POLICE BHAVAN KALABURAGI

POLICE BHAVAN KALABURAGI

30 January 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
:
ಶ್ರೀಮತಿ ಮಹಾದೇವಿ ಗಂಡ ಸಿದ್ದಣ್ಣಾ ಶಹಾಬಾದ ಸಾ:; ಹನುಮಾನ ದೇವಸ್ಥಾನದ ಹತ್ತಿರ ಜಗತ ಗುಲಬರ್ಗಾ ರವರು ನಾನು ದಿನಾಂಕ: 29-01-2012 ರಂದು 9=30 ಪಿ.ಎಮ್.ಕ್ಕೆ ಪಟೇಲ್ ಸರ್ಕಲದಿಂದ ಜಗತ ಸರ್ಕಲ ಮೇನ ರೋಡಿನಲ್ಲಿ ಬರುವ ಅನ್ನಪೂರ್ಣ ಆಸ್ಪತ್ರೆಯ ಕ್ರಾಸ್ ಹತ್ತಿರ ರೋಡಿನ ಮೇಲೆ ಬರುತ್ತಿರುವಾಗ ಮೋಟಾರ ಸೈಕಲ ನಂ:ಕೆಎ 38 ಹೆಚ್ 521 ನೇದ್ದರ ಚಾಲಕ ಜಗತ ಸರ್ಕಲ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದಾಗ ನನಗೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 14/2012 ಕಲಂ: 279,337 ಐ.ಪಿ.ಸಿ ಸಂ 187 ಐ.ದಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀರಾಜೇಶ ತಂದೆ ಚಂದ್ರಶೇಖರ ಸಿಂಗೆ ಸಾ:ಮನೆ ನಂ 11-9543/1 ಅಶೋಕ ನಗರ ಗುಲಬರ್ಗಾರವರು ನಾನು ದಿನಾಂಕ 30-01-2012 ರಂದು 9 ಗಂಟೆ ಸುಮಾರಿಗೆ ಆರ್.ಪಿ ಸರ್ಕಲದಿಂದ ಕೇಂದ್ರ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಬರುವ ಸಂಗಮೇಶ್ವರ ಆಸ್ಪತ್ರೆ ಎದುರು ರೋಡಿನ ಮೇಲೆ ಹೊರಟಾಗ ಮೋಟಾರ ಸೈಕಲ ನಂ ಕೆಎ-02 ಹೆಚ್ ಇ 3609 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 15/2012 ಕಲಂ: 279,337 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:
ಸುಲೇಪೇಟ ಠಾಣೆ
:ಶ್ರೀ ರಾಜಪ್ಪಾ ತಂದೆ ಮರೆಪ್ಪಾ ತಳವಾರ ಸಾ|| ತೇಗಲತಿಪ್ಪಿ ರವರು ನಾನು ದಿನಾಂಕಃ 30.01.2012 ರಂದು 11.30 ಎ.ಎಮ್ಮ.ಕ್ಕೆ ಮುಂಜಾನೆ ಕೆಲಸದ ನಿಮಿತ್ಯ ಗಡೀಕೇಶ್ವರ ಪೋಸ್ಟ ಆಫೀಸಗೆ ಹೋಗಿ ವಾಪಸ್ ತೇಗಲತಿಪ್ಪಿಗೆ ಬರುವ ಕುರಿತು ಗಡಿಕೇಶ್ವರ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಬರುತ್ತಿರುವಾಗ ಮುಂಜಾನೆ 8.30 ಗಂಟೆಯ ಸುಮಾರಿಗೆ ಗ್ರಾಮದ ರಮೇಶ ತಂದೆ ಶರಣಪ್ಪಾ ಭೈಲ ಮತ್ತು ಇತರರು ಸೇರಿ ಕೊಂಡು ನನಗೆ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 6/2012 ಕಲಂ 323,324,341,504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:
ಶ್ರೀ ಹಣಮಂತ ತಂದೆ ಲಕ್ಷ್ಮಣ ಮಾನೆ ಸಾ:ಭೀಮಶಪ್ಪ ನಗರ ಶಾಹಾಬಾದ ರವರು ನನ್ನ ತಮ್ಮ ವೇಂಕಟ @ ವೇಂಕಟಿ ಇತನು ದಿನಾಂಕ 28/1/2012 ರಂದು ಸಾಯಂಕಾಲ 16:00 ಗಂಟೆಯ ಸುಮಾರಿಗೆ ಕೂಲಿ ಕೆಲಸಕ್ಕೆ ಶಾಹಾಪೂರಕ್ಕೆ ಹೋಗಿ ಬರುತ್ತೆನೆ ಎಂದು ಮನೆಯಲ್ಲಿ ನನಗೆ ಮತ್ತು ನನ್ನ ತಾಯಿಗೆ ಹೇಳಿ ಹೋಗಿರುತ್ತಾನೆ. ದಿನಾಂಕ 29/1/2012 ರಂದು ಸಾಯಂಕಾಲ 16:30 ಗಂಟೆಯ ಸುಮಾರಿಗೆ ಫರಹತಾಬಾದ ಪೊಲೀಸರು ದೂರವಾಣಿ ಮುಖಾಂತರ ವಿಷಯ ತಿಳಿಸಿದೇನೆಂದರೆ. ಮದ್ಯಾಹ್ನ 14:30 ಗಂಟೆಯ ಸುಮಾರಿಗೆ ಭೀಮಾ ಬ್ರೀಡ್ಜ, ಹಸನಾಪೂರ ಕ್ರಾಸ ಮದ್ಯೆ ರಾಷ್ಟ್ರೀಯ ಹೆದ್ದಾರಿ ಮೇಲೆ ಒಬ್ಬ ಮನುಷ್ಯನು ಮೃತ್ತ ಪಟ್ಟಿದ್ದಾನೆ ಅವನ ಜೇಬಿನಲ್ಲಿ ಡೈರಿನಲ್ಲಿ ನಿಮ್ಮ ಮೊಬೈಲ ನಂಬರ ಇದ್ದು ಕೂಡಲೆ ಮೃತ್ತ ದೇಹವನ್ನು ಗುರುತಿಸಲು ಹೇಳಿದ ಮೇರೆಗೆ ನಾನು ಮತ್ತು ನನ್ನ ತಾಯಿ ನನ್ನ ಹೆಂಡತಿ ನಮ್ಮೂರಿನವರಾದ ನಾಗರಾಜ ಧೋತರೆ. ಭಾಲಪ್ಪಾ ಮರತೂರ ಇವರೊಂದಿಗೆ ಆಸ್ಪತ್ರೆಗೆ ಬಂದು ಮೃತ್ತ ದೇಹವನ್ನು ನೋಡಲಾಗಿ ನನ್ನ ತಮ್ಮ ವೇಂಕಟ @ ವೇಂಕಟಿಯಾಗಿದ್ದು ಆತನು ರಸ್ತೆಯ ಎಡಭಾಗದಲ್ಲಿ ಹಸನಾಪೂರ ಕ್ರಾಸ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಒಂದು ವಾಹನ ಚಾಲಕ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ತಮ್ಮನಿಗೆ ಡಿಕ್ಕಿ ಪಡಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ್ತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 12/2012 ಕಲಂ 279 304(ಎ) ಐ,ಪಿ.ಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ 29-01-12 ರಂದು ಮಧ್ಯಾಹ್ನ 4-30 ಗಂಟೆ ಸುಮಾರಿಗೆ ಸಿಂದಗಿ (ಬಿ) ಸೀಮೆಯಲ್ಲಿ ಬರುವ ಹಣಮಂತ ಲೊಡ್ಡನ ಹೊಲದಲ್ಲಿ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಂಚರ ಸಮಕ್ಷಮ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಹೋಗಿ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಶ್ರೀ ಹಣಮಂತ ತಂದೆ ಬಸವಣಪ್ಪ ಲೊಡ್ಡನ ಸಂಗಡ 3 ಜನರು ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 6140 ರೂ. ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 29/2012 ಕಲಂ 87 ಕೆ.ಪಿ.ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ