POLICE BHAVAN KALABURAGI

POLICE BHAVAN KALABURAGI

03 June 2019

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 02.06.2019 ರಂದು ಮದ್ಯಾಹ್ನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಕೆಹೆಚ್ಬಿ ಕಾಲೋನಿ ಹತ್ತಿರ ಎಕ್ಸ್ ಬಿಲ್ಡಿಂಗ್ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಕೆಹೆಚ್ಬಿ ಕಾಲೋನಿ ಹತ್ತಿರ ಎಕ್ಸ್ ಬಿಲ್ಡಿಂಗ್ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ನಾವು ಎಲ್ಲರು ಜೀಪಿನಿಂದ ಕೆಳೆಗೆ ಇಳಿದು ನಡೆದುಕೊಂಡು ಹೋಗಿ ಕಂಪೌಂಡ ಮರೆಯಲ್ಲಿ ನಿಂತು ನೋಡಲು ಕೆಹೆಚ್ಬಿ ಕಾಲೋನಿ ಹತ್ತಿರ ಎಕ್ಸ್ ಬಿಲ್ಡಿಂಗ್ ಹತ್ತಿರ ಇರುವ ಖುಲ್ಲಾ ಜಾಗೆಯಲ್ಲಿ  ಸಾರ್ವಜನಿಕ ಸ್ಥಳಲ್ಲಿ 9-10 ಜನರು ಗುಂಪಾಗಿ ಕುಳಿತು ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಅವರಲ್ಲಿ ಒಬ್ಬನು ಎಲೆಗಳನ್ನು ಹಾಕಿದ್ದು, ಒಬ್ಬನು ಅಂದರಕ್ಕೆ 100 ರೂಪಾಯಿ ಮತ್ತು ಇನ್ನೂಬ್ಬನು ಬಾಹರಕ್ಕೆ 150 ರೂಪಾಯಿ ಅಂತ ಕೂಗುತ್ತಾ ಕಣದಲ್ಲಿ ಹಣ ಹಾಕುತ್ತಿದ್ದು ಸದರಿಯವರು ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು 1) ಶಿವಾನಂದ ತಂದೆ ವರಶಂಕರ ಪಾಟೀಲ ಸಾಃ ಸಂತೋಷ ಕಾಲೋನಿ ಕಲಬುರಗಿ  2) ವೈಜನಾಥ ತಂದೆ ಸೋಮನಾಥ @ ಸೋಮಶೇಖರ ಪಾಟೀಲ ಸಾಃ ಪ್ರಭುದೇವ ನಗರ ಸಂತೋಷ ಕಾಲೋನಿ ಕಲಬುರಗಿ 3) ಬಸವರಾಜ ತಂದೆ ಚನ್ನಬಸಪ್ಪ ಕೋರಳ್ಳಿ ಸಾಃ ಪ್ರಭುದೇವ ನಗರ ಡಬರಬಾದ ರೋಡ ಕಲಬುರಗಿ 4) ಅರುಣಕುಮಾರ ತಂದೆ ಶಾಂತಪ್ಪ ದೋಣಿ ಸಾಃ ಶಹಾಬಜಾರ ನಾಕ ಆಳಂದ ರೋಡ ಕಲಬುರಗಿ 5) ಶಮಸಾ ಆಲಮ್ ತಂದೆ ಖಾಜಾ ಮೈನೋದ್ದಿನ ಸಾಃ ಖಾದ್ರಿ ಚೌಕ ಹತ್ತಿರ ಕಲಬುರಗಿ 6)  ಹುಸೇನಿ ತಂದೆ ಗೌಸೋದ್ದಿನ ಪಟೇಲ ಸಾಃ ಎಮ್ಎಸ್.ಕೆ ಮೀಲ್ ಹತ್ತಿರ ಕಲಬುರಗಿ 7) ಜಗದೀಶ ತಂದೆ ಭೀಮಶ್ಯಾ ವಾಡಿ ಸಾಃ ಶಹಾಬಜಾರ ನಾಕ ಹತ್ತಿರ ಕಲಬುರಗಿ 8) ನಾಗೇಶ ತಂದೆ ಕಲ್ಯಾಣಪ್ಪ ಆಳಂಗೆ ಸಾಃ ಸಂತೋಷ ಕಾಲೋನಿ ಕಲಬುರಗಿ 9) ಪ್ರಭಾಕರ ತಂದೆ ಗುರಪ್ಪಾ ಬಾಳಿ ಸಾಃ ರಾಣೆಜ ಪೀರ ದರ್ಗಾ ರೋಡ ಕಲಬುರಗಿ  ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಒಟ್ಟು 2850/- ರೂ ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ಪಡೆದು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ದಿನಾಂಕ 02.06.2019 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಮೃತ ಸಂತೋಷ ಇತನು ಸರಡಗಿ (ಬಿ) ಗ್ರಾಮದಲ್ಲಿದ ತನ್ನ ಹೆಂಡತಿಯನ್ನು ಕರೆದುಕೊಂಡು ಬರುವ ಸಲುವಾಗಿ ಪಾಳಾ ಗ್ರಾಮದಿಂದ ಕಲಬುರಗಿ ಮುಖಾಂತರವಾಗಿ ಸರಡಗಿ (ಬಿ) ಗ್ರಾಮಕ್ಕೆ ಮೋಟಾರ ಸೈಕಲ ನಂಬರ ಕೆಎ-32/ಇಕೆ-9105 ನೇದ್ದನ್ನು ಚಲಾಯಿಸಿಕೊಂಡು ಹೋಗುವಾಗ ಕಲಬುರಗಿ ಜೇವರಗಿ  ಮುಖ್ಯ ರಸ್ತೆಯಲ್ಲಿ ಬರುವ ಜೈಲ ಹತ್ತೀರ ಬರುವ ಸಿತನೂರ ಗ್ರಾಮದ ಕ್ರಾಸ ಹತ್ತೀರ ರೋಡ ಮೇಲೆ ಎದುರಿನಿಂದ ಟಿಪ್ಪರ ನಂಬರ ಕೆಎ-32/ಡಿ-2512 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಂತೋಷ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಸಂತೋಷ ಇತನಿಗೆ ಭಾರಿಗಾಯಗೊಳಿಸಿ ತನ್ನ ವಾಹನ ಅಲ್ಲೇ ಬಿಟ್ಟು ಓಡಿ ಹೋಗಿದ್ದು ಸಂತೋಷ ಇತನು ಕಲಬುರಗಿ ಸರ್ಕಾರಿ ಆಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿ ಉಪಚಾರ ಫಲಕಾರಿಯಾಗದೆ ದಿನಾಂಕ 02-06-2019 ರಂದು ರಾತ್ರಿ 11-15 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಶ್ರೀ ಭದ್ರಪ್ಪಾ ತಂದೆ ಹಣಮಂತಪ್ಪಾ ಕಾಳನೂರ ಸಾ: ಪಾಳಾ  ಗ್ರಾಮ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.