POLICE BHAVAN KALABURAGI

POLICE BHAVAN KALABURAGI

23 July 2016

Press Note

B ಪತ್ರಿಕಾ ಪ್ರಕಟಣೆ B
ಸಕಾರವು ಸಫಾಯಿ ಕರ್ಮಚಾರಿ ಕಾಯಿದೆ (The Employment of Manual Scavengers and Construciton of Dry Latrines (Prohibition) Act 1993) ಯನ್ನು ಜಾರಿಗ ತಂದಿದ್ದು ಸಫಾಯಿ ಕರ್ಮಚಾರಿಗಳು ಮ್ಯಾನು ಹೋಲ್‌ ಒಳಗಡೆ ಇಳಿದು ಶುಚಿಗೊಳಿಸುವ ಕಾರ್ಯವನ್ನು ನಿಷೇಧಿಸಿದೆ.  ಆದಗ್ಯೂ ಸಹ ಸಫಾಯಿ  ಕರ್ಮಚಾರಿಗಳಿಂದ ಮ್ಯಾನು ಹೋಲ್‌ಗಳನ್ನು ಹಾಗೂ ಚರಂಡಿಗಳಣ್ನು ಸ್ವಚ್ಚಗೊಳಿಸುವ ಕಾರ್ಯ ಮುಂದುವರೆದಿದ್ದು, ಇದರಿಂದ ಅನೇಕರು ಪ್ರಾಣವನ್ನು ಕಳೆದುಕೊಂಡಿರುವ ಪ್ರಕರಣಗಳು ವರಿದಯಾಗುತ್ತಿದೆ.
     ಮಳೆಗಾಲ ಪ್ರಾರಂಭವಾಗಿದ್ದು, ಮಳೆ ನೀರಿನಿಂದ ಎಲ್ಲೆಡೆ ಮ್ಯಾನ ಹೊಲ್‌ಗಳು ಹಾಗೂ ಚರಂಡಿಗಳೂ ಮುಚ್ಚಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಇವುಗಳನ್ನು ಸ್ವಚ್ಚಗೊಳಿಸಲು ಸರ್ಕಾರಿ ಸಂಸ್ಥೆಗಳು ಖಾಸಗಿ ಸಂಸ್ಥೆಗಳು ಅಥವಾ ಬೇರೆ ಗುತ್ತಿಗೆದಾರರು ಕರ್ಮಚಾರಿಗಳನ್ನು ಮ್ಯಾನು ಹೋಲ್‌ನಲ್ಲಿ ಇಳಿಸಿ ಚರಂಡಿಗಳನ್ನು ಶುದ್ದಗೊಳಿಸುವ ಕಾರ್ಯಗಳನ್ನು ಕೈಗೊಳ್ಳುತ್ತಾರೆ.
     ಮ್ಯಾನು ಹೋಲ್‌ಗಳನ್ನು ಸಕ್ಕಿಂಗ್‌ ಮಷಿನಗಳ ಮೂಲಕವೇ ಶುಚಿಗೊಳಿಸಬೇಕು ಹೊರತು ಯಾವುದೇ ವ್ಯಕ್ತಿಯನ್ನು ಇಳಿಸಿ ಶುಚಿಗೊಳಿಸುವ ಕಾರ್ಯ ಸಫಾಯಿ ಕರ್ಮಚಾರಿ ಕಾಯಿದೆ. (The Employment of Manual Scavengers and Construciton of Dry Latrines (Prohibition) Act 1993) ಪ್ರಕಾರ ನಿಷೇಧಿಸಿದ್ದು ಶೀಕ್ಷಾರ್ಹ ಅಪರಾಧವಾಗಿರುತ್ತದೆ. ಸದರಿ ಕಾಯಿದೆಯನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವುದು ಹಾಗೂ ಇಂತಹ ಪ್ರಕರಣಗಳು ವರದಿಯಾದಾಗ ಸದರಿ ಕಾಯಿದೆಯಡಿಯಲ್ಲಿ ಆಪಾದಿತರ ವಿರುದ್ದ ಪ್ರಕರಣಗಳನ್ನು  ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. 

Kalaburagi District Reported Crimes

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ:21/07/2016 ರಂದು ಬೆಳಿಗ್ಗೆ ಮೃತ ಗುರುಸಿದ್ದಪ್ಪಾ ದಿನಸಿ ಈತನು ಎಂದಿನಂತೆ ಕುರಿಕೋಟಾದ ಸ್ವಾಮಿ ಇವರ ಟ್ರ್ಯಾಕ್ಟರ ನಂ. ಕೆಎ:32ಟಿಎ6202 ನೇದ್ದರ ಮೇಲೆ ವಟಿವಟಿ ಗ್ರಾಮಕ್ಕೆ ಮರಳು ಖಾಲಿ ಮಾಡಿ ಮರಳಿ 4-00 ಗಂಟೆ ಸುಮಾರಿಗೆ ವಟವಟಿಯಿಂದ ಮಹಾಗಾಂವ ಕಡೆಗೆ ಬರುವಾಗ ತಡಕಲ್ ಕ್ರಾಸ ಹತ್ತಿರ ಸದರಿ ಟ್ರ್ಯಾಕ್ಟರದಲ್ಲಿ ಕುಳಿತುಕೊಂಡು ಬರುವಾಗ ಟ್ರ್ಯಾಕ್ಟರ್ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಕಟ್ ಹೊಡೆದಿದ್ದರಿಂದ ಟ್ರ್ಯಾಕ್ಟರ್ ದಲ್ಲಿ ಕುಳಿತ ಗುರುಸಿದ್ದಪ್ಪಾ ಇವರು ಕೆಳಗೆ ಬಿದಿದ್ದರಿಂದ ಸೊಂಟಕ್ಕೆ ಮತ್ತು ತಲೆಗೆ ಭಾರಿ ಗುಪ್ತಗಾಯಗಳಾಗಿರುತ್ತವೆ. ಸದರಿ ಅಪಘಾತ ಪಡಿಸಿದ ಚಾಲಕನು ಗುರುಸಿದ್ದಪ್ಪನಿಗೆ ಅದೇ ಟ್ರ್ಯಾಕ್ಟರದಲ್ಲಿ ಹಾಕಿಕೊಂಡು ಫಿರ್ಯಾದಿ ಮನೆಗೆ ತಂದು ಕೆಳಗೆ ಇಳಿಸಿ ತನ್ನ ಟ್ರ್ಯಕ್ಟರ್ ತೆಗೆದುಕೊಂಡು ಹೋಗಿದ್ದು. ನಂತರ ಫಿರ್ಯಾಧಿ ಮತ್ತು ತನ್ನ ಸಂಬಂಧಿಕರು ಕೂಡಿಕೊಂಡು ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ರಸ್ತೆ ಅಪಘಾತದಿಂದ ಆದ ಗಾಯಗಳಿಂದಾಗಿ ಗುಣಮುಖರಾಗದೇ ನನ್ನ ಗಂಡನು ರಾತ್ರಿ 9-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾರೆ. ಟ್ರ್ಯಾಕ್ಟರ್ ಚಾಲಕನ ಹೆಸರು ವಗೈರೆ ಗೊತ್ತಿರುವುದಿಲ್ಲಾ. ಆತನಿಗೆ ಪುನಃ ನೋಡಿದರೆ ಗುರ್ತಿಸುತ್ತೇನೆ. ಅಂತಾ ಶ್ರೀಮತಿ ಮಲ್ಲಮ್ಮಾ ಗಂಡ ಗುರುಸಿದ್ದಪ್ಪಾ ದಿನಸಿ ಸಾ: ಮಹಾಗಾಂವ ತಾ:ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ :ಶ್ರೀ ಶಿವಪ್ರತಾಪ ತಂದೆ ಟೀಕಾರಾಮ ಕಲ್ಯಾಣಕಾರಿ ಸಾ: ಮನೆ ನಂ 1-3-290/210 ವಿಜಯನಗರ ಲೇಔಟ ಆಸಾಪೂರ ರೋಡ ರಾಯಚೂರ ಇವರು ದಿನಾಂಕ 21/07/2016 ರಂದು ತಮ್ಮ ಖಸಗಿ ಕೆಲಸಕ್ಕಾಗಿ ಕಲಬುರಗಿ ನಗಕ್ಕೆ ತಾನು ಮತ್ತು ಸಂಬಂದಿರಾದ ಭನುರಾಜ ತಂದೆ ಸೋಮನಾಥ ನಿಜಾಮಕರ, ಸತೀಶಕುಮಾರ ತಂದೆ ಲಕ್ಷ್ಮಣರಾವ ಮೈದರಕಾರಿ, ಅಮೀತ ತಂದೆ ಪ್ರಮೋದ ಶುಕ್ಲಾ, ಕಾರ ಚಾಲಕ ವೆಂಕಟೇಶ ನಾಯಕ ತಂದೆ ಭೀಮಣ್ಣ  ಎಲ್ಲರೂ ಕೂಡಿಕೊಂಡು ಕಾರ ನಂ ಕೆ-36 ಎನ್-4502 ನೆದ್ದರಲ್ಲಿ ಬಂದು ಕೆಲಸ ಮುಗಿಸಿಕೊಂಡು ಮರಳಿ ರಾಯಚೂರಕ್ಕೆ ಇಂದು ದಿನಾಂಕ 22/7/16 ರಂದು ರಾತ್ರಿ 1-30 ಗಂಟೆಯ ಸುಮಾರಿ ಹೋಗುತ್ತೀರುವಾಗ  ಫರಹತಾಬಾದ ಗ್ರಮ ದಾಟಿದ ಬಳಿಕ ಎನ್.ಹೆಚ್.218 ರೋಡಿನ ಮೇಲೆ ಸರಡಗಿ(ಬಿ) ಕ್ರಾಸ್ ಹತ್ತೀರ ಎದುರುಗಡೆಯಿಂದ ಒಂದು ಲಾರಿ ನಂ ಎಮ್.ಹೆಚ್-25,ಬಿ-7806ನೇದ್ದರ ಚಾಲಕ ತನ್ನ ಲರಿ ಅತೀವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ನಮ್ಮ ಕಾರ ನಂ ಕೆ-36 ಎನ್-4502 ನೇದ್ದಕ್ಕೆ ಡಿಕ್ಕಿ ಪಡಿಸಿ ತನ್ನ ಲಾರಿ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತನೆ ಈ ಘಟನೆಯಿಂದ ತನಗೆ ಎದೆಗೆ ಮತ್ತು ಎರಡು ಕಲುಗಳಿಗೆ ಗುಪ್ತಗಾಯ ವಾಗಿದ್ದು ಇನ್ನೂಳಿದ ಭನುರಾಜ ಇತನಿಗೆ ಬಲಗೈ ಗೆ ಮತ್ತು ಹೊಟ್ಟೆಗೆ , ಬೆನ್ನೆಗೆ ಮುಖದ ಮೇಲೆ ರಕ್ತಗಾಯ ಮತ್ತು ಗುಪ್ತಗಾಯ ವಾಗಿದ್ದು , ಸತೀಶಕುಮಾರ ಇವರಿಗೆ ಮುಕದ ಮೆಲೆ ಮತ್ತು ತುಟಿಗೆ ರಕ್ತಗಾಯ ಹಾಗೂ ಗುಪ್ತಗಾಯ ವಾಗಿದ್ದು, ಅಮೀತ ಇತನಿಗೆ ಎರಡು ಕಾಲುಗಳಿಗೆ ಗುಪ್ತಗಾಯ ವಾಗಿದ್ದು ಹಾಗೂ ನಮ್ಮ ಕಾರ ಚಾಲಕ ವೆಂಕಟೇಶ ನಾಯಕ ಇತನಿಗೆ ಹೊಟ್ಟೆಗೆ,ಎದೆಗೆ ಹಾಗೂ ಸೊಂಟಕ್ಕೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಾಳಿಗಿದ್ದು  ನಾವು ಈ ಘಟನೆಟಯ ನಂತರ ಚಿಕಿತ್ಸೆಗಾಗಿ 108 ವಹಾನದಲ್ಲಿ ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಹೋಗೆ ಸೇರಿಕೆ ಆಗಿ ಚಿಕಿತ್ಸೆ ಪಡೆದುಕೋಂಡಿರುತ್ತೆವೆ . ನಮ್ಮ ಕಾರಿಗೆ ಡಿಕ್ಕಿ ಪಡಿಸಿದ ಲಾರಿ ನಂ ಎಮ್.ಹೆಚ್-25,ಬಿ-7806ನೇದ್ದರ  ಚಾಲಕನ ಹೇಸರು ಮತ್ತು ವಿಳಸ ನಮಗೆ ಗೊತ್ತಾಗಿರುವದಿಲ್ಲಾ ನಾವು ಅವನನ್ನು ನೋಡಿದರೆ ಗುರುತಿಸುತ್ತೆವೆ ಅಂತಾ ಇತ್ಯಾದಿ ಸಾರಾಂಶದ ಮೆಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶೇಖಜಿಲಾನಿ ತಂದೆ ಶೇಖಮಹೀಬೂಬಸಾಬ ಸಾ|| ಕನಕನಗರ ಖಣಿಏರಿಯಾ ಬ್ರಹ್ಮಪೂರ ಕಲಬುರಗಿ ಇವರು 5 ಜನ ಅಣ್ಣ ತಮ್ಮಂದಿರು ಇರುತ್ತೇವೆ 1) ಇಜಾಜ 2) ಪರೀದ 3) ನಾನು ಶೇಖಜಿಲಾನಿ 4) ರಿಯಾಜ 5) ಫಯಾಜ ಅಂತಾ ಇದ್ದು ನಾವು ರೀಯಾಜ ಮತ್ತು ಫಯಾಜ ಎಲ್ಲರೂ ಒಂದೆ ಕಡೆ ಇರುತ್ತೇವೆ ಫರೀದ ಮತ್ತು ಇಜಾಜ ಬೇರೆಕಡೆ ಇರುತ್ತಾರೆ ನನಗು ಫಯಾಜ ಮತ್ತು ರೀಯಾಜನಿಗೂ ನಡುವೆ ಮನೆಯ ಸಂಭಂದ ತಕರಾರು ಇರುತ್ತದೆ ಈ ಬಗ್ಗೆ ನನ್ನ ತಮ್ಮ ಫಯಾಜ ಇತನು ಮನೆ ಖಾಲಿ ಮಾಡಬೇಕು ಅಂತಾ ಅಗಾಗ ನನ್ನ ಜೋತೆಯಲ್ಲಿ ತಂಟೆತಕರಾರು ಮಾಡುತ್ತಾ ಬರುತ್ತಿದ್ದನು ನಿನ್ನೆ ದಿ||22/07/16 ರಂದು ರಾತ್ರಿ 8 ಗಂಟೆಯ ಸೂಮಾರಿಗೆ ನಾನು ಮತ್ತು ನನ್ನ ಹೆಂಡತಿ ರೇಸ್ಮಾ ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ನನ್ನ ತಮ್ಮ ಫಯಾಜ ಇತನು ಬಂದು ನಮ್ಮ ಮ ನೆಯ ಕರೆಂಟ ಬಿಲ್ಲಿನ ಸಂಬಂದ ನನ್ನ ಜೋತೆಯಲ್ಲಿ ಜಗಳ ತೆಗೆದು ಮನೆ ಕರೆಂಟ ಕಟ್ಟಮಾಡಿದ್ದಾರೆ ನಿನ್ನ ಪಾಲಿನ ಹಣ ಕೊಡಬೇಕು ಅಂತಾ ನನಗೆ ಕೆಳಿದಾಗ ನಾನು ನಾಳೆ ಬೆಳಗ್ಗೆ ಕೊಡುತ್ತೇನೆ ಅಂತಾ ಹೇಳಿದ್ದು ಅವನು ಏ ಮಾದರಚೋದ ಸಾಲೆ ಶೇಖಜಿಲಾನಿ ತೂ ಕಬೀಬಿ ಐಸೈಯಿ ಹಮಾರಸೆ ತಕರಾರು ಕರತೆ ತೇರಾ ಕ್ಯಾ ಹಾಲ ಹೈ ತೇರೆಕೋ ಛೋಡತಾ ನೈಹಿ ಖಲಾಸ ಕರತು ಅಂತಾ ಕೋಲೆ ಮಾಡುವ ಉದ್ದೇಶದಿಂದ ತನ್ನ ಟೊಂಕ್ಕದಲ್ಲಿದ್ದ ಒಂದು ಚಾಕು ತೆಗೆದು ನನ್ನ ಎಡಗಡೆ ಎದೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ ಆಗ ನನ್ನ ಹೆಂಡತಿ ರೇಸ್ಮಾ ಇವಳು ಬೀಡಿಸಲು ಬಂದಾಗ ಅವಳಿಗೂ ಕೂಡಾ ಅದೆ ಚಾಕುವಿನಿಂದ ಬಲಗೈ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಆಗ ನನ್ನ ತಮ್ಮ ರೀಯಾಜ ಇತನು ಬಂದು ಅಭೀಮಾರೋ ಸಾಲೇಕೋ ಅಂತಾ ಫಯಾಜನಿಗೆ ಪ್ರಚೋದನೆ ಕೊಡುತ್ತಿದ್ದನು ಇದನ್ನು ನೋಡಿ ಪಕ್ಕದ ಮನೆಯವನಾದ ಅಬ್ದುಲ ರಹೇಮಾನ ಮತ್ತು ನನ್ನ ಹೆಂಡತಿಯ ತಮ್ಮ ಮಹ್ಮದ ಅಜಾದ ಇವರು ಬಂದು ಜಗಳ ಬೀಡಿಸಿರುತ್ತಾರೆ ನನಗೆ ಭಾರಿ ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ನನ್ನ ಹೆಂಡತಿ ಮತ್ತು ತೋಲು ತಂದೆ ನಜೀರ ಅಹ್ಮದ ಇವರು ಕಲಬುರಗಿ ನಗರದ ಜಿಲ್ಲಾ ಸರಕಾರಿ ಅಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣಮಾಡಿ ಅತ್ಯಚಾರ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಸುನಂದಾ ಗಂಡ ಬಾಬುರಾವ ಕಡಗಂಚಿ ಮು:ಜಮಗಾ(ಜೆ) ತಾ:ಆಳಂದ ಗ್ರಾಮದ ಶಶಿಕಾಂತ ತಂದೆ ಕಲ್ಲಪ್ಪ ಆರ್ಯೆ ಇತನು ಮಲ್ಲಮ್ಮಾ ಎಂಬೂವಳೊಂದಿಗೆ ಮದುವೆಯಾಗಿದ್ದು ಅವನಿಗೆ ಒಂದು ಗಂಡು ಮಗು ಇದ್ದು ಸದ್ಯ ಅವನ ಹೆಂಡತಿ ಅವರ ತವರು ಮನೆಯಾದ ತಿರ್ಥ ಗ್ರಾಮದಲ್ಲಿ  ಇರುತ್ತಾಳೆ. ಹೀಗಿದ್ದು ದಿನಾಂಕ 22/06/2016 ರಂದು ರಾತ್ರಿ 9:30 ಗಂಟೆ  ಸುಮಾರಿಗೆ ಗ್ರಾಮದಲ್ಲಿ ನೀರಿನ ಬರ ಇದ್ದರಿಂದ ನೀರು ತರಲು ಹೋಗುವಾಗ ನಮ್ಮ ಮಗಳು ಟಿವಿ ನೋಡುತ್ತಾ ಕುಳಿತಿದ್ದರಿಂದ ನಾನು ನೀರು ತೆಗೆದುಕೊಂಡು ಮರಳಿ ಮನೆಗೆ ಬರುವಷ್ಟರಲ್ಲಿ ನನ್ನ ಮಗಳು ಕಾಣಿಸಲಿಲ್ಲಾ . ನಂತರ ನನ್ನ ಮಕ್ಕಳಾದ ಆರತಿ, ಹಾಗು ನಾಗೇಶ ಇವರಿಗೆ ವಿಚಾರಿಸಲು ನಮಗೆ ಏನು ಹೇಳದೆ ಕೇಳದೆ ಮನೆಯಿಂದ ಹೊರಗಡೆ ಹೋಗಿರುತ್ತಾಳೆ ಅಂತಾ ತಿಳಿಸಿದ್ದರಿಂದ ನಾನು ಆಕೆ ಬರಬಹುದು ಅಂತಾ ಸ್ವಲ್ಪ ಸಮಯ  ಕಳೆದಾಗ ಅಷ್ಟರಲ್ಲಿ ನಮ್ಮ ಅಣ್ಣತಮ್ಮಕೀಯ ತಮ್ಮನಾದ ಶಾಂತಪ್ಪ ತಂದೆ ಸೋಮಲಿಂಗ ಆರ್ಯೆ ಇತನು ತಿಳಿಸಿದ್ದೆನೆಂದರೆ ತಾನು ಬೈರ್ಯದೇಶಗೆ ಹೋಗಿ ಮರಳಿ ಬರುವಾಗ ನಿಮ್ಮ ಮಗಳು ನಮ್ಮ ಜಾತಿಯ ಶಶಿಕಾಂತ ತಂದೆ ಕಲ್ಲಪ್ಪ ಆರ್ಯ ಇತನೊಂದಿಗೆ ಹೋದಳು ಅಂತಾ ತಿಳಿಸಿದಾಗ ಈ ಬಗ್ಗೆ ಆಳಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸದ್ದು ದಿನಾಂಕ:22/07/2016 ರಂದು ಕಲಬುರಗಿಯಲ್ಲಿ ಅಪಹರಣಕ್ಕೋಳಗಾದ ಬಾಲಕಿ ಇವಳು ಪತ್ತೆಯಾಗಿದ್ದು,  ಸರ್ಕಾರಿ ಪ್ರೌಢ ಶಾಲೆ ಜಿಡಗಾದಲ್ಲಿ ಈ ವರ್ಷ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ತಂದೆ-ತಾಯಿ ಯೊಂದಿಗೆ ವಾಸವಾಗಿರುತ್ತೇನೆ, ನಮ್ಮೂರಿನ ನಮ್ಮ ಸಂಬಂಧಿಯಾದ  ಶಶಿಕಾಂತ ತಂದೆ ಕಲ್ಲಪ್ಪಾ ಆರ್ಯ ಈತನ ಮನೆಯು ನಮ್ಮ ಮನೆಯ ಪಕ್ಕದಲ್ಲಿದ್ದು ಇತನು ನಮ್ಮ ಮನೆಗೆ ಬಂದು ಹೋಗುವದು ಮಾಡುತ್ತಿದ್ದರಿಂದ ನನ್ನ ಅವನ ಮಧ್ಯ ಸ್ನೇಹ ಬೆಳೆದಿದ್ದು ಇರುತ್ತದೆ.ದಿನಾಂಕ:22/06/2016 ರಂದು ರಾತ್ರಿ 09:30 ಗಂಟೆಯ ಸುಮಾರಿಗೆ ನನಗೆ ಶಶಿಕಾಂತನು ಪೋನ್ ಮಾಡಿ ನಿನ್ನ ಜೊತೆಗೆ ಮಾತನಾಡುವದಿದೆ ಜಿಡಗಾ ಕಮಾನ ಹತ್ತಿರ ಬಾ ಅಂತಾ ಹೇಳಿದಾಗ ನಾನು ಮನೆಯಲ್ಲಿ ಯಾರಿಗೂ ಹೇಳದೆ ಜಿಡಗಾ ಕಮಾನ ಹತ್ತಿರ ಹೋದಾಗ ಆಗ ಶಶಿಕಾಂತನು ನಿನಗೆ ಪ್ರೀತಿ ಮಾಡುತ್ತಿದ್ದೇನೆ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನನಗೆ ಪುಸಲಾಯಿಸಿ ತಲೆ ಕೆಡೆಸಿ ನನಗೆ ರಾತ್ರಿ 09:45 ಗಂಟೆಗೆ ಮುಖಕ್ಕೆ ಸ್ಕಾರ್ಫ ಕಟ್ಟಿಕೊಳ್ಳು ಅಂತಾ ತಿಳಿಸಿ ಅಲ್ಲಿಂದ ರೋಡಿಗೆ ಹೋಗುವ ಒಂದು ವಾಹನದಲ್ಲಿ ಆಳಂದ ಬಸ್‌ ನಿಲ್ದಾಣಕ್ಕೆ ಬಂದು ನಂತರ ಯಾವುದೊ ಒಂದು ಬಸ್‌ ಮೂಲಕ ಕಲಬುರಗಿಗೆ ಹೋಗಿ ಶಶಿಕಾಂತ ಆರ್ಯ ಇತನು ತನ್ನ ಸಂಬಂದಿಕರ ಮನೆಗೆ ರಾತ್ರಿ ಕರೆದುಕೊಂಡು ಹೋಗಿದ್ದು ಆ ರಾತ್ರಿ ಅವರ ಮನೆಯಲ್ಲಿಯೇ ಉಳಿದುಕೊಂಡು ಒಂದು ವಾರದವರೆಗೆ ಅವರ ಮನೆಯಲ್ಲಿಯೇ ಇದ್ದೆವು. ನಂತರ ಶಶಿಕಾಂತ ಆರ್ಯ ಇತನು ಕಲಬುರಗಿ ನಗರದ ಸಿ.ಐ..ಬಿ. ಕಾಲೋನಿಯಲ್ಲಿ ಒಂದು ಬಾಡಿಗೆ ಮನೆ ಹಿಡಿದು ನನಗೆ ದಿನಾಂಕ:29/06/2016 ರಂದು ಅವನು ಅಲ್ಲಿಗೆ ಕರೆದುಕೊಂಡು ಹೋಗಿ ಆ ರಾತ್ರಿ ಸುಮಾರು 11:00 ಗಂಟೆಯ ಸುಮಾರಿಗೆ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಪುಸಲಾಯಿಸಿ  ನನಗೆ ಒತ್ತಾಯ ಪೂರ್ವಕವಾಗಿ ಸಂಬೋಗ ಮಾಡಿರುತ್ತಾನೆ. ಇದಲ್ಲದೇ ಹೀಗೆಯೇ ಎರಡು-ಮೂರು ಬಾರಿ ನನಗೆ ಜಬರಿ ಸಂಬೋಗ ಮಾಡಿರುತ್ತಾನೆ. ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಮದುವೆ ಆಗುವದಿಲ್ಲ ಅಂತಾ ಹೆದರಿಸಿರುತ್ತಾನೆ. ನನ್ನ ಸಂಬಂಧಿಯಾದ ಶಶಿಕಾಂತ ಆರ್ಯ ಇತನು ನನ್ನದೊಂದಿಗೆ ಸ್ನೇಹ ಬೆಳಸಿ ಮದುವೆಯಾಗುತ್ತೇನೆ ಅಂತಾ ಪುಸಲಾಯಿಸಿ ಸಂಗಡ ಕರೆದುಕೊಂಡು ಹೊಗಿ ನನ್ನ ಮೇಲೆ ಜಬರಿ ಸಂಬೋಗ ಮಾಡಿರುತ್ತಾನೆ. ನಂತರ ದಿನಾಂಕ:25/06/2016 ರಂದು ನನಗೆ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ನಮ್ಮ ತಾಯಿ ಠಾಣೆಯಲ್ಲಿ ದೂರು ನೀಡಿರುತ್ತಾಳೆ ಅಂತಾ  ಶಶಿಕಾಂತ ಆರ್ಯ ಇತನಿಗೆ ಆತನ ಸಂಬಂಧಿಯಾದ ದಯಾನಂದ ಸಿಂಗೆ ಸಾ:ಶಕಾಪೂರ ಇವರು ತಿಳಿಸಿರುತ್ತಾರೆ ಅಂತಾ ಶಶಿಕಾಂತ ಆರ್ಯ ನನಗೆ ತಿಳಿಸಿದ್ದು ಇರುತ್ತದೆ. ಇಂದು ಆಳಂದ ಪೊಲೀಸ್ ಠಾಣೆಯ ಮಹಿಳಾ ಪೊಲೀಸರು ನಾನು ಇದ್ದ ವಿಳಾಸಕ್ಕೆ ಬಂದು ನನಗೆ ಹಿಡಿದು ಕರೆದು ತಂದಿರುತ್ತಾರೆ. ಅಂತಾ ತಿಳಿಸಿದ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ 22-07-2016 ರಂದು ಬಂದರವಾಡ ಗ್ರಾಮದ ಅಂಬಿಗರ ಚೌಡಯ್ಯ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಬಾತ್ಮಿ ಮೇರೇಗೆ ಪಿ.ಎಸ್.ಐ. ಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು ಅವನು ತ್ನ್ನ ಹೆಸರು  ಮಾಳಪ್ಪ ತಂದೆ ಸಾವಿರಪ್ಪ ಪೂಜಾರಿ ಸಾ|| ಬಂದರವಾಡ ಅಂತಾ ತಿಳಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಹಣ 1710/- ರೂಪಾಯಿ, ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.