POLICE BHAVAN KALABURAGI

POLICE BHAVAN KALABURAGI

30 July 2016

Kalaburagi District Reported Crimes

ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಸಾತಮ್ಮ ಗಂಡ ದುಂಡಪ್ಪ ಕ್ಲಲೂರ ಸಾ|| ತಾ|| ಜೇವರಗಿ ಇವರಿಗೆ ಶರಣಪ್ಪ, ಸಿದ್ದಪ್ಪ, ಅನಸೂಬಾಯಿ, ಲಕ್ಷ್ಮೀಬಾಯಿ ಅಂತಾ 4 ಜನ ಮಕ್ಕಳಿರುತ್ತಾರೆ,ನನ್ನ ಮಗಳು ಲಕ್ಷ್ಮೀಬಾಯಿ ಇವಳಿಗೆ ಮನ್ನಾಪೂರದ ಶಿವರಾಯ ಬಿರೆದಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಲಕ್ಷ್ಮೀಬಾಯಿ ಇವಳ ಗಂಡನ ಮನೆಯವರು ಬಾರಿ ಬಡವರಿರುತ್ತಾರೆ, ಆದ್ದರಿಂದ ನನ್ನ ಮಗ ಶರಣಪ್ಪನು 4 ಎಕರೆ ಜಮೀನು ನನ್ನ ಮಗಳು ಲಕ್ಷ್ಮೀಬಾಯಿ ಇವಳ ಹೆಸರಿನಿಂದ ಮಾಡಿಸಿದ್ದು ಇರುತ್ತದೆ.ನನ್ನ ಉಪಜೀವನಕ್ಕಾಗಿ ನನ್ನ ಹೆಸರಿನಿಂದ 5 ಎಕರೆ ಜಮೀನು ಮಾಡಿದ್ದು ಇರುತ್ತದೆ. ಉಳಿದ 11 ಎಕರೆ ಜಮೀನಿನಲ್ಲಿ ನನ್ನ ಮಗ ಶರಣಪ್ಪ ಮತ್ತು ಸಿದ್ದಪ್ಪ ಹಂಚಿಕೊಂಡಿದ್ದು ಇರುತ್ತದೆ. ಆದರೆ ನನ್ನ ಮಗ ಶರಣಪ್ಪನ ಹೆಂಡತಿ ಈರಮ್ಮ ಮತ್ತು ಮಕ್ಕಳಾದ ಪ್ರಭು, ದುಂಡಪ್ಪ ಇವರು ನಮಗೆ ಕೇಳದೆ ಲಕ್ಷ್ಮೀಬಾಯಿಗೆ ಯಾಕೆ ಆಸ್ತಿಯಲ್ಲಿ ಪಾಲು ಕೊಟ್ಟಿದ್ದಿ ಅಂತಾ ನನ್ನೊಂದಿಗೆ ಹಾಗೂ ನನ್ನ ಮಗ ಶರಣಪ್ಪನೊಂದಿಗೆ ಜಗಳ ತಗೆಯುತ್ತಾ ಬಂದಿದ್ದು ಇರುತ್ತದೆ. 3-4 ದಿನಗಳ ಹಿಂದೆ ನನ್ನ ಮಗ ಶರಣಪ್ಪನು ಹೊಲ ಬಿತ್ತಿಸಿ ಬರುತ್ತೇನೆ ಅಂತಾ ಹೇಳಿ ಬಳ್ಳೂಂಡಗಿಗೆ ಹೋಗಿದ್ದನು. ದಿನಾಂಕ: 28-07-2016 ರಂದು ರಾತ್ರಿ 8-00 ಗಂಟೆಗೆ ಒಂದು ಟಂಟಂದಲ್ಲಿ ನನ್ನ ಮಗ ಶರಣಪ್ಪನಿಗೆ ತಂದು ಮನ್ನಾಪೂರದಲ್ಲಿರುವ ನಮ್ಮ ಮನೆಯ ಹತ್ತಿರ ಬಿಟ್ಟು ಹೋಗಿದ್ದು, ನನ್ನ ಮಗನ ಮೈ ತುಂಬೆಲ್ಲಾ ಕಂದು ಗಟ್ಟಿದ ಗಾಯಗಳಾಗಿದ್ದು  ನಾನು ಮತ್ತು ನನ್ನ ಮಗಳು ಲಕ್ಷ್ಮೀಬಾಯಿ, ನನ್ನ ಅಳಿಯ ಶಿವರಾಜ ಎಲ್ಲರೂ ಕೂಡಿ ಶರಣಪ್ಪನಿಗೆ ವಿಚಾರಿಸಲಾಗಿ ದಿನಾಂಕ: 27-07-2016 ರಂದು ರಾತ್ರಿ 6-00 ಪಿ,ಎಮ್ ಸುಮಾರಿಗೆ ನನ್ನ ಹೆಂಡತಿ ಈರಮ್ಮ ಮಕ್ಕಳಾದ ಪ್ರಭು ಮತ್ತು ದುಂಡಪ್ಪ  ಇವರೆಲ್ಲರೂ ಕೂಡಿ ನನಗೆ ಕೈ ಕಾಲು ಕಟ್ಟು ನಮ್ಮ ಮನೆಯಲ್ಲಿ ಹಾಕಿ ಕಲ್ಲಿನಿಂದ ಮೈ ಕೈಗೆ ಹೊಟ್ಟೆಗೆ ಹೊಡೆದಿದ್ದು ಆಗ ನನ್ನ ತಮ್ಮ ಸಿದ್ದಣ್ಣ ಹಾಗೂ ಇತರರೂ ಕೂಡಿ ಜಗಳ ಬಿಡಿಸಿದ್ದು ಇರುತ್ತದೆ ಅಂತಾ ತಿಳಿಸಿದಾಗ ನಾವು ಗಾಬರಿಯಾಗಿ ನೋಡಲಾಗಿ ಶರಣಪ್ಪನ ಮೈ ಕೈಗೆ ಹೊಟ್ಟೆಗೆ ಕಂದುಗಟ್ಟಿದ ಗಾಯಗಳಾಗಿದ್ದವು. ನಿನ್ನೆ ರಾತ್ರಿಯಾಗಿದ್ದರಿಂದ ಇಂದು ದಿನಾಂಕ: 29-07-2016 ರಂದು ನಾನು ನನ್ನ ಮಗಳು ಲಕ್ಷ್ಮೀಬಾಯಿ ಮತ್ತು ನನ್ನ ಮಗ ಶರಣಪ್ಪ ಎಲ್ಲರೂ ಕೂಡಿ ಮನ್ನಾಪೂರದಿಂದ ನೆಲೋಗಿಗೆ ಪೊಲೀಸ ಕೇಸ ಕೊಡಲು ಬಂದಿದ್ದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಸರಕಾರಿ ಆಸ್ಪತ್ರೆ ನೆಲೋಗಿಯಲ್ಲಿ ತೋರಿಸುತ್ತಿದ್ದಾಗ ನನ್ನ ಮಗ ಶರಣಪ್ಪ ಕಲ್ಲಿನಿಂದ ಹೊಟ್ಟೆಗೆ ಹೊಡೆದಿದ್ದರ ಗಾಯಗಳ ಬಾದೆಯಿಂದ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮಾಡಲು ಹೊಂಚುಹಾಕಿ ಕುಳಿತವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ: 29/07/2016 ರಂದು ರಾತ್ರಿ ಗ್ರಾಮಿಣ ಪೊಲೀಸ  ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ಆಳಂದ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಕೇರಿ ಭೋಸಗಾ ಕ್ರಾಸನಲ್ಲಿ ಬಸಸ್ಟಾಂಡ ಮರೆಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸು) ಗ್ರಾಮೀಣ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬೆಳಗಿನ 05:30 ಗಂಟೆಗೆ ಸುಮಾರಿಗೆ ಹುಮನಾಬಾದ ರಿಂಗ ರೋಡದಿಂದ ಮಾನ್ಯ ಡಿ.ಎಸ್.ಪಿ ಸಾಹೇಬ ಗ್ರಾಮಾಂತರ ಉಪವಿಭಾಗ ಕಲಬುರಗಿ, ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಹುಮನಾಬಾದ ರಿಂಗ ರೋಡದಿಂದ  ಆಳಂದ ಚೆಕ್ಕಪೊಸ್ಟ ಮುಖಾಂತರವಾಗಿ ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಕೇರಿ ಭೋಸಗಾ ಕ್ರಾಸನಲ್ಲಿ ಇರುವ ಬಸಸ್ಟಾಂಡದ ದಕ್ಷಿಣ ದಿಕ್ಕಿನ ಗೋಡೆಯ ಮರೆಯಲ್ಲಿ ನಿಂತು ಸಾರ್ವಜನಿಕ ಕಂಬದ ಲೈಟಿನ ಬೆಳಕಿನಲ್ಲಿ ಹೋಗಿ ನೋಡಲಾಗಿ ಬಸಸ್ಟಾಂಡದಿಂದ ಸ್ವಲ್ಪ ದೂರದಲ್ಲಿ ಒಂದು ಮಹೇಂದ್ರಾ ಜೀಪ್ ಮತ್ತು ಒಂದು ಮೋಟಾರ ಸೈಕಲ್ ನಿಲ್ಲಿಸಿದ್ದು ಬಸಸ್ಟಾಂಡ ಗೋಡೆಯ ಮರೆಯಲ್ಲಿ 13 ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ಹಗ್ಗ್ಗ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿಯಲು 05 ಜನರು ಸಿಕ್ಕಿ ಬಿದಿದ್ದು, ಉಳಿದ 08 ಜನರು ನಮ್ಮನ್ನು ನೋಡಿ ತಮ್ಮ ಕೈಯಲ್ಲಿದ್ದ ಬಡಿಗೆ ಮತ್ತು ಚಾಕುಗಳನ್ನು ಹಾಗು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಸ್ಥಳದಲ್ಲಿ ಬಿಸಾಕಿ ಓಡಿ ಹೋದರು. ಸಿಕ್ಕಿ ಬಿದ್ದ 05 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಕಮಲಾಕರ್ ತಂದೆ ಜೈಬೀಮ್ ಖಂಡೇಕರ್ ಸಾ:ಮಾಡ್ಯಾಳ ತಾ:ಆಳಂದ 2) ಹಣಮಂತ ಭಗವಂತ ಸಂಗೋಳಗಿ ಸಾ:ಮಾಡ್ಯಾಳ ತಾ:ಆಳಂದ 3) ಯಲ್ಲಾಲಿಂಗ ತಂದೆ ಪೀರಪ್ಪಾ ಕೌವಲಗಿ ಸಾ:ಮಾಡ್ಯಾಳ ತಾ:ಆಳಂದ.4) ರವಿಕುಮಾರ ತಂದೆ ಕರಬಸಪ್ಪ ಮೇಲಿನಕೇರಿ ಸಾ:ಯಳವಂತಗಿ (ಕೆ) ಗ್ರಾಮ 5)  ಮಂಜುನಾಥ ತಂದೆ ಮಲ್ಲಿಕಾಜುನ ಜಮಾದಾರ ಸಾ:ಸಿದ್ದಾರೂಡ ಕಾಲೋನಿ ಕಪನೂರ ಅಂತಾ ತಿಳಿಸಿದರು ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಕಮಲಾಕರ್ ಖಂಡೇಕರ್ ಇತನು ಓಡಿ ಹೋದವರ ಹೆಸರು 6) ಗುಂಡಪ್ಪ ತಂದೆ ಸಿದ್ರಾಮಪ್ಪಾ ತುಕ್ಕಾಣಿ ಸಾ:ಮಾಡ್ಯಾಳ. 7) ರವಿಕುಮಾರ ತಂದೆ ಸಿದ್ರಾಮ ಗಾಯಕವಾಡ ಸಾ:ಮಡ್ಯಾಳ 8) ಹಣಮಂತ ತಂದೆ ಮಲ್ಲಿಕಾರ್ಜುನ ಕಾಳನೂರ ಸಾ:ಉಪಳಾಂವ ತಾ:ಜಿ:ಕಲಬುರಗಿ  9) ಲೋಕೇಶ ತಂದೆ ಭಗವಂತ ಕೊಂಬಿನ್ ಸಾ:ಮಾಡ್ಯಾಳ ತಾ:ಆಳಂದ 10) ರಾಜು ತಂದೆ ಹೂವಣ್ಣಾ ಗೌಡಗಿ ಸಾ:ಮಾಡ್ಯಾಳ 11) ಅಶೋಕ ತಂದೆ ಬೀಮಶ್ಯಾ ಒಡ್ಡರ್ ಸಾ:ಮಾಡ್ಯಾಳ ತಾ:ಆಳಂದ 12) ಶಶಿಕಾಂತ ತಂದೆ ಬಸಣ್ಣಾ ಹುಣಸಿ ಹಡಗಿಲ ಸಾ:ಮ್ಯಾಡಾಳ ತಾ:ಆಳಂದ 13) ಸಿದ್ದಪ್ಪ ತಂದೆ ಗುರುಲಿಂಗಪ್ಪ ಸಿಗರಾಣಿ ಸಾ:ಮಾಡ್ಯಾಳ ತಾ:ಆಳಂದ ಅಂತಾ ತಿಳಿಸಿದ್ದು ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ 05 ಜನರು ಗುಂಡಪ್ಪನ ಜೀಪ ನಂ ಕೆಎ-23 ಎಂ-3368 ರಲ್ಲಿ ಮತ್ತು ಇನ್ನು 03 ಜನರು ಒಂದು ಮೋಟಾರ ಸೈಕಲ್ ನಂ ಕೆಎ-37 ಎಲ್-8801 ನೇದ್ದರ ಮೇಲೆ ಕುಳಿತುಕೊಂಡು ಕೇರಿ ಭೋಸಗಾ ಬಸಸ್ಟಾಂಡ ಹಿಂದೆ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಬಸಸ್ಟಾಂಡದ ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ನಾವು ತಂದಿದ್ದ ಜೀಪು & ಮೋಟಾರ ಸೈಕಲನ ಮೇಲೆ ಓಡಿ ಹೋಗಲು ತಂದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ಒಪ್ಪಿಕೊಂಡಿದ್ದು 05 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಮತ್ತು ಸ್ಥಳದಲ್ಲಿ ಬಿದ್ದ ಇನ್ನು 08 ದಸ್ತಿಗಳು ಮತ್ತು 03 ಖಾರದ ಪುಡಿ, 03 ಚಾಕುಗಳು 02 ಬಡಿಗೆ ಮತ್ತು ಕಮಲಾಕರ್ ಇತನ ಕೈಯಲ್ಲಿದ್ದ ಒಂದು ಬಡಿಗೆ, ಮತ್ತು ಹಣಮಂತ ಇತನ ಕೈಯಲ್ಲಿದ್ದ ಒಂದು  ಚಾಕುಯಲ್ಲಾಲಿಂಗ ಇತನ ಕೈಯಲ್ಲಿದ್ದ ಒಂದು 20 ಪೀಟಿನ ಹಗ್ಗಾ, ರವಿಕುಮಾರ ಇತನ ಕೈಯಲ್ಲಿದ್ದ ಒಂದು ಚಾಕು, ಮಂಜುನಾಥ ಇತನ ಕೈಯಲ್ಲಿ ಒಂದು ಬಡಿಗೆ ದೊರೆತ್ತಿದ್ದು ಅವುಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:29/07/2016 ರಂದು ಸಾಯಂಕಾಲ  ಠಾಣಾ ವ್ಯಾಪ್ತಿಯಲ್ಲಿ ಬರುವ ಮದೀನಾ ಕಾಲೋನಿ ಮಕ್ಕಾ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಯುವಕರು ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಂದ ಹಣ ಪಟೆಯುತ್ತಾ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ  ಖಚಿತ ಮಾಹೀತಿ ಬಂದ ಮೇರೆಗೆ ಶ್ರೀ ಡಬ್ಲೂ.ಹೆಚ್‌‌.ಕೊತ್ವಾಲ್‌ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಮಕ್ಕಾ ಮಜೀದ ಮರೆಯಲ್ಲಿ ನಿಂತು ನೋಡಲು ಅಲ್ಲಿ ಇಬ್ಬರೂ ಯುವಕರು ರಸ್ತೆಯ ಪಕ್ಕದಲ್ಲಿ ನಿಂತ್ತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಒಂದು ಮಟಕಾ ನಂಬರ ಚೀಟಿ ಬರೆದು ಸಾರ್ವಜನಿಕರಿಗೆ ಕೊಡುತ್ತಾ ಇನ್ನೊಂದು ಚೀಟಿ ತಮ್ಮಹತ್ತಿರ ಇಟ್ಟುಕೊಳ್ಳುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು ಇದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ  ಒಬ್ಬನಿಗೆ ಹಿಡಿದಿದ್ದು ಇನ್ನೊಬ್ಬನು ಓಡಿ ಹೋದನು ಸಿಕ್ಕಿಬಿದ್ದವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಜಲೀಲ ತಂದೆ ಉಸ್ಮಾನ್‌ ಸಾಬ ವಾಂಜಲಖೇಡ ಸಾ:ಮದೀನಾ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 4390=00 ರೂ ಮತ್ತು 5 ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತಿದ್ದು  ಅವುಗಳನ್ನು ವಶಪಡಿಸಿಕೊಂಡು  ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲು ಆತನ ಹೆಸರು ಹಸನಶೇಖ ತಂದೆ ರುಕ್ಮೋದ್ದಿನ ಶೇಖ ಸಾ:ದೀಲದಾರ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ಅಂತಾ ತಿಳಿಸಿದ್ದು  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

29 July 2016

Kalaburagi District Reported Crimes

ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಿವರಾಜ ತಂದೆ ಚಿದಂಬರರಾವ್ ಪಾಟೀಲ್ ಸಾ; ಪ್ಲಾಟ ನಂ 139 ಮಹಾಲಕ್ಷ್ಮಿ ಲೇಔಟ ಗಂಜ  ಕಲಬುರಗಿ  ಇವರ ತಾಯಿಯವರ ಹೆಸರಿನಲ್ಲೊಂದು ಶರಣಬಸವೇಶ್ವರ ಪಲ್ಸಸ್ ಎಂಬ ದಾಲಮಿಲ ಇದ್ದು ಅದರ ನಿಗರಾಣೀ ಸಂಪೂರ್ಣವಾಗಿ ನಾನೇ ನೋಡಿಕೊಂಡಿರುತ್ತೇನೆ. ಹಿಗಿದ್ದು ದಿನಾಂಕ: 22/07/2016 ರಂದು ರಾತ್ರಿ 9-00 ಗಂಟೆ  ಸುಮಾರಿಗೆ ದಾಲಮಿಲದ ಕೆಲಸ ಮುಗಿಸಿಕೊಂಡು ದಾಲಮಿಲದ ಶೇಟರ ಗೇಟ ಕೀಲಿಹಾಕಿಕೊಂಡು ಮನೆಗೆ ಹೋಗಿರುತ್ತೇನೆ ನಂತರ ಎಂದಿನಂತೆ ದಿನಾಂಕ: 23/07/2016 ರಂದು ಬೆಳಿಗ್ಗೆ 9-00 ಗಂಟೆಗೆ ದಾಲಮಿಲಗೆ ಬಂದು ಶೇಟರ ತೆಗೆದು ಒಳಗೆ ಬಂದು ನೋಡಲು ದಾಲಮಿಲದ ಗೋಡೆಯ ವೆಂಟಿಲೇಟರ ಮುರಿದು ಪತ್ರ ಸ್ವಲ್ಪ ಎತ್ತಿದ್ದು ಕಂಡು ಬಂದು ಗಾಬರಿಯಿಂದ ದಾಲಮಿಲದಲ್ಲಿ ನೋಡಲು ದಾಲಮಿಲದಲ್ಲಿಟ್ಟಿದ್ದ 50 ಕೆಜಿ ತೂಕದ 16 ತೊಗರಿ ಬೆಳೆ ಚೀಲಗಳು ಕಾಣಿಸಲಿಲ್ಲ. ಹೊರಗಡೆ ವೆಂಟಿಲೇಟರ ಕೆಳಗಡೆ ಹೋಗಿ ನೋಡಲು ತೊಗರಿ ಬೆಳೆ ದಾಣೀ ಬಿದ್ದಿದ್ದು ಕಂಡು ಬಂದಿತು. ಯಾರೋ ಕಳ್ಳರು ನಮ್ಮ ದಾಲಮಿಲದ ವೆಂಟಿಲೇಟರ ಮುರಿದು ದಾಲಮಿಲದಲ್ಲಿದ್ದ 50 ಕೆಜಿಯ 16 ಚೀಲ ತೊಗರಿ ಬೆಳೆ ಅ.ಕಿ= 100000/-ರೂ ಕಿಮ್ಮತ್ತಿನದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 28/07/2016 ರಂದು ಬೆಳಿಗ್ಗೆ ಮೃತ ಪ್ರಶಾಂತ ತಂದೆ ಬಸವರಾಜ ಇನತು ತನ್ನ ಸೈಕಲ್ ಮೇಲೆ ಕೆಲಸಕ್ಕೆ ಹೋಗುವ ಕುರಿತು ಆರ್.ಎಸ್.ಕಾಲೋನಿಯ ಕ್ರಾಸ ಹತ್ತಿರ ಇರುವ ಯಮಹಾ ಶೊರೂಮ್ ಎರುರಗಡೆ ಮೇನ ರೋಡಿನ ಮೇಲೆ ರೋಡ ಬದಿಯಿಂದ ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಹುಮನಾಬಾದ ರೋಡ ಕಡೆಯಿಂದ ಕೆ.ಎಸ್.ಆರ್.ಟಿಸಿ ಬಸ್ ನಂ ಕೆಎ-32 ಎಪ್-1688 ನೇದ್ದರ ಚಾಲಕ ಸಿರಾಜುದ್ದೀನ್ ತಂದೆ ಸೈಯದ್ ಹುಸೇನ್ ಡಿಪೊ ನಂ 3 ಕಲಬುರಗಿ ಸಾ: ನರೋಣಾ ಗ್ರಾಮ ತನ್ನ ಬಸನ್ನು ಅತೀವೇಗದಿಂದ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಸೈಕಲ್ ಮೇಲೆ ಹೊರಟ ಪ್ರಶಾಂತ ಇತನಿಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ಪ್ರಶಾಂತ ಇತನು ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದು ಆತನಿಗೆ ತಲೆಗೆ ಬಾರಿ ಗುಪ್ತಗಾಯ, ಬಲಗೈ ಮುಂಗೈ ಮೇಲೆ ಎಡಭುಜದ ಮೇಲೆ ಬಲಮೊಳಕಾಲ ಮೇಲೆ ಮಗ್ಗಲು ಬಲಮೊಳಕಾಲ ಕೆಳಗೆ ಎದೆಗೆ ಮತ್ತು ಬಲ ಹೊಟ್ಟೆಯ ಮೇಲೆ ಅಲ್ಲಲ್ಲಿ ಕಂದು ಗಟ್ಟಿದ ಭಾರಿ ಗುಪ್ತ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಅಂತಾ  ಶ್ರೀ ಬಸವರಾಜ ತಂದೆ ಮಾಣಿಕಪ್ಪ ರಾಯಪಳ್ಳಿ ಸಾ : ಶಿವಾಜಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

28 July 2016

Kalaburagi District Reported Crimes

ದರೋಡೆ ಮಾಡಲು ಹೊಂಚು ಹಾಕಿ ಕುಳಿತ ದರೋಡೆಕೊರರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ: 27/07/2016 ರಂದು ಬೆಳಗ್ಗೆ ಮುಂಜಾನೆ 5:30 ಎ.ಎಂ.ಕ್ಕೆ ಹೀರಾಪೂರ ರೈಲ್ವೆಗೇಟ ದಾಟಿದ ನಂತರ ಬಬಲಾದ ರೋಡಿಗೆ ಒಂದು ಸಣ್ಣ ಬ್ರೀಡ್ಜ ಹತ್ತಿರ ಗಿಡಗಟ್ಟಿಗಳ ಮರೆಯಲ್ಲಿ ಕೆಲವು ಜನರು ತಮ್ಮ ಮುಖಕ್ಕೆ  ಬಟ್ಟೆ ಕಟ್ಟಿಕೊಂಡು ನಿಂತುಕೊಂಡು ಸದರ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ  ಹಾಗೂ ಸಾರ್ವಜನಿಕರಿಗೆ ತಡೆದು ನಿಲ್ಲಿಸಿ ಅವರಿಗೆ ಮಾರಕಾಸ್ರ್ತಗಳನ್ನು ತೋರಿಸಿ ಬೆದರಿಕೆ ಹಾಕಿ  ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಶ್ರೀ ಚಂದ್ರಶೇಖರ ಪಿ.ಎಸ್.ಐ. (ಕಾ&ಸೂ.) ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಗೆ ಮಾನ್ಯ .ಎಸ್.ಪಿ ಸಾಹೇಬ ಕಲಬುರಗಿ, ಮಾನ್ಯ ಅಪರ ಎಸ.ಪಿ.ಸಾಹೇಬರು ಕಲಬುರಗಿ ಮತ್ತು ಮಾನ್ಯ ಡಿ.ಎಸ್.ಪಿ. ಸಾಹೇಬರು  ಗ್ರಾಮಾಂತರ ಉಪವಿಭಾಗ ಕಲಬುರಗಿ, ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಹೀರಾಪೂರ ಬಬಲಾದ ರೋಡಿಗೆ ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ ಬಬಲಾದಕ್ಕೆ ಹೋಗುವ ರೋಡಿಗೆ ಮರೆಯಲ್ಲಿ ನಿಂತು ನೋಡಲಾಗಿ ಹೀರಾಪೂರ ಸೀಮಾಂತರದ ಕಮಲಾಕರ ದೇಶಮುಖ ಇವರ ತೋಟದ ಹತ್ತಿರ ಇರುವ ಒಂದು ಸಣ್ಣ ಬ್ರೀಡ್ಜನ ಹತ್ತಿರ  ಬಲಭಾಗದ ಮರೆಯಲ್ಲಿ 06 ಜನರು ಮುಖಕ್ಕೆ ದೊಡ್ಡ ದಸ್ತಿಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ಹಗಾ,್ಗ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 06 ಜನರನ್ನು ನನ್ನ ನಿದೆರ್ಶನದಂತೆ ಬೆಳಗ್ಗೆ  06:00 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿಯಲು 04 ಜನರು ಸಿಕ್ಕಿ ಬಿದಿದ್ದು, ಅವರಲ್ಲಿ ಇಬ್ಬರು ನಮ್ಮ ಸಿಬ್ಬಂದಿಯವರಿಂದ ಕೊಸರಿಕೊಂಡು ಓಡಿ ಹೋಗುವಾಗ ತಮ್ಮ ಕೈಯಲ್ಲಿದ್ದ ಖಾರದ ಪುಡಿ, ಬಡಿಗೆ, ಮುಖಕ್ಕೆ ಕಟ್ಟಿಕೊಂಡ ದಸ್ತಿಗಳನ್ನು ಸ್ಥಳದಲ್ಲಿ ಬಿಸಾಕಿ ಓಡಿ ಹೋದರು. ಸಿಕ್ಕಿ ಬಿದ್ದ 04 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಸಚಿನ ತಂದೆ ಮನೋಹರ ಜೀವಣಗಿ ಸಾ; ಕೆ.ಸಿ.ಇ.ಡಿ.ಟಿ ಗಲ್ಸ ಸ್ಕೂಲ ಹತ್ತಿರ ಆದರ್ಶನಗರ ಕಲಬುರಗಿ 2) ವೈಜನಾಥ ತಂದೆ ಮಲ್ಲಿಕಾರ್ಜುನ ಬೋನಾಳ ಸಾ; ಪ್ರಶಾಂತನಗರ (ಬಿ) ರಿಂಗರೋಡ  ಕಲಬುರಗಿ. 3) ಪ್ರಶಾಂತ @ ಡಾಬರ @ ಸೋನು ತಂದೆ ಮಹೇಶ ಹಳ್ಳಿ ಸಾ; ವಾಟರ ಟ್ಯಾಂಕ ಹತ್ತಿರ ಪಿಎನ್ಟಿ. ಕಾಲೂನಿ  ಹಳೆ ಜೇವರಗಿ ಕಾಲೂನಿ ಕಲಬುರಗಿ.. 4) ರಾಜು @ ಕೊಡ್ಲಿ ರಾಜು ತಂದೆ ಸಿಮರಪ್ಪಾ ಜಗನೂರ  ಸಾ; ಕವಸೂರ ತಾ;ಜಿ;ಯಾದಗಿರಿ ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಆಶೀಫ್ ಸಾ;ಬಸವೇಶ್ವರ ಕಾಲೂನಿ ಕಲಬುರಗಿ.2) ಇಸಾಮೊದ್ದಿನ ಸಾ; ವಿದ್ಯಾನಗರ ಕಲಬುರಗಿ  ಅಂತಾ ತಿಳಿಸಿದರು  ನೀವು 06 ಜನ ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ 04 ಜನರು ಕಪಲಾಕರ ದೇಶಮುಖ ಇವರ ಹೊಲದ ಹತ್ತಿರ ಬಬಲಾದ ರೋಡಿಗೆ ಗಿಡಗಂಟಿಗಳ  ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ಹಿಡಿದುಕೊಂಡಿರುವಿರಿ ಅಂತಾ ತಿಳಿಸಿರುತ್ತಾರೆ ಸದರಿಯವರಿಂದ ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಮತ್ತು ಸ್ಥಳದಲ್ಲಿ ಬಿದ್ದ ಇನ್ನು ಎರಡು ದಸ್ತಿಗಳು ಮತ್ತು ಖಾರದ ಪುಡಿ, ಬಡಿಗೆ ಮತ್ತು ಸಚೀನ ಜೀವಣಗಿ  ಇತನ ಕೈಯಲ್ಲಿದ್ದ ಒಂದು ಚಾಕು, ಮತ್ತು ವೈಜನಾಥ ಗೋನಾಳ  ಇತನ ಕೈಯಲ್ಲಿದ್ದ ಒಂದು ಬಡಿಗೆ, ಹಾಗು ಪ್ರಶಾಂತ @ಡಾಬರ ಹಳ್ಳಿ  ಇತನ ಕೈಯಲ್ಲಿದ್ದ ಒಂದು 15 ಫೀಟನ ಉದ್ದ ನೂಲಿನ ಹಗ್ಗಾ ಹಾಗೂ ರಾಜು @ ಕೊಡ್ಲಿ ರಾಜ ಇತನ ಹತ್ತಿರ ಒಂದು ಕಾರದಪುಡಿಯನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಪಂಚರ ಸಮಕ್ಷಮದಲ್ಲಿ  ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ 27-07-2015 ರಂದು ಮಹಾಗಾಂವ ಕ್ರಾಸದಿಂದ ಮಹಾಗಾಂವ ಗ್ರಾಮಕ್ಕೆ ಹೋಗುವ ರೈಲ್ವೇ ಓವರ ಬ್ರಿಜ್ ಹತ್ತಿರ ಕೆಲವು ಜನರು ಬೈಕ್ ಸವಾರರಿಗೆ ಮತ್ತು ಸಾರ್ವಜನಿಕರಿಗೆ ದರೋಡೆ ಮಾಡುವ ಉದ್ದೇಶದಿಂದ ತಮ್ಮ ಕೈಯಲ್ಲಿ ತಲವಾರ, ರಾಡು, ಬ್ಯಾಟರಿ ಇತ್ಯಾದಿ ಮಾರಕಾಸ್ತ್ರಗಳನ್ನು ಹಿಡಿದು ರೋಡಿಗೆ ಮೋಟಾರ ಸೈಕಲ್ ನಿಲ್ಲಿಸಿ ಹೊಂಚುಹಾಕಿ ಕುಳಿತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದಿದ್ದರ ಮೇರೆಗೆ ಪಿ.ಎಸ್.ಐ. ಮಾಹಾಗಾಂವ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರೈಲ್ವೆ ಓವರ್ ಬ್ರಿಡ್ಜ್ ಹತ್ತಿರ ಸುಮಾರು ಐದು ಜನರು ಕುಳಿತುಕೊಂಡು ಒಮ್ಮೇಲೆ ರೋಡಿಗೆ ಹೋಗಿ ಒಮ್ಮೇಲೆ ರೋಡಿಗೆ ಬರುವುದು, ಹೋಗುವುದು ಮಾಡುತ್ತಿದ್ದು ಹಾಗು ಸಾರ್ವಜನಿಕರು ಮತ್ತು ಬೈಕ ಸವಾರರು ಬರುತ್ತಿದ್ದನ್ನು ಗಮನಿಸುತ್ತಿದ್ದನ್ನು ಖಚಿತಪಡಿಸಿಕೊಂಡು 04-15 ಎಮ್.ಕ್ಕೆ ದಾಳಿ ಮಾಡಲಾಗಿ ನಾಲ್ಕು ಜನರು ಸಿಕ್ಕಿದ್ದು, ಒಬ್ಬ ಓಡಿ ಹೋಗಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಸುಮೀತ ತಂದೆ ರೇವಣಸಿದ್ದಪ್ಪಾ ಭಾವಿ 2) ಮಾಪಣ್ಣಾ ತಂದೆ ಬಂಡಪ್ಪಾ ಮಾವಿನಕರ್ 3) ರಾಹುಲ ತಂದೆ ವಿಠಲ ಮಾವಿನಕರ 4) ರವಿಶಂಕರ ತಂದೆ ಶಿವಬಸಪ್ಪಾ ಹಲಕಟ್ಟಿ ಸಾ:ಎಲ್ಲರೂ ಚಿಂಚನಸೂರ ತಾ:ಅಳಂದ ಜಿ_ಕಲಬುಗಿ ಅಂತಾ ತಿಳಿಸಿದ್ದು ನಂತರ ಓಡಿ ಹೋದವನ ಹೆಸರು ವಿಳಾಸ ವಿಚಾರಸಿಲಾಗಿ ರಾಕೇಶ ತಂದೆ ಲಕ್ಷ್ಮಣ ಬಾವಿ ಸಾ:ಚಿಂಚನಸೂರ ತಾ:ಅಳಂದ ಅಂತಾ ತಿಳಿಸಿದ್ದು ಒಬ್ಬೊಬ್ಬರಿಗೆ ಚೆಕ್ಕಮಾಡಲಾಗಿ ಸುಮೀತ ಇವನ ಹತ್ತಿರ ಒಂದು ಬಡಿಗೆ ಸಿಕ್ಕಿದ್ದು, ಮಾಪಣ್ಣ ಇವನ ಹತ್ತಿರ ಒಂದು ತಲವಾರ ಮತ್ತು ಒಂದು ಬ್ಯಾಟರಿ ಸಿಕ್ಕಿದ್ದು, ರಾಹುಲ ಇತನ ಹತ್ತಿರ ಇಂದು ಉದ್ದವಾದ ಹಾರಿ ದೊರೆತಿದ್ದು, ರವಿಶಂಕರ  ಇವನ ಹತ್ತಿರ ಒಂದು ಉದ್ದವಾದ ಬಡಿಗೆ ದೊರೆತ್ತಿದ್ದು, ನಂತರ ರೋಡಿಗೆ ಅಡ್ಡವಾಗಿ ನಿಲ್ಲಿಸಿದ 1) ಹೊಂಡಾ ಶೈನ್ ಕಂಪನಿ ಮೋಟಾರ ಸೈಕಲ್ ನಂ:ಕೆಎ-32-ಇಇ-2706 2) ಹಿರೋ ಹೊಂಡಾ ಸ್ಪೆಲೆಂಡರ್ ಮೋಟಾರ ಸೈಕಲ್ ನಂ;ಕೆಎ-29-ಕ್ಯೂ-5175 3) ಯಮಾಹಾ ಮೋಟಾರ ಸೈಕಲ್ ನಂಬರ ಇರುವುದಿಲ್ಲ ಬಾಸ್ ಅಂತಾ ಬರೆದಿದ್ದು ಇದೆ. ಸದರಿ ವಸ್ತುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 27/07/2016 ರಂದು ಬೆಳಿಗ್ಗೆ ಮಾಡಿಯಾಳ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಉದಂಡಪ್ಪ ಮಣ್ಣೂರಕರ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಡಿಯಾಳ ಗ್ರಾಮಕ್ಕೆ ಹೋಗಿ ಎಲ್ಲರೂ ಸೇರಿ ಬಸ ನಿಲ್ದಾಣದ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಬಸ ನಿಲ್ದಾಣದ ಮುಂದಿನ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರಿಗೆ ಕೂಗತ್ತಾ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಆತನು ತನ್ನ ಹೆಸರು ಪ್ರಭಾಕರ ತಂದೆ ಬಾಬು ಬೆಣ್ಣೆಶಿರೂರ ಸಾ|| ಮಾಡಿಯಾಳ ಅಂತ ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 3500/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಾವು ಕಡಿದು ಬಾಲಕಿ ಮೃತಪಟ್ಟ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 26/07/2016 ರಂದು ಬೆಳಿಗ್ಗೆ 4 ಗಂಟೆಯ ಸುಮಾರಿಗೆ ನನ್ನ ಅಣ್ಣ ಈರಯ್ಯಾ ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ. ಇಂದು 0300 ಗಂಟೆಯ ಸುಮಾರಿಗೆ ನಿನ್ನ ಮಗಳು ಕಾವೇರಿ ಮನೆಯಲ್ಲಿ ನಮ್ಮ ತಾಯಿಯೊಂದಿಗೆ ಮಲಗಿಕೊಂಡಾಗ ಅವಳ ಬಲಗಡೆ ಗಲ್ಲಕ್ಕೆ ಹಾವು ಕಡಿದಿದ್ದು ಅವಳಿಗೆ ನಾನು ಮತ್ತು ನನ್ನ ತಾಯಿ ಶಾಂತಾಬಾಯಿ ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತಿದ್ದೇವೆ ಅಂತ ತಿಳಿಸಿದಾಗ ನಾನು ನನ್ನ ಹೆಂಡತಿ ಶ್ರೀದೇವಿ ಇಬ್ಬರೂ ಗಾಬರಿಯಾಗಿ ವಾತ್ಸಲ್ಯ ಆಸ್ಪತ್ರೆಗೆ ಬಂದು ನೊಡಲಾಗಿ ನನ್ನ ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಳು ನನ್ನ ತಾಯಿಗೆ ವಿಚಾರಿಸಲಾಗಿ ಮನೆಯಲ್ಲಿ ಮಲಗಿಕೊಂಡಾಗ ಹಾವು ಕಡಿದಿದೆ ಅಂತಾ ತಿಳಿಸಿದ್ದು ನಾನು ನೋಡಲಾಗಿ ನನ್ನ ಮಗಳ ಬಲಗಡೆ ಗಲ್ಲದ ಮೇಲೆ ಕಚ್ಚಿದ ಗಾಯ ಇತ್ತು ನನ್ನ ಮಗಳು ವಾತ್ಸಲ್ಯ ಆಸ್ಪತ್ರೆಯಲ್ಲಿ ಉಪಚಾರ ಪಡೆದು ಹೆಚ್ಚಿನ ಉಪಚಾರಕ್ಕೆ ಕರೆದುಕೊಂಡು ಇಂದು ದಿನಾಂಕ: 27/07/2016 ರಂದು ಹೊಗುತ್ತಿರುವ ಸೊನ್ನ ಕ್ರಾಸ ಹತ್ತಿರ 9-00 ಎ.ಎಂಕ್ಕೆ ನನ್ನ ಮಗಳು ಹಾವಿನ ವಿಷದ ಬಾದೆಯಿಂದ ಮೃತಪಟ್ಟಿದ್ದು ಇರುತ್ತದೆ  ಅಂತಾ ಶ್ರೀ ಚಿದಾನಂದ ತಂದೆ ಮಾಂತಯ್ಯಾ ಮಠ ಸಾ|| ಯಾತನೂರ ತಾ|| ಜೇವರ್ಗಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 July 2016

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಸಂಗೀತಾ ಗಂಡ ಭೀಮು @ ಭೀಮಶ್ಯಾ ಇವರನ್ನು ದಿನಾಂಕ : 28/04/2015 ರಂದು ಮರತೂರ ಗ್ರಾಮದದಲ್ಲಿ ಭೀಮು @ ಭೀಮಶ್ಯಾ ಇತನ ಸಂಗಡ ಮದುವೆ ಮಾಡಿಕೊಂಟಿದ್ದು ಮದುವೆ ಸಮಯದಲ್ಲಿ 2 ತೋಲಿ ಬಂಗಾರ ಮತ್ತು 15,000/- ರೂ ಬೆಲೆ ಬಾಳುವ ಉಪಕರಣಗಳು ಕೊಟ್ಟಿದ್ದು ಲಗ್ನ ನಂತರ ತಾನು ಗಂಡನ ಮನೆಯಲ್ಲಿ  ನಡೆಯಲು ಹೋದಾಗ ತನ್ನ ಗಂಡ ಭೀಮು ಅತ್ತೆ ಸುಬ್ಬಮ್ಮ ಮಾವ ಶಂಕರ ಗಂಡನ ತಂಗಿ ಸಂತೋಷಿ ಇವರಲ್ಲಿಯ ತವರುಮನಯಿಂದ ವರದಕ್ಷಿಣಗೆ ತರಬೇಕು ನಿನಗೆ ಅಡುಗೆ ಮಾಡಲು ಬರುವುದಿಲ್ಲ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಕೈಯಿಂದ ಹೊಡೆ ಬಡೆ ಮಾಡಿದ್ದು ಅದೆ ನಂತರ ತಾನು ತನ್ನ ಗಂಡ ಭೀಮು @ ಭೀಮಶ್ಯಾ ಮಾವ ಶಂಕರ ಮತ್ತು ಗಂಡನ ಸಹೋದರಿಯಾದ ರಾಧಾಬಾಯಿ , ಅಂಬಿಕಾ ಇವರೆಲ್ಲಾರೂ ಪುಣೆಯಲ್ಲಿ ಜಗಳ ತೆಗೆದು ಹೊಡೆ ಬಡೆ ಮಾಡಿ ವರದಕ್ಷಣೆ ಕಿರುಕುಳ ನೀಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 26-7-2016 ರಂದು ಮುಂಜಾನೆ 8-30 ಎ.ಎಂ.ಕ್ಕೆ. ನನ್ನ ಗಂಡ ಶಿವಾನಂದ ಪೊಲೀಸ್ ಪಾಟೀಲ್ ಇವರು ತಮ್ಮ ಮೋಟಾರ ಸೈಕಲ ಮೇಲೆ ಕಲಬುರಗಿಯಿಂದ ಹರಸೂರಕ್ಕೆ ಹೋಗುವಾಗ ಹುಮನಾಬಾದ ರಿಂಗರೋಡ ಮೇಲೆ ಸೇಡಂ ರಿಂಗರೋಡ ಕಡೆಯಿಂದ ಟ್ಯಾಂಕರ ಲಾರಿ ನಂ.ಎಂ.ಹೆಚ12 ಹೆಚ.ಡಿ.5173  ನೆದ್ದರ ಚಾಲಕ ತನ್ನ ಟ್ಯಾಂಕರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನಗಂಡನಿಗೆ  ಜೋರಾಗಿ ಡಿಕ್ಕಿ ಹೊಡೆದಿದ್ದು ಲಾರಿಯ ಟೈರ ಹೊಟ್ಟೆಯ ಮೇಲೆ ಹೋಗಿದ್ದರಿಂದ ಹೊಟ್ಟೆಗೆ , ಎದೆಗೆ ,ಭಾರಿಗಾಯಗಳಾಗಿ ಮೃತ ಪಟ್ಟಿದ್ದು ಇದ್ದು , ಸದರಿ ಟ್ಯಾಂಕರ ಚಾಲಕ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು. ಸದರಿ ಟ್ಯಾಂಕರ ಲಾರಿ ನಂ. ಎಂ.ಹೆಚ.12 ಹೆಚಡಿ.5173 ನೆದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಸರಸ್ವತಿ ಗಂಡ ಶಿವಾನಂದ ಪೊಲೀಸ್ ಪಾಟೀಲ್ ಸಾ;ಹರಸೂರ  ತಾ;ಜಿ;ಕಲಬುರಗಿ  ಹಾವ; ಜಗತ್ತ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

25 July 2016

Kalaburagi District Reported Crimes

ಜೂಜಾಟದಲ್ಲಿ ನಿರತವರ ಬಂಧನ :
ಕಮಲಾಪೂರ ಠಾಣೆ :ದಿನಾಂಕ:24-07-2016 ರಂದು ಕಾಳಮಂದರ್ಗಿ ಗುತ್ತಿ ತಾಂಡಾದ ದೇವಾರಾಮ ರಾಠೋಡ ಇವರ ಮನೆಯ ಮುಂದಗಡೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಜೂಜಾಟ ಆಡುತ್ತಿದ್ದ  ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ರಾಜಕುಮಾರ ತಂದೆ ಅಜಯಚಂದ ಜಾಧವ ಸಂಗಡ  5 ಜನರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 800/- ರೂ ಹಾಗು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ..

23 July 2016

Press Note

B ಪತ್ರಿಕಾ ಪ್ರಕಟಣೆ B
ಸಕಾರವು ಸಫಾಯಿ ಕರ್ಮಚಾರಿ ಕಾಯಿದೆ (The Employment of Manual Scavengers and Construciton of Dry Latrines (Prohibition) Act 1993) ಯನ್ನು ಜಾರಿಗ ತಂದಿದ್ದು ಸಫಾಯಿ ಕರ್ಮಚಾರಿಗಳು ಮ್ಯಾನು ಹೋಲ್‌ ಒಳಗಡೆ ಇಳಿದು ಶುಚಿಗೊಳಿಸುವ ಕಾರ್ಯವನ್ನು ನಿಷೇಧಿಸಿದೆ.  ಆದಗ್ಯೂ ಸಹ ಸಫಾಯಿ  ಕರ್ಮಚಾರಿಗಳಿಂದ ಮ್ಯಾನು ಹೋಲ್‌ಗಳನ್ನು ಹಾಗೂ ಚರಂಡಿಗಳಣ್ನು ಸ್ವಚ್ಚಗೊಳಿಸುವ ಕಾರ್ಯ ಮುಂದುವರೆದಿದ್ದು, ಇದರಿಂದ ಅನೇಕರು ಪ್ರಾಣವನ್ನು ಕಳೆದುಕೊಂಡಿರುವ ಪ್ರಕರಣಗಳು ವರಿದಯಾಗುತ್ತಿದೆ.
     ಮಳೆಗಾಲ ಪ್ರಾರಂಭವಾಗಿದ್ದು, ಮಳೆ ನೀರಿನಿಂದ ಎಲ್ಲೆಡೆ ಮ್ಯಾನ ಹೊಲ್‌ಗಳು ಹಾಗೂ ಚರಂಡಿಗಳೂ ಮುಚ್ಚಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಇವುಗಳನ್ನು ಸ್ವಚ್ಚಗೊಳಿಸಲು ಸರ್ಕಾರಿ ಸಂಸ್ಥೆಗಳು ಖಾಸಗಿ ಸಂಸ್ಥೆಗಳು ಅಥವಾ ಬೇರೆ ಗುತ್ತಿಗೆದಾರರು ಕರ್ಮಚಾರಿಗಳನ್ನು ಮ್ಯಾನು ಹೋಲ್‌ನಲ್ಲಿ ಇಳಿಸಿ ಚರಂಡಿಗಳನ್ನು ಶುದ್ದಗೊಳಿಸುವ ಕಾರ್ಯಗಳನ್ನು ಕೈಗೊಳ್ಳುತ್ತಾರೆ.
     ಮ್ಯಾನು ಹೋಲ್‌ಗಳನ್ನು ಸಕ್ಕಿಂಗ್‌ ಮಷಿನಗಳ ಮೂಲಕವೇ ಶುಚಿಗೊಳಿಸಬೇಕು ಹೊರತು ಯಾವುದೇ ವ್ಯಕ್ತಿಯನ್ನು ಇಳಿಸಿ ಶುಚಿಗೊಳಿಸುವ ಕಾರ್ಯ ಸಫಾಯಿ ಕರ್ಮಚಾರಿ ಕಾಯಿದೆ. (The Employment of Manual Scavengers and Construciton of Dry Latrines (Prohibition) Act 1993) ಪ್ರಕಾರ ನಿಷೇಧಿಸಿದ್ದು ಶೀಕ್ಷಾರ್ಹ ಅಪರಾಧವಾಗಿರುತ್ತದೆ. ಸದರಿ ಕಾಯಿದೆಯನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವುದು ಹಾಗೂ ಇಂತಹ ಪ್ರಕರಣಗಳು ವರದಿಯಾದಾಗ ಸದರಿ ಕಾಯಿದೆಯಡಿಯಲ್ಲಿ ಆಪಾದಿತರ ವಿರುದ್ದ ಪ್ರಕರಣಗಳನ್ನು  ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. 

Kalaburagi District Reported Crimes

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ:21/07/2016 ರಂದು ಬೆಳಿಗ್ಗೆ ಮೃತ ಗುರುಸಿದ್ದಪ್ಪಾ ದಿನಸಿ ಈತನು ಎಂದಿನಂತೆ ಕುರಿಕೋಟಾದ ಸ್ವಾಮಿ ಇವರ ಟ್ರ್ಯಾಕ್ಟರ ನಂ. ಕೆಎ:32ಟಿಎ6202 ನೇದ್ದರ ಮೇಲೆ ವಟಿವಟಿ ಗ್ರಾಮಕ್ಕೆ ಮರಳು ಖಾಲಿ ಮಾಡಿ ಮರಳಿ 4-00 ಗಂಟೆ ಸುಮಾರಿಗೆ ವಟವಟಿಯಿಂದ ಮಹಾಗಾಂವ ಕಡೆಗೆ ಬರುವಾಗ ತಡಕಲ್ ಕ್ರಾಸ ಹತ್ತಿರ ಸದರಿ ಟ್ರ್ಯಾಕ್ಟರದಲ್ಲಿ ಕುಳಿತುಕೊಂಡು ಬರುವಾಗ ಟ್ರ್ಯಾಕ್ಟರ್ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಕಟ್ ಹೊಡೆದಿದ್ದರಿಂದ ಟ್ರ್ಯಾಕ್ಟರ್ ದಲ್ಲಿ ಕುಳಿತ ಗುರುಸಿದ್ದಪ್ಪಾ ಇವರು ಕೆಳಗೆ ಬಿದಿದ್ದರಿಂದ ಸೊಂಟಕ್ಕೆ ಮತ್ತು ತಲೆಗೆ ಭಾರಿ ಗುಪ್ತಗಾಯಗಳಾಗಿರುತ್ತವೆ. ಸದರಿ ಅಪಘಾತ ಪಡಿಸಿದ ಚಾಲಕನು ಗುರುಸಿದ್ದಪ್ಪನಿಗೆ ಅದೇ ಟ್ರ್ಯಾಕ್ಟರದಲ್ಲಿ ಹಾಕಿಕೊಂಡು ಫಿರ್ಯಾದಿ ಮನೆಗೆ ತಂದು ಕೆಳಗೆ ಇಳಿಸಿ ತನ್ನ ಟ್ರ್ಯಕ್ಟರ್ ತೆಗೆದುಕೊಂಡು ಹೋಗಿದ್ದು. ನಂತರ ಫಿರ್ಯಾಧಿ ಮತ್ತು ತನ್ನ ಸಂಬಂಧಿಕರು ಕೂಡಿಕೊಂಡು ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ರಸ್ತೆ ಅಪಘಾತದಿಂದ ಆದ ಗಾಯಗಳಿಂದಾಗಿ ಗುಣಮುಖರಾಗದೇ ನನ್ನ ಗಂಡನು ರಾತ್ರಿ 9-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾರೆ. ಟ್ರ್ಯಾಕ್ಟರ್ ಚಾಲಕನ ಹೆಸರು ವಗೈರೆ ಗೊತ್ತಿರುವುದಿಲ್ಲಾ. ಆತನಿಗೆ ಪುನಃ ನೋಡಿದರೆ ಗುರ್ತಿಸುತ್ತೇನೆ. ಅಂತಾ ಶ್ರೀಮತಿ ಮಲ್ಲಮ್ಮಾ ಗಂಡ ಗುರುಸಿದ್ದಪ್ಪಾ ದಿನಸಿ ಸಾ: ಮಹಾಗಾಂವ ತಾ:ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ :ಶ್ರೀ ಶಿವಪ್ರತಾಪ ತಂದೆ ಟೀಕಾರಾಮ ಕಲ್ಯಾಣಕಾರಿ ಸಾ: ಮನೆ ನಂ 1-3-290/210 ವಿಜಯನಗರ ಲೇಔಟ ಆಸಾಪೂರ ರೋಡ ರಾಯಚೂರ ಇವರು ದಿನಾಂಕ 21/07/2016 ರಂದು ತಮ್ಮ ಖಸಗಿ ಕೆಲಸಕ್ಕಾಗಿ ಕಲಬುರಗಿ ನಗಕ್ಕೆ ತಾನು ಮತ್ತು ಸಂಬಂದಿರಾದ ಭನುರಾಜ ತಂದೆ ಸೋಮನಾಥ ನಿಜಾಮಕರ, ಸತೀಶಕುಮಾರ ತಂದೆ ಲಕ್ಷ್ಮಣರಾವ ಮೈದರಕಾರಿ, ಅಮೀತ ತಂದೆ ಪ್ರಮೋದ ಶುಕ್ಲಾ, ಕಾರ ಚಾಲಕ ವೆಂಕಟೇಶ ನಾಯಕ ತಂದೆ ಭೀಮಣ್ಣ  ಎಲ್ಲರೂ ಕೂಡಿಕೊಂಡು ಕಾರ ನಂ ಕೆ-36 ಎನ್-4502 ನೆದ್ದರಲ್ಲಿ ಬಂದು ಕೆಲಸ ಮುಗಿಸಿಕೊಂಡು ಮರಳಿ ರಾಯಚೂರಕ್ಕೆ ಇಂದು ದಿನಾಂಕ 22/7/16 ರಂದು ರಾತ್ರಿ 1-30 ಗಂಟೆಯ ಸುಮಾರಿ ಹೋಗುತ್ತೀರುವಾಗ  ಫರಹತಾಬಾದ ಗ್ರಮ ದಾಟಿದ ಬಳಿಕ ಎನ್.ಹೆಚ್.218 ರೋಡಿನ ಮೇಲೆ ಸರಡಗಿ(ಬಿ) ಕ್ರಾಸ್ ಹತ್ತೀರ ಎದುರುಗಡೆಯಿಂದ ಒಂದು ಲಾರಿ ನಂ ಎಮ್.ಹೆಚ್-25,ಬಿ-7806ನೇದ್ದರ ಚಾಲಕ ತನ್ನ ಲರಿ ಅತೀವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ನಮ್ಮ ಕಾರ ನಂ ಕೆ-36 ಎನ್-4502 ನೇದ್ದಕ್ಕೆ ಡಿಕ್ಕಿ ಪಡಿಸಿ ತನ್ನ ಲಾರಿ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತನೆ ಈ ಘಟನೆಯಿಂದ ತನಗೆ ಎದೆಗೆ ಮತ್ತು ಎರಡು ಕಲುಗಳಿಗೆ ಗುಪ್ತಗಾಯ ವಾಗಿದ್ದು ಇನ್ನೂಳಿದ ಭನುರಾಜ ಇತನಿಗೆ ಬಲಗೈ ಗೆ ಮತ್ತು ಹೊಟ್ಟೆಗೆ , ಬೆನ್ನೆಗೆ ಮುಖದ ಮೇಲೆ ರಕ್ತಗಾಯ ಮತ್ತು ಗುಪ್ತಗಾಯ ವಾಗಿದ್ದು , ಸತೀಶಕುಮಾರ ಇವರಿಗೆ ಮುಕದ ಮೆಲೆ ಮತ್ತು ತುಟಿಗೆ ರಕ್ತಗಾಯ ಹಾಗೂ ಗುಪ್ತಗಾಯ ವಾಗಿದ್ದು, ಅಮೀತ ಇತನಿಗೆ ಎರಡು ಕಾಲುಗಳಿಗೆ ಗುಪ್ತಗಾಯ ವಾಗಿದ್ದು ಹಾಗೂ ನಮ್ಮ ಕಾರ ಚಾಲಕ ವೆಂಕಟೇಶ ನಾಯಕ ಇತನಿಗೆ ಹೊಟ್ಟೆಗೆ,ಎದೆಗೆ ಹಾಗೂ ಸೊಂಟಕ್ಕೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಾಳಿಗಿದ್ದು  ನಾವು ಈ ಘಟನೆಟಯ ನಂತರ ಚಿಕಿತ್ಸೆಗಾಗಿ 108 ವಹಾನದಲ್ಲಿ ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಹೋಗೆ ಸೇರಿಕೆ ಆಗಿ ಚಿಕಿತ್ಸೆ ಪಡೆದುಕೋಂಡಿರುತ್ತೆವೆ . ನಮ್ಮ ಕಾರಿಗೆ ಡಿಕ್ಕಿ ಪಡಿಸಿದ ಲಾರಿ ನಂ ಎಮ್.ಹೆಚ್-25,ಬಿ-7806ನೇದ್ದರ  ಚಾಲಕನ ಹೇಸರು ಮತ್ತು ವಿಳಸ ನಮಗೆ ಗೊತ್ತಾಗಿರುವದಿಲ್ಲಾ ನಾವು ಅವನನ್ನು ನೋಡಿದರೆ ಗುರುತಿಸುತ್ತೆವೆ ಅಂತಾ ಇತ್ಯಾದಿ ಸಾರಾಂಶದ ಮೆಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶೇಖಜಿಲಾನಿ ತಂದೆ ಶೇಖಮಹೀಬೂಬಸಾಬ ಸಾ|| ಕನಕನಗರ ಖಣಿಏರಿಯಾ ಬ್ರಹ್ಮಪೂರ ಕಲಬುರಗಿ ಇವರು 5 ಜನ ಅಣ್ಣ ತಮ್ಮಂದಿರು ಇರುತ್ತೇವೆ 1) ಇಜಾಜ 2) ಪರೀದ 3) ನಾನು ಶೇಖಜಿಲಾನಿ 4) ರಿಯಾಜ 5) ಫಯಾಜ ಅಂತಾ ಇದ್ದು ನಾವು ರೀಯಾಜ ಮತ್ತು ಫಯಾಜ ಎಲ್ಲರೂ ಒಂದೆ ಕಡೆ ಇರುತ್ತೇವೆ ಫರೀದ ಮತ್ತು ಇಜಾಜ ಬೇರೆಕಡೆ ಇರುತ್ತಾರೆ ನನಗು ಫಯಾಜ ಮತ್ತು ರೀಯಾಜನಿಗೂ ನಡುವೆ ಮನೆಯ ಸಂಭಂದ ತಕರಾರು ಇರುತ್ತದೆ ಈ ಬಗ್ಗೆ ನನ್ನ ತಮ್ಮ ಫಯಾಜ ಇತನು ಮನೆ ಖಾಲಿ ಮಾಡಬೇಕು ಅಂತಾ ಅಗಾಗ ನನ್ನ ಜೋತೆಯಲ್ಲಿ ತಂಟೆತಕರಾರು ಮಾಡುತ್ತಾ ಬರುತ್ತಿದ್ದನು ನಿನ್ನೆ ದಿ||22/07/16 ರಂದು ರಾತ್ರಿ 8 ಗಂಟೆಯ ಸೂಮಾರಿಗೆ ನಾನು ಮತ್ತು ನನ್ನ ಹೆಂಡತಿ ರೇಸ್ಮಾ ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ನನ್ನ ತಮ್ಮ ಫಯಾಜ ಇತನು ಬಂದು ನಮ್ಮ ಮ ನೆಯ ಕರೆಂಟ ಬಿಲ್ಲಿನ ಸಂಬಂದ ನನ್ನ ಜೋತೆಯಲ್ಲಿ ಜಗಳ ತೆಗೆದು ಮನೆ ಕರೆಂಟ ಕಟ್ಟಮಾಡಿದ್ದಾರೆ ನಿನ್ನ ಪಾಲಿನ ಹಣ ಕೊಡಬೇಕು ಅಂತಾ ನನಗೆ ಕೆಳಿದಾಗ ನಾನು ನಾಳೆ ಬೆಳಗ್ಗೆ ಕೊಡುತ್ತೇನೆ ಅಂತಾ ಹೇಳಿದ್ದು ಅವನು ಏ ಮಾದರಚೋದ ಸಾಲೆ ಶೇಖಜಿಲಾನಿ ತೂ ಕಬೀಬಿ ಐಸೈಯಿ ಹಮಾರಸೆ ತಕರಾರು ಕರತೆ ತೇರಾ ಕ್ಯಾ ಹಾಲ ಹೈ ತೇರೆಕೋ ಛೋಡತಾ ನೈಹಿ ಖಲಾಸ ಕರತು ಅಂತಾ ಕೋಲೆ ಮಾಡುವ ಉದ್ದೇಶದಿಂದ ತನ್ನ ಟೊಂಕ್ಕದಲ್ಲಿದ್ದ ಒಂದು ಚಾಕು ತೆಗೆದು ನನ್ನ ಎಡಗಡೆ ಎದೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ ಆಗ ನನ್ನ ಹೆಂಡತಿ ರೇಸ್ಮಾ ಇವಳು ಬೀಡಿಸಲು ಬಂದಾಗ ಅವಳಿಗೂ ಕೂಡಾ ಅದೆ ಚಾಕುವಿನಿಂದ ಬಲಗೈ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಆಗ ನನ್ನ ತಮ್ಮ ರೀಯಾಜ ಇತನು ಬಂದು ಅಭೀಮಾರೋ ಸಾಲೇಕೋ ಅಂತಾ ಫಯಾಜನಿಗೆ ಪ್ರಚೋದನೆ ಕೊಡುತ್ತಿದ್ದನು ಇದನ್ನು ನೋಡಿ ಪಕ್ಕದ ಮನೆಯವನಾದ ಅಬ್ದುಲ ರಹೇಮಾನ ಮತ್ತು ನನ್ನ ಹೆಂಡತಿಯ ತಮ್ಮ ಮಹ್ಮದ ಅಜಾದ ಇವರು ಬಂದು ಜಗಳ ಬೀಡಿಸಿರುತ್ತಾರೆ ನನಗೆ ಭಾರಿ ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ನನ್ನ ಹೆಂಡತಿ ಮತ್ತು ತೋಲು ತಂದೆ ನಜೀರ ಅಹ್ಮದ ಇವರು ಕಲಬುರಗಿ ನಗರದ ಜಿಲ್ಲಾ ಸರಕಾರಿ ಅಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣಮಾಡಿ ಅತ್ಯಚಾರ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಸುನಂದಾ ಗಂಡ ಬಾಬುರಾವ ಕಡಗಂಚಿ ಮು:ಜಮಗಾ(ಜೆ) ತಾ:ಆಳಂದ ಗ್ರಾಮದ ಶಶಿಕಾಂತ ತಂದೆ ಕಲ್ಲಪ್ಪ ಆರ್ಯೆ ಇತನು ಮಲ್ಲಮ್ಮಾ ಎಂಬೂವಳೊಂದಿಗೆ ಮದುವೆಯಾಗಿದ್ದು ಅವನಿಗೆ ಒಂದು ಗಂಡು ಮಗು ಇದ್ದು ಸದ್ಯ ಅವನ ಹೆಂಡತಿ ಅವರ ತವರು ಮನೆಯಾದ ತಿರ್ಥ ಗ್ರಾಮದಲ್ಲಿ  ಇರುತ್ತಾಳೆ. ಹೀಗಿದ್ದು ದಿನಾಂಕ 22/06/2016 ರಂದು ರಾತ್ರಿ 9:30 ಗಂಟೆ  ಸುಮಾರಿಗೆ ಗ್ರಾಮದಲ್ಲಿ ನೀರಿನ ಬರ ಇದ್ದರಿಂದ ನೀರು ತರಲು ಹೋಗುವಾಗ ನಮ್ಮ ಮಗಳು ಟಿವಿ ನೋಡುತ್ತಾ ಕುಳಿತಿದ್ದರಿಂದ ನಾನು ನೀರು ತೆಗೆದುಕೊಂಡು ಮರಳಿ ಮನೆಗೆ ಬರುವಷ್ಟರಲ್ಲಿ ನನ್ನ ಮಗಳು ಕಾಣಿಸಲಿಲ್ಲಾ . ನಂತರ ನನ್ನ ಮಕ್ಕಳಾದ ಆರತಿ, ಹಾಗು ನಾಗೇಶ ಇವರಿಗೆ ವಿಚಾರಿಸಲು ನಮಗೆ ಏನು ಹೇಳದೆ ಕೇಳದೆ ಮನೆಯಿಂದ ಹೊರಗಡೆ ಹೋಗಿರುತ್ತಾಳೆ ಅಂತಾ ತಿಳಿಸಿದ್ದರಿಂದ ನಾನು ಆಕೆ ಬರಬಹುದು ಅಂತಾ ಸ್ವಲ್ಪ ಸಮಯ  ಕಳೆದಾಗ ಅಷ್ಟರಲ್ಲಿ ನಮ್ಮ ಅಣ್ಣತಮ್ಮಕೀಯ ತಮ್ಮನಾದ ಶಾಂತಪ್ಪ ತಂದೆ ಸೋಮಲಿಂಗ ಆರ್ಯೆ ಇತನು ತಿಳಿಸಿದ್ದೆನೆಂದರೆ ತಾನು ಬೈರ್ಯದೇಶಗೆ ಹೋಗಿ ಮರಳಿ ಬರುವಾಗ ನಿಮ್ಮ ಮಗಳು ನಮ್ಮ ಜಾತಿಯ ಶಶಿಕಾಂತ ತಂದೆ ಕಲ್ಲಪ್ಪ ಆರ್ಯ ಇತನೊಂದಿಗೆ ಹೋದಳು ಅಂತಾ ತಿಳಿಸಿದಾಗ ಈ ಬಗ್ಗೆ ಆಳಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸದ್ದು ದಿನಾಂಕ:22/07/2016 ರಂದು ಕಲಬುರಗಿಯಲ್ಲಿ ಅಪಹರಣಕ್ಕೋಳಗಾದ ಬಾಲಕಿ ಇವಳು ಪತ್ತೆಯಾಗಿದ್ದು,  ಸರ್ಕಾರಿ ಪ್ರೌಢ ಶಾಲೆ ಜಿಡಗಾದಲ್ಲಿ ಈ ವರ್ಷ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ತಂದೆ-ತಾಯಿ ಯೊಂದಿಗೆ ವಾಸವಾಗಿರುತ್ತೇನೆ, ನಮ್ಮೂರಿನ ನಮ್ಮ ಸಂಬಂಧಿಯಾದ  ಶಶಿಕಾಂತ ತಂದೆ ಕಲ್ಲಪ್ಪಾ ಆರ್ಯ ಈತನ ಮನೆಯು ನಮ್ಮ ಮನೆಯ ಪಕ್ಕದಲ್ಲಿದ್ದು ಇತನು ನಮ್ಮ ಮನೆಗೆ ಬಂದು ಹೋಗುವದು ಮಾಡುತ್ತಿದ್ದರಿಂದ ನನ್ನ ಅವನ ಮಧ್ಯ ಸ್ನೇಹ ಬೆಳೆದಿದ್ದು ಇರುತ್ತದೆ.ದಿನಾಂಕ:22/06/2016 ರಂದು ರಾತ್ರಿ 09:30 ಗಂಟೆಯ ಸುಮಾರಿಗೆ ನನಗೆ ಶಶಿಕಾಂತನು ಪೋನ್ ಮಾಡಿ ನಿನ್ನ ಜೊತೆಗೆ ಮಾತನಾಡುವದಿದೆ ಜಿಡಗಾ ಕಮಾನ ಹತ್ತಿರ ಬಾ ಅಂತಾ ಹೇಳಿದಾಗ ನಾನು ಮನೆಯಲ್ಲಿ ಯಾರಿಗೂ ಹೇಳದೆ ಜಿಡಗಾ ಕಮಾನ ಹತ್ತಿರ ಹೋದಾಗ ಆಗ ಶಶಿಕಾಂತನು ನಿನಗೆ ಪ್ರೀತಿ ಮಾಡುತ್ತಿದ್ದೇನೆ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನನಗೆ ಪುಸಲಾಯಿಸಿ ತಲೆ ಕೆಡೆಸಿ ನನಗೆ ರಾತ್ರಿ 09:45 ಗಂಟೆಗೆ ಮುಖಕ್ಕೆ ಸ್ಕಾರ್ಫ ಕಟ್ಟಿಕೊಳ್ಳು ಅಂತಾ ತಿಳಿಸಿ ಅಲ್ಲಿಂದ ರೋಡಿಗೆ ಹೋಗುವ ಒಂದು ವಾಹನದಲ್ಲಿ ಆಳಂದ ಬಸ್‌ ನಿಲ್ದಾಣಕ್ಕೆ ಬಂದು ನಂತರ ಯಾವುದೊ ಒಂದು ಬಸ್‌ ಮೂಲಕ ಕಲಬುರಗಿಗೆ ಹೋಗಿ ಶಶಿಕಾಂತ ಆರ್ಯ ಇತನು ತನ್ನ ಸಂಬಂದಿಕರ ಮನೆಗೆ ರಾತ್ರಿ ಕರೆದುಕೊಂಡು ಹೋಗಿದ್ದು ಆ ರಾತ್ರಿ ಅವರ ಮನೆಯಲ್ಲಿಯೇ ಉಳಿದುಕೊಂಡು ಒಂದು ವಾರದವರೆಗೆ ಅವರ ಮನೆಯಲ್ಲಿಯೇ ಇದ್ದೆವು. ನಂತರ ಶಶಿಕಾಂತ ಆರ್ಯ ಇತನು ಕಲಬುರಗಿ ನಗರದ ಸಿ.ಐ..ಬಿ. ಕಾಲೋನಿಯಲ್ಲಿ ಒಂದು ಬಾಡಿಗೆ ಮನೆ ಹಿಡಿದು ನನಗೆ ದಿನಾಂಕ:29/06/2016 ರಂದು ಅವನು ಅಲ್ಲಿಗೆ ಕರೆದುಕೊಂಡು ಹೋಗಿ ಆ ರಾತ್ರಿ ಸುಮಾರು 11:00 ಗಂಟೆಯ ಸುಮಾರಿಗೆ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಪುಸಲಾಯಿಸಿ  ನನಗೆ ಒತ್ತಾಯ ಪೂರ್ವಕವಾಗಿ ಸಂಬೋಗ ಮಾಡಿರುತ್ತಾನೆ. ಇದಲ್ಲದೇ ಹೀಗೆಯೇ ಎರಡು-ಮೂರು ಬಾರಿ ನನಗೆ ಜಬರಿ ಸಂಬೋಗ ಮಾಡಿರುತ್ತಾನೆ. ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಮದುವೆ ಆಗುವದಿಲ್ಲ ಅಂತಾ ಹೆದರಿಸಿರುತ್ತಾನೆ. ನನ್ನ ಸಂಬಂಧಿಯಾದ ಶಶಿಕಾಂತ ಆರ್ಯ ಇತನು ನನ್ನದೊಂದಿಗೆ ಸ್ನೇಹ ಬೆಳಸಿ ಮದುವೆಯಾಗುತ್ತೇನೆ ಅಂತಾ ಪುಸಲಾಯಿಸಿ ಸಂಗಡ ಕರೆದುಕೊಂಡು ಹೊಗಿ ನನ್ನ ಮೇಲೆ ಜಬರಿ ಸಂಬೋಗ ಮಾಡಿರುತ್ತಾನೆ. ನಂತರ ದಿನಾಂಕ:25/06/2016 ರಂದು ನನಗೆ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ನಮ್ಮ ತಾಯಿ ಠಾಣೆಯಲ್ಲಿ ದೂರು ನೀಡಿರುತ್ತಾಳೆ ಅಂತಾ  ಶಶಿಕಾಂತ ಆರ್ಯ ಇತನಿಗೆ ಆತನ ಸಂಬಂಧಿಯಾದ ದಯಾನಂದ ಸಿಂಗೆ ಸಾ:ಶಕಾಪೂರ ಇವರು ತಿಳಿಸಿರುತ್ತಾರೆ ಅಂತಾ ಶಶಿಕಾಂತ ಆರ್ಯ ನನಗೆ ತಿಳಿಸಿದ್ದು ಇರುತ್ತದೆ. ಇಂದು ಆಳಂದ ಪೊಲೀಸ್ ಠಾಣೆಯ ಮಹಿಳಾ ಪೊಲೀಸರು ನಾನು ಇದ್ದ ವಿಳಾಸಕ್ಕೆ ಬಂದು ನನಗೆ ಹಿಡಿದು ಕರೆದು ತಂದಿರುತ್ತಾರೆ. ಅಂತಾ ತಿಳಿಸಿದ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ 22-07-2016 ರಂದು ಬಂದರವಾಡ ಗ್ರಾಮದ ಅಂಬಿಗರ ಚೌಡಯ್ಯ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಬಾತ್ಮಿ ಮೇರೇಗೆ ಪಿ.ಎಸ್.ಐ. ಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು ಅವನು ತ್ನ್ನ ಹೆಸರು  ಮಾಳಪ್ಪ ತಂದೆ ಸಾವಿರಪ್ಪ ಪೂಜಾರಿ ಸಾ|| ಬಂದರವಾಡ ಅಂತಾ ತಿಳಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಹಣ 1710/- ರೂಪಾಯಿ, ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. 

22 July 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಡಾ ಚಂದ್ರಶೇಖರ ತಂದೆ ದುಂಡಪ್ಪ ಕಡಗಂಚಿ ಇವರು ದಿನಾಂಕ 30.05.16 ರಂದು ಬೆಳಿಗ್ಗೆ 8-45 ಗಂಟೆ ಸುಮಾರಿಗೆ ನಾನು  ಕೆಲಸ ಮಾಡುವ ಬಸವೇಶ್ವರ ಆಸ್ಪತ್ರೆಗೆ ಮನೆಯಿಂದ ನನ್ನ ಮೋಟಾರ ಸೈಕಲ ನಂಬರ ಕೆಎ32/ಇಜಿ-0372 ನೇದ್ದನ್ನು ಚಲಾಯಿಸಿಕೊಂಡು ಐವಾನ ಇ ಶಾಹಿ ರೋಡದಿಂದ ಹೋಗುವಾಗ ಏಶಿಯನ ಮಾಲ ಎದುರು  ರೋಡ ಮೇಲೆ ಎದುರುಗಡೆಯಿಂದ ಮೋಟಾರ ಸೈಕಲ ನಂಬರ ಕೆಎ32/ಎಲ-0032 ನೇದ್ದರ ಸವಾರನು ತನ್ನ ಮೋಟಾರ ಸೈಕಲ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಎಡಗೈ  ರಿಸ್ಟ ಹತ್ತಿರ ಭಾರಿ ಗುಪ್ತ ಪೇಟ್ಟು , ಎಡ ಮತ್ತು ಬಲ ಪೇಕ್ಕೆಲುಬಿಗೆ ಭಾರಿ ಗುಪ್ತ ಪೇಟ್ಟು ಗುಪ್ತ ಅಂಗಳಿಗೆ ಭಾರಿ ಪೇಟ್ಟು ಗೊಳಿಸಿ ತನ್ನ  ಮೋಟಾರ  ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಂಕರ ತಂದ ರೇವಣಸಿದ್ದಪ್ಪಾ ನಂದೇಣಿ ಇವರು ದಿನಾಂಕ 20-07-2016 ರಂದು ರಾತ್ರಿ 11-25 ಗಂಟೆ ಸುಮಾರಿಗೆ ನಾನು ನಮ್ಮ  ಮುತ್ತುತ ಪೀನ್ಕ್ರಾಪ ಪೈನಾನ್ಸ ಗಳಿಗೆ ನೇಮಿಸಿದ ಸಿಬ್ಬಂದಿ ಜನರಿಗೆ ಚೆಕ್ ಮಾಡುವ ಸಲುವಾಗಿ ನಾನು ಚಲಾಯಿಸುತ್ತಿರುವ ನಮ್ಮ ಪೈನಾನ್ಸ ಕಾರ ನಂಬರ ಕೆಎ03/ಎಮ.ಎಕ್ಷ 1747 ನೇದ್ದರಲ್ಲಿ ಸೆಕ್ಯೂರಿಟಿ ಸುಪರವೈಸರ್ ಸಿದ್ದರಾಮ ತಂದೆ ಮಹಾದೇವಪ್ಪ ಸಿರಗುಂಡೆ ಹಾಗೂ ರಾಜಶೇಖರ ತಂದೆ ಶಿವಶರಣಪ್ಪ ಹೂವಿನಬಾಯಿ ರವರನ್ನು ಕೂಡಿಸಿಕೊಂಡು ಪಸ್ತಾಪೂರ ಆಸ್ಪತ್ರೆ ಹತ್ತಿರ ಬರುವ ಹಾಗೂ ಆನಂದ ಹೋಟೆಲ ಹತ್ತಿರ ಬರುವ ಪೈನಾನ್ಸಗಳನ್ನು ಚೆಕ್ ಮಾಡಿಕೊಂಡು ಸುಪರ್ ಮಾರ್ಕೆಟನಲ್ಲಿರುವ ಪೈನಾನ್ಸ ಚೆಕ್ ಮಾಡುವ ಸಲುವಾಗಿ ಗೋವಾ ಹೋಟೆಲ ಮುಖಾಂತರ ನಾನು ಜಗತ್ ಸರ್ಕಲ್ ಕಡೆಗೆ ಕಾರ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಯಲ್ಲಮ್ಮಾ ಟೆಂಪಲ ಹತ್ತೀರ ರೋಡ ಮೇಲೆ ಶರಣಪ್ಪ ತಂದೆ ವಿಠ್ಠಲ ಪಾಟೀಲ ಸಾ: ಸಮತಾ ಕಾಲೋನಿ ಇತನು ಮೋಟಾರ ಸೈಕಲ ನಂಬರ ಕೆಎ32/ಅರ 1240 ನೇದ್ದನ್ನು ಜಗತ ಸರ್ಕಲ್ ಕಡೆಯಿಂದ ಅಡ್ಡದಿಡ್ಡಿಯಾಗಿ ಚಲಾಯಿಸುತ್ತಾ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ನಮ್ಮ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನಮ್ಮ ಕಾರ ಬಲ್ಬ ಎದುರಿನ ಲ್ಯಾಂಪ ಅದರ ವ್ಹಿಲ್ವ ಕವರ, ಬಲಗಡೆ ಸೈಡಿನ ಲ್ಯಾಂಪ ಬಲ ಸೈಡಿನ ಹೆಡ್ ಲ್ಯಾಂಪ, ಬ್ರಾಕೇಟ್ ಕವರ, ವ್ಹಿಲ್ ಹೌಸ ಕವರ ಬಂಪರ ಬಾರ ಹಾಗೂ ಇತರ ಕಡೆಗೆ ಡ್ಯಾಮೇಜ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ  ಪ್ರಕರಣ ಧಾಖಲಾಗಿದೆ.
ಕಿರುಕಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ಬಸಪ್ಪ ಪೂಜಾರಿ ಸಾ: ಘೊಗ್ಗಾ ತಾ: ಬಸವಕಲ್ಯಾಣ ಜಿ: ಬೀದರ ಇವರ 2ನೇ ಮಗಳಾದ ಮುನ್ನಾಬಾಯಿ ಇವಳಿಗೆ ಈಗ 5 ವರ್ಷಗಳ ಹಿಂದೆ ಡೊರಜಂಬಗಾ ಗ್ರಾಮದ ನಮ್ಮ ಸಂಬಂದಿಕರಾದ ಅಂಬಾರಾಯ ಪೂಜಾರಿ ಇವರ ದೊಡ್ಡ ಮಗನಾದ ಮಲ್ಲಿಕಾರ್ಜುನ  ಇತನಿಗೆ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದು ನನ್ನ ಮಗಳಾದ ಮುನ್ನಾಬಾಯಿ ಇವಳಿಗೆ ಅಂಬಿಕಾ ವಯ 4 ವರ್ಷ ಮತ್ತು ಅಂಜಲಿ ವಯ: 10 ತಿಂಗಳು ಅಂತ ಇಬ್ಬರು ಹೆಣ್ಣು ಮಕ್ಕಳಿದ್ದು. ನನ್ನ ಮಗಳು ಆಗಾಗ ಹಬ್ಬಕ್ಕೆ ನಮ್ಮಲ್ಲಿಗೆ ಬಂದಾಗ ನಮಗೆ ತಿಳಿಸಿದ್ದೆನೆಂದರೆ ತನ್ನ ಅತ್ತೆ ರಂಗಮ್ಮ, ಅಜ್ಜಿ ರ್ಯಾವಮ್ಮ ಮತ್ತು ಗಂಡನ ಮನೆಯವರು ತನಗೆ ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದರೆ ತನ್ನ ಗಂಡ ಆಗಾಗ ಕುಡಿದು ಬಂದು ತನ್ನೊಂದಿಗೆ ಜಗಳ ಮಾಡಿ ತನಗೆ ಹೊಡೆಬಡೆ ಮಾಡುತ್ತಾನೆ ಮತ್ತು ಮನೆಗೆ ಸಾಮಾನುಗಳನ್ನು ಹಾಗೂ ಮಕ್ಕಳಿಗೆ ಬಟ್ಟೆ ಇತರೆ ವಸ್ತುಗಳನ್ನು ತೆಗೆದುಕೊಂಡು ಬರಲು ಹೇಳಿದರೆ ಜಗಳ ಮಾಡಿ ಹೊಡೆಬಡೆ ಮಾಡುತ್ತಾನೆ ಅಂತ ತಿಳಿಸುತ್ತಾ ಬಂದಿದ್ದು ಇರುತ್ತದೆ. ನಾನು ನನ್ನ ಅಳಿಯನಿಗೆ ಮುನ್ನಾಬಾಯಿಯೊಂದಿಗೆ ಜಗಳ ಮಾಡಬೇಡ ಅವಳಿಗೆ ತೊಂದರೆ ಕುಡಬೇಡ ಅಂತ ತಿಳಿ ಹೇಳಿದ್ದು ಇರುತ್ತದೆ. ಮತ್ತು ಅವನ ಮನೆಯವರು ಕುಡಾ ಅವನಿಗೆ ತಿಳಿ ಹೇಳಿದ್ದು ಆದರು ಕೂಡಾ ಸದರಿಯವನು ಕುಡಿದು ಬಂದು ನನ್ನ ಮಗಳ ಸಂಗಡ ಜಗಳ ಮಾಡುತ್ತಾ ಬಂದಿದ್ದು ದಿನಾಂಕ 21.07.2016 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಡೊರ ಜಂಬಗಾ ಗ್ರಾಮದ ಅಂದಪ್ಪ ಇವರು ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನನ್ನ ಮಗಳಾದ ಮುನ್ನಾಬಾಯಿ ಇವಳು ಮೈ ಮೇಲೆ ಸಿಮೇ ಎಣ್ಣಿ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಮೃತ ಪಟ್ಟಿದ್ದಾಳೆ ಮತ್ತು ಅವಳ ಇಬ್ಬರ ಮಕ್ಕಳಿಗೆ ಬೆಂಕಿ ಹತ್ತಿದ್ದು ಅವರಲ್ಲಿ ಅಂಬಿಕಾ ಇವಳು ಮೃತ ಪಟ್ಟಿದ್ದು ಅಂಜಲಿ ಇವಳಿಗೆ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಿದ್ದಾರೆ ಅಂತ ತಿಳಿಸಿದ್ದು. ಆಗ ಗಾಬರಿಗೊಂಡು ನಾನು ನನ್ನ ಮೈದುನ, ಮಲ್ಲಿಕಾರ್ಜುನ, ನೇಗೆಣಿಯರಾದ ಗೌರಮ್ಮ ದೈವಿತಾ, ನನ್ನ ಮಕ್ಕಳಾದ ಬೀರಪ್ಪ, ಶಿವರಾಮ ಮತ್ತು ನಮ್ಮ ಸಂಬಂದಿಕರಾದ ಸಾಯಿಬಣ್ಣ, ಸಂಗೀತಾ, ಸಂಪತಬಾಯಿ ಕೂಡಿಕೊಂಡು ಡೊರಜಂಬಗಾ ಗ್ರಾಮಕ್ಕೆ ಬಂದು ನೋಡಲು ನನ್ನ ಮಗಳಾದ ಮುನ್ನಾಬಾಯಿ ಮತ್ತು ಮೊಮ್ಮಗಳಾದ ಅಂಬಿಕಾ ಇಬ್ಬರು ಮನೆಯಲ್ಲಿ ಸುಟ್ಟಗಾಯಗಳಿಂದ ಮೃತ ಪಟ್ಟಿದ್ದು ಆಗ ನಾನು ರಂಗಮ್ಮಳಿಗೆ ವಿಚಾರಿಸಲು ಅವಳು ತಿಳಿಸಿದ್ದೆನೆಂದರೆ, ಮುಂಜಾನೆ ಮನೆಯಲ್ಲಿ ಎಲ್ಲರು ಹೊಲಕ್ಕೆ ಮತ್ತು ಶಾಲೆಗೆ ಹೋಗಿದ್ದು ಮನೆಯಲ್ಲಿ ನಾನು ಮುನ್ನಾಬಾಯಿ ಮತ್ತು ಅವಳ ಮಕ್ಕಳು ಮಾತ್ರ ಇದ್ದು ಮಧ್ಯಾನ 2 ಗಂಟೆಯ ಸುಮಾರಿಗೆ ಮಲ್ಲಿಕಾರ್ಜುನ ಇತನು ಕುಡಿದು ಮನೆಗೆ ಬಂದಿದ್ದು ಆಗ ಮುನ್ನಾಬಾಯಿ ಇವಳು ಮಲ್ಲಿಕಾರ್ಜುನನಿಗೆ ಕುಡಿದು ಮನೆಗೆ ಬರಬೇಡ ಕುಡಿಯಲ್ಲಿಕ್ಕೆ ಎಲ್ಲಿಂದ ಹಣ ಬರುತ್ತದೆ. ಮನೆಗೆ ಯಾವುದೆ ಸಾಮಾನುಗಳು ತರುವದಿಲ್ಲ ಮತ್ತು ಮಕ್ಕಳಿಗೆ ಬಟ್ಟೆ ಬರೆ ಎನು ತಂದು ಕುಡುವದಿಲ್ಲ ಹೀಗೆ ಆದರೆ ನಾವು ಹೇಗೆ ಬದುಕಬೇಕು ಅಂತ ಕೇಳಿದ್ದು ಆಗ ಮಲ್ಲಿಕಾರ್ಜುನ ಇತನು ಮುನ್ನಾಬಾಯಿಯೊಂದಿಗೆ ಜಗಳ ಮಾಡಿ ಅವಳಿಗೆ ಹೊಡೆಬಡೆ ಮಾಡಿದ್ದು ಆಗ ನಾನು ಹೋಗಿ ಮಲ್ಲಿಕಾರ್ಜುನನಿಗೆ ಬೈದು ಕಳುಹಿಸಿದ್ದು ಇರುತ್ತದೆ. ಅವನು ಹೋದ ನಂತರ ನಾನು ಮನೆಯ ಅಂಗಳದಲ್ಲಿ ಕೇಲಸ ಮಾಡಿಕೊಂಡಿದ್ದು ಮುನ್ನಾಬಾಯಿ ಮತ್ತು ಅವಳ ಮಕ್ಕಳು ಮನೆಯ ಒಳಗೆ ಇದ್ದು. ಮಧ್ಯಾನ 3 ಗಂಟೆಯ ಸುಮಾರಿಗೆ ಮನೆಯಿಂದ ಒಮ್ಮಲೆ ಚಿರಾಡುವ ಸಪ್ಪಳ ಕೇಳಿ ಬರುತ್ತಿದ್ದು ಗಾಬರಿಗೊಂಡು ನಾನು ಮನೆಯ ಒಳಗೆ ಬಂದು ನೋಡಲು ಮುನ್ನಾಬಾಯಿ ಇವಳು ತನ್ನ ಮೈ ಮೇಲೆ ಸಿಮೇ ಎಣ್ಣಿ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು. ಮುನ್ನಾಬಾಯಿ ಚಿರಾಡುತ್ತಿದ್ದಾಗ ಅಂಬಿಕಾ ಮತ್ತು ಅಂಜಲಿ ಇಬ್ಬರು ಮುನ್ನಾಬಾಯಿಗೆ ಹಿಡಿದುಕೊಂಡಿದ್ದರಿಂದ ಮಕ್ಕಳಿಗು ಬೆಂಕಿ ಹತ್ತಿದ್ದು ಇರುತ್ತದೆ. ಬೆಂಕಿ ಹತ್ತಿದ್ದನ್ನು ನೋಡಿ ನಾನು ಪಕ್ಕದ ಮನೆಯರನ್ನು ಕರೆದಿದ್ದು ಎಲ್ಲರು ಕೂಡಿ ನೀರು ಹಾಕಿ ಬೆಂಕಿಯನ್ನು ಆರಿಸಿದ್ದು ಮುನ್ನಾಬಾಯಿ, ಅಂಬಿಕಾ ಮತ್ತು ಅಂಜಲಿಗೆ ಮೈ ತುಂಬಾ ಸುಟ್ಟಗಾಯಗಳಾಗಿದ್ದು ಮುನ್ನಾಬಾಯಿ ಮತ್ತು ಅಂಬಿಕಾ ಇಬ್ಬರು ಸ್ವಲ್ಪ ಸಮಯ ನರಳಾಡುತ್ತಾ ಸ್ಥಳದಲ್ಲಿ ಮೃತ ಪಟ್ಟಿದ್ದು ಅದೆ ವೇಳೆಗೆ ರಂಗಮ್ಮ ಇವಳು ಮನೆಗೆ ಬಂದಿದ್ದು, ರಂಗಮ್ಮ ಇವಳು ಅಂಜಲಿ ಇವಳಿಗೆ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಕಲಬುರಗಿಗೆ ತೆಗೆದುಕೊಂಡು ಹೋಗಿದ್ದು. ಅಂಜಲಿ ಇವಳಿಗೆ ಕಲಬುರಗಿ ಆಸ್ಪತ್ರೇಯಲ್ಲಿ ಸೇರಿಕೆ ಮಾಡಿದ ಸ್ವಲ್ಪ ಸಮಯದಲ್ಲಿ ಆಸ್ಪತ್ರೇಯಲ್ಲಿ ಮೃತ ಪಟ್ಟಿರುತ್ತಾಳೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾಂಗಾವ ಠಾಣೆ : ಶ್ರೀ ಶಾಂತಕುಮಾರ ತಂದೆ ಗೌರಿಶಂಕರ ಚಕ್ಕಿ ಸಾ : ಸಿರಗಾಪೂರ ರವರ ಹೋಲವು ಸಿರಗಾಪೂರ ಗ್ರಾಮದಲ್ಲಿದ್ದು 1) ಜಗನ್ನಾಥ ತಂದೆ ಸಿದ್ರಾಮಪ್ಪಾ ಚಕ್ಕಿ 2) ಸಿದ್ರಾಮಪ್ಪಾ ತಂದೆ ಜಗನ್ನಾಥ ಚಕ್ಕಿ 3) ಪ್ರಭು ತಂದೆ ಸಿದ್ರಾಮಪ್ಪಾ ಚಕ್ಕಿ 4) ಮಹಾರುದ್ರಪ್ಪಾ ತಂದೆ ಸಿದ್ರಾಮಪ್ಪಾ ಚಕ್ಕಿ 5) ಸದಾಶಿವ ತಂದೆ ಸಿದ್ರಾಮಪ್ಪಾ ಚಕ್ಕಿ 6) ವಿರೇಶ ತಂದೆ ಸದಾಶಿವ ಚಕ್ಕಿ 7) ಶಿವಶಂಕರ ತಂದೆ ಸಿದ್ರಾಮಪ್ಪಾ ಚಕ್ಕಿ 8) ವಿಜಯಕುಮಾರ ತಂದೆ ಅಣ್ಣಾರಾವ ಚಕ್ಕಿ ಸಾ ಕಲಬುರಗಿ  ರವರು ಹೋಲದಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೋಲದಲ್ಲಿ ಬೆಳೆಯನ್ನು ಪೂರ್ಣವಾಗಿ ಕಿತ್ತು ಹಾಕಿದ್ದು ನಾಶಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

18 July 2016

Kalaburagi District Reported Crimes

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ದಿನಾಂಕ:16/07/2016 ರಂದು ಶ್ರೀಮತಿ  ಭಾಗ್ಯಶ್ರೀ ಗಂಡ ವಿಠ್ಠಲ ಗಾಣಗಾಪೂರ ಸಾ:ಸ್ವಾಮಿ ವಿವೇಕಾನಂದ ಕಾಲೋನಿ ಆಳಂದ ರಸ್ತೆ ಕಲಬುರಗಿ ಇವರ ಇಸ್ತ್ರೀ ಅಂಗಡಿಗೆ ನಮ್ಮ ಬಡಾವಣೆಯ ರವಿ ತಂದೆ ರಾಮಣ್ಣಾ ಗಣೇರ ಎಂಬುವನು ಬಂದು ತನ್ನ ಮೈಮೇಲಿನಿಂದ ಅಂಗಿ ತಗೆದು ಇಸ್ತ್ರೀ ಹೊಡೆದು ಕೊಡು ಅಂತಾ ಹೇಳಿದಾಗ ನಾನು ಮೈಮೇಲೆ ಹಾಕಿಕೊಂಡು ಬಟ್ಟೆಯನ್ನು ಇಸ್ತ್ರೀ ಹೊಡೆಯುವದಿಲ್ಲಾ ನೀವು ಒಗೆದಿರುವ ಬಟ್ಟೆಯನ್ನು ಕೊಡಿರಿ ನಾನು ಇಸ್ತ್ರೀ ಹೊಡೆದು ಕೊಡುತ್ತೇನೆ ಅಂತಾ ಹೇಳಿದಾಗ ಅವನು ಏ ರಂಡಿ ಭೋಸಡಿ ನೀನು ಏಕೆ ನನ್ನ ಮೈಮೇಲಿನ ಶರ್ಟಗೆ ಏಕೆ ಇಸ್ತ್ರಿ ಹೊಡೆಯುವದಿಲ್ಲಾ ಅಂತಾ ನನ್ನ ಜೊತೆ ಜಗಳಕ್ಕೆ ಬಿದ್ದು ಕೈಯಿಂದ ಬೆನ್ನಿನ ಮೇಲೆ ಹೊಟ್ಟೆಯ ಮೇಲೆ ಹೊಡೆದು ಕೈ ಹಿಡಿದು ಎಳೆದಾಡಿ ಮತ್ತು ತಲೆ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ. ಮತ್ತು ಒಂದು ಬಡಿಗೆಯಿಂದ ನನ್ನ ಎರಡು ಮೊಳಕಾಲುಗಳ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತು ಕೈಯಿಂದ ಬಲ ಗಲ್ಲದ ಮೇಲೆ ಹೊಡೆದಿರುತ್ತಾನೆ ಆಗ ಇದನ್ನು ನೋಡಿ ರಸ್ತೆಗೆ ನಡೆದುಕೊಂಡು ಹೋಗುತ್ತಿರುವ ಚಿದಾನಂದ ಹೊಡ್ಡಿನ ಮನಿ ಮತ್ತು ನನ್ನ ತಮ್ಮ ಇವರು ಬಿಡಿಸಲು ಬಂದಾಗ ನನ್ನ ತಮ್ಮನಿಗೆ ಏ ಭೋಸಡಿ ಮಗನೆ ಮಲ್ಲಿಕಾರ್ಜುನ ನಿನ್ನ ಸುದ್ದಿ ಏನಿದೆ ಸೂಳೆ ಮಗನೆ ಅಂತಾ ಒಂದು ಕಲ್ಲು ತೆಗೆದುಕೊಂಡು ನನ್ನ ಬಲ ಗಲ್ಲದ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತೆ ನನಗೆ ಕೈಯಿಂದ ಹೊಡೆಬಡೆ ಮಾಡುತ್ತಿರುವಾಗ ಚಿದಾನಂದ ಹೊಡ್ಡಿನ ಮನಿ ಇವನು ಬಿಡಿಸಿರುತ್ತಾನೆ. ಇಲ್ಲದಿದ್ದರೆ ಅವನು ನನಗೆ ಮತ್ತು ನನ್ನ ತಮ್ಮನಿಗೆ ಬಹಳ ಹೊಡೆಬಡೆ ಮಾಡುತ್ತಿದ್ದನು. ಕಾರಣ ನನಗೆ ಮತ್ತು ನನ್ನ ತಮ್ಮನಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀ ದೇವಿಂದ್ರಪ್ಪಾ  ತಂದೆ ಸೈಬಣ್ಣಾ ದೊಡ್ಡಮನಿ ಸಾ:ಮಿಣಜಗಿ ಇವರ  ಕಿರಿಯ ಮಗನಾದ  ಸೂರ್ಯಕಾಂತ ಈತನು  4 ವರ್ಷಗಳ ಹಿಂದೆ ಅಕಾಲಿಕವಾಗಿ ಮರಣ ಹೊಂದಿರುತ್ತಾನೆ.  ಈತನ ಹೆಂಡತಿಯಾದ ಭಾಗ್ಯಶ್ರೀ ಇವಳಿಗೆ ನಾನು  ಅವಳ ಪಾಲಿಗೆ ಬರುವ ಹೊಲ (ಜಮೀನು) ಹಂಚಿಕೊಟ್ಟಿರುತ್ತೇನೆ & ನನ್ನ ಹಾಗೂ ನನ್ನ ಹೆಂಡತಿಯ ಉಪಜೀವನಕ್ಕಾಗಿ ನಾನು 3 ಎಕರೆ ಹೊಲ ನನ್ನ ಹೆಸರಿಗೆ ಇಟ್ಟುಕೊಂಡಿರುತ್ತೇನೆ.ಆದರೆ ನನ್ನ ಸೊಸೆಯಾದ ಭಾಗ್ಯಶ್ರೀ  ಇವಳು ಆಗಾಗ ನನ್ನ ಹೆಸರಿಗೆ ಇರುವ 3 ಎಕರೆ ಹೊಲದಲ್ಲಿ  ಅರ್ದ ಹೊಲ ತನ್ನ ಹೆಸರಿಗೆ ಮಾಡು ಅಂತಾ ತಕರಾರು ಮಾಡುತ್ತಾ ಬಂದಿರುತ್ತಾಳೆ ಆದರೆ ನಾನು ಅವಳಿಗೆ ನಾನು ನನ್ನ ಹೆಂಡತಿ ಇರುವವರಗೆ 3 ಎಕರೆ ಹೊಲನಮ್ಮ ಹೆಸರಿಗೆ ಇಟ್ಟುಕೊಳ್ಳುತ್ತೇವೆ ನಮ್ಮ ಮರಣದ ನಂತರ ಇಬ್ಬರು ಹಂಚಿಕೊಳ್ಳಿರಿ ಅಂತಾ ಹೇಳುತ್ತಾ  ಬಂದಿರುತ್ತೇನೆ. ಮೊನ್ನೆ ದಿನಾಂಕ 14/07/2016 ರಂದು ರಾತ್ರಿ 8 ಪಿಎಮ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ಸದರಿ ನ್ನ ಸೊಸೊ ಭಾಗ್ಯಶ್ರೀ  ಇವನು ತನ್ನ ಸಹೋದರರಾದ ಶರಣಪ್ಪ ತಂದೆ ರಾಮಣ್ಣ ನಿಂಬರ್ಗಿ, ಶಂಖಪ್ಪಾ ತಂದೆ ರಾಮಣ್ಣ ನಿಂಬರ್ಗಿ , ಮಿಠಾಬಾಯಿ ಗಂಡ ಶಂಖಪ್ಪಾ, ಮಲ್ಲಮ್ಮ ಗಂಡ ರಾಮಣ್ಣಾ ನಿಂಬರ್ಗಿ ಸಾ: ಎಲ್ಲರೂ ಕಡಣಿ (ಕಣ್ಣಿ)  ತನ್ನ ಅಕ್ಕ ಶೆಟ್ಟೆಮ್ಮಾ ಗಂಡ ಹಣಮಂತ ಸಾ: ಸುಲ್ತಾನಪೂರ ಇವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದವಳೇ ನನಗೆ ಏ ರಂಡಿ ಮಗನೇ  ದೇವ್ಯಾ ನೀನು ನಿನ್ನ ಹೆಸರಿಗೆ ಇರುವ  3 ಎಕರೆ  ಹೊಲದಲ್ಲಿ  ಅರ್ದ ಭಾಗ್ಯಶ್ರೀ  ಇವಳ ಹೆಸರಿಗೆ ಮಾಡಿದರೆ ಸರಿ ಇಲ್ಲಾ ಅಂದ್ರ ನಿನಗೆ ಜೀವ ಸಹಿತ ಬಿಡುವುದಿಲ್ಲಾ  ಅಂತಾ ಜೀವದ ಬೆದರಿಕೆ ಹಾಕಿ ನನ್ನನ್ನು ಮನೆಯಿಂದ  ಎಳೆದು ಹೊರಗೆ ತಂದು ಭಾಗ್ಯಶ್ರೀ & ಶಂಕಪ್ಪಾ ಇವರು ನನಗೆ ಹಿಡಿದಿದ್ದು ಶೇಖಪ್ಪಾ ಇತನು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ.  ಮಿಠಾಬಾಯಿ ಇವಳು ನನಗೆ ಕೈಯಿಂದ ಕಪಾಳಕ್ಕೆ ಹೊಡೆದಿದ್ದಾಳೆ ಮಲ್ಲಮ್ಮಾ  & ಶೆಟ್ಟೆಮ್ಮಾ  ಇವರಿಬ್ಬರೂ  ಹೋಡಿರಿ ಈ ಹಂಟ್ಯಾನಿಗೆ ಅಂತಾ ಪ್ರಚೋದನೇ  ನೀಡಿರುತ್ತಾರೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 16/07/16 ರಂದು ಮನೆಯಲ್ಲಿ ಊಟ ಮಾಡಿಕೊಂಡು ಮನೆಯ ಮುಂದೆ ಕಟ್ಟೆಯ ಮೇಲೆ ಕುಳಿತ್ತಾಗ ನನಗೆ ಪರಿಚಯದವನಾದ ವಿಜಯಕುಮಾರ ಎಂಬುವವನು ತನ್ನ ಮೋಟಾರ ಸೈಕಲ ಮೇಲೆ ನನ್ನಲ್ಲಿಗೆ ಬಂದು ನಿನ್ನ ಹತ್ತಿರ 5 ನಿಮಿಷ್ಯ ಮಾತಾಡುವುದು ಇದೆ ನನ್ನ ಜೋತೆಯಲ್ಲಿ ಬನ್ನಿರಿ ಎಂದು ಹೇಳಿದನು ನಾನು ಏನು ಮಾತಾಡುವುದು ಇದೆ ಎಂದು ಕೆಳಿದಕ್ಕೆ ನಾನು ಅವನ ಹಿಂದೆ ಮೋಟಾರ ಸೈಕಲ ಮೇಲೆ ಕುಳಿತು ಅವನ ಗೆಳೆಯರೊಂದಿಗೆ ಹೊರಟೇವು ನನಗೆ ಶಹಾಬಜಾರದ ಲಾಲಹನುಮಾನ ಗುಡಿಯ ಹಿಂದುಗಡೆ ರುದ್ರಭೂಮಿಯಲ್ಲಿ ಕರೆದುಕೊಂಡು ಹೋಗಿ ಭೋಸಡಿ ಮಗನೆ ನಿಮ್ಮಗೆ ಸೊಕ್ಕು ಬಹಳ ಬಂದಿದೆ ಎಂದು ವಿಜಯಕುಮಾರ ಹೇಳಿ ಬೈಯುತ್ತಿದ್ದಾಗ ಅವನ ಹಿಂದೆ ಇದ್ದ ಸಂದೀಪ ಎಂಬುವವನು ಕೈಮುಷ್ಠಿಮಾಡಿ ನನ್ನ ಮುಖದ ಎಡಗಡೆ ಜೋರಾಗಿ ಹೊಡೆದು ರಕ್ತಾಗಾಯ ಮಾಡಿದನು ಅವನ ಇನ್ನೊಬ್ಬ ಗೆಳೆಯನಾದ ಕರಿಚಿರತೆ ಎಂಬುವವನು ಜೋರಾಗಿ ಎಡಗಡೆ ಟೊಂಕದ ಮೇಲೆ ಕಲ್ಲಿನಿಂದ  ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಮತ್ತು ವಿಜಯಕುಮಾರ ಎಂಬುವವನು ಬಿಡಬೇಡ ಈ ಮಗನಿಗೆ ಎಂದು ಹೇಳಿ ಕಲ್ಲಿನಿಂದ ಬೆನ್ನಲ್ಲಿ ಜೋರಾಗಿ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಆಗ ನಾನು ಕೂಗಾಡುವುದು ಚಿರಾಡುವುದು ಮಾಡುತ್ತಿದ್ದಾಗ ಬೋಸಡಿ ಮಗನೆ ಇಲ್ಲಿ ನಿನಗೆ ಯಾರು ಬಿಡಿಸಲು ಬರುವುದಿಲ್ಲಾ ಎಷ್ಟು ಕೂಗಾಡುತ್ತಿ  ಕೂಗಾಡು ಅಂತಾ ಹೇಳುತ್ತಾ ನನ್ನ ಜೇಬಿನಲ್ಲಿದ್ದ 2 ಸ್ಯಾಮಸಾಂಗ ಮೋಬಾಯಿಲ ಮತ್ತು 2300 ರೂ ಗಳು ವಿಜಯಕುಮಾರ ಎಂಬುವವನು ತೆಗೆದುಕೊಂಡು ಎಡ ಕಪಾಳ ಮೇಲೆ ಹೊಡೆಯುತ್ತಿದ್ದಾಗ ಅಷ್ಟರಲ್ಲಿ ನನ್ನ ಅಣ್ಣಂದಿರಾದ ಶರಣಬಸಪ್ಪ ತಂದೆ ವೀರಣ್ಣ ಕಲಶೇಟ್ಟಿ ಮತ್ತು ಶಾಂತಯ್ಯಾ ತಂದೆ ಶಂಕ್ರಯ್ಯಾ ಭಾಸಗಿಮಠ ಇವರು ನಮ್ಮ ತಮ್ಮನಿಗೆ ಏಕೆ ಹೊಡೆಯುತ್ತಿದ್ದಿರಿ ಎಂದು ಹೇಳುತ್ತಾ ಬರುತ್ತಿದ್ದಾಗ ನನಗೆ ವಿಜಯಕುಮಾರ ಮಗನೆ ನೀನು ಹೇಗೆ ನಿನ್ನ ಓಣೆಯಲ್ಲಿ ಸಂಸಾರ ಮಾಡುತ್ತಿ ಎಂದು ಜೀವದ ಬೇದರಿಕೆ ಹಾಕಿ  ಅಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ :ಶ್ರೀ ಬಿಂದುಪ್ರಸಾದ ತಂದೆ ಕಮತಪ್ರಸಾದ ಸಾ : ಶಾಹಾಬಾದ ರವರು ದಿನಾಂಕ 17-07-2016 ರಂದು ಜೇವರಗಿಗೆ ಹೋಗುವಾಗ  ಮೊಟಾರ ಸೈಕಲ್ ನಂ ಕೆಎ – 32 ಓ – 124 ನೇದ್ದರ ಸವಾರನಾದ ಪ್ರೇಮಜಿ ಆನಂದರಾವ ಡಗೋಡೆ ಸಾ ಶಾಹಾಬಾದ ರವರು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನ್ನು ಅತೀವೇಗ ಅಜಾಗರುಕತೆಯಿಂದ ನಡೆಸಿ ಸ್ಕಿಡ್ ಆಗಿ ಬಿದ್ದು ತಲೆಗೆ ಬಾರಿಪೆಟ್ಟಾಗಿದ್ದು  ಉಪಚಾರ ಕುರಿತು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.