POLICE BHAVAN KALABURAGI

POLICE BHAVAN KALABURAGI

30 July 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ವಾಡಿ ಠಾಣೆ : ದಿನಾಂಕ :29/07/2019 ರಂದು ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಲಕ್ಷ್ಮೀಪೂರ ವಾಡಿ ಗ್ರಾಮದ ಹನುಮಾನ ದೇವರ ಗುಡಿಯ ಮುಂದಿನ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂ ಗೆಲ್ಲಿರಿ ಅಂತಾ ಕೂಗಾಡುತ್ತಾ ಜನರಿಗೆ ಮೋಸ ಮಾಡಿ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿಎಸ್.ಪಿ ಸಾಹೇಬರು ಶಹಾಬಾದ ಉಪ ವಿಭಾಗ ಹಾಗೂ ಮಾನ್ಯ ಸಿಪಿಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ  ಲಕ್ಷ್ಮೀಪೂರವಾಡಿ ಗ್ರಾಮದ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಕೆಳಗಡೆ ಇಳಿದು ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಸದರಿಯವನು ಮಟಕಾ ಅಂಕಿ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲಾಗಿ ಮಟಾಕಾ ನಂಬರ ಬರೆಸುತ್ತಿದ್ದವರು ನಮ್ಮ ಪೊಲೀಸ ಸಮವಸ್ತ್ರ ನೋಡಿ ಓಡಿ ಹೋಗಿದ್ದು  ಸಿಬ್ಬಂದಿಯವರ ಸಹಾಯದಿಂದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನನ್ನು ಹಿಡಿದು ಆತನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಆನಂದ ತಂದೆ ಭೀಮಯ್ಯಾ ಆಂದೇಲಿ ಸಾ:ಲಕ್ಷ್ಮೀಪೂರ ವಾಡಿ ಅಂತಾ ತಿಳಿಸಿದ್ದು ಆತನ ಅಂಗಶೋಧನೆ ಮಾಡಲಾಗಿ ಆತನ ಹತ್ತಿರ ನಗದು ಹಣ 1640/- ರೂಪಾಯಿ, ಎರಡು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಅವುಗಳು ಜಪ್ತು ಪಡಿಸಿಕೊಂಡು ಸದರಿಯವನೊಂದಿಗೆ ಷಾಡಿ ಠಾಣೆಗೆ ಬಂದು ಠಾಣೆಯ ಗುನ್ನೆ ನಂಬರ 85/2019 ಕಲಂ:78(3) ಕೆ.ಪಿ ಕಾಯ್ದೆ ಸಂಗಡ 420 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಗೃಹಿಣಿಗೆ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ರವರ ತಂದೆಯವರು ಈಗ 7-8 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ, ನನಗೆ ಮದುವೆ ಮಾಡಿ ಕೊಟ್ಟಿರುತ್ತಾರೆ, ನಾನು ಬಾಣೆತನಕ್ಕೆ ನನ್ನ ತವರು ಮನೆಗೆ ಬಂದು ನಮ್ಮ ತಾಯಿಯೊಂದಿಗೆ ವಾಸವಾಗಿರುತ್ತೇನೆ, ನನಗೆ ಈಗ ಎರಡು ತಿಂಗಳ ಹಿಂದೆ ಬಾಣೆತನವಾಗಿ ಒಂದು ಗಂಡು ಮಗು ಜನಿಸಿರುತ್ತದೆ. ನಮ್ಮ ಮನೆಯಲ್ಲಿ ನಾನು ನನ್ನ ತಾಯಿ ಹಾಗು ನನ್ನ ಅಣ್ಣ, ತಮ್ಮ ಇದ್ದಿರುತ್ತೇವೆ, ನನ್ನ ಮದುವೆಯ ಮುಂಚೆ ನಮ್ಮ ಅಣ್ಣತಮ್ಮಕಿಯ ಮಹಾಂತೇಶ ತಂದೆ ದೊಡ್ಡಪ್ಪ ತಳವಾರ ರವರು ನನಗೆ ಚುಡಾಯಿಸುತ್ತಾ ನನಗೆ ಹಿಂಬಾಲಿಸುತ್ತಾ ನಾನು ನಿನಗ ಮದುವೆಯಾಗುತ್ತೇನೆ ಅಂತಾ ಹೇಳುತ್ತಾ ನನಗೆ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ಬಗ್ಗೆ ನಾನು ನಮ್ಮ ತಾಯಿಗೆ ಮತ್ತು ನಮ್ಮ ಚಿಕ್ಕಪ್ಪ ರವರಿಗೆ ತಿಳಿಸಿರುತ್ತೇನೆ, ಆಗ ನಮ್ಮ ತಾಯಿ ಮತ್ತು ನಮ್ಮ ಚಿಕ್ಕಪ್ಪ ರವರು ಕೂಡಿ ಮಹಾಂತೇಶನಿಗೆ ತಿಳವಳಿಕೆ ಹೇಳಿರುತ್ತಾರೆ, ಈಗ ಕೆಲವು ದಿನಗಳಿಂದ ನಾನು ಬೈಹಿರದೇಸೆಗೆ ಹೋದಾಗಲೆಲ್ಲಾ ಮಹಾಂತೇಶ ಇವನು ನನಗೆ ಹಿಂಬಾಲಿಸುತ್ತಾ ಬಂದು ನೀನು ನಿನ್ನ ಗಂಡನಿಗೆ ಬಿಟ್ಟು ನನ್ನೊಂದಿಗೆ ಬಾ ಅಂತಾ ಅನ್ನುತ್ತಾ ನನ್ನ ಕೈಹಿಡಿದು ಎಳೆದಾಡುತ್ತಿದ್ದನು, ಆಗ ನಾನು ಅವನಿಂದ ತಪ್ಪಿಸಿಕೋಂಡು ಓಡಿ ಮನೆಗೆ ಹೋಗುತ್ತಿದ್ದೇ, ಎಲ್ಲಾ ವಿಚಾರ ನಾನು ನನ್ನ ಮರಿಯಾದಿಗೆ ಅಂಜಿ ಯಾರ ಮುಂದೆಯು  ಹೇಳಿರುವದಿಲ್ಲಾ.  ನಂತರ ದಿನಾಂಕ 07-07-2019 ರಂದು ರಾತ್ರಿ 8;00 ಗಂಟೆ ಸುಮಾರಿಗೆ ನಾನೊಬ್ಬಳೆ ಬೈಹಿರದೇಸೆಗೆ ಹೋಗುತ್ತಿದ್ದಾಗ  ಮಹಾಂತೇಶ ಇವನು ಯಾರು ಇರದ ಸಮಯ ನೋಡಿ ನನ್ನ ಹಿಂದೆ ಬಂದು ನನಗೆ ಏ ಸಿದ್ದಮ್ಮ ನಿಲ್ಲು ಅಂತಾ ಹೇಳಿ ಒಮ್ಮೇಲೆ ನನ್ನ ಬಾಯಿ ಒತ್ತಿ ಹಿಡಿದನು, ನಂತರ ಅಲ್ಲೆ ಮರಿಯಲ್ಲಿ ಎಳೆದುಕೋಂಡು ಹೋಗಿ ನನಗೆ ಚೀರಾಡಿದರೆ ಖಲಾಸೆ ಮಾಡುತ್ತೇನೆ ಅಂತಾ ಅಂದು ನನ್ನ ಬಾಯಿ ಒತ್ತಿ ಹಿಡಿದು ನನಗೆ ನೆಲದ ಮೇಲೆ ಕೆಡವಿ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಭೋಗ ಮಾಡಿದನು, ನಂತರ ಮಹಾಂತೇಶ ಇವನು ಈ ವಿಷಯ ಯಾರಿಗಾದರು ಹೇಳಿದರೆ ನಿನಗ ಜೀವ ಸಹಿತ ಬಿಡುವುದಿಲ್ಲಾ ರಂಡಿ ಅಂತಾ ಅಂದು ಅಲ್ಲಿಂದ ಹೋದನು, ನಂತರ ನಾನು ನನ್ನ ಮರಿಯಾದಿಗೆ ಅಂಜಿ ಸುಮ್ಮನಿದ್ದೆ. ನಿನ್ನೆ ದಿನಾಂಕ 28-07-2019 ರಂದು ಮಹಾಂತೇಶ ಇವನು ನನ್ನ ಗಂಡನ ಮೋಬೈಲಿಗೆ ಫೋನ ಮಾಡಿ ಅವಾಚ್ಯವಾಗಿ ಬೈದು ನಾನು ನಿನ್ನ ಹೆಂಡತಿಗೆ ಕೆಡಸಿನಿ ರಂಡಿ ಮಗನೆ ಏನ ಕಿತಗೋತಿ ಕಿತಗೊ ಅಂತಾ ಅವಾಚ್ಯವಾಗಿ ಬೈದಿರುತ್ತಾನೆ, ನಂತರ ಇಂದು ನಾನು ನಮ್ಮ ತಾಯಿ ಮತ್ತು ನಮ್ಮ ಚಿಕ್ಕಪ್ಪ ಮಹಾಂತೇಶ ಇವನು ನನಗೆ ಲೈಂಗಿಕ ಸಂಭೋಗ ಮಾಡಿದ ಬಗ್ಗೆ ತಿಳಿಸಿ ನಮ್ಮ ತಾಯಿ ಮತ್ತು ನಮ್ಮ ಚಿಕ್ಕಪ್ಪನೊಂದಿಗೆ ಠಾಣೆಗೆ ಬಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯ ಗುನ್ನೆ ನಂ: 82/2019 ಕಲಂ 376 341,504,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

25 July 2019

KALABURAGI DISTRICT REPORTED CRIMES

ಅಪಹರಣ ಮಾಡಿಕೊಂಡು ಹೋಗಿ ಅತ್ಯಾಚಾರವೆಸಗಿದ ಪ್ರಕರಣ :
ನರೋಣಾ ಠಾಣೆ : ದಿನಾಂಕ:17/07/2019 ರಂದು ಮಧ್ಯಾಹ್ನ 1-00 ಗಂಟೆಗೆ ಶಾಲೆಯಿಂದ ಮನೆಗೆ ಬಂದು ಮನೆಯಲ್ಲಿ ಊಟಮಾಡಿಕೊಂಡು ವಾಪಸ್ಸು 2-00 ಪಿ.ಎಂ ಗಂಟೆಗೆ ಶಾಲೆಗೆ ಹೋಗುವುದಾಗಿ ಹೇಳಿ ಹೋಗಿರುತ್ತಾಳೆ. ಸಾಯಂಕಾಲ 5-00 ಗಂಟೆಗೆ ಶಾಲೆಯಿಂದ ವಾಪಸ್ಸು ಮನೆಗೆ ಬರಬೇಕಾಗಿದ್ದು, ಸದರಿಯವಳು ಮನೆಗೆ ಬಂದಿರುವುದಿಲ್ಲ. ಮನೆಗೆ ಬರದೆ ಇದ್ದುದ್ದರಿಂದ ನಾನು ಮತ್ತು ನನ್ನ ಹೆಂಡತಿ ನನ್ನ ಮಗ ಎಲ್ಲರೂ ಸೇರಿ ನಮ್ಮೂರು ಪ್ರೌಢ ಶಾಲೆಯ ಹತ್ತಿರ ಹೋಗಿ ಶಾಲಾ ಮುಖ್ಯಾಉಪಾಧ್ಯಯರಿಗೆ ಹಾಗೂ ಶಿಕ್ಷಕರಿಗೆ ವಿಚಾರಿಸಿದಾಗ ಮಧ್ಯಾಹ್ನದ ಶಾಲೆಗೆ ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ನಾವೆಲ್ಲರೂ ಗಾಭರಿಯಾಗಿ ಊರ ತುಂಬ ಹುಡುಕಾಡುವಾಗ ನಮ್ಮ ಅಣತಮಕಿಯವರಾದ ತಾನು ಚಿಂಚನಸೂರ ದಿಂದ ಊರಿಗೆ ಬರುವಾಗ ಮಧ್ಯಾಹ್ನ 2-30 ಗಂಟೆ ಸುಮರಿಗೆ ಸಂಗೋಳಗಿ(ಸಿ) ಕ್ರಾಸ್ ಹತ್ತಿರ ಇದ್ದಾಗ ನಮ್ಮೂರಿನ ಸಚಿನ ತಂದೆ ಮರೇಪ್ಪಾ ಮದನಕರ ಇತನು ತನ್ನ ಮೊಟಾರ್ ಸೈಕಲ್ ಮೇಲೆ ನಿಮ್ಮ ಮಗಳಿಗೆ ಕೂಡಿಸಿಕೊಂಡು ನರೋಣಾ ಗ್ರಾಮದ ಕಡೆಗೆ ಹೋಗಿರುತ್ತಾನೆ ಅಂತಾ ತಿಳಿಸಿದ್ದು ನಾವು ಸಚಿನನ ಮನೆಗೆ ಹೋಗಿ ಸಚಿನನ ಆಯಿಯಾದ ಮಲ್ಲಮ್ಮ ಗಂಡ ಹುಸನಪ್ಪಾ ಮದನಕರ, ಸಚಿನನ ತಾಯಿಯಾದ ಗಂಗಮ್ಮ ಗಂಡ ಮರೇಪ್ಪಾ ಮದನಕರ, ಸಚಿನನ ಸೋದರಮಾವನ ಹೆಂಡತಿಯಾದ ಸುಜಾತಾ ಗಂಡ ಸಂಜುಕುಮಾರ ಮದನಕರ ಇವರಿಗೆ ವಿಚಾರಿಸಿದಾಗ ಅವರೆಲ್ಲರೂ ಸೇರಿ ಇದರ ಬಗ್ಗೆ ನಮಗೆ ಏನು ಗೊತ್ತಿಲ್ಲಾ ಅಂತಾ ತಿಳಿಸಿರುತ್ತಾರೆ. ಅವರೂ ಕೂಡ ಆತನ ಮೊಬೈಲಗೆ ಕರೆಮಾಡಿ ವಿಚಾರಿಸಲು ಪ್ರಯತ್ನಿಸಿದ್ದು ಆತನು ತನ್ನ ಮೊಬೈಲ್ ಬಂದ ಇಟ್ಟಿರುತ್ತಾನೆ. ನಾವು ಕೂಡ ಆತನ ಮೊಬೈಲ್ ನಂಬರ್ ಪಡೆದುಕೊಂಡು ಆತನಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದು. ಸದರಿಯವನು ಫೋನ್ ಬಂದ ಮಾಡಿ ಇಟ್ಟಿರುತ್ತಾನೆ.  ಸಚಿನನ ಸ್ವಂತೂರು ಚಿಂಚನಸೂರ ಗ್ರಾಮ ಇದ್ದು, ಕಳೆದ ಒಂದು ತಿಂಗಳಿಂದ ಸಚಿನ ಹಾಗೂ ಆತನ ಕುಟುಂಬದವರು ನಮ್ಮೂರಿನಲ್ಲಿ ಬಂದು ವಾಸವಾಗಿರುತ್ತಾರೆ. ಸಚಿನನು ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಕುಮಾರಿ  ಇವಳಿಗೆ ಯಾವುದೋ ದುರುದ್ದೇಶದಿಂದ ದಿನಾಂಕ:17/07/2019 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ತನ್ನ ಮೊಟಾರ್ ಸೈಕಲ್ ನಂ ಕೆಎ32 ಇಬಿ 4474  ನೇದ್ದರ ಮೇಲೆ ಅಪಹರಣ ಮಾಡಿಕೊಂಡು ಹೋದ ಬಗ್ಗೆ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ನಂತರ ಸದರಿ ಪ್ರಕರಣದ ತನಿಕೆ ಮುಂದುವರೆಯಿಸಿ ಅಪಹರಣವಾದ ಕುಮಾರಿ ಇವರು ದಿನಾಂಕ ;24/07/2019 ರಂದು ಠಾಣೆಗೆ ಹಾಜರಾಗಿದ್ದು ಸದರಿಯವಳಿಗೆ ವಿಚಾರಿಸಲಾಗಿ ತನಗೆ ಒತ್ತಾಯ ಪೂರ್ವಕವಾಗಿ ಅಪಹರಣ ಮಾಡಿಕೊಂಡು ಹೋಗಿ ಜಭರಿ ಸಂಭೋಗ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಧರ್ಮರಾಜ ತಂದೆ ಭೀಮಶೆಟ್ಟಿ ಗೌನಳ್ಳಿ ಸಾ|| ಐನೋಳ್ಳಿ ಗ್ರಾಮ ತಾ|| ಚಿಂಚೋಳಿ ರವರು ಹೆಣ್ಣು ಮಗಳ ಮದುವೆಗೆಂದು 1,50,000 /- ರೂ. ಗಳನ್ನೂ ನನ್ನ ಮನೆಯಲ್ಲಿರುವ ಅಲ್ಮಾರಿಯಲ್ಲಿ ಜೋಪಾನವಾಗಿಇಟ್ಟಿದ್ದೆನು. ನನಗೆ, ಆರಾಮ ವಿರದ ಕಾರಣ ದಿನಾಂಕ 27.06.2019 ರಂದುನಾನು, ಬೆಂಗಳೂರಿಗೆ ಹೋಗಿದ್ದೆನು. ನಾನು, ಊರಲ್ಲಿ ಇರದ ಸಮಯನೋಡಿಕೊಂಡು ದಿನಾಂಕ 16.07.2019 ರಂದು ರಾತ್ರಿ 00.20 .ಎಂ.ಕ್ಕೆ ನನ್ನ ಮಗನಾದ ಉದಯಕುಮಾರವ ಈತನು ಬೀದರನಿಂದ ಐನೋಳ್ಳಿ ಗ್ರಾಮದಲ್ಲಿರುವ ನಮ್ಮ ಮನೆಗೆ ಬಂದು,ಮೇಲ್ ಅಂತಸ್ತಿನ ಕೋಣೆಯ ಬಾಗಿಲಿಗೆ ಹಾಕಿದ ಕೀಲಿಯನ್ನೂ ಮುರಿದು, ಒಳಗೆಹೋಗಿ, ಅಲ್ಮಾರಿಯನ್ನು ಮುರಿದು, ನನ್ನಮಗಳಮದುವೆಗೆಂದುಜೋಪಾನವಾಗಿಟ್ಟಿರುವ ಒಟ್ಟು 1,50,000 ರೂ. ಗಳನ್ನು ಕಳವುಮಾಡಿಕೊಂಡು ಹೋಗಿರುತ್ತಾನೆ. ಅವನು ಕಳುವುಮಾಡಿಕೊಂಡು ಹೋಗುವುದನ್ನು ನನ್ನ ಹೆಂಡತಿಯಾದ ಶ್ರೀಮತಿ ಪಾರ್ವತಿ ಇವರು ನೋಡಿರುತ್ತಾರೆ .ಅದೇ ರಾತ್ರಿ ಫೋನ ಮಾಡಿ ನನ್ನ ಹೆಂಡತಿಯು ವಿಷಯವನ್ನು ತಿಳಿಸಿದಳು. ಮರುದಿವಸ ದಿನಾಂಕ 18.07.2019 ರ ಬೆಳಿಗ್ಗೆ ಬೆಂಗಳೂರಿನಿಂದ ಐನೊಳ್ಳಿ ಗ್ರಾಮದಲ್ಲಿರುವ ನಮ್ಮ ಮನೆಗೆ ಬಂದು ನೋಡಲು, ನನ್ನಮಗನು, ನನ್ನ ಮನೆಯ ಬಾಗಿಲುಕೀಲಿಯನ್ನು ಮುರಿದು, ಒಳಗೆ ಹೋಗಿ ಅಲ್ಮಾರಿ ಮುರಿದು, ಅದರಲ್ಲಿದ್ದ ಒಟ್ಟು 1,50,000 /- ರೂ. ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯ ಗುನ್ನೆ ನಂಬರ 84/2019 ಕಲಂ 457, 380 .ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ,

24 July 2019

KALABURAGI DISTRICT REPORTED CRIMES

ಆಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದು ಮಾರುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 23-07-2019 ರಂದು ಬೆಳಿಗ್ಗೆ ಗೌರ(ಕೆ) ಸೀಮಾಂತರದ ಪ್ರಭು ತಂದೆ ಚಂದಪ್ಪ ಜಮಾದಾರ ಸಾ|| ಗೌರ (ಕೆ) ಇವರ ಹೊಲದಲ್ಲಿ ಅನದಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿ, ಗಾಂಜಾ ಮಾರಾಟ ಮಾಡುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ತಾಲೂಕಾ ಆರೋಗ್ಯಾಧಿಕಾರಿಗಳು ಪತ್ರಾಂಕಿತ ಅಧಿಕಾರಿಯವರಾದ ಡಾ|| ಸಂಗಮೇಶ ಟಕ್ಕಳಕಿ ವೈದ್ಯಾಧಿಕಾರಿಗಳು ತಾಲೂಕು ಸರ್ಕಾರಿ ಆಸ್ಪತ್ರೆ ಅಫಜಲಪೂರ  ಮತ್ತು ವಿಡಿಯೋಗ್ರಾಫರ, ತೂಕ ಮಾಡುವ ಅನುಭವದವರನ್ನು ಕರೆದುಕೊಂಡು ನಮ್ಮ ಇಲಾಖಾ ಜೀಪ ನಂ ಕೆಎ-03 ಜಿ-1110 ನೇದ್ದರಲ್ಲಿ ನಾನು ಹಾಗೂ ಪತ್ರಾಂಕಿತ ಅಧಿಕಾರಿಗಳು ಮತ್ತು ಸರ್ಕಾರಿ ಪಂಚರು ಕೂಡಿ ಹಾಗೂ ಒಂದು ಖಾಸಗಿ ಕ್ರೂಜರ ವಾಹನದಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಜನರು ಮತ್ತು ಉಳಿದವರು ಕೂಡಿ ಹೊರಟು ಗೌರ (ಕೆ) ಗ್ರಾಮದ ಹತ್ತಿರ ಹೋಗಿ ಗ್ರಾಮದ ಬಾತ್ಮಿದಾರರಿಗೆ ಸದರಿ ಪ್ರಭು ಜಮಾದಾರ ಈತನ ಹೊಲದ ಬಗ್ಗೆ ಹಾಗೂ ಸದರಿಯವನ ಬಗ್ಗೆ ವಿಚಾರಿಸಿದಾಗ ಬಾತ್ಮಿದಾರನು ನಮ್ಮ ಜೊತೆಗೆ ಬಂದು ದೂರದಿಂದ ಪ್ರಭು ಜಮಾದಾರ ಈತನ ಹೊಲವನ್ನು ತೊರಿಸಿದ ಮೇರೆಗೆ, ಸದರಿ ಪ್ರಭು ಜಮಾದಾರ ಈತನ ಹೊಲದಲ್ಲಿ ಹೊಗುತ್ತಿದ್ದಾಗ, ಸದರಿ ಹೊಲದಿಂದ ಒಬ್ಬ ವ್ಯೆಕ್ತಿ ನಮ್ಮನ್ನು ನೋಡಿ ಓಡತೊಡಗಿದನು. ಆಗ ನಾವು ಬೆನ್ನಟ್ಟಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಪ್ರಭು ತಂದೆ ಚಂದಪ್ಪ ಜಮಾದಾರ ಸಾ|| ಗೌರ (ಕೆ) ಅಂತ ತಿಳಿಸಿದ್ದು, ಸದರಿಯವನಿಗೆ ಗಾಂಜಾ ಬೆಳೆದ ಬಗ್ಗೆ ಪುನ ಪುನ ವಿಚಾರಿಸಲು ಸದರಿಯವನು ಕಬ್ಬಿನ ಬೆಳೆ ಹತ್ತಿರ ಕರೆದುಕೊಂಡು ಹೋಗಿ ಕಬ್ಬಿನ ಬೆಳೆ ಪಕ್ಕದಲ್ಲಿ ಬೆಳೆದ ಗಾಂಜಾಗಿಡಗಳನ್ನು ತೊರಿಸಿದನು. ಸದರಿಯವನಿಗೆ ವಿಚಾರಿಸಿದಾಗ ಸದರಿ ಗಾಂಜ ಬೆಳೆದ ಹೊಲದ ಸರ್ವೆ ನಂಬರ 54 ಇದ್ದು ಗೌರ (ಕೆ) ಸೀಮಾಂತರದಲ್ಲಿ ಇರುತ್ತದೆ. ಸದರಿ ಹೊಲ ನಮ್ಮ ಅಜ್ಜನಾದ ನಿಂಗಪ್ಪ ತಂದೆ ಹಣಮಂತ ಜಮದಾರ ಸಾ|| ಗೌರ (ಕೆ) ಈತನ ಹೆಸರಿನಲ್ಲಿದ್ದು, ಇನ್ನು ನನ್ನ ಹೆಸರಿಗೆ ವಾಟ್ನಿ ಆಗಿರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನಿಗೆ ಗಾಂಜಾ ಬೆಳೆದ ಬಗ್ಗೆ ವಿಚಾರಿಸಲು ನಾನು ಸದರಿ ನನ್ನ ಹೊಲದಲ್ಲಿ ಸುಮಾರು ದಿನಗಳಿಂದ ಗಾಂಜಾ ಗಿಡಗಳನ್ನು ಬೆಳೆದು ಅದನ್ನು ನನ್ನ ಸ್ವಂತ ಲಾಬಕ್ಕಾಗಿ ಮಾಹಾರಾಷ್ಟ್ರದ ಬೇರೆ ಬೇರೆ ಕಡೆಗೆ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ನಂತರ ಸದರಿ ವ್ಯೆಕ್ತಿಯನ್ನು ವಶಕ್ಕೆ ಪಡೆದುಕೊಂಡು, ನಂತರ ಸದರಿ ಗಾಂಜಾ ಗಿಡಗಳನ್ನು ನಮ್ಮ ಜೊತೆಗೆ ಕರೆದುಕೊಂಡು ಬಂದಿದ್ದ ಸಂಜೀವಕುಮಾರ ತಂದೆ ಜಗದೇವಪ್ಪ ಹೊಸಮನಿ, ಖಾಜಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಬಾಡ ಇಬ್ಬರು ಸಾ|| ಅಫಜಲಪೂರ ಇವರಿಂದ ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಲು ಒಟ್ಟು 09 ಗಾಂಜಾ ಗಿಡಗಳಿದ್ದು ಅವುಗಳನ್ನು ಪ್ರತ್ಯಕವಾಗಿ ತೂಕ ಮಾಡಲು ಒಟ್ಟು 10.547 ಕೆಜಿ ತೂಕವಿದ್ದು, ಸದರಿ ಗಾಂಜಾ ಗಿಡಗಳು ಹೂವು ಮತ್ತು ಪಸಲು ಬರಿತವಾಗಿದ್ದವು. ನಂತರ ಸದರಿ ಗಾಂಜಾಗಿಡಗಳನ್ನು ಕಾಂಡ ಮತ್ತು ಎಲೆಗಳನ್ನು ಪ್ರತ್ಯಕವಾಗಿ ಮಾಡಿ ಹಾಜರಿದ್ದ ಪಂಚರ ಸಮಕ್ಷಮ ಮತ್ತು ಪತ್ರಾಂಕಿತ ಅಧಿಕಾರಿಗಳ ಸಮ್ಮುಖದ್ಲಲಿ ಆರೋಪಿತನಿಂದ ವಶಪಡಿಸಿಕೊಂಡಿದ್ದು, ಸದರಿ ಕಾಂಡ ಸಮೇತವಾದ ಹಸಿ ಗಾಂಜಾ ಗಿಡಗಳು ಅಂದಾಜು 10,000/- ರೂ ಕಿಮ್ಮತ್ತಿನವು ಇರಬಹುದು. ನಂತರ ಸದರಿ ಜಪ್ತ ಮಾಡಿಕೊಂಡ ಗಾಂಜ ಗಿಡಗಳಲ್ಲಿ ಎಲ್ಲಾ ಗಾಂಜಾಗಿಡಗಳಿಂದ ಸ್ವಲ್ಪ ಸ್ವಲ್ಪ ಎಲೆಗಳನ್ನು ಕಿತ್ತು ಅಂದಾಜು 100 ಗ್ರಾಮ ನಷ್ಟು ಹಸಿ ಗಾಂಜಾವನ್ನು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ, ದಾರದಿಂದ ಹೊಲೆದು ಪಂಚರ ಚೀಟಿ ಅಂಟಿಸಿ .ಎಪ್.ಜೆಡ್ ಎಂಬ ಇಂಗ್ಲೀಷ ಅಕ್ಷರ ಅರಗಿನಿಂದ ಶಿಲ್ ಮಾಡಿ ಜಪ್ತ ಮಾಡಿಕೊಳ್ಳಲಾಯಿತು, ಸದರಿ ಎಲ್ಲಾ ಜಪ್ತಿ ಪಂಚನಾಮೆಯನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತ ಮಾಡಿಕೊಂಡೆನು. ನಂತರ ಸದರಿ ಜಪ್ತ ಮಾಡಿಕೊಂಡ ಗಾಂಜಾವನ್ನು ಗಾಂಜಾ ಗಿಡಗಳನ್ನು ಬೆಳೆದ ಪ್ರಭು ತಂದೆ ಚಂದಪ್ಪ ಜಮಾದಾರ ಸಾ|| ಗೌರ (ಕೆ) ಈತನೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 131/2019 ಕಲಂ 20 (ಬಿ) ಎನ್.ಡಿ.ಪಿ.ಎಸ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ 23-07-19 ರಂದು ಶ್ರೀ ತಿಪ್ಪಣ್ಣ ತಂದೆ ಫಕೀರಪ್ಪ ಸೋಮಪೂರ ಸಾ|| ಮುರುಗೋಡ ತಾ|| ಸವದತ್ತಿ, ರವರು ಮತ್ತು ರಾಜಾಸಾಬ ನದಾಫ ಇಬ್ಬರು ಕೂಡಿ ರಾಜಾಸಾಬ ಈತನ ಲಾರಿ ನಂ ಕೆಎ22 ಸಿ9775 ನೇದ್ದರಲ್ಲಿ ಬೈಲಹೊಂಗಲ್ ದಿಂದ ಹೈದ್ರಾಬಾದಕ್ಕೆ ಮೆಣಸಿನಕಾಯಿ ಮತ್ತು ಕ್ಯಾಬೇಜಗಳ ಲೋಡ ಮಾಡಿದ್ದು, ಸದರಿ ಲಾರಿಯನ್ನು ರಾಜಾಸಾಬ ಇತನು ಚಲಾಯಿಸುತ್ತಿದ್ದು, ದಿನಾಂಕ: 24-07-19 ರಂದು 02-15 ಎ.ಎಮ್ ಸುಮಾರಿಗೆ ಸೇಡಂ ಪಟ್ಟಣದ ಚಿಂಚೋಳಿ ಕ್ರಾಸನ ತಿರುವಿನಲ್ಲಿ ರಾಜಾಸಾಬನು ತನ್ನ ಲಾರಿಯನ್ನು ಅತಿವೇಗದಿಂದ ಮತ್ತು ಅಲಕ್ಷತನ ದಿಂದ ನಡೆಯಿಸುತ್ತಾ ಬಂದು ಒಮ್ಮೇಲೆ ತಿರುವಿನಲ್ಲಿ ನಿಯಂತ್ರಣತಪ್ಪಿ ತನ್ನ ಲಾರಿಯನ್ನು ರೋಡಿನ ಎಡಗಡೆ ತೆಗ್ಗಿನಲ್ಲಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಲ್ಲಿ ರಾಜಸಾಬ ಇತನು ಭಾರಿಗಾಯಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಹಾಗು ನನಗೆ ಕಿವಿಗೆ ಹಾಗು ಇತರೆ ಕಡೆಗಳಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯ ಗುನ್ನೆ ನಂ.124/2019 ಕಲಂ 279, 337, 304(ಎ) ಐ.ಪಿ.ಸಿ ನೆದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸುಭಾಷ ತಂದೆ ಹಣಮಂತ್ರಾಯ ನಾಯ್ಕೊಡಿ ಸಾ: ಕಾಖಂಡಕಿ ಗ್ರಾಮ ರವರು ದಿನಾಂಕ 21-07-19 ರಂದು ಬೆಳಿಗ್ಗೆ ಶಾಹಬಾದದಿಂದ ದನಗಳನ್ನು ಖರೀದಿ ಮಾಡಿಕೊಳ್ಳಲು ಚೌದರಿ ಬಂದಿದ್ದು ಅವನನ್ನು ಚೌದರಿ ಅನ್ನುತ್ತಾ ಮಾತನಾಡುತ್ತಿದ್ದಾಗ ಅಲ್ಲೆ ಇದ್ದ  ನಮ್ಮೂರ ಪ್ರವೀಣ ತಂದೆ ಬಸಪ್ಪ ಪೂಜಾರಿ ಇವನು ವಿನಾಕಾರಣ ನೀವು ನನಗೆ ಚೌದರಿ ಅನ್ನುತ್ತಿದ್ದಿರಿ ಸೂಳಿ ಮಕ್ಕಳೆ ಅಂತಾ ಅಂದನು. ಆಗ ನಮ್ಮ ಅಣ್ಣನ ಮಗ ಮಲ್ಲಪ್ಪ ಇವನು ಅವನೊಂದಿಗೆ ತಕರಾರು ಮಾಡಿಕೊಂಡಿದ್ದನು. ಆಗ ನಾವೆಲ್ಲರೂ ಬಿಡಿಸಿ ಕಳುಯಿಸಿಕೊಟ್ಟಿರುತ್ತೆವೆ. ನಂತರ 8-30 ಪಿ ಎಂ ಸುಮಾರಿಗೆ ನಾನು ನನ್ನ ಹೆಂಡತಿ ಯಂಕಮ್ಮ ನನ್ನ ಮಕ್ಕಳಾದ ಸುರೇಶ, ಅಶೋಕ, ಗಂಗಮ್ಮ ರವರು ಕೂಡಿ ಮನೆಯ ಮುಂದೆ ಕುಳಿತಾಗ ನಮ್ಮೂರ 1) ಮಲ್ಲಿನಾಥ ತಂದೆ ಲಕ್ಷ್ಮಣ ಪಾಸೋಡಿ, 2) ಕೋತಲಪ್ಪ ತಂದೆ ಲಕ್ಷ್ಮಣ ಪಾಸೋಡಿ 3) ಶರಣಪ್ಪ ತಂದೆ ಲಕ್ಷ್ಮಣ ಪಾಸೋಡಿ 4) ಹಣಮಂತ್ರಾಯ ತಂದೆ ಲಕ್ಷ್ಮಣ ಪಾಸೋಡಿ 5) ಮಂಜುನಾಥ ತಂದೆ ಶರಣಪ್ಪ ಪಾಸೋಡಿ, 6) ಲಕ್ಷ್ಮಣ ತಂದೆ ಶರಣಪ್ಪ ಪಾಸೋಡಿ, 7) ಮಾಳಪ್ಪ ತಂದೆ ಕೋತಲಪ್ಪ ಪಾಸೋಡಿ 8) ರಾಜಪ್ಪ ತಂದೆ ಕೋತಲಪ್ಪ ಪಾಸೋಡಿ 9) ಜಗದೀಶ ತಂದೆ ಹಣಮಂತ್ರಾಯ ಪಾಸೋಡಿ, 10) ಸಿದ್ದಪ್ಪ ತಂದೆ ಈರಪ್ಪ ಹೊಸಮನಿ, 11) ಶರಣಪ್ಪ ತಂಧೆ ಶಿವಮಲ್ಲಪ್ಪ ಪೂಜಾರಿ 12) ಪ್ರವೀಣ ತಂದೆ ಬಸಪ್ಪ ಪೂಜಾರಿ 13) ಬಸಪ್ಪ ತಂದೆ ಚಂದ್ರಾಮಪ್ಪ ಪೂಜಾರಿ 14) ಮಲ್ಲಮ್ಮ ಗಂಡ ಕೋತಲಪ್ಪ ಪಾಸೋಡಿ, 15) ರೇಖಾ ತಂದೆ ಕೋತಲಪ್ಪ ಪಾಸೋಡಿ 16) ಮಲಕಮ್ಮ ಗಂಡ ವಿಶ್ವನಾಥ ಪಾಸೋಡಿ 17) ಗುರುಬಾಯಿ ಗಂಡ ಶರಣಪ್ಪ ಪಾಸೋಡಿ 18) ಈರಮ್ಮ ಗಂಡ ಮಲ್ಲಿನಾಥ ಪಾಸೋಡಿ 19) ಮಲ್ಲು ತಂದೆ ಜೇಟ್ಟೆಪ್ಪ ಬಿಳವಾರ 20) ಸಿದ್ದು ತಂದೆ ಜೆಟ್ಟೆಪ್ಪ ಬಿಳವಾರ 21) ಈರಪ್ಪ ತಂದೆ ಭೀಮರಾಯ ಹೊಸಮನಿ ಹಿಗೇಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು “ ಏ ಬ್ಯಾಡ್ ಸೂಳಿ ಮಕ್ಕಳ್ಯಾ ವಿನಾಕಾರಣ ನಮ್ಮ ಜಾತಿಯವರ ಜೋತೆಯಲ್ಲಿ ಜಗಳವಾಡುತ್ತಿದ್ದಿರಿ, ಇವತ್ತು ನಿಮಗ ಬಿಡುದಿಲ್ಲ ಬೋಸಡಿ ಮಕ್ಕಳ್ಯಾ” ಅಂತಾ ಅಂದು ಅವರಲ್ಲಿ ಮಲ್ಲಿನಾಥ ಮತ್ತು ಕೋತಲಪ್ಪ ಇವರು ಕೈಯಿಂದ ನನ್ನ ಮೈಕೈಗೆ ಹೋಡೆದರು. ಶರಣಪ್ಪ ಮತ್ತು ಹಣಮಂತ್ರಾಯ ಇವರು ನನ್ನ ಮಗ ಸುರೇಶನಿಗೆ ಕೈಯಿಂದ ಹೊಡೆ ಬಡೆ ಮಾಡಿ ಎಡ ಕೀವಿಯ ಹಿಂದೆ ಚುರಿರುತ್ತಾರೆ. ಮಂಜೂನಾಥ ತಂದೆ ಶರಣಪ್ಪ ಇವನು ನನ್ನ ಮಗ ಸುರೇಶನ ಎಡಗೈ ರಟ್ಟೆಗೆ ಹಲ್ಲಿನಿಂದ ಕಚ್ಚಿದ್ದರಿಂದ ಕಂದು ಗಟ್ಟಿದ ಗಾಯವಾಗಿರುತ್ತದೆ. ಆಗ ಅಲ್ಲಿಯೇ ಇದ್ದ ತಾಯಪ್ಪ ತಂದೆ ಬಾಲಪ್ಪ ಇವನು ಬಿಡಿಸಲು ಬಂದಿದ್ದು ಅವನಿಗೆ ಲಕ್ಷ್ಮಣ ತಂದೆ ಶರಣಪ್ಪ ಇವನು ಕಲ್ಲಿನಿಂದ ಹಣೆಯ ಮೇಲೆ ಹೋಡೆದು ರಕ್ತಗಾಯ ಪಡಿಸಿರುತ್ತಾನೆ. ಮಾಳಪ್ಪ ಮತ್ತು ರಾಜಪ್ಪ ಇವರು ತಾಯಪ್ಪನಿಗೆ ಕೈಯಿಂದ ಬೆನ್ನಿನ ಮೇಲೆ ಹೊಟ್ಟೆಗೆ ಹೋಡೆದಿರುತ್ತಾರೆ. ಆಗ ಜಗಳ ಬಿಡಿಸಲು ಬಂದ ಮಲ್ಲಪ್ಪ ತಂದೆ ಬಾಲಪ್ಪ ಇವನಿಗೆ ಜಗದೀಶ ಇವನು ಎಡಗೈ ನಡುವಿನ ಬೇರಲು ಕಚ್ಚಿರುತ್ತಾನೆ. ಸಿದ್ದಪ್ಪ ಮತ್ತು ಶರಣಪ್ಪ ಇವರು ಮಲ್ಲಪ್ಪನಿಗೆ ಕೈಯಿಂದ ಬೆನ್ನಿನ ಮೇಲೆ ಹೋಡೆ ಬಡೆ ಮಾಡಿರುತ್ತಾರೆ. ಪ್ರವೀಣ ಇವನು ನನ್ನ ಮಗಳು ಗಂಗಮ್ಮಳಿಗೆ ಕೈಯಿಂದ ಎಡಗಣ್ಣಿನ ಹತ್ತಿರ ಹೋಡೆದಿರುತ್ತಾನೆ. ನಂತರ ಇನ್ನುಳಿದವರು “ ಈ ಬ್ಯಾಡ ಸೂಳಿ ಮಕ್ಕಳಿಗೆ ಬಿಡಬ್ಯಾಡ್ರಿ ಹೊಡೆದು ಖಲಾಸ ಮಾಡಿರಿ” ಅಂತಾ ಅಂದು ಕೈಯಿಂದ ನಮಗೆ ಹೊಡೆ ಬಡೆ ಮಾಡುತ್ತಿದ್ದಾಗ ನಮ್ಮೂರ ಶಿವಪ್ಪಗೌಡ ತಂದೆ ಮಲ್ಲಪ್ಪಗೌಡ ಪೊಲೀಸ್ ಪಾಟೀಲ್ ಗುರುಬಾಯಿ ಗಂಡ ಶಿವಪ್ಪಗೌಡ ಪೊಲೀಸ್ ಪಾಟೀಲ್, ರೇಣುಕಾ ತಂದೆ ಶರಣಗೌಡ ಪೊಲೀಸ್ ಪಾಟೀಲ್ ಹಾಗು ನನ್ನ ಹೆಂಡತಿ ಯಂಕಮ್ಮ ಇವರುಗಳು ಬಂದು ಬಿಡಿಸಿಕೊಂಡಿರುತ್ತಾರೆ. ಇಲ್ಲದಿದ್ದರೆ ಇನ್ನು ಹೊಡೆ ಬಡೆ ಮಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯ  ಗುನ್ನೆ ನಂ 78/19 ಕಲಂ 143 147 148 323 324 354 504 506 ಸಂ 149 ಐಪಿಸಿ ಮತ್ತು 3 (1) (ಆರ್) (ಡಬ್ಲೂ) ಎಸ್ ಸಿ/ ಎಸ್ ಟಿ ಪಿ ಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.