POLICE BHAVAN KALABURAGI

POLICE BHAVAN KALABURAGI

26 May 2015

KALABURAGI DISTRICT REPORTED CRIMES.

ಕುಂಚಾವರಂ ಪೊಲೀಸ್ ಠಾಣೆ  : ದಿನಾಂಕ 26.05.2015 ರಂದು 10.30 ಗಂಟೆಗೆ ತಮ್ಮ ದೇಶದಂತೆ ಚುನಾವಣಾ ಮಾಹಿತಿ ಸಂಗ್ರಹಿಸುವ ಕುರಿತು ಠಾಣೆಯಿಂದ ಹೊರಟು ಕುಂಚಾವರಂ ಗ್ರಾಮದ ಹಣಮಂತ ದೇವರ ಗುಡಿಯ ಮುಂದೆ 11.30 ಗಂಟೆಗೆ ತಲುಪಿದಾಗ ಕಿಷ್ಟಪ್ಪ ತಂ/ ಪೆಂಟಪ್ಪ ಹಡಪದ /35, ಜಾ/ ಹಡಪದ, / ಹಜಾಮತಿ ಸಾ:  ಕುಂಚಾವರಂ , ಕುಂಚಾವರಂ ಗ್ರಾಮದಲ್ಲಿಯ ಹಣಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ತಳದಲ್ಲಿ ಸಾರ್ವಜನಿಕರಿಗರ ಭಯ ಹುಟ್ಟುವ ಹಾಗೆ ನನಗೆ ಎಲ್ಲಾ ರಾಜಕಿಯ ಜನರು ಮತ್ತು ಪಕ್ಷದವರು ಗೊತ್ತು ನನಗೆ ನೀವು ಪೊಲಿಸರು ಯಾರು ಏನು ಮಾಡುವದಿಲ್ಲ. ನಾನು ರಾನು ಎಲ್ಲಾ ರಾಜಕಿಯ ಜನರಿಗೆ ನೊಡ್ಡಿದ್ದೆನೆ. ನಿವು ಮುಂಬರುವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಾನು ಹೇಳಿದ ಪಕ್ಷಕಕ್ಕೆ ಮತ ಹಾಕಬೇಕು ಅಂತಾ ಇತ್ಯಾದಿ ಸಾರ್ವಜನಿಕವಾಗಿ ಕುಡಿದ ಅಮಲಿನಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ಹಾಗೆ ಒದರಾಡುತಿದ್ದಾನೆ ಅಂತಾ ನಮ್ಮ ಪೊಲೀಸ್ ಭಾತ್ಮಿದಾರರಿಂದ  ಮತ್ತು ತನಿಖೆಯಿಂದ ತಿಳಿದು ಬಂದಿದ್ದು ಪ್ರಯುಕ್ತ ಮುಂಬರುವ ಚುನಾವಣೆ ಸಮಯದಲ್ಲಿ ಸದರಿಯವನಿಂದ ಸಾರ್ವಜನಿಕ ಶಾಂತತಾ ಭಂಗವುಂಟಾಗಿ ಸಾರ್ವಜನಿಕ ಆಸ್ತಿ,ಪಾಸ್ತಿ , ಮಾನ ಪ್ರಾಣ ಹಾನಿಯಾಗುವ ಸಂಭವ ಉಂಟಾಗುವ ಸಾದ್ಯತೆ ಹೆಚ್ಚಾಗಿ ಕಂಡುಬಂದಿದ್ದು  ಪ್ರಯುಕ್ತ ದಿನಾಂಕ/ 26-05-2015 ರಂದು 13.30 ಗಂಟೆಗೆ ಮರಳಿ ಠಾಣೆಗೆ ಬಂದು ಸದರಿಯವನ ಮೇಲೆ ಮುಂಜಾಗ್ರತ ಕ್ರಮ ಜರುಗಿಸಬೇಕೆಂದು ಠಾಣೆಯ ದಿನಚರಿ ಕರ್ತವ್ಯದ ಮೇಲೆ ಇದ್ದ ಠಾಣಾಧೀಕಾರಿಯವರಿಗೆ ಕನ್ನಡದ ಗಣಕಿಕ್ರತ ವರದಿ ನಿಡಿದ್ದು ಅದೆ ಅಂತಾ ವಿನಂತಿ. ದಿನಾಂಕ 26.05.2015 ರಂದು 13.30 ಗಂಟೆಗೆ ನಾನು ನರಹರಿ ಸಿ.ಹೆಚ್.ಸಿ 316 ಠಾಣಾ ದಿನಚರಿ ಕರ್ವವ್ಯದ ಮೇಲೆ ಇದ್ದಾಗ  ಶ್ರೀ ಮೈನೋದ್ದಿನ ಚಿ.ಹೆಚ್.ಸಿ 306 ರವರು ಬಂದು ಕನ್ನಡದಲ್ಲಿ ಗಣಕಿಕ್ರತ ವರದಿ ನಿಡಿದ ಸಾರಾಂಶದ ಮೇಲಿನಿಂದ ಠಾಣಾ ಗುನ್ನೆ ನಂ 39/2015 ಕಲಂ 110 . & ಜಿ ಸಿ.ಆರ್.ಪಿ.ಸಿ ನೆದ್ದರ ಪ್ರಕರಣವನ್ನು ನೇದ್ದರ ಪ್ರಕಾರ ಪ್ರಕರಣ ದಾಖದಾಖಲಾಗಿರುತ್ತದೆ.
ಅಫಜಲಪೂರ ಪೊಲೀಸ್ ಠಾಣೆ:  ದಿನಾಂಕ 26/05/2015 ರಂದು 10.30 ಎಎಮ್ ಕ್ಕೆ ಫಿರ್ಯಾದಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಂಶವೆನೆಂದರೆ ನಿನ್ನೆ ದಿನಾಂಕ 25-05-2015 ರಂದು ಬಡದಾಳ ತಾಂಡಾದಲ್ಲಿರುವ ನಮ್ಮ ಸಂಬಂಧಿಕರ ಮನೆಯಲ್ಲಿ ದೇವರ ಕಾರ್ಯಕ್ರಮ ಇದ್ದಿದ್ದರಿಂದ ನಾನು ಮತ್ತು ನಮ್ಮ ಅಕ್ಕ ಸಕ್ಕುಬಾಯಿ ರವರು ಕೂಡಿ ನನ್ನ ಮೋಟರ ಸೈಕಲ್  ನೇದ್ದರ ಮೇಲೆ ನಮ್ಮ ತಾಂಡಾದಿಂದ ಹೊರಟಿದ್ದು ಇರುತ್ತದೆ, ನಂತರ 10;00 ಎ.ಎಂ ಸುಮಾರಿಗೆ ಬಡದಾಳ ಹತ್ತಿರ ರೇವೂರ ಕ್ರಾಸ ದಾಟಿ ಸ್ವಲ್ಪ ದೂರು ಹೋಗುತ್ತಿದ್ದಾಗ ಬಡದಾಳ ತಾಂಡಾ ಕಡೆಯಿಂದ ಒಬ್ಬ ತನ್ನ ಮೋಟರ ಸೈಕಲನ್ನು ಅತೀವೇಗವಾ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಒಮ್ಮೇಲೆ ನಮಗೆ ಡಿಕ್ಕಿ ಹೊಡೆದನು, ಆಗ ನಾನು ಮತ್ತು ನಮ್ಮ ಅಕ್ಕ ಇಬ್ಬರು ಕೆಳಗೆ ಬಿದ್ದಾಗ ನನಗೆ ಬಲಗಾಲ ಮೊಳಕಾಲ ಹತ್ತಿರ ಮತ್ತು ಅದರ ಕೆಳಗೆ ತರಚಿದ ರಕ್ತಗಾಯ ಆಗಿರುತ್ತದೆ. ನಮ್ಮ ಅಕ್ಕ ಸಕ್ಕುಬಾಯಿ ಇವರಿಗೆ ಹಣೆಯ ಮೇಲೆ ರಕ್ತಗಾಯ ಮತ್ತು ಬಲಗಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ನಂತರ ಆತನ ಮೋಟರ ಸೈಕಲ್ ನಂ ನೋಡಲಾಗಿ ಕೆಎ-28 / ಇಎ – 1076 ಅಂತಾ ಇತ್ತು, ನಂತರ ಅವನ ಹೆಸರು ಕೇಳಲಾಗಿ ತನ್ನ ಹೆಸರು ರೋಹನ ತಂದೆ ಪ್ರಭು ಚವ್ಹಾಣ ಸಾ|| ಬಡದಾಳ ತಾಂಡಾ ಅಂತಾ ಹೇಳಿದನು. ನಂತರ ಈ ವಿಷಯವನ್ನು ಬಡದಾಳ ತಾಂಡಾದಲ್ಲಿರುವ ನಮ್ಮ ಮಾವ ಸಂತೋಷ ತಂದೆ ಗೆಮು ಚವ್ಹಾಣ ಮತ್ತು ನಮ್ಮ ತಾಯಿ ಜಾಲಾಬಾಯಿ ರವರಿಗೆ ತಿಳಿಸಿರುತ್ತೇನೆ, ನಮ್ಮ ಮಾವ ಸಂತೋಷ ಅವರು ನಮ್ಮ ಹತ್ತಿರ ಬಂದು ನಮಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಖಾಸಗಿ ಉಪಚಾರ ಪಡಿಸಿರುತ್ತಾರೆ. ಖಾಸಗಿ ಉಪಚಾರ ಪಡೆದುಕೊಳ್ಳುತ್ತಿದ್ದರಿಂದ ದೂರು ಸಲ್ಲಿಸಲು ತಡವಾಗಿರುತ್ತದೆ. ಕಾರಣ ಮಾನ್ಯರವರು ನಮಗೆ ಅಪಘಾತ ಪಡಿಸಿದ ರೋಹನ ತಂದೆ ಪ್ರಭು ಚವ್ಹಾಣ ಸಾ|| ಬಡದಾಳ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಮತ್ತು ನನಗೆ ಹಾಗು ನಮ್ಮ ಅಕ್ಕ ಸಕ್ಕುಬಾಯಿ ರವರಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಬೇಕು ಅಂತಾ ಹೇಳಿಕೆ ನೀಡಿದ್ದು ನಿಜವಿರುತ್ತದೆ. ಅಂತ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 143/2015 ಕಲಂ 279,337 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖದಾಖಲಾಗಿರುತ್ತದೆ.

Kalaburagi District Reported Crimes.

ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ: 25.05.2015 ರಂದು 22:30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆ ಮಾಲು ಮತ್ತು ಆರೋಪಿತನೊಂದಿಗೆ ಠಾಣೆಗೆ ಬಂದು ಸ.ತರ್ಫೇಯಿಂದ ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 25.05.2015 ರಂದು 20:30 ಗಂಟೆಗೆ ಠಾಣೆಯ ಸಿಬ್ಬಂದಿ ಜನರು ಮತ್ತು ಇಬ್ಬರು ಪಂಚರ ಸಮಕ್ಷಮದಲ್ಲಿ ಗಂವ್ಹಾರ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಂದು ಪಾನ್ ಡಬ್ಬಾ ಎದುರು ಇರುವ ಖುಲ್ಲಾ ಜಾಗದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಅವನ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ ಒಟ್ಟು 3.940/- ರೂ ಕಿಮ್ಮತ್ತಿ ಮಧ್ಯದ ಬಾಟಲಿ ಜಪ್ತಿ ಮಾಡಿದ್ದು ಅವನ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತುಅಂತ ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 147/2015 ಕಲಂ 32. 34 ಕೆ.ಇ ಆಕ್ಟ್‌ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಅಫಜಲಪೂರ ಪೊಲೀಸ್ ಠಾಣೆ : ಫಿರ್ಯಾದುದಾರರು ಅಫಜಲಪೂರ ಬಸ್ ಡೀಪೊದಲ್ಲಿ ಬಸ್ಸಿನ ಚಾಲಕನಾಗಿ ಕೆಲಸ ನಿರ್ವಹಿಸುತ್ತಿರುತ್ತೆನೆ. ಇಂದು ದಿನಾಂಕ 25-05-2015 ರಂದು ಅಫಜಲಪೂರ - ಮಣೂರ ಮಾರ್ಗಕ್ಕೆ ನನಗೆ ಚಾಲಕನಾಗಿ, ನನ್ನ ಜೋತೆಗೆ ರಾಜಕುಮಾರ ತಂದೆ ಮಲ್ಲಪ್ಪ ಅಡ್ಡಿ ಇವರಿಗೆ ನಿರ್ವಾಹಕನಾಗಿ ನೇಮಿಸಿದ ಮೇರೆಗೆ ನಾವಿಬ್ಬರು ಬಸ್ ಡಿಪೋದಿಂದ ಬಸ್ ತಗೆದುಕೊಂಡು ಬಂದು ಅಫಜಲಪೂರ ಮಣೂರ ಮಾರ್ಗದಲ್ಲಿ ಸಂಚರಿಸಿ, ಮರಳಿ ಸಾಯಂಕಾಲ 6:00 ಗಂಟೆ ಸುಮಾರಿಗೆ ಮಣೂರ ಗ್ರಾಮದಿಂದ ಪ್ರಯಾಣಿಕರನ್ನು ಕರೆದುಕೊಂಡು ಅಫಜಲಪೂರಕ್ಕೆ ಬಂದು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಬಸ್ ಡಿಪೋದಲ್ಲಿ ನಮ್ಮ ಅದಿಕಾರಿಗಳ ಮುಂದೆ ವರದಿ ಒಪ್ಪಿಸಲು ನಾವಿಬ್ಬರು ಕರ್ತವ್ಯದ ಮೇಲೆ ಬಸ್ ನಿಲ್ದಾಣದಿಂದ ಬಸ್ ಡಿಪೋಕ್ಕೆ ಬಸ್ ತಗೆದುಕೊಂಡು ಹೊರಟಿರುತ್ತೆವೆ. ನಮ್ಮ ಬಸ್ಸು ನಮ್ಮ ಡೀಪೊದ ಸಮೀಪ ಇರುವ ಪೆಟ್ರೋಲ ಪಂಪ ಹತ್ತಿರ ಹೊಗುತ್ತಿದ್ದಾಗ, ನಮ್ಮ ಬಸ್ಸಿನ ಹಿಂದೆ ಒಬ್ಬ ವ್ಯಕ್ತಿ ಮೋ/ಸೈ ಮೇಲೆ ಬರುತ್ತಿದ್ದನು. ಆಗ ನಾನು ಸದರಿ ಮೋ/ಸೈ ಸವಾರನಿಗೆ ಸೈಡ ಕೊಡಲು ಬಸ್ಸನ್ನು ರೋಡಿನಿಂದ ಕೆಳಗೆ ಇಳಿಸಿದಾಗ, ಸದರಿ ಸವಾರನು ನಮ್ಮ ಬಸ್ಸಿನ ಪಕ್ಕದಲ್ಲಿ ಹೋಗುತ್ತಿದ್ದಾಗ, ನಮ್ಮ ಬಸ್ಸನ ಗಾಲಿಗಳು ರೋಡಿನಲ್ಲಿರುವ ತಗ್ಗಿಗೆ ಇಳಿದಾಗ ಬಸ್ಸು ಜೋಲಿ ಹೊಡೆದಂತೆ ಆಗಿತು, ಆಗ ಮೋ/ಸೈ ಸವಾರನು ತನ್ನ ಮೋ/ಸೈ ನ್ನು ಮುಂದೆ ಒಯ್ದು ನಿಲ್ಲಿಸಿ ನಮ್ಮ ಬಸ್ಸನ್ನು ನಿಲ್ಲಿಸುವಂತೆ ಕೈ ಸೂಚನೆ ಕೊಟ್ಟನು. ಆಗ ನಾನು ನನ್ನ ಬಸ್ಸನ್ನು ನಿಲ್ಲಿಸಿದಾಗ, ಮೋ/ಸೈ ಸವಾರ ನಮ್ಮ ಬಸ್ಸಿನ ಹತ್ತಿರ ಬಂದನು. ಸದರಿ ಮೋ/ಸೈ ಸವಾರ ನನಗೆ ಗೊತ್ತಿದ್ದ ಬಸವರಾಜ ತಂದೆ ರೇವಣಸಿದ್ದಪ್ಪ ಕೋರಳ್ಳಿ ಜಾ: ಲಿಂಗಾಯತ ಸಾ: ಅಫಜಲಪೂರ ಈತನಿದ್ದು, ಸದರಿ ಬಸವರಾಜನು ನನಗೆ ಏನೊ ಸೂಳೆ ಮಗನೆ ಬಸ್ಸನ್ನು ನನ್ನ ಮೈ ಮೇಲೆ ತರುತ್ತಿಯಾ, ನೋಡಿ ನಡೆಸೊದಕ್ಕೆ ಬರೊದಿಲ್ಲಾ ಅಂತಾ ಹೇಳಿ ನನಗೆ ಬೈಯತೋಡಗಿದನು. ಆಗ ನಾನು ಸದರಿ ಬಸವರಾಜನಿಗೆ ಹೊಲಸು ಬೈ ಬ್ಯಾಡರಿ ರೋಡೆ ಸರಿಯಿಲ್ಲಾ ನಾನೇನು ಬೇಕು ಅಂತಾ ನಡೆಸಿಲ್ಲಾ ಅಂತಾ ಹೇಳಿದೆನು. ಆಗ ಅವನಿಗೂ ಬಾಯಿ ಜಗಳವಾಯಿತು, ಆಗ ಸದರಿ ಬಸವರಾಜ ಕೋರಳ್ಳಿ ಆಯ್ತು ನಡಿ ಮಗನೆ ನಿಮ್ಮ ಡೀಪೊಕ್ಕೆ ಬರುತ್ತೆನೆ ಅಂತಾ ಹೇಳಿದನು. ಆದಾದ ನಂತರ ನಾನು ಬಸ್ಸನ್ನು ಡಿಪೊದಲ್ಲಿ ಒಯ್ದು ನಮ್ಮ ಮೇಲಾದಿಕಾರಿಗಳಿಗೆ ವರದಿ ಒಪ್ಪಿಸಲು ಕರ್ತವ್ಯದ ಮೇಲೆ ಹೊಗುತ್ತಿದ್ದಾಗ, ಸದರಿ ಬಸವರಾಜ ಕೋರಳ್ಳಿ ಈತನು ನನ್ನ ಹತ್ತಿರ ಬಂದು ಏನೊ ಲಂಬಾಣಿ ಸೂಳೆ ಮಗನೆ ನನ್ನ ಮೇಲೆ ಬಸ್ಸು ಹಾಯಿಸಲು ಬಂದು, ನನಗೆ ಬೈದು ಬರುತ್ತಿಯಾ ಅಂತಾ ನನ್ನ ಏದೆಯ ಮೇಲಿನ ಸಮವಸ್ತ್ರ ಹಿಡಿದು ತನ್ನ ಕಾಲಿನ ಚಪ್ಪಲಿಯನ್ನು ತಗೆದು ಚಪ್ಪಲಿಯಿಂದ ಹಾಗೂ ಕೈಯಿಂದ ನನಗೆ ಹೊಡೆಯಲಾರಂಬಿಸಿದನು, ಆಗ ಅಲ್ಲೆ ಇದ್ದ ನಮ್ಮ ಬಸ್ಸಿನ ನಿರ್ವಾಹಕ ರಾಜಕುಮಾರ ಅಡ್ಡಿ, ಹಾಗೂ ನಮ್ಮ ಡಿಪೊದ ಸಿಬ್ಬಂದಿಗಳಾದ ಉಮೇಶ, ರಾಜಕುಮಾರ, ಪ್ರಕಾಶ ಇತರರು ಬಂದು ನನಗೆ ಹೊಡೆಯುವುದನ್ನು ಬೀಡಿಸಿರುತ್ತಾರೆ, ಸದರಿ ಘಟನೆ ಇಂದು ದಿನಾಂಕ 25-05-2015 ರಂದು ಸಾಯಂಕಾಲ 6:30 ಗಂಟೆ ಸುಮಾರಿಗೆ ಅಫಜಲಪೂರ ಬಸ್ ಡೀಪೊದಲ್ಲಿ ಜರೂಗಿದ್ದು ಇರುತ್ತದೆ. ಸದರಿ ಲಿಂಗಾಯತ ಜಾತಿಯವನಾದ ಬಸವರಾಜ ತಂದೆ ರೇವಣಸಿದ್ದಪ್ಪ ಕೋರಳ್ಳಿ ಸಾ: ಅಫಜಲಪೂರ ಈತನು, ಲಂಬಾಣಿ ಜಾತಿಯವನಾದ ನನಗೆ, ನಾನು ಕರ್ತವ್ಯದ ಮೇಲೆ ನನ್ನ ಮೇಲಾದಿಕಾರಿಗಳಿಗೆ ವರದಿ ಒಪ್ಪಿಸಲು ಹೋಗುತ್ತಿದ್ದಾಗ ನನ್ನನ್ನು ನಿಲ್ಲಿಸಿ, ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ, ಚಪ್ಪಲಿಯಿಂದ ಮತ್ತು ಕೈಯಿಂದ ಹೊಡೆದು ಸರ್ಕಾರಿ ಕೆಲಸಕ್ಕೆ ಅಡೆ ತಡೆ ಮಾಡಿರುತ್ತಾನೆ. ಕಾರಣ ಸದರಿಯವರನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಎಂದು ಹೇಳಿಕೆ ನೀಡಿದ್ದು ನೀಜವಿರುತ್ತದೆ.
ಆಳಂದ ಪೊಲೀಸ್ ಠಾಣೆ  : ದಿನಾಂಕ:25/05/2015  ರಂದು  ಬೆಳಿಗ್ಗೆ 11:00 ಗಂಟೆಗೆ ಫಿರ್ಯಾದಿ  ತಿಮ್ಮಣ್ಣಾ ತಂದೆ ದಾದಪ್ಪ ಬೆಳಮಂ ವಯಾ: 59 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ ಮು: ಪಡಸಾವಳಗಿ ತಾ: ಆಳಂದ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಒಂದು ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ ನಾನು ನಮ್ಮೂರ ಧರ್ಮರಾಯ ದೇವಸ್ಥಾನ ಕಮೀಟಿಯ ಅಧ್ಯಕ್ಷನಾಗಿದ್ದು  ಸದರಿ ದೇವಾಲಯದ ಕಟ್ಟಡ ಕೆಲಸ ನಡೆಯುತ್ತಿದ್ದು ಸದರಿ ಕೆಲಸಕ್ಕಾಗಿ ರಾಜಶೇಖರ ತಂದೆ ಲಕ್ಷ್ಮಣ ಪಾತ್ರೋಟ ಸಾ: ನಾಗಠಾಣಾ ತಾ:ಜಿ:ವಿಜಯಾಪೂರ ಇತನಿಗೆ 3 ವರ್ಷಗಳಿಂದ ಕಟ್ಟಡ ಕೆಲಸಕ್ಕಾಗಿ ನಮ್ಮ ಗ್ರಾಮದಲ್ಲಿ ಇದ್ದು ದೇವಾಲಯದಲ್ಲಿಯೇ ಮಲಗಿಕೊಳ್ಳುತ್ತಾನೆ. ಹೀಗಿದ್ದು ದಿನಾಂಕ:25/05/2015 ರಂದು ಬೆಳಿಗ್ಗೆ 4:30 ಗಂಟೆ ನನಗೆ ಪೋನ ಮೂಲಕ ರಾಜಶೇಖರ ತಿಳಿಸಿದ್ದೆನೆಂದರೆ ನಾನು ಎಂದಿನಂತೆ ರಾತ್ರಿ 10:00 ಗಂಟೆ ಸುಮಾರಿಗೆ ಆಲಮರಿಯ ಕೀಲಿ ಹಾಕಿ ಊಟ ಮಾಡಿ ಮಲಗಿಕೊಂಡಿದ್ದು ದಿನಾಂಕ 25/05/2015 ರಂದು ಬೆಳಿಗ್ಗೆ 4:00 ಗಂಟೆಗೆ ನನಗೆ ಆಕಸ್ಮಿಕವಾಗಿ ಎಚ್ಚರ ಆದಾಗ ನಾನು ಎದ್ದು ನೋಡಲು ನಮ್ಮ ಆಲಮೇರಿ ಕೀಲಿ ಮುರಿದಂತೆ ಆಗಿದ್ದು ಅದರಲ್ಲಿಯ ಸಾಮಾನುಗಳು ಕಳ್ಳತನವಾದಂತೆ ಆಗಿದೆ ಅಂತಾ ನಮಗೆ ತಿಳಿಸಿದ್ದರಿಂದ ನಾನು ಮತ್ತು ಕಮೀಟಿಯ ಕಾರ್ಯದರ್ಶಿಯಾದ ಗಣಪತಿ ಕುಂಬಾರ, ಸದಸ್ಯರಾದ ಪ್ರಬುಲಿಂಗ ಘೊಡಕೆ , ಬಸವರಾಜ ಜಮಾದಾರ ಹೋಗಿ ನೋಡಲು ಸದರಿ ಘಟನೆ ನಿಜವಿದ್ದು  ಸದರಿ ಆಲಮರಿಯಲ್ಲಿದ್ದ  1) 20,000 ನಗದು ಹಣ 2) 3 ಹಳೆಯ ಮೋಬೈಲಗಳು 3) ಒಂದು ಕ್ಯಾಮರಾ 4) 2 ಗ್ರಾಂಡರ ಮಷಿನ್ 5) ಒಂದು ಬ್ಯಾಗ ಅದರಲ್ಲಿ ಇದ್ದ ಬಟ್ಟೆಗಳು ಹೀಗೆ ಒಟ್ಟು 24000/-ರೂಪಾಯಿ ಕಿಮ್ಮತ್ತಿನ ಹಣ ಮತ್ತು ವಸ್ತುಗಳು ಯ್ಯಾರೋ ಕಳ್ಳರು ದಿನಾಂಕ:24/05/2015 ರ ರಾತ್ರಿ 11 ಗಂಟೆಯಿಂದ ದಿನಾಂಕ 25/05/2015 ರ ಬೆಳಗಿನ 4 ಗಂಟೆಯ ಮದ್ಯದಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ  ಕಳುವಾದ ಮಾಲು ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:98/2015 ಕಲಂ:457,380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.