POLICE BHAVAN KALABURAGI

POLICE BHAVAN KALABURAGI

04 January 2012

Gulbarga Dist Reported Crimes

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ನವಲಸಿಂಗ್ ತಂದೆ ಗೋಪಾಲಸಿಂಗ್ ಸಿಕ್ಕಲಗರ್ ಸಾ ಆಶ್ರಯ ಕಾಲೊನಿ ಗುಲಬರ್ಗಾರವರು ನಮ್ಮ ಸಂಬಂಧಿಕರು ಪಂಚ ಶೀಲನಗರದಲ್ಲಿದ್ದ ಅವರು ಸಹ ಲೋಹಾರ ಕೆಲಸ ಮಾಡುತ್ತಾರೆ ನಾವು ಊರು-ಊರು ಮತ್ತು ಪಟ್ಟಣಗಳಲ್ಲಿ ನಡೆಯುವ ಸಂತೆ ಜಾತ್ರೆಗಳಿಗೆ ಹೋಗಿ ಲೋಹದ ಸಾಮಾನುಗಳಾದ ಇಳಿಗೆ ಜಾರಿ ಮಾರಾಟ ಮಾಡುತ್ತೇವೆ ಪಂಚ ಶೀಲನಗರದಲ್ಲಿರುವ ನಮ್ಮ ಸಂಬಂಧಿಕರ ಮತ್ತು ನನ್ನ ನಡುವೆ ವ್ಯಾಪಾರದ ಸಲುವಾಗಿ ಆಗಾಗ ಬಾಯಿ ಮಾತಿನ ಜಗಳ ಆಗಿದ್ದು ಅಲ್ಲದೆ ಅವರ ಮತ್ತು ನನ್ನ ನಡುವೆ ವೈಮನಸ್ಸು ಆಗಿತ್ತು ದಿನಾಂಕ: 3-1-2012 ರಂದು ಮಧ್ಯಾನ 2 ಗಂಟೆ ಸುಮರಿಗೆ ನಾನು ಮತ್ತು ವಿಜಯಸಿಂಗ್ ಮತ್ತು ನಾನಕೂರ, ದರ್ಶನಸಿಂಗ್, ಕರ್ತಾರಸಿಂಗ್, ತಾರಸಿಂಗ್ ಎಲ್ಲರು ಕೂಡಿ ಪಂಚ ಶೀಲನಗರದ ಮುಖ್ಯ ರಸ್ತೆಗೆ ಹೊಂದಿ ಕೊಂಡಿರುವ ಹೊಟೇಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಾವೆಲ್ಲರು ವ್ಯಾಪರಕ್ಕಾಗಿ ಜೇವರ್ಗಿಗೆ ಹೋಗುತ್ತಿರುವಾಗ ನಮ್ಮನ್ನು ನೋಡಿದ ಜೇವರ ಸಿಂಗ್, ಜಗಬಾರಸಿಂಗ್ , ಲಖನಸಿಂಗ್ ಲಾತೂರ , ಶಾನಾಸಿಂಗ್ , ಆಕಾಶ ಸಿಂಗ್ , ರಾಮಾಸಿಂಗ್ ಲಾತೂರ ಸಂಗಡ 2 ಜನರು ಇವರೆಲ್ಲರು ಕೂಡಿ ಬಂದು ನನಗೆ ಎಡ ತೊಡೆಗೆ ತಲವಾರದಿಂದ ರಾಡಿನಿಂದ ಹೊಡೆದು ಬಲವಾದ ರಕ್ತ ಗಾಯ ಗುಪ್ತಗಾಯ ಮಾಡಿದನು ಬಿಡಿಸಲು ಬಂದ ವಿಜಯ ಸಿಂಗ್ ಇವನಿಗೂ ಸಹ ತಲವಾರಿದಂದ ಹೊಡೆದು ಭಾರಿ ರಕ್ತಗಾಗಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 1/2012 ಕಲಂ 143,147,148,341,324,325,323,506, [2] ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .
ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ:
ಶ್ರೀ.ಗಜೇಂದ್ರ ಸಿ.ಪಿ.ಸಿ ಬ್ರಹ್ಮಪೂರ ಠಾಣೆರವರು ನಾನು ಮತ್ತು ಸುಧಾಕರ ಸಿ.ಪಿ.ಸಿ ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ದಿನಾಂಕ: 04/01/12 ರಂದು ನಗರದ ಸಿ.ಟಿ ಬಸ್ ನಿಲ್ದಾಣ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವನನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಚನ್ನಾರೆಡ್ಡಿ ತಂದೆ ಬಾಬುರೆಡ್ಡಿ, ಸಾ ನಂದಮ್ಮ ಹೊಟೇಲ ಹತ್ತಿರ ಮಿನಾರ ಶೇಖ ರೋಜಾ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವನನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ಸಲ್ಲಿಸಿದ್ದರ ಮೇರೆಗೆ ಠಾಣಾ ಗುನ್ನೆ ನಂ: 1/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗ ಕಾಣೆಯಾದ ಪ್ರಕರಣ:
ಚಿತ್ತಾಪೂರ ಠಾಣೆ:
ದಿನಾಂಕ:31-12-2011 ರಂದು ಮಧ್ಯಾಹ್ನ ಸುಮರಿಗೆ ನಾಜೀಮ ತಂದೆ ಮಹಿಬೂಬಸಾಬ ವ 11 ಎತ್ತರ 4” ದುಂಡು ಮುಖ, ಸಾದಾರಣ ಮೈಕಟ್ಟು, ಕೆಂಪು ಬಣ್ಣ, ಕಪ್ಪು ಕೂದಲು, ನೀಟಾಗ ಮೂಗು, 5 ನೇ ತರಗತಿ ಒದುತ್ತಿದ್ದು, ಕನ್ನಡ, ಉರ್ದು ಭಾಷೆ ಬಲ್ಲವನಾಗಿರುತ್ತಾನೆ, ಶಾಲೆ (ಬಿಳಿ ಶರ್ಟ ಬಿಳಿ ಹಾಪ್ ಪ್ಯಾಂಟ) ಸಮವಸ್ತ್ರ ಧರಿಸಿರುತ್ತಾನೆ ಇತನು ಬಾರೆಹಣ್ಣು ತರುತ್ತೆನೆಂದು ಮನೆಯಿಂದ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ ಎಲ್ಲಾ ಕಡೆಗೆ ಹುಡಕಾಡಿದರೂ ಸಿಕ್ಕಿರುವದಿಲ್ಲ ಅಂತಾ ಹುಸೇನ ಖಾನ ತಂದೆ ಶೇಖ ಖಾನ ಗುಂಡಗುರ್ತಿ ಸಾ ಬಸವ ನಗರ ಚೀತ್ತಾಪೂರ ರವರು ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 03/2012 ಕಲಂ ಹುಡಗ ಕಾಣೆಯಾದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ಚಿತ್ತಪೂರ ಠಾಣೆ ಪೋನ ನಂ: 08474-236123 ಅಥವಾ ಮೋಬಾಯಿಲ್ ನಂಬರ: 9480803573 ಅಥವಾ ಗುಲಬರ್ಗಾ ಕಂಟ್ರೋಲ್ ರೂಮ ನಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೊರಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :
ಶ್ರೀ ಗುರುನಾಥ ತಂದೆ ಶರಣಪ್ಪಾ ಸಿಂಗೆ ಸಾಃ ಬಾಪು ನಗರ ಗುಲಬರ್ಗಾ ರವರು ನಾನು ನನ್ನ ಮಕ್ಕಳಿಗೆ ಶಾಲೆಗೆ ಕರೆದುಕೊಂಡು ಹೋಗುತ್ತಿರುವಾಗ ಎಸ್.ಟಿ.ಬಿ.ಟಿ ಬಸ್ ಸ್ಟಾಂಡ ಹತ್ತಿರ ಎದರುಗಡೆಯಿಂದ ಮೋಟಾರ ಸೈಕಲ್ ನಂ. ಕೆ.ಎ 32 ವಿ 6476 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ಕಲಂ 279,337 ಐ.ಪಿ.ಸಿ. ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆಕ್ರಮ:
ಶಹಾಬಾದ ನಗರ ಪೊಲೀಸ ಠಾಣೆ:
ಶಹಾಬಾದ ನಗರ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಂಕರವಾಡಿ ಗ್ರಾಮದಲ್ಲಿ ದಿನಾಂಕ: 1/01/2012 ರಿಂದ ಇಲ್ಲಿಯವರೆಗೆ ಹರಿಜನ ಕೋಮಿನವರ ನಡುವೆ ಮತ್ತು ಕೂಲಿ ಸಮಾಜ ಕೊಮಿನವರ ನಡುವೆ ಹೊಸ ವರ್ಷದ ಸಲುವಾಗಿ ರಾತ್ರಿ ಸ್ವೀಕರ ಹಚ್ಚುವ ಸಂಬಂಧ ವೈ ಮನಸ್ಸು ಬೆಳಸಿಕೊಂಡು ದ್ವೇಶ ಸಾಧಿಸಿ ಜಗಳ ಮಾಡಿಕೊಂಡಿದ್ದು ಎರಡು ಗುಂಪಿನವರ ಮೇಲೆ ಶಹಾಬಾದ ನಗರ ಠಾಣೆ ಗುನ್ನೆ ನಂ: 1/2012 ಕಲಂ: 341, 324, 504, ಸಂ: 34 ಐಪಿಸಿ ಮತ್ತು 3[1] [10] ಎಸಸಿ/ಎಸ್ಟಿ ಪಿ.ಎ ಆಕ್ಟ್. ನೇದ್ದರಲ್ಲಿ ಶ್ರೀ ರಾಣೊಜಿ ತಂದೆ ದೇವಪ್ಪಾ ಹಾದಿಮನಿ ಸಾ: ಶಂಕರವಾಡಿ ಇವರು ದೂರು ಸಲ್ಲಿಸಿರುತ್ತಾರೆ. ಪ್ರಕರಣದಲ್ಲಿ ಆರೋಪಿತರಾದ ರಾಜು ತಂದೆ ಮಲ್ಲಪ್ಪಾ ಸಂತಿ ಸಂ: 4 ಜನರು ಸಾ: ಎಲ್ಲರೂ ಶಂಕರವಾಡಿರವರು ಇವರ ಮೇಲೆ ಶ್ರೀ ರಾಮು ತಂದೆ ಸಿದ್ದಣ್ಣಾ ಹೊನಗುಂಟಿ ಸಾ: ಶಂಕರವಾಡಿ ಸಹ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 2/2012 ಕಲಂ: 323, 324, 504, 506 ಸಂ: 34 ಐಪಿಸಿ ನೇದ್ದರಲ್ಲಿ ರಾಣೋಜಿ ತಂದೆ ದೇವಪ್ಪಾ ಸಂ: 4 ಜನರು ಸಾ: ಎಲ್ಲರೂ ಶಂಕರವಾಡಿ ಇದ್ದು ಮೊದಲನೇ ಪಾರ್ಟಿ ಜನರು ಒಟ್ಟು 17 ಜನರಿದ್ದು ಹಾಗೂ ಎರಡನೇಯ ಪಾರ್ಟಿ ಜನರು 17 ಜನರು ಇದ್ದು ಸದರಿಯವರು ಎರಡು ಕೋಮಿನ ಜನಾಂಗದವರು ಪಾರ್ಟಿ ಕಟ್ಟಿಕೊಂಡು ಗುಂಪು ಗುಂಪಾಗಿ ತಿರುಗಾಡುವುದು ತಿಳಿದು ಬಂದಿದ್ದರಿಂದ ಯಾವುದೇ ವೇಳೆಯಲ್ಲಿ ಶಂಕರವಾಡಿ ಗ್ರಾಮದಲ್ಲಿ ಹೊಡೆದಾಟ ಬಡೆದಾಟ ಮಾಡಿ ಸಾರ್ವಜನಿಕ ಶಾಂತತೆಗ ಭಂಗವನ್ನುಂಟು ಮಾಡುವುದಲ್ಲದೇ ಆಸ್ತಿ ಹಾನಿ, ಜೀವ ಹಾನಿ, ಮಾಡುವ ಸಂಭವವಿರುವದರಿಂದ ಸದರಿಯವರ ಮೇಲೆ ಮುಂಜಾಗೃತೆ ಕ್ರಮ ಕೈಕೊಂಡಿರುವದರಿಂದ ಠಾಣೆ ಗುನ್ನೆ ನಂ: 03/2012 ಕಲಂ 107 ಸಿಅರ್ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.