POLICE BHAVAN KALABURAGI

POLICE BHAVAN KALABURAGI

28 February 2017

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು:
ಕಾಳಗಿ ಪೊಲೀಸ ಠಾಣೆ :- ದಿನಾಂಕ 28/02/17 ರಂದು ಶ್ರೀ ಈರಭದ್ರಪ್ಪ ಪಂಡರಗೇರಿ ಸಾ:ಹುಳಗೇರಾ ಇವರು ಠಾಣೆಗೆ ಹಾಜರಾಗಿ  ದಿನಾಂಕ 27/02/2017 ರಂದು ಕೋರವಾರ ಅಣ್ಣವೀರಪ್ಪ ದೇವರ ಥೇರು ಇರುವುದರಿಂದ ನಮ್ಮ ಗ್ರಾಮದಿಂದ ನಾನು ನನ್ನ ಹೆಂಡತಿ ಶಾಂತಾಬಾಯಿ ನನ್ನ ಮಗ ಶಿವುಕುಮಾರ ಸಾಯಂಕಾಲ ದೇವಸ್ಥಾನಕ್ಕೆ ಹೋಗಿದ್ದು ನನ್ನ ಇನ್ನೊಬ್ಬ ಮಗ ಆನಂದನು ಹುಳಗೇರಾದಿಂದ ಯಾರದೋ ಮೋಟಾರ ಸೈಕಲ್  ತೆಗೆದುಕೊಂಡು ಕಾಳಗಿಗೆ ಬಂದು ಕಾಳಗಿಯಿಂಧ  ತನ್ನ  ಗೆಳೆಯನಾದ ಮಡಿವಾಳಪ್ಪ ತಂದೆ ರವೀಂದ್ರ ನಡಗಟ್ಟಿ ಇತನೊಂದಿಗೆ ಅಣವೀರಪ್ಪನ ದೇವಸ್ಥಾನಕ್ಕೆ ನನ್ನ ಮಗ ಮತ್ತು ಆತನ ಗೆಳೆಯ ಮಡಿವಾಳಪ್ಪ ಮೋಟಾರ ಸೈಕಲ್ ನಂ. ಕೆಎ-28 ಕ್ಯೂ-5105 ನೇದ್ದರ ಮೇಲೆ ಬರುತ್ತಿದ್ದಾಗ ಕಾಳಗಿ ಹತ್ತಿರದ ಗೋಟುರ ಕಡೆಯ ರಸ್ತೆ ಯಲ್ಲಿ ಕಲಬುರಗಿ ಕಡೆಯಿಂದ ಬರುತ್ತಿದ್ದ ಟಾಟಾ ಸುಮೋ ನಂ. ಕೆಎ-32 ಎ-5133 ನೇದ್ದರ ಚಾಲಕ ವಾಹನವನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸುತ್ತಾ ನನ್ನ ಮಗರ ಮತ್ತು ಆತನ ಗೆಳೆಯ ಬರುತ್ತಿದ್ದ ಮೋಟಾರ ಸೈಕಲ್ ಕ್ಕೆ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ಎರಡು ಕಿವಿಯಿಂದ ರಕ್ತ ಸೋರಿರುತ್ತದೆ. ಎರಡು ಕಾಲುಗಳಿಗೆ ತರಚಿತ ಗಾಯಗಳಾಗಿದ್ದು. ಆತನ ಗೆಳೆಯ ಮಡಿವಾಳಪ್ಪನಿಗೆ ಕಾಲು ಮುರಿದಿದ್ದು ಮಡಿವಾಳಪ್ಪನಿಗೆ ಖಾಸಗಿ ವಾಹನದಲ್ಲಿ  ಸರಕಾರಿ ಆಸ್ಪತ್ರೆ ಕರೆದುಕೊಂಢು ಹೋಗಿದ್ದು. ನನ್ನ ಮಗ ಆನಂದನು ಮೃತ ಪಟ್ಟಿದ್ದು . ಅಪಘಾತ ಪಡಿಸಿದ ಟಾಟಾ ಸುಮೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಮುಧೋಳ ಪೊಲೀಸ್ ಠಾಣೆ :- ದಿನಾಂಕ: 27.02.2017 ರಂದು ಶ್ರೀಮತಿ ಅನುಸುಜಮ್ಮ @ ಅನಸಮ್ಮ ಗಂಡ ನರಸಿಂಹಲು ಮಾಲಾಮೀದಿ ಸಾ: ಕೊಡಚರ್ಲಾ ಮಂಡಲ: ಬಸೀರಾಬಾದ (ಟಿ.ಎಸ್. ರಾಜ್ಯ) ಇವರು ಹೇಳಿಕೆ ಫೀರ್ಯಾದಿಯಲ್ಲಿ ಇಂದು ದಿನಾಂಕ: 27-02-2017 ರಂದು ತಮಗಮ ಊರಿನಿಂದ ತಾನು ಮತ್ತು ನನ್ನ ಗಂಡ ನರಸಿಂಹಲು ಮೇದಕ್ ಗ್ರಾಮಕ್ಕೆ ನಮ್ಮ ಮೊ/ಸೈ ನಂ OR-05-V-0954 ನೇದ್ದರ ಮೇಲೆ ಸಂಬಂದಿಕರಾದ ವೆಂಕಟೇಶ ತಂದೆ ಶಾಮಪ್ಪ ಸಾ: ಮೇದಕ ಇವರ ಮನೆಗೆ ಬಂದಿದ್ದು. ನನ್ನ ಗಂಡ ಮೇದಕ ಗ್ರಾಮದ ನಮ್ಮ ಸಂಬಂದಿಕರ ಮನೆಯಲ್ಲಿ ನನಗೆ ಬಿಟ್ಟು ಕಾನಕುರ್ತಿ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ಮೊ/ಸೈನ್ನು ನಂ OR-05-V-0954  ನೇದ್ದರ ಮೇಲೆ ಹೋಗಿದ್ದು. ಸಾಯಂಕಾಲ ನನ್ನ ಗಂಡನ ಫೋನ ದಿಂದ ನನಗೆ ಫೋನ ಮಾಡಿ ನಿನ್ನ ಗಂಡ ಕಾನಕುರ್ತಿಯಿಂದ ಮೇದಕ ಕಡೆಗೆ ಮೊ/ಸೈ ನಂ OR-05-V-0954 ನೇದ್ದರ ಮೇಲೆ ಬರುತ್ತಿದ್ದಾಗ  ಗಂಗಾರಾವಲಪಲ್ಲಿ ಗೇಟ ದಾಟಿ ಸುಮಾರು 1 ಕಿಮಿ ದೂರದ ಅಂತರದಲ್ಲಿ ನಿನ್ನ ಗಂಡ ಮೊ/ಸೈ ನ್ನು ಅತಿವೇಗ ಹಾಗು ನಿಷ್ಕಾಳಜೀತನಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಮೊ/ಸೈ ಸ್ಕಿಡ್ಡಾಗಿ ರೋಡಿನ ಮೇಲೆ ಬಿದ್ದಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬರುತ್ತಿದೆ ಅಂತಾ ತಿಳಿಸಿದಾಗ ನಾನು ಮತ್ತು ನಮ್ಮ ಸಂಬಂದಿಕರಾದ ವೆಂಕಟೇಶ ತಂದೆ ಶಾಮಪ್ಪ ಇಬ್ಬರು ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನ ತಲೆಗೆ ಹಿಂದುಗಡೆ ಭಾರಿ ರಕ್ತಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತಬರುತ್ತಿದ್ದು ಉಪಚಾರ ಕುರಿತು 108 ಅಂಬುಲೇನ್ಸನಲ್ಲಿ ಸರಕಾರಿ ಆಸ್ಪತ್ರೆ ಗುರುಮಠಕಲ್ ಗೆ ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಆಸ್ಪತ್ರೆಗೆ ತೆಗೆದುಕೊಂಡು ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಆಡಕಿ ಗ್ರಾಮದ ಹತ್ತಿರ ಮೃತ ಪಟ್ಟಿದ್ದು ಇತನ ಮೃತ ದೇಹವನ್ನು ಸರಕಾರಿ ಆಸ್ಪತ್ರೆ ಸೇಡಂಕ್ಕೆ ತಂದಿದ್ದು. ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

27 February 2017

Kalaburagi District Reported Crimes

ನೀರಿನಲ್ಲಿ ಮುಳುಗಿ ಸಾವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ  26-2-2017 ರಂದು  ಶ್ರೀ ಅಮೀರ ಅಲಿಖಾನ ತಂದೆ ಇಬ್ರಾಹಿಂ ಅಲಿಖಾನ ಸಾ : ಶರ್ಫ ಮಡ್ಡಿ ಇಸ್ಲಾಮಾಬಾದ ಕಾಲೂನಿ ಕಲಬುರಗಿ  ರವರ  ಮಗಳು ಅಮತುಸಬುರ ವಯ;13 ವರ್ಷ , ಮರಿಯಮ್ಮಾ ವಯ;16 ವರ್ಷ ಇವರು ತಮ್ಮ ಹೊಲದ ಪಕ್ಕದಲ್ಲಿ ಇರುವ ಕುಮಸಿ ಗ್ರಾಮದ ಸೀಮಾಂತರದಲ್ಲಿ ಬರುವ ಕೆರೆಯ ನೀರಿನಲ್ಲಿ ಆಡಲು ಹೋದಾಗ ಆಯಾ ತಪ್ಪಿ  ಕೇರೆ ನೀರಲ್ಲಿ ಬಿದ್ದಾಗ  ಅವರನ್ನು  ಕರೆಯಲು/ತೆಗೆಯಲು ಹೋದ ಫಿರ್ಯಾದಿ ಅಳಿಯ ಸಾದುಲ್ ರೆಹಮಾನ ಮತ್ತು  ನನ್ನ ಅಣ್ಣನ ಮಗ ಬಸಿರ ಅಲಿಖಾನ ಇವರೂ ಕೂಡಾ  ಆಯಾತಪ್ಪಿ  ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 26-02-2017 ರಂದು 3 ಪಿ.ಎಮ್ ಕ್ಕೆ  ಶ್ರೀ ಗುಂಡಪ್ಪ ತಂದೆ  ಸಂಗಪ್ಪ ಜವಾಜಿ ಮು:ರಾಜನಾಳ ಗ್ರಾಮ ತಾ:ಜಿ:ಕಲಬುರಗಿ ಇವರು ದಿನಾಂಕ : 26.02.2017 ರಂದು ನಸುಕಿನ ಜಾವ ರಾಜನಾಳ ಗ್ರಾಮದಿಂದ ನನ್ನ ಅಣ್ಣನಾದ ರಾಜಕುಮಾರ ಜವಾಜಿ ಇವರು ನನ್ನ ಮೋಬಾಯಿಲಗೆ ಫೊನ ಮಾಡಿ ಯಾರೋ ಕಳ್ಳರು ನನ್ನ ಮನೆಯಲ್ಲಿ ನಾನು ಮಲಗುವ ಕೋಣೆಯ ಬಾಗಿಲಿಗೆ ಹಾಕಿದ ಕಿಲಿಯನ್ನು ಮುರಿದು ಮನೆಯಲ್ಲಿ ಹೋಗಿ ಅಲಮಾರಿಯ ಕಿಲಿಯನ್ನು ಮುರಿದು ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿ ಆಗಿ ಬಿಸಾಡಿ ಕಳ್ಳತನ ಮಾಡಿರುವ ವಿಷಯ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ನನ್ನ ಮನೆ ಕಳ್ಳತನವಾದ ವಿಷಯ ನನ್ನ ಸಂಗಡ ಸಂಗಮಕ್ಕೆ ಬಂದಿದ್ದ ಜಗನ್ನಾಥ ಕಲ್ಲೂರ ಹಾಗೂ ಮಂಜುನಾಥ ಜವಾಜಿ ಹಾಗೂ ಹುಮನಾಬಾದನಲ್ಲಿರುವ ನನ್ನ ಹೆಂಡತಿಗೆ ತಿಳಿಸಿದ್ದು. ನಾವೇಲ್ಲರೂ ಕೂಡಿ ಮುಂಜಾನೆ ವಾಪಸ್ಸ ರಾಜನಾಳ ಗ್ರಾಮದ ನನ್ನ ಮನೆಗೆ ಬಂದು ನೋಡಲು ನನ್ನ ಅಣ್ಣ ಫೊನನಲ್ಲಿ ಹೇಳಿದಂತೆ ನಾನು ಮಲಗುವ ಕೋಣೆಯ ಬಾಗಿಲಕಿಲಿ ಮುರಿದು ಒಳಗೆ ಹೋಗಿ ಅಲಮಾರಿಯ ಕಿಲಿ ಮುರಿದು ಅಲಮಾರಿಯಲ್ಲಿಟ್ಟ ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಟಾಕಿದ್ದು. ನಂತರ ನಾನು ನೋಡಲು ಅಲಮಾರಿಯಲ್ಲಿಟ್ಟ  ಬಮಗಾರದ ಮತ್ತು ಬೆಳ್ಳಿಯ ಆಭರಣಗಳನ್ನು , ಕೈಗಾಡಿಯಾರ ಮತ್ತು ನಗದು ಹಣ ಹೀಗೆ ಒಟ್ಟು ಒಟ್ಟು 91.800 ರೂಪಾಯಿ ಮಾಲನ್ನು ಯಾರೋ ಕಳ್ಳರು ರಾತ್ರಿ 12 ಗಂಟೆಯಿಂದ 02.00 ಗಂಟೆಯ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಲ್ಲಯ್ಯ ತಂದೆ ಕಲ್ಲಯ್ಯ ಹೊಸಮಠ ಸಾ|| ಅಫಜಲಪೂರ ಇವರು ದಿನಾಂಕ 20-02-2017 ರಂದು ಸಂಜೆ ಮಾದಾಬಾಳ ತಾಂಡಾದಲ್ಲಿ ನನ್ನ ಗೆಳೆಯರಾದ ವಿನೋದ ತಂದೆ ಮೋತಿಚಂದ ರಾಠೊಡ ಸಾ|| ಮಾದಾಬಾಳ ಇವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮ ಇದ್ದರಿಂದ, ಸದರಿ ಕಾರ್ಯಕ್ರಮಕ್ಕೆ ನಾನು ಮತ್ತು ನಮ್ಮ ಸ್ನೇಹಿತರು ಆದ ಗುರುದೇವ ತಂದೆ ಶರಣಯ್ಯ ಹಿರೇಮಠ ಸಾ|| ಅಫಜಲಪೂರ ಇಬ್ಬರು ಕೂಡಿ ಅರ್ಜುನ ಬಂಕದ ಇವರ ಮೋಟರ ಸೈಕಲ ನಂ ಕೆಎ-32 ಎಸ್-5755 ನೇದ್ದರ ಮೇಲೆ ಅಫಜಲಪೂರದಿಂದ ಮಾದಾಬಾಳ ತಾಂಡಾಕ್ಕೆ ಹೊರಟಿರುತ್ತೇವೆ. ಮೋಟರ ಸೈಕಲ ನಾನೆ ನಡೆಸುತ್ತಿದ್ದೇನು. ರಾತ್ರಿ 7:45 ಗಂಟೆ ಸುಮಾರಿಗೆ ಮಾದಾಬಾಳ ತಾಂಡಾದ ಹತ್ತಿರ ಹೊಗುತ್ತಿದ್ದಂತೆ ಎದರುಗಡೆಯಿಂದ ಒಂದು ವಾಹನದ ಚಾಲಕನ ತನ್ನ ವಾಹನವನ್ನು ಲೈಟ ಹಾಕಿಕೊಂಡು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸುತ್ತಾ ಬಂದನವನೆ ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿ ಹೊಡೆದನು. ಆಗ ನಾವು ಕೆಳಗೆ ಬಿದ್ದೇವು. ಡಿಕ್ಕಿಯಿಂದ ನನಗೆ ಎಡಗಾಲು ಮೋಳಕಾಲಿನ ಕೆಳಗೆ ಕಾಲು ಮುರಿದಿರುತ್ತದೆ. ಮತ್ತು ಸೊಂಟಕ್ಕೆ ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿ ಏಡ ಮೆಲಕಿಗೆ ತರಚಿದ ರಕ್ತಗಾಯವಾಗಿತ್ತು. ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದ ಗುರುದೇವ ಇವರಿಗೆ ಎರಡುಕಾಲುಗಳಿಗೆ ಹಾಗೂ ಮೈ ಕೈಗೆ ಬಾರಿ ಗುಪ್ತಗಾಯಗಳು ಹಾಗೂ ಅಲ್ಲಲ್ಲಿ ತರಚಿದ ಗಾಯಗಳು ಆಗಿರುತ್ತವೆ. ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದ ವಾಹನ ನೋಡಲಾಗಿ ಕ್ರೂಜರ ವಾಹನ ಇದ್ದು ಅದರ ನಂ ಕೆಎ-23 ಎನ್-0176 ಅಂತಾ ಇರುತ್ತದೆ. ಡಿಕ್ಕಿಯಾದ ತಕ್ಷಣ ಅದರ ಚಾಲಕ ಕ್ರೂಜರನ್ನು ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

26 February 2017

Kalaburagi District Reported Crimes

ಅತ್ಯಾಚಾರ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ರವರ ಊರಿನ ಶರಣಪ್ಪ ತಂದೆ ಚಂದ್ರಾಮ ಗುಬ್ಬಾ ಇತನು ನಾನು ನೀರಿಗೆ ಹೋಗುವಾಗ ಮತ್ತು ಹೊಲಕ್ಕೆ ಕೆಲಸಕ್ಕೆ ಹೋಗುವಾಗ ನನಗೆ ನೋಡಿ ಸಿಳ್ಳೆ ಹೊಡೆದು ಚುಡಾಯಿಸುವುದು ಮಾಡುತ್ತಾ ಬಂದಿರುತ್ತಾನೆ ಈ ವಿಷಯವನ್ನು ಮನೆಯಲ್ಲಿ ನನ್ನ ತಾಯಿ ಅನಸೂಬಾಯಿಗೆ ಮತ್ತು ಮಾವ ಇವರಿಗೆ ಹೇಳಿದ್ದೆನು. ಅವರು ಅವನ ಮನೆಗೆ ಹೋಗಿ ಬುದ್ದಿ ಮಾತು ಹೇಳಿದ್ದು ಇರುತ್ತದೆ ನಾವು ಮರ್ಯಾದೆಗೆ  ಅಂಜಿ ಸುಮ್ಮನಿದ್ದೆವು. ಈಗ ಸುಮಾರು 6 ತಿಂಗಳ ಹಿಂದೆ ಮೂದಬಾಳ (ಬಿ) ಗ್ರಾಮದ ಬಸವರಾಜ ತೆಳಗಿನಮನಿ ಇವನೊಂದಿಗೆ ನನ್ನ ಮದುವೆಯಾಗಿರುತ್ತದೆ ಮದುವೆಯಾದ ನಂತರ ನಾನು ಮೂದಬಾಳ (ಬಿ) ಗ್ರಾಮದಲ್ಲಿಯೇ ನನ್ನ ಗಂಡನ ಮನೆಯಲ್ಲಿ ವಾಸವಾಗಿದ್ದೆನು. ನನ್ನ ತವರು ಮನೆ ಮಾರಡಗಿ (ಎಸ್.ಎ) ಗ್ರಾಮದಲ್ಲಿ ದೇವಿ ಜಾತ್ರೆ ಇದ್ದುದ್ದರಿಂದ ನಾನು ದಿ. 15.02.17 ರಂದು ಮುಂಜಾನೆ ಮಾರಡಗಿ (ಎಸ್.ಎ) ಗ್ರಾಮಕ್ಕೆ ಬಂದು ನನ್ನ ತಾಯಿ ಹತ್ತಿರ ಇದ್ದೆನು. ದಿ. 16.02.2017 ರಂದು ರಾತ್ರಿ ನಾನು ಮನೆಯಿಂದ ಬೈಲ ಕಡೆಗೆ ( ಬರ್ಹಿದೇಶಕ್ಕೆ) ಹೋಗಿ ಮರಳಿ ಮನೆಗೆ ಬರುವಾಗ  ರಾತ್ರಿ 8.00 ಗಂಟೆ ಸುಮಾರಿಗೆ ಶರಣಪ್ಪ ಗುಬ್ಬಾ ಇತನು ಬಂದು ನನಗೆ ತಡೆದು ನಿಲ್ಲಿಸಿ ಏ ಬಾರೆ ಎಂದು ನನ್ನ ಕೈ ಹಿಡಿದು ಜಗ್ಗಾಡ ಹತ್ತಿದನು. ನಾನು ಅವನಿಗೆ ನನಗೆ ಯಾಕೆ? ಈ ರೀತಿ ಮಾಡುತ್ತಿದ್ದಿ ಎಂದು ಕೇಳಿದಾಗ ನೀನ್ನ ಮೇಲೆ ನನ್ನ ಮನಸ್ಸು ಇದೆ ನನ್ನ ಜೊತೆ ಮಲಗು ಬಾ ಎಂದು ಕರೆದನು. ಅದಕ್ಕೆ ನಾನು ಒಪ್ಪದೆ ಇದ್ದಾಗ ಅವನು ನನಗೆ ಜಬರದಸ್ತಿಯಿಂದ ಎಳೆದುಕೊಂಡು ಹೆಣ್ಣುಮಕ್ಕಳು ಬರ್ಹಿದೇಶಕ್ಕೆ ಹೊಗುವ ಸ್ಥಳದ ಜಾಲಿ ಕಂಟಿಯ ಮರೆಯಲ್ಲಿ ಒಯ್ದು ನನಗೆ ನೇಲಕ್ಕೆ ಕೆಡುವಿ ಜಬರದಸ್ತಿಯಿಂದ ಸಂಬೊಗ ಮಾಡಿರುತ್ತಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾನೆ. ನಾನು ಮರ್ಯಾದೆಗೆ  ಅಂಜಿ ಸುಮನಿದ್ದೆನು. ಮತ್ತು ದಿ. 17.02.2017 ರಂದು ಅವನು ನನ್ನ ಗಂಡನಿಗೆ ಪೊನ ಮಾಡಿ ನೀನ್ನ ಹೆಂಡತಿಗೆ ಎತ್ತಿಕೊಂಡು ಹೋಗುತ್ತೆನೆ ಎಂದು ಅವಾಚ್ಯ ಶಬ್ದಗಳಿಂದ ಬೈದ್ದಿರುತ್ತಾನೆ. ಅದಕ್ಕೆ ನನ್ನ ಗಂಡನು ಅವನಿಗೆ ನೀನು ಯಾರು ಎಂದು ಕೇಳಿದರೆ ಏ ಬೊಸಡಿ ಮಗನೆ ನಾನು ಯಾರಾದರು ಏನು ನೀನ್ನ ಹೆಂಡತಿಗೆ ಬಿಡುವುದಿಲ್ಲಾ ಎಂದು ಬೇದರಿಕೆ ಹಾಕಿರುತ್ತಾನೆ. ಈ ವಿಷಯವನ್ನು ಮನೆಯಲ್ಲಿ ನನ್ನ ಗಂಡ ಹೇಳಿದಾಗ, ಶರಣಪ್ಪನು ನನಗೆ ಜಬರದಸ್ತಿಯಿಂದ ಸಂಬೊಗ ಮಾಡಿದ ವಿಷಯ ತಿಳಿಸಿರುತ್ತೆನೆ. ದಿ. 18.02.2017 ರಂದು ಮುಂಜಾನೆ ನಾನು ಮತ್ತು ನನ್ನ ಗಂಡ, ಹಾಗೂ ನನ್ನ ತಾಯಿ, ಮಾಂವದಿರು ಎಲ್ಲರೂ ಕೂಡಿ ಶರಣಪ್ಪನ ಮನೆಗೆ ಕೇಳಲು ಹೋದಾಗ ಮನೆಯಲ್ಲಿ  ಶರಣಪ್ಪ ತಂದೆ ಚಂದ್ರಾಮ ಗುಬ್ಬಾ ಇದ್ದಿರಲಿಲ್ಲಾ, ಶರಣಪ್ಪನ ಮನೆಯವರಾದ 1) ಚಂದ್ರಾಮ ತಂದೆ ಬೀರಪ್ಪ ಗುಬ್ಬಾ 2) ಮರೆಮ್ಮ ಗಂಡ ಚಂದ್ರಾಮ ಗುಬ್ಬಾ 3) ಶಂಕರೇಪ್ಪ ತಂದೆ ಚಂದ್ರಾಮ ಗುಬ್ಬಾ 4) ನಿಂಗಣ್ಣಾ ತಂದೆ ಚಂದ್ರಾಮ ಗುಬ್ಬಾ ಇವರೆಲ್ಲರೂ ಕೂಡಿ ಶರಣಪ್ಪನ ಬಗ್ಗೆ ನಮಗೇನು ಗೊತ್ತಿಲ್ಲಾ ನೀವು ನಮ್ಮ ಮನೆಯತನಕ ಬಂದು ಕೇಳುತ್ತಿರಿ ನೀವು ಏನು ಬೇಕಾದರೂ ಮಾಡಿಕೊಳಿರಿ ಬೊಸಡಿ ಮಕ್ಕಳೆ ಎಂದು ಬೈಯ್ದು ನಮಗೆ ಬೇದರಿಕೆ ಹಾಕಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಕಿರುಕಳ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 20-02-2017 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಶ್ರೀಮತಿ  ರೇಣುಕಾ ತಂದೆ ಈಶ್ವರ ಕಾಟನೂರ ಸಾ: ಬಸವಪಟ್ಟಣ್ಣ ಹಾ: ವ: ಬಿದನೂರ ತಾ; ಅಫಜಲಪೂರ ಇವರಿಗೆ  ಈಶ್ವರ ತಂದೆ ಶರಣಪ್ಪಾ ಕಾಟನೂರ ಇನ್ನೂ 7 ಜನರು ಸಾ: ಎಲ್ಲರೂ ಬಸವಪಟ್ಟಣ್ಣ ಇವರು ಕುಡಿಕೊಂಡು ಜಗಳತೆಗೆದು  ಈ ಮೊದಲಿನಂತೆ ನಿನಗೆ ಅಡುಗೆ ಮಾಡಲು ಬರಲ್ಲಾ ಹೊಲದ ಕೆಲಸ ಬರುವುದಿಲ್ಲಾ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತಾ ಅವ್ಯಾಚ್ಚವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದೆ ಠಾಣೆಯಲ್ಲಿ ಪ್ರಕರಣ ದಾಖಾಲಗಿದೆ. 

25 February 2017

Kalaburagi District Reported Crimes

ವಕ್ಪ ಬೋರ್ಡ ಸಂಸ್ಥೆಯ ಆಸ್ತಿ ಕಬಳಿಕೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಖಜಾತ (ಸುನ್ನಿ) ಅಫಜಲಪೂರ, ತಾಲೂಕ ಅಫಜಲಪೂರವು ಅಧಿಸೂಚಿತ ವಕ್ಪ ಸಂಸ್ಥೆಯಾಗಿದ್ದು, ಅಫಜಲಪೂರದ ಗೆಜೆಟ್ ಕ್ರಮ ಸಂಖ್ಯೆ:21 ರಲ್ಲಿ ನಮೂದಾಗಿರುತ್ತದೆ. ಹಾಗೂ ಈ ವಕ್ಪ ಸಂಸ್ಥೆಗೆಗಿರುವ ಜಮೀನಿನಲ್ಲಿ ಅನದಿಕೃತವಾಗಿ ಮರು ಒತ್ತುವರಿ ಮಾಡಿಕೊಂಡಿರುವವರ ಮೇಲೆ ವಕ್ಪ ಕಾಯ್ದೆ 1995 ಅಧಿನಿಯಮ 52ಎ ಹಾಗೂ ತಿದ್ದುಪಡಿ ಕಾಯ್ದೆ 2013 ರನ್ವಯ ಎಫ್..ಆರ್ ದಾಖಲಿಸಿ ಕಾನೂನು ಕ್ರಮ ಜರೂಗಿಸುವಂತೆ ಮಾನ್ಯ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿಗಳು, ಕರ್ನಾಟಕ ರಾಜ್ಯ ವಕ್ಪ ಮಂಡಳಿ ಬೆಂಗಳೂರ ರವರು ರಾಜಶೇಖರ ಸಂಗಡ 5 ಜನರು ಸಾ : ಎಲ್ಲರು ಬೊಳ್ಳುರಗಿ ರವರು ಸರ್ವೆ ನಂಬರ  217, 427/2, 120,  15,  677/2/3 ರಲ್ಲಿ ಕಬ್ಜೆ ಇರುವುದಾಗಿ ಹೇಳುತ್ತಿದ್ದು. ಆದರೆ ಸದರಿಯವರು ಈ ಆಸ್ತಿಗಳ ಮೇಲೆ ಯಾವುದೆ ರೀತಿಯ ಕಾನೂನು  ಬದ್ದ ಅಧಿಕಾರ ಹೊಂದಿರುವುದಿಲ್ಲ. ಸದರಿ ಆಸ್ತಿಯು ವಕ್ಪ ಬೋರ್ಡಿಗೆ ಸಂಭಂದಿಸಿದ್ದು ಇರುತ್ತದೆ. ಈ ಆಸ್ತಿಗೆ ಸಂಭಂದಿಸಿದಂತೆ ತಹಸಿಲ್ದಾರ ಅಫಜಲಪೂರ ರವರು ದಿನಾಂಕ 06-05-2014 ರಂದು ಪಂಚನಾಮೆ ಮಾಡಿ ಈಗಾಗಲೆ ಸದರಿಯವರನ್ನು ಕಬ್ಜೆಯಿಂದ ತೆರವುಗೊಳಿಸಿರುತ್ತಾರೆ. ಆದರೆ ಆರೋಪಿತರು ಮರು ಒತ್ತುವರಿ ಮಾಡಿ ವಕ್ಪ ಕಾಯ್ದೆ 1995 ಅಧಿನಿಯಮ 52 ಎ ಹಾಗೂ ತಿದ್ದುಪಡಿ ಕಾಯ್ದೆ 2013 ರನ್ವಯ ಅಫರಾದ ಮಾಡಿರುತ್ತಾರೆಈ ವಿಷಯವನ್ನು ಗಂಬಿರವಾಗಿ ಪರಿಗಣಿಸಿ ಅನದಿಕೃತ ಮರು ಒತ್ತುವರಿದಾರರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಶ್ರೀ ಗುಲಾಮ ಸಮದಾನಿ ಜಿಲ್ಲಾ ವಕ್ಪ ಅಧಿಕಾರಿ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ : 23.02.17 ರಂದು ಸಾಯಂಕಾಲ ಸಮಯದಲ್ಲಿ ನಾನು ಮತ್ತು ನನ್ನ ಗೆಳೆಯ ಗೋಲ್ಲಾಳಪ್ಪಗೌಡ ತಂದೆ ಶರಣಪ್ಪಗೌಡ ಪೊಲೀಸ್ ಪಾಟೀಲ ಇಬ್ಬರು ನನ್ನ ಮೊಟಾರ ಸೈಕಲದ ಮೇಲೆ ಮತ್ತು ನಮ್ಮೂರ ಕಡೆಗೆ ನಡೆದಿದ್ದೆವು. ಅಲ್ಲದೆ ನಮ್ಮೂರ ಸಂತೋಷ ತಂದೆ ಮಲ್ಲಪ್ಪ ತಳವಾರ ಮತ್ತು ಸೈಯದ ಹಬೀಬ ತಂದೆ ಅಹೇಮದ ಸಾಬ ಜಮಾದಾರ. ಇವರು ಕೂಡಾ ತಮ್ಮ ಮೊಟಾರ ಸೈಕಲ ಮೇಲೆ ನಮ್ಮೂರ ಕಡೆಗೆ ನಡೆದಿದ್ದರು. ಸಾಯಾಂಕಾಲ 5.30 ಗಂಟೆ ಸುಮಾರಿಗೆ ನಾವು ಅವರಾದ ಕ್ರಾಸ ಹತ್ತಿರ ಹೋಗುತ್ತಿರುವಾಗ ಅವರಾದ ಕ್ರಾಸ ಹತ್ತಿರ ನಮ್ಮ ಮಾವ ತುಳಜಾರಾಮ ತಂದೆ ಶಂಕರ ರಾಠೋಡ ಇತನು ಕೂಡಾ ತನ್ನ ಮೊಟಾರ ಸೈಕಲ ನಂ ಕೆಎ-32-ಇಜಿ-5146 ನೇದ್ದರ ಮೇಲೆ ಕುಳಿತಕೊಂಡು ಊರ ಕಡೆಗೆ ನಡೆದಿದ್ದನು. ಅದೆ ವೇಳೆಗೆ ಎದುರಿನಿಂದ ಅಂದರೆ ಶಹಾಪೂರ ಕಡೆಯಿಂದ ಒಬ್ಬ ಟ್ಯಾಂಕರ ಚಾಲಕನು ತನ್ನ ಟ್ಯಾಂಕರ್ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮುಂದೆ ರೋಡಿನ ಸೈಡಿನಿಂದ ನಿದಾನವಾಗಿ ಹೋಗುತ್ತಿದ್ದ ನಮ್ಮ ಮಾವನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಚಾಲಕನು ತನ್ನ ಟ್ಯಾಂಕರ್ ಅನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದನು. ನಾವು ನಮ್ಮ ಮೊಟಾರ ಸೈಕಲಗಳನ್ನು ನಿಲ್ಲಿಸಿ ಓಡಿ ಹೋಗಿ ನೋಡಲು ನಮ್ಮ ಮಾವನ ಬಲಬಾಗದ ಮೇಲಕಿನ ಹತ್ತಿರ, ತಲೆಗೆ, ಹಣೆಗೆ, ಬಾಯಿಗೆ ಹಾಗೂ ಎಡಗೈ ಅಂಗೈಗೆ ಭಾರಿ ರಕ್ತಗಾಯವಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನಂತರ ಟ್ಯಾಂಕರ್ ನಂ ನೋಡಲಾಗಿ ಕೆ.ಎ03-ಎಎ-1194 ನೇದ್ದು ಇತ್ತು. ಅದರ ಚಾಲಕನಿಗೆ ಹೆಸರು ಕೇಳಲಾಗಿ ಅನೀಲ ತಂದೆ ಮಚೇಂದ್ರ ಕಾರಂಜೆ ಸಾ|| ಕೂಡ್ಲಿ ಎಂದು ಹೇಳಿ ಸ್ಥಳದಲ್ಲಿ ಜನರು ಸೇರುವುದನ್ನು ನೋಡಿ ಅವನು ಟ್ಯಾಂಕರ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 23-02-2017 ರಂದು ಶ್ರೀ ಚಂದ್ರಶೇಖರ ತಂದೆ ದಾಸಪ್ಪಾ ರಾಗಿ ಸಾ: ಓಕಳಿ ಕ್ಯಾಂಪ ಸೇಡಂ ರೋಡ ಕಲಬುರಗಿ ರವರಿಗೆ ಪೋನ ಮೂಲಕ  ಯಾರೋ ನನ್ನ ಮಗ ಅವಿನಾಶನ ಕಾರು ಹಡಗಿಲ ಹಾರುತಿ ಕ್ರಾಸ ಹತ್ತಿರ ಇರುವ ಕೆಇ ಬಿ ಮುಂದಿನ ರೋಡ ಮೇಲೆ ಕಾರ ನ ಕೆಎ 32 ಎನ್ 3685 ನೇದ್ದು ಪಲ್ಟಿಯಾಗಿದ್ದು ಅವನಿಗೆ ಯುನೇಟೆಡ್ ಆಸ್ಪತ್ರೆಗೆ ತೆಗೆದು ಕೊಂಡು ಬರುತ್ತಿದ್ದೇವೆ ಅಂತಾ ಹೇಳಿದ್ದರಿಂದ ಆಸ್ಪತ್ರೆಗೆ ಬಂದು ನೋಡಲಾಗಿ ಅವಿನಾ ಶನಿಗೆ ಬಲಹಣೆಗೆ ಎರಡು ಕೈಗಳಿಗೆ ತರಚಿದ ಗಾಯವಾಗಿದ್ದು ಬಲ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಕಾರು ಅತಿವೇಗವಾಗಿ ಅಲಕ್ಷತನದಿಂದ  ಚಲಾಯಿಸಿ ದ್ದರಿಂದ ಕಾರಿನ ಮುಂದಿನ ಎಕ್ಸ್ಲ್ ಕಟ್ ಆಗಿಪಲ್ಟಿಯಾಗಿದ್ದು ಘಟನೆಯು ಮದ್ಯಾಹ್ನ 2:45 ಗಂಟೆಯ ಸುಮಾರಿಗೆ ಜರುಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

22 February 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-02-2017 ರಂದು  ಮಣೂರ ಗ್ರಾಮದ ಭೀಮಾನದಿಯಲ್ಲಿರುವ ಯಲ್ಲಮ್ಮಾ ದೇವಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀ ಚಂದ್ರಕಾಂತ ಹೆಚ್ ಸಿ-449  ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮಣೂರ ಗ್ರಾಮದ ಭೀಮಾನದಿಯಲ್ಲಿರುವ ಯಲ್ಲಮ್ಮಾ ದೇವಿ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಯಲ್ಲಮ್ಮಾ ದೇವಿ ಗುಡಿಯ ಹತ್ತಿರ ಆವರಣದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ ವಂಚಿಸಿ ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು  ದಾಳಿ ಮಾಡಿ . ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ಲಕ್ಷ್ಮಣ ತಂದೆ ಖಾಜಪ್ಪ ಮಾಂಗ 2) ಬಸವರಾಜ ತಂದೆ ಲಕ್ಷ್ಮಣ ಸಿನ್ನೂರ  ಸಾ|| ಇಬ್ಬರು ಮಣೂರ ತಾ||ಆಫಜಲಪೂರ  ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋದನೆ ಮಾಡಲಾಗಿ ಲಕ್ಷ್ಮಣ ಮಾಂಗ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 520/- ರೂ ನಗದು ಹಣ, ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ, ಒಂದು ಪೇನ್ನ ದೋರೆತವು. ಬಸವರಾಜ ಸಿನ್ನೂರ  ಈತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 250/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಸದರಿಯವುಗಳನ್ನು  ವಶಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 21/02/2017 ರಂದು, ಗೌರ(ಕೆ) ಗ್ರಾಮದ ಶಂಕರ ಭಜಂತ್ರಿ ರವರ ಪಾನ ಶಾಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಸಿದ್ಧರಾಯ ಬೂಳ್ಳುರಗಿ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಗೌರ(ಕೆ) ಗ್ರಾಮಕ್ಕೆ ಹೋಗಿ ಶಂಕರ ಭಜಂತ್ರಿ ಪಾನಶಾಪದಿಂದ ಸ್ವಲ್ಪ ದೂರು ಮರೆಯಾಗಿ ನಿಂತು ನೋಡಲು ಶಂಕರ ಭಜಂತ್ರಿ ಪಾನಶಾಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಾನಂದ ತಂದೆ ಚಂದಪ್ಪ ಗೌರ(ಕೆ) ಸಾ||ಗೌರ(ಕೆ) ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 590/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ  ಜಪ್ತಿ :
ಅಫಜಲಪೂರ ಠಾಣೆ :  ದಿನಾಂಕ 21/02/2017 ರಂದು ಶಿವಪೂರ ಬನ್ನಟ್ಟಿ ಗ್ರಾಮದಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ  ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಶ್ರೀ ಸಿದ್ಧರಾಯ ಬೂಳ್ಳುರಗಿ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷಿ ಗುಡಿ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಟ್ರ್ಯಾಕ್ಟರ ಚಾಲಕನಿಗೆ ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು MAHINDRA ARJUN ಕಂಪನಿಯದಿದ್ದು ಸದರಿ ಟ್ರ್ಯಾಕ್ಟರನ ಟ್ಯೈಲಿಯಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ  KA 32 TA-6673 ಅಂತ ಇದ್ದು ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರದಲಿದ್ದ ಮರಳಿನ .ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ರಮೇಶ ತಂದೆ ಮಲ್ಲಣ್ಣ ದಿಬಲಿ ಸಾ|| ಕೊಡ್ಲಾ, ತಾ|| ಸೇಡಂ ರವರು ದಿನಾಂಕ: 18-02-17 ರಂದು ಬೆನಕನಳ್ಳಿ ಗ್ರಾಮದ ಹತ್ತಿರ ಇರುವ ಹೊಲಕ್ಕೆ ಹೋಗಿ ಮರಳಿ ಕೊಡ್ಲಾ ಗ್ರಾಮಕ್ಕೆ ಬರುವಾಗ ಶ್ರೀ ಸಿಮೆಂಟ್ ಕಂಪನಿ ಎದುರು ರಸ್ತೆಯ ಪಕ್ಕಕ್ಕೆ ನಿಂತುಕೊಂಡಿದ್ದಾಗ ಬೆನಕನಳ್ಳಿ ಗ್ರಾಮದ ಕಡೆಯಿಂದ ಒಬ್ಬ ಮೊಟಾರ ಸೈಕಲ ನಂ. ಕೆಎ 32 ಡಬ್ಲೂ 9122 ನೆದ್ದರ ಚಾಲಕನು ತನ್ನ ವಶದಲ್ಲಿದ್ದ ಮೊಟಾರ ಸೈಕಲನ್ನು ಅತಿ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಸಿಕೊಂಡು ಬಂದು ಅಪಘಾತ ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ