಎದುರು ರೋಡಿನ ಮೇಲೆ ಅಟೊ ಚಾಲಕನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಅಟೋರಿಕ್ಷಾ ಪಲ್ಟಿ ಮಾಡಿದ್ದು ಅಟೋ ರೀಕ್ಷಾದಲ್ಲಿ ಕುಳಿತಿದ್ದ ನನಗೆ ಭಾರಿಗಾಯ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 139/2011 ಕಲಂ 279, 338 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ