POLICE BHAVAN KALABURAGI

POLICE BHAVAN KALABURAGI

21 July 2013

GULBARGA DIST REPORTED CRIMES

ಸೇಡಂ ಪೊಲೀಸ್ ಠಾಣೆ:-
ಅಪಘಾತ ಪ್ರಕರಣ:
ದಿ:20-07-2013 ರಂದು ಸಾಯಂಕಾಲ 07-00 ಗಂಟೆ ಸುಮಾರಿಗೆ ಕ್ರಿಷ್ಣಾ ತಂದೆ ಹಣಮಂತ ರಂಗವಾರ ಸಾ:ಮಾಧವಾರ ಅವರ ಚಿಕ್ಕಮ್ಮ ನೀಲಮ್ಮ ಗಂಡ ಬಸಪ್ಪ ರಂಗವಾರ ಇಬ್ಬರೂ ಚಿಕ್ಕಮ್ಮನ ತಾಯಿಯವರಿಗೆ ಮಾತನಾಡಿಸಲು ಮಾದವಾರದಿಂದ ಇವಣಿ ಗ್ರಾಮಕ್ಕೆ ಮೋಟಾರು ಸೈಕಲ್ ನಂ-ಕೆ..32.ವಿ.5644 ನೇದ್ದರ ಮೇಲೆ ಹೋಗುತ್ತಿರುವಾಗ ಬಟಗೆರಾ(ಬಿ) ಕ್ರಾಸ್ ಹತ್ತಿರ ಹಿಂದುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಮೋಟಾರು ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಕ್ರಿಷ್ಣಾ ತಂದೆ ಹಣಮಂತ ಮತ್ತು ನೀಲಮ್ಮ ಇಬ್ಬರೂ ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದಿದ್ದು. ನೀಲಮ್ಮಳು ರೋಡಿನ ಬಲಭಾಗಕ್ಕೆ ಬಿದ್ದಿದ್ದರಿಂದ ಅವಳ ಮೈಮೇಲೆ ಲಾರಿ ಹಾಯ್ದು ಹೋಗಿದ್ದು ತನಗೆ ಎಡಗಣ್ಣಿನ ಹತ್ತಿರ, ಎಡಗಲ್ಲಕ್ಕೆ, ಎಡಗೈ ಮೊಣಕೈಗೆ, ಎರಡೂ ಮೊಣಕಾಲಿಗೆ ರಕ್ತ ಗಾಯ ಹಾಗೂ ಗುಪ್ತಗಾಯಗಳಾಗಿದ್ದು ಎದ್ದು ನೀಲಮ್ಮಳನ್ನು ನೋಡಲು ಎದೆಗೆ ಹಾಗೂ ಬೆನ್ನಿಗೆ ಭಾರಿ ರಕ್ತಗಾಯವಾಗಿ ಎರಡೂ ಕಾಲುಗಳು ಮುರಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಅಷ್ಟರಲ್ಲಿ ಅಲ್ಲಿಯೇ ಇದ್ದ ಜನರು ಸಹ ಬಂದಿದ್ದು ಅಪಘಾತಪಡಿಸಿದ ಲಾರಿ ನಂಬರ್ ನೋಡಲಾಗಿ .ಪಿ.22.ಡಬ್ಲೂ.1599 ದ್ದು. ಅಪಘಾತಪಡಿಸಿದ ಲಾರಿ ಚಾಲಕನನ್ನು ಅಲ್ಲಿದ್ದ ಬಿಚ್ಚಾರೆಡ್ಡಿ ಮತ್ತು ಮಹೇಶ ರವರು ವಿಚಾರಿಸಲಾಗಿ ಆತನು ತನ್ನ ಹೆಸರು ಅಪ್ಸರ ತಂದೆ ಮಕ್ಬೂಲ್ ಸಾ:ರಾವಲಪಲ್ಲಿ ಎಂದು ತಿಳಿಸಿದ್ದು. ಅಷ್ಟರಲ್ಲಿ ಅಪಘಾತದ ವಿಷಯ ಗೊತ್ತಾಗಿ ಪೊಲೀಸರು ಸ್ಥಳಕ್ಕೆ ಬಂದಿದ್ದು ಲಾರಿ ಚಾಲಕ ತನ್ನ ಲಾರಿ ಬಿಟ್ಟು ಹೋಗಿದ್ದು. ಸದರಿ ಅಪಘಾತಪಡಿಸಿದ ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ತನಿಖೆ ಕೈಕೊಳ್ಲಲಾಗಿದೆ.


ಗುಲಬರ್ಗಾ ಗ್ರಾಮೀಣ ಠಾಣೆ:
ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ:

 ದಿನಾಂಕ 20-07-2013 ರಂದು 10-30 .ಎಂ.ಕ್ಕೆ. ಗಂಟೆಗೆ ಫಿರ್ಯಾದಿ ರಾಜು ತಂದೆ ಶಾಂತಪ್ಪಾ ಕಡಗಂಚಿ ಮು:ಹೀರಾಪೂರ ತಾ;ಜಿ;ಗುಲಬರ್ಗಾ  ರವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಸಾರಂಶವೇನೆಂದರೆ  ಜಾಫರಬಾದ ಸೀಮೆಯ ತಮ್ಮ ತೋಟದ ಹೊಲದಲ್ಲಿ ತೋಗರಿ ಹೊಟ್ಟನ್ನು ದನಕ್ಕೆ ಹಾಕುವ ಸಲುವಾಗಿ ಗುಂಪಿ ಮಾಡಿ ಇಟ್ಟಿದ್ದು  ದಿನಾಂಕ. 20-7-2013 ರಂದು ಬೆಳಗಿನ 7-00 ಗಂಟೆ ಸುಮಾರಿಗೆ ಮನೆಯಿಂದ ದನಗಳಿಗೆ ತೊಗರಿ ಹೊಟ್ಟು ಒಯ್ಯುವ ಕುರಿತು ತಮ್ಮ ಹೊಲಕ್ಕೆ ಹೋಗಿ ತೊಗರಿ ಹೊಟ್ಟನ್ನು ಗೋಣಿ ಚಿಲದಲ್ಲಿ ತುಂಬವ ಕಾಲಕ್ಕೆ ಹೊಟ್ಟಿನ ಒಳಗಡೆ ಒಬ್ಬ ಮನುಷ್ಯನ ಶವದ ಮೊಳಕಾಲು ಕಾಣಿಸಿದ್ದು ಅದಕ್ಕೆ ಆತನು ಗಾಬರಿಹೊಂಡು  ಮನೆಗೆ ಹೋಗಿ ವಿಷಯ ತನ್ನ ತಂದೆ ಶಾಂತಪ್ಪಾ ಮತ್ತು ಸುಭಾಶ ಅವರಿಗೆ ತಿಳಿಸಿ ಎಲ್ಲರೂ ಕೂಡಿ ಪುನಾ; ಹೊಲಕ್ಕೆ ಬಂದು ನೋಡಲಾಗಿ ಹೊಟ್ಟಿನಲ್ಲಿ ಒಬ್ಬ ಗಂಡು ಮನುಷ್ಯನ  ಶವ ಇದ್ದು ಸದರಿ ಶವಪೂರ್ತಿ ಕೊಳೆತಿದ್ದು ಯಾವುದೆ ಗುರುತುಗಳು ಕಂಡು ಬರುತ್ತಿಲ್ಲಾ ಶವದ ಮೇಲೆ ಒಂದು ಕೆಂಪು ಬಣ್ಣದ ಶಾಂಡೋ ಬನಿಯಾನ, ಒಂದು ನಿಲಿ ಮತ್ತು ಬಿಳಿ ಬಣ್ಣದ ಚೌಕಡಿವುಳ ಲುಂಗಿ ಕಟ್ಟಿರುತ್ತದೆ. ಅಂದಾಜು 35-40 ವರ್ಷ ವಯಸ್ಸಿನ ಶವವು ಪೂರ್ತಿ ಕೊಳೆತಿದ್ದು. ಯಾರೋ ದುಷ್ಕರ್ಮಿಗಳುಯಾವುದೋ ಕಾರಣಕ್ಕಾಗಿ ಕೊಲೆ ಮಾಡಿ ಕೊಲೆಯನ್ನು ಮುಚ್ಚಿ ಹಾಕುವ ಉದ್ದೇಶದಿಂದ ಸದರಿ ಶವವನ್ನು ತೊಗರಿ ಹೊಟ್ಟಿನ ಲ್ಲಿ ಮುಚ್ಚಿ ಹಾಕಿರುತ್ತಾರೆ. ಕೊಲೆ ಸುಮಾರು 15 ದಿವಸಗಳ ಹಿಂದೆ ಆಗಿರಬಹದು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.