POLICE BHAVAN KALABURAGI

POLICE BHAVAN KALABURAGI

07 August 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಕಮಲಾಪೂರ ಠಾಣೆ : ಕಮಲಾಪೂರ ಗ್ರಾಮದ ಸುಭದ್ರಾ ಕಾಂಪ್ಲೇಕ್ಸ್ ಎದುರುಗಡೆ ಇರುವ  ರಾಚೋಟೇಶ್ವರ  ಪಾನ ಶಾಪದ  ಹತ್ತಿರ  ಸಾರ್ವಜನಿಕ  ರಸ್ತೆಯ  ಮೇಲೆ  ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ  ಸಾರ್ವಜನಿಕರಿಂದ ಹಣವನ್ನು ಪಡೆದುಕುಂಡು ಏನೋ ಚೀಟಿ ಬರೆದು ಸಾರ್ವಜನಿಕರಿಗೆ ಕೊಡುತ್ತಿದ್ದು, ಹಾಗೂ ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಬನ್ನಿರಿ ಅಂತಾ ಕರೆಯುತ್ತಿರುವುದನ್ನು ನೋಡಿ ಖಚಿತಪಡಿಸಿಕೂಂಡು  ಎ ಎಸ್.ಐ ಸಾಹೇಬರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ವಿಚಾರಿಸಲು  ರಾಮನಾಥ ತಂದೆ ಚಂದ್ರಪ್ಪ ರಾಜೇಶ್ವರ  ಸಾ; ಕಮಲಾಫೂರ ಅಂತಾ ತಿಳಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಿಸಿದ ನಗದು ಹಣ 3665/- ರೂಪಾಯಿ, ಒಂದು  ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಮತ್ತು ಎರಡು ಬಾಲಪೆನ್  ವಶಪಡಿಸಿಕೊಂಡು ಮರಳಿ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ: 06-08-2014 ರಂದು ಮಧ್ಯಾಹ್ನ 03-00 ಗಂಟೆಗೆ ಕಾಳಮಂದರ್ಗಿ ಗುತ್ತಿ ತಾಂಡಾದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಬಾತ್ಮೀ ಮೇರೆಗೆ ಶ್ರೀ.ಸಿದ್ರಾಮಪ್ಪ ಎ.ಎಸ್.ಐ ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ ಬಾತ್ಮೀ ಇದ್ದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ- ಬಹಾರ  ಇಸ್ಪೀಟ್ ಜೂಜಾಟವಾಡುತ್ತಿದ್ದು 1. ವಿಕ್ರಮ ತಂದೆ ನಾಮು ರಾಠೋಡ ರ್ಷ  2. ಸಂದೀಪ್ ತಂದೆ ಬಳಿರಾಮ ಜಾಧವ  3. ಪ್ರಕಾಶ ತಂದೆ ಹರಿಶ್ಚಂದ್ರ ಪವಾರ  4. ದಿಲೀಪ್  ತಂದೆ  ಜೈಚಂದ್ರ ಜಾಧವ  5. ಸಂತೋಷ ತಂದೆ ಭೀಮಲಾ ರಾಠೋಡ 6. ಸಂಜುಕುಮಾರ ತಂದೆ ನಾಮದೇವ ರಾಠೋಡ 7. ಅಶೋಕ ತಂದೆ ಕಿಶನ ಜಾಧವ  ಎಲ್ಲರೂ  ಸಾ: ಕಾಳಮಂದರ್ಗಿ ಗುತ್ತಿ ತಾಂಡಾ  ತಾ: ಜಿ: ಗುಲಬರ್ಗಾ ಇವರುಗಳಿಗೆ  ದಸ್ತಗಿರಿ ಮಾಡಿಕೊಂಡು  ಇಸ್ಪೀಟ್  ಜೂಜಾಟಕ್ಕೆ  ಸಂಭಂದಿಸಿದ  ನಗದು ಹಣ 1150 =00 ರೂಪಾಯಿ  ಮತ್ತು 52  ಇಸ್ಪೀಟ್  ಎಲೆಗಳನ್ನು ಜಪ್ತು ಪಡಿಸಿಕೊಂಡು ಜಪ್ತು ಪಡಿಸಿಕೊಂಡ  ಮರಳಿ ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ ರವಿಕುಮಾರ ತಂದೆ ಬಸವರಾಜ ಬೆಣ್ಣೂರ ಸಾ: ಮ.ನಂ. 11-45/29 ಮಹಾಲಕ್ಷ್ಮಿ ಲೇಔಟ ಫೈಯರ ಸ್ಟೇಷನ ಎದುರುಗಡೆ ಗುಲಬರ್ಗಾ ರವರು ದಿನಾಂಕ  06-08-2014 ರಂದು ಸಂಜೆ 7-45 ಗಂಟೆ ಸುಮಾರಿಗೆ ತಾನು ಮತ್ತು ತನ್ನ ಗೆಳೆಯರಾದ ಪ್ರದೀಪ ಪಾಟೀಲ, ಗುರುಪ್ರಸಾದ ಪಾಟೀಲ, ಶಿವಶರಣ ರಾಮಪೂರ, ಎಲ್ಲರೂ ಮಾತನಾಡುತ್ತಾ ವೆಂಕಟಗೀರಿ ಹೊಟೇಲ ಎದುರಿಗೆ ಇರುವ ಗುರುಶಾಂತಯ್ಯಾ ಸ್ವಾಮಿ ರವರ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ನಿಂತಾಗ ಕಾರಿನಲ್ಲಿ ಬಂದು ವ್ಯಕ್ತಿ ಮಿರರ್ ತಾಗಿಸಿದಕ್ಕೆ ಕಾರ ನಡೆಸಲು ಬರುವುದಿಲ್ಲಾ ಎಂದು ಕೇಳಿದಕ್ಕೆ ಆ ವ್ಯಕ್ತಿ ಕಾರಿನಿಂದ ಇಳಿದು ಬಂದು '' ಏನು ಮಾತನಾಡುತ್ತಿ ಬೋಸಡಿ ಮಗನೇ ಏನು ನಿಗರಿ ನೋಡತ್ತಿ ಅಂತಾ ಅವಾಚ್ಯ ಶಬ್ಗಗಳಿಂದ ಬೈದು ನಿನಗೆ ಶೂಟ ಮಾಡುತ್ತಿನಿ ಅಂತಾ ಬಗಲಲ್ಲಿ ಇದ್ದ ಪಿಸ್ತೂಲಿನಿಂದ ಹೊಡೆಯಲು ಬಂದು ಕೊಲೆಗೆ ಯತ್ನಿಸಿರುತ್ತಾನೆ. ಅಷ್ಠರಲ್ಲಿ ನನ್ನ ಗೆಳೆಯರಾದ ಪ್ರದೀಪ ಪಾಟೀಲ, ಗುರುಪ್ರಸಾದ ಪಾಟೀಲ, ಶಿವಶರಣ ಅವರು ಬಂದು ಯಾಕೆ ಪಿಸ್ತೂಲಿನಿಂದ ಹೆದರಿಸುತ್ತಿದ್ದಿರಿ ಅಂತಾ ಆ ವ್ಯಕ್ತಿಗೆ ಕೇಳಿದಾಗ ನನ್ನ ಹೆಸರು ಜಗದೀಶ ಅಂಬಲಗಿ ಇದೆ ನನ್ನ ಹತ್ತಿರ ಪಿಸ್ತೂಲ್  ಲೈಸನ್ಸ ಇದೆ ಪೊಲೀಸರು ಏನು ಮಾಡಲ್ಲಾ ಅಂತಾ ಹೇಳಿ ಹೆದರಿಸಿ ಹೋಗಿರುತ್ತನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಸಮೀಮ್ ತಂದೆ ಮಹ್ಮದ ಸಲಿಮ ಸಾ|| ಗುಲಶನ ಚೌಕ ಮದಿನಾ ಕಾಲೋನಿ ಎಂ.ಎಸ್.ಕೆ ಮಿಲ್ ಗುಲಬರ್ಗಾ ಇವರು ದಿನಾಂಕ|| 06-08-2014 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ತಾನು ಮತ್ತು ತಂದೆ ಕೂಡಿಕೊಂಡು ನಜೀರ ಪಟೇಲ ಈತನಿಗೆ ನೀವು ಹಾಕುತ್ತಿರುವ ನಿಮ್ಮ ಮನೆಯ ಚತ್ ನಮ್ಮ ಜಾಗದಲ್ಲಿ ಬರುತ್ತಿದ್ದು  ಅದನ್ನು ಅಳತೆ ಮಾಡಿ ಹಾಕಿಕೊಳ್ಳಿ ಅಂತಾ ಹೇಳುತ್ತಿದ್ದಾಗ ನಜೀರ ಪಟೇಲ ಈತನು ನಮ್ಮೊಂದಿಗೆ ಜಗಳಾ ತೆಗೆದು ನಾನು ನಮ್ಮ ಜಾಗದಲ್ಲಿ ಕಟ್ಟುತ್ತಿದ್ದು ನೀನು ಏಕೆ ನನಗೆ ಬಂದು ಕೇಳುತ್ತಿರುವೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತ ತನ್ನ ಹತ್ತಿರ ಇದ್ದ ಒಂದು ಚಾಕುವಿನಿಂದ ಫಿರ್ಯಾದಿಯ ಮುಗಿನ ಹತ್ತಿರ ಹೊಡೆದಿದ್ದರಿಂದ ನನಗೆ ರಕ್ತ ಬರಹತ್ತಿದ್ದು  ಇದನ್ನು ನೋಡಿ ನಮ್ಮ ತಂದೆ ನಜೀರ ಪಟೇಲ ಇವರ ಕುಟುಂಬದವರಾದ ಮಲಂಗಹಾಗು ಅವರ ಮನೆಯ ಹೆಣ್ಣು ಮಕ್ಕಳಾದ ಜಾಹೀದ, ಪರವಿನ ಶಮಿಮ ಜಾಹಾಂ, ಹೀನಾ, ಕೌಸರ ಇವರೆಲ್ಲರೂ ಸೇರಿ ನನ್ನ ತಂದೆಗೆ ಕೈಯಿಂದ ಹೊಡೆದು ಅಲ್ಲಲ್ಲಿ ಗುಪ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ.ಶೇಖ ರಶೀದ ಅಹ್ಮದ ಕಿರಿಯ ಇಂಜನಿಯರ್ (ವಿ) ಜೇಸ್ಕಾಂ ಗುಲಬರ್ಗಾರವರು ನಾಗಲೇಗಾಂವ ಗ್ರಾಮದ ಶ್ರೀ.ಶ್ರೀಕಾಂತ ತಂದೆ ಶರಣಪ್ಪ ಮಂಜೂಳಕರ್ ರವರಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯುತ್ ಸರಬರಾಜು ಮಾಡಲು 25 ಕೆ.ವಿ.ಎ ವಿದ್ಯುತ್ ಪರಿವರ್ತಕ ಮಂಜೂರಾಗಿದ್ದು ಅವರ ಹೊಲದಲ್ಲಿ ವಿದ್ಯುತ್ ಕಾಮಗಾರಿಯು ನಡೆಯುತ್ತಿದ್ದು ದಿನಾಂಕ:25/05/2014 ರಂದು ರಾತ್ರಿ ಸುಮಾರು 07:00 ಗಂಟೆ ಯಿಂದ ದಿ:26/05/2014 ರ ಬೇಳಗ್ಗೆ 06:00 ಗಂಟೆ ಅವಧಿಯೊಳಗೆ 25 ಕೆ.ವಿ.ಎ ವಿದ್ಯುತ್ ಪರಿವರ್ತಕದ ತೈಲ ಚೆಲ್ಲಿ ಅದರೊಳಗಿನ ವೈಂಡಿಂಗ್ ಕಾಯಿಲ್ ಗಳುನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಮೊತ್ತ ರೂಪಾಯಿ 14,500/- ಆಗುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಗಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿನೋದ ತಂದೆ ಯಲ್ಲಪ್ಪ ಇಂಗಳಗಿ ಸಾ: ರಾಜಾಪೂರ ಗುಲಬರ್ಗಾ ರವರು ದಿನಾಂಕ 06-07-2014 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ತಾನು ಚಲಾಯಿಸುತ್ತಿರುವ ಮೋ/ಸೈಕಲ ನಂಬರ ಕೆಎ-32 ಇಡಿ-8540 ನೇದ್ದರ ಹಿಂದುಗಡೆ ದೇವಿಂದ್ರ ಇತನನ್ನು ಕೂಡಿಸಿಕೊಂಡು ಕೋರ್ಟ ಕ್ರಾಸ ಕಡೆಯಿಂದ ಸ್ಟೇಶನ ಏರಿಯಾದಲ್ಲಿ ಬರುವ ನನ್ನ ಗೆಳಯ ಮಲ್ಲು ಇವರ ಹತ್ತಿರ ಹೋಗುವಾಗ ಎಸ್.ವಿ.ಪಿ. ಸರ್ಕಲ ಹತ್ತಿರ ಕೇಂದ್ರ ಬಸ್ ನಿಲ್ದಾಣದ ಕಡೆಯಿಂದ ಸ್ಟೇಶನ ಏರಿಯಾ ಕಡೆಗೆ ಹೋಗುವ ಕುರಿತು ಲಾರಿ ನಂಬರ ಕೆಎ-31 -7211 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಮೋ/ಸೈಕಲ ಎಡಗಡೆಯ ಫುಟರೆಸ್ಟ, ಎರಡು ಶಾಗಪ್ಸ ಗೇರ, ಹಿಂದಿನ ವಿಲ ಹಾಗು ಕ್ಲಚ ಡ್ಯಾಮೇಜ ಮಾಡಿ ತನ್ನ ಲಾರಿ ಅಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.