POLICE BHAVAN KALABURAGI

POLICE BHAVAN KALABURAGI

15 May 2014

Gulbarga District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ನೀಲಕಂಠ ತಂದೆ ಚನ್ನಬಸಪ್ಪ ಮಾಲೀಪಾಟೀಲ ಸಾ: ಯಲಕಪಳ್ಳಿ ತಾ: ಚಿಂಚೋಳಿ ಜಿಲ್ಲಾ:  ಗುಲಬರ್ಗಾ ಇವರು ದಿನಾಂಕ 15-05-2014 ರಂದು ಬೆಳಿಗ್ಗೆ 9-15 ಗಂಟೆ ಸುಮಾರಿಗೆ ಎಸ್.ವಿ.ಪಿ ಸರ್ಕಲದಿಂದ ಪಿ.ಡಿ.ಎ ಕಾಲೇಜ ರೋಡಿನಲ್ಲಿ ಬರುವ ಮಹಾರಾಜ ಹೋಟಲ ಕಡೆಗೆ ನಡೆದುಕೊಂಡು ಹೋಗಿ ಅದರ ಎದುರುಗಡೆ ಇರುವ ಗಲ್ಲಿಯಲ್ಲಿ ಏಕಿ ಮಾಡಿ ವಾಪಸ್ಸ ಮಹಾರಾಜ ಹೋಟಲ ಕಡೆಗೆ ನಡೆದುಕೊಂಡು ರೋಡ ದಾಟುತ್ತಿದ್ದಾಗ ಪಿ,ಡಿ,ಎ ಕಾಲೇಜ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಎಕ್ಸ-7259 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಗಂಗಾಧರ ತಂದೆ ಮೊನಪ್ಪ ಬಡಿಗೇರ ಸಾ:ಹುಲ್ಲೂರ ಹಾ:ವ:ಜೇವರ್ಗಿ ಜಿ:ಗುಲಬರ್ಗಾ ರವರ ಅಣ್ಣನಾದ ರಮೇಶ ಇತನು ಅಳಿಯನ ಬಟ್ಟೆ ಖರಿದಿಸಲು ಮತ್ತು ಲಗ್ನ ಪತ್ರಗಳನ್ನು ತೆಗೆದುಕೊಂಡು ಬರುವ ಸಲುವಾಗಿ ತನ್ನ ಮೋಟರ್‌ ಸೈಕಲ್‌ ನಂ. ಕೆಎ 32 ಇಸಿ-9217 ನೇದ್ದನ್ನು ತೆಗೆದುಕೊಂಡು ನಿನ್ನೆ ದಿನಾಂಕ:14/05/2014 ರಂದು ಬೆಳಗ್ಗೆ 10:30 ಗಂಟೆಯ ಸುಮಾರಿಗೆ ನಮ್ಮ ಅತ್ತಿಗೆ ಧಾನಮ್ಮ ಮತ್ತು ನಮಗೆ ಹೇಳಿ ಗುಲಬರ್ಗಾಕ್ಕೆ ಹೋಗಿದ್ದು ದಿನಾಂಕ: 14/05/2014 ರಂದು ರಾತ್ರಿ 11:15 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿಕೊಂಡಾಗ ನಮ್ಮಣ್ಣ ರಮೇಶ ಇತನ ಮೋಬೈಲ್‌ ಫೋನ್‌ದಿಂದ ಯಾರೋ ನನಗೆ ಫೊನ್ ಮಾಡಿ ತಿಳಿಸಿದ್ದೆನಂದರೆ, ಈಗ ರಾತ್ರಿ 11 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಬೀಮಾ ಬ್ರೀಡ್ಜ ಸಮೀಪ ಹಸನಾಪೂರ ಕ್ರಾಸ್‌ ಹತ್ತಿರ ಮೋಟರ್‌ ಸೈಕಲ್‌ ನಂ. ಕೆಎ 32 ಇಸಿ-9217 ನೇದ್ದರ ಮೇಲೆ ಗುಲಬರ್ಗಾ ಕಡೆಯಿಂದ ಜೇವರ್ಗಿ ಹೊರಟಿದ್ದ ಈ ಮೋಬೈಲ್‌ನ ವ್ಯಕ್ತಿ ರೋಡಿನ ಎಡಬಾಗದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಒಬ್ಬ ಲಾರಿ ನಂ ಕೆ.ಎ- 25 ಎ-4398 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮೊಟರ್‌ ಸೈಕಲ್‌ ನಂ ಕೆಎ 32 ಇಸಿ-9217 ನೇದ್ದಕ್ಕೆ ಡಿಕ್ಕಿ ಪಡಿಸಿ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ. ಇದರಿಂದ ಮೊಟರ್‌ ಸೈಕಲ್‌ ಮೇಲೆ ಇದ್ದ ವ್ಯಕ್ತಿಯ ತಲೆಗೆ, ಕಾಲಿಗೆ, ತೊಡೆಗೆ, ಕೈಗಳಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಸುಲಿಗೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಗೌಡಪ್ಪಾಗೌಡ ತಂದೆ ಶಂಕರಗೌಡ ಪಾಟೀಲ ಸಾ: ಪ್ಲಾಟ ನಂ. 6 ಗೊದುತಾಯಿ ನಗರ ಗುಲಬರ್ಗಾ ರವರು ದಿನಾಂಕ 14-05-2014 ರಂದು ರಾತ್ರಿ 11 ಗಂಟೆಗೆ ಮನೆಯಲ್ಲಿ ಊಟ ಮಾಡಿಕೊಂಡು ನಾನು ಮತ್ತು ಮಲ್ಲಿಕಾರ್ಜುನ ಪಾಟೀಲ ಇಬ್ಬರು ಮನೆ ಮುಂದೆ  ವಾಕಿಂಗ ಮಾಡುತ್ತಾ ಇದ್ದಾಗ ಟೆಂಗಳಿ ಮನೆಯ ಹತ್ತಿರ  ರಸ್ತೆ ಟರ್ನಿಂಗದಲ್ಲಿ  ಒಬ್ಬ ಮೊಟರ ಸೈಕಲ ಸವಾರನು  ಬಂದನವೇ ಒಮ್ಮೇಲೆ  ನನ್ನ ಕೊರಳಲ್ಲಿ ಕೈ ಹಾಕಿ  ಬಂಗಾರದ ಲಾಕೇಟ ಕಸಿದುಕೊಂಡು ಹೊಗಿರುತ್ತಾನೆ. ಎರಡು ತೊಲೆ ಬಂಗಾರದ ಲಾಕೇಟ ಇತ್ತು ಅದರಲ್ಲಿ  ಅರ್ಧ ಭಾಗ ಮತ್ತು ಪದಕ ಉಳಿದಿದ್ದು, ಅವನಿಗೆ ಬೆನ್ನು ಹತ್ತಿದ್ದರು. ಸಿಕ್ಕಿರುವುದಿಲ್ಲಾ. ಕತ್ತಲಲ್ಲಿ ಮೊಟರ ಸೈಕಲ ನಂಬರ ಕಾಣಿಸಿರುವುದಿಲ್ಲಾ. ಒಬ್ಬ ಮೊಟರ ಸೈಕಲ ಸವಾರನು ಅರ್ಧ  ಬಂಗಾರದ ಚೈನ ಕಸಿದುಕೊಂಡು ಹೊಗಿದ್ದು  ಅರ್ಧ ಚೈನು ಒಂದು ತೊಲೆ ಇರಬಹುದು. ಅದರ ಕಿಮ್ಮತ್ತು 25,000/- ರೂಪಾಯಿ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಹೀನಾ ಕೌಸರ ಗಂಡ ಖಾಸಿಂ ಪಟೇಲ್ ಗಾಲಿಬ ಕಾಲೋನಿ ಎಮ್.ಎಸ್,ಕೆ.ಮಿಲ್ ಗುಲಬರ್ಗಾ ಇವರನ್ನು ದಿನಾಂಕ:21.04.2013 ರಂದು ಖಮರ ಕಾಲೋನಿಯ ಮಹ್ಮದ ರಫಿಕ ಚೌಕ  ಗುಲಬರ್ಗಾದ ಶ್ರೀ ಖಾಸಿಂ ಪಟೇಲ್ ತಂದೆ ನಜೀರ ಅಹ್ಮದ ಇವರ ಜೊತೆ ನಮ್ಮ  ಧಾರ್ಮಿಕ ಸಂಪ್ರದಾಯ ಪ್ರಕಾರ ಮದುವೆಯಾಗಿದ್ದು ನನ್ನ ಮದುವೆಯಲ್ಲಿ ನನ್ನ ಗಂಡನಿಗೆ 25,000/- ರೂಪಾಯಿ ಮತ್ತು ಎರಡುವರೆ ತೋಲಿ (25) ಗ್ರಾಮ್ ಬಂಗಾರ ಹಾಗೂ ಒಂದು  ಹೀರೋ ಹೊಂಡಾ ಮೋಟಾರ ಸೈಕಲ್ ಅಲ್ಲದೇ ಫರ್ನಿಚರ ಮತ್ತು ಮನೆ ಬಳಿಕೆಯ ಸಾಕಷ್ಟು  ಪಾತ್ರೆಗಳನ್ನು ವರದಕ್ಷಿಣೆಯಾಗಿ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ.ನನಗೆ ಮದುವೆಯಾದ ನಂತರ ಕೇವಲ ಒಂದು ವಾರ  ಮಾತ್ರ ಸರಿಯಾಗಿ ನೋಡಿಕೊಂಡಿದ್ದು ನಂತರ ನನ್ನ ಪತಿಯವರು ಡಿಪ್ಲೋಮಾ ಸಿವಿಲ್ ಮಾಡಿದ್ದು ಇವರ ಕೆಲಸಕ್ಕೆ 5,00,00/-ರೂ.  ಗಳ ಅವಶ್ಯಕತೆ ಇದೆ. ನೀನು 5,00,00/-  ರೂಪಾಯಿಗಳನ್ನು ತವರು ಮನೆಯಿಂದ ತಂದು ಕೊಡು ನಮ್ಮ ಮಗ ಗುಲಬರ್ಗಾದಲ್ಲಿಯೇ ಇದ್ದುಕೊಂಡು ವ್ಯಾಪಾರ ಮಾಡುತ್ತಾನೆ, ಅಂತಾ ದಿನಾಲು ನನ್ನ ಪತಿಯವರಾದ ಖಾಸಿಂ ಪಟೇಲ್ , ಮಾವನಾದ ನಜೀರ ಪಟೇಲ್ , ಅನಸರ ಮೌಲಾನ, ಲೈಕ, ಅತ್ತೆಯಾದ  ರಾಬೀಯಾ , ಮೈದುನ ವಸೀಮ, ನಾದನಿಯವರಾದ ವಾಹೆದಾ, ಖಾಲೇದಾ, ಸಾಜೇದಾ ಅಲ್ಲದೇ ನನ್ನ ಮಾವನ ತಮ್ಮನಾದ ನಸೀರ ಹಾಗೂ ನನ್ನ ಗಂಡನ ಅತ್ತೆಯಾದ  ನಸೀಮಾ ಬೇಗಂ ಇವರು ನನಗೆ ದಿನಾಲು ಅವಾಚ್ಯ ಶಬ್ದಗಳಿಂದ ಬೈಯುವುದು ಹಾಗೂ ಮಾನಸಿಕವಾಗಿ ಹಿಂಸೆ ಕೊಡುವುದರೊಂದಿಗೆ ನನಗೆ ಹೊಡೆ ಬಡೆ ಮಾಡುತ್ತಾ ಬಂದಿರುತ್ತಾರೆ.  ಸುಮಾರು 10 ತಿಂಗಳು ಹಿಂದೆ ನನಗೆ ಹೊಡೆ-ಬಡೆ ಮಾಡಿ ನನಗೆ ನನ್ನ ತವರು ಮನೆಯಿಂದ  5,00,00/-  ರೂಪಾಯಿಗಳ ತೆಗೆದುಕೊಂಡು ಬಾ ಇಲ್ಲದಿದ್ದರೆ ನಮ್ಮ ಮನೆಗೆ ಬರಬೇಡ ಅಂತಾ ನನಗೆ ನನ್ನ ತವರು ಮನೆಗೆ ಕಳುಹಿಸಿದ್ದು ನಾನು ಸುಮಾರು 10 ತಿಂಗಳಿಂದ ನನ್ನ ತವರು  ಮನೆಯಲ್ಲಿಯೇ ಇದ್ದೇನೆ  ನನಗೆ 3 ತಿಂಗಳ ಒಂದು ಹೆಣ್ಣು ಮಗು ಇರುತ್ತದೆ.    ದಿನಾಂಕ: 09.09.2013 ರಂದು ತಮ್ಮ ಮನೆಯಾದ ಮಹಾರಾಜ ಹೋಟಲ ಹತ್ತಿರ ಮಹಿಬೂಬ ನಗರಕ್ಕೆ ಕರೆದುಕೊಂಡು ಹೋಗಿ ರಾತ್ರಿ 10.00 ಗಂಟೆಗೆ ಮತ್ತೆ ನೀನು ನಿಮ್ಮ ತಂದೆಯಿಂದ  5.00.000/- ರೂಪಾಯಿಗಳು ತೆಗೆದುಕೊಂಡು  ಬಾ ಅಂದರೆ ಖಾಲಿ ಕೈಯಲ್ಲಿ ಬಂದಿರುತ್ತಿ ಅಂತಾ ಹೊಡೆ ಬಡೆ ಮಾಡಿರುತ್ತಾನೆ .ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಹೇಂದ್ರ ತಂದೆ ಸಿದ್ದಣ್ಣಾ ಸರಡಗಿ ಇವರು ಸುಮಾರು 15 ವರ್ಷಗಳಿಂದ ಬಸವೇಶ್ವರ ಆಸ್ಪತ್ರೆ ಮುಂದುಗಡೆ ಅಂಬುಲೆನ್ಸ್ ವಾಹನ ಇಟ್ಟು ಚಲಾಯಿಸಿಕೊಂಡು ಉಪಜೀವಿಸುತ್ತಿದ್ದು, ಅದರಂತೆ ಮಹ್ಮದ ನಜೀರ ಮಸುಲ್ದಾರ ಇತನು ಸುಮಾರು 8-9 ವರ್ಷಗಳಿಂದ ಬಾಡಿಗೆಯಿಂದ ಅಂಬ್ಯುಲೆನ್ಸ್ ಪಡೆದು ಡ್ರೈವರ ಕೆಲಸ ಮಾಡಿಕೊಂಡಿರುತ್ತಾನೆ. ಈಗ ಸುಮಾರು 4-5 ತಿಂಗಳ ಹಿಂದೆ ಅಂಬ್ಯುಲೆನ್ಸ್ ವಾಹನಗಳ ಚಾಲಕರ ಸಂಘಟನೆ ಮಾಡಿದ್ದು ಸದರ ಸಂಘಟನೆಯ ಕಾರ್ಯಲಯ ಬಸವೇಶ್ವರ ಆಸ್ಪತ್ರೆಯ ಆವರಣದಲ್ಲಿರುತ್ತದೆ. ಈಗ ಸುಮಾರು 5-6 ದಿವಸಗಳ ಹಿಂದೆ ಸದರಿ ನಜೀರ ಇತನು ನನ್ನ ಅಂಬುಲೆನ್ಸ್ ಪಾಳಿ ಬರುತ್ತದೆ ನೀನ್ಯಾಕೆ ಅಂಬುಲೆನ್ಸ್ ಪಾಳಿ ಹಚ್ಚಿದ್ದಿ ಅಂತಾ ತಕರಾರು ತೆಗೆದು ಅಂಬುಲೆನ್ಸ್ ಸಂಘಟನೆ ಏನು ನಿಮ್ಮಪ್ಪಂದು ಸೂಳ್ಯ ಮಗನೆ ಇದಕ್ಕೆಲ್ಲಾ ನೀನೆ ಮುಖ್ಯಸ್ಥನಂತೆ ನಡೆದುಕೊಳ್ಳುತ್ತಿದ್ದಿ ಅಂತಾ ತರಕಾರು ಮಾಡುವಾಗ ಅಂಬುಲೆನ್ಸ್ ಡ್ರೈವರು ಸಮಜಾಯಿಸಿ ಕಳುಹಿಸಿರುತ್ತಾರೆ. ಹೀಗಿದ್ದು ದಿನಾಂಕಃ 13/05/2004 ರಂದು 10:45 ಪಿ.ಎಂ. ಸುಮಾರಿಗೆ ಬಸವೇಶ್ವರ ಆಸ್ಪತ್ರೆಯ ಕ್ಯಾಜುಲಿಟಿ ಮುಂದೆ, ಸದರಿ ಮಹ್ಮದ ನಜೀರ ಮುಸುಲ್ದಾರ ಈತನು ಅಂಬ್ಯುಲೆನ್ಸ್ ಪಾಳಿಯ ವಿಷಯಕ್ಕೆ ಜಗಳ ತೆಗೆದು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಉದ್ದನೇಯ ಜಂಬ್ಯದಿಂದ ಬಲಗೈ ಮೊಳಕೈ ಹತ್ತಿರ, ಬಲ ತೊಡೆಯ ಹಿಂದೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.