POLICE BHAVAN KALABURAGI

POLICE BHAVAN KALABURAGI

30 November 2016

KALABURAGI DISTRICT REPORTED CRIMES

ಕಳವು ಯತ್ನ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ :ದಿನಾಂಕ 26-11-2016 ರಂದು ಶ್ರೀ ಸಿದ್ದಣ್ಣ ತಂ ಹುಲಿಕಂಟರಾಯ ಮಂದ್ರವಾಡಕರ ಬಿಳವಾರ ಪ್ರಗತಿ ಕೃಷ್ಣಾ ಬ್ಯಾಂಕಿನ ವ್ಯವಸ್ಥಾಪಕರು ಠಾಣೆಗೆ ಹಾಜರಾಗಿ ದಿನಾಂಕ:25-11-16 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 26-11-16 ರಂದು ಬೆಳ್ಳಗ್ಗೆ 4 ಗಂಟೆಯ ಮಧ್ಯದಲ್ಲಿ ಬಿಳವಾರಗ್ರಾಮದಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ ನೇದ್ದರ ಶೆಟರ್ ಕೀಲಿಯನ್ನು ಯಾರೋ ಕಳ್ಳರು ಗ್ಯಾಸ ಕಟರ್ ದಿಂದ ಕಟ್ ಮಾಡಿ ಕಳ್ಳತನ ಮಾಡಲು ಪ್ರಯತ್ನಪಟ್ಟಿರುವ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ದಿನಾಂಕ 28.11.2016 ರಂದು ಶ್ರೀ  ರತನ್‌ಸಿಂಗ್ ತಂದೆ ಪ್ರತಾಪ್‌ ಸಿಂಗ್ ಸಾ: ವಿಧ್ಯಾ ನಗರ ಜೇವರಗಿ ಠಾಣೆಗೆ ಹಾಜರಾಗಿ ವಿದ್ಯಾನಗರದಲ್ಲಿ ನಮ್ಮದೊಂದು ಕಿರಾಣಿ ಅಂಗಡಿ ಇದ್ದು ದಿ. 27.11.2016 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮ ಅಜಯಸಿಂಗ್ ಇಬ್ಬರೂ ಅಂಗಡಿಯಲ್ಲಿದ್ದಾಗ ಮಹ್ಮದ್ ರಫೀಕ್ ತಂದೆ ಚಾಂದಪಾಸಾ ಜಮಾದಾರ ಸಾಃ ವಿದ್ಯಾನಗರ ಜೇವರಗಿ ಇತನು ನಮ್ಮ ಕಿರಾಣಿ ಅಂಗಡಿಗೆ ಬಂದು  20 ರೂಪಾಯಿ ಸೆಂಗಾ ಬೀಜ ಕೊಡು ಅಂತಾ ಅಂದಾಗ ನನ್ನ ತಮ್ಮ ಅಜಯಸಿಂಗ್ ಇತನು ಅವನಿಗೆ 20 ರೂ ಸೇಂಗಾ ಬರುವುದಿಲ್ಲಾ 25 ರೂ ಕೊಟ್ಟರೆ ಪಾವ ಕೆ.ಜಿ. ಸೇಂಗಾ ಕೊಡುತ್ತೆನೆ ಅಂತಾ ಅಂದಾಗ ಅವನು ಅವಾಚ್ಯ ಶಬ್ದಗಳಿಂದ ಬಯ್ದು 20 ರೂಪಾಯಿ ಸೇಂಗಾ ಕೊಡು ಅಂದರೆ ಬರುವುದಿಲ್ಲಾ ಅಂತಾ ಹೇಳುತಿ ಅಂತಾ ಅಂದು ನಮ್ಮ ಅಂಗಡಿಯೊಳಗೆ ಬಂದು ಅಲ್ಲಿಯೇ ಇದ್ದ  ತಕ್ಕಡಿ ತೆಗೆದುಕೊಂಡು ನನ್ನ ತಮ್ಮ ಅಜಯಸಿಂಗ್ ಇತನ ತಲೆಗೆ ಕಿವಿಯ ಹತ್ತಿರಕುತ್ತಿ ಹತ್ತಿರಮತ್ತು ಎಡ ಭುಜದ ಮೇಲೆ ಹೊಡೆದನು, ಆಗ ನಾನು ಬಿಡಿಸಲು ಹೊದಾಗ ನನ್ನ ಎಡಕೈ ಹೆಬ್ಬರಳಿನ ಹತ್ತಿರ ಕಚ್ಚಿರುತ್ತಾನೆಮತ್ತು ಬಡಿಗೆಯಿಂದ ತಲೆಯ ಮೇಲೆ ಹೊಡೆದಿದ್ದು.  ನನ್ನ ತಂದೆ ತಾಯಿಯವರು ಬಿಡಿಸಲು ಬಂದಾಗ ಅವರಿಗೊ ಸಹ ಬಡಿಗೆಯಿಂದ ಹೊಡೆದು. ಇವತ್ತು ನೀಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿದ್ದು. ಅಷ್ಟರಲ್ಲಿ ದಶರಥಸಿಂಗ್ ರಜಪೂತ, ಶೇಖರ ಉಡುಪಿ ಇವರು ಬಂದು ಬಿಡಿಸಿದ್ದು. ನಮ್ಮ ಅಂಗಡಿಯೊಳಗೆ ಬಂದು ಜಗಳ ಮಾಡಿ ಅವಾಚ್ಯವಾಗಿ ಬೈದು ತಕ್ಕಡಿಯಿಂದ ಹೊಡೆದು ಬಡಿಗೆಯಿಂದ ಹೊಡೆದು ಜೀವದ ಬೇದರಿಕೆ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ: ದಿನಾಂಕ:29/11/2016 ರಂದು ಶ್ರೀಮತಿ ಆಸಿಯಾ ಬೇಗಂ ಗಂಡ ಶಬ್ಬಿರ ಪತೇಖಾನ ವ ಸಾ:ರಾವೂರ   ಇವರು ಫಿಯಾದಿಸಲ್ಲಿಸಿದ್ದೇನೆಂದರೆ   ತಾನು ತನ್ನ ಶಬ್ಬಿರ ತಂದೆ ಮಹ್ಮದ ಗೌಂಡಿ ಸಾ:ರಾವೂರ ಇತನೊಂದಿಗೆ ಮೊ/ಸೈ ನಂ: ಕೆ.ಎ-32/ಎಕ್ಸ್ 9469 ನೇದ್ದರ ಮೇಲೆ ಡು ಲಾಡ್ಲಾಪೂರ ಕ್ಕೆ ಹೋಗುವ ಸಲುವಾಗಿ ಬಲರಾಮ ಚೌಕ ಹತ್ತಿರ ಬಂದಾಗ ಎದರುಗಡೆಯಿಂದ ಟ್ಯಾಂಕರ ಲಾರಿ ನಂ: ಕೆ.ಎ-32/ಸಿ-4816 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಮೊ/ಸೈ ಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ತನಗೆ ತರಚಿದ ಗಾಯವಾಗಿ ಶಬ್ಬಿರ ಇತನ ಬಲಗಾಲ ತೊಡೆಯ ಹತ್ತಿರ ಮತ್ತು ಎಡಗಾಲ ಮೊಳಕಾಲ ಕೆಳಗೆ ಮುರಿದು ಭಾರಿ ರಕ್ತಗಾಯವಾಗಿ ಅಲ್ಲದೇ ಎರಡು ಕಾಲುಗಳಿಗೆ ಮತ್ತು ಪಾದಗಳಿಗೆ ತರಚಿದ ರಕ್ತಗಾಯವಾಗಿದ್ದು ಉಪಚಾರ ಕುರಿತು ಕಲಬರುಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿದ್ದು. ಅಪಘಾತದ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ಸದರಿ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:ದಿನಾಂಕ 28-11-2016 ರಂದು ಶ್ರೀ ಮಲ್ಲಿಕಾರ್ಜುನ ಮನ್ನಾಪೂರ ಸಾ: ಕಲಬುರಗಿ ರವರು ಜೇವರ್ಗಿ ರಸ್ತೆ ಮೂಲಕ ಸುರಪೂರಕ್ಕೆ ತನ್ನ ಕಾರ ನಂ ಕೆಎ32-ಎನ್7130 ನೇದ್ದರಲ್ಲಿ ಹೋಗುತ್ತಿರುವಾಗ ಹಸನಾಪೂರ ಕ್ರಾಸ್ನಲ್ಲಿ ಜೇವರ್ಗಿ ಕಡೆಯಿಂದ ಬರುತ್ತಿದ್ದ ಲಾರಿ ನಂ ಎಪಿ15-ವಿ0909 ನೇದ್ದರ ಚಾಲನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂಧ ಚಲಾಯಿಸುತ್ತಾ ನಮ್ಮ ಕಾರಿಗೆ ಅಪಘಾತಪಡಿಸಿ ನಮ್ಮ ಕಾರಿಗೆ ಜಖಂ ಪಡಿಸಿದ್ದು. ಸದರಿ ಲಾರಿ ಚಾಲಕನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.