POLICE BHAVAN KALABURAGI

POLICE BHAVAN KALABURAGI

01 December 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ಕಮಲಾಪೂರ ಪೊಲೀಸ ಠಾಣೆ: ಶ್ರೀ. ಬಸಯ್ಯ ತಂದೆ ಚನ್ನಯ್ಯ ಮಠಪತಿ ವ: 28 ವರ್ಷ ಜಾ;ಜಂಗಮ ಉ: ಕ್ರೂಜರ್ ಜೀಪ್ ಚಾಲಕ ಸಾ||ಬಾಚನಾಳ ತಾ||ಜಿ||ಗುಲಬರ್ಗಾ ರವರು ದಿನಾಂಕ; 30/11/2011 ರಂದು ಮಧ್ಯಾಹ್ನ 2-00 ಗಂಟೆಗೆ ತಾನು ಮತ್ತು ತನ್ನ ಸ್ನೇಹಿತನಾದ ವೀರಪ್ಪ ತಂದೆ ಸಿದ್ದಣ್ಣ ಅವಟಗಿ ಸಾ; ಬಾಚನಾಳ ರವರನ್ನು ಕೂಡಿಕೊಂಡು ನಮ್ಮ ಕ್ರೂಜರ್ ಜೀಪಿನಲ್ಲಿ ಚಂದನಕೇರಾ ಗ್ರಾಮಕ್ಕೆ ಗ್ರಾಮ ಪಂಚಾಯತ ಕಟ್ಟಡ ಉದ್ಘಾಟನೆ ಪ್ರಯುಕ್ತ ಹೋಗಿದ್ದು, ಮರಳಿ ರಾತ್ರಿ 8-00 ಗಂಟೆ ಸುಮಾರಿಗೆ ಮನೆಗೆ ಬಂದಿರುತ್ತೇವೆ. ನನ್ನ ಹೆಂಡತಿ ಕಾವೇರಿ ಇವಳು ಈಗ ಸುಮಾರು 3 ದಿವಸಗಳ ಹಿಂದೆ ತನ್ನ ತವರು ಮನೆಯಾದ ಗುಲಬರ್ಗಾಕ್ಕೆ ಹೋಗಿದ್ದು, ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಇಂದುಮತಿ ಇಬ್ಬರೇ ಇದ್ದು, ರಾತ್ರಿ 9-00 ಗಂಟೆ ಸುಮಾರಿಗೆ ಊಟ ಮಾಡಿರುತ್ತೇವೆ. ನಮ್ಮ ಮನೆಯಲ್ಲಿ ಒಟ್ಟು ಮೂರು ಕೋಣೆಗಳಿದ್ದು, ಎರಡೂ ಕೋಣೆಗಳು ಒಂದರಲ್ಲಿ ಒಂದು ಇದ್ದು, ಇನ್ನೊಂದು ಕೋಣೆ (ಹಾಲ್ ) ಬೇರೆಯಾಗಿ ಇರುತ್ತದೆ. ನನ್ನ ತಾಯಿ ಇಂದುಮತಿ ಇವರು ಎರಡು ಕೋಣೆಗಳ ಮನೆಯಲ್ಲಿ ಮಲಗಿ ಕೊಂಡಿದ್ದು ಇರುತ್ತದೆ. ನಾನು ನಮ್ಮ ಮನೆಯ ಹಾಲಿನ ಕೋಣೆ ಬಾಗಿಲಿಗೆ ಕೀಲಿ ಹಾಕಿಕೊಂಡು ಹೋಗಿ ಕ್ರೂಜರ್ ಜೀಪಿನಲ್ಲಿ ಮಲಗಿಕೊಂಡಿರುತ್ತೇನೆ. ಹೀಗಿದ್ದು ರಾತ್ರಿ 11-45 ಗಂಟೆ ಸುಮಾರಿಗೆ ನಮ್ಮ ತಾಯಿ ಗಾಬರಿಗೊಂಡ ಚಿರಾಡುವ ಸಪ್ಪಳ ಕೇಳಿ ನಾನು ಕ್ರೂಜರ್ ಜೀಪಿನಿಂದ ಎದ್ದು ಹೋಗಿ ನೋಡಲಾಗಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಹಾಲಿನಲ್ಲಿಟ್ಟಿದ್ದ ಅಲಮೇರಾದ ಬೀಗ ಮುರಿದು ಅದರಲ್ಲಿದ್ದ ಎರಡೂವರೆ ತೊಲೆ ಬಂಗಾರದ ಆಭರಣಗಳು, ನಗದು ಹಣ 6000/- ರೂಪಾಯಿ ಎಂಟು ಸೀರೆಗಳು ಹೀಗೆ ಒಟ್ಟು 45000/- ರೂಪಾಯಿ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 149/2011 ಕಲಂ 457. 380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಬೆದರಿಕೆ ಕರೆ :

ಶಹಾಬಾದ ನಗರ ಠಾಣೆ: ದಿನಾಂಕ 29/11/11 ರಂದು ರಾತ್ರಿ 10-31 ಮೊಬಾಯಿಲ್ ನಂ: 9972147983 ನೇದ್ದರಿಂದ ಪೋನ್ ಮಾಡಿ ನಾನು ರಾಜು ತಂದೆ ಗಿರಿಮಲ್ಲಪ್ಪಾ ಹುಗ್ಗಿ ಇತನು ನನ್ನ ಮೋಬೈಲ ನಂ 9739880440 ನೇದ್ದಕ್ಕೆ ಕಾಲ ಮಾಡಿ ನಿನ್ನದ್ದು ಬಹಳಷ್ಟು ನಡೆದಿದೆ ದಮ್ಮು ಇದ್ದರೇ ಹೆಂಡತ್ತಿ ತಾಳೆ ತೆಗೆದುಬಾ ನನ್ನ ಹತ್ತಿರ ತಲವಾರ ಇವೆ. ನಿನಗೆ ಖಲಾಸ ಮಾಡತ್ತಿನಿ ಬಾ ಅಂತಾ ರಾತ್ರಿ ವೇಳೆಯಲ್ಲಿ ಪೋನನಲ್ಲಿ ಮಾತಾಡಿರುತ್ತಾನೆ ಮತ್ತು ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 184/11 ಕಲಂ 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಆಬ್ದುಲ್ ಅಲೀಮ ತಂದೆ ಶೇಖ ಗುಡು ಸಾ; ಮನೆ ನಂ: 11-47 ಅಂಬಾ ಭವಾನಿ ಗುಡಿ ಹಿಂದುಗಡೆ ಲಾಲಗೇರಿ ಗುಲಬರ್ಗಾ ರವರು ನಾನು ನಗರದ ಪಟೇಲ್ ಸರ್ಕಲದಿಂದ ಮಿನಿ ವಿಧಾನ ಸೌದ ಮುಖ್ಯ ದ್ವಾರದ ರೋಡಿನ ಹತ್ತಿರ ನಿಂತಾಗ ಅಟೋ ನಂ: ಕೆಎ 32 ಬಿ 1224 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಟೋರೀಕ್ಷಾ ಪಲ್ಟಿ ಆಗಿದ್ದು ಆತನ ಮೈ ಮೇಲೆ ಅಟೊರಿಕ್ಷಾ ಬಿದ್ದು ನನಗೆ ತಾನು ಅಟೋ ಚಾಲಕನಿಗೆ ಗಾಯಗಳಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 155/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ರಾಘವೇಂದ್ರ ನಗರ ಠಾಣೆ : ನಾನು ಶರಣು ತಂದೆ ಭೀಮಶ್ಯಾ ಕೊಲ್ಲೂರ ದಿನಾಂಕ 30-11-2011 ರಂದು ರಾತ್ರಿ ಗಂಗಾ ನಗರ ಕ್ರಾಸ್ ನಲ್ಲಿ ಅಟೋ ನಿಲ್ಲಿಸಿದ್ದು ನನ್ನ ಹತ್ತಿರ ಅಶೋಕ ತಂದೆ ಈರಣ್ಣ ಕೂಡಿ ಹಾಗು ಅವನ ಗೆಳೆಯ ರವಿ ತಂದೆ ಗುಂಡಪ್ಪ ಕೂಡಿ ಇಬ್ಬರು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 95/11 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಗೃಹ ಬಳಕೆಯ ಸಿಲೆಂಡರಗಳು ಹಾಗು ಯಂತ್ರೋಪಕರಣಗಳು ಜಪ್ತಿ:

ರಾಘವೇಂದ್ರ ನಗರ ಠಾಣೆ :ಶ್ರೀ ಆರ್. ವಿ. ಸಾವಳಗಿ ಪಿ.ಐ. ಆರ್.ಸಿ.ಐ.ಬಿ. ಸಿಐಡಿ ಗುಲಬರ್ಗಾ ಹಾಗು ಸಿಬ್ಬಂದಿ ವರ್ಗದವರು ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಆರ್ ನಗರ ಬಡಾವಣೆಯಲ್ಲಿ ಗ್ರಹ ಬಳಕೆಯ ಅನಿಲ ಸಿಲೆಂಡರಗಳಿಂದ ಅನಿಲ ತೆಗೆದು ಅಟೋಗಳಿಗೆ ಅಳವಡಿಸಿದ ಸಿಲೆಂಡರಕ್ಕೆ ಯಂತ್ರಗಳ ಸಹಾಯದಿಂದ ಅನಿಲ ತುಂಬುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡು, ದಾಳಿ ನಡೆಸಿದ್ದು, ದಾಳಿ ಕಾಲಕ್ಕೆ ಪ್ರಕಾಶ ತಂದೆ ಪ್ರವೀಣಸಿಂಗ್ ರಜಪೂತ ವ || 24 ಸಾ|| ಜೆ.ಆರ್. ನಗರ ಗುಲಬರ್ಗಾ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಆತನಿಂದ ಎರಡು ಹೆಚ್. ಪಿ. ಸಿಲೆಂಡರಗಳು, ಒಂದು ಸಣ್ಣ ಗಾತ್ರದ ಖಾಲಿ ಸಿಲೆಂಡರ್, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ, 1 ಹೆಚ್.ಪಿ ಎಲೆಟ್ರೀಕಲ್ ಮೋಟಾರ್, 1 ನೊಕಿಯಾ ಕಂಪನಿ ಎನ್.73 ಮೊಬಾಯಲ್,ನಗದು ಹಣ 3500=00 ರೂ.ಗಳು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ 96/11 ಕಲಂ 3 L.P.G. RESTRICTION ON USE ORDER 1974 R/W 3 & 7 E.C. ACT ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಾಣೆಯಾದ ಪ್ರಕರಣ:

ಅಶೋಕ ನಗರ ಠಾಣೆ : ಶ್ರೀ ಬಸವರೆಡ್ಡಿ ತಂದೆ ಶರಣರೆಡ್ಡಿ ಮಾಲಿ ಪಾಟೀಲ ಸಾ: ಮನೆ ನಂ. 1-1495/59/1, ಗೊದುತಾಯಿ ನಗರ ಗುಲಬರ್ಗಾ ವರುನನ್ನ ಮಗನಾದ ಶಿವರಾಜ ಇತನು ವಯಸ್ಸು 25 ವರ್ಷ ಇತನು ಎಸ್‌.ಬಿ ವಿಜ್ಞಾನ ಮಹಾವಿದ್ಯಾಲಯ ಗುಲಬರ್ಗಾ ದಲ್ಲಿ ಬಿಎಸ್‌ಸಿ 4ನೇ ಸೇಮ ಒದುತ್ತಿದ್ದು 4ನೇ ಸೇಮನಲ್ಲಿ ಅನುತಿರ್ಣನಾಗಿದ್ದರಿಂದ ಸುಮಾರು ದಿನಗಳಿಂದ ಮಾನಸಿಕವಾಗಿ ನೊಂದಿದ್ದು ದಿನಾಂಕ 18/08/2011 ರಂದು ಮನೆ ಬಿಟ್ಟು ಹೊದವನು ತಿರುಗಿ ವಾಪಸ ಮನೆಗೆ ಬಂದಿರುವುದಿಲ್ಲಾ. ನಾವು ನಮ್ಮ ಸಂಬಂಧಿಕರಿಗೆ ಮತ್ತು ನಮ್ಮ ಪರಿಚಯಸ್ಥರ ಮನೆಗಳಿಗೆ ಎಲ್ಲೂ ವಿಚಾರಿಸಿದರು ಇದುವರೆಗೂ ಅವನ ಸುಳಿವು ಸಿಕ್ಕಿರುವುದಿಲ್ಲಾ ಆತನ ಚಹರೆ ಪಟ್ಟಿ ಸಾಧರಣ ಮೈಕಟ್ಟು, ಗೋದಿ ಬಣ್ಣದ ದುಂಡು ಮುಖ ಉದ್ದನೇಯ ಮುಗು ಹೊಂದಿದ್ದು, ನೀಲಿ ಬಣ್ಣದ ಟೀ-ಶರ್ಟ ಮತ್ತು ಜೀನ್ಸ ಪ್ಯಾಂಟ ಹಾಕಿಕೊಂಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ. 129/2011 ಕಲಂ ಹುಡುಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಶಹಾಬಾದ ನಗರ ಠಾಣೆ : ಶ್ರೀ ದುರ್ಗಪ್ಪಾ ತಂದೆ ತಿಮ್ಮಣ್ಣಾ ದೇಸಾಯಿ ಸಾ: ವಿ.ಪಿ.ಚೌಕ ಶಹಾಬಾದ ರವರು, 1985 ನೇ ಇಸ್ವಿಯಲ್ಲಿ ಪಾಂಡುರಂಗ ತಂದೆ ಸಿದ್ದಪ್ಪಾ ಚೌದರಿ ಸಾ: ಶಹಾಬಾದ ಇವರ ನನ್ನ ಹತ್ತಿರ 10,000/- ರೂಪಾಯಿ ಕೈಗಡ ಅಂತಾ ತೆಗೆದುಕೊಂಡು ತನ್ನ ಹೊಲ ಸರ್ವೇ ನಂ:23/5 ಅಳತೆ 1 ಎಕರೆ 3 ಗುಂಟೆಗೆ ತರನಳ್ಳಿ ಗ್ರಾಮದ ಸಿಮೇಯಲ್ಲಿದ್ದದನ್ನು ಮಾರ್ಟಗೇಜ್ ಮಾಡಿ ನನ್ನ ಸ್ವಾಧಿನಕ್ಕೆ ಕೊಟ್ಟಿದ್ದು ಅಲ್ಲಿಂದ ಇಲ್ಲಿಯವರಗೆ ನನ್ನ ಸ್ವಾಧಿನದಲ್ಲಿರುತ್ತದೆ. 1996 ರಲ್ಲಿ ಸದರಿ ಹೊಲವನ್ನು ಪಾಂಡುರಂಗ ತಂದೆ ಸಿದ್ದಪ್ಪಾ ಚೌದರಿ ಇವರು ಕೈಗಡ ಹಣ ವಾಪಸ್ಸು ಕೊಡದೇ ಇರುವದಕ್ಕೆ ಅಪಡೇವಿಟ್ ಮಾಡಿಸಿ ನನ್ನ ಹೆಸರಿಗೆ ಮೊಟೇಶನ್ ಮಾಡಿಸಿರುತ್ಥಾನೆ. ಪಾಂಡುರಂಗ ತಂದೆ ಸಿದ್ದಪ್ಪಾ ಚೌದರಿ ಇವರು ಪುನಂ ಸದರಿ ಹೊಲವನ್ನು ಜೆ.ಪಿ.ಕಂಪನಿಗೆ ಮಾರುವ ಸಲುವಾಗಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಎಕರೆ ಒಂದಕ್ಕೆ 9 ಲಕ್ಷ ದಂತೆ ಮಾರಾಟ ಮಾಡಿ ಅದರಲ್ಲಿ 3 ಲಕ್ಷ್ ರೂಪಾಯಿ ಪಡೆದುಕೊಂಡು ನನಗೆ ಮೋಸ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆ ಗುನ್ನೆ ಸಂಖ್ಯೆ 183/2011 ಕಲಂ: 423, 427, 506, 504, 418, 406, 420, 447, 465, 458, 417 ,ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀ ಶಿವಲಿಂಗಪ್ಪ ತಂದೆ ಮಲ್ಲಿಕಾರ್ಜುನ ಮಾಲಿಪಾಟೀಲ ಸಾ:ಭವಾನಿ ನಗರ ಗುಲಬರ್ಗಾ ರವರು, ದಿನಾಂಕ 30-11-2011 ರಂದು ನಾಗೀಂದ್ರಪ್ಪ ತಂದೆ ಈರಪ್ಪಾ ಮರತನೂರ ಇತನು ತನ್ನ ಹಿರೋ ಹೊಂಡಾ ಸಿಡಿ 100 ಕೆಎ 32 ಎಚ 4254 ನೇದ್ದು ಅತಿವೇಗದಿಂದ ನಡೆಸುತ್ತಾ ಹೊರಟಾಗ ಆಳಂದ ಚೆಕ್ಕ ಪೋಸ್ಟ ಹತ್ತಿರ ರೋಡಿನ ತಗ್ಗಿನಲ್ಲಿ ಮೋಟಾರ ಸೈಕಲ್ದೊಂದಿಗೆ ಸ್ಕಿಡ ಆಗಿ ಬಿದ್ದಿದ್ದರಿಂದ ತಲೆ ಭಾರಿ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 360/2011 ಕಲಂ 279, 338 ಐಪಿಸಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಕಮಲಾಪುರ ಠಾಣೆ : ಶ್ರೀ ರಮೇಶ ತಂದೆ ಕಲ್ಯಾಣರಾವ ಸಾ: ಹೊನ್ನಳ್ಳಿ ರವರು,ಎಂದಿನಂತೆ ನಾನು ದಿನಾಂಕ : 22-11-2011 ರಂದು ಬೆಳಿಗ್ಗೆ ಹೊಲಕ್ಕೆ ಸೇಂಗಾ ಬೆಳೆಗೆ ನೀರು ಬಿಡಲು ಹೋದಾಗ ನಮ್ಮ ಹೊಲದ ಬಂದಾರಿಯಲ್ಲಿ ಅಳವಡಿಸಿದ ನೀರಿನ ಮೋಟಾರ ಇರಲ್ಲಿಲ್ಲ ಲೊಬ್ ಕಂಪ್ನಿಯ ದಾಗಿದ್ದು ಎಸ್ ಆರ್ ಸಂ- 6090467 ಎಚ ಪಿ 7.5 ಅದರ ಅಂದಾಜು 10 ಸಾವಿರ ರೊಪಾಯಿ ಇರುತ್ತದೆ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಸೂಕ್ತ ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.