POLICE BHAVAN KALABURAGI

POLICE BHAVAN KALABURAGI

12 February 2013

GULBARGA DISTRICT REPORTED CRIME


ಬಂಗಾರದ ಆಭರಣ ದೋಚಿಕೊಂಡು ಹೋದ ಬಗ್ಗೆ::
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀಮತಿ ಪ್ರೇಮಲತಾ ಗಂಡ ಅನಂತರಾವ ದೇಸಾಯಿ ಸಾ|| ಸಮತಾ ಕಾಲೋನಿ ಗುಲಬರ್ಗಾರವರು ನಾನು, ನನ್ನ ಗಂಡ ಮತ್ತು ನನ್ನ ತಂಗಿ ರಾಧಿಕಾ ದಿನಾಂಕ:12-02-2013 ರಂದು ಮಧ್ಯಾಹ್ನ 12-45 ಗಂಟೆಗೆ ಸುಮಾರಿಗೆ ನಡೆದುಕೊಂಡು ಸಮತಾ ಕಾಲೋನಿಯ ಕ್ರಾಸ್ ಹತ್ತಿರ ಹೊರಟಾಗ, ಎದುರಿನಿಂದ ಒಬ್ಬ ಅಪರಿಚಿತ ಮೊಟಾರ್ ಸೈಕಲ್ ಸವಾರನು ಬಂದವನೇ ನನ್ನ ಕೊರಳಲ್ಲಿದ್ದ 20 ಗ್ರಾಂ ಬಂಗಾರದ ಲಾಕೀಟನ್ನು ದೋಚಿಕೊಂಡು ಹೋದನು. ಸದರಿ ಬಂಗಾರದ ಆಭರಣದ ಮೌಲ್ಯ 60,000/-ರೂಪಾಯಿಗಳಳಾಗಿದ್ದು, ಬಂಗಾರದ ಲಾಕೀಟ್ ದೋಚಿಕೊಂಡು ಹೋದವನ ಪತ್ತೆ ಹಚ್ಚಿ ಅವನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:15/2013 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIME


ಲೈಂಗಿಕ ಹಲ್ಲೆ:
ಫರತಭಾದ ಪೊಲೀಸ್ ಠಾಣೆ:ದಿನಾಂಕ:10-02-2013 ರಂದು ರವಿವಾರ ಅಮವಾಸ್ಯೆ ನಿಮಿತ್ಯ ನಮ್ಮ ತಂದೆಯಾದ ಬಾಬು ಹಾಗೂ ಅಣ್ಣನಾದ ಸಿದ್ದು ರವರು ಭಜನೆ ಕಾರ್ಯಕ್ರಮಕ್ಕೆ ಹೋಗಿದ್ದು, ನಮ್ಮ ಅಕ್ಕ ಮನೆಯಲ್ಲಿ ಮಲಗಿಕೊಂಡಿದ್ದಳು, ನಾನು ಮನೆಯ ಮುಂದೆ ಅಂಗಳದಲ್ಲಿ ಮಲಗಿದ್ದಾಗ ದಿನಾಂಕ:11-02-2013 ರಂದು 01-00 ಎ.ಎಮ್ ಕ್ಕೆ  ನಾನು ಮಲಗಿದ್ದ ವೇಳೆಯಲ್ಲಿ ಒಮ್ಮಲೇ ಒಬ್ಬ ವ್ಯಕ್ತಿ ನನ್ನ ಮೈಮೇಲಿನ ಬಿದ್ದು ಬಟ್ಟೆ ಬಿಚ್ಚುತ್ತಿದ್ದನು. ನಾನು ಎಚ್ಚರಗೊಂಡು ನೋಡಲಾಗಿ ಅವನು ನಮ್ಮೂರಿನ ಮಹಾದೇವ ತಂದೆ ಬಸಯ್ಯ ಸ್ವಾಮಿ ಸಾ||ಮೇಳಕುಂದಾ,ಅತನು ನನಗೆ ಚಾಕುವಿನಿಂದ ಹೇದರಿಸಿ ಜಬರದಸ್ತಿಯಿಂದ ಹಟ್ಟ ಸಂಭೋಗ ಮಾಡಿರುತ್ತಾನೆ. ಅವನು ನನ್ನ ಬಾಯಿ ಹಿಡಿದಿದ್ದನ್ನು ತಪ್ಪಿಸಿಕೊಂಡು ಚಿರಾಡುವದನ್ನು ಕಂಡು ಮನೆಯಲ್ಲಿ ಮಲಗಿದ್ದ ನಮ್ಮ ಅಕ್ಕ ಬಂದು ಕೇಳುತ್ತಿದ್ದಾಗ ಅವನು ಓಡಿ ಹೋಗಿರುತ್ತಾನೆ.ಹಟ ಸಂಭೋಗದಿಂದ ರಕ್ತ ಸ್ರಾವ ಆಗುತ್ತಿದ್ದರಿಂದ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ಹಟ ಸಂಭೋಗ ಮಾಡಿವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಲೈಂಗಿಕ ಹಲ್ಲೆಗೊಳಗಾದ 19 ವರ್ಷದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:16/2013 ಕಲಂ, 323, 324, 506, 376, ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.