POLICE BHAVAN KALABURAGI

POLICE BHAVAN KALABURAGI

03 December 2013

Gulbarga District Reported Crimes

ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಮೈನೊದ್ದೀನ ತಂದೆ ಇಬ್ರಾಹಿಂಸಾಬ ಮಸಲದಾರ  ಸಾ: ನದಿಸಿನ್ನೂರ ರವರ ತಂದೆಗೆ ತಾಯಿಗೆ ಇಬ್ಬರು ಗಂಡಸು ಮಕ್ಕಳಿರುತ್ತೇವೆ. ಅವರಲ್ಲಿ ನಾನು ದೊಡ್ಡವನು ನನ್ನ ತಮ್ಮನಾದ ಸದ್ದಾಂ ಹುಸೇನ ಇತನು ಚಿಕ್ಕವನಿರುತ್ತಾನೆ. ನಮ್ಮ ತಂದೆ ತಾಯಿ ಇಬ್ಬರು ತೀರಿಕೊಂಡಿರುತ್ತಾರೆ. ನಮಗೆ ನಮ್ಮ ತಂದೆ -ತಾಯಿಗೆ 3 ಎಕರೆ ಹೊಲ ಬಂದಿರುತ್ತದೆ. ಅದರಲ್ಲಿ 2 ಎಕರೆ ಜಮೀನು ಕಂಪನಿಯಲ್ಲಿ ಹೋಗಿದ್ದರಿಂದ 22 ಲಕ್ಷ ರೂಗಳು ಬಂದಿರುತ್ತವೆ. ಅದರಲ್ಲಿ 16 ಲಕ್ಷ ರೂಗಳು ಕೊಟ್ಟು ಗುಲಬರ್ಗಾ ಮಿಜ್ಬಾ ನಗರದಲ್ಲಿ ಒಂದು ಮನೆಯನ್ನು ಖರಿದಿ ಮಾಡಿರುತ್ತೆವೆ. ಉಳಿದ ದುಡ್ಡನ್ನು ನಾನು ಮತ್ತು ನನ್ನ ತಮ್ಮ ಸದ್ದಾಂ ಹುಸೇನ ಇಬ್ಬರೂ ಕುಡಿಕೊಂಡು ಸಮನಾಗಿ ಹಂಚಿಕೊಂಡಿರುತ್ತೆವೆ.  ಈಗ ಸುಮಾರು 1 ವರ್ಷಗಳಿಂದ ನನ್ನ ತಮ್ಮನು ಗುಲಬರ್ಗಾದಲ್ಲಿ ಖರಿದಿ ಮಾಡಿದ ಮನೆಯನ್ನು ಮಾರಿ ನನಗೆ ನನ್ನ ಪಾಲನ್ನು ನನಗೆ ಕೊಡು ಅಂತಾ ಕೇಳುತ್ತಾ ನನ್ನ ಸಂಗಡ ಆಗಾಗ ಕಿರಿಕಿರಿ ಮಾಡುತ್ತಾ ಬಂದಿರುತ್ತಾನೆ. ದಿನಾಂಕ  02-12-2013 ರಂದು 2 7:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಹಾಗೂ ನಮ್ಮ ಮಾವನಾದ ಖಾಜಾ ಹುಸೇನ ಅತ್ತೆಯಾದ ರಹೆಮತ ಬೀ ಎಲ್ಲರೂ ಮನೆಯಲ್ಲಿ ಇದ್ದಾಗ ನನ್ನ ತಮ್ಮ ಸದ್ದಾಂ ಹುಸೇನ್‌ ಮತ್ತು ಅವನ ಹೆಂಡತಿ ಫರ್ವಿನಾ ಬೇಗಂ ಇಬ್ಬರೂ ಕೂಡಿಕೊಂಡು ಬಂದು ನನಗೆ ಅವಾಚ್ಯಶಬ್ದಗಳಿಂದ ಬೈದು ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಗಂಗಮ್ಮ ಗಂಡ ಜಲಲಾಪ್ಪ ಇವರು ದಿನಾಂಕ 03-12-2013 ರಂದು ಬೆಳಿಗ್ಗೆ 5-00 ಗಂಟೆ ಸುಮಾರಿಗೆ ಕಣ್ಣಿ ಮಾರ್ಕೆಟದಿಂದ ಅಟೋರಿಕ್ಷಾ ನಂಬರ ಕೆಎ-32 ಎ-5741 ನೇದ್ದರಲ್ಲಿ ತರಕಾರಿ ತೆಗೆದುಕೊಂಡು ರೇಲ್ವೆ ಸ್ಟೇಶನಕ್ಕೆ ಬಸ ನಿಲ್ದಾಣದ ಮುಖಾಂತರ ಅಟೋರಿಕ್ಷಾದಲ್ಲಿ ಕುಳಿತು ಬರುತ್ತಿರುವಾಗ ಅಟೋರಿಕ್ಷಾ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಕಟ ಹೊಡೆದು ಬಸ ಡಿಪೊ ಎದುರಿನ ರೋಡಿನ ಮೇಲೆ ಅಟೋರಿಕ್ಷಾ ಪಲ್ಟಿ ಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಚಾಲಕ ಹೊರಟು ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crime

ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಚಂದಪ್ಪ ತಂದೆ ಕಾಶಪ್ಪ ನಾಯಿಕೊಡಿ ರವರ ಮಗ ಓಂ ಪ್ರಕಾಶ ಈತನು ಸಂಬಂದಿಕರಾದ ಭೀಮಣ್ಣ ತಂದೆ ಸಂಗಪ್ಪ ಇವರ  ಹೀರೋ ಹೊಂಡಾ  ಮೊಟಾರ ಸೈಕಲ ನಂ. ಕೆ.ಎ 32 ಈ.ಸಿ. 9306 ನೇದ್ದನ್ನು ತೆಗೆದುಕೊಂಡು ತನ್ನ ಹೆಂಡತಿಯ ತವರೂರಾದ ಶ್ಯಾಮನೂರ ಗ್ರಾಮಕ್ಕೆ  ಹೋಗಿ ಜಾತ್ರೆ ನೋಡಿಕೊಂಡು ಬರುತ್ತೇನೆ ಅಂತ ಹೇಳಿ ಹೊರಟು ಹೋಗಿದ್ದು. ನಿನ್ನೆ ರಾತ್ರಿ 10.15 ಪಿ.ಎಮ್. ಸುಮಾರಿಗೆ ಫಿರ್ಯಾದಿ ಹಾಗೂ ಆತನ ಮನೆಯವರು ಮನೆಯಲ್ಲಿ ಮಲಗಿಕೊಂಡಾಗ ಸಂಬಂದಿ ಬಸಪ್ಪ ತಂದೆ ಅಮಲಪ್ಪ ನಾಯಕೋಡಿ ಈತನು ಮನೆಗೆ ಬಂದು ತಿಳಿಸಿದ್ದೇನೆಂದರೆ, ಚಿತ್ತಾಪೂರ  ಟೆಂಗಳಿ ಮುಖ್ಯ ರಸ್ತೆಯ ದಂಡೋತಿ ಗ್ರಾಮದ ಹತ್ತಿರ  ರೋಡಿನ ಮೇಲೆ ನಿಮ್ಮ ಮಗ ಮೊಟಾರ ಸೈಕಲ ಮೇಲಿಂದ ಸ್ಕೀಡ ಆಗಿ ಬಿದ್ದು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಈ ವಿಷಯ ಯಾರೋ ರೋಡಿನ ಮೇಲಿಂದ ಹೋಗುವರು ನನ್ನ ಮೊಬೈಲಗೆ ಫೋನ ಮಾಡಿ ತಿಳಿಸಿರುತ್ತಾರೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿ ಹಾಗೂ ಆತನ ಮಗ ಹೆಂಡತಿ ಸಂಬಂದಿ ಬಸಪ್ಪ ಎಲ್ಲರು ಕೂಡಿ ಒಂದು ಖಾಸಗಿ ವಾಹನ ಮಾಡಿಕೊಂಡು. ಸ್ಥಳಕ್ಕೆ ಬಂದು ನೋಡಲಾಗಿ, ಫಿರ್ಯಾದಿ ಮಗ ತಾನು ಚಲಾಯಿಸುತ್ತಿದ್ದ ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ರೋಡಿನ ಮೇಲೆ ಸ್ಕೀಡ ಆಗಿ ಬಿದ್ದು. ಬಲ ಹುಬ್ಬಿನ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು. ಸದರಿ ಘಟನೆ ನಡೆದಾಗ ನಿನ್ನೆ ದಿನಾಂಕ 02-12-2013 ರಂದು ರಾತ್ರಿ 9.30 ಗಂಟೆ ಸುಮಾರಿಗೆ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಫರತಾಬಾದ ಠಾಣೆ : ಕಡಣಿ ಗ್ರಾಮದಲ್ಲಿ ಮಹಾಲಕ್ಷ್ಮಿ ದೇವಿಯ ಗುಡಿಯ ಕಟ್ಟೆಯ ಮೇಲೆ ಕೆಲವು ಜನರು ಕುಳಿತುಕೊಂಡು ಇಸ್ಪೇಟ ಜೂಜಾಟ ಆಡುತ್ತಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಟ ಆಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ 6  ಜನರನ್ನು ಹಿಡಿದುಕೊಂಡರು. ಪಿ.ಎಸ್. ಸಾಹೇಬರು ಸದರಿಯವರಿಗೆ ವಿಚಾರಿಸಿ ಚೇಕ ಮಾಡಲಾಗಿ ಅವರಲ್ಲಿ ಒಬ್ಬೋಬ್ಬರಾಗಿ ತಮ್ಮ ಹೆಸರು 1. ಬಸವರಾಜ ತಂದೆ ಭೀಮಶಾ ಆಳಂದಕರ ಸಾ: ಶರಣಸಿರಸಗಿ 2. ರಾಜಶೇಖರ ತಂದೆ ಹಣಮಂತ್ರಾಯ ಬೇರಜಿ ಸಾ:ಕಡಣಿ 3. ಮಲ್ಲಿಕಾರ್ಜುನ ತಂದೆ ಗುರಶಾಂತಪ್ಪಾ ಸಿದ್ದಣಗೋಳ ಸಾ: ಕಡಣಿ  4. ಪ್ರದೀಪ ತಂದೆ ಸಿದ್ರಾಮ ದ್ಯಾವನ ಸಾ: ಕಡಣಿ 5. ದೇವಿಂದ್ರಪ್ಪಾ ತಂದೆ ಹಣಮಂತ್ರಾಯ ಕರಿಕಲ್ಲ ಸಾ: ಕಡಣಿ  6. ಚಿದಾನಂದ ತಂದೆ ಚಂದ್ರಶಾ ಸಿಂಗನ ವಯ: ಸಾ: ಕಡಣಿ 52 ಇಸ್ಪೇಟ ಎಲೆಗಳು ಅಂದಾರ ಬಾಹರ ದೈವದ ಜೂಜಾಟಕ್ಕೆ ಬಳಸಿದ ಒಟ್ಟು ಹಣ  2900=00 ರೂ ಗಳು ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಫಿರೋಜಾಬಾದ ಗ್ರಾಮದಲ್ಲಿ ಅಕ್ಕ ಮಹಾದೇವಿಯ ಗುಡಿಯ ಮುಂದೆ ಕುಳಿತು ಕೆಲವು ಜನರು ಕುಳಿತುಕೊಂಡು ಇಸ್ಪೇಟ ಜೂಜಾಟ ಆಡುತ್ತಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಂಚರು ಹಾಗು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಗುಡಿಯ ಹಿಂದೆ ನಿಂತು ನೋಡಲಾಗಿ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 4 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 4 ಜನರನ್ನು ಹಿಡಿದುಕೊಂಡರು. ಪಿ.ಎಸ್. ಸಾಹೇಬರು ಸದರಿಯವರಿಗೆ ವಿಚಾರಿಸಿ ಚೇಕ ಮಾಡಲಾಗಿ 1. ಸಿದ್ದಣ್ಣಾ ತಂದೆ ವೀರಬಸಪ್ಪಾ ದುಧನಿ ಸಾ: ಫಿರೋಜಾಬಾದ 2. ಗುಂಡಪ್ಪಾ ತಂದೆ ಬಸವರಾಜ ಶಿರೂರ ಸಾ:ಫಿರೋಜಾಬಾದ 3.) ಸಿದ್ರಾಮಪ್ಪಾ ತಂದೆ ಬಸವರಾಜ ನೆಲೋಗಿ ಸಾ: ಫಿರೋಜಾಬಾದ 4. ರಾಜು ತಂದೆ  ಶಿವಶರಣಪ್ಪಾ ಮಾಲಗತ್ತಿ ಸಾ: ಫಿರೋಜಾಬಾದ ಇವರಿಂದ 52 ಇಸ್ಪೇಟ ಎಲೆಗಳನ್ನು ಮತ್ತು  ಒಟ್ಟು ಹಣ  3720=00 ರೂ ಗಳು ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡಡು ಠಾಣೆಗೆ ಬಂದು ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಸುರೇಶ ಬೆಂಡೆಗುಂಬಳ ಪಿ.ಎಸ್.ಐ ಅಫಜಲಪೂರ ಪೊಲೀಸ್ ಠಾಣೆ ರವರು ದಿನಾಂಕ 02-12-2013 ರಂದು ಅಮವಾಸೆ ಇದ್ದರಿಂದ ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ ದೇವಿಯ ದರ್ಶನಕ್ಕೆ ಸುಮಾರು ಜನರು ಬರುವ ಸಂಭಂದ ಸದರಿ ಬಂದೊಬಸ್ತ ಕರ್ತವ್ಯ ಕುರಿತು ಬೆಳಿಗ್ಗೆ 7:00 ಗಂಟೆಗೆ ಸಿಬ್ಬಂದಿಯವರೊಂದಿಗೆ ಘತ್ತರಗಾ ಗ್ರಾಮಕ್ಕೆ ಹೋಗಿ ಬಂದೊಬಸ್ತ ಕರ್ತವ್ಯ ನಿರ್ವಹಿಸುತ್ತಿದ್ದಾಗ  ಮದ್ಯಾಹ್ನ 1:00 ಗಂಟೆ ಸುಮಾರಿಗೆ ಭಾಗ್ಯವಂತಿ ದೇವಿಯ ಗುಡಿಯ ಮುಂದೆ ಇದ್ದಾಗ ಖಚಿತ ಬಾತ್ಮಿ ಬಂದಿದ್ದು ಎನೆಂದರೆ, ಘತ್ತರಗಾ ಗ್ರಾಮದ ಹೊರವಲಯದಲ್ಲಿ ಅಂದರೆ ಹಾವಳಗಾ ರೋಡ ಬದಿಗೆ ಇದ್ದ ಬಸಪ್ಪ ನಿಂಬರ್ಗಿ ಈತನ ಹೊಲದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಿಡದ ಕೇಳಗೆ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ  ನಿಂತು ನೋಡಲು ಬಸಪ್ಪ ನಿಂಬರ್ಗಿ ಇವರ ಹೊಲದ ಪಕ್ಕದಲ್ಲಿ ಇರುವ ಬೇವಿನ ಗಿಡದ ಕೇಳಗೆ  ಸಾರ್ವಜನಿಕ ಸ್ಥಳದಲ್ಲಿ  ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜುಜಾಡುತ್ತಿದ್ದ 6 ಜನರನ್ನು ಹಿಡಿದು  ಹೆಸರು ವಿಳಾಸ ವಿಚಾರಿಸಲಾಗಿ 1) ಬಸವರಾಜ ತಂದೆ ಕಂಠೆಪ್ಪ ಜಮಾದಾರ 2) ಶರಣಪ್ಪ ತಂದೆ ಶಿವರಾಯ 3) ಲಗಮಣ್ಣ ತಂದೆ ಸಿದ್ದಪ್ಪ ಜಗಲಗೊಂಡ 4) ಪೀರಪ್ಪ ತಂದೆ ಲಕ್ಷ್ಮಣ ಜಗಲಗೊಂಡ 5) ಚಂದ್ರಾಮ ತಂದೆ ಅರ್ಜುನ ಚವರಾದ ಸಾ: ಎಲ್ಲರು ಘತ್ತರಗಾ ಹೀಗೆ ಒಟ್ಟು 900-00 ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು   ಆರೋಪಿತರೊಂದಿಗೆ ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಸೇಡಂ ಠಾಣೆ : ಶ್ರೀ ವೆಂಕಟಸ್ವಾಮಿ ತಂದೆ ಪರುಶುರಾಮ ವಡ್ಡರ ಸಾ : ಬಟಗೇರಾ (ಕೆ) ತಾ : ಸೇಡಂ ರವರ ಮಗಳಾದ ಅನುಸುಜಾ ವಯಾ 17 ವರ್ಷ ಇವಳಿಗೆ ಅದೇ ಗ್ರಾಮದ ರಾಜು ತಂದೆ ಶಿವರಾಯ ಫಸಲರ ಇತನು ದಿನಾಂಕ 01-12-2013 ರಂದು ಮಧ್ಯಾಹ್ನ 1-30 ಗಂಟೆಗೆ ಪುಸಲಾಯಿಸಿ ಅಪಹರಣಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶಿವಶರಣಪ್ಪ   ತಂದೆ ಪಿರಪ್ಪ ಮಹಾಗಂವ  ಸಾನಾಗನಳ್ಳಿ  ತಾ|| ಜಿ|| ಗುಲಬರ್ಗಾ ರವರು ತನ್ನ  ದ್ವಿಚಕ್ರ  ವಾಹನ ಟಿವ್ಹಿಎಸ್  ಹೇವಿ ಡ್ಯೂಟಿ ನಂಕೆಎ 32 ಇಸಿ 3613 ನೇದ್ದು ರೇಲ್ವೆ ಸ್ಟೇಷನ ಎದುರಗಡೆ ದಿನಾಂಕ 28-112013 ರಂದು  ರಾತ್ರಿ  7;00  ಗಂಟೆಯ  ಸುಮಾರಿಗೆ ನಿಲುಗಡೆಮಾಡಿ ತರಕಾರಿ ತೆಗೆದುಕೊಂಡು ರಾತ್ರಿ 7-30 ಗಂಟೆಯ ಸುಮಾರಿಗೆ  ಬಂದು  ನೋಡಲಾಗಿ  ಸದರಿ  ದ್ವಿಚಕ್ರ ವಾಹನ  ಇರಲಿಲ್ಲಿ. ನಾನು ಇಲ್ಲಿಯವರೆಗೆ ಎಲ್ಲಾಕಡೆ ಹುಡಕಾಡಿದರೂ ಸಹ ನನ್ನ ಸೈಕಲ್ ಮೋಟಾರ ಸಿಕ್ಕಿರುವದಿಲ್ಲ.  ಕಾರಣ  ನನ್ನ ದ್ವಿಚಕ್ರ ವಾಹನ ಟಿವ್ಹಿಎಸ್ ಹೇವಿ ಡ್ಯೂಟಿ ನಂ; ಕೆಎ 32 ಇಸಿ 3613  ಚಸ್ಸಿ ನಂMD621BD11C2N58669 ಇಂಜಿನ್ ನಂ OD1NC1554032 || ಕಿ|| 20,000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.