POLICE BHAVAN KALABURAGI

POLICE BHAVAN KALABURAGI

15 November 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ತುಕಾರಾಮ ತಂದೆ ಯಶ್ವಂತ ಬಟ್ಟರಕಿ ಸಾ||ವ್ಹಿ.ಕೆ.ಜಿ.ನಗರ ಅಫಜಲಪೂರ ರವರು ಮಗನ ಹೆಸರಿನಲ್ಲಿ ಒಂದು ಮೋಟಾರ ಸೈಕಲ ಖರಿದಿಸಿದ್ದು ಅದರ ನೊಂದಣಿ ಸಂಖ್ಯೆ ಕೆ,ಎ-32 ಇಎಸ್-4453 (ಚೆಸ್ಸಿ ನಂ:MBLHAR073J5D14671) ನೇದ್ದು ಇರುತ್ತದೆ. ದಿನಾಂಕ : 14/11/2019 ರಂದು 5-45 ಪಿ,ಎಮ್,ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ಮನೆಯಲ್ಲಿದ್ದಾಗ ನನ್ನ ಮಗನಾದ ವಿಶ್ವುನಾಥ @ ಯಶ್ವಂತನು ತನ್ನ ಮೊಟಾರ ಸೈಕಲ ತಗೆದುಕೊಂಡು ಹೊರಗಡೆ ಹೋಗಿ ಬರುತ್ತೇನೆ ಅಂತ ಹೋಗಿರುತ್ತಾನೆ.ನಂತರ 6-30 ಪಿ,ಎಮ್,ಸುಮಾರಿಗೆ ಅಫಜಲಪೂರ ಪಟ್ಟಣದ ಬಸಣ್ಣ ಆಲಮೇಲೆ ಈತನು ನಮ್ಮ ಮನೆಗೆ ಬಂದು ನಿಮ್ಮ ಮಗನಿಗೆ ಅಫಜಲಪೂರ-ಕಲಬುರಗಿ ಮುಖ್ಯ ರಸ್ತೆ ಮೇಲೆ ಶಿವಪ್ಪ ಮ್ಯಾಕೇರಿ ರವರ ಹೊಲದ ಹತ್ತಿರ ಅಪಘಾತವಾಗಿದ್ದು ಸದರಿ ಅಪಘಾತದಿಂದ ನಿಮ್ಮ ಮಗ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಹಾಗೂ ನನ್ನ ತಮ್ಮನಾದ ಮನೋಹರ ಮತ್ತಿತರು ಹೋಗಿ ನೋಡಲಾಗಿ ನನ್ನ ಮಗನಿಗೆ  ತಲೆಗೆ ಮತ್ತು ಮುಖಕ್ಕೆ, ಗಂಟಲು ಹತ್ತೀರ ಭಾರಿ ರಕ್ತಗಾಯ ಹಾಗೂ ಮತ್ತು ಕಾಲು ಮುರುದಿದ್ದು ಹಾಗೂ ಹೊಟ್ಟೆಗೆ ತರಚಿದ ಗಾಯ ಮತ್ತು ಇತರೆ ಭಾರಿ ಮತ್ತು ಸಾದಾಗಾಯಗಳಾಗಿರುವದು ಕಂಡು ಬಂತು ಸದರಿ ಅಪಘಾತದಿಂದ ನನ್ನ ಮಗ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ನನ್ನ ಮಗನ ಮೋಟಾರ ಸೈಕಲಗೆ ಅಪಘಾತಪಡಿಸಿದ ಟಾಟಾ ಸುಮೋ ಚಾಲಕನು ಟಾಟಾ ಸುಮೋವನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅದರ ನಂಬರ ನೋಡಲಾಗಿ ಕೆ,ಎ-32 ಎನ್-3717 ಅಂತ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ ನಂ 189/2019 ಕಲಂ 279 304 (ಎ) ಐಪಿಸಿ ಮತ್ತು 187  ಐ.ಎಮ್.ವಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟೆಂಪೂ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ:14-11-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ಮಣ್ಣೂರ ಗ್ರಾಮದ ಭಿಮಾ ನದಿಯಿಂದ ಟೆಂಪೊದಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಕರಜಗಿ ಗ್ರಾಮದ ಕಡೆ ಬರುತ್ತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂಂರ ಗ್ರಾಮಕ್ಕೆ ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಶಿವೂರ ಕ್ರಾಸ್ ಹತ್ತೀರ ಹೋಗುತ್ತಿರುವಾಗ ಎದುರುಗಡೆಯಿಂದ ಒಂದು ಟೆಂಪೊ ಬಂದಿದ್ದು  ನಿಲ್ಲಿಸಲು ಸೂಚನೆ ಕೊಟ್ಟಾಗ ಅದರ ಚಾಲಕನು ನಮ್ಮನ್ನು ನೋಡಿ ಟೆಂಪೊ ನಿಲ್ಲಿಸಿ ಓಡಿ ಹೋದನು ನಾವು ಸದರಿಯವನನ್ನು ಹಿಡಿಯಲು ಬೆನ್ನು ಹತ್ತೀದರು ಸಿಕ್ಕಿರುವದಿಲ್ಲ ಆಗ ನಾವು ಪಂಚರ ಸಮಕ್ಷಮ ಸದರಿ ಟೆಂಪೊ ಚೆಕ್ಕ ಮಾಡಲು 1) ಟಾಟಾ ಕಂಪನಿಯ ಟೆಂಪೊ ಇದ್ದು ಅದರ ನೊಂದಣಿ ಸಂಖ್ಯೆ ಕೆ,ಎ-37 4248 ಅಂತ ಬರೆದಿದ್ದು ಇರುತ್ತದೆ.ಸದರಿ ಟೆಂಪೊದಲ್ಲಿ ಮರಳು ತುಂಬಿದ್ದು ಇತ್ತು ಸದರಿ ಟೆಂಪೊ ಅ.ಕಿ 2,00,000/-ರೂ  ಇರಬಹುದು ಮತ್ತು ಅದರಲ್ಲಿ ತುಂಬಿದ ಮರಳಿನ ಅ.ಕಿ 3.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟೆಂಪೊವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆಯ ಅಫರಾಧ ಸಂ 188/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಗಡ್ಡೆಪ್ಪ ತಂದೆ ಧರೆಪ್ಪ ಕುಂಬಾರ ಸಾ: ಮಣೂರ ರವರು ದಿನಾಂಕ 13-11-2019 ರಂದು ಎಂದಿನಂತೆ ಒಕ್ಕಲುತನದ ಕೆಲಸ ಮಾಡಲು ನಮ್ಮ ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ನೀರು ತರಲು ನಮ್ಮ ಮನೆಯ ಹತ್ತಿರ ಇರುವ ನಳಕ್ಕೆ ಹೋದಾಗ ನನ್ನ ತಮ್ಮನ ಮಕ್ಕಳಾದ ರುದ್ರಪ್ಪ ಮಾಹಾದೇವ ಕುಂಬಾರ ಮತ್ತು ಮಲ್ಲಪ್ಪ ಮಹಾದೇವ ಕುಂಬಾರ ಇವರು ಅಲ್ಲಿಗೆ ಬಂದವರೇ ಹೊಲದ ಬಾಂದಾರಿಯ ಮೇಲಿನ ಜಾಲಿಯ ಮರದ ವಿಷಯದಲ್ಲಿ ವಿನಾ ಕಾರಣ ಜಗಳ ತಗೆದು ಆ ಗಿಡಕ್ಕೆ ನಿಮ್ಮ ಎಮ್ಮಿ ಕಟ್ಟಬೇಡಿರಿ ಭೋಸಡಿ ಮಕ್ಕಳ್ಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಏಕೆ ಬೈತಿ ಆ ಗಿಡಾ ಏನು ನಿಮ್ಮದಾ ಅಂತಾ ಕೇಳಿದಕ್ಕೆ ನಮಗೆ ಎದುರು ಮಾತನಾಡುತ್ಯಾ ಅಂತಾ ನನಗೆ ಹಿಡೆದು ನಿಲ್ಲಿಸಿ ರುದ್ರಪ್ಪಾ ಇತನು ತನ್ನ ಕೈ ಮುಷ್ಟಿ ಮಾಡಿ ಎದೆಯ ಮೇಲೆ, ಹೊಟ್ಟೆಗೆ, ಬಾಯಿಯ ದವಡೆಯಮೇಲೆ  ಗುದ್ದಿ ನೆಲಕ್ಕೆ ಕೆಡವಿದರು ಮಲ್ಲಪ್ಪ ಇತನು ತನ್ನ ಕೈಯಿಂದ ಕಪಾಳ ಮೇಲೆ, ಬೆನ್ನಿನ  ಮೇಲೆ ಹೊಡೆದು ಒಳ ಪೆಟ್ಟು ಆಗಿರುತ್ತದೆ ನನಗೆ ಈ ಮೋದಲೆ ಹಾಲ್ಟ ಆಪರೇಶನ್ ಆಗಿದ್ದು ನನ್ನ ಎದೆಯ ಮೇಲೆ ಮುಷ್ಟಿ ಗುದ್ದಿದ್ದರಿಂದ ನಾನು ನೋವನ್ನು ತಾಳದೇ ಸುಂದಾಗಿ ನೆಲಕ್ಕೆ ಬಿದ್ದಿರುತ್ತೇನೆ. ನನಗೆ ಹೊಡೆಯುತ್ತಿರುವದನ್ನು ಕಂಡು ನನ್ನ ಮಗ ಮತ್ತು ಹೆಂಡತಿ ನನಗೆ ಹೊಡೆಯುತ್ತಿದ್ದಾಗ ಏಕೆ ಹೊಡೆಯುತ್ತಿದ್ದಿರಿ ಅಂತಾ ಹೇಳಿದಕ್ಕೆ ನಿನಗೆ ಹೊಡೆಯುತ್ತೇನೆ ಸುಳಿ ಮಗನೇ ಅಂತಾ ಕುತ್ತಿಗೆ ಹಿಡೆದು ಒತ್ತಿ ನಿನಗ ಖಲಾಸ ಮಾಡುತ್ತೇನೆ ಮಗನ ಅಂತಾ ಕುತ್ತಿಗೆ ಒತ್ತಿ ಹಿಡೆದು ಕುತ್ತಿಗೆಗೆ ತರಚಿದ ರಕ್ತಗಾಯವಾಗಿದ್ದು ನನ್ನ ಹೆಂಡತಿಗೆ ನುಗಿಸಿದ್ದರಿಂದ ಕಲ್ಲಿನ ಮೇಲೆ ಬೀಳಿಸಿದ್ದರಿಂದ ಮೋಣಕಾಲು ಮತ್ತು ಬಲಗೈಗೆ ತರಚಿದ ಗಾಯವಾಗಿರುತ್ತದೆ. ಈ ರೀತಿಯಾಗಿ ನಮಗೆ ಹೊಡೆ ಬಡೆ ಮಾಡುತ್ತಿದ್ದಾಗ ನಾವು ಚಿರಾಡುವುದು ಕೇಳಿ ನಮ್ಮ ಪಕ್ಕದ ಮನೆಯವರು ಬಂದು ಜಗಳವನ್ನು ಬಿಡಿಸಿರುತ್ತಾರೆ ನಮಗೆ ಹೊಡೆ ಬಡೆ ಮಾಡಿ ಹೋಗುವಾಗ ಇವರು ಬಂದು ಜಗಳ ಬಿಡಿಸಿದ್ದರಿಂದ ಉಳದಿರಿ ಮಕ್ಕಳ್ಯಾ ಇನ್ನೊಂದು ಸಲ ಸಿಕ್ಕಾಗ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ ನಂ  190/2019 ಕಲಂ 341, 323, 504, 506 ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಡಿ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ಕಾಶಿನಾಥ ಜವಳಿ ಸಾ:ಕನಗನಹಳ್ಳಿ ರವರ ಗಂಡನು ಖಾಸಗಿ ನೌಕರಿ ಮಾಡಿಕೊಂಡಿದ್ದು ನನ್ನ ಗಂಡನ ಊರು ಜೇವರ್ಗಿ ತಾಲೂಕಿನ ಜವಳಗಿ ಗ್ರಾಮವಿದ್ದು, ನನ್ನ ತವರು ಮನೆ ಕನಗನಹಳ್ಳಿ ಗ್ರಾಮವಿದ್ದು ಮದುವೆ ಆದಾಗಿನಿಂದ ನಾನು ನನ್ನ ಗಂಡ ಕನಗನಹಳ್ಳಿ ಗ್ರಾಮದಲ್ಲಿ ವಾಸವಾಗಿರುತ್ತೆವೆ. ನನ್ನ ಗಂಡನಿಗೆ 04 ಜನ ಅಣ್ಣ ತಮ್ಮಂದಿರು ಇದ್ದು ಎಲ್ಲರೂ ಬೇರೆಯಾಗಿರುತ್ತೆವೆ. 2009 ನೇ ಸಾಲಿನಲ್ಲಿ ನಮ್ಮ ತಂದೆಯವರು ಸನ್ನತಿ ಸೀಮಾಂತರದಲ್ಲಿರುವ ಹೊಲ ಸರ್ವೆ ನಂಬರ 117/3 ರಲ್ಲಿ 03 ಎಕರೆ 39 ಗುಂಟೆ ಜಮೀನು ಮಾರಾಟ ಮಾಡುತ್ತಿದ್ದಾಗ ಅವರ ಹೊಲವನ್ನು ನಾವೇ ಖರಿದಿ ಮಾಡಿರುತ್ತೆವೆ. ಸದರಿ ಹೊಲದ ಪಾಣಿ ಪತ್ರಿಕೆ ನನ್ನ ಹೆಸರಿನಲ್ಲಿ ಇರುತ್ತವೆ. ನಂತರ 2016 ನೇ ಸಾಲಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಮ್ಮ ಪೂರ್ತಿ ಹೊಲವನ್ನು ಸರ್ಕಾರ ಸ್ವಾಧಿನ ಪಡಿಸಿಕೊಂಡು ಅದಕ್ಕೆ ಒಟ್ಟು 25 ಲಕ್ಷ ರೂಪಾಯಿ ಮಂಜೂರು ಮಾಡಿದ್ದು ಅದಕ್ಕೆ ಸಂಬಂಧಪಟ್ಟ ದಾಖಲಾತಿಯನ್ನು ತಯ್ಯಾರಿಸಿ ಬಿ ಗುಡಿಯಲ್ಲಿರುವ SLO ಆಫೀಸಗೆ ಸಲ್ಲಿಸಿದ್ದು ನಂತರ ಒಟ್ಟು ಹಣ 25 ಲಕ್ಷ ರೂಪಾಯಿ ಮಂಜೂರು ಆಗಿದ್ದು ಹಣವನ್ನು ನಾವು ಪಡೆಯಬೇಕೆನ್ನುವಷ್ಟರಲ್ಲಿ ನಮ್ಮ ಭಾವ ಕೆಂಚಪ್ಪ ಇವರ 2 ನೇ ಹೆಂಡತಿಯಾದ ವಿಜಯಲಕ್ಷ್ಮೀ ಇವಳು ಸಂಬಂಧಪಟ್ಟ ಇಲಾಖೆಯಲ್ಲಿ ತಕರಾರು ಅರ್ಜಿಯನ್ನು ಸಲ್ಲಿಸಿದಳು. ನಂತರ ಅಧಿಕಾರಿಗಳು ನಿಮ್ಮ ನಿಮ್ಮಲ್ಲಿಯ ಸಮಸ್ಯೆಯನ್ನು ಬಗೆಹರಿಸಿಕೊಂಡು ಬಂದು ಅವರ ಅರ್ಜಿಯನ್ನು ವಾಪಸ್ಸು ತೆಗೆದುಕೊಂಡರೆ ನಾವು ಹಣ ನಿಮಗೆ ಮಂಜೂರು ಮಾಡುತ್ತೆವೆ ಅಂತಾ ಹೇಳಿದರು. ವಿಷಯದಲ್ಲಿ ವಿಜಯಲಕ್ಷ್ಮೀ ಇವಳಿಗೆ ವಿಚಾರಿಸಿದರೆ ನನಗೂ ಅದರಲ್ಲಿ ಪಾಲು ಕೊಡು ಅಂತಾ ತಕರಾರು ಮಾಡುತ್ತ ಬಂದಿದ್ದು ಅಲ್ಲದೇ ಸದರಿ ಹೊಲವು ಪಿತ್ರಾರ್ಜಿದ ಆಸ್ತಿ ಅಲ್ಲದೇ ನಾವು ಸ್ವಂತ ಖರೀದಿ ಮಾಡಿರುತ್ತೆವೆ ಅಂತಾ ಹೇಳಿದರು ಸಹ ತಕರಾರು ಮಾಡುತ್ತ ಬಂದಿದ್ದು ಅಲ್ಲದೇ ಅವಳಿಗೆ ಅವಳ ತಮ್ಮ ಬಸವರಾಜ ತಂದೆ ಮುದಿಗೌಡ ಸಾ:ಭಂಕೂರ, ಬಸವರಾಜ ತಂದೆ ಚಂದ್ರಶೇಖರ ಪೊಲೀಸ ಪಾಟೀಲ ಮು:ಕನಗನಹಳ್ಳಿ, ರವಿ ಕುಮಾರ ಮು:ಭಂಕೂರ ರವರು ಅವಳಿಗೆ ಆಸ್ತಿಯಲ್ಲಿ ಪಾಲು ಬೀಡಬೇಡಾ ನಾವು ನಿನ್ನ ಹಿಂದೆ ಇದ್ದೆವೆ ಅಂತಾ ಪ್ರಚೋದನೆ ಮಾಡುತ್ತ ಬಂದಿರುತ್ತಾರೆ. ಅಲ್ಲದೇ ವಿಷಯದಲ್ಲಿ ವಿನಾಕಾರಣ ಜೇರ್ವಗಿ ನ್ಯಾಯಾಲಯದಲ್ಲಿ ಖಾಸಗಿ ದೂರು ಓಎಸ್ ನಂಬರ 126/16 ನೇದ್ದನ್ನು ನೀಡಿದ್ದು ಇರುತ್ತದೆ. ಹಣದ ವಿಷಯದಲ್ಲಿ ನಾನು ಮತ್ತು ನನ್ನ ಗಂಡ ಅನೇಕ ಸಲ ವಿಜಯಲಕ್ಷ್ಮೀ ಇವಳಿಗೆ ಸಮಜಾಯಿಸಿ ಹೇಳಿದ್ದು ಅಲ್ಲದೇ ಅದರಲ್ಲಿ ಬೇಕಾದರೆ ಸ್ವಲ್ಪ ನಿನಗೆ ದುಡ್ಡು ಕೊಡುತ್ತೆವೆ ಅಂತಾ ಹೇಳಿದರು ಸಹ ನನಗೆ ವಿನಾಕಾರಣ ಸತಾಯಿಸುತ್ತ ಬಂದು ನನಗೆ ಸರ್ಕಾರದಿಂದ ಸೀಗಬೇಕಾದ 25 ಲಕ್ಷ ರೂಪಾಯಿ ಹಣವನ್ನು ಬರದಂತೆ ತಡೆ ಮಾಡಿರುತ್ತಾಳೆ.ಗ್ರಾಮದ ಕೆಲವು ಹಿರಿಯರು ಸಹ ಹೇಳಿದರು ಸಹ ಕೇಳದೆ ಬಸವರಾಜ, ರವಿಕುಮಾರ ಬಸವರಾಜ ತಂದೆ ಚಂದ್ರಶೇಖರ ರವರು ಕುಮ್ಮಕ್ಕು ನೀಡಿ ಹಣ ಬಿಡುಗಡೆ  ಮಾಡಲು ಒಪ್ಪಬೇಡಾ ಅಂತಾ ಹೇಳುತ್ತ ಬಂದಿರುತ್ತಾರೆ. ನಂತರ ದಿನಾಂಕ 22/09/2019 ರಂದು ಬೆಳಗ್ಗೆ 11-00 ಗಂಟೆ ಸುಮಾರು ನಾನು ಮನೆಯಲ್ಲಿದ್ದಾಗ ಜಯಲಕ್ಷ್ಮೀ ಗಂಡ ಕೆಂಚಪ್ಪ , ಬಸವರಾಜ ತಂದೆ ಚಂದ್ರಶೇಖರ, ರವಿಕುಮಾರ, ಬಸವರಾಜ ತಂದೆ ಮುದಿಗೌಡ ರವರು ಕೂಡಿಕೊಂಡು ನನ್ನ ಮನೆಯ ಹತ್ತಿರ ಬಂದು ವಿಜಯಲಕ್ಷ್ಮೀ ಇವಳು ನನಗೆ ಮನೆಯ ಹೊರಗೆ ಕರೆದಾಗ ನಾನು ಹೊರಗಡೆ ಬಂದು ಯಾಕೇ ಅಂತಾ ವಿಚಾರಿಸಿದ್ದಕ್ಕೆ ‘’ ರಂಡಿ ನೀನು ಹಣ ಕೊಡಿಸು ಅಂತಾ ಬೇರೆಯವರ ಎದರು ಹೇಳುತ್ತಿದ್ದಿ ಅಂತೆ ನಾನು ನಿನಗೆ ಬರುವ ಹಣವನ್ನು ಬಿಡುಗಡೆ ಮಾಡಲು ಬಿಡುವದಿಲ್ಲ ಅಂತಾ ಬೈಯುತ್ತಿದ್ದಾಗ ನಾನು ಯಾಕೇ ವಿನಾಕಾರಣ ನನ್ನೊಂದಿಗೆ ತಕರಾರು ಮಾಡುತ್ತಿ ಅಂತಾ ಕೇಳುತ್ತಿದ್ದಂತೆ ಬಸವರಾಜ ತಂದೆ ಚಂದ್ರಶೇಖರ, ಬಸವರಾಜ ತಂದೆ ಮುದಿಗೌಡ ರವರು ‘’ ರಂಡಿ ನಿನಗೆ ಹಣ ಬರಲು ಬಿಡುವದಿಲ್ಲ ನೀನು ಜೀವಂತ ಕೊರಗಿ ಕೊರಗಿ ಸಾಯಬೇಕು ಅಂತಾ ಅನ್ನುತ್ತಿದ್ದು ಆಗ ನಮ್ಮ ಮನೆಯಲ್ಲಿದ್ದ ತಾಯಿ ಮತ್ತು ದೊಡ್ಡಪ್ಪ ತಂದೆ ಮಲ್ಲಪ್ಪ ಹೋಳಿ , ಚಂದ್ರಶೇಖರ ತಂದೆ ದೇವಿಂದ್ರಪ್ಪ ಬಮಚಟ್ನಳ್ಳಿ ರವರು ಬಂದು ಜಗಳ ಬಿಡಿಸಿದರು. ಆಗ ನಾನು ಪೊಲೀಸ ಸ್ಟೇಷನಗೆ ಹೋಗುತ್ತೆನೆ ಅಂತಾ ಹೊರಟರೆ ವಿಜಯಲಕ್ಷ್ಮೀ ಇವಳು ನನಗೆ ತಡೆದು ನಿಲ್ಲಿಸಿ ಕೈಯಿಂದ ಹೊಡೆ ಬಡೆ ಮಾಡಿರುತ್ತಾಳೆ. ರವಿಕುಮಾರ ಇತನು ಇವಳಿಗೆ ಖಲಾಸ ಮಾಡಿ ಬೀಡು ನಾನು ಬಂದಿದ್ದು ನೋಡಿಕೊಳ್ಳುತ್ತೆನೆ ಅಂತಾ ವಿಜಯಲಕ್ಷ್ಮೀ ಇವಳಿಗೆ ಪ್ರಚೋದನೆ ನೀಡಿದ್ದು ಇರುತ್ತದೆ. ದಿನಾಂಕ 13/11/2019 ರಂದು  ಬೆಳಗ್ಗೆ 09-00 ಸುಮಾರು ನಾವು ಮನೆಯಲ್ಲಿದ್ದಾಗ ವಿಜಯಲಕ್ಷ್ಮೀ ಮತ್ತು ಬಸವರಾಜ ತಂದೆ ಚಂದ್ರಶೇಖರ ಪೊಲೀಸ ಪಾಟೀಲ ಇವರು ನಮ್ಮ ಮನೆಯ ಹತ್ತಿರ ಬಂದು ‘’ ಮಕ್ಕಳೇ ನೀವು ನಾವು ಹೇಳಿದ ಹಾಗೆ ಕೇಳದೆ ಇದ್ದರೆ ನಿಮಗೆ ಊರು ಬಿಡಿಸಿ ಓಡಿಸಿ ಹಾಕುತ್ತೆವೆ’’ ಅಂತಾ ಬೆದರಿಕೆ ಹಾಕುತ್ತ ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.